ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಲೋಕೇಶ್​ ಕಾಯರ್ಗ

Kaayarga@gmail.com

ಲೋಕೇಶ್ ಕಾಯರ್ಗ ವಿಶ್ವವಾಣಿ ಪತ್ರಿಕೆ ಮತ್ತು ಲೋಕಧ್ವನಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು. ಪತ್ರಕರ್ತನಾಗಿ ತಳಸ್ಪರ್ಶಿ ಅಧ್ಯಯನ, ವೃತ್ತಿಪರತೆ ಮತ್ತು ಜನಪರ ಕಾಳಜಿಯ ಅಂಕಣ ಬರಹಗಳಿಂದ ಮೆಚ್ಚುಗೆ ಪಡೆದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ.ಕಳೆದ 32 ವರ್ಷಗಳಲ್ಲಿ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಆಯಾ ಪತ್ರಿಕೆಗಳ ಸುದ್ದಿ ಮನೆ ಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಿಕೆಯ ಮೂಲಕ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದಾರೆ

Articles
Lokesh Kaayarga Column: ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?

ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?

2016 ಮತ್ತು 2017ರಲ್ಲೂ ದಕ್ಷಿಣ ಗೋವಾದ ವಾಸ್ಕೋ ಸಮೀಪವಿರುವ ‘ಬೈನಾ ಕಡಲತೀರ’ದಲ್ಲಿದ್ದ ನೂರಾರು ಮನೆಗಳನ್ನು ಕೆಡವಲಾಯಿತು. ಕರ್ನಾಟಕ ಮೂಲದವರಾದರೂ ಇವರಲ್ಲಿ ಹೆಚ್ಚಿನವರು ಗೋವಾದ ಕಾಯಂ ನಿವಾಸಿಗಳಾಗಿದ್ದರು. ಹೆಚ್ಚಿನವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಗಳಿದ್ದವು. ಆದರೆ ಅಕ್ರಮ ಒತ್ತುವರಿ ಮತ್ತು ಸಿಆರ್‌ಝೆಡ್ ನಿಯಮಗಳ ಉಲ್ಲಂಘನೆ ನೆಪದಲ್ಲಿ ಇವರನ್ನು ಹೊರ ದಬ್ಬ ಲಾಯಿತು.

Lokesh Kayarga Column: ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್‌ ನುಂಗಿ ಹಾಕಿತೇ ?

ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್‌ ನುಂಗಿ ಹಾಕಿತೇ ?

ಐ.ಟಿ ಕ್ರಾಂತಿಯ ಬಳಿಕ ಕಂಪ್ಯೂಟರ್ ಶಿಕ್ಷಣವೇ ಪ್ರಮುಖ ಎಂದೆನಿಸಿಕೊಂಡಿತು. ಈಗ ಕಂಪ್ಯೂಟರ್ ಕೋರ್ಸ್ ಎಂದರೆ ಸಾಕಾಗುವುದಿಲ್ಲ. ಅದರಲ್ಲಿ ಯಾವ ವಿಭಾಗ ಎಂದು ಪ್ರತ್ಯೇಕವಾಗಿ ಹೇಳಬೇಕು. ಕರ್ನಾಟಕದ ಬಹುತೇಕ ಎಲ್ಲ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಈಗ ಅಸ್ತಿತ್ವ ಉಳಿಸಿಕೊಂಡಿರು ವುದೇ ಕಂಪ್ಯೂಟರ್ ಕೋರ್ಸ್‌ಗಳ ಕಾರಣಕ್ಕಾಗಿ.

Lokesh Kaayarga Column: ಬಿರಿಯಾನಿ ತಿಂದ ನಾಯಿಗಳು ಕಚ್ಚೋದಿಲ್ವೇ ?!

Lokesh Kaayarga Column: ಬಿರಿಯಾನಿ ತಿಂದ ನಾಯಿಗಳು ಕಚ್ಚೋದಿಲ್ವೇ ?!

ಬೀದಿ ನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಇತ್ತೀಚೆಗೆ ಒಂದರ ಬಳಿಕ ಒಂದರಂತೆ ನೀಡಿರುವ ನಿರ್ದೇಶನಗಳು, ಅದನ್ನು ಪಾಲಿಸಲು ನಮ್ಮ ಸರಕಾರ ಮತ್ತು ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಈ ನಿಟ್ಟಿನಲ್ಲಿ ಅಂದಾಜಿಸಿರುವ ಹಣಕಾಸು ಬೇಡಿಕೆಗಳನ್ನು ನೋಡಿದರೆ ಖಂಡಿತ ವಾಗಿಯೂ ಬೀದಿ ನಾಯಿಗಳು, ಹುಲಿ, ಸಿಂಹ, ಚಿರತೆ ಮುಂತಾದ ವನ್ಯ ಪ್ರಾಣಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿವೆ.

Lokesh Kaayarga Column: ರಾಜ್ಯಕ್ಕೆ ಮುಳುವಾಯಿತೇ ಹೈಕಮಾಂಡ್‌ ಸಂಸ್ಕೃತಿ

Lokesh Kaayarga Column: ರಾಜ್ಯಕ್ಕೆ ಮುಳುವಾಯಿತೇ ಹೈಕಮಾಂಡ್‌ ಸಂಸ್ಕೃತಿ

ರಾಜ್ಯ ರಾಜಕೀಯದಲ್ಲಿ ಸದ್ಯ ನಡೆಯುತ್ತಿರುವ ನಾಯಕತ್ವದ ಪ್ರಶ್ನೆ ಬಂದಾಗಲೂ, ಕಾಂಗ್ರೆಸ್ ಪಕ್ಷದ ಶಾಸಕರಿಂದ ಹಿಡಿದು ನಾಯಕರವರೆಗೆ ಎಲ್ಲರೂ ಹೈಕಮಾಂಡ್ ನಿರ್ಧರಿಸಲಿದೆ ಎಂದೇ ಹೇಳುತ್ತಾ ಬಂದಿದ್ದಾರೆ. ತಮಾಷೆ ಎಂದರೆ ಹೈಕಮಾಂಡ್ ನಾಯಕನ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೂ ಇದೇ ಮಾತನ್ನು ಹೇಳು ತ್ತಿದ್ದಾರೆ.

Lokesh Kaayarga Column: ಸರಕಾರದ ಸರ್ವರ್ ಸ್ಲೋ ಸಾರ್ವಕಾಲಿಕ !

Lokesh Kaayarga Column: ಸರಕಾರದ ಸರ್ವರ್ ಸ್ಲೋ ಸಾರ್ವಕಾಲಿಕ !

ಯಾವುದೇ ತಂತ್ರಜ್ಞಾನ ತಾನಾಗಿಯೇ ಸೇವೆ ನೀಡುವುದಿಲ್ಲ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಕೈಗಳಿರಬೇಕು. ಸೇವೆ ನೀಡುವ ಮನಸ್ಸಿದ್ದರೆ, ನೀಡುವ ಕೈಗಳಿದ್ದರೆ ತಲುಪಿಸಲು ನೂರಾರು ಮಾರ್ಗಗಳಿವೆ. ಆದರೆ ‘ಕಾಣಿಕೆ’ ಸಂದಾಯವಾಗದ ಹೊರತು ಸೇವೆ ಸಲ್ಲಲೇಬಾರದು ಎಂದು ಯೋಚಿಸುವವರನ್ನು ಯಾವ ತಂತ್ರಜ್ಞಾನದಿಂದಲೂ ರಿಪೇರಿ ಮಾಡಲಾಗದು.

Lokesh Kaayarga Column: ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?

ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?

ಎಡ-ಬಲ ನಿಲುವಿನ ಕಾರ್ಮಿಕ ಸಂಘಟನೆಗಳು ತಮ್ಮ ನಿಲುವಿಗೆ ತಕ್ಕಂತೆ ಹೇಳಿಕೆ ನೀಡಿ ದ್ದನ್ನು ಬಿಟ್ಟರೆ ಹೊಸ ಕಾಯಿದೆಯ ಇನ್ನೂ ವಿಶದವಾಗಿ ಮಾತನಾಡಿಲ್ಲ. ಬ್ರಿಟಿಷರ ಅವಧಿಯ ಕಾನೂನುಗಳೂ ಸೇರಿದಂತೆ 29 ಹಳೆಯ ಕಾರ್ಮಿಕ ಕಾನೂನುಗಳನ್ನು ಪರಿಷ್ಕರಿಸಿ ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.

Lokesh Kaayarga Column: ವಂಚಕರ ಚಾಲಾಕಿತನಕ್ಕೆ  ಮದ್ದರೆಯುವವರಾರು ?

Lokesh Kaayarga Column: ವಂಚಕರ ಚಾಲಾಕಿತನಕ್ಕೆ ಮದ್ದರೆಯುವವರಾರು ?

ಕೇಂದ್ರ ಸರಕಾರ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ತಡೆಗೆ ಹಲವು ಕ್ರಮಗಳನ್ನು ಕೈಗೊಂಡರೂ ಸೈಬರ್ ಚಾಲಾಕಿಗಳ ಮುಂದೆ ಇವು ನಗಣ್ಯ ಎನಿಸಿವೆ. ವಂಚನೆಗೆ ಒಳಗಾದವರು ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಆದರೆ ದಾಖ ಲಾದ ದೂರುಗಳ ಬೆನ್ನು ಹತ್ತಿ ವಂಚಕರನ್ನು ಪತ್ತೆ ಮಾಡಿ, ಹಣವನ್ನು ಮರಳಿ ಪಡೆಯುವ ವಿಧಾನ ಇನ್ನೂ ಓಬೀರಾಯನ ಕಾಲದಲ್ಲಿದೆ.

Lokesh Kaayarga Column: ಸೇನೆಯಲ್ಲೂ ಮತಭೇದ ರಾಜಕೀಯ !

Lokesh Kaayarga Column: ಸೇನೆಯಲ್ಲೂ ಮತಭೇದ ರಾಜಕೀಯ !

ನಮ್ಮ ಗುಪ್ತಚರ ಪಡೆ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೇ ಹೈ ಪ್ರೊಫೈಲ್ ಉಗ್ರರ ಕುರಿತ ಮಾಹಿತಿ ಕಲೆ ಹಾಕಿದ್ದು ದೇಶದ ಮೇಲಿನ ನಿಷ್ಠೆಯಿಂದ. ಈ ಮಾತು ಹೇಳಲು ಕಾರಣವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭಾರತೀಯ ಸೇನೆಯು ಜನಸಂಖ್ಯೆಯ ಸುಮಾರು ಶೇ. ೧೦ರಷ್ಟಿರುವ ಮೇಲ್ಜಾತಿಯ ಜನರಿಂದ ನಿಯಂತ್ರಿಸಲ್ಪಡುತ್ತದೆ ಎಂದು ಆರೋಪಿಸಿದ್ದಾರೆ.

Lokesh Kaayarga Column: ವೀರಪ್ಪನ್ ಬದುಕಿದ್ದರೆ ಹೀಗಾಗುತ್ತಿರಲಿಲ್ಲವಂತೆ.... !

ವೀರಪ್ಪನ್ ಬದುಕಿದ್ದರೆ ಹೀಗಾಗುತ್ತಿರಲಿಲ್ಲವಂತೆ.... !

ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಆಗ ಕಾಡೊಳಗೆ ಅಕ್ರಮ ಗಣಿಗಾರಿಕೆ- ರೆಸಾರ್ಟ್ ಅವ್ಯವಹಾರಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ ಎಂಬ ನಮ್ಮ ಕಾಡಂಚಿನ ಜನರ ಆಕ್ರೋಶದ ಹಿಂದೆ ನೋವು, ಹತಾಶೆಗಳಿವೆ. ಅಮಾಯಕರು ವನ್ಯಜೀವಿಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ವನ್ಯಮೃಗಗಳು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿವೆ. ಸಂರಕ್ಷಿತ ಅರಣ್ಯದಂಚಿನಲ್ಲಿ ರೆಸಾರ್ಟ್, ಎಸ್ಟೇಟ್ ಚಟುವಟಿಕೆಗಳ ಹೆಚ್ಚಳ ವನ್ಯಜೀವಿಗಳು ನಾಡಿಗೆ ನುಗ್ಗಲು ಕಾರಣವಾಗಿವೆ ಎನ್ನುವುದು ಈ ಭಾಗದ ಜನರ ದೂರು.

Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

ರಾಜ್ಯ ಸರಕಾರ ಇದೇ ಶೈಕ್ಷಣಿಕ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಗೆ ನಿಗದಿಪಡಿಸಲಾದ ಕನಿಷ್ಠ ಅಂಕಗಳ ಮಟ್ಟವನ್ನು ಶೇ.33ಕ್ಕೆ ಇಳಿಸಲು ಹೊರಟಿದೆ. ಈ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಬದಲು ಎಸ್‌ಎಸ್‌ಎಲ್‌ಸಿವರೆಗೆ ‘ಉತ್ತೀರ್ಣ ಉಚಿತ’ ಎಂದು ಘೋಷಿಸಿದ್ದರೆ ವಿದ್ಯಾರ್ಥಿಗಳ ಪಾಲಿಗೆ ನಮ್ಮ ಶಿಕ್ಷಣ ಸಚಿವರು ಹೀರೋ ಆಗಿರುತ್ತಿದ್ದರು.

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

ಗ್ರಾಹಕರಿಗೆ ಸಾಲ ಕೊಡುವ ಬ್ಯಾಂಕ್‌ಗಳು ಕೇವಲ ಪ್ಯಾನ್ ಕಾರ್ಡ್ ಆಧಾರದಿಂದಲೇ ಕೆಲವೇ ನಿಮಿಷ ಗಳಲ್ಲಿ ನಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸಲು ಸಾಧ್ಯ ಎಂದಾದರೆ ಸರಕಾರಕ್ಕೆ ಇಂಥದ್ದೇ ಸಾಫ್ಟ್‌ ವೇರ್‌ವೊಂದನ್ನು ರಚಿಸಿ ನಮ್ಮ ಪೂರ್ವಾಪರ ಕಲೆ ಹಾಕುವುದು ಕಷ್ಟದ ವಿಚಾರವೇನಲ್ಲ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಕಂಪನಿಗಳು ತಮ್ಮ ವ್ಯವಹಾರ ಆರಂಭಕ್ಕೆ ಮುನ್ನ ಈ ರೀತಿಯ ಎಲ್ಲ ಕಸರತ್ತುಗಳನ್ನು ನಡೆಸುತ್ತವೆ. ಈ ಕಾಲದಲ್ಲಿ ಮನೆಮನೆಗೆ ಶಿಕ್ಷಕರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸುವ ಅಗತ್ಯವಿದೆಯೇ ಎಂದು ಸರಕಾರ ಮರು ಚಿಂತನೆ ನಡೆಸಬೇಕಾಗಿದೆ.

Lokesh Kaayarga Column: ಔಷಧ ನಕಲಿ, ವೈದ್ಯರೂ ನಕಲಿ; ಜೀವಕ್ಕೆಲ್ಲಿ ಖಾತ್ರಿ ?

ಔಷಧ ನಕಲಿ, ವೈದ್ಯರೂ ನಕಲಿ; ಜೀವಕ್ಕೆಲ್ಲಿ ಖಾತ್ರಿ ?

ವಿಷಕಾರಿ ಅಥವಾ ಮಾರಣಾಂತಿಕ ನಕಲಿ ಔಷಧ ಉತ್ಪಾದನೆ ಪ್ರಕರಣಗಳಲ್ಲಿ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ ಕೇವಲ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಆದರೆ ಇಷ್ಟು ವರ್ಷಗಳಲ್ಲಿ ನಕಲಿ ಔಷಧ ಮಾರಾಟದ ಕಾರಣಕ್ಕಾಗಿ ಯಾವುದೇ ವ್ಯಕ್ತಿ ಜೀವಾವಧಿ ಶಿಕ್ಷೆಗೊಳಗಾದ ಒಂದೇ ಒಂದು ಪ್ರಕರಣ ಈ ದೇಶದಲ್ಲಿ ವರದಿಯಾಗಿಲ್ಲ.

Lokesh Kaayarga Column: ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

ಒಂದು ವೇಳೆ ಈ ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುತ್ತಿದ್ದರೆ, ರಾಹುಲ್ ದ್ರಾವಿಡ್‌ರಂತಹ ಕೋಚ್ ಮಾರ್ಗದರ್ಶನ ಇರುತ್ತಿದ್ದರೆ, , ಬಾಬರ್ ಆಜಂ ಪಾಕ್ ತಂಡದ ನಾಯಕ ನಾಗಿದ್ದರೆ ದುಬೈ ಕ್ರೀಡಾಂಗಣದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ.

Lokesh Kaayarga Column: ‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

ಸರಕಾರದ ಪ್ರಕಾರ ಸಹಕಾರ ಸಂಘಗಳ (ತಿದ್ದುಪಡಿ) ಅಧಿನಿಯಮ-2025 ಮತ್ತು ಕರ್ನಾಟಕ ಸೌಹಾರ್ದ ಸಹಕಾರ ಅಧಿನಿಯಮ-2025 ಸಹಕಾರಿ ವಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆ ಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿವೆ. ಈ ವಿಚಾರದಲ್ಲಿ ಯಾರಿಗೂ ತಕರಾರೂ ಇಲ್ಲ. ಆದರೆ ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ ಎನ್ನುವ ವಿಚಾರದಲ್ಲಿ ಸಹಕಾರಿ ವಲಯದಲ್ಲಿ ಆತಂಕವಿದೆ.

Lokesh Kaayarga Column: ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

ತಾನು ಅಧಿಕಾರಕ್ಕೆ ಬಂದ ಕೂಡಲೇ ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪಿಸುತ್ತೇನೆ. ಇಸ್ರೇಲ್ -ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಸಮರವನ್ನು ನೂರು ದಿನಗಳ ಒಳಗೆ ನಿಲ್ಲಿಸುವುದಾಗಿ ಹೇಳಿದ್ದ ಟ್ರಂಪ್‌ಗೆ ಇದಾವುದೂ ಸಾಧ್ಯವಾಗಿಲ್ಲ. ಈಗ ಈ ಯುದ್ಧದಲ್ಲಿ ಅಮೆರಿಕವೇ ಪರೋಕ್ಷವಾಗಿ ಭಾಗಿ ಯಾಗಿದೆ. ಇರಾನ್ ಮೇಲಿನ ಇಸ್ರೇಲ್ ದಾಳಿ ಅಮೆರಿಕದ ಕುಮ್ಮಕ್ಕಿನಿಂದಲೇ ನಡೆದಿರುವುದು ಜಗತ್ತಿಗೆ ಗೊತ್ತಿರುವ ವಿಚಾರ.

Lokesh Kaayarga Column: ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?

ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?

ಸರಕಾರ ಉಚಿತ ಘೋಷಣೆಗಳ ಮೂಲಕ ಆಯ್ದ ಕೆಲವರ ನೆರವಿಗೆ ಬರಬಹುದು. ಆದರೆ ಬದುಕು ಹೊರೆಯಾಗದಿರಬೇಕಾದರೆ ಎಲ್ಲರಿಗೂ ಅನ್ವಯಿಸುವ ಕೆಲವೊಂದು ನೀತಿಗಳನ್ನು ಅಳವಡಿಸಿಕೊಳ್ಳಲೇ ಬೇಕು. ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ತೀರಾ ಏರದಂತೆ ನೋಡಿಕೊಳ್ಳು ವುದು, ವಿದ್ಯುತ್, ನೀರು, ಸಾರಿಗೆ ಸೌಕರ್ಯ ಜನರಿಗೆ ಎಟುಕುವಂತೆ ಮಾಡುವುದು, ಮಿತದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಇವುಗಳಲ್ಲಿ ಮುಖ್ಯವಾದವುಗಳು.

Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್‌ ಗಳ ಪರಮ ಧ್ಯೇಯ !

Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್‌ ಗಳ ಪರಮ ಧ್ಯೇಯ !

ಬ್ಯಾಂಕುಗಳ ಈ ಸೇವಾಧರ್ಮದ ಹಿಂದಿನ ಮರ್ಮ ತಿಳಿಯಬೇಕಾದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ವಹಿವಾಟಿನ ಪ್ರಗತಿ ಪರಿಶೀಲನೆ ಮಾಡಬೇಕು. ಖಾಸಗಿ ಬ್ಯಾಂಕುಗಳಾಗಲಿ, ಸಾರ್ವಜನಿಕ ರಂಗ ಬ್ಯಾಂಕುಗಳಾಗಲಿ ಅವುಗಳ ವಹಿವಾಟಿನಲ್ಲಿ ಬಡ್ಡಿಯೇತರ ಆದಾಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅಂದರೆ ಬ್ಯಾಂಕುಗಳು ತಾವು ನೀಡಿದ ಸಾಲಕ್ಕೆ ಬಡ್ಡಿ ರೂಪದಲ್ಲಿ ಪಡೆದ ಹಣಕ್ಕಿಂತ ಹೆಚ್ಚಿನ ಹಣವನ್ನು ಸೇವಾ ಶುಲ್ಕ ಮತ್ತು ದಂಡದ ರೂಪದಲ್ಲಿ ಸಂಗ್ರಹಿಸಿವೆ.

Lokesh Kaayarga Column: ದೇಶದ ಏಕತೆ ವಿಷಯದಲ್ಲಿ ಒಡಕು ಧ್ವನಿ ಬೇಡ

ದೇಶದ ಏಕತೆ ವಿಷಯದಲ್ಲಿ ಒಡಕು ಧ್ವನಿ ಬೇಡ

ಟ್ರಂಪ್ ಬೂಟಾಟಿಕೆಯ ಮಾತನ್ನು ಸಮರ್ಥಿಸುವ ಭರದಲ್ಲಿ ರಾಹುಲ್, ದೇಶವಾಸಿಗಳ ಭಾವನೆ, ಅಭಿಪ್ರಾಯಗಳನ್ನು ಗಮನಿಸಿದಂತೆ ಕಾಣುತ್ತಿಲ್ಲ. ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಲು ರಾಹುಲ್‌ಗೆ ಟ್ರಂಪ್ ಹೇಳಿಕೆಯ ಅವಶ್ಯಕತೆ ಇರಲಿಲ್ಲ. ಟಿಸಿಎಸ್‌ನಂತಹ ಐಟಿ ದೈತ್ಯ ಕಂಪನಿ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿರುವುದನ್ನು ರಾಹುಲ್ ಉಲ್ಲೇಖಿಸಬಹುದಿತ್ತು.

Lokesh Kaayarga Column: ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?

ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?

ಎರಡು ಮೂರು ದಶಕಗಳ ಹಿಂದೆ ಇದೇ ವಿವಿಗಳಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಪಡೆಯಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದರು. ಇಲ್ಲಿ ಸೀಟು ಸಿಕ್ಕಿದೆ ಎಂದರೆ ಅದು ಹೆಮ್ಮೆ, ಪ್ರತಿಷ್ಠೆಯ ವಿಷಯ ವಾಗಿರುತ್ತಿತ್ತು. ಈಗ ಇದೇ ವಿವಿಗಳಲ್ಲಿ ಎಂ.ಎ ಓದುವವರಿಗಿಂತ ಎಮ್ಮೆಗಳ ಸಂಖ್ಯೆಯೇ ಹೆಚ್ಚು ಕಾಣಿಸುತ್ತಿದೆ. ಅಧಿಕ ಮಾಸದಲ್ಲಿ ದುರ್ಭಿಕ್ಷ ಎಂಬಂತೆ ಕೆಲವು ವಿವಿಗಳು ದೈನಂದಿನ ಆಡಳಿತ ನಡೆಸಲೂ ದುಡ್ಡಿಲ್ಲದೆ ಪರದಾಡುತ್ತಿವೆ. ಕೆಲವು ವಿವಿಗಳು ಬೇಡಿಕೆ ಕಡಿಮೆ ಇರುವ ಕೋರ್ಸ್‌ಗಳನ್ನು ಮುಚ್ಚಲು ಮುಂದಾಗಿವೆ.

Lokesh Kaayarga Column: ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಬೆಂಕಿ, ನೀರಿನ ಜತೆ ಸರಸವಾಡಬಾರದೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ನೀರಿನ ವಿಚಾರದಲ್ಲಂತೂ ಇದು ಅಕ್ಷರಶ: ಸತ್ಯ. ಪ್ರತಿದಿನವೂ ಅದೆಷ್ಟೋ ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪುವುದನ್ನು ಕಂಡಾಗ ನಮ್ಮ ಹಿರಿಯರ ಮಾತು ಅದೆಷ್ಟು ನಿಜ ಎನಿಸುತ್ತದೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಆರರಿಂದ ಏಳು ಮಂದಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಸ್ವಲ್ಪವೇ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯುತ್ತಿದ್ದರು. ಅವರ ಕುಟುಂಬಕ್ಕೆ ಆಧಾರವಾಗಿ ಉಳಿಯುತ್ತಿದ್ದರು.

Lokesh Kaayarga Column: ಬೇಕಿರುವುದು ವ್ಯಾಧಿ ಮೂಲಕ್ಕೆ ಮದ್ದು  !

Lokesh Kaayarga Column: ಬೇಕಿರುವುದು ವ್ಯಾಧಿ ಮೂಲಕ್ಕೆ ಮದ್ದು !

ನಮ್ಮ ನಿರ್ಲಕ್ಷ್ಯದ ಕಾರಣದಿಂದ ಎಳವೆಯಲ್ಲಿಯೇ ದೈಹಿಕ ಚಟುವಟಿಕೆಗಳಿಂದ ವಂಚಿತರಾದ ಮಕ್ಕಳು ಸಣ್ಣ ಪ್ರಾಯದಲ್ಲಿಯೇ, ಬೊಜ್ಜು, ಮಧುಮೇಹ, ರಕ್ತದೊತ್ತಡದಂತಹ ಜೀವನ ಶೈಲಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದೈಹಿಕ ಚಟುವಟಿಕೆಗಳು ಶರೀರಕ್ಕೆ ಮಾತ್ರವಲ್ಲ. ನಮ್ಮ ಮಕ್ಕಳ ಮಾನಸಿಕ ವಿಕಸನ ಕ್ಕೂ ಅಗತ್ಯವಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆಗಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಆದರೆ ದೈಹಿಕ ಚಟುವಟಿಕೆಗಳಿಂದ ದೂರವಾದ ಯುವಕರು ಸಣ್ಣಪುಟ್ಟ ಒತ್ತಡಗಳನ್ನೂ ನಿಭಾಯಿಸ ಲಾಗದೆ ಅತಿರೇಕದ ಕ್ರಮಗಳಿಗೆ ಕೈ ಹಾಕುತ್ತಿದ್ದಾರೆ. ದೈಹಿಕ ಚಟುವಟಕೆಗಳಿಂದ ದೂರವಾದ ಸ್ಥೂಲ ಕಾಯರಿಂದ ತುಂಬಿದ ಸಮಾಜ ಹೇಗಿರಬಹುದೆನ್ನುವುದಕ್ಕೆ ಭಾರತವೇ ಉದಾಹರಣೆಯಾಗಿ ನಿಲ್ಲುತ್ತಿದೆ.

Lokesh Kaayaraga Column: ನಮ್ಮ ರೈತರೆಲ್ಲರೂ ‘ಕೃಷ್ಣ’ ನಾಮ ಜಪಿಸುವಂತಾಗಲಿ !

ನಮ್ಮ ರೈತರೆಲ್ಲರೂ ‘ಕೃಷ್ಣ’ ನಾಮ ಜಪಿಸುವಂತಾಗಲಿ !

ಹೆಣ್ಣು, ಹೊನ್ನು, ಮಣ್ಣು ಕಲಹದ ಮೂರು ಕಾರಣಗಳೆಂದು ನಮ್ಮ ಹಿರಿಯರ ಮಾತು. ಇನ್ನಿತರ ಕಾರಣಗಳಿದ್ದರೂ ಹೆಣ್ಣು ಮತ್ತು ಮಣ್ಣಿನ ವಿಚಾರಕ್ಕೆ ಸಂಬಂಧಿಸಿ ಹೆಚ್ಚಿನ ಸಂಘರ್ಷಗಳಾಗಿರುವುದು ಇತಿಹಾಸದಲ್ಲಿ ದಾಖಲಾದ ಸತ್ಯ. ನಮ್ಮ ಕೆಳ ನ್ಯಾಯಾಲಯಗಳಲ್ಲಿ ಈಗಲೂ ಶೇ. 60ಕ್ಕಿಂತ ಹೆಚ್ಚಿನ ಪ್ರಕರಣಗಳು ಭೂ ವ್ಯಾಜ್ಯಕ್ಕೆ ಸಂಬಂಧಿಸಿವೆ. ಕಂದಾಯ ಸಚಿವ ಕೃಷ್ಣಬೈರೇಗೌಡ ತಮ್ಮ ಇಲಾಖೆಯಲ್ಲಿ ಆರಂಭಿಸಿರುವ ಸುಧಾರಣಾ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ರಾಜ್ಯದಲ್ಲಿ ಭೂ ವ್ಯಾಜ್ಯಗಳನ್ನು ಗಣನೀಯವಾಗಿ ಇಳಿಸಬಹುದು. ಭೂ ಒಡೆತನದ ಸಮರ್ಪಕ ದಾಖಲೆ ಪಡೆದ ಲಕ್ಷಾಂತರ ರೈತರ ಬಾಳು ಹಸನಾಗಬಹುದು.

Lokesh Kaayarga Column: ಆಟೋ-ಬೈಕ್ ಟ್ಯಾಕ್ಸಿ ‘ಡಿಕ್ಕಿ’ ತಪ್ಪಿಸಬಾರದೇಕೆ ?

ಆಟೋ-ಬೈಕ್ ಟ್ಯಾಕ್ಸಿ ‘ಡಿಕ್ಕಿ’ ತಪ್ಪಿಸಬಾರದೇಕೆ ?

‘‘ಅರ್ಧ ಎಕರೆ ಜಮೀನಿದೆ ಸಾರ್. ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ. ನನ್ನ ದುಡಿಮೆಯಲ್ಲಿಯೇ ತಂಗಿ ಮದುವೆ ಮಾಡ್ಬೇಕು. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಆಫೀಸ್‌ನಲ್ಲಿ ದುಡೀತೀನಿ. ಆರರಿಂದ 12 ಗಂಟೆ ತನಕ ಬೈಕ್ ಓಡಿಸ್ತೀನಿ. ಪರವಾಗಿಲ್ಲ ಸಾರ್, ಕೆಲವು ದಿನ ಒಳ್ಳೆಯ ಸಂಪಾದನೆ ಇರುತ್ತದೆ. ಕೆಲ ದಿನ ಅಷ್ಟಕ್ಕಷ್ಟೇ’’ ಅಂದ. ಆಗಲೇ ಬೈಕ್ ಟ್ಯಾಕ್ಸಿ ನಿಷೇಧದ ಕೂಗು ಜೋರಾಗಿತ್ತು.

Lokesh Kaayarga Column: ಎಲ್ಲೋಯ್ತು ನಮ್ಮ ಎಂಜಿನಿಯರುಗಳ (ಕ) ಮಿಷನ್‌ ?

ಎಲ್ಲೋಯ್ತು ನಮ್ಮ ಎಂಜಿನಿಯರುಗಳ (ಕ) ಮಿಷನ್‌ ?

ಚೆನಾಬ್ ಸೇತುವೆ ಕಂಡ ಎಂಜಿನಿಯರಿಂಗ್ ಕೌಶಲ್ಯ ನಮ್ಮಲ್ಲಿ ಯಾಕಿಲ್ಲ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜಿ. ಮಾಧವಿ ಲತಾ ಅವರು 17 ವರ್ಷಗಳ ಕಾಲ ಈ ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ದರು. ಈ ಹಿತ್ತಲಗಿಡ ನಮಗೇಕೆ ಮದ್ದಾಗಲಿಲ್ಲ? ರಾಜಧಾನಿ ಬೆಂಗಳೂರಿ ನಲ್ಲಿ ಜೋರಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು. ರಸ್ತೆಗಳೇ ನದಿಗಳಾಗುತ್ತವೆ. ಸಂಚಾರ, ಜನಜೀವನ ಅಸ್ತವ್ಯಸ್ತ. ಬಸ್-ಕಾರುಗಳು ಬಿಡಿ, ಆಂಬುಲೆನ್ಸ್ ಕೂಡ ಹೋಗಲಿಕ್ಕಾಗದ ಸ್ಥಿತಿ.

Loading...