Viral Video: ಶಿಕ್ಷಣಾಧಿಕಾರಿ ಮೇಲೆ ಬೆಲ್ಟ್ನಿಂದ ಹಲ್ಲೆ ನಡೆಸಿದ ಮುಖ್ಯಶಿಕ್ಷಕ; ವಿಡಿಯೊ ವೈರಲ್
ಕ್ಷೇತ್ರ ಶಿಕ್ಷಣಾಧಿಕಾರಿಯ ಮೇಲೆ ಖಾಸಗಿ ಶಾಲಾ ಶಿಕ್ಷಕ ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ್ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಲಾ ಮುಖ್ಯಶಿಕ್ಷಕ ಬಿರ್ಜೇಂದ್ರ ಕುಮಾರ್ ವರ್ಮಾ, ಅಧಿಕಾರಿ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಮೇಲೆ ಬೆಲ್ಟ್ನಿಂದ ದಾಳಿ ಮಾಡಿದ್ದಾರೆ.
ಘಟನೆಯ ದೃಶ್ಯ -
ಸೀತಾಪುರ್: ಉತ್ತರ ಪ್ರದೇಶದ (Uttar Pradesh) ಸೀತಾಪುರ್ನ (Sitapur) ಮುಖ್ಯಶಿಕ್ಷಕರೊಬ್ಬರು (Headmaster) ಶಿಕ್ಷಣಾಧಿಕಾರಿಗೆ ಕಚೇರಿಯಲ್ಲೇ ಬೆಲ್ಟ್ನಿಂದ ಹಲ್ಲೆ (Thrashed) ಮಾಡಿದ್ದಾರೆ. ಶಾಲಾ ಮುಖ್ಯಶಿಕ್ಷಕ ಬಿರ್ಜೇಂದ್ರ ಕುಮಾರ್ ವರ್ಮಾ, ಅಧಿಕಾರಿ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಮೇಲೆ ಬೆಲ್ಟ್ನಿಂದ ದಾಳಿ ಮಾಡಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಸಿಟಿವಿಯಲ್ಲಿ ದಾಳಿಯ ದೃಶ್ಯ
ಮಂಗಳವಾರ ಸಂಜೆ ನಡೆದ ಘಟನೆಯಲ್ಲಿ ಮಹಮೂದಾಬಾದ್ನ ನದ್ವಾ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವರ್ಮಾ, ತಮ್ಮ ವಿರುದ್ಧದ ದೂರಿನ ಬಗ್ಗೆ ಚರ್ಚಿಸಲು ಶಿಕ್ಷಣಾಧಿಕಾರಿಗೆ ಕಚೇರಿಗೆ ಬಂದಿದ್ದರು. ಚರ್ಚೆಯ ವೇಳೆ ಕೋಪಗೊಂಡ ವರ್ಮಾ, ಫೈಲ್ನ್ನು ಟೇಬಲ್ಗೆ ಎಸೆದು, ಬೆಲ್ಟ್ನಿಂದ ನಾಲ್ಕು ಬಾರಿ ಹೊಡೆದರು. ಸಿಬ್ಬಂದಿ ತಡೆಯಲು ಯತ್ನಿಸಿದರೂ ದಾಳಿ ನಡೆಸಿ ಅಧಿಕಾರಿಯ ಮೊಬೈಲ್ ಕಿತ್ತುಕೊಂಡು ಒಡೆದರು.
ದಾಳಿಗೆ ಕಾರಣ
ಮುಖ್ಯಶಿಕ್ಷಕ ವರ್ಮಾ ಶಾಲೆಯ ಸಹಾಯಕ ಶಿಕ್ಷಕಿಗೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪದಿಂದ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ರಾಜಕೀಯ ಗುಂಪುಗಳಲ್ಲಿ ಹಂಚಿಕೆಯಾದ ಕಾರಣ ಶಿಕ್ಷಕಿ ದೂರು ನೀಡಿದ್ದರು. ಈ ಬಗ್ಗೆ ವಿವರಣೆ ನೀಡಲು ಶಿಕ್ಷಣಾಧಿಕಾರಿಗೆ ಕಚೇರಿಗೆ ಮುಖ್ಯಶಿಕ್ಷಕ ಆಗಮಿಸಿದ್ದರು. ಈ ವೇಳೆ ಮುಂದೆ ಇಂತಹ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಿದ್ದು ಮುಖ್ಯಶಿಕ್ಷಕನ ಕೋಪಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
In Sitapur, UP, headmaster Brijendra Kumar Verma assaulted BSA Akhilesh Pratap Singh with a belt after a heated argument over a complaint. Staff intervened to rescue the BSA.
— Ghar Ke Kalesh (@gharkekalesh) September 23, 2025
pic.twitter.com/SNIgXmx6Pp
ಪೊಲೀಸ್ ಕ್ರಮ
ಶಿಕ್ಷಣಾಧಿಕಾರಿ ಅಖಿಲೇಶ್ ಪ್ರತಾಪ್ ಸಿಂಗ್ ಕೋಟ್ವಾಲಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಖ್ಯಶಿಕ್ಷಕ ವರ್ಮಾರನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸೀತಾಪುರ್ ಪೊಲೀಸರು, “ದೂರಿನ ಆಧಾರದಲ್ಲಿ ಕೇಸ್ ದಾಖಲಾಗಿದೆ. ಆರೋಪಿ ಕಸ್ಟಡಿಯಲ್ಲಿದ್ದಾನೆ” ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ; Viral News: ಜೋರಾಗಿ ಆಕಳಿಸಿದ್ದರಿಂದ ಬೆನ್ನು ಮೂಳೆ ಮುರಿದು ಪಾರ್ಶ್ವವಾಯುವಿಗೆ ತುತ್ತಾದ ಮಹಿಳೆ
ಶಿಕ್ಷಣ ಇಲಾಖೆಯ ಕ್ರಮ
ಶಿಕ್ಷಣ ಇಲಾಖೆ ಮುಖ್ಯಶಿಕ್ಷಕ ವರ್ಮಾರನ್ನು ತಕ್ಷಣ ಅಮಾನತುಗೊಳಿಸಿದೆ. ಶಿಕ್ಷಣಾಧಿಕಾರಿಗೆ ಅಖಿಲೇಶ್, ವರ್ಮಾರ ಸೇವೆಯನ್ನು ಕೊನೆಗೊಳಿಸಲು ಶಿಫಾರಸು ಮಾಡಿದ್ದಾರೆ. ಈ ಘಟನೆ ಶಿಕ್ಷಣ ಇಲಾಖೆಯಲ್ಲಿ ಶಿಸ್ತಿನ ಬಗ್ಗೆ ಚರ್ಚೆಗೆ ಕಾರಣವಾಗಿದೆ.