Roopa Gururaj Column: ಮನಸ್ಸು ಪ್ರಶಾಂತವಾಗಿದ್ದಾಗ ಸಾಧನೆ ಸಾಧ್ಯ
ಬುದ್ಧನ ಸಾವಿನ ನಂತರವಷ್ಟೇ ಆನಂದನಿಗೆ ಸ್ವಂತದ ಸಾಧನೆಗಾಗಿ ಸಮಯ ಸಿಕ್ಕಿತು. ಅದೇ ಸಮಯ ದಲ್ಲಿ ಬುದ್ಧನ ಇನ್ನೊಬ್ಬ ಪ್ರಧಾನ ಶಿಷ್ಯ ಅರ್ಹತ ಮಹಾಕಶ್ಯಪ, ಪ್ರಪ್ರಥಮ ಬೌದ್ಧ ಸಮಾವೇಶವನ್ನು ಆಯೋಜಿಸುತ್ತಿದ್ದ. ಈ ಸಮಾವೇಶದಲ್ಲಿ ಬುದ್ಧನ ಎಲ್ಲ ಜ್ಞಾನೋದಯ ಹೊಂದಿದ ಶಿಷ್ಯರು ಮತ್ತು ಬೌದ್ಧ ವಿದ್ವಾಂಸರು ಸೇರಿಕೊಂಡು ಬುದ್ಧನ ಎಲ್ಲ ಜ್ಞಾನವನ್ನು ಕ್ರೂಢೀಕರಿಸುವ ಪ್ರಯತ್ನ ಮಾಡು ವವರಿದ್ದರು.


ಒಂದೊಳ್ಳೆ ಮಾತು
rgururaj628@gmail.com
ಆನಂದ, ಬುದ್ಧನ ಬದುಕಿನ ಕೊನೆಯ ಇಪ್ಪತ್ತು ವರ್ಷಗಳ ಪ್ರಧಾನ ಶಿಷ್ಯ, ಸಹಾಯಕನಾಗಿದ್ದ. ಬುದ್ಧನ ಪ್ರಮುಖ ಅವಶ್ಯಕತೆಗಳನ್ನ ನೋಡಿಕೊಳ್ಳುವುದರ ಜೊತೆಗೆ ಆನಂದನ ಇತರ ಕೆಲಸ ಗಳೆಂದರೆ, ಬೇರೆ ಬೇರೆ ಸಭೆಗಳಲ್ಲಿ ಬುದ್ಧನನ್ನು ಪ್ರತಿನಿಧಿಸುವುದು, ಬುದ್ಧನ ಮಾತುಗಳನ್ನ ಕಂಠಸ್ಥ ಮಾಡಿಕೊಂಡು ಅವನ್ನು ಬುದ್ಧನ ಅನುಪಸ್ಥಿತಿಯಲ್ಲಿ ಇತರರ ಎದುರಿಗೆ ಪ್ರಸ್ತುತ ಪಡಿಸುವುದು, ಬುದ್ಧನ ಅನುಯಾಗಿಯಾಗಿ ಪ್ರವಾಸ ಮಾಡುತ್ತ ಬುದ್ಧನ ತತ್ವಗಳ ಪ್ರಚಾರ ಮಾಡುವುದು. ಆನಂದ ಈ ಕೆಲಸಗಳಲ್ಲಿ ಎಷ್ಟು ಅವಿಶ್ರಾಂತವಾಗಿ ತೊಡಗಿಸಿಕೊಳ್ಳುತ್ತಿದ್ದನೆಂದರೆ, ಸ್ವಂತದ ಧ್ಯಾನ ಮುಂತಾ ದ ಆಚರಣೆಗಳಿಗಾಗಿ ಅವನ ಬಳಿ ಸಮಯವೇ ಉಳಿಯುತ್ತಿರಲಿಲ್ಲ. ಅಧ್ಯಾತ್ಮಿಕ ಆಚರಣೆ ಗಳಲ್ಲಿ ಅಷ್ಟು ತೊಡಗಿಸಿ ಕೊಂಡಿರಲಿಲ್ಲವಾದರೂ ಆನಂದ, ಬುದ್ಧನ ಎಲ್ಲ ಶಿಷ್ಯರಲ್ಲಿ ಅತ್ಯಂತ ಕರುಣಾ ಮಯಿ ಎಂದು ಹೆಸರು ಮಾಡಿದ್ದ.
ತನ್ನ ಬಿಡುವಿನ ಸಮಯವನ್ನು ಆನಂದ, ಜನರಿಗೆ ಸಹಾಯ ಮಾಡುತ್ತ ಕಳೆಯುತ್ತಿದ್ದನಾದ್ದರಿಂದ ಅವನ ಬಳಿ ಸ್ವಂತದ ಸಾಧನೆಗಾಗಿ ಸಮಯವೇ ಇರುತ್ತಿರಲಿಲ್ಲ. ಬುದ್ಧ ತೀರಿಕೊಳ್ಳುವ ಸಮಯ ಹತ್ತಿರವಾಗುವವರೆಗೂ ಆನಂದ ಇನ್ನೂ ಜ್ಞಾನೋದಯವನ್ನು ಸಾಧಿಸಿಕೊಂಡಿರಲಿಲ್ಲ. ಬುದ್ಧನ ಸಾವು ಸಂಭವಿಸಿದಾಗ ಅವನ ಎಲ್ಲ ಪ್ರಧಾನ ಶಿಷ್ಯರು ಆ ಸಾವನ್ನು ಪ್ರಶಾಂತತೆಯಿಂದ ಸ್ವೀಕರಿಸಿದ ರಾದರೆ ಆನಂದ ಮಾತ್ರ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ.
ಬುದ್ಧನ ಸಾವಿನ ನಂತರವಷ್ಟೇ ಆನಂದನಿಗೆ ಸ್ವಂತದ ಸಾಧನೆಗಾಗಿ ಸಮಯ ಸಿಕ್ಕಿತು. ಅದೇ ಸಮಯದಲ್ಲಿ ಬುದ್ಧನ ಇನ್ನೊಬ್ಬ ಪ್ರಧಾನ ಶಿಷ್ಯ ಅರ್ಹತ ಮಹಾಕಶ್ಯಪ, ಪ್ರಪ್ರಥಮ ಬೌದ್ಧ ಸಮಾವೇಶವನ್ನು ಆಯೋಜಿಸುತ್ತಿದ್ದ. ಈ ಸಮಾವೇಶದಲ್ಲಿ ಬುದ್ಧನ ಎಲ್ಲ ಜ್ಞಾನೋದಯ ಹೊಂದಿದ ಶಿಷ್ಯರು ಮತ್ತು ಬೌದ್ಧ ವಿದ್ವಾಂಸರು ಸೇರಿಕೊಂಡು ಬುದ್ಧನ ಎಲ್ಲ ಜ್ಞಾನವನ್ನು ಕ್ರೂಢೀಕರಿಸುವ ಪ್ರಯತ್ನ ಮಾಡುವವರಿದ್ದರು.
ಇದನ್ನೂ ಓದಿ: Roopa Gururaj Column: ಜನರನ್ನು ಮೋಸಗೊಳಿಸುವ ಸುಲಭ ಮಾರ್ಗ
ಈ ಸಮಾವೇಶಕ್ಕೂ ಮೊದಲೇ ತಾನು ಜ್ಞಾನೋದಯವನ್ನು ಸಾಧಿಸಿಕೊಳ್ಳಬೇಕೆನ್ನುವುದು ಆನಂದನ ತೀವ್ರ ಬಯಕೆಯಾಗಿತ್ತು. ಆ ಜ್ಞಾನೋದಯದ ಸಲುವಾಗಿ ಆನಂದ ಸತತ ಧ್ಯಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಸಮಾವೇಶದ ಸಮಯ ಸಮೀಪಿಸುತ್ತಿದ್ದರೂ ಆನಂದ ಇನ್ನೂ ಜ್ಞಾನೋದಯದ ಹತ್ತಿರಕ್ಕೂ ಬಂದಿರಲಿಲ್ಲ. ಸಮಾವೇಶದ ಹಿಂದಿನ ರಾತ್ರಿಯಂತೂ ಅತ್ಯಂತ ಕಠಿಣ ಸಾಧನೆಗೆ ಮುಂದಾದ ಆನಂದ, ತೀವ್ರ ಧ್ಯಾನದಲ್ಲಿ ಮಗ್ನನಾದ. ಆದರೂ ಯಾವ ಪ್ರಯೋಜನವಾಗಲಿಲ್ಲ, ಆನಂದ ಜ್ಞಾನೋದಯದಿಂದ ಇನ್ನೂ ಬಹಳ ದೂರವೇ ಇದ್ದ.
ಇಷ್ಟು ಗಡಿಬಿಡಿ ಮಾಡಿ ಉಪಯೋಗವಿಲ್ಲ, ಇನ್ನು ತಾನು ವಿಶ್ರಾಂತಿ ಮಾಡಬೇಕು, ಸಮಾವೇಶ ಮುಗಿದ ಬಳಿಕ ಮತ್ತೆ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿ ಆನಂದ ವಿಶ್ರಾಂತಿಗೆ ಜಾರಿದ. ವಿಶ್ರಾಂತಿ ಮಾಡಬೇಕೆಂದು ನಿರ್ಧರಿಸಿ ಆನಂದ ತನ್ನ ಹಾಸಿಗೆಗೆ ತಲೆ ಹಚ್ಚಿದ ಕ್ಷಣದಲ್ಲಿ ಯೇ ಅವನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ.
ಶಿಷ್ಯ ಆನಂದನ ಈ ಕಥೆ ನಮಗೂ ಕೂಡ ಜೀವನದಲ್ಲಿ ದೊಡ್ಡ ಪ್ರೇರಣೆ. ಅತಿಯಾದ ಒತ್ತಡದಲ್ಲಿ ಇದ್ದಾಗ ಮನಸ್ಸು ಒಂದು ರೀತಿ ಮಂಕಾಗುತ್ತದೆ. ಆ ಒತ್ತಡದ ಸ್ಥಿತಿಯಲ್ಲಿ ನಮ್ಮೊಳಗೆ ಯಾವುದೇ ಕ್ರಿಯಾತ್ಮಕ ಯೋಚನೆಗಳು ಮೂಡುವುದಿಲ್ಲ.
ಮನಸ್ಸು ನಿರಾಳವಾಗಿದ್ದಾಗ ನಾವು ನೂರು ರೀತಿಯ ಹೊಸ ಯೋಚನೆಗಳನ್ನು ಮಾಡಬಹುದು. ಕೆಲವೊಮ್ಮೆ ಕೆಲಸದ ಒತ್ತಡ ಅತಿಯಾದಾಗ ಆಯಾಸವಾದಂತಾಗಿ ಯಾವ ಕೆಲಸವನ್ನು ಮಾಡದೆ ತೂಕಡಿಸುತ್ತಾ ಕುಳಿತುಕೊಂಡು ಬಿಡುತ್ತೇವೆ. ಅದರ ಅರ್ಥ ನಮಗೆ ಜವಾಬ್ದಾರಿ ಇಲ್ಲ ಎಲ್ಲವನ್ನೂ ಮರೆತು ಮಲಗಿದೆವು ಎಂದಲ್ಲ. ಅತಿಯಾದ ಒತ್ತಡ ಮನಸ್ಸಿಗೆ ಎಂತಹದೇ ಪರಿಸ್ಥಿತಿಯಲ್ಲೂ ನಿರಾಳತೆಯನ್ನು ಕಾಯ್ದುಕೊಂಡಾಗ, ಸಮಾಧಾನ ಸ್ಥಿತಿಯಲ್ಲಿದ್ದಾಗ ಒಂದೊಂದಾಗಿ ಕೆಲಸವನ್ನು ಮಾಡುವ ಕ್ಷಮತೆ ನಮ್ಮಲ್ಲಿ ಮೂಡುತ್ತದೆ.
ಕೆಲವೊಮ್ಮೆ ಮನೆಯಲ್ಲಿ ಮದುವೆ ಕಾರ್ಯ ಮತ್ತಿತರ ದೊಡ್ಡ ಕೆಲಸಗಳು ಇದ್ದಾಗ ಮನೆಯ ಹಿರಿಯರು ಆತಂಕದಲ್ಲೇ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಈ ರೀತಿ ಆದಾಗ ಆ ಕೆಲಸ ಬಿಟ್ಟು ಎಲ್ಲರೂ ಇವರನ್ನು ನೋಡಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಎಲ್ಲಕ್ಕಿಂತ ಮೊದಲು ಸಮಾಧಾನ ವಾಗಿರಬೇಕು.