ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಲೋಕೇಶ್​ ಕಾಯರ್ಗ

[email protected]

ಲೋಕೇಶ್ ಕಾಯರ್ಗ ವಿಶ್ವವಾಣಿ ಪತ್ರಿಕೆ ಮತ್ತು ಲೋಕಧ್ವನಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು. ಪತ್ರಕರ್ತನಾಗಿ ತಳಸ್ಪರ್ಶಿ ಅಧ್ಯಯನ, ವೃತ್ತಿಪರತೆ ಮತ್ತು ಜನಪರ ಕಾಳಜಿಯ ಅಂಕಣ ಬರಹಗಳಿಂದ ಮೆಚ್ಚುಗೆ ಪಡೆದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ.ಕಳೆದ 32 ವರ್ಷಗಳಲ್ಲಿ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಆಯಾ ಪತ್ರಿಕೆಗಳ ಸುದ್ದಿ ಮನೆ ಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಿಕೆಯ ಮೂಲಕ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದಾರೆ

Articles
Lokesh Kayarga Column: ಕಸ್ತೂರಿರಂಗನ್‌ ವರದಿ ತಿರಸ್ಕಾರ ಪರಿಹಾರವಲ್ಲ

ಕಸ್ತೂರಿರಂಗನ್‌ ವರದಿ ತಿರಸ್ಕಾರ ಪರಿಹಾರವಲ್ಲ

ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪಶ್ಚಿಮ ಘಟ್ಟಗಳ ರಕ್ಷಣಾ ಅಧಿಸೂಚನೆ ಯನ್ನು ಅಂತಿಮಗೊಳಿಸಲು ಕೇಂದ್ರ ಸರಕಾರಕ್ಕೆ ನಿರಂತರವಾಗಿ ಕಟ್ಟು ನಿಟ್ಟಿನ ಗಡುವು ನೀಡುತ್ತಿವೆ. ಕಾನೂನಿನ ಪ್ರಕಾರ, ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ ನಂತರ 60 ದಿನಗಳ ಕಾಲಾವಕಾಶ ನೀಡುತ್ತದೆ.

Lokesh Kayarga Column: ಇನ್ನಷ್ಟು ವೀರಪ್ಪನ್‌ ಹುಟ್ಟಿಕೊಳ್ಳದಿರಲಿ

Lokesh Kayarga Column: ಇನ್ನಷ್ಟು ವೀರಪ್ಪನ್‌ ಹುಟ್ಟಿಕೊಳ್ಳದಿರಲಿ

ಅರಣ್ಯ ಇಲಾಖೆಯು ಕಳ್ಳಬೇಟೆ ತಡೆಗೆಂದು ನಿರ್ಮಿಸಿದ್ದ ಏಳೆಂಟು ಶಿಬಿರಗಳನ್ನು ಜಿಲೆಟಿನ್ ಮತ್ತು ಡೈನಮೈಟ್ ಬಳಸಿ ಸ್ಫೋಟಿಸಲಾಯಿತು. ಇದು ಸುಧಾರಿತ ಸ್ಫೋಟಕಗಳ ಜಾಲ ಹೊಂದಿರುವ ವ್ಯವಸ್ಥಿತ ಗುಂಪಿನ ಕೃತ್ಯ ಎನ್ನುವುದು ಸ್ಪಷ್ಟ. ಇದೇ ಗುಂಪು ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಕೊಳ್ಳೇಗಾಲ ತಾಲ್ಲೂಕಿನ ಶಿಲುವೆಪುರ ಅರಣ್ಯಪ್ರದೇಶಕ್ಕೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದೆ.

Lokesh Kayarga Column: ಕರ್ನಾಟಕದಲ್ಲೊಂದು ಗುಟ್ಕಾ ನಿಷೇಧ ಪ್ರಹಸನ !

ಕರ್ನಾಟಕದಲ್ಲೊಂದು ಗುಟ್ಕಾ ನಿಷೇಧ ಪ್ರಹಸನ !

ದೇಶದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧ ಜಾರಿಯಾಗಿ ಒಂದೂವರೆ ದಶಕವೇ ಕಳೆದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2011ರ ಆಗಸ್ಟ್‌ನಲ್ಲಿ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಕಾಯ್ದೆ 2006ರಡಿ ಹೊರಡಿಸಲಾದ ಆದೇಶದಡಿ ಯಾವುದೇ ಆಹಾರ ಉತ್ಪನ್ನಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅನ್ನು ಕಚ್ಚಾವಸ್ತುವಾಗಿ ಬಳಸುವಂತಿಲ್ಲ. ಸದ್ಯ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವುದು ವಾರ್ಷಿಕ ನಿಷೇಧ ನವೀಕರಣದ ಆದೇಶವನ್ನೇ ಹೊರತು, ಇದೇ ಮೊದಲ ಬಾರಿಗೆ ನಿಷೇಧ ಹೇರುತ್ತಿರುವುದಲ್ಲ.

Lokesh Kayarga Column: ಸ್ವಚ್ಛತೆ ಜತೆ ಶೌಚಾಲಯ ಅಭಿಯಾನವೂ ಮುಖ್ಯ

ಸ್ವಚ್ಛತೆ ಜತೆ ಶೌಚಾಲಯ ಅಭಿಯಾನವೂ ಮುಖ್ಯ

ಸಾರ್ವಜನಿಕ ಶೌಚಾಲಯ ಎಂದರೆ ನಮ್ಮಲ್ಲಿ ಮೂಡುವ ಚಿತ್ರಣ ಬದಲಾಗಬೇಕಿದೆ. ನಾಲ್ಕು ಗೋಡೆಗಳ ಮಧ್ಯೆ ಒಂದಷ್ಟು ಕಮೋಡ್‌ಗಳನ್ನು ಹಾಕಿದರೆ ಶೌಚಾಲಯ ಸಿದ್ಧ ಎಂಬ ಹಳೆಯ ಸೂತ್ರವನ್ನು ಬಿಟ್ಟು ಕೃಷ್ಣಬೈರೇಗೌಡರು ಪ್ರಸ್ತಾಪಿಸಿದಂತೆ ಇವುಗಳಿಗೆ ಹೊಸ ರೂಪ ಕೊಡಬೇಕಾಗಿದೆ. ಸಾರ್ವಜನಿಕ ಶೌಚಾಲಯಗಳೂ ಕೂಡ ಮಾಲ್‌ಗಳಲ್ಲಿ, ಹೈಟೆಕ್ ಚಿತ್ರಮಂದಿರಗಳಲ್ಲಿ ಕಾಣುವ ರೆಸ್ಟ್‌ ರೂಮ್‌ಗಳ ಮಾದರಿಯಲ್ಲಿ ಇರಬೇಕು. ಇವುಗಳ ಒಳಹೊಕ್ಕಾಗ ಮೂಡುವ ಅನುಭೂತಿಯೇ ನಮ್ಮನ್ನು ಸ್ವಚ್ಛತೆಗೆ ಪ್ರೇರೇಪಿಸುವಂತಿರಬೇಕು.

Lokesh Kayarga Column: ಕೆಪಿಎಸ್‌ʼಸಿಗೂ ಜಿರಳೆ ನುಗ್ಗಬೇಕಿತ್ತು...!

Lokesh Kayarga Column: ಕೆಪಿಎಸ್‌ʼಸಿಗೂ ಜಿರಳೆ ನುಗ್ಗಬೇಕಿತ್ತು...!

ಒಂದು ವೇದಿಕೆ ಬೇಕಿತ್ತು. ಅದು ಸಿಕ್ಕಾಕ್ಷಣ ಅವರು ಎದ್ದು ನಿಂತ ಪರಿ ಮಾತ್ರ ಬೆರಗು ಮೂಡಿಸು ವಂಥದ್ದು. ಕೇಂದ್ರ ಸರಕಾರವಾಗಲಿ, ನಮ್ಮ ಗುಪ್ತಚರ ಸಂಸ್ಥೆಗಳಾಗಲಿ, ಪೊಲೀಸ್ ಇಲಾಖೆ ಯಾಗಲಿ ಈ ಮಟ್ಟದ ಪ್ರತಿಭಟನೆ ನಡೆಯುತ್ತದೆ ಎಂದು ನಿರೀಕ್ಷಿಸಿಯೇ ಇರಲಿಲ್ಲ. ಸಿಜೆಐ ಹೇಳಿಕೆ ಖಂಡಿಸಿ ವಿದೇಶ ದಲ್ಲಿ ಓದುತ್ತಿದ್ದ ಅಭಿಜಿತ್ ದಿಪ್ಕೆ ಎಂಬ ಒಬ್ಬ ವಿದ್ಯಾರ್ಥಿ ಹಾಕಿದ ವ್ಯಂಗ್ಯಭರಿತ ಪೋಸ್ಟ್ ದಿನ ಬೆಳಗಾಗುವದರೊಳಗೆ ಸಂಚಲನ ಸೃಷ್ಟಿಸಿತ್ತು.

Lokesh Kayarga Column: ಅಂದು-ಇಂದು, ಎಂದೆಂದೂ ‘ಲೋಪ’ವೇ ಸೇವೆ !

ಅಂದು-ಇಂದು, ಎಂದೆಂದೂ ‘ಲೋಪ’ವೇ ಸೇವೆ !

ಕಳೆದ ಮೂರು ದಶಕಗಳಲ್ಲಿ ತನ್ನ ಮೇಲಿನ ಹಗರಣಗಳನ್ನು ಮುಚ್ಚಿಹಾಕಲು ಮತ್ತು ತನ್ನ ಪರ ವಕಾಲತ್ತು ವಹಿಸಲು ಕರ್ನಾಟಕ ಲೋಕಸೇವಾ ಆಯೋಗ ಎಷ್ಟು ಕೋಟಿ ಹಣ ಖರ್ಚು ಮಾಡಿದೆ ಎಂಬ ಮಾಹಿತಿ ಕಲೆ ಹಾಕಿದರೆ, ಅದೂ ಒಂದು ದೊಡ್ಡ ಹಗರಣವಾಗಬಹುದು!

Lokesh Kayarga Column: ಗಿರೀಶ್ ಭಾರದ್ವಾಜರ ‘ಎಂಜಿನಿಯರಿಂಗ್’ ನಮಗೇಕೆ ಸಿದ್ಧಿಸದು ?

ಗಿರೀಶ್ ಭಾರದ್ವಾಜರ ‘ಎಂಜಿನಿಯರಿಂಗ್’ ನಮಗೇಕೆ ಸಿದ್ಧಿಸದು ?

ಪ್ರತಿಷ್ಠಿತ ಕಾರ್ಪೋರೇಟ್ ಕಂಪನಿಗಳ ಅತ್ಯಂತ ಕ್ಲಿಷ್ಟ ಪ್ರಾಜೆಕ್ಟ್‌ಗಳನ್ನು ಸಲೀಸಾಗಿ ಮಾಡಿ ಕೊಡುವ ನಮ್ಮ ಎಂಜಿನಿಯರ್ ಪ್ರತಿಭೆಗಳು, ನೆಲ ಮೂಲದ ಸಮಸ್ಯೆಗಳಿಗೂ ಇಷ್ಟೇ ಸುಲಭದ ಪರಿಹಾರವನ್ನು ಹುಡುಕಿಕೊಟ್ಟರೆ ನಮ್ಮ ದೇಶ ಪ್ರಗತಿ ಪಥ ಹೇಗಿರಬಹುದು ಯೋಚಿಸಿ. ನೆಲ ಮೂಲದ ಸಮಸ್ಯೆಗಳ ಅರಿವಿದ್ದವರಿಗೆ ಸಂಶೋಧನೆಯ ಅಗತ್ಯ ಗೊತ್ತಿರುತ್ತದೆ. ದುರದೃಷ್ಟವಶಾತ್, ನಮ್ಮ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಿಗೆ ಸೇರಿಕೊಂಡ ಬಳಿಕ ತಜ್ಞರೆನಿಸಿಕೊಂಡವರಿಗೆ ವೇತನ, ಬಡ್ತಿ, ಭತ್ಯೆಯೇ ಮುಖ್ಯವಾಗುತ್ತದೆ ಹೊರತು ಸಂಶೋಧನೆ ಅಲ್ಲ.

250th Independence of USA: ಅಮೆರಿಕ ಸೂಪರ್‌ ಪವರ್‌ ಆಗಿದ್ದೇಗೆ ?

250 Years for US: ಅಮೆರಿಕ ಸೂಪರ್‌ ಪವರ್‌ ಆಗಿದ್ದೇಗೆ ?

ಅಮೆರಿಕ ಸಂಯುಕ್ತ ಸಂಸ್ಥಾನ ಇಂದು (ಶನಿವಾರ) ತನ್ನ 250ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂಭ್ರಮದಲ್ಲಿದೆ. ಎರಡೂವರೆ ಶತಮಾನಗಳ ಹಿಂದೆ ಕೇವಲ 13 ಬ್ರಿಟಿಷ್ ವಸಾಹತುಗಳಾಗಿದ್ದ ಒಂದು ಭೂಪ್ರದೇಶ, ಇಂದು ಜಗತ್ತಿನ ರಾಜಕೀಯ, ಆರ್ಥಿಕ, ಮಿಲಿಟರಿ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ರಂಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಏಕೈಕ ಜಾಗತಿಕ ಮಹಾಶಕ್ತಿಯಾಗಿ ಬೆಳೆದು ನಿಂತಿರುವುದು ಆಧುನಿಕ ವಿಶ್ವ ಚರಿತ್ರೆಯ ಅತ್ಯಂತ ರೋಚಕ ಅಧ್ಯಾಯ.

Lokesh Kayarga Column: ಸ್ಟೆತಸ್ಕೋಪ್‌ ಮತ್ತು ಲೇಖನಿಯ ನೈತಿಕ ತೊಳಲಾಟ

ಸ್ಟೆತಸ್ಕೋಪ್‌ ಮತ್ತು ಲೇಖನಿಯ ನೈತಿಕ ತೊಳಲಾಟ

ವೈದ್ಯೋ ನಾರಾಯಣೋ ಹರಿಃ ಎನ್ನುವುದು ಹಿರಿಯರ ದೊಡ್ಡ ಮಾತು. ಮನುಷ್ಯನ ಪ್ರಾಣ ಉಳಿಸು ವಾತ ದೇವರಿಗಿಂತ ಕಡಿಮೆಯಿಲ್ಲ ಎಂಬುದು ಇದರ ಹಿಂದಿನ ಆಶಯ. ಇನ್ನು ಪತ್ರಿಕಾರಂಗವನ್ನು ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗ’ ಎಂದು ಬಣ್ಣಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರ ಮನುಷ್ಯನ ದೇಹದ ಸ್ವಾಸ್ಥ್ಯವನ್ನು ಕಾಪಾಡಿದರೆ, ಪತ್ರಿಕಾರಂಗ ಸಮಾಜದ ಹಾಗೂ ಪ್ರಜಾ ಪ್ರಭುತ್ವದ ಸ್ವಾಸ್ಥ್ಯವನ್ನು ಕಾಯುವ ಕಾವಲುಗಾರ.

Lokesh Kayarga Column: ಸರಕಾರ ನಡೆಸಲು ಶಾಸಕರು, ಸಂಸದರೂ ಬೇಕಾಗಿಲ್ಲ, ಬಿಡಿ!

ಸರಕಾರ ನಡೆಸಲು ಶಾಸಕರು, ಸಂಸದರೂ ಬೇಕಾಗಿಲ್ಲ, ಬಿಡಿ!

ನಮ್ಮ ಸಂವಿಧಾನದ 243-ಇ ಮತ್ತು 243-ಯು ವಿಧಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಮತ್ತು ಪೌರಾಡಳಿತ) ಅಧಿಕಾರಾವಧಿ ಮುಗಿಯುವುದಕ್ಕೆ ಕನಿಷ್ಠ ಆರು ತಿಂಗಳ ಮುಂಚಿತವಾಗಿಯೇ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿ, ಅವಧಿ ಮುಗಿಯುತ್ತಿದ್ದಂತೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಬೇಕಿರುವುದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ಆದರೆ ಕರ್ನಾಟಕದ ಇಂದಿನ ಚಿತ್ರಣವೇ ಬೇರೆ.

Lokesh Kayarga Column: ಮನೆಯೇ ಮೊದಲ ಕ್ರೌರ್ಯದ ತಾಣ ಆಗದಿರಲಿ !

Lokesh Kayarga Column: ಮನೆಯೇ ಮೊದಲ ಕ್ರೌರ್ಯದ ತಾಣ ಆಗದಿರಲಿ !

ಹೆತ್ತ ಮಗುವನ್ನು ಸಲಹಬೇಕಾದ ತಾಯಿ ಕಾಮಲಾಲಸೆಯಲ್ಲಿ ಮಗುವನ್ನೇ ಕತ್ತು ಹಿಸುಕಿ ಸಾಯಿಸು ತ್ತಿದ್ದಾಳೆ. ಮಕ್ಕಳಿಗಾಗಿಯೇ ತಮ್ಮ ಇಡೀ ಬದುಕನ್ನು ಸವೆಸಿದ ಹೆತ್ತವರನ್ನು, ಪುಡಿ ಆಸ್ತಿಗಾಗಿ ಮಗ/ಮಗಳು ಸಂಚು ಹೂಡಿ ಸಾಯಿಸುತ್ತಿದ್ದಾರೆ. ಈ ಕ್ರೌರ್ಯ, ಈ ಸಂವೇದನಾಶೂನ್ಯತೆ ಕೇವಲ ಬಿಡಿ ಅಪರಾಧಗಳಲ್ಲ; ಬದಲಿಗೆ ನಮ್ಮ ಸಮಾಜದ ಸ್ವಾಸ್ಥ್ಯ ಕೆಟ್ಟಿರುವುದಕ್ಕೆ, ಸಾಂಸ್ಕೃತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.

Lokesh Kayarga Column: ಅಲ್ಲಿ ನೀರಲ್ಲಿ ಸಮರ, ಇಲ್ಲಿ ನೀರಿಗಾಗಿ ಸಮರ

ಅಲ್ಲಿ ನೀರಲ್ಲಿ ಸಮರ, ಇಲ್ಲಿ ನೀರಿಗಾಗಿ ಸಮರ

ನಾವು ಇದನ್ನೇ ಜಾಗತಿಕ ವಿದ್ಯಮಾನವೆಂಬಂತೆ ಪುಳಕಿತರಾ ಗುತ್ತಿದ್ದೇವೆ. ಕರ್ನಾಟಕದ ವಿಷಯ ಕ್ಕೆ ಬರುವುದಾದರೆ ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿಲ್ಲ. ಆಗಾಗ ಕಾವೇರಿ ನೀರಿಗಾಗಿ ತಮಿಳುನಾಡು ತಕರಾರು ತೆಗೆದರೂ ಪ್ರಕೃತಿಯ ಕೃಪೆಯಿಂದ 10 ವರ್ಷಗಳಲ್ಲಿ ಎರಡೂ ರಾಜ್ಯಗಳಿಗೆ ನೀರಿನ ಕೊರತೆ ಆಗಿಲ್ಲ.

Lokesh Kayarga Column: ಸರಕಾರವನ್ನೇ ಖಾಸಗಿಯವರಿಗೆ ಒಪ್ಪಿಸಿ ಬಿಡಿ !

ಸರಕಾರವನ್ನೇ ಖಾಸಗಿಯವರಿಗೆ ಒಪ್ಪಿಸಿ ಬಿಡಿ !

ದೇಶದ ನಾಗರಿಕರ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸರಕಾರಗಳಿಗೆ ಸಾಧ್ಯವಿಲ್ಲ ಎಂದಾದರೆ, ಈ ಬೃಹತ್ ಸರಕಾರಿ ಯಂತ್ರ, ನೂರಾರು ಶಾಸಕರು, ಸಂಸದರು, ಸಚಿವರು ಮತ್ತು ವೈಭವದ ವಿಧಾನಸೌಧ, ಸಂಸತ್ತು ಯಾರಿಗಾಗಿ ಬೇಕು? ಇದಕ್ಕಿಂತ ಜಾಗತಿಕ ಟೆಂಡರ್ ಕರೆದು ಇಡೀ ಸರಕಾರವನ್ನೇ ಯಾವುದಾದರೂ ದೈತ್ಯ ಕಾರ್ಪೊರೇಟ್ ಕಂಪನಿಗೆ ವಹಿಸಿಕೊಡುವುದು ಒಳಿತು. ಇದಕ್ಕೆ ದಾರಿ ಮಾಡಿ ಕೊಡಲು ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದ’ ಮತ್ತು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂಬ ಎರಡು ಪದಗಳನ್ನು ಕೈಬಿಟ್ಟು, ‘ಕಾರ್ಪೊರೇಟ್ ನಿಯಂತ್ರಿತ ಭಾರತ’ ಎಂದು ಬದಲಾಯಿಸಿದರಾಯಿತು !

Lokesh Kayarga News: ದುಬಾ(ರಿ)ರೆ ಪಾಠ: ಪ್ರಾಣಿಗಳ ಪ್ರೀತಿಗಿರಲಿ ಜೀವದ ಅಂತರ !

ದುಬಾ(ರಿ)ರೆ ಪಾಠ: ಪ್ರಾಣಿಗಳ ಪ್ರೀತಿಗಿರಲಿ ಜೀವದ ಅಂತರ !

ಆನೆ ಶಿಬಿರಗಳಲ್ಲಿ ಮದ ಗಜಗಳ ಕಾದಾಟ ಮತ್ತು ಸಾವು ಹೊಸದೇನಲ್ಲ. ಹಿಂದೆ ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ ಅರಣ್ಯ ಶಿಬಿರದಲ್ಲಿ ಮದವೇರಿದ ಗಜೇಂದ್ರ ಹೆಸರಿನ ಆನೆಯು ಶ್ರೀರಾಮ ಹೆಸರಿನ ಆನೆಯನ್ನು ತಿವಿದು ಸಾಯಿಸಿತ್ತು. ಇವೆರಡೂ ದಸರೆಯಲ್ಲಿ ಜತೆಯಾಗಿ ಹೆಜ್ಜೆ ಹಾಕಿದ್ದ ಆನೆಗಳಾಗಿದ್ದವು. ದಸರೆ ಆನೆಗಳು ಸೇರಿ ಸಾಕಾನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಇಂತಹ ಕಾದಾಟಗಳು ಹಲವು ಬಾರಿ ನಡೆದಿವೆ. ಭೀಮನಕಟ್ಟೆ ಶಿಬಿರದಲ್ಲಿ ಅಂಬಾರಿ ಹೊತ್ತು ಸಾಗಿದ್ದ ಬಲರಾಮ ಆನೆ ತನ್ನ ವೃದ್ಧಾಪ್ಯದಲ್ಲಿ ಮತ್ತೊಂದು ಆನೆಯ ದಾಳಿಗೆ ಗುರಿಯಾಗಿದ್ದ. ಆದರೆ ಈ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಬಲಿಯಾಗಿರುವುದು ದುರದೃಷ್ಟಕರ.

Lokesh Kayarga Column: ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?

ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?

ಬೆಟ್ಟ ಗುಡ್ಡಗಳನ್ನು ಏರಿಳಿದು, ಕಾಡುಮೇಡುಗಳನ್ನು ಸುತ್ತಿ, ನದಿ, ತೊರೆಗಳಲ್ಲಿ ಮಿಂದು ಪಾವನರಾಗುವ ಕ್ರಿಯೆ ಕೇವಲ ಭಕ್ತಿ ಮತ್ತು ನಂಬಿಕೆಗೆ ಸೀಮಿತವಾದುದಲ್ಲ. ಅದು ದೇಹ ಮತ್ತು ಮನಸ್ಸಿಗೆ ಮುದ ನೀಡುವ, ಮಾನಸಿಕ, ದೈಹಿಕ ಒತ್ತಡಗಳನ್ನು ಇಳಿಸಿಕೊಳ್ಳುವ, ಪರಸ್ಪರ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವ, ಮಾಡಿರುವ ತಪ್ಪುಗಳಿಗೆ ಮರುಗುವ, ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ಕಾಪಿಡುವ ಮಾರ್ಗವೂ ಹೌದು. ಆದರೆ ಇದಕ್ಕೆ ಸಾಕ್ಷಿಯಾಗುವ ಯಾವುದೇ ದೇಗುಲದ ಪರಿಸರವು ಪ್ರಕೃತಿದತ್ತವಾದ ಆಕರ್ಷಣೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಮಾಲ್‌ಗಳಿಗೂ, ಯಾತ್ರಾ ಸ್ಥಳಗಳಿಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ.

Lokesh Kayarga Column: ಗಳಿಸಿದ್ದನ್ನು ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು !

ಗಳಿಸಿದ್ದನ್ನು ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು !

ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಪ್ರಮುಖ ಭರವಸೆಗಳನ್ನು ಈಡೇರಿಸಲು ವಾರ್ಷಿಕ ಕನಿಷ್ಠ 1.5 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ರು. ಹೆಚ್ಚುವರಿ ಹಣದ ಅವಶ್ಯಕತೆ ಇದೆ. ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವಾಗ ಬಜೆಟ್ ಸಮತೋಲನ ಕಾಯ್ದುಕೊಳ್ಳುವುದು ಟಿವಿಕೆಗೆ ಅಗ್ನಿ ಪರೀಕ್ಷೆಯಾಗಲಿದೆ.

Lokesh Kayarga Column: ನಮ್ಮ ಹೆದ್ದಾರಿಗಳೆಂದರೆ ದರೋಡೆಗೆ ರಹದಾರಿಯೇ ?

ನಮ್ಮ ಹೆದ್ದಾರಿಗಳೆಂದರೆ ದರೋಡೆಗೆ ರಹದಾರಿಯೇ ?

ಅಭಿವೃದ್ಧಿ ಎಂದರೆ ಕೇವಲ ಅಗಲವಾದ ರಸ್ತೆಗಳಲ್ಲ, ಆ ರಸ್ತೆಗಳಲ್ಲಿ ಸಂಚರಿಸುವ ಅತ್ಯಂತ ಕಟ್ಟಕಡೆಯ ಮನುಷ್ಯನ ಹಸಿವು ಮತ್ತು ಹಕ್ಕುಗಳಿಗೆ ಗೌರವ ಸಿಗುವುದೇ ನಿಜವಾದ ಅಭಿವೃದ್ಧಿ. ಲಾಭ ಬಡುಕತನದ ಹೋಟೆಲ್ ಮಾಲೀಕರು ಮತ್ತು ಕೇವಲ ಆದಾಯದ ಕಡೆಗೆ ಗಮನ ಹರಿಸುವ ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಹೆದ್ದಾರಿಗಳು ಕೇವಲ ‘ದರೋಡೆಯ ಮಾರ್ಗ’ಗಳಾಗಿ ಉಳಿಯಲಿವೆ.

Lokesh Kayarga Column: ಬೈಕ್‌ ಟ್ಯಾಕ್ಸಿಗೆ ಬೇಕು ನಿಯಮದ ಲಗಾಮು !

Lokesh Kayarga Column: ಬೈಕ್‌ ಟ್ಯಾಕ್ಸಿಗೆ ಬೇಕು ನಿಯಮದ ಲಗಾಮು !

2026ರ ಜನವರಿ 23ರಂದು ಕರ್ನಾಟಕ ಹೈಕೋರ್ಟ್‌ʼನ ವಿಭಾಗೀಯ ಪೀಠವು ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಿ, ಅವುಗಳಿಗೆ ಅನುಮತಿ ನೀಡುವಂತೆ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Lokesh Kayarga Column: ಕಾಡುಪ್ರಾಣಿಗಳ ಸಂತಾನಶಕ್ತಿ ಹರಣ: ಖಂಡ್ರೆ ಮಾತು ಚಿಂತನಾರ್ಹ !

ಕಾಡುಪ್ರಾಣಿಗಳ ಸಂತಾನಶಕ್ತಿ ಹರಣ: ಖಂಡ್ರೆ ಮಾತು ಚಿಂತನಾರ್ಹ !

ವಿಶ್ವದ ಹಲವು ದೇಶಗಳಲ್ಲಿ ವನ್ಯಪ್ರಾಣಿಗಳ ಸಂಖ್ಯೆಯನ್ನು ಸಮತೋಲನದಲ್ಲಿಡಲು ಬೇಟೆ ಮತ್ತು ಸಂತಾನಹರಣ ಚಿಕಿತ್ಸೆ ಎರಡನ್ನೂ ಪ್ರಮುಖ ಕ್ರಮಗಳಾಗಿ ಬಳಸಲಾಗುತ್ತದೆ. ಆಫ್ರಿಕಾ ರಾಷ್ಟ್ರಗಳಾದ ದ. ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ಆನೆ, ಕಾಡುಕೋಣ, ಕಾಡೆಮ್ಮೆಯಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ, ಅವುಗಳ ಕಲ್ಲಿಂಗ್(ಇ್ಠ್ಝ್ಝಜ್ಞಿಜ) ಇಲ್ಲವೇ ನಿಯಂತ್ರಿತ ಟ್ರೋಫಿ ಹಂಟಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಬೇಟೆಯಿಂದ ಬರುವ ಹಣವನ್ನು ಆ ಪ್ರಾಣಿಗಳ ಉಳಿದ ಸಂತತಿಯ ಸಂರಕ್ಷಣೆಗಾಗಿ ಬಳಸಲಾಗುತ್ತದೆ.

Lokesh Kayarga Column: ನಮ್ಮ ಬದುಕನ್ನೂ ಕೃತಕವಾಗಿಸಿದ ಕೃತಕ ಬುದ್ಧಿಮತ್ತೆ !

ನಮ್ಮ ಬದುಕನ್ನೂ ಕೃತಕವಾಗಿಸಿದ ಕೃತಕ ಬುದ್ಧಿಮತ್ತೆ !

ಅಂತಾರಾಷ್ಟ್ರೀಯ ಟೆಕ್ ದೈತ್ಯ ಒರಾಕಲ್ ಜಾಗತಿಕವಾಗಿ 30,000 ಉದ್ಯೋಗಿಗಳನ್ನು ವಜಾ ಗೊಳಿಸಲು ನಿರ್ಧರಿಸಿರುವುದು ಕೇವಲ ಒಂದು ಕಂಪನಿಯ ಆರ್ಥಿಕ ಶಿಸ್ತಿನ ಕ್ರಮವಲ್ಲ; ಬದಲಾಗಿ ಇದು ಮುಂಬ ರುವ ಆರ್ಥಿಕ ಸುನಾಮಿಯ ಮುನ್ಸೂಚನೆ. ಈ ಒಂದು ಕಂಪನಿಯ ನಿರ್ಧಾರದಿಂದ ಭಾರತ ವೊಂದರಲ್ಲೇ 12,000 ಮಂದಿ ಬೀದಿ ಪಾಲಾಗಿದ್ದಾರೆ.

Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?

Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?

ಬಹುತೇಕ ರಾಜ್ಯಗಳು ಜನಪ್ರಿಯ ಯೋಜನೆಗಳ ಜಾರಿಯ ಭರದಲ್ಲಿ ಸಾಲದ ಬಲೆಗೆ ಸಿಲುಕಿವೆ. ಕೇಂದ್ರಸರಕಾರವೂ ಇದಕ್ಕೆ ಹೊರತಲ್ಲ. ಕೇಂದ್ರದ ಸಾಲ ಪ್ರಮಾಣ 200 ಲಕ್ಷ ಕೋಟಿಯ ಸಮೀಪ ತಲುಪಿದ್ದು ಸಾಲದ ಮೇಲಿನ ಬಡ್ಡಿ ಪಾವತಿಯೇ ಬಜೆಟ್‌ನ ಬಹು ದೊಡ್ಡ ಪಾಲನ್ನು ನುಂಗಿ ಹಾಕುತ್ತಿದೆ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕಾರ, ಜನರ ಕಲ್ಯಾಣವನ್ನು ಸಾಧಿಸುವುದು ಸರಕಾರದ ಪ್ರಮುಖ ಕರ್ತವ್ಯ. ಆದರೆ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಯೋಜನೆಗಳ ಹಂಚಿಕೆ ಜನರ ತೆರಿಗೆ ಹಣದ ದುರುಪಯೋಗ.

Lokesh Kayarga Column: ಡಿಜಿಟಲ್ ಯುಗದ ʼಡೆಡ್ಲಿʼ ಮಕ್ಕಳು !

Lokesh Kayarga Column: ಡಿಜಿಟಲ್ ಯುಗದ ʼಡೆಡ್ಲಿʼ ಮಕ್ಕಳು !

ನಮ್ಮ ರಾಷ್ಟ್ರ ಆರ್ಥಿಕವಾಗಿ ಬಲಿಷ್ಠವಾಗಿರಬ ಹುದು. ನಮ್ಮ ಸೇನೆ ಬಲಶಾಲಿಯಾಗಿರ ಬಹುದು. ಆದರೆ ಸಮಾಜದ ಬುನಾದಿಯಾದ ಕುಟುಂಬ ವ್ಯವಸ್ಥೆ ಹಳಿ ತಪ್ಪಿದರೆ ಯಾರೂ ಅಂತಹ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚಿನ ಕೌಟುಂಬಿಕ ಭದ್ರತೆ ಮತ್ತು ಸುರಕ್ಷತೆಗೆ ಹೆಸರಾದ ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮಕ್ಕಳು ಹಂತಕರಾಗು ತ್ತಿದ್ದಾರೆ ಎಂದರೆ ಇದು ಅವರ ನೈತಿಕ ಅಧ:ಪತನವಲ್ಲ. ನಾವು ಕಟ್ಟಿದ ನಾಗರಿಕ ಸಮಾಜದ ಪತನ.

Lokesh Kaayarga Column: ಪ್ರವಾಸೋದ್ಯಮ ನಮ್ಮಲ್ಲೇಕೆ ʼಪ್ರಯಾಸೋದ್ಯಮʼ ?

ಪ್ರವಾಸೋದ್ಯಮ ನಮ್ಮಲ್ಲೇಕೆ ʼಪ್ರಯಾಸೋದ್ಯಮʼ ?

ಪ್ರವಾಸೋದ್ಯಮ ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬು. ರಾಜ್ಯದ ಜಿಡಿಪಿಗೆ ಪ್ರವಾಸಿ ಗರ ಕೊಡುಗೆ ಸುಮಾರು ಶೇ. 14.8 ರಷ್ಟಿದೆ. ಸರಿಸುಮಾರು 30 ಲಕ್ಷಕ್ಕೂ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಇಷ್ಟಾದರೂ ಈ ಉದ್ಯಮ ನಮ್ಮಲ್ಲಿ ನಿರ್ಲಕ್ಷಿತ ಕ್ಷೇತ್ರ. ರಾಜ್ಯದ ಒಂದು ಕೋಟಿಗಿಂತ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ತಾಕತ್ತು ಈ ಕ್ಷೇತ್ರಕ್ಕಿದೆ. ಅಧಿಕಾರಸ್ಥರು ಪ್ರವಾಸದ ಕುರಿತು ತಮ್ಮ ‘ದೃಷ್ಟಿಕೋನ’ ಬದಲಾಯಿಸಿಕೊಂಡರಷ್ಟೇ ಇದು ಸಾಧ್ಯ.

Lokesh Kaayarga Column: ಕಟ್ಟುವುದು ಸರಕಾರದ ಕೆಲಸ, ಮುರಿಯುವುದಲ್ಲ !

ಕಟ್ಟುವುದು ಸರಕಾರದ ಕೆಲಸ, ಮುರಿಯುವುದಲ್ಲ !

ಆಧುನಿಕ ಬೆಂಗಳೂರು ನಗರ ಅಕ್ರಮ ಕಟ್ಟಡಗಳ ಬೃಹತ್ ಸಮುಚ್ಚಯ. ಇಲ್ಲಿ ಸುಮಾರು ಶೇ.80ರಷ್ಟು ಮನೆ, ಕಟ್ಟಡಗಳು ಒಂದಲ್ಲ, ಒಂದು ರೀತಿಯಲ್ಲಿ ನಿಯಮ ಉಲ್ಲಂಘಿಸಿವೆ. ದುರಂತವೆಂದರೆ, ಅಕ್ರಮ ಬಡಾವಣೆಗಳು ತಲೆ ಎತ್ತುವಾಗ ಅಥವಾ ಅಕ್ರಮ ಕಟ್ಟಡದ ಪಾಯ ಹಾಕುವಾಗ ಮೌನವಾಗಿರುವ ಆಡಳಿತ ವ್ಯವಸ್ಥೆ, ಬಡ, ಮಧ್ಯಮ ವರ್ಗದ ಜನರು ತಮ್ಮ ಜೀವಮಾನದ ಉಳಿತಾಯವನ್ನು ವ್ಯಯಿಸಿ ಮನೆ ಕಟ್ಟಿದ ನಂತರ ‘ಅನಧಿಕೃತ’ ಎಂಬ ಹಣೆಪಟ್ಟಿ ಹಚ್ಚಿ ಜೆಸಿಬಿ ಹಿಡಿದು ಬರುತ್ತದೆ.

Loading...