ಭದ್ರಾ ಅಭಯಾರಣ್ಯದಲ್ಲಿ ಆಶ್ಚರ್ಯಕರ ದೃಶ್ಯ: ಜೊತೆಯಾಗಿ ನೀರು ಕುಡಿದ ಕಪ್ಪು ಚಿರತೆ ಮತ್ತು ಚುಕ್ಕೆ ಚಿರತೆ!
Viral Video: ಪ್ರಕೃತಿಯ ವಿಸ್ಮಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೆಚ್ಚಿನ ಜನರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಕಪ್ಪು ಚಿರತೆ ಮತ್ತು ಚುಕ್ಕೆ ಚಿರತೆ ಶಾಂತವಾಗಿ ಒಟ್ಟಿಗೆ ನೀರು ಕುಡಿಯುತ್ತಿರುವ ದೃಶ್ಯ ಕಣ್ಮನ ಸೆಳೆಯುವಂತಿದೆ. ಇವುಗಳು ಯಾವುದೇ ಸಂಘರ್ಷವಿಲ್ಲದೆ ಅಕ್ಕಪಕ್ಕದಲ್ಲಿ ನಿಂತು ನೀರು ಕುಡಿಯುತ್ತಿವೆ.
ಜೊತೆಯಾಗಿ ನೀರು ಕುಡಿದ ಕಪ್ಪು ಚಿರತೆ ಮತ್ತು ಚುಕ್ಕೆ ಚಿರತೆ -
ಚಿಕ್ಕಮಗಳೂರು,ಫೆ.13: ಕರ್ನಾಟಕದ ಭದ್ರಾ ಹುಲಿ ಅಭಯಾರಣ್ಯದಲ್ಲಿ ನಡೆದ ಒಂದು ಅಚ್ಚರಿಯ ದೃಶ್ಯ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ಪ್ರಕೃತಿಯ ವಿಸ್ಮಯವೊಂದು ಕ್ಯಾಮರಾ ದಲ್ಲಿ ಸೆರೆಯಾಗಿದ್ದು (Viral Video) ಹೆಚ್ಚಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಪ್ಪು ಚಿರತೆ ಮತ್ತು ಚುಕ್ಕೆ ಚಿರತೆ ಶಾಂತವಾಗಿ ಒಟ್ಟಿಗೆ ನೀರು ಕುಡಿಯುತ್ತಿರುವ ದೃಶ್ಯ ಕಣ್ಮನ ಸೆಳೆಯುವಂತಿದೆ ಇವುಗಳು ಯಾವುದೇ ಸಂಘರ್ಷವಿಲ್ಲದೆ ಅಕ್ಕಪಕ್ಕದಲ್ಲಿ ನಿಂತು ನೀರು ಕುಡಿಯುತ್ತಿವೆ.
ವಿಡಿಯೋ ನೋಡಿ:
Normal coloured leopard mother, with a melanistic cub and a normal cub. From Bhadra tiger reserve.
— Susanta Nanda IFS (Retd) (@susantananda3) February 12, 2026
Coat appears dark due to excessive production of melanin pigment. If both the parents carry the recessive melanism gene, each cub has a 25% probability of being melanistic. pic.twitter.com/A49pIfz6my
ಚಿರತೆಗಳು ಒಂಟಿಯಾಗಿ ಪರಭಕ್ಷಕಗಳಾಗಿವೆ... ಸಾಮಾನ್ಯವಾಗಿ ಸಂಯೋಗದ ಸಮಯದಲ್ಲಿ ಅಥವಾ ತಾಯಿ ಮರಿಗಳನ್ನು ಹೊರತುಪಡಿಸಿ ಜೋಡಿಯಾಗಿ ಕಾಣಿಸಿಕೊಳ್ಳುವುದು ಅಪರೂಪ. ತನ್ನ ಹತ್ತಿರ ಇತರ ಚಿರತೆಗಳು ಸುಳಿಯುವುದನ್ನು ಕೂಡ ಅವು ಇಷ್ಟಪಡುವುದಿಲ್ಲ. ಆದರೆ, ಭದ್ರಾದಲ್ಲಿ ಕಂಡುಬಂದ ಈ ದೃಶ್ಯ ವಿಚಿತ್ರವಾಗಿದೆ. ಎರಡು ಚಿರತೆಗಳು, ಅದರಲ್ಲೂ ಒಂದು ಕಪ್ಪು ಬಣ್ಣದ್ದು ಹಾಗೂ ಇನ್ನೊಂದು ಚುಕ್ಕೆ ಚಿರತೆ ಪ್ರೀತಿ, ಸಂಯಮದಿಂದ ನೀರು ಕುಡಿಯುತ್ತಿರುವುದು ಕಂಡು ವನ್ಯಜೀವಿ ಪ್ರಿಯರನ್ನೇ ಬೆರಗುಗೊಳಿಸಿದೆ.
Viral Video: ಟಿಕೆಟ್ ತಗೊಂಡಿಲ್ಲಂತಾ ಹೀಗ್ ನಡೆಸ್ಕೊಳ್ಳೋದಾ? ರೈಲ್ವೆ TTEಯ ದರ್ಪವನ್ನೊಮ್ಮೆ ನೋಡಿ
ಈ ಅಪರೂಪದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಅರವಿಂದ್ ಕಾರ್ತಿಕ್ ಶೇರ್ ಮಾಡಿ ದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡು ಚಿರತೆಗಳು ಪಕ್ಕಪಕ್ಕದಲ್ಲಿ ನಿಂತಿರುವುದು, ಅವುಗಳ ಪ್ರತಿಬಿಂಬಗಳು ನಿಶ್ಚಲ ನೀರಿನಾದ್ಯಂತ ಮಿನುಗುತ್ತಿ ರುವುದನ್ನು ತೋರಿಸುತ್ತದೆ, ಇದು ಬಹುತೇಕ ಸಿನಿಮೀಯವಾಗಿ ಕಾಣುವ ಒಂದು ಕ್ಷಣವಾಗಿದೆ.
ಇದು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ, ವೇಗವಾಗಿ ವೈರಲ್ ಆಗಿದ್ದು ಸಂರಕ್ಷಣಾವಾದಿಗಳು, ಪ್ರಕೃತಿ ಪ್ರಿಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು "ಭಾರತದ ಸೌಂದರ್ಯದ ಸಂಕೇತ" ಎಂದು ಬಣ್ಣಿಸಿದರು. ಮತ್ತೊಬ್ಬರು ದೇಶದ ಸಂರಕ್ಷಿತ ಕಾಡುಗಳಲ್ಲಿ ಇನ್ನೂ ಬಹಳಷ್ಟು ನೈಸರ್ಗಿಕ ಅದ್ಭುತಗಳು ಕಂಡು ಬರುತ್ತವೆ ಎಂದು ಬರೆದಿದ್ದಾರೆ.