Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?
ಬಹುತೇಕ ರಾಜ್ಯಗಳು ಜನಪ್ರಿಯ ಯೋಜನೆಗಳ ಜಾರಿಯ ಭರದಲ್ಲಿ ಸಾಲದ ಬಲೆಗೆ ಸಿಲುಕಿವೆ. ಕೇಂದ್ರಸರಕಾರವೂ ಇದಕ್ಕೆ ಹೊರತಲ್ಲ. ಕೇಂದ್ರದ ಸಾಲ ಪ್ರಮಾಣ 200 ಲಕ್ಷ ಕೋಟಿಯ ಸಮೀಪ ತಲುಪಿದ್ದು ಸಾಲದ ಮೇಲಿನ ಬಡ್ಡಿ ಪಾವತಿಯೇ ಬಜೆಟ್ನ ಬಹು ದೊಡ್ಡ ಪಾಲನ್ನು ನುಂಗಿ ಹಾಕುತ್ತಿದೆ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕಾರ, ಜನರ ಕಲ್ಯಾಣವನ್ನು ಸಾಧಿಸುವುದು ಸರಕಾರದ ಪ್ರಮುಖ ಕರ್ತವ್ಯ. ಆದರೆ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಯೋಜನೆಗಳ ಹಂಚಿಕೆ ಜನರ ತೆರಿಗೆ ಹಣದ ದುರುಪಯೋಗ.