ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Chikkaballapur News: ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಲಿ : ಡಿಪೋ ಮ್ಯಾನೇಜರ್ ಶ್ರೀನಿವಾಸಮೂರ್ತಿ

ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಲಿ

ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಕುಟುಂಬಸ್ಥರಂತೆ ವಿಶ್ವಾಸದಿಂದ ಪ್ರೀತಿಪೂರ್ವಕ ಮಾತುಗಳ ನ್ನಾಡುತ್ತಾ ತಮ್ಮ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರವಹಿಸಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದಂತಹ ಟಿ.ಸಿ ಚಲಪತಿಯವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಮತ್ತು ಉತ್ತಮ ಆರೋಗ್ಯದಿಂದ ಇರಬೇಕು. ಎಂದು ಕೆಎಸ್‌ಆರ್ಟಿಸಿ ಡಿಪೋ ಮ್ಯಾನೇಜರ್ ಶ್ರೀನಿವಾಸ್ ಮೂರ್ತಿಯವರು ಶುಭ ಹಾರೈಸಿದರು.

Pravasi Prapancha : ವಾರವಿಡೀ ಓದಬಹುದಾದ ಸಮೃದ್ಧ ಪ್ರವಾಸಿ ಸಂಚಿಕೆ ಓದುಗರ ಕೈಗೆ: ಪ್ರವಾಸಿ ಪ್ರಪಂಚ ಇಂದು ಲೋಕಾರ್ಪಣೆ

ಪ್ರವಾಸಿ ಪ್ರಪಂಚ ಇಂದು ಲೋಕಾರ್ಪಣೆ

ಪ್ರವಾಸಿ ಪ್ರಪಂಚವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಫ್ಕೆಸಿಸಿಐ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಲೋಕಾರ್ಪಣೆ‌ ಮಾಡಲಿದ್ದಾರೆ. ಪ್ರವಾಸಿ ಪ್ರಪಂಚದ ಮುದ್ರಣ ಆವೃತ್ತಿಯನ್ನು ಸಿಎಂ ಬಿಡುಗಡೆ ಮಾಡಿದರೆ, ವೆಬ್‌ಸೈಟ್ ಅನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಲೋಕಾರ್ಪಣೆ ಮಾಡಲಿದ್ದಾರೆ.

Pralhad Joshi: ಶೈಕ್ಷಣಿಕ-ಆರೋಗ್ಯ ಸೇವೆಯಲ್ಲಿ ಕೆಎಲ್‌ಇ ಅಮೋಘ ಸೇವೆ- ಪ್ರಲ್ಹಾದ್‌ ಜೋಶಿ

ಶೈಕ್ಷಣಿಕ-ಆರೋಗ್ಯ ಸೇವೆಯಲ್ಲಿ ಕೆಎಲ್‌ಇ ಅಮೋಘ ಸೇವೆ: ಪ್ರಲ್ಹಾದ್‌ ಜೋಶಿ

Pralhad Joshi: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ) ಗುಣಮಟ್ಟದ ಶಿಕ್ಷಣದ ಜತೆಗೆ ಆರೋಗ್ಯ ಸೇವೆ ಸಹ ಒದಗಿಸುತ್ತ ಸಮಾಜಕ್ಕೆ ಸಮರ್ಪಿಸಿಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

rcb victory parade: ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯಯಾತ್ರೆ

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯಯಾತ್ರೆ

ಮಂಗಳವಾರದಂದೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಮಕ್ಕಳು, ಯುವಕರು, ಗೃಹಿಣಿಯರು, ಮಧ್ಯವಯಸ್ಕರು, ಇಳಿ ವಯಸ್ಸಿನ ಅಭಿಮಾನಿಗಳೂ ಮನೆಯಿಂದ ಹೊರಗೆ ಬಂದು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಲಕ್ಷಾಂತರ ಅಭಿಮಾನಿಗಳು ಒಮ್ಮೆಗೇ ರಸ್ತೆಗೆ ಇಳಿದಿದ್ದರಿಂದ ನಗರದ ಹಲವಡೆ ಮಧ್ಯರಾತ್ರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

Miss Universe Karnataka Tips: ಮಾಡೆಲ್‌ ಆಗುವ ಹುಡುಗಿಯರಿಗೆ ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ನೀಡಿದ 5 ಸಿಂಪಲ್‌ ಸಲಹೆಗಳಿವು

ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ನೀಡಿದ 5 ಸಿಂಪಲ್‌ ಸಲಹೆಗಳಿವು

Miss Universe Karnataka Tips: ಮಾಡೆಲ್‌ ಆಗಲು ಬಯಸುವ ಹುಡುಗಿಯರು ಕೇವಲ ಥಳುಕು-ಬಳುಕಾಗಿ ಕಂಡರೇ ಸಾಲದು! ಒಂದಿಷ್ಟು ವಿಷಯಗಳತ್ತಲೂ ಗಮನಹರಿಸಬೇಕು ಎನ್ನುವ ಮಿಸ್‌ ಯೂನಿವರ್ಸ್ ಕರ್ನಾಟಕ ವಂಶಿ ಉದಯ್‌, ಅಂತಹವರಿಗೆ 5 ಸಿಂಪಲ್‌ ಸಲಹೆಗಳನ್ನು ನೀಡಿದ್ದಾರೆ.

Suhas Shetty murder case: ಸುಹಾಸ್‌ ಶೆಟ್ಟಿ ಕೊಲೆಯ ಮತ್ತೊಬ್ಬ ಆರೋಪಿ, ಅಬ್ದುಲ್‌ ರಹಿಮಾನ್‌ ಕೊಲೆಯ ಇಬ್ಬರು ಆರೋಪಿಗಳ ಬಂಧನ

ಸುಹಾಸ್‌ ಶೆಟ್ಟಿ, ಅಬ್ದುಲ್‌ ರಹಿಮಾನ್‌ ಕೊಲೆಗಳ ಮೂವರು ಆರೋಪಿಗಳ ಬಂಧನ

ಸುಹಾಸ್ ಶೆಟ್ಟಿ (Suhas Shetty murder case) ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾಗೇ ಬಂಟ್ವಾಳದಲ್ಲಿ ನಡೆದ ಅಬ್ದುಲ್‌ ರಹಿಮಾನ್‌ ಕೊಲೆ (Abdul Rahiman Murder) ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ.

Stabbing Case: ಬೆಂಗಳೂರಿನಲ್ಲಿ ಐಪಿಎಲ್‌ ಸಂಭ್ರಮಾಚರಣೆ ವೇಳೆ ಯುವಕನಿಗೆ ಚೂರಿ ಇರಿತ

ಬೆಂಗಳೂರಿನಲ್ಲಿ ಐಪಿಎಲ್‌ ಸಂಭ್ರಮಾಚರಣೆ ವೇಳೆ ಯುವಕನಿಗೆ ಚೂರಿ ಇರಿತ

Stabbing Case: ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ಸಂಭ್ರಮಾಚರಣೆ ಮಾಡುತ್ತಾ ದುಷ್ಕರ್ಮಿಗಳು ಬಾರ್​ಗೆ ತೆರಳುತ್ತಿದ್ದರು. ಇದೇ ವೇಳೆ ಇನ್ನೊಬ್ಬ ಯುವಕನಿಗೆ ಚಾಕುವಿನಿಂದ ಇರಿದಿದ್ದಾರೆ. ಸ್ಥಳದಲ್ಲಿದ್ದವರ ಪ್ರತಿರೋಧದ ಬಳಿಕ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Road Accident: ಐಪಿಎಲ್‌ ಸಂಭ್ರಮಾಚರಣೆ ವೇಳೆ ಅಪಘಾತ: ಬೈಕ್‌ಗಳು ಡಿಕ್ಕಿಯಾಗಿ ಯುವಕ ಸಾವು

ಐಪಿಎಲ್‌ ಸಂಭ್ರಮಾಚರಣೆ ವೇಳೆ ಅಪಘಾತ: ಬೈಕ್‌ಗಳು ಡಿಕ್ಕಿಯಾಗಿ ಯುವಕ ಸಾವು

Road Accident: ಬೈಕ್‌ನಲ್ಲಿ ಸೆಲೆಬ್ರೇಶನ್ ಮಾಡುವ ವೇಳೆ ಅಪಘಾತ ಸಂಭವಿಸಿದೆ. 2 ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಸಾವನಪ್ಪಿದ್ದಾನೆ. ಅಪಘಾತದಲ್ಲಿ ಅಭಿ ಎನ್ನುವ ಯುವಕ ದುರ್ಮರಣ ಹೊಂದಿದ್ದಾನೆ. ಘಟನೆ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Star Fashion: ನಟಿ ತನ್ವಿಯ ರಾಯಲ್‌ ಲುಕ್‌ಗೆ ಸಾಥ್‌ ನೀಡಿದ ಟ್ರೆಡಿಷನಲ್‌ ವಿನ್ಯಾಸದ ಸೆಪ್ಟಂ ರಿಂಗ್‌

ಟ್ರೆಡಿಷನಲ್‌ ವಿನ್ಯಾಸದ ಸೆಪ್ಟಂ ರಿಂಗ್‌ನಲ್ಲಿ ಕಾಣಿಸಿಕೊಂಡ ನಟಿ ತನ್ವಿ

Star Fashion: ಸೆಪ್ಟಂ ಟ್ರೆಡಿಷನಲ್‌ ನೋಸ್‌ ರಿಂಗ್‌ ಧರಿಸಿರುವ ಕಿರುತೆರೆ ನಟಿ ತನ್ವಿ ಬಾಲರಾಜ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಈ ಸಾಂಪ್ರದಾಯಿಕ ಲುಕ್‌ ನೀಡುವ ಮೂಗುತಿ ಅವರ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಜ್ಯುವೆಲ್‌ ಫ್ಯಾಷನ್‌? ಇಲ್ಲಿದೆ ವಿವರ.

IPL 2025: ʼಈ ಸಲ ಕಪ್‌ ನಮ್ದೆʼ ಖುಷಿ ಹೊರಹಾಕಿದ ಸಿಎಂ ಸಿದ್ದರಾಮಯ್ಯ

ʼಈ ಸಲ ಕಪ್‌ ನಮ್ದೆʼ ಖುಷಿ ಹೊರಹಾಕಿದ ಸಿಎಂ ಸಿದ್ದರಾಮಯ್ಯ

”Rrrrrrrrr…. Cccccccc…. Bbbbbbbbb….ಇದು ಇತಿಹಾಸ ಸೃಷ್ಟಿಸಿದ ದಿನ.. ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ್ದಾರೆ. ಆರ್‌ಸಿಬಿ- ಪಂಜಾಬ್‌ ಕಿಂಗ್ಸ್‌ ನಡುವೆ ನಡೆದ ಇಡೀ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ.

Karnataka Weather: ಯೆಲ್ಲೋ ಅಲರ್ಟ್; ಇಂದು ಬೆಳಗಾವಿ, ಧಾರವಾಡ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ

ಇಂದು ಬೆಳಗಾವಿ, ಧಾರವಾಡ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30°C ಮತ್ತು 21°C ಇರಲಿದೆ.

ಅಶೋಕ್ ಬಿತ್ತನೆ ಬೀಜದಿಂದ ಉತ್ತಮ ಇಳುವರಿ, ಅಧಿಕ ಲಾಭ: ತಜ್ಞ ಡಾ.ಪ್ರಕಾಶ್

ಅಶೋಕ್ ಬಿತ್ತನೆ ಬೀಜದಿಂದ ಉತ್ತಮ ಇಳುವರಿ, ಅಧಿಕ ಲಾಭ

ಅಶೋಕ್ ಕಂಪನಿಯಲ್ಲಿ ಬೀಟ್‌ಬೀಟ್, ಹುರಳಿಕಾಯಿ, ಚೆಂಡುಮಲ್ಲಿಗೆ, ಕೊತ್ತಂಬರಿ ಸೇರಿದಂತೆ ವಿವಿಧ ತಳಿಯ ಬಿತ್ತನೆಬೀಜಗಳು ಮಾರುಕಟ್ಟೆಯಲ್ಲಿ ಸಿಗಲಿದೆ. ಈಗಾಗಲೇ ಕ್ಷೇತ್ರದಲ್ಲಿ ಕೆಲ ರೈತರು ಅಶೋಕ್ ಕಂಪನಿಯ ಬೀಟ್‌ರೂಟ್, ಕೊತ್ತಂಬರಿ ಸೇರಿದಂತೆ ವಿವಿಧ ತಳಿಯ ಬಿತ್ತನೆಬೀಜಗಳು ಹಾಕಿದ್ದಾರೆ. ಬೀಟ್ ರೂಟ್ ಕಾಯಿಗಳು ಹಿಡಿಯಷ್ಟಕ್ಕೂ ಹೆಚ್ಚು ಗಾತ್ರ ಹೊಂದಿದ್ದು, ಹೆಚ್ಚಿನ ತೂಕ ಇವೆ

Kamal Hassan: ತಮಿಳು ನಟ ಕಮಲಾಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು : ಕರವೇ ತಾಲೂಕು ಅಧ್ಯಕ್ಷ ಜಿ.ಎಲ್.ಆಶ್ವತ್ಥ್ ನಾರಾಯಣ ಆಗ್ರಹ

ತಮಿಳು ನಟ ಕಮಲಾಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು

ಕನ್ನಡ ಭಾಷೆಗೆ ಎರಡುಸಾವಿರದ ಐನೂರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಇದೆ. ಇದರ ಪರಿವೇ ಇಲ್ಲದೆ ತಮಿಳು ನಟ ಕಮಲಹಾಸನ್ ವಿವಾದ್ಮಾಕ ಹೇಳಿಕೆಯಾದ ತಮಿಳು ಭಾಷೆಯಿಂದ ಕನ್ನಡ ಭಾಷೆ ತಾಳಿದೆ ಎಂದು ಹೇಳಿರುವುದು ನಿಜಕ್ಕೂ ಖಂಡನೀಯ ಮತ್ತು ಹಾಸ್ಯಾಸ್ಪದ ಕನ್ನಡ ಭಾಷೆಗೆ ಎರಡುಸಾವಿರದ ಐನೂರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಇದೆ. ಇದರ ಪರಿವೇ ಇಲ್ಲದೆ ತಮಿಳು ನಟ ಕಮಲಹಾಸನ್ ವಿವಾದ್ಮಾಕ ಹೇಳಿಕೆಯಾದ ತಮಿಳು ಭಾಷೆಯಿಂದ ಕನ್ನಡ ಭಾಷೆ ತಾಳಿದೆ ಎಂದು ಹೇಳಿರುವುದು ನಿಜಕ್ಕೂ ಖಂಡನೀಯ ಮತ್ತು ಹಾಸ್ಯಾಸ್ಪದ

MLA Pradeep Eshwar ; ಅಹವಾಲು ಆಲಿಸಿ ಸುಮ್ಮನಾಗದೆ ಅಧಿಕಾರಿಗಳ ಸಮಕ್ಷಮ ಸ್ಮಶಾನಕ್ಕೆ ದಾರಿ ಮಾಡಿಸಿ ಸೈ ಎಂದ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್

50 ವರ್ಷಗಳ ಸಮಸ್ಯೆಗೆ ಒಂದೇ ದಿನದಲ್ಲಿ ಪರಿಹಾರ ಕಾಣಿಸಿದ ಶಾಸಕ

ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಆಲಿಸಿದ ಶಾಸಕರು ಗ್ರಾಮಸ್ಥರ ಜತೆ ಸಂಧಾನ ನಡೆಸಿದಷ್ಟೇ ಅಲ್ಲ ಅವರ ಸಹಕಾರದಲ್ಲಿ ಸ್ಥಳಕ್ಕೆ ಜೆಸಿಬಿ ತರಿಸಿ ರಸ್ತೆಯನ್ನು ಮಾಡಿಸುವ ಮೂಲಕ ಅರ್ಧ ಶತಮಾನದ ಸಮಸ್ಯೆಗೆ ಒಂದೇ ದಿನದಲ್ಲಿ ಪರಿಹಾರ ಕಾಣಿಸಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಈ ಮೂಲಕ ನಾನು ಮಾತುಗಾರ ಮಾತ್ರ ವಲ್ಲ ಕೆಲಸಗಾರನೂ ಹೌದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು.

Covid 19 Cases: ರಾಜ್ಯದಲ್ಲಿಂದು 53 ಮಂದಿಗೆ ಕರೋನಾ ಪಾಸಿಟಿವ್;‌ ಸಕ್ರಿಯ ಪ್ರಕರಣಗಳ ಸಂಖ್ಯೆ 582ಕ್ಕೆ ಏರಿಕೆ

ರಾಜ್ಯದಲ್ಲಿಂದು 53 ಮಂದಿಗೆ ಕರೋನಾ ಪಾಸಿಟಿವ್

Covid 19 Cases: ರಾಜ್ಯದಲ್ಲಿ ಇಂದು ಒಟ್ಟು 675 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 53 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಒಟ್ಟು 324 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 319 ಮಂದಿ ಹೋಮ್‌ ಐಸೊಲೇಷನ್‌ನಲ್ಲಿದ್ದಾರೆ.

Chikkaballapur News: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆ :ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆ

ಯೋಗ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಕಾರ್ಯಕ್ರಮವು ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಸುವ ಮೂಲಕ ಆಚರಣೆ ಮಾಡಬೇಕಾಗಿದ್ದು, ಈ  ಯೋಗ ದಿನಾಚರಣೆಯ ಪೂರ್ವ ಸಿದ್ಧತಾ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ  ಪಿ. ಎನ್. ರವೀಂದ್ರ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು

Khela Movie: ವಿಹಾನ್ ಪ್ರಭಂಜನ್ ಅಭಿನಯದ ʼಖೇಲಾʼ ಚಿತ್ರದ ʼಪುಣ್ಯಾತ್ ಗಿತ್ತೀʼ ಹಾಡು ರಿಲೀಸ್‌

ʼಖೇಲಾʼ ಚಿತ್ರದ ʼಪುಣ್ಯಾತ್ ಗಿತ್ತೀʼ ಹಾಡು ರಿಲೀಸ್‌

Khela Movie: ವಿ.ಜೆ. ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ, ನಟ ವಿಹಾನ್ ಪ್ರಭಂಜನ್ ಅಭಿನಯದ, ವಿಭಿನ್ನ ಕಥಾಹಂದರ ಹೊಂದಿರುವ ʼಖೇಲಾʼ ಚಿತ್ರಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ ʼಪುಣ್ಯಾತ್ ಗಿತ್ತೀʼ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

Fake currency notes: ಮಾನ್ವಿಯಲ್ಲಿ ಖೋಟಾ ನೋಟು ಜಾಲ ಪತ್ತೆ; 10 ಆರೋಪಿಗಳ ಬಂಧನ

ಮಾನ್ವಿಯಲ್ಲಿ ಖೋಟಾ ನೋಟು ಜಾಲ; 10 ಆರೋಪಿಗಳ ಬಂಧನ

Fake currency notes: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಇಂಡಿಯನ್ ಬ್ಯಾಂಕ್‌ ಶಾಖೆಯ ಡೆಪಾಸಿಟ್‌ ಮಷಿನ್‌ನಲ್ಲಿ ನಕಲಿ ನೋಟುಗಳನ್ನು ಜಮಾ ಮಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Pralhad Joshi: ಗ್ಯಾರಂಟಿ ನೆಪದಲ್ಲಿ ಕಾರ್ಯಕರ್ತರ ಸಲಹುವ ರಾಜ್ಯ ಕಾಂಗ್ರೆಸ್‌ ಸರ್ಕಾರ: ಜೋಶಿ ಆರೋಪ

ಗ್ಯಾರಂಟಿ ನೆಪದಲ್ಲಿ ಕಾರ್ಯಕರ್ತರ ಸಲಹುವ ರಾಜ್ಯ ಸರ್ಕಾರ: ಜೋಶಿ ಆರೋಪ

Pralhad Joshi: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಸ್ಕೀಂಗಳು ಆ ಪಕ್ಷದ ಕಾರ್ಯಕರ್ತರಿಗೆ ಆದಾಯದ ಮೂಲವಾಗಿವೆ. ʼಗೃಹಲಕ್ಷ್ಮಿʼ ನಿಜಕ್ಕೂ ಆ ಪಕ್ಷದವರಿಗೆ ವರದಾನವಾಗಿದೆ, ವರಮಾನ ತರುವ ಯೋಜನೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

TA Narayana Gowda: ಮೂರ್ಖ ಕಮಲ್‌ ಹಾಸನ್‌ ಇನ್ಮುಂದೆ ಕರ್ನಾಟಕಕ್ಕೆ ಬರಲು ಬಿಡಲ್ಲ: ಕರವೇ ನಾರಾಯಣ ಗೌಡ ಎಚ್ಚರಿಕೆ

ಕಮಲ್‌ ಇನ್ಮುಂದೆ ಕರ್ನಾಟಕಕ್ಕೆ ಬರಲು ಬಿಡಲ್ಲ: ಟಿ.ಎ. ನಾರಾಯಣ ಗೌಡ

ಜೂನ್ 5ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮಾತ್ರ ಅಲ್ಲ, ಇನ್ಮುಂದೆ ಕಮಲ್ ಹಾಸನ್ ಯಾವುದೇ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದಿಲ್ಲ. ಆಗಲು ನಾವು ಬಿಡುವುದಿಲ್ಲ. ಕ್ಷಮೆ ಕೇಳದೇ, ದುರಹಂಕಾರ ಮೆರೆದಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಕಿಡಿಕಾರಿದ್ದಾರೆ.

Kamal Haasan controversy: ಕಮಲ್‌ ಹಾಸನ್‌ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು: ಬಿಎಸ್‌ವೈ ಆಗ್ರಹ

ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗಲ್ಲ: ಬಿಎಸ್‌ವೈ

Kamal Haasan controversy: ಇತಿಹಾಸ, ಭಾಷಾಶಾಸ್ತ್ರ ತಜ್ಞರಲ್ಲದ ಕಲಾವಿದ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ. ಅವರ ಅಭಿಪ್ರಾಯ ಮಂಡನೆಯ ಭರದಲ್ಲಿ ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕಿಡಿಕಾರಿದ್ದಾರೆ.

CM Siddaramaiah: ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ: ಸಿದ್ದರಾಮಯ್ಯ

ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ: ಸಿಎಂ

CM Siddaramaiah: ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಶೂದ್ರ ವರ್ಗದ ಜನ‌ ಹಿಂದುಳಿಯಲು ಅವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೇ ಪ್ರಮುಖ ಕಾರಣ. ಶೂದ್ರರು, ದಲಿತರು ಮಾತ್ರ ಶಿಕ್ಷಣ ಪಡೆಯುವಂತಿರಲಿಲ್ಲ. ಅಂಬೇಡ್ಕರ್ ಅವರ ಜೀವಮಾನದ ಹೋರಾಟವೇ ಈ‌ ಅಸಮಾನತೆಯನ್ನು ಅಳಿಸುವುದಾಗಿತ್ತು. ಇದಕ್ಕೆ ಶಿಕ್ಷಣವೇ ಪ್ರಮುಖ‌ ಅಸ್ತ್ರ ಎಂದು ಅಂಬೇಡ್ಕರ್ ಮನಗಂಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

DK Shivakumar: ಕಮಲ್ ಹಾಸನ್ ನ್ಯಾಯಾಲಯದ ಆದೇಶ ಪಾಲಿಸುವ ವಿಶ್ವಾಸವಿದೆ: ಡಿ.ಕೆ.ಶಿವಕುಮಾರ್

ಕಮಲ್ ಹಾಸನ್ ನ್ಯಾಯಾಲಯದ ಆದೇಶ ಪಾಲಿಸುವ ವಿಶ್ವಾಸವಿದೆ: ಡಿ.ಕೆ.ಶಿವಕುಮಾರ್

DK Shivakumar: ನ್ಯಾಯಾಲಯ ಎಲ್ಲರನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಹಿತ, ಭಾಷೆ ಕಾಪಾಡಲು ತನ್ನ ಅಭಿಪ್ರಾಯ ತಿಳಿಸಿರುತ್ತದೆ. ಈ ವಿವಾದದ ಬಗ್ಗೆ ಸಾಹಿತಿಗಳು ಹಾಗೂ ತಜ್ಞರ ಜತೆ ಚರ್ಚೆ ಮಾಡಿದೆ. ಆಗ ನನಗೆ ತಿಳಿದಿದ್ದು, ನಾವು ದ್ರಾವಿಡ ಭಾಗಕ್ಕೆ ಸೇರಿದವರು. ಇಲ್ಲಿ ಮೇಲು ಕೀಳು ಎಂಬ ಬೇಧವಿಲ್ಲ. ನಮ್ಮ ಭಾಷೆಗಳು ಒಂದರ ಜತೆ ಮತ್ತೊಂದು ತನ್ನದೇ ಆದ ರೀತಿಯಲ್ಲಿ ಬೆಸೆದುಕೊಂಡಿವೆ. ಕಮಲ್ ಹಾಸನ್ ಅವರ ಹೇಳಿಕೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಇದಕ್ಕೆ ನನ್ನ ಸಹಮತವಿದೆ. ಕಮಲ್ ಹಾಸನ್ ಅವರು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Karnataka Rains: ಮುಂದಿನ 4 ದಿನ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್‌ ಘೋಷಣೆ

ಮುಂದಿನ 4 ದಿನ ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಮುನ್ಸೂಚನೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.