ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅವರ ಹೆಸರಿಗೆ ಪ್ರತಿಕ್ರಿಯಿಸಬಾರದುʼ-ಜಸ್‌ಪ್ರೀತ್‌ ಬುಮ್ರಾಗೆ ರೂಪಿಸಿರುವ ಗೇಮ್‌ ಪ್ಲ್ಯಾನ್‌ ತಿಳಿಸಿದ ಟಿಮ ಸೈಫರ್ಟ್‌!

ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾರಕ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಎದುರಿಸಲು ಸೂಕ್ತ ಯೋಜನೆಯನ್ನು ರೂಪಿಸಿದ್ದೇನೆಂದು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ವಿಕೆಟ್‌ ಕೀಪರ್‌ ಟಿಮ್‌ ಸೈಫರ್ಟ್‌ ತಿಳಿಸಿದ್ದಾರೆ. ಮಾರ್ಚ್‌ 29 ರಂದು ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಕಾದಾಟ ನಡೆಸಲಿವೆ.

ಜಸ್‌ಪ್ರೀತ್‌ ಬುಮ್ರಾಗೆ ರೂಪಿಸಿರುವ ಗೇಮ್‌ ಪ್ಲ್ಯಾನ್‌ ತಿಳಿಸಿದ ಸೈಫರ್ಟ್!

ಜಸ್‌ಪ್ರೀತ್‌ ಬುಮ್ರಾಗೆ ಗೇಮ್‌ ಪ್ಲ್ಯಾನ್‌ ತಿಳಿಸಿದ ಸೈಫರ್ಟ್‌. -

Profile
Ramesh Kote Mar 21, 2026 4:17 PM

ನವದೆಹಲಿ: ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) ಪಂದ್ಯದಲ್ಲಿ ಮಾರಕ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಎದುರು ಸೂಕ್ತ ಗೇಮ್‌ ಪ್ಲ್ಯಾನ್‌ ರೂಪಿಸಿದ್ದೇನೆಂದು ನ್ಯೂಜಿಲೆಂಡ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ವಿಕೆಟ್‌ ಕೀಪರ್‌-ಬ್ಯಾಟರ್‌ ಟಿಮ್‌ ಸೈಫರ್ಟ್‌ (Tim Seifert) ತಿಳಿಸಿದ್ದಾರೆ. ಮಾರ್ಚ್‌ 29 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಲಿವೆ. 8 ರಂದು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿಯೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ಟಿಮ್‌ ಸೈಫರ್ಟ್‌ ಎದುರಿಸಿದ್ದರು. ಕಿವೀಸ್‌ ಪರ ಅರ್ಧಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಆಗಿದ್ದರು ಸೈಫರ್ಟ್‌. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 96 ರನ್‌ಗಳಿಂದ ಸೋಲು ಅನುಭವಿಸಿತ್ತು. ಬುಮ್ರಾ ಕೇವಲ 15 ರನ್‌ ನೀಡಿ 4 ವಿಕೆಟ್‌ಗಳನ್ನು ಕಿತ್ತಿದ್ದರು.

ಜಸ್‌ಪ್ರೀತ್‌ ಬುಮ್ರಾ ರೀತಿಯ ಬೌಲರ್ ಎದುರಿಸುವಾಗ ಮುಖ್ಯ ತಂತ್ರವೆಂದರೆ ಬೌಲರ್ ಹೆಸರು ಬಿಟ್ಟು ಚೆಂಡಿನ ಮೇಲೆ ಗಮನಹರಿಸುವುದಾಗಿದೆ ಎಂಬುದು ಟಿಮ್‌ ಸೈಫರ್ಟ್‌ ಅವರ ಅಭಿಪ್ರಾಯ. ಚೆಂಡಿನ ಮೇಲೆ ಒತ್ತು ನೀಡುವುದರಿಂದ ಬ್ಯಾಟರ್ ಉತ್ತಮ ಮನೋಭಾವದಲ್ಲಿ ಆಟ ಆಡಲು ಸಜ್ಜಾಗುತ್ತಾರೆ ಎಂದು ಅವರು ಹೇಳಿದ್ದಾರೆ.

IPL 2026: ಈ ಸಲಾನು ಆರ್‌ಸಿಬಿ ಕಪ್‌ ಹೊಡೆಯುವುದು ಪಕ್ಕಾ ಎಂದ ಆರ್‌ ಅಶ್ವಿನ್‌!

“ಹೌದು, ಪ್ರಸ್ತುತ ಜಸ್‌ಪ್ರೀತ್‌ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್, ಆದ್ದರಿಂದ ಅವರಿಗೆ ಗೌರವ ನೀಡಬೇಕು. ಆದರೆ ಅದೇ ಸಮಯದಲ್ಲಿ, ಕೆಲವೊಮ್ಮೆ ನೀವು ಬೌಲರ್ ಹೆಸರನ್ನು ಬಿಟ್ಟು, ಕೆಳಗೆ ಬರುವ ಚೆಂಡಿಗೆ ಪ್ರತಿಕ್ರಿಯಿಸುವುದೇ ಮುಖ್ಯ. ನೀವು ಎದುರಿಸುತ್ತಿರುವ ಹೆಸರನ್ನು ಮನಸ್ಸಿನಿಂದ ತೆಗೆದುಹಾಕಿ ಚೆಂಡಿಗೆ ಪ್ರತಿಕ್ರಿಯಿಸಿದರೆ, ಬುಮ್ರಾ ವಿರುದ್ಧ ಆಟ ಆಡುವ ಭಾವನೆಗಿಂತ ಉತ್ತಮ ಮನೋಭಾವದಲ್ಲಿ ಇರಬಹುದು. ಇದು ಮತ್ತೊಂದು ಮಹತ್ವದ ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.

ಬೌಲರ್‌ ಹೆಸರನ್ನು ಬಿಟ್ಟು ಚೆಂಡಿನ ಕಡೆ ಗಮನ

31ನೇ ವಯಸ್ಸಿನ ಟಿಮ್‌ ಸೈಫರ್ಟ್‌, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯಕ್ಕಿಂತ ಮುನ್ನ, ಈ ಸಿದ್ಧಾಂತವೇ (ಬೌಲರ್ ಹೆಸರನ್ನು ಬಿಟ್ಟು ಚೆಂಡಿಗೆ ಗಮನಕೊಡುವುದು) ಸಂದರ್ಭದ ಒತ್ತಡವನ್ನು ಎದುರಿಸಲು ಅವರಿಗೆ ಸಹಾಯ ಮಾಡುವುದಾಗಿ ನಂಬಿದ್ದಾರೆ.

IPL 2026: ಫೋನ್‌ ಸಂಪರ್ಕಕ್ಕೆ ಸಿಗದ 4 ಕೋಟಿ ರು ಬೆಲೆಯ ಆರ್‌ಸಿಬಿ ವೇಗಿ ಯಶ್‌ ದಯಾಳ್‌!

“ನೀವು ಆಟಗಾರರ ಹೆಸರನ್ನು ಗಮನಿಸಿದರೆ, ಅವು ನಿಮ್ಮ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ ಮತ್ತು ನೀವು ಸ್ವತಃ ಒತ್ತಡಕ್ಕೆ ಒಳಗಾಗುತ್ತೀರಿ. ಆದರೆ ನೀವು ಇದನ್ನು ಕೈಬಿಟ್ಟು ಚೆಂಡಿನ ಮೇಲೆ ಮಾತ್ರ ಗಮನಹರಿಸಿದರೆ, ಸ್ವತಃ ಒತ್ತಡವನ್ನು ತೆಗೆದುಹಾಕಿ, ಆಟವನ್ನು ಹೇಗೆ ಆಡಬೇಕು ಎಂಬದರ ಕಡೆಗೆ ಗಮನಹರಿಸಬಹುದು. ಇದರಿಂದ ತಕ್ಷಣವೇ ಒತ್ತಡವು ಕಡಿಮೆಯಾಗುತ್ತದೆ. ನಾನು ಹೇಳಿದಂತೆ, ನೀವು ಆ ಆಟಗಾರರನ್ನು ಅವರ ವೈಶಿಷ್ಟ್ಯಕ್ಕಾಗಿ ಗೌರವಿಸಬೇಕು. ಆದರೆ ಅದೇ ಸಮಯದಲ್ಲಿ, ನೀವು ಪ್ರತಿಕ್ರಿಯಿಸಲು ಗಮನ ಹರಿಸಿ, ಕೆಳಗೆ ಬರುವ ಆ ವೈಟ್ ಚೆಂಡಿನ ಬಗ್ಗೆ ಮಾತ್ರ ಚಿಂತಿಸಬೇಕು,” ಎಂದು ಟಿಮ್‌ ಸೈಫರ್ಟ್‌ ಹೇಳಿದ್ದಾರೆ.

ಸೈಫರ್ಟ್‌ ಅವರು 2021ರ ನಂತರ ಕೆಕೆಆರ್‌ ಪರ ತಮ್ಮ ಎರಡನೇ ಅವಧಿಯನ್ನು ಆರಂಭಿಸುತ್ತಿದ್ದಾರೆ. ನ್ಯೂಜಿಲೆಂಡ್ ಓಪನರ್‌ ಇದುವರೆಗೆ ಐಪಿಎಲ್‌ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದೇ ಪಂದ್ಯವನ್ನು ಕೆಕೆಆರ್‌ ಪರ ಆಡಿದ್ದಾರೆ.