ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?
2016 ಮತ್ತು 2017ರಲ್ಲೂ ದಕ್ಷಿಣ ಗೋವಾದ ವಾಸ್ಕೋ ಸಮೀಪವಿರುವ ‘ಬೈನಾ ಕಡಲತೀರ’ದಲ್ಲಿದ್ದ ನೂರಾರು ಮನೆಗಳನ್ನು ಕೆಡವಲಾಯಿತು. ಕರ್ನಾಟಕ ಮೂಲದವರಾದರೂ ಇವರಲ್ಲಿ ಹೆಚ್ಚಿನವರು ಗೋವಾದ ಕಾಯಂ ನಿವಾಸಿಗಳಾಗಿದ್ದರು. ಹೆಚ್ಚಿನವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಗಳಿದ್ದವು. ಆದರೆ ಅಕ್ರಮ ಒತ್ತುವರಿ ಮತ್ತು ಸಿಆರ್ಝೆಡ್ ನಿಯಮಗಳ ಉಲ್ಲಂಘನೆ ನೆಪದಲ್ಲಿ ಇವರನ್ನು ಹೊರ ದಬ್ಬ ಲಾಯಿತು.