ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
SSC Recruitment 2026: 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌

1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Guide: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ದೇಶಾದ್ಯಂತ ಖಾಲಿ ಇರುವ 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 30.

Pravasi Prapancha: ಬಾಗಿಲಿಲ್ಲದ ಭಗವಂತ; ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

ಬಾಗಿಲಿಲ್ಲದ ಭಗವಂತ: ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

Bettada Ranganathaswamy Temple: ಬೆಟ್ಟದ ರಂಗನಾಥಸ್ವಾಮಿ ಕ್ಷೇತ್ರವನ್ನು ಜನರು ವಿಶೇಷವಾಗಿ ನೆನಪಿಸಿಕೊಳ್ಳುವುದು 'ಬಾಗಿಲಿಲ್ಲದ ದೇವರು' ಎಂಬ ಕಾರಣಕ್ಕೆ. ಒಮ್ಮೆ ದೇವಾಲಯವನ್ನು ನಿರ್ಮಿಸಿ ಬಾಗಿಲು ಹಾಕಿ ಪೂಜೆ ಸಲ್ಲಿಸಲಾಗುತ್ತಿತ್ತು ಎನ್ನುವುದು ಕ್ಷೇತ್ರದ ಇತಿಹಾಸದಲ್ಲಿದೆ. ಆದರೆ ಭಕ್ತರ ನಂಬಿಕೆಯ ಪ್ರಕಾರ 'ನನ್ನನ್ನು ನೋಡಲು ಬರುವ ಭಕ್ತರಿಗೆ ಸಮಯದ ಹಂಗೇಕೆ? ನನ್ನ ದರ್ಶನಕ್ಕೆ ಬಾಗಿಲಿನ ಬಂಧನವೇಕೆ?'ಎಂಬ ಭಾವದಿಂದ ರಂಗನಾಥಸ್ವಾಮಿಯೇ ಆ ಬಾಗಿಲುಗಳನ್ನು ಒದ್ದರೆಂದು ಹೇಳಲಾಗುತ್ತದೆ. ಆ ಬಾಗಿಲುಗಳು ಕುಣಿಗಲ್ ಕೆರೆಗೆ ಹೋಗಿ ಬಿದ್ದವು ಎಂಬುದು ಹಿರಿಯರು ಹೇಳಿಕೊಂಡು ಬಂದಿರುವ ನಂಬಿಕೆ.

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಸಾಕ್ಷ್ಯ ನಾಶಕ್ಕೆ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿ; ಹೃದಯಾಘಾತದಿಂದ ಪ್ರಾಣಬಿಟ್ಟ ಕಂದಮ್ಮ

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಗಲ್ಲು ಶಿಕ್ಷೆ

Chhattisgarh Horror: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಸಾಕ್ಷ್ಯ ನಾಶಕ್ಕೆ ಆಕೆಯ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿಗೆ ಛತ್ತೀಗಢದ ದುರ್ಗ ಜಿಲ್ಲೆಯ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ಗಲ್ಲು ಸಿಕ್ಷೆ ವಿಧಿಸಿದೆ. ಘಟನೆ ನಡೆದು 17 ತಿಂಗಳಲ್ಲೇ ಮಹತ್ವದ ತೀರ್ಪು ಹೊರ ಬಿದ್ದಿದೆ.

Jaipur Horror: ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ; ಏನೂ ಆಗೇ ಇಲ್ಲವೆನ್ನುವಂತೆ ಚಹಾ ಮಾಡಿ ಕುಡಿದು ಎಸ್ಕೇಪ್‌

ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ

Jaipur Shocker: ಜೈಪುರದಲ್ಲಿ ಕೌಟುಂಬಿಕ ಕಲಹ ಹಾಗೂ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭೀಕರ ಸಾಮೂಹಿಕ ಕೊಲೆ ನಡೆದಿದೆ. ವ್ಯಕ್ತಿಯೊಬ್ಬ ನಿದ್ರಿಸುತ್ತಿದ್ದ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ಹಾಲಿನವನಿಂದ ಹಾಲು ಪಡೆದು ವೃದ್ಧ ತಂದೆಗೆ ಚಹಾ ಮಾಡಿಕೊಟ್ಟು ಪರಾರಿಯಾಗಿರುವ ಆರೋಪಿ ರಾಹುಲ್ ಝಾ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಕೇಂದ್ರದ ನಿರ್ಧಾರಕ್ಕೆ ಹೇಳಿದ್ದೇನು?

‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿಕೆಶಿ

DK Shivakumar: ರಾಷ್ಟ್ರಗಾನ 'ವಂದೇ ಮಾತರಂ'ನ ಎಲ್ಲ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಕೇಂದ್ರ ಸರ್ಕಾರ ಕಾಯ್ದೆ ಮಾಡಿದ್ದರೂ, ರಾಜ್ಯ ಸರ್ಕಾರ ಬರೀ 2 ಚರಣ ಹಾಡುವುದಾಗಿ ನಿರ್ಧರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಸರ್ಕಾರದ ನಿಲುವು ಸಮರ್ಥಿಸಿಕೊಂಡಿದ್ದಾರೆ.

ಪಾವಗಡದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ? ಪೀಪಲ್ಸ್ ವಾ‌ರ್ ಜನಶಕ್ತಿ ಪಾರ್ಟಿ ಕಾಮ್ರೇಡ್‌ ದೇವನ್ನ ದಳಂ ಹೆಸರಲ್ಲಿ 5 ಲಕ್ಷ ರೂಪಾಯಿಗೆ ಬೇಡಿಕೆ; ಗೇಟ್‌ನಲ್ಲಿ ಪತ್ರ ಪತ್ತೆ

ಪಾವಗಡದಲ್ಲಿ ಮತ್ತೆ ಆರಂಭವಾಯ್ತ ನಕ್ಸಲ್ ಚಟುವಟಿಕೆ?

Naxal Movement: ಕೇಂದ್ರ ನಕ್ಸಲ್‌ ಮುಕ್ತ ಭಾರತ ಘೋಷಣೆ ಮಾಡುತ್ತಿದ್ದರೆ ಇತ್ತ ಆಂಧ್ರ ಪ್ರದೇಶ ಹಾಗೂ ತುಮಕೂರಿನ ಪಾವಗಡ ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಶಂಕೆ ವ್ಯಕ್ತವಾಗಿದೆ. ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿಯ ಕಾಮ್ರೇಡ್‌ ದೇವನ್ನ ದಳಂ ಹೆಸರಿನ ಪತ್ರ ಪಾವಗಡದಲ್ಲಿಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Motivational Story: SBI ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೇರಿದ 65 ರೂಪಾಯಿ ಸಂಬಳಕ್ಕೆ ಶೌಚಾಲಯ ಶುಚಿಗೊಳಿಸುತ್ತಿದ್ದ ಮಹಿಳೆ; ಪ್ರತೀಕ್ಷಾ ಯಶೋಗಾಥೆ ಇದು

SBI ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೇರಿದ ಕಸ ಗುಡಿಸುತ್ತಿದ್ದ ಮಹಿಳೆ

Pratiksha Tondwalkar: ಕೇವಲ 20ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು, 2 ವರ್ಷದ ಮಗನ ಹೊಟ್ಟೆ ತುಂಬಿಸಲು ತಿಂಗಳಿಗೆ 65 ರೂಪಾಯಿ ಸಂಬಳಕ್ಕೆ ಬ್ಯಾಂಕ್ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ಮಹಿಳೆಯೊಬ್ಬರು ಇಂದು ಅದೇ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) ಹುದ್ದೆಗೆೇರಿ ಇಡೀ ದೇಶಕ್ಕೇ ಮಾದರಿಯಾಗಿದ್ದಾರೆ. ಮಹಾರಾಷ್ಟ್ರದ ಮುಂಬೈಯ ಪ್ರತೀಕ್ಷಾ ತೊಂಡವಲ್ಕರ್‌ ಅವರ ಯಶಸ್ಸಿನ ಕಥೆ ಇಲ್ಲಿದೆ.

ಬ್ಯಾಂಕ್‌ ಉದ್ಯೋಗಾಂಕ್ಷಿಗಳ ಗಮನಕ್ಕೆ: ಬ್ಯಾಂಕ್‌ ಆಫ್‌ ಬರೋಡದ 2,482 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಹೊಸ ವೇಳಾಪಟ್ಟಿ ಇಲ್ಲಿದೆ

ಬ್ಯಾಂಕ್‌ ಆಫ್‌ ಬರೋಡದ 2,482 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

BOB Recruitment 2026: ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,482 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದಬ್ಯಾಂಕ್‌ ಆಫ್‌ ಬರೋಡ ಇದೀಗ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಹಿಂದೆ ಅಪ್ಲೈ ಮಾಡಲು ಸೆಪ್ಟೆಂಬರ್‌ 7 ಕೊನೆಯ ದಿನಾಂಕ ಎನ್ನಲಾಗಿತ್ತು. ಇದೀಗ ಸೆಪ್ಟೆಂಬರ್‌ 17ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸವಾಲು, ಗೊಂದಲ ಮೀರಿ ಬಿಜೆಪಿ ಅಧಿಕಾರ ಹಿಡಿಯಲಿದೆ! ಬಳ್ಳಾರಿ ಚಲೋ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ

ಗೊಂದಲ ಮೀರಿ ಬಿಜೆಪಿ ಅಧಿಕಾರ ಹಿಡಿಯಲಿದೆ: ಬಿ.ವೈ. ವಿಜಯೇಂದ್ರ ವಿಶ್ವಾಸ

B.Y. Vijayendra: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಮಧ್ಯೆ ಅವರು 'ವಿಶ್ವವಾಣಿ ಟಿವಿ'ಯ ವಿಶೇಷ ಸಂದರ್ಶನದಲ್ಲಿ ರಾಘವ ಶರ್ಮ ಅವರೊಂದಿಗೆ ಮಾತುಕತೆ ನಡೆಸಿ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

SSC CHSL Recruitment 2026: 2,536 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ  ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌; 12ನೇ ತರಗತಿ ಪಾಸಾದವರು ಅಪ್ಲೈ ಮಾಡಬಹುದು

2,536 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌

Job Guide: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ 2,536 ಕ್ಲರ್ಕ್‌, ಡೇಟಾ ಆಪರೇಟರ್‌ ಹುದ್ದೆಗಳ ಭರ್ತಿಗೆ ಮುಂದಾಗಿದೆ. 12ನೇ ತರಗತಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಅಕ್ಟೋಬರ್‌ 7.

ವೈದ್ಯರ ಮೇಲೆ ಹಲ್ಲೆ ನಡೆಸುವ ರಾಜಕಾರಣಿಗಳನ್ನು ತಕ್ಷಣ ವಶಕ್ಕೆ ಪಡೆಯಿರಿ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ

ವೈದ್ಯರ ಮೇಲೆ ಹಲ್ಲೆ ಮಾಡುವ ರಾಜಕಾರಣಿಗಳನ್ನು ವಶಕ್ಕೆ ಪಡೆಯಿರಿ: ಸುಪ್ರೀಂ

Supreme Court: ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸುವ ರಾಜಕಾರಣಿಗಳನ್ನು ತಕ್ಷಣವೇ ವಶಕ್ಕೆ ಪಡೆದು ಜೈಲಿಗೆ ಅಟ್ಟಬೇಕು ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ವೈದ್ಯಕೀಯ ಸಿಬ್ಬಂದಿಯ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, ಇಂತಹ ಆರೋಪಿಗಳಿಗೆ ಜಾಮೀನು ನೀಡದೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಯಾವುದೇ ಅನಾಹುತಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ: ದೆಹಲಿಯಲ್ಲಿ ಕುಸಿದ ಕಟ್ಟಡದ ಪಿಜಿ ಒಪ್ಪಂದದಲ್ಲಿತ್ತು ವಿಚಿತ್ರ ಷರತ್ತು!

ದೆಹಲಿಯಲ್ಲಿ ಕುಸಿದ ಕಟ್ಟಡದ ಪಿಜಿ ಒಪ್ಪಂದದಲ್ಲಿತ್ತು ವಿಚಿತ್ರ ಷರತ್ತು

Delhi Building Collapse: ದೆಹಲಿಯ ಸತ್ಯ ನೀಕೆತನ ಪ್ರದೇಶದಲ್ಲಿ ಭಾನುವಾರ ಬಾಯ್ಸ್ ಪಿಜಿ ಇದ್ದ 5 ಮಹಡಿಯ 'ಹೋಸ್ಟೆಲ್ ಡೇಜ್' ಕಟ್ಟಡ ಕುಸಿದುಬಿದ್ದು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ದುರಂತದ ಬೆನ್ನಲೇ ಈ ಪಿಜಿಯ ಬಾಡಿಗೆ ಒಪ್ಪಂದ ಪತ್ರದಲ್ಲಿದ್ದ ನಿಯಮಗಳು ಹೊರಬಿದ್ದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಅಷ್ಟಕ್ಕೂ ಷರತ್ತಿನಲ್ಲಿ ಏನಿತ್ತು?

ಜೆನ್‌ ಝೀಗಳ ಮೇಲೆ ಪೂರ್ಣ ವಿಶ್ವಾಸವಿದೆ ಎಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಯುವ ಜನರ ಮೇಲೆ ಪೂರ್ಣ ವಿಶ್ವಾಸವಿದೆ ಎಂದ ಮೋಹನ್‌ ಭಾಗವತ್‌

Mohan Bhagwat: ʼʼಇತರ ಎಲ್ಲ ಧರ್ಮಗಳು ಸಹ ಸತ್ಯ ಎಂದು ಹಿಂದೂ ಧರ್ಮ ಹೇಳುತ್ತದೆ. ನಾಸ್ತಿಕತೆಯಿಂದ ಬಹುದೇವತಾವಾದದವರೆಗೆ ಭಾರತದಲ್ಲಿ ಎಲ್ಲ ರೀತಿಯ ಆಲೋಚನೆಗಳು ಹೊರಹೊಮ್ಮಿದವು. ಹಿಂದೂ ಎಂದರೆ ಎಲ್ಲ ವೈವಿಧ್ಯತೆಗಳನ್ನು ಸ್ವೀಕರಿಸುವ ಸ್ವಭಾವವನ್ನು ಹೊಂದಿರುವ ಪ್ರಕೃತಿ ಮತ್ತು ಸಮಾಜ" ಎಂದು ಲಂಡನ್‌ನಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

ʼʼಇಸ್ರೋ ಖಾಸಗೀಕರಣ ಆಗಲ್ಲʼʼ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಸ್ಪಷ್ಟನೆ; ವದಂತಿ ನಂಬದಂತೆ ಮನವಿ

ಇಸ್ರೋದ ಖಾಸಗೀಕರಣವಿಲ್ಲ; ಅಧಿಕಾರಿಗಳಿಂದ ಸ್ಪಷ್ಟನೆ

ISRO: ʼʼಇಸ್ರೋವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಮತ್ತು ಪ್ರಾಮುಖ್ಯತೆಯನ್ನು ಕಡಿತಗೊಳಿಸಲಾಗುತ್ತಿದೆ ಎನ್ನುವ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಇದು ವದಂತಿ ಮಾತ್ರ. ಅಂತಹ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲʼʼ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಸ್ರೋವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎನ್ನುವ ವದಂತಿ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

SSC Recruitment 2026: 1,748  ಹುದ್ದೆಗಳ ಭರ್ತಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ ಅರ್ಜಿ ಆಹ್ವಾನ; ವಿದ್ಯಾರ್ಹತೆ, ವಯೋಮಿತಿಯ ಮಾಹಿತಿ ಇಲ್ಲಿದೆ

SSC: 1,748 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Guide: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಖಾಲಿ ಇರುವ 1,748 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಎಂಜಿನಿಯರಿಂಗ್‌ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅಪ್ಲೈ ಮಾಡಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್‌ 22.

ತಾಂತ್ರಿಕ ದೋಷ: ಲಂಡನ್‌ಗೆ ತೆರಳುತ್ತಿದ್ದ ವರ್ಜಿನ್‌ ಅಟ್ಲಾಂಟಿಕ್‌ ವಿಮಾನ ತುಮಕೂರಿನಲ್ಲಿ ಸುತ್ತು ಹಾಕಿ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ; 270 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಲಂಡನ್‌ಗೆ ತೆರಳುತ್ತಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Virgin Atlantic Flight: ಲಂಡನ್‌ಗೆ ತೆರಳುತ್ತಿದ್ದ ವರ್ಜಿನ್‌ ಅಂಟ್ಲಾಟಿಕ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, 270 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಿರುಕುಳ, ಹಲ್ಲೆ, ಬೆದರಿಕೆ, ವಿದ್ವೇಷದ ಪೋಸ್ಟ್‌; ಯಾರು ಈ ಇನ್‌ಫ್ಲುಯೆನ್ಸರ್‌ ಸ್ವತಂತ್ರ ಭಾರದ್ವಾಜ್‌? ಏನಿದು ವಿವಾದ?

ಯಾರು ಈ ಖಟ್ಟರ್‌ ಹಿಂದೂವಾದಿ ಸ್ವತಂತ್ರ ಭಾರದ್ವಾಜ್‌?

Swatantra Bhardwaj: ಜುಲೈಯಲ್ಲಿ ದೆಹಲಿಯ ಜಂತರ್‌ ಮತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸಿಜೆಪಿ ವಿದ್ಯಾರ್ಥಿ ನಾಯಕಿ ನಿಶು ಅಜಾದ್‌ ತಂದೆ ಮೇಲೆ ಹಲ್ಲೆ ನಡಸಿದ ಆರೋಪಕ್ಕೆ ಸಂಬಂಧಿಸಿದಂತೆ, ಬಲಪಂಥೀಯ ಇನ್‌ಫ್ಲುಯೆನ್ಸರ್‌ ಸ್ವತಂತ್ರ ಭಾರತದ್ವಾಜ್‌ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏನಿದು ಪ್ರಕರಣ? ಸ್ವತಂತ್ರ ಭಾರತದ್ವಾಜ್‌ ಹಿನ್ನೆಲೆ ಏನು? ಇಲ್ಲಿದೆ ವಿವರ.

Pravasi Prapancha: ತುಮಕೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ; 40ನೇ ವರ್ಷದ ವೈಭವ

ತುಮಕೂರು ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

Krishna Janmashtami: ತುಮಕೂರಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ, ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರನ್ನು ಸೆಳೆಯುವ ಅದ್ಭುತ ಕ್ಷಣವೊಂದು ಸನ್ನಿಹಿತವಾಗಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ನಾಡಿನಾದ್ಯಂತ ಅತ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸುವುದು ವಾಡಿಕೆ. ಆದರೆ, ಕಲ್ಪತರು ನಾಡು ತುಮಕೂರಿನಲ್ಲಿ ಈ ಆಚರಣೆ ಕೇವಲ ಒಂದು ಹಬ್ಬವಾಗಿ ಉಳಿದಿಲ್ಲ; ಬದಲಾಗಿ ಇದೊಂದು ಬೃಹತ್ ಸಾಂಸ್ಕೃತಿಕ ಆಂದೋಲನವಾಗಿ, ಮೌಲ್ಯಗಳನ್ನು ಬಿತ್ತುವ ವೇದಿಕೆಯಾಗಿ ಮಾರ್ಪಟ್ಟಿದೆ.

ಬದ್ಗಾಮ್‌ ಎನ್‌ಕೌಂಟರ್‌ನಲ್ಲಿ ಸತ್ತ ಉಗ್ರನ ಗುರುತು ಪತ್ತೆ: ಲಷ್ಕರ್-ಎ-ತೊಯ್ಬಾ ಸದಸ್ಯ ಯಾಸಿರ್‌ ಹತನಾಗಿದ್ದು ಹೇಗೆ?

ಬದ್ಗಾಮ್‌ ಎನ್‌ಕೌಂಟರ್‌ನಲ್ಲಿ ಹತ ಉಗ್ರ ಪಾಕಿಸ್ತಾನದ ಯಾಸಿರ್‌

Budgam Encounter: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್‌ ಮತ್ತು ಸಿಆರ್‌ಪಿಎಫ್‌ ಜಂಟಿಯಾಗಿ ಸಡಸಿದ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಹತನಾದ ಉಗ್ರನನ್ನು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಸದಸ್ಯ ಯಾಸಿರ್‌ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ʼʼಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್‌ನಿಂದ ಹೊರ ತನ್ನಿʼʼ: ಶಿಕ್ಷಕರಿಗೆ ಮಹತ್ತರ ಜವಾಬ್ದಾರಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ

ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ: ಶಿಕ್ಷಕರಿಗೆ ಪ್ರಧಾನಿ ಮೋದಿ ಕರೆ

Teachers’ Day 2026: 'ʼಮಕ್ಕಳ ಜೀವನ ರೂಪಿಸುವಲ್ಲಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕುವ ಶಿಕ್ಷಕರು ದೇಶದ ನಿಜವಾದ ಶಕ್ತಿʼ' ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ರಾಷ್ಟ್ರೀಯ ಶಿಕ್ಷಕರ ದಿಣಾಚರಣೆಯ ಪ್ರಯುಕ್ತ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಪ್ರಶಂಸಿಸಿದರು.

Gold Price Today On September 5th 2026: ಆಭರಣ ಗ್ರಾಹಕರಿಗೆ ಕೊನೆಗೂ ಸಿಕ್ತು ಗುಡ್‌ನ್ಯೂಸ್‌; ಕೊಂಚ ಬ್ರೇಕ್‌ ಬಳಿಕ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಕೊಂಚ ಬ್ರೇಕ್‌ ಬಳಿಕ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold Price Today: ಸತತ 2 ದಿನಗಳ ಏರಿಕೆಯ ಬಳಿಕ ಶನಿವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 170 ರೂಪಾಯಿ ಕಡಿಮೆಯಾಗಿ 14,190 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 186 ರುಪಾಯಿ ಇಳಿಕೆಯಾಗಿ15,480 ರೂಪಾಯಿಗೆ ಬಂದಿದೆ.

ಕೃಷ್ಣ ಜನ್ಮಾಷ್ಟಮಿ ನಡುವೆ ರಾಜ್ಯದ ಹಲವೆಡೆ ಮಳೆಯ ಸಿಂಚನ; ಮನೆಯಿಂದ ಹೊರಗಿಳಿಯುವ ಮುನ್ನ ಹವಾಮಾನ ಮುನ್ಸೂಚನೆ ತಿಳಿಯಿರಿ

ಕೃಷ್ಣ ಜನ್ಮಾಷ್ಟಮಿ ನಡುವೆ ರಾಜ್ಯದ ಹಲವೆಡೆ ಮಳೆಯ ಸಿಂಚನ

Karnataka Weather: ಅಷ್ಟಮಿ ಸಂಭ್ರಮದ ಮಧ್ಯೆ ಶುಕ್ರವಾರವೂ ರಾಜ್ಯದ ವಿವಿಧ ಕಡೆಗಳಲ್ಲಿ ಮಳೆ ಸುರಿಯಲಿದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ.

ಸಹ ವಿದ್ಯಾರ್ಥಿ ಮೇಲೆ ಹಲ್ಲೆ: ನಟ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ಜಾಮೀನು ಮಂಜೂರು

ನಟ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ಜಾಮೀನು ಮಂಜೂರು

Actor Duniya Vijay Son Samrat Controversy: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಎಸಿಜೆಎಂ 6ನೇ ನ್ಯಾಯಾಲಯದ ಆದೇಶ ಹೊರಡಿಸಿದೆ.

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ರಿಲೀಫ್: ಅಮಾನತು ಆದೇಶಕ್ಕೆ ತಡೆ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರ ಅಮಾನತು ರದ್ದು

RSS Route March: ಕಳೆದ ವರ್ಷ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಾನತುಗೊಂಡ ಇಬ್ಬರು ಶಿಕ್ಷಕರಿಗೆ ರಿಲೀಫ್‌ ಸಿಕ್ಕಿದೆ. ರಾಜ್ಯದ ಸರ್ಕಾರದ ಅಮಾನತು ಆದೇಶಕ್ಕೆ ಕಲಬುರಗಿ ಕೆಎಟಿ ತಡೆ ನೀಡಿದೆ. ಆ ಮೂಲಕ ಯಾದಗಿರಿ ಜಿಲ್ಲೆಯ ಇಬ್ಬರು ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾ ಸಾಹೇಬ್ ದೇಶಮುಖ್ ಅವರಿಗೆ ರಿಲೀಫ್‌ ಸಿಕ್ಕಿದೆ.

Loading...