ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ashok Nayak

Senior Sub Editor

ashoknayak@vishwavani.news

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
Chikkaballapur News: ವಿದ್ಯಾರ್ಥಿ ಸಮೂಹ ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ

ಒಂದು ವರ್ಷದ ಹಿಂದೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಕೊಠಡಿಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅದರಂತೆ ವಿವೇಕ ಯೋಜನೆಯಡಿ ಐದು ಶಾಲಾ ಕೊಠಡಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬರಲಾಯಿತು.

ಅಮಾವಾಸ್ಯೆಯ ಅಂಗವಾಗಿ ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗ ಸಮರ್ಪಣೆ

ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗ ಸಮರ್ಪಣೆ

ಮಹಾ ಮಂಗಳಾರತಿ ನಂತರ ಓಂಶಕ್ತಿ ದೇವತೆಯ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕೃತ ವಾದ ರಥದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರುವಣಿಗೆಯಲ್ಲಿ ನೂರಾರು ಮಂದಿ ಮಹಿಳೆಯರು ಅಂಬಲಿ ಕಲಶೋತ್ಸವದಲ್ಲಿ ಪಾಲ್ಗೊಂಡಿ ದ್ದರು. ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಅಗ್ನಿಕುಂಡವನ್ನು  ಭಕ್ತಗಣ ತುಳಿದು ಭಕ್ತಿಯನ್ನು ಸಮರ್ಪಿಸಿತು.

Chikkaballapur News: ಸಿಇಒ ಡಾ.ನವೀನ್ ಭಟ್.ವೈ ರಿಂದ ಜೆಜೆಎಂ ಕಾಮಗಾರಿ ವೀಕ್ಷಣೆ

ಸಿಇಒ ಡಾ.ನವೀನ್ ಭಟ್.ವೈ ಅವರಿಂದ ಜೆಜೆಎಂ ಕಾಮಗಾರಿ ವೀಕ್ಷಣೆ

ಪ್ರತಿ ಮನೆಗೂ ನಳ ಸಂಪರ್ಕ ಕಲ್ಪಿಸಬೇಕು ಹಾಗೂ ಕಾಮಗಾರಿ ಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಪೈಪ್ ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದಿದ್ದು, ಆ ಕಾಮಗಾರಿ ಪೂರ್ಣಗೊಂಡ ಬಳಿಕ ಯಥಾಸ್ಥಿತಿ ಯಲ್ಲಿ ರಸ್ತೆಗಳನ್ನು ಕಾಂಕ್ರಿಟ್ ಹಾಕಿ ಮುಚ್ಚಬೇಕು. ಪೈಪ್ ಲೈನ್ ಹಾಗೂ ನಲ್ಲಿಗಳು ಹಾಳಾದಲ್ಲಿ ತಕ್ಷಣವೇ ದುರಸ್ತಿ ಕೈಗೊಳ್ಳಬೇಕು

Chikkaballapur News: ಯುವಜನರ ಭವಿಷ್ಯಕ್ಕಾಗಿ ಯುವನಿಧಿ ಯೋಜನೆ ಜಾರಿ : ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್ ರಮೇಶ್

ಯುವಜನರ ಭವಿಷ್ಯಕ್ಕಾಗಿ ಯುವನಿಧಿ ಯೋಜನೆ ಜಾರಿ

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಯಲುವಳ್ಳಿ ಎನ್ ರಮೇಶ್ ಮತ್ತು ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ ನವೀನ್ ಭಟ್ ರವರು ಯುವನಿಧಿ ಪೋಸ್ಟರ್ ಬಿಡುಗಡೆ ಮಾಡಿ ಯುವಜನರ ಭವಿಷ್ಯಕ್ಕಾಗಿ ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ನು ಜಿಲ್ಲೆಯ ಅರ್ಹ ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಆರೋಪಿಗಳಿಂದ 41 ಗ್ರಾಂ.ಬಂಗಾರದ ಒಡವೆಗಳು ಹಾಗೂ ನಗದು ಹಣ ಅಮಾನತ್ತು

ಮೂವರು ಕಳ್ಳರನ್ನು ಅರೆಸ್ಟ್ ಮಾಡಿದ ನಗರ ಠಾಣೆಯ ಪೊಲೀಸರು

ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸಿ ಅವರಿಂದ ನಗದು ಹಣ ಹಾಗೂ ಒಡವೆಗಳನ್ನು ವಶಕ್ಕೆ ಪಡೆಯುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಜಗನ್ ಬಿನ್ ಸಂದ್ಯಾರಾಜನ್, ತಮಿಳುನಾಡು,ಸಾಧಿಕ್ ಪಾಷ,ಶಾಂತಿ ನಗರ ಹಾಗೂ ಟಿಪ್ಪು ಬೇಗ್ ಅಗ್ರಹಾರ ಎಂದು ಗುರುತಿಸಲಾಗಿದೆ.

ಬೆಂಗಳೂರಿಗರೇ ಜುಲೈ 26ರಂದು ಕೃಷ್ಣ ಸಂಗೀತ ಸಂಜೆಯನ್ನು ಅನುಭವಿಸಲು ಸಿದ್ಧರಾಗಿ ..!

ಜು.26ರಂದು ಕೃಷ್ಣ ಸಂಗೀತ ಸಂಜೆಯನ್ನು ಅನುಭವಿಸಲು ಸಿದ್ಧರಾಗಿ ..!

ಏಕಂ ಸತ್ ಫೌಂಡೇಶನ್‌ ಜೊತೆಗೂಡಿ ಎ ಡಿ ವೆಂಚರ್ಸ್ ಪ್ರೊಡಕ್ಷನ್‌ನಲ್ಲಿ, ಕೆಸ್ಟೋನ್‌ ಉತ್ಸವ ಕಾರ್ಯ ಕ್ರಮವನ್ನು ಆಯೋಜಿಸಿದೆ. ಈ ಸಂಗೀತ ಸಂಜೆ ಕೃಷ್ಣನ ಜೀವನ ಹಾಗೂ ತತ್ವಗಳನ್ನು ಪ್ರಸ್ತುತ ಪಡಿಸಲಿದೆ. ಉತ್ತಮ ಸಂಗೀತ, ಕಥಾ ವಿಸ್ತಾರ, ತತ್ವಗಳ ಪಾಠದ ಮೂಲಕ ಭಗವಾನ್ ಕೃಷ್ಣನನ್ನ ಕಲಾವಿದನಾಗಿ, ಯೋಧನಾಗಿ , ಚಿಂತಕನಾಗಿ ಹಾಗೂ ಉತ್ತಮ ಮಾರ್ಗದರ್ಶಕನನ್ನಾಗಿ ಈ ಕಾರ್ಯಕ್ರಮ ಕೃಷ್ಣನ ಜೀವನವನ್ನ ತೆರೆದಿಡಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ವಿಶೇಷ ಸುಗಂಧದ ಅನುಭವ ನೀಡಲು “ಸಿಗ್ನೇಚರ್ ಫ್ರೇಗ್ರನ್ಸ್” ಪರಿಚಯ

ಪ್ರಯಾಣಿಕರಿಗೆ ವಿಶೇಷ ಸುಗಂಧ “ಸಿಗ್ನೇಚರ್ ಫ್ರೇಗ್ರನ್ಸ್” ಪರಿಚಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಚೆಕ್-ಇನ್, ಆಗಮನ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಗಂಧದ ಅನುಭವವನ್ನು ಪ್ರಯಾಣಿಕರು ಅನುಭವಿಸ ಬಹುದಾಗಿದೆ. ಜೊತೆಗೆ, ವಿಮಾನ ನಿಲ್ದಾಣವನ್ನು ನಿರ್ಗಮಿಸಿದ ಬಳಿಕವೂ ಈ ಅನುಭವ ಪ್ರಯಾ ಣಿಕರ ಮನದಲ್ಲಿ ಹಾಗೆಯೇ ಉಳಿಯಲಿದೆ.

ಹೈಸ್ಕೂಲ್ ಮಕ್ಕಳಿಗೆ ಅ, ಆ, ಇ, ಈ ಪಾಠ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡ ಓದಲೂ ಬರಲ್ಲ!

ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಓದುತ್ತಾ ಇಂಗ್ಲಿಷ್ ವ್ಯಾಕರಣವನ್ನು ನಿರ್ಭೀತವಾಗಿ ಕಲಿಯ ಬೇಕಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆ ಅ, ಆ, ಇ, ಈ, ಇಂಗ್ಲಿಷ್ ಅಲ್ಫಾಬೆಟ್‌ ಗಳಾದ ಎ, ಬಿ, ಸಿ, ಡಿಯನ್ನೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಕಳವಳಕಾರಿ ವಿಷಯ ಹೊರ ಬಿದ್ದಿದೆ.

ಎನ್ನ ಬಸವಣ್ಣನ ಮಲಿನಗೊಳಿಸದಿರಿ

ಎನ್ನ ಬಸವಣ್ಣನ ಮಲಿನಗೊಳಿಸದಿರಿ

ಸಂಬಂಧಿಸಿದ ಎಲ್ಲ ಮಠಾಧೀಶರಲ್ಲಿ, ಮುಖಂಡರಲ್ಲಿ, ವಿದ್ವಾಂಸರಲ್ಲಿ ನನ್ನ ವಿನಂತಿ ಇಷ್ಟೇ: ನಾನು ನಂಬಿರುವ ಬಸವಣ್ಣ, ಜೀವನಾದರ್ಶವನ್ನು ಸರಳವಾಗಿ ತಿಳಿಸಿ ಕೊಟ್ಟ, ರೂಪಿಸಿಕೊಟ್ಟ, ಪ್ರತಿಪಾದಿಸಿದ ಶರಣ ಮಹಾನುಭಾವ. ಆತನನ್ನು ಕುಗ್ಗಿಸಿ, ತಿರುಚಿ, ನಿಮ್ಮ ನಿಮ್ಮ ಮೂಗಿನ ನೇರಕ್ಕೆ ಹೊಂದಿಸಬೇಡಿ. ನಿಮ್ಮ ನಿಮ್ಮ ಉದ್ದೇಶಸಾಧನೆಗಾಗಿ ಆತನನ್ನು ಮಲಿನಗೊಳಿಸಬೇಡಿ. ಆತನು ಮಾನವಕುಲಕ್ಕೆ ಜೀವನಾ ದರ್ಶವನ್ನು ತೋರಿದ-ಸಾರಿದ ಶರಣನಾಗಿ ಉಳಿಯಲು ಬಿಡಿ.

ಭಾಷಿ ಅಲ್ಲ ಬದ್ಕ್ ವಿಶ್ವ ಕುಂದಾಪ್ರ ಕನ್ನಡ ದಿನ

ಭಾಷಿ ಅಲ್ಲ ಬದ್ಕ್ ವಿಶ್ವ ಕುಂದಾಪ್ರ ಕನ್ನಡ ದಿನ

ಕುಂದಾಪ್ರ ಕನ್ನಡವೆಂಬ ಭಾಷೆ, ಮಣ್ಣಿನ ಗುಣ,ಸಾಹಿತ್ಯಸಂಸ್ಕೃತಿಯ ಇಂಪು ವಿಶ್ವದಾದ್ಯಂತ ಪಸರಿಸುವ ದೃಷ್ಟಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಅಂದು ತೆಗೆದುಕೊಳ್ಳಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಂದು ಕೇವಲ ಆ ಭಾಷೆ ಮಾತನಾಡುವ ಕುಂದಾಪುರ, ಬೈಂದೂರು, ಕಾರ್ಕಳ, ಭಟ್ಕಳ,ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿಗಳಿಗಷ್ಟೇ ಸೀಮಿತವಾಗಿರದೇ, ಸಾಗರದಾಚೆಯೂ ಕೂಡ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

AndhraPradesh DCM Pawan kalyan Interview: ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು: ಪವರ್‌ ಫುಲ್‌ ಪವನ್

ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಒಂದಕ್ಕೊಂದು ಬಹಳಷ್ಟು ಸಾಮ್ಯತೆ ಹೊಂದಿವೆ. ಸಾಂಸ್ಕೃತಿಕವಾಗಿ ವಿಜಯನಗರ ಸಾಮ್ರಾಜ್ಯವು ಆಂಧ್ರಪ್ರದೇಶಕ್ಕೂ ವ್ಯಾಪಿಸಿತ್ತು. ಹೀಗಾಗಿ ಎರಡೂ ರಾಜ್ಯಗಳ ಮಧ್ಯೆ ಬಹಳಷ್ಟು ಸಾಂಸ್ಕೃತಿಕವಾಗಿ ನಂಟಿದೆ. ನಾನು ಸಿನಿಮಾ ಮೂಲಕ ಎಲ್ಲ ಜನರನ್ನೂ ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನಗೆ ರಾಜಕೀಯ ಪ್ರವೇಶ ಮಾಡುವುದು ಒದಗಿ ಬಂದ ಅವಕಾಶ.

Vishwavani Editorial: ಸೈಬರ್ ವಂಚಕರನ್ನು ಶಿಕ್ಷಿಸಿ

ಸೈಬರ್ ವಂಚಕರನ್ನು ಶಿಕ್ಷಿಸಿ

ಸೈಬರ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವವರು ತೀರಾ ಕಡಿಮೆ. ಹೀಗಾಗಿ ದೇಶದ ನಾಗರಿಕರು ಕಷ್ಟಪಟ್ಟು ದುಡಿದ ಹಣವನ್ನುಯಾವುದೋ ದೇಶದ ಮೂಲೆಯಲ್ಲಿ ಕುಳಿತವರು ಲಪಟಾಯಿಸು ತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಆನ್ ಲೈನ್ ವಂಚನೆಯನ್ನು ರಾಷ್ಟ್ರದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಪಿಡುಗನ್ನು ದೂರ ಮಾಡಲು ಸಾಧ್ಯವಿಲ್ಲ.

ಟೈಫಾಯ್ಡ್ ಜ್ವರ ನಿರ್ವಹಣೆ: ಸಕಾಲಿಕ ಹಸ್ತಕ್ಷೇಪದ ಮಹತ್ವ

ಟೈಫಾಯ್ಡ್ ಜ್ವರ ನಿರ್ವಹಣೆ: ಸಕಾಲಿಕ ಹಸ್ತಕ್ಷೇಪದ ಮಹತ್ವ

ಟೈಫಾಯ್ಡ್ ಜ್ವರದ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 30 ದಿನಗಳವರೆಗೆ ಇರುತ್ತದೆ, ಸರಾಸರಿ 8-14 ದಿನಗಳು. ಈ ಸಮಯದಲ್ಲಿ, ಮಗು ಯಾವುದೇ ಲಕ್ಷಣಗಳನ್ನು ಪ್ರದರ್ಶಿಸದಿರ ಬಹುದು. ಆದಾಗ್ಯೂ, ಒಮ್ಮೆ ಲಕ್ಷಣಗಳು ಕಾಣಿಸಿಕೊಂಡರೆ, ಅವು ನಿರ್ದಿಷ್ಟವಲ್ಲದ ಮತ್ತು ಇತರ ಕಾಯಿಲೆಗಳಿಗೆ ಹೋಲುತ್ತವೆ, ರೋಗನಿರ್ಣಯವನ್ನು ಸವಾಲಿನದ್ದಾಗಿ ಮಾಡುತ್ತದೆ.

ಮೇಲ್ಮೈ ಮೀರಿ: ಸಾರ್ಕೋಮಾದ ಸಂಕೀರ್ಣ ವಾಸ್ತವತೆ

ಮೇಲ್ಮೈ ಮೀರಿ: ಸಾರ್ಕೋಮಾದ ಸಂಕೀರ್ಣ ವಾಸ್ತವತೆ

ಸಾರ್ಕೋಮಾವನ್ನು ಪತ್ತೆಹಚ್ಚುವುದು ಅದರ ವಿರಳತೆ ಮತ್ತು ವ್ಯಾಪಕ ಶ್ರೇಣಿಯ ಉಪವಿಭಾಗ ಗಳಿಂದಾಗಿ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ, ಪ್ರತಿಯೊಂದೂ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಲಕ್ಷಣಗಳು ಸಾಮಾನ್ಯವಾಗಿ ಕಡಿಮೆ ತೀವ್ರ ಪರಿಸ್ಥಿತಿಗಳನ್ನು ಹೋಲುತ್ತವೆ, ಇದು ರೋಗ ನಿರ್ಣಯದಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ.

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 28.77 ಲಕ್ಷ ಹೆಕ್ಟರ್ ನಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ, ಹವಾಮಾನಕ್ಕನುಗುಣವಾಗಿ 20.62 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಉತ್ತಮ ದರ್ಜೆ ವೀಳ್ಯದೆಲೆ ಹೊರೆಯ ದರ 14000 ರು.ಗೂ ಏರಿತ್ತು, ಆದರೆ ಈಗ ಅದರ ಬೆಲೆ ಕೇವಲ 2000 ರು.ಗೆ ಕುಸಿದಿದೆ. ಅಂದರೆ ಒಂದು ಹೊರೆಗೆ 12 ಸಾವಿರ ರು. ಕಡಿಮೆಯಾಗಿದೆ.

Vishwavani Editorial: ಈ ಆತ್ಮಹತ್ಯೆಗಳಿಗೆ ಕಾರಣವೇನು?

ಈ ಆತ್ಮಹತ್ಯೆಗಳಿಗೆ ಕಾರಣವೇನು?

ಶಾಲಾ ಹಂತದ ಶಿಕ್ಷಣವನ್ನು ಮುಗಿಸಿ ಆಗಷ್ಟೇ ವಿಭಿನ್ನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿರುವ ಯುವ ಹೃದಯಗಳು, ಯಾರೋ ಕುಹಕಿಗಳು/ಕಿಡಿಗೇಡಿಗಳಿಂದ ಒದಗುವ ಇಂಥ ಕಿರಿಕಿರಿಯನ್ನು ತಡೆದುಕೊಳ್ಳ ಲಾಗದಷ್ಟು ಸೂಕ್ಷ್ಮ ಮನಸ್ಥಿತಿಯವರಾಗಿರುತ್ತಾರೆ. ರ‍್ಯಾಗಿಂಗ್‌ನಿಂದಾಗಿ ತಮಗಾಗುತ್ತಿರುವ ತೊಂದರೆ ಯನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದ ಅಸಹಾಯಕತೆಯೂ ಅವರನ್ನು ಕಾಡುತ್ತಿರುತ್ತದೆ ಎಂಬುದನ್ನು ಮನಗಂಡು ಇಂಥ ಯುವ ಪ್ರತಿಭೆಗಳನ್ನು ಸಂರಕ್ಷಿಸಬೇಕಾದ ಹಾಗೂ ತಪ್ಪಿತಸ್ಥರ ಹೆಡೆಮುರಿ ಕಟ್ಟಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ.

Dr Sathish K Patil Column: ಬಿಹಾರದಲ್ಲಿ ಮತ್ತೆ ನಿತೀಶ್‌ ಕುಮಾರ್‌ ಅಧಿಪತ್ಯವೇ ?

ಬಿಹಾರದಲ್ಲಿ ಮತ್ತೆ ನಿತೀಶ್‌ ಕುಮಾರ್‌ ಅಧಿಪತ್ಯವೇ ?

ನಿತೀಶ್ ಕುಮಾರ್ ಇಲ್ಲದೆಯೇ ಬಿಹಾರದಲ್ಲಿ ಯಾವ ಮೈತ್ರಿಕೂಟವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಎರಡನೆಯ ಅಂಶವೆಂದರೆ, ನಿತೀಶರು ಮಾಡಿರುವ ಅಭಿವೃದ್ಧಿ ಕಾರ್ಯ ಗಳು. ನಿರುದ್ಯೋಗಿ ಯುವಜನರಿಗೆ ಮಾಸಿಕ 1000 ರು. ನಿರುದ್ಯೋಗ ಭತ್ಯೆ ಮತ್ತು ಅವರಿಗೆ ಉದ್ಯೋಗಾವ ಕಾಶ ಕಲ್ಪಿಸಲೆಂದು ‘ಬಿಹಾರ ಯೂತ್ ಕಮಿಷನ್’ ಸ್ಥಾಪಿಸುವ ನಿರ್ಧಾರ, ಬಡವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆಂದು 4 ಲಕ್ಷ ರು.ವರೆಗೆ ಸಹಾಯಧನ ಇವೇ ಮುಂತಾದ ಉಪಕ್ರಮಗಳ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯುವ ತಂತ್ರ ನಿತೀಶರದ್ದು.

Surendra Pai Column: ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಕಳೆದ ಹಲವು ವರ್ಷಗಳ ತನ್ನ ಆಡಳಿತ ವೈ-ಲ್ಯವನ್ನು ಮುಚ್ಚಿಹಾಕಲು, ಸಿಬಿಎಸ್‌ಇ ಪರೀಕ್ಷಾ ಮಾದರಿಯನ್ನು ಅಳವಡಿಸಿ ಕೊಳ್ಳುವ ಪ್ರಸ್ತಾವವನ್ನು ಇದೀಗ ಸರಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವದಲ್ಲಿ, ವಿದ್ಯಾರ್ಥಿಯು ಆಂತರಿಕ ಅಂಕ ದೊಂದಿಗೆ ಒಟ್ಟಾರೆ 100ಕ್ಕೆ 33 ಅಂಕ ಪಡೆದರೆ ತೇರ್ಗಡೆ, ಕನ್ನಡ ಸೇರಿದಂತೆ ಪ್ರಥಮ ಭಾಷೆಗೆ 125ಕ್ಕೆ ಬದಲಾಗಿ 120 ಅಂಕಕ್ಕೆ ಪರೀಕ್ಷೆ, ಬಹು ಆಯ್ಕೆ ಹಾಗೂ ಒಂದು ಅಂಕದ ಪ್ರಶ್ನೆಗೆ ಹೆಚ್ಚು ಆದ್ಯತೆ ಎಂಬ ಮೂರು ಪ್ರಮುಖ ಅಂಶಗಳಿವೆ.

ಆಫ್ಲೈನ್ ರೀಟೇಲ್ ವ್ಯಾಪಾರಿಗಳ ಫೋನ್ಪೇನ ಪಿನ್ಕೋಡ್ ಸಬಲೀಕರಣ

ಆಫ್ಲೈನ್ ರೀಟೇಲ್ ವ್ಯಾಪಾರಿಗಳ ಫೋನ್ಪೇನ ಪಿನ್ಕೋಡ್ ಸಬಲೀಕರಣ

ಸೀಮಿತ ವ್ಯಾಪ್ತಿ, ಡೆಲಿವರಿ ಅಸಮರ್ಥತೆ ಮತ್ತು ಬೆಲೆ ಒತ್ತಡದಂತಹ ಪ್ರಮುಖ ಸವಾಲುಗಳನ್ನು ಪರಿಹರಿಸಲು ಪಿನ್ಕೋಡ್ ಆಫ್ಲೈನ್ ರೀಟೇಲ್ ವ್ಯಾಪಾರಿಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸು ತ್ತದೆ. ಪಿನ್ಕೋಡ್ ಡೇಟಾ-ಆಧರಿತ ಒಳನೋಟಗಳನ್ನು ಬಳಸಿಕೊಂಡು ಚಿಲ್ಲರೆ ವ್ಯಾಪಾರಿಗಳು ನಿಜವಾದ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ

ವಿಪತ್ತು ನಿರ್ವಹಣೆಗೆ STEM ಶಿಕ್ಷಣ ಮತ್ತು ತಂತ್ರಜ್ಞಾನದ ಬೆಂಬಲ ಒದಗಿಸಲು ಭಾರತದಲ್ಲಿ ಗ್ಲೋಬಲ್‌ ಮೂವ್‌ ವೆಹಿಕಲ್‌ ಆರಂಭಿಸಿದ ಐಇಇಇ

ಭಾರತದಲ್ಲಿ ಗ್ಲೋಬಲ್‌ ಮೂವ್‌ ವೆಹಿಕಲ್‌ ಆರಂಭಿಸಿದ ಐಇಇಇ

ಈ ಹೆಜ್ಜೆ ನಮ್ಮ ಜಾಗತಿಕ ಪ್ರಯತ್ನಗಳನ್ನು ವಿಸ್ತರಿಸುತ್ತದೆ. ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ಮಹತ್ವದ ಸಂವಹನ ಮತ್ತು ಶಕ್ತಿ ಬೆಂಬಲವನ್ನು ಒದಗಿಸುತ್ತದೆ. ಜೊತೆಗೆ ಹವಾಮಾನ ಬದಲಾವಣೆ ಮತ್ತು ವಿಪತ್ತು ಜಾಗೃತಿಯ ಬಗ್ಗೆ STEM ಶಿಕ್ಷಣದ ಮೂಲಕ ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತದೆ

Sirsi News: ಮಾಧ್ಯಮ ಶ್ರೀ ಪ್ರಶಸ್ತಿಗೆ ವಿಶ್ವವಾಣಿ, ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಆಯ್ಕೆ

ಮಾಧ್ಯಮ ಶ್ರೀ ಪ್ರಶಸ್ತಿಗೆ ವಿನುತಾ ಹೆಗಡೆ ಆಯ್ಕೆ

2006ರಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ವಿನುತಾ ಹೆಗಡೆಯವರು ಯಲ್ಲಾಪುರ ತಾಲೂಕಿನ ಹಿಂದುಳಿದ ಗ್ರಾಮ ಭಾಗಿನಕಟ್ಟಾದಲ್ಲಿ 1979ರಂದು ಜನಿಸಿದವರು. ಇವರು ಹೈಸ್ಕೂಲು ವಿದ್ಯಾಭ್ಯಾಸವನ್ನು 14 ಕಿಲೋಮೀಟರ್ ದೂರ ನಡೆದು ಪೂರೈಸಿದ್ದಾರೆ. ಮದುವೆ ನಂತರದಲ್ಲಿ ಧಾರವಾಡ ಜೆ ಎಸ್ ಎಸ್ ನಲ್ಲಿ ಬಿ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ ಪಡೆದಿದ್ದಾರೆ.

‘ಭಾರತದಲ್ಲಿ ದತ್ತು ಸ್ವೀಕಾರ’ ಉಪಕ್ರಮ ಪ್ರಾರಂಭಿಸಿದ ಐಟಿಸಿ ಸನ್‌ಫೀಸ್ಟ್ ಮಾಮ್ಸ್ ಮ್ಯಾಜಿಕ್

‘ಭಾರತದಲ್ಲಿ ದತ್ತು ಸ್ವೀಕಾರ’ ಉಪಕ್ರಮ ಪ್ರಾರಂಭ

ಹೆಚ್ಚುತ್ತಿರುವ ಜಾಗೃತಿಯ ಹೊರತಾಗಿಯೂ, ಭಾರತದಲ್ಲಿ ದತ್ತು ಸ್ವೀಕಾರವು ಇನ್ನೂ ಕಳಂಕ ಮತ್ತು ಭಾವನಾತ್ಮಕ ಅಂತರವನ್ನು ಹೊಂದಿದೆ, ವಿಶೇಷವಾಗಿ ದತ್ತು ಪಡೆಯುವ ತಾಯಂದಿರನ್ನು ಸಮಾನರು ಎಂದು ಗುರುತಿಸುವಾಗ. ಅನೇಕರು ಜೀವಶಾಸ್ತ್ರದ ಮಸೂರದ ಮೂಲಕ ತಾಯ್ತನವನ್ನು ನಿರ್ಣಯಿಸುವುದನ್ನು ಮುಂದುವರೆಸಿದ್ದಾರೆ,

Devi Maheshwara Hampinaidu Column: ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

ಹಿಂದೂ ಹೆಣ್ಣು ಮಕ್ಕಳ ‘ಸಿಂದೂರ ತಿಲಕ’ವನ್ನು ಅಳಿಸುವ ಏಕೈಕ ಉದ್ದೇಶದ ಜಿಹಾದಿ ಮತ್ತು ಕ್ರೈಸ್ತ ಮಿಷನರಿ ಮತಾಂತರ ದಂಧೆಗಳನ್ನು ದೇಶದೊಳಗೆ ಮೊದಲು ಮಟ್ಟಹಾಕಬೇಕಿದೆ. ಇದಕ್ಕೆ ಬೇರೆಯದೇ ತೆರನಾದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಅಗತ್ಯವಿದೆ. ಆಳುಗರು ಈ ನಿಟ್ಟಿನಲ್ಲಿ ಕಟಿಬದ್ಧರಾಗಬೇಕಷ್ಟೇ....

Thimmanna Bhagwat Column: ಪವರ್‌ ಆಫ್‌ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಪವರ್‌ ಆಫ್‌ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಖೊಟ್ಟಿ ಸಹಿ ಮೂಲಕ GPA ರಚಿಸಿ ಆಸ್ತಿಗಳ ವರ್ಗಾವಣೆಗೆ ಯತ್ನಿಸಿದ ಅನೇಕ ಪ್ರಕರಣಗಳಿವೆ. ಉದಾ: ‘ದಿಲ್ಲಿ ಸರಕಾರ ವರ್ಸಸ್ ಜನ್ಮಯ ಸಿಂಗ್’, ‘ಗುರುಚರಣ್ ಸಿಂಗ್ ವರ್ಸಸ್ ದಿಲ್ಲಿ ಸರಕಾರ’ ಮುಂತಾದವು. ತಂದೆ ತಾಯಿಯರ, ಸೋದರರ ಸಹಿ ಫೋರ್ಜರಿ ಮಾಡಿ GPA ರಚಿಸಿ ನೋಟರಿಯ ಸಹಿ ಮತ್ತು ಮುದ್ರೆಗಳನ್ನೂ ಫೋರ್ಜರಿ ಮಾಡಿದ ಪ್ರಕರಣಗಳಿವೆ.

Loading...