Vishweshwar Bhat Column: ಆ ದೇಶವೇಕೆ ಹಾಗಿದೆ ?
ಒಂದೊಮ್ಮೆ ಹಾಗೆ ಹೇಳದಿದ್ದಿದ್ದರೆ, ಸಿಂಗಾಪುರ ಈಗಿನಂತೆ ಇರುತ್ತಿರಲಿಲ್ಲ ಎಂಬುದನ್ನು ಮರೆಯ ಬಾರದು" ಎಂದು ಅವರು ಹೇಳಿದ್ದರು. ಅದು ನಿಜವೂ ಆಗಿತ್ತು. “ಸಾರ್ವಜನಿಕ ಸ್ಥಳಗಳಲ್ಲಿ ಎಂಜಲು ಉಗುಳಬಾರದು, ಬಬಲ್ಗಮ್ ಬಿಸಾಡಬಾರದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಂದರವಾಗಿಟ್ಟು ಕೊಳ್ಳಬೇಕು, ಮನೆ ಮುಂದೆ ಉದ್ಯಾನ ಬೆಳೆಸಿ, ಮನೆಗೆ ಕನಿಷ್ಠ ಹತ್ತು ವರ್ಷಗಳಿಗೊಮ್ಮೆ ಸುಣ್ಣ-ಬಣ್ಣ ಬಳಿಯಿರಿ.


ಸಂಪಾದಕರ ಸದ್ಯಶೋಧನೆ
ಸಿಂಗಾಪುರದ ಪ್ರಥಮ ಪ್ರಧಾನಿಯಾಗಿದ್ದ ಲೀ ಕುಆನ್ ಯು ಬಗ್ಗೆ ಒಂದು ಆಪಾದನೆ ಇತ್ತು- ಅವರು ತಮ್ಮ ದೇಶದ ಜನರ ಖಾಸಗಿ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಾರೆಂದು. ಅದು ನಿಜವೂ ಆಗಿತ್ತು. ಒಮ್ಮೆ ಈ ಬಗ್ಗೆ ಪತ್ರಕರ್ತರು ಅವರನ್ನು ಪ್ರಶ್ನಿಸಿದಾಗ ಯು ಸ್ವಲ್ಪವೂ ಬೇಸರಿಸಿಕೊಳ್ಳದೆ, “ಯಾವುದು ಗೊತ್ತಿರುವುದಿಲ್ಲವೋ ಅದನ್ನು ಹೇಳಲೇಬೇಕಾಗುತ್ತದೆ. ಎಲ್ಲರಿಗೂ, ಎಲ್ಲವೂ ಗೊತ್ತಿರು ವುದಿಲ್ಲ. ಗೊತ್ತಿದೆ ಎಂದು ಭಾವಿಸಲೂಬಾರದು.
ಈ ಕಾರಣದಿಂದ ಕೆಲವು ಪ್ರಮುಖವಲ್ಲದ ವಿಷಯಗಳನ್ನು ಹೇಳಲೇಬೇಕಾಗುತ್ತದೆ. ಆಗ ಜನರಿಗೆ ಕಿರಿಕಿರಿಯಾಗುತ್ತದೆ. ಪ್ರಧಾನಿ ಹೀಗೆ ಮಾತಾಡಿದ್ದು ಸರಿಯಾ ಎಂದು ಚರ್ಚಿಸಲು ಆರಂಭಿಸುತ್ತಾರೆ. ನಾನು ಇಂಥ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ವಿಷಯವನ್ನು ಮನದಟ್ಟು ಮಾಡಿಕೊಡುವುದಷ್ಟೇ ಮುಖ್ಯ" ಎಂದು ಪ್ರತಿಕ್ರಿಯಿಸಿದ್ದರು.
ಯು ಅವರಿಗೆ ಈ ವಿಷಯ ಗೊತ್ತಿಲ್ಲ ಎಂದಲ್ಲ, ಗೊತ್ತಿತ್ತು. ಆದರೆ ಯಾರಾದರೂ ಒಬ್ಬರು ಹೇಳ ದಿದ್ದರೆ ಅದು ಜನರಿಗೆ ಗೊತ್ತಾಗುವುದಿಲ್ಲ ಎಂಬುದು ಇನ್ನೂ ಚೆನ್ನಾಗಿ ಗೊತ್ತಿತ್ತು. “ನಿಮಗೆ ಗೊತ್ತಿರಲಿ, ನಾನು ಸಣ್ಣ ಸಣ್ಣ ವಿಷಯಗಳನ್ನು ಹೇಳುತ್ತೇನೆ, ಅದಕ್ಕೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ.
ಇದನ್ನೂ ಓದಿ: Vishweshwar Bhat Column: ಔತಣಕೂಟದಲ್ಲಿ ಜೈಲ್ ಸಿಂಗ್
ಒಂದೊಮ್ಮೆ ಹಾಗೆ ಹೇಳದಿದ್ದಿದ್ದರೆ, ಸಿಂಗಾಪುರ ಈಗಿನಂತೆ ಇರುತ್ತಿರಲಿಲ್ಲ ಎಂಬುದನ್ನು ಮರೆಯ ಬಾರದು" ಎಂದು ಅವರು ಹೇಳಿದ್ದರು. ಅದು ನಿಜವೂ ಆಗಿತ್ತು. “ಸಾರ್ವಜನಿಕ ಸ್ಥಳಗಳಲ್ಲಿ ಎಂಜಲು ಉಗುಳಬಾರದು, ಬಬಲ್ಗಮ್ ಬಿಸಾಡಬಾರದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಂದರ ವಾಗಿಟ್ಟುಕೊಳ್ಳಬೇಕು, ಮನೆ ಮುಂದೆ ಉದ್ಯಾನ ಬೆಳೆಸಿ, ಮನೆಗೆ ಕನಿಷ್ಠ ಹತ್ತು ವರ್ಷ ಗಳಿಗೊಮ್ಮೆ ಸುಣ್ಣ-ಬಣ್ಣ ಬಳಿಯಿರಿ.
ದೇಶವನ್ನು ಸುಂದರವಾಗಿಟ್ಟುಕೊಳ್ಳುವ ಮುನ್ನ ನಿಮ್ಮ ಮನೆ ಮತ್ತು ಬೀದಿಯನ್ನು ಸ್ವಚ್ಛ-ಸುಂದರವಾಗಿ ಇಟ್ಟುಕೊಳ್ಳಿ" ಎಂದು ಅವರು ಆಗಾಗ ಕರೆ ಕೊಡುತ್ತಿದ್ದರು. ಅವರ ಇಂಥ ಮಾತು ಕೇಳಿ, ಯು ಅವರು ಪ್ರಮುಖವಲ್ಲದ ವಿಷಯಗಳಲ್ಲಿ ಮೂಗು ತೂರಿಸುತ್ತಾರೆ, ಖಾಸಗಿ ವಿಷಯ ಗಳಲ್ಲಿ ಮಧ್ಯ ಪ್ರವೇಶಿಸುತ್ತಾರೆ ಎಂಬ ಅಭಿಪ್ರಾಯ ಮೂಡಿತ್ತು. ಆದರೆ ಯು ತಾವು ಹೇಳಬೇಕಾದು ದನ್ನು ಹೇಳದೇ ಬಿಡುತ್ತಿರಲಿಲ್ಲ.
ಅದಕ್ಕಿಂತ ಮುಖ್ಯವಾಗಿ ಅಂಥ ‘ಉಪದೇಶ’ ನೀಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದ್ದರು. ಈ ವಿಷಯದಲ್ಲಿ ಪ್ರಧಾನಿಯಾಗಿ ತಾವು ಹಾಗೆ ಹೇಳದಿದ್ದರೆ, ಮತ್ಯಾರು ಹೇಳುತ್ತಾರೆ ಎಂದು ಕೇಳುತ್ತಿದ್ದ ಅವರು, ಪ್ರಧಾನಿಯಾದವರು ಅಂತಾರಾಷ್ಟ್ರೀಯ ವಿಷಯಗಳನ್ನು ಮಾತ್ರ ಮಾತಾಡಬಾರದು, ತಮ್ಮ ದೇಶದ ಜನ ತಮ್ಮ ಮನೆ-ಪರಿಸರವನ್ನು ಹೇಗಿಟ್ಟುಕೊಳ್ಳಬೇಕು ಎಂಬುದನ್ನೂ ತಿಳಿಸಬೇಕು, ಈ ವಿಷಯದಲ್ಲಿ ನಾನು ತುಸು ಜಿಗುಟ ಎನ್ನುತ್ತಿದ್ದರು.
ಈ ವಿಷಯದಲ್ಲಿನ ಅವರ ಅಭಿಪ್ರಾಯವನ್ನು ಅವರ ಮಾತಿನಲ್ಲೇ ಕೇಳೋಣ: If we had not intervened on very personal matters- who your neighbour is, how you live, the noise you make, how you spit, or what language you use. We decide what is right. Never mind what the people think ಸಿಂಗಾಪುರದ ಜನತೆ ವಿದೇಶಿಯರ ಜತೆ ಹೇಗೆ ಮಾತಾಡಬೇಕು, ಭಾಷೆಯನ್ನು ಎಷ್ಟು ಸೌಜನ್ಯಯುತವಾಗಿ ಬಳಸಬೇಕು, ಹೆಚ್ಚು ಭಾಷೆಗಳನ್ನು ಕಲಿಯುವುದರ ಪ್ರಯೋಜನವೇನು ಎನ್ನುವುದರ ಬಗ್ಗೆ ಪ್ರಧಾನಿಯಾಗಿ ಯು ಮಾತಾಡುತ್ತಿದ್ದರು. ಯು ಅವರಂಥ ಪ್ರಧಾನಿ ಸಿಂಗಾಪುರ ಕ್ಕಲ್ಲ,
ಭಾರತದಂಥ ದೇಶದಲ್ಲಿ ಇರಬೇಕಾಗಿತ್ತು ಎಂದು ಎಷ್ಟೋ ಸಲ ಅನಿಸಿದ್ದಿದೆ. ನಮ್ಮ ದೇಶದಲ್ಲಿ ಜನ ಹೇಗೇ ಇರಲಿ, ಅವರೇನೇ ಮಾಡಲಿ, ಅವರನ್ನು ತಿದ್ದುವ ಕೆಲಸಕ್ಕೆ ಪ್ರಧಾನಿಗಳಾಗಲಿ, ಮುಖ್ಯಮಂತ್ರಿ ಯಾಗಲಿ ಯಾರೂ ಹೋಗುವುದಿಲ್ಲ. ಈ ಕಾರಣದಿಂದ ನಮ್ಮ ದೇಶ ಹೀಗಿದೆ. ಆದರೆ ಈ ವಿಷಯ ದಲ್ಲಿ ಕೆಲವೊಮ್ಮೆ ಸಾರ್ವಜನಿಕ ನಿಂದನೆಗೆ ಗುರಿಯಾದರೂ ಯು ಮನಸ್ಸಿನ ಮಾತನ್ನು ಹೇಳದೇ ಬಿಡುತ್ತಿರಲಿಲ್ಲ. ಈ ಕಾರಣದಿಂದ ಆ ದೇಶ ಹಾಗಿದೆ.