ಅಭಿಮಾನಿ ಎಸೆದ ಹೂವನ್ನು ಬಾಂಬ್ ಎಂದು ತಿಳಿದು ಸೈಕಲ್ ಬಿಟ್ಟು ಓಡಿದ ದಳಪತಿ ವಿಜಯ್; ವಿಡಿಯೋ ನೋಡಿ
TVK Vijay: ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅವರು ತಮಿಳುನಾಡಿನಾದ್ಯಂತ ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಏ. 23 ರಂದು ನಡೆಯಲಿರುವ ಚುನಾವಣೆಗೆ ಟಿವಿಕೆ ಸಜ್ಜಾಗಿದ್ದು, ಎಲ್ಲೆಡೆ ಯಾರ್ಲಿಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಾಚಾರ ಕಾರ್ಯಕ್ರಮದಲ್ಲಿ ವಿಜಯ್ ಭಾಗವಹಿಸಿದ್ದರು.
ಸಂಗ್ರಹ ಚಿತ್ರ -
ಚೆನ್ನೈ: ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ (TVK Vijay) ಅವರು ತಮಿಳುನಾಡಿನಾದ್ಯಂತ ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಏ. 23 ರಂದು ನಡೆಯಲಿರುವ ಚುನಾವಣೆಗೆ ಟಿವಿಕೆ ಸಜ್ಜಾಗಿದ್ದು, ಎಲ್ಲೆಡೆ ಯಾರ್ಲಿಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಾಚಾರ ಕಾರ್ಯಕ್ರಮದಲ್ಲಿ ವಿಜಯ್ ಭಾಗವಹಿಸಿದ್ದರು. ಈ ವೇಳೆ ಅವರು ಹೈವೇನಲ್ಲಿ ಸೈಕಲ್ ರೈಡ್ ಮಾಡಿದ್ದಾರೆ. . ಈ ವೇಳೆ ಅಭಿಮಾನಿ (Viral Video) ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ಭಾವಿಸಿ ದಳಪತಿ ವಿಜಯ್ ಅವರು ಗಾಬರಿಗೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೈವೇನಲ್ಲಿ ಸೈಕಲ್ ಓಡಿಸುತ್ತಿರುವಾಗ ವಿಜಯ್ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಲು ಪ್ರಯತ್ನ ಪಟ್ಟಿದ್ದರು. ಅವರೆಲ್ಲರಿಂದ ವಿಜಯ್ ತಪ್ಪಿಸಿಕೊಂಡು ಮುಂದೆ ಸಾಗಿದ್ದಾರೆ. ಈ ವೇಳೆ ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ತೆಗೆದುಕೊಂಡುಬಂದು ಎಸೆಯುವ ಪ್ರಯತ್ನ ಮಾಡಿದ್ದಾನೆ. ಇದನ್ನು ನೋಡಿ ದಳಪತಿ ವಿಜಯ್ ಗಾಬರಿಗೊಂಡಿದ್ದಾರೆ. ಅದು ಬಾಂಬ್ ಎಂದು ಭಾವಿಸಿ ಸೈಕಲ್ ಬಿಟ್ಟು ಓಡಿ ನೇರವಾಗಿ ಕಾರನ್ನು ಏರಿದ್ದಾರೆ. ಕೆಲ ಕಾಲ ಗೊಂದಲ ಉಂಟಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಜಯ್ ಆ ವಸ್ತುವನ್ನು ಬೆದರಿಕೆ ಎಂದು ತಪ್ಪಾಗಿ ಭಾವಿಸಿದ್ದಾರೆಯೇ ಎಂದು ಹಲವರು ಪ್ರಶ್ನಿಸಿದರು. "ವಿಜಯ್ ಅದನ್ನು ಬಾಂಬ್ ಎಂದು ಭಾವಿಸಿ ಓಡಿಹೋದರೆ? ಎಂದು ಹೇಳಲಾಗುತ್ತಿದೆ.
Bomb anenu karuthi annan oodi 🥲#ThalapathyVijay #TVKVijay #Vijay#Thalapathy pic.twitter.com/WQQnryEHnn
— Cinema Pursuit (@CinemaPursuit) April 12, 2026
ಕಳೆದ ಶುಕ್ರವಾರವಷ್ಟೇ ಶಿವಗಂಗಾದಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ನೇತೃತ್ವದಲ್ಲಿ ನಡೆದ ರೋಡ್ ಶೋ ವೇಳೆ ಬೈಕ್ ಸವಾರನೊಬ್ಬ ಗಾಯಗೊಂಡಿದ್ದ. ಚುನಾವಣಾ ಪ್ರಚಾರದ ನಡುವೆಯೇ ಮತ್ತೊಂದು ಘಟನೆ ನಡೆದಿದೆ. ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಜಯ್ ಅವರ ಬೆಂಗಾವಲು ಪಡೆಯ ಭಾಗವೆಂದು ನಂಬಲಾದ ವ್ಯಾನ್ ಹೆದ್ದಾರಿಯಲ್ಲಿ ಚಲಿಸುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ, ಆದರೆ ಉತ್ಸಾಹಭರಿತ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರೆದಿದ್ದಾರೆ. ಬೆಂಬಲಿಗರು ಅಪಾಯಕಾರಿಯಾಗಿ ಹತ್ತಿರದಿಂದ ಸವಾರಿ ಮಾಡುತ್ತಾ, ಹರ್ಷೋದ್ಗಾರ ಮಾಡುತ್ತಾ ಮತ್ತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
Thalapathy Vijay Net Worth: 'ದಳಪತಿ' ವಿಜಯ್ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ; ಪತ್ನಿ ಬಳಿ ಎಷ್ಟಿದೆ?
ವೀಡಿಯೊದಲ್ಲಿ ಚಲಿಸುವ ವಾಹನದ ಹಿಂದೆ ಯುವಕರು ಬೈಕ್ನಲ್ಲಿ ಸಂಚರಿಸುತ್ತಿರುವುದು ಕಾಣಿಸುತ್ತದೆ. ಇದರಲ್ಲಿ ಒಬ್ಬ ಸವಾರ ಸಮತೋಲನ ಕಳೆದುಕೊಂಡು ಅಪಘಾತಕ್ಕೀಡಾಗುವ ಮೊದಲು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವರದಿಯಾಗಿದೆ. ಘಟನೆಯ ಹೊರತಾಗಿಯೂ, ಬೆಂಗಾವಲು ಪಡೆ ಚಲಿಸುತ್ತಲೇ ಇತ್ತು, ಆದರೆ ಇತರ ಬೈಕ್ ಸವಾರರು ವಾಹನವನ್ನು ಹಿಂಬಾಲಿಸಿದ್ದಾರೆ.