ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2026ರ ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಆರಿಸಿದ ಸುನೀಲ್‌ ಗವಾಸ್ಕರ್‌!

ನ್ಯೂಜಿಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ವಿಕೆಟ್‌ ಕೀಪರ ಸಂಜು ಸ್ಯಾಮ್ಸನ್‌ ಬದಲು ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಅವರಿಗೆ ಅವಕಾಶ ನೀಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ.

ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಅನ್ನು ಆರಿಸಿದ ಸುನೀಲ್‌ ಗವಾಸ್ಕರ್‌!

ಸಂಜು ಬದಲು ಇಶಾನ್‌ ಆಡಬೇಕೆಂದ ಗವಾಸ್ಕರ್‌. -

Profile
Ramesh Kote Feb 2, 2026 10:32 PM

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಐದು ಪಂದ್ಯಗಳ ತವರು ಟಿ20ಐ ಸರಣಿಯಲ್ಲಿ (IND vs NZ) ಭಾರತ ತಂಡ ಬಹುತೇಕ ಎಲ್ಲಾ ಅಂಶಗಳನ್ನು ಯಶಸ್ವಿಯಾಗಿ ಪೂರೈಸಿದೆ. 4–1ಅಂತರದಲ್ಲಿ ಟಿ20ಐ ಸರಣಿ ಜಯದೊಂದಿಗೆ ಮುಂಬರುವ 2026ರ ಟಿ20 ವಿಶ್ವಕಪ್‌ (ICC World Cup 2026) ಟೂರ್ನಿಗೆ ಭಾರತ ತಂಡ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆದರೆ ಈ ಸರಣಿಯಿಂದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಆಯ್ಕೆ ಸಂಬಂಧಿತ ತಲೆನೋವು ಉಂಟಾಗಿದೆ. ಫಾರ್ಮ್‌ಗಾಗಿ ಹೋರಾಡುತ್ತಿರುವ ಸಂಜು ಸ್ಯಾಮ್ಸನ್‌ಗೆ (Sanju Samson) ಮುಂದುವರಿಯಬೇಕೇ, ಅಥವಾ ಉತ್ತಮ ಲಯದಲ್ಲಿರುವ ಇಶಾನ್ ಕಿಶನ್‌ಗೆ ದೊಡ್ಡ ಟೂರ್ನಿಯಲ್ಲಿ ಅವಕಾಶ ನೀಡಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ವಿಷಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ನಿರ್ಧಾರವನ್ನು ಮುಂದೂಡಿರುವುದಾದರೂ, ಈ ಚರ್ಚೆಯಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಶುಭಮನ್‌ ಗಿಲ್ ಪ್ರಯೋಗದ ಪರಿಣಾಮವಾಗಿ ಸಂಜು ಸ್ಯಾಮ್ಸನ್ ತಂಡದಲ್ಲಿ ಪರೋಕ್ಷವಾಗಿ ಹಿನ್ನಡೆ ಅನುಭವಿಸಿದ್ದರು. ಆ ಪ್ರಯೋಗದ ವೇಳೆ ಅವರನ್ನು ಬ್ಯಾಟಿಂಗ್ ಕ್ರಮದಲ್ಲಿ ಕೆಳಕ್ಕೆ ಸರಿಸಲಾಗಿದ್ದು, ಬಳಿಕ ಸಂಪೂರ್ಣವಾಗಿ ತಂಡದಿಂದ ಹೊರಗಿಡಲಾಗಿತ್ತು. ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಆಯ್ಕೆಗಾರರು ಮತ್ತೆ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಮರಳಿ ಕರೆತಂದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ನಿರಾಶಾಜನಕ ಪ್ರದರ್ಶನ ನೀಡಿದರು. ಐದು ಇನಿಂಗ್ಸ್‌ಗಳಲ್ಲಿ ಕೇವಲ 46 ರನ್‌ಗಳನ್ನು ಗಳಿಸಿ ಟೀಮ್‌ ಮ್ಯಾನೇಜ್‌ಮೆಂಟ್‌ ವಿಶ್ವಾಸವನ್ನು ಕಳೆದುಕೊಂಡಿದ್ದರು.

AUS vs PAK: ಅರ್ಧಶತಕ ಬಾರಿಸಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಬಾಬರ್‌ ಆಝಮ್‌!

ಸಂಜು ಸ್ಯಾಮ್ಸನ್‌ಗೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದ್ದು, ಅಚ್ಚರಿಯ ರೀತಿಯಲ್ಲಿ ಭಾರತ ಟಿ20ಐ ತಂಡಕ್ಕೆ ಮರಳಿದ ಇಶಾನ್ ಕಿಶನ್, ನ್ಯೂಜಿಲೆಂಡ್ ವಿರುದ್ಧ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಕಿವೀಸ್‌ ವಿರುದ್ಧ ಮೂರನೇ ಕ್ರಮದಲ್ಲಿ ಬ್ಯಾಟ್‌ ಮಾಡಿದ ಎಡಗೈ ಬ್ಯಾಟ್ಸ್‌ಮನ್, ನಾಲ್ಕು ಇನಿಂಗ್ಸ್‌ಗಳಲ್ಲಿ ಒಟ್ಟು 215 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಸಿಡಿಸಿದ್ದರು. ಇದು ಸಂಜು ಸ್ಯಾಮ್ಸನ್‌ಗೆ ಭಾರಿ ಹಿನ್ನಡೆಯನ್ನು ತಂದುಕೊಟ್ಟಿದೆ.

ಸಂಜು ಸ್ಯಾಮ್ಸನ್‌ ಬದಲು ಇಶಾನ್‌ ಕಿಶನ್‌ ಆಡಬೇಕು: ಗವಾಸ್ಕರ್‌

ಐದನೇ ಮತ್ತು ಅಂತಿಮ ಟಿ20ಐನಲ್ಲಿ ಸಂಜು ಸ್ಯಾಮ್ಸನ್ ಅವರ ತವರು ಅಂಗಣದಲ್ಲಿ ಇಶಾನ್ ಕಿಶನ್ ಶತಕ ಬಾರಿಸಿದರು. ಈ ಪ್ರದರ್ಶನದಿಂದ ಅವರು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಡುವುದು ಹೆಚ್ಚು ಕಷ್ಟವಾಗಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಪಂದ್ಯವನ್ನು ಬಾಯ್ಕಟ್‌ ಮಾಡಿದ್ದಕ್ಕೆ ಐಸಿಸಿ ಪಾಕ್‌ಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ: ಎಹ್ಸಾನ್‌ ಮಣಿ!

"ಇಶಾನ್‌ ಕಿಶನ್‌ ಅವರನ್ನು ತಂಡದಿಂದ ಕೈಬಿಡುವುದು ತುಂಬಾ ಕಷ್ಟ. ಹಾಗಾದರೆ ಯಾರ ಸ್ಥಳದಲ್ಲಿ ಅವರನ್ನು ಆಡಿಸಬೇಕು? ತಿಲಕ್ ವರ್ಮಾ ಈಗಾಗಲೇ ಸಾಬೀತಾದ ಆಟಗಾರ. ಸಂಜು ಸ್ಯಾಮ್ಸನ್ ಕೂಡ ಸಾಬೀತಾದ ಆಟಗಾರನೇ, ಆದರೆ ಅವರು ಈ ಸಮಯದಲ್ಲಿ ಫಾರ್ಮ್‌ನಲ್ಲಿ ಇಲ್ಲ. ಇದು ಸಾಮರ್ಥ್ಯ ಅಥವಾ ಮನಸ್ಥಿತಿಗೆ ಸಂಬಂಧಿಸಿದ ವಿಷಯವಲ್ಲ. ಕೆಲವೊಮ್ಮೆ ಫಾರ್ಮ್ ಕೈಕೊಡುತ್ತದೆ. ಹಾಗಾಗಿ ಪ್ಲೇಯಿಂಗ್‌ XIನಲ್ಲಿ ಇಶಾನ್‌ ಕಿಶನ್‌ ಆಡಲು ಅರ್ಹರು,” ಎಂದು ಪ್ರಸಾರಕರೊಂದಿಗೆ ಮಾತನಾಡಿದ ವೇಳೆ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

“ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ನೀವು ಜೂಜು ಆಡಲು ಸಾಧ್ಯವಿಲ್ಲ. ಅವರಿಗೆ ಐದು ಪಂದ್ಯಗಳ ಅವಕಾಶ ಸಿಕ್ಕಿದೆ. ಅವರ ಗರಿಷ್ಠ ಸ್ಕೋರ್ ಕೇವಲ 24. ಅಲ್ಲದೆ, ವಿಚಿತ್ರ ರೀತಿಯಲ್ಲಿ ಔಟ್ ಆಗುತ್ತಿದ್ದಾರೆ. ಇದು ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ತಿಲಕ್ ವರ್ಮಾ ಫಿಟ್ ಆಗಿರದಿದ್ದರೆ ಹೊರತು, ಫೆಬ್ರವರಿ 7ರಂದು ಸಂಜು ಸ್ಯಾಮ್ಸನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ನನಗೆ ಕಾಣುವುದಿಲ್ಲ,” ಎಂದು ಗವಾಸ್ಕರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.