ಸರಕಾರವನ್ನೇ ಖಾಸಗಿಯವರಿಗೆ ಒಪ್ಪಿಸಿ ಬಿಡಿ !
ದೇಶದ ನಾಗರಿಕರ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸರಕಾರಗಳಿಗೆ ಸಾಧ್ಯವಿಲ್ಲ ಎಂದಾದರೆ, ಈ ಬೃಹತ್ ಸರಕಾರಿ ಯಂತ್ರ, ನೂರಾರು ಶಾಸಕರು, ಸಂಸದರು, ಸಚಿವರು ಮತ್ತು ವೈಭವದ ವಿಧಾನಸೌಧ, ಸಂಸತ್ತು ಯಾರಿಗಾಗಿ ಬೇಕು? ಇದಕ್ಕಿಂತ ಜಾಗತಿಕ ಟೆಂಡರ್ ಕರೆದು ಇಡೀ ಸರಕಾರವನ್ನೇ ಯಾವುದಾದರೂ ದೈತ್ಯ ಕಾರ್ಪೊರೇಟ್ ಕಂಪನಿಗೆ ವಹಿಸಿಕೊಡುವುದು ಒಳಿತು. ಇದಕ್ಕೆ ದಾರಿ ಮಾಡಿ ಕೊಡಲು ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದ’ ಮತ್ತು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂಬ ಎರಡು ಪದಗಳನ್ನು ಕೈಬಿಟ್ಟು, ‘ಕಾರ್ಪೊರೇಟ್ ನಿಯಂತ್ರಿತ ಭಾರತ’ ಎಂದು ಬದಲಾಯಿಸಿದರಾಯಿತು !