ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡಕ್ಕೆ ನಾಯಕನಾಗಲು ಕಾರಣರಾಗಿದ್ದ ದಿಗ್ಗಜನನ್ನು ನೆನೆದ ಸೌರವ್‌ ಗಂಗೂಲಿ!

ಸೌರವ್‌ ಗಂಗೂಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಭಾರತ ತಂಡ, 2003ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ, ಆಸೀಸ್‌ ವಿರುದ್ಧ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಅಂದ ಹಾಗೆ ಭಾರತ ತಂಡಕ್ಕೆ ನಾಯಕನಾಗಿದ್ದೇಗೆಂದು ಸೌರವ್‌ ಗಂಗೂಲಿ ಬಹಿರಂಗಪಡಿಸಿದ್ದಾರೆ.

ಭಾರತ ತಂಡಕ್ಕೆ ನಾಯಕನಾಗಿದ್ದೇಗೆಂದು ತಿಳಿಸಿದ ಗಂಗೂಲಿ!

ಭಾರತ ತಂಡದ ನಾಯಕನಾಗಲು ಕಾರಣ ತಿಳಿಸಿದ ಗಂಗೂಲಿ. -

Profile
Ramesh Kote Dec 9, 2025 4:36 PM

ಮುಂಬೈ: ಭಾರತ ಕ್ರಿಕೆಟ್‌ ತಂಡದ ನಾಯಕನಾದ ಬಗ್ಗೆ ಕತೂಹಲಕಾರಿ ಸಂಗತಿಯನ್ನು ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಬಹಿರಂಗಪಡಿಸಿದ್ದಾರೆ. 2001ರ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಗೆಲುವು ದಾಖಲಿಸಿತ್ತು. ಆ ವೇಳೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ನಾಯಕತ್ವ ತ್ಯಜಿಸದಿದ್ದರೆ ನಾನು ಭಾರತ ತಂಡದ ನಾಯಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ದಾದಾ ಹೇಳಿಕೊಂಡಿದ್ದಾರೆ.

ಈ ಕುರಿತು ಬಂಧನ್‌ ಬ್ಯಾಂಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಹರ್ಷ ಬೋಗ್ಲೆ ಅವರೊಂದಿಗೆ ಮಾತನಾಡಿದ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ, "ನನ್ನ ನಾಯಕತ್ವವು ಗೊಂದಲಮಯವಾಗಿ ನಡೆಯಿತು. ಸಚಿನ್ ಅದನ್ನು ಮಾಡಲು ಬಯಸಲಿಲ್ಲ. ಬಹುಶಃ ಸಚಿನ್ ಅದನ್ನು ಮಾಡಲು ಬಯಸಿದ್ದರೆ, ನಾನು ಎಂದಿಗೂ ಭಾರತದ ನಾಯಕನಾಗುತ್ತಿರಲಿಲ್ಲ ಏಕೆಂದರೆ ಕ್ರೀಡೆಯಲ್ಲಿ ವಿಷಯಗಳು ಬಹಳ ಬೇಗನೆ ಬದಲಾಗುತ್ತವೆ. ನಾನು ಭಾರತವನ್ನು ಮುನ್ನಡೆಸುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. 96 ಸಂಖ್ಯೆಯಲ್ಲಿ ನಾನು ನನ್ನ ಚೊಚ್ಚಲ ಪ್ರವೇಶವನ್ನು ಮಾಡಿದ್ದೇನೆ. ಆಗ ಅದು ತುಂಬಾ ವಿಭಿನ್ನವಾಗಿತ್ತು. ಭಾರತವನ್ನು ತುಂಬಾ ವಿಭಿನ್ನವಾಗಿ ನಡೆಸಿಕೊಳ್ಳಲಾಯಿತು ಮತ್ತು ಆದರೆ ಈಗ ಅದು ಬಹಳಷ್ಟು ಬದಲಾಗಿದೆ. ಸುಮಾರು 29 ವರ್ಷಗಳು ಕಳೆದಿವೆ. ಸಮಯವು ಹಾಗೆಯೇ ಹಾರುತ್ತದೆ," ಎಂದು ಅವರು ಹೇಳಿದ್ದಾರೆ.

IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ ಹೆಸರಿಸಿದ ಏಡೆನ್‌ ಮಾರ್ಕ್ರಮ್!

ಸೌರವ್‌ ಗಂಗೂಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಎರಡು ಐಸಿಸಿ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ, ಟೂರ್ನಿಯ ಎರಡೂ ಫೈನಲ್‌ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಆದರೆ, 2003 ರಲ್ಲಿ ಭಾರತ ಏಕದಿನ ವಿಶ್ವಕಪ್‌ ಫೈನಲ್‌ ತಲುಪಿ, ಆಸೀಸ್‌ ವಿರುದ್ಧ ಸೋಲು ಕಂಡಿತ್ತು. ಗಂಗೂಲಿ ಮೊದಲ ಬಾರಿ ಕೋಕಾ ಕೋಲಾ ಸಿಂಗಾಪುರ್‌ ಚಾಲೆಂಜ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಬಳಿಕ 2000 ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಚಿನ್‌ ಬದಲು ಗಂಗೂಲಿ ನಾಯಕರಾದರು. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಾಯಕರಾಗಿ ಕಣಕ್ಕಿಳಿದಿದ್ದರು. ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ 49 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 21ರಲ್ಲಿ ಗೆಲುವು ದಾಖಲಿಸಿದೆ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 146 ಪಂದ್ಯಗಳಲ್ಲಿ 76 ಪಂದ್ಯಗಳನ್ನು ಗೆದ್ದಿದೆ.

IND vs SA 1st T20I: ಕಟಕ್‌ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಇಲ್ಲಿದೆ

ಟಿ20 ನಾಯಕತ್ವವನ್ನು ಶುಭ್‌ಮನ್‌ ಗಿಲ್‌ಗೆ ನೀಡಿ ಎಂದ ಗಂಗೂಲಿ

ಬಿಸಿಸಿಐ ಮಾಜಿ ಅಧ್ಯಕ್ಷ ಭಾರತೀಯ ಟಿ20 ಕ್ರಿಕೆಟ್‌ ನಾಯಕತ್ವದ ಕುರಿತು ಮಾತನಾಡಿದ್ದು, ಪ್ರಸ್ತುತ ಟಿ20 ನಾಯಕರಾಗಿರುವ ಸೂರ್ಯಕುಮಾರ್‌ ಯಾದವ್‌ ಬದಲಿಗೆ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಆ ಮೂಲಕ ಗಿಲ್‌ ಅವರನ್ನು ಎಲ್ಲಾ ಮಾದರಿಯ ನಾಯಕರನ್ನಾಗಿ ಮಾಡಬೇಕೆಂದು ಅವರು ಬಯಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸೌರವ್‌ ಗಂಗೂಲಿ, "ನನ್ನ ಅಭಿಪ್ರಾಯದಲ್ಲಿ, ಶುಭ್​ಮನ್ ಗಿಲ್ ಎಲ್ಲಾ ಸ್ವರೂಪಗಳಿಗೂ ನಾಯಕನಾಗಿರಬೇಕು. ಅವರು ಎಲ್ಲದಕ್ಕೂ ಸಮರ್ಥರು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.