ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ramesh B

Senior Sub Editor

rameshballamule@gmail.com

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
Karnataka Weather: ಒಣಹವೆಯ ಮಧ್ಯೆಯೂ ಇಂದು ಈ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ

ಇಂದು ಈ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ

ಕರ್ನಾಟಕ ಹವಾಮಾನ ವರದಿ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಅದಾಗ್ಯೂ ಮಂಗಳವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ. ರಾಜ್ಯದಲ್ಲಿ ನಿಧಾನವಾಗಿ ಸೆಕೆಯ ವಾತಾವರಣ ಕಂಡು ಬರಲಿದೆ. ಜತೆಗೆ ರಾಜ್ಯಾದ್ಯಂತ ಬೆಳಗ್ಗೆ ಮತ್ತು ರಾತ್ರಿ ಚಳಿಯ ವಾತಾವರಣ ಇರಲಿದೆ.

Actor Darshan: ನವೆಂಬರ್‌ 10ಕ್ಕೆ ದರ್ಶನ್‌ ವಿಚಾರಣೆ ಮುಂದೂಡಿಕೆ

ನವೆಂಬರ್‌ 10ಕ್ಕೆ ದರ್ಶನ್‌ ವಿಚಾರಣೆ ಮುಂದೂಡಿಕೆ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಸೇರಿದಂತೆ ಆರೋಪಿಗಳ ವಿಚಾರಣೆಯನ್ನು 57ನೇ ಸೆಷನ್ ಕೋರ್ಟ್ ನವೆಂಬರ್‌ 10ಕ್ಕೆ ವಿಚಾರಣೆ ಮುಂದೂಡಿದೆ. ಜೈಲು ಸೇರಿರುವ ದರ್ಶನ್‌ ಸೇರಿದಂತೆ ಆರೋಪಿಗಳು ನವೆಂಬರ್‌ 3ರಂದು ಬೆಂಗಳೂರು 64ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾದರು.

Golden Chariot: ಚಕ್ರಗಳ ಮೇಲೆ ರಾಜ್ಯದ ಸಾಮ್ರಾಜ್ಯಗಳು; 6 ದಿನ ಹೋಗಿ ಅರಸರಾಗಿ ಬನ್ನಿ

ಗೋಲ್ಡನ್ ಚಾರಿಯಟ್‌ ಎಂಬ ಐಷಾರಾಮಿ ರೈಲಿನಲ್ಲಿ ಸುತ್ತಾಡಿ

Pravasi Prapancha: ದಕ್ಷಿಣ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತ, ಪ್ರವಾಸದಲ್ಲಿ ಅದರ ಸತ್ವವನ್ನು ಕಟ್ಟಿಕೊಡಲು ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್, ತನ್ನ ವೈಭವದ ಓಡಾಟವನ್ನು ಮತ್ತೆ ಆರಂಭಿಸಿದೆ. ಈ ಗೋಲ್ಡನ್ ಚಾರಿಯಟ್ನೊಂದಿಗೆ ಪ್ರವಾಸಕ್ಕೆ ಬರುವವರಿಗೆ ರಾಜ್ಯದ ಗೋಲ್ಡನ್ ಚರಿತ್ರೆಯ ಅನುಭವ ರೈಲಿನಲ್ಲಿಯೇ ರೀ ಓಪನ್ ಆಗಲಿದೆ. ಹೌದು, ಸುಂದರ ವಿನ್ಯಾಸದ ಈ ಚಾರಿಯಟ್ ಒಳಾಂಗಣವು ವಿಭಿನ್ನ ಬೋಗಿಗಳಲ್ಲಿ ಮತ್ತದೇ ವಿಭಿನ್ನ ರಾಜಮನೆತನದ ವೈಭೋಗವನ್ನು ಅನುಭವಕ್ಕೆ ತರಲಿದೆ.

CM Siddaramaiah: ಹೈಕಮಾಂಡ್ ನಿರ್ಧಾರವೇ ಅಂತಿಮ; ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಹೈಕಮಾಂಡ್ ನಿರ್ಧಾರವೇ ಅಂತಿಮ: ಸಿದ್ದರಾಮಯ್ಯ

''ಜನರ ಅಭಿಪ್ರಾಯವೇನೇ ಇದ್ದರೂ, ಹೈಕಮಾಂಡ್ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಈ ಬಗ್ಗೆ ಏನೂ ಹೇಳಿಲ್ಲ. ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನರ್‌ರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದುʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

Snake Bite: ಒಂದೇ ಮನೆಯ ಮೂವರು ಮಕ್ಕಳಿಗೆ ಕಡಿದ ವಿಷಪೂರಿತ ಹಾವು; ಪ್ರಾಣಾಪಾಯದಿಂದ ಕಾಪಾಡಿದ ನಾಟಿ ವೈದ್ಯ

ಒಂದೇ ಮನೆಯ ಮೂವರು ಮಕ್ಕಳಿಗೆ ಕಡಿದ ವಿಷಪೂರಿತ ಹಾವು

Dakshina Kannada News: ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳಿಗೆ ವಿಷಪೂರಿತ ಹಾವೊಂದು ಕಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ನಡೆದಿದೆ . ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಅವರಿಗೆ ವಿಷ ಪೂರಿತ ಕನ್ನಡಿ ಹಾವು ಕಡಿದಿದೆ. ಸಕಾಲದಲ್ಲಿ ನಾಟಿ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು; ತನಿಖೆಗೆ ಸಚಿವ ಈಶ್ವರ್‌ ಖಂಡ್ರೆ ಆದೇಶ

ಬೆಳಗಾವಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವನ್ನಪ್ಪಿವೆ. ಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ ಕನೆಕ್ಷನ್ ನೀಡಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಜಮೀನಿನ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದಲ್ಲಿ ರೈತ ಗಣಪತಿ ಸಾತೇರಿ ಗುರವ್ ಅವರನ್ನು ಅರಣ್ಯ ಇಲಾಖೆ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Kasa Suriyuva Habba: ಎಲ್ಲೆಂದರಲ್ಲಿ ಕಸ ಎಸೆಯುವವರ ವಿಡಿಯೊ ಕಳುಹಿಸಿ 250 ರೂ. ಗಳಿಸಿ; BSWMLನಿಂದ ಹೊಸ ಯೋಜನೆ

ಎಲ್ಲೆಂದರಲ್ಲಿ ಕಸ ಎಸೆಯುವವರ ವಿಡಿಯೊ ಕಳುಹಿಸಿ 250 ರೂ. ಗಳಿಸಿ

ಬೆಂಗಳೂರಿನಲ್ಲಿ ಬಿಗಡಾಯಿಸಿರುವ ಕಸದ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಕಠಿಣ ಕ್ರಮ ಕೈಗೊಂಡಿದೆ. ಕಸ ಸುರಿಯುವ ಹಬ್ಬ ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದೆ. ಅದರ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆಗಳ ಮುಂದೆ ಕಸ ಸುರಿದು, ದಂಡ ವಿಧಿಸುತ್ತಿದೆ. ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ದೃಶ್ಯವನ್ನು ಚಿತ್ರೀಕರಿಸಿ ಕಳುಹಿಸಿ ಕೊಟ್ಟವರಿಗೆ 250 ರೂ. ನೀಡುವುದಾಗಿ ಘೋಷಿಸಿದೆ.

Telangana Road Accident: ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ; ಬಸ್‌ಗೆ ಟ್ರಕ್‌ ಡಿಕ್ಕಿಯಾಗಿ 20 ಮಂದಿ ಸಾವು

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ; 20 ಮಂದಿ ಸಾವು

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಸೋಮವಾರ (ನವೆಂಬರ್‌ 3) ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿ, 8 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತಕ್ಕೀಡಾದ ಬಸ್‌ ತಂಡೂರ್‌ನಿಂದ ಹೈದರಾಬಾದ್‌ ಕಡೆಗೆ ತೆರಳುತ್ತಿತ್ತು.

Afghanistan Earthquake: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ; 7 ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ ಮತ್ತೊಂದು ಭೂಕಂಪ; 7 ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 7 ಮಂದಿ ಅಸುನೀಗಿ, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅಫ್ಘಾನಿಸ್ತಾನದ ಮಜಾರ್-ಎ ಷರೀಫ್ ನಗರದಲ್ಲಿ ಸೋಮವಾರ (ನವೆಂಬರ್‌ 3) ಮುಂಜಾನೆ ಭೂಮಿ ಕಂಪಿಸಿದೆ ಎಂದು ಮೂಲಗಳು ತಿಳಿಸಿವೆ. ಮುಂಜಾನೆ 1 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಮನೆಗಳು ನೆಲಕ್ಕುರುಳುವ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿವೆ.

Bengaluru Jala Mandali: ಶುದ್ಧ ನೀರಿನ ಘಟಕದಲ್ಲಿ ಏಕರೂಪ ದರ ಜಾರಿಗೆ ಜಲ ಮಂಡಳಿ ಚಿಂತನೆ

ನೀರಿನ ಘಟಕದಲ್ಲಿ ಏಕರೂಪ ದರ; ಜಲ ಮಂಡಳಿ ಚಿಂತನೆ

Bengaluru News: ಬೆಂಗಳೂರು ಜಲಮಂಡಳಿಯು ನಗರದಲ್ಲಿರುವ ಶುದ್ಧ ನೀರಿನ ಘಟಕಗಳಿಂದ ಕ್ಯೂ ಆರ್‌ಕೋಡ್ ಸ್ಕ್ಯಾನಿಂಗ್ ಮೂಲಕ ಅಥವಾ ಪ್ರೀಪೇಯ್ಡ್‌ ಕಾರ್ಡ್ ಮೂಲಕ ನೀರು ಪಡೆಯುವ ಹಾಗೂ ಏಕರೂಪ ದರ ನಿಗದಿ ಸಂಬಂಧ ಯೋಜನೆಯನ್ನು ರೂಪಿಸಿದೆ. ಬಿಬಿಎಂಪಿ ನಿರ್ವಹಣೆಯಲ್ಲಿದ್ದಾಗ ಏಕರೂಪದಲ್ಲಿ ಇರಲಿಲ್ಲ. ಕೆಲವು ಕಡೆ 20 ಲೀಟರ್‌ಗೆ 5 ರೂ., 10 ರೂ. ಇಲ್ಲವೇ 15 ರೂ. ಇತ್ತು. ಇದನ್ನು ತಪ್ಪಿಸಿ ಒಂದೇ ದರ ನಿಗದಿ ಮಾಡುವ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ.

Pushkar Fair: 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು; ವಿಮೆ ಹಣಕ್ಕಾಗಿ ಮೂಕ ಪ್ರಾಣಿಯ ಕೊಲೆ?

21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು

Pushkar Animal Fair in Rajasthan: ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಆಗಿ ಸಾವನ್ನಪ್ಪಿದ್ದು, ಪ್ರಾಣಿಪ್ರುಯರು ಆಘಾತ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್‌ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು.

Rajasthan Road Accident: ನಿಂತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು 15 ಮಂದಿ ಸಾವು; ರಾಜಸ್ಥಾನದಲ್ಲಿ ಘೋರ ಅವಘಡ

ನಿಂತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು 15 ಮಂದಿ ಸಾವು

Road Accident: ರಾಜಸ್ಥಾನದಲ್ಲಿ ನಿಂತಿದ್ದ ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದು ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ರಾಜಸ್ಥಾನದ ಫಲೋಡಿಯಲ್ಲಿ ನವೆಂಬರ್‌ 2ರಂದು ಈ ಅವಘಡ ನಡೆದಿದೆ. ಮೃತರು ಬಿಕಾನೇರ್‌ನ ಕೊಲಾಯತ್‌ಗೆ ಭೇಟಿ ನೀಡಿ ಜೋಧ್‌ಪುರದ ಸುರ್‌ಸಾಗರ್‌ಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ.

Rahul Gandhi: ಬಿಹಾರದಲ್ಲಿ ಹೆಚ್ಚಾಯ್ತು ಚುನಾವಣೆ ಕಾವು; ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಕೆರೆಗೆ ಜಿಗಿದು ಮೀನು ಹಿಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

Bihar Assembly Election 2025: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ನಾನಾ ಕಸರತ್ತಿನಲ್ಲಿ ನಿರತವಾಗಿವೆ. ಇದೀಗ ಬೇಗುಸರಾಯ್‌ನ ಕೊಳವೊಂದಕ್ಕೆ ಹಾರಿದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಮೀನು ಹಿಡಿದು ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಾಹುಲ್‌ ಗಾಂಧಿ ದೋಣಿಯಿಂದ ನೀರಿಗೆ ಜಿಗಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಬೆರಗುಗಣ್ಣನಿಂದ ನೋಡಿದರೆ, ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ನಡೆಯನ್ನು ಶ್ಲಾಘಿಸಿದ್ದಾರೆ.

ISRO: ಇಸ್ರೋದಿಂದ ಅತೀ ಹೆಚ್ಚು ಭಾರದ ಉಪಗ್ರಹ  ಯಶಸ್ವಿ ಉಡಾವಣೆ

ಇಸ್ರೋದಿಂದ ಅತೀ ಹೆಚ್ಚು ಭಾರದ ಉಪಗ್ರಹ ಯಶಸ್ವಿ ಉಡಾವಣೆ

Communication Satellite CMS-03: ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ನವೆಂಬರ್‌ 2ರಂದು ಇಸ್ರೋದ ಅತ್ಯಂತ ತೂಕದ ಎಂಎಸ್‌-03 ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು. ಅತ್ಯಂತ ಭಾರವಾದ ಸಂವಹನ ಉಪಗ್ರಹವಾದ ಸಿಎಂಎಸ್‌-03 ಹೊತ್ತ ಇಸ್ರೋ ಹೆವಿ-ಲಿಫ್ಟ್ ರಾಕೆಟ್, 'ಬಾಹುಬಲಿ' ಎಂದು ಕರೆಸಿಕೊಳ್ಳುವ ಎಲ್‌ವಿಎಂ3-ಎಂ5 ಶ್ರೀಹರಿಕೋಟದ ಬಾಹ್ಯಾಕಾಶ ನಿಲ್ದಾಣದಿಂದ ನಭಕ್ಕೆ ಚಿಮ್ಮಿದೆ. ಎಲ್‌ವಿಎಂ3-ಎಂ5 ರಾಕೆಟ್‌ನಲ್ಲಿ ಸುಮಾರು 16-20 ನಿಮಿಷಗಳ ಹಾರಾಟ ನಡೆಸಿದ ನಂತರ ಉಪಗ್ರಹವು ಸುಮಾರು 180 ಕಿ.ಮೀ ಎತ್ತರವನ್ನು ತಲುಪಿ ಬೇರ್ಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

King Teaser Unveiled: ಹುಟ್ಟುಹಬ್ಬದಂದೇ ರಕ್ತದ ಹೊಳೆ ಹರಿಸಿದ ಶಾರುಖ್‌ ಖಾನ್‌; ʼಕಿಂಗ್‌ʼ ಚಿತ್ರದ ಟೀಸರ್‌ ಔಟ್‌

ಶಾರುಖ್‌ ಖಾನ್‌-ದೀಪಿಕಾ ಜೋಡಿಯ ʼಕಿಂಗ್‌ʼ ಚಿತ್ರದ ಟೀಸರ್‌ ಔಟ್‌

Shah Rukh Khan Birthday: ನವೆಂಬರ್‌ 2ರಂದು ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರಿಗೆ ʼಕಿಂಗ್‌' ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಶಾರುಖ್‌ ಖಾನ್‌ ನಟನೆಯ ʼಕಿಂಗ್‌ʼ ಚಿತ್ರದ ಟೀಸರ್‌ ಹೊರ ಬಿದ್ದಿದೆ. ಸಿನಿಮಾದಲ್ಲಿ ಶಾರುಖ್‌ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದು, ತೆರೆಮೇಲೆ ನೆತ್ತರ ಹೊಳೆಯನ್ನೇ ಹರಿಸಿದ್ದಾರೆ. ಆ ಮೂಲಕ ಇದುವರೆಗೆ ನೋಡಿರದ ಶಾರುಖ್‌ ಖಾನ್‌ ಅವರನ್ನು ನೀವು ತೆರೆಮೇಲೆ ನೋಡಲಿದ್ದೀರಿ.

Tragic Drowning: ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಕಣ್ಣೂರಿನಲ್ಲಿ ಸಮುದ್ರಪಾಲು

ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಕಣ್ಣೂರಿನಲ್ಲಿ ಸಮುದ್ರಪಾಲು

ಕೇರಳದ ಕಣ್ಣೂರಿನ ಪಯ್ಯಂಬಲಂ ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ನವೆಂಬರ್‌ 2ರಂದು ನಡೆದಿದೆ. ಮೃತರನ್ನು ಅಫ್ನಾನ್‌, ರಹಾನುದ್ದೀನ್‌ ಮತ್ತು ಅಫ್ರಾಸ್‌ ಎಂದು ಗುರುತಿಸಲಾಗಿದೆ. ಪ್ರವಾಸ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಾಗ ಬಲವಾದ ಅಲೆ ಬಂದು ಮೂವರು ಮುಳು ಹೋಗಿ ಅಸುನೀಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

Srikakulam Stampede: ಇದು ನನ್ನ ಖಾಸಗಿ ಜಾಗ, ನಾನ್ಯಾಕೆ ಪೊಲೀಸರಿಗೆ ತಿಳಿಸಬೇಕು? ಆಂಧ್ರ ಪ್ರದೇಶ ಕಾಲ್ತುಳಿತ ಬಗ್ಗೆ ಅರ್ಚಕ ಹೇಳಿದ್ದೇನು?

ಆಂಧ್ರ ಪ್ರದೇಶ ಕಾಲ್ತುಳಿತ ಬಗ್ಗೆ ಅರ್ಚಕ ಹೇಳಿದ್ದೇನು?

Hari Mukunda Panda: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಭಾರಿ ಕಾಲ್ತುಳಿತದಲ್ಲಿ ಮಕ್ಕಳು, ಮಹಿಳೆಯರು ಸೇರಿ 9 ಮಂದಿ ಮಂದಿ ಬಲಿಯಾಗಿದ್ದಾರೆ. ಇದೀಗ ದುರಂತದ ಬಗ್ಗೆ ದೇವಸ್ಥಾನ ನಿರ್ಮಿಸಿರುವ ಹರಿ ಮುಕುಂದ ಪಾಂಡ ಪ್ರತಿಕ್ರಿಯಿಸಿದ್ದಾರೆ. ʼʼನಾನು ನನ್ನ ಖಾಸಗಿ ಸ್ಥಳದಲ್ಲಿ ದೇವಸ್ಥಾನ ರಚಿಸಿದ್ದೇನೆ. ಏಕಾದಶಿ ಪೂಜೆ ನಡೆಸುವ ಬಗ್ಗೆ ನಾನ್ಯಾಕೆ ಪೊಲೀಸ್‌ಗಾಗಲಿ, ಸ್ಥಳೀಯಾಡಳಿತಕ್ಕಾಗಲೀ ತಿಳಿಸಬೇಕಿತ್ತು?ʼʼ ಎಂದು ಕೇಳಿದ್ದಾರೆ.

Yatharva Yash: ಹಾವನ್ನು ಕೈಯಲ್ಲಿ ಹಿಡಿದ ಯಶ್‌ ಮಗ ಯಥರ್ವ್‌; ವಿಡಿಯೊ ಹಂಚಿಕೊಂಡ ರಾಧಿಕಾ ಪಂಡಿತ್‌

ಪ್ರಾಣಿಗಳ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಂಡ ಯಶ್‌ ಪುತ್ರ

Yash: ಸ್ಯಾಂಡಲ್‌ವುಡ್‌ ಕ್ಯೂಟ್‌ ದಂಪತಿ ಯಶ್‌ ಮತ್ತು ರಾಧಿಕಾ ಪಂಡಿತ್‌ ಇತ್ತೀಚೆಗೆ ತಮ್ಮ ಮಗ ಯಥರ್ವ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಬಾರಿ ಅತನ 6ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಯಥರ್ವ್‌ನ ಇಚ್ಛೆಯಂತೆ ಕಾಡಿನ ಥೀಮ್‌ನಲ್ಲಿ ಇಡೀ ಸಮಾರಂಭ ನಡೆದಿದೆ. ಜತೆಗೆ ನಿಜವಾದ ಪ್ರಾಣಿಗಳನ್ನೂ ಕರೆತರಲಾಗಿತ್ತು.

50 ಸೆಕೆಂಡ್‌ನ ಜಾಹೀರಾತಿಗೆ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆದ ಸ್ಟಾರ್‌ ನಟಿ

50 ಸೆಕೆಂಡ್‌ನ ಜಾಹೀರಾತಿಗೆ 5 ಕೋಟಿ ರೂ. ಸಂಭಾವನೆ ಪಡೆದ ನಟಿ

ಸದ್ಯ ಸ್ಟಾರ್‌ ಕಲಾವಿದರು ಚಿತ್ರಗಳ ಜತೆಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಕೇವಲ ಸೆಕೆಂಡ್‌ಗಳ ಕಾಲ ತೆರೆಮೇಲೆ ಮಿಂಚಿ ಮರೆಯಾಗಲು ಕೈ ತುಂಬ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತದ ಜನಪ್ರಿಯ ತಾರೆ, ಸ್ಟಾರ್‌ ನಟಿಯೊಬ್ಬರಿಗೆ 50 ಸೆಕೆಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಬರೋಬ್ಬರಿ 5 ಕೋಟಿ ರೂ. ಸಂಭಾವನೆ ನೀಡಲಾಗಿದೆಯಂತೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.

Major Stampedes This Year: ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ; ಈ ವರ್ಷ ದೇಶದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತ ದುರಂತಗಳಿವು

ಈ ವರ್ಷ ದೇಶದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತ ದುರಂತಗಳಿವು

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ದೇವಸ್ಥಾನದಲ್ಲಿ ನವೆಂಬರ್‌ 1ರಂದು ನಡೆದ ಕಾಲ್ತುಳಿತ ದುರಂತ 12 ಮಂದಿಯ ಸಾವಿಗೆ ಕಾರಣವಾಗಿದೆ. ಏಕಾದಶಿ ಹಿನ್ನೆಲೆಯಲ್ಲಿ ಅದಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ದೇವಸ್ಥಾನದ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪೂಜಾ ಸಾಮಗ್ರಿ, ಚಪ್ಪಲಿ, ಮೃತ ಕುಟುಂಬಗಳ ಆಕ್ರಂದನ, ಗಾಯಗೊಂಡವರ ಕಣ್ಣೀರು ದುರಂತದ ಚಿತ್ರಣವನ್ನು ಸಾರಿ ಹೇಳುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಈ ವರ್ಷ ಇದು ಸೇರಿ ಅನೇಕ ಕಾಲ್ತುಳಿತ ದುರಂತ ಸಂಭವಿಸಿದೆ. ಆ ಕುರಿತಾದ ವಿವರ ಇಲ್ಲಿದೆ:

Andhra Pradesh Stampede: 12 ಜನರನ್ನು ಬಲಿ ಪಡೆದ ಆಂಧ್ರ ಪ್ರದೇಶ ಕಾಲ್ತುಳಿತಕ್ಕೆ ಕಾರಣವೇನು? ಇಲ್ಲಿದೆ ಇಂಚಿಂಚು ಮಾಹಿತಿ

12 ಜನರನ್ನು ಬಲಿ ಪಡೆದ ಕಾಶಿಬುಗ್ಗ ಕಾಲ್ತುಳಿತಕ್ಕೆ ಕಾರಣವೇನು?

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಶನಿವಾರ ಮತ್ತು ಏಕಾದಶಿ ಏಕಕಾಲಕ್ಕೆ ಬಂದಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ನಿರೀಕ್ಷೆಗಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದು ಅಪಘಾತಕ್ಕೆ ಕಾರಣವಾಯ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಏಕಾದಶಿಯಂದು ಜನ ಸಂದಣಿ ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಿರಲಿಲ್ಲ. ಹೀಗಾಗಿ ಭಕ್ತರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ

ನಿಶ್ವಿತಾರ್ಥಕ್ಕೂ ಮುನ್ನ ವಧುವಿನ ತಂದೆಯೊಂದಿಗೆ ಓಡಿಹೋದ ವರನ ತಾಯಿ; ಹೀಗೊಂದು ಅಂಕಲ್‌-ಆಂಟಿ ಲವ್‌ಸ್ಟೋರಿ!

ವಧುವಿನ ತಂದೆಯೊಂದಿಗೆ ಓಡಿಹೋದ ವರನ ತಾಯಿ

Viral News: ಮಕ್ಕಳ ನಿಶ್ಚಿತಾರ್ಥಕ್ಕೂ ಮುನ್ನ ವಧುವಿನ ತಂದೆ ಮತ್ತು ವರನ ತಾಯಿ ಓಡಿ ಹೋಗಿರುವ ಘಟನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. 8 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಈ ಕಿಲಾಡಿ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಮಹಿಳೆ ಪ್ರಿಯತಮನನ್ನು ಬಿಟ್ಟು ಮನೆಗೆ ಹೋಗಲು ನಿರಾಕರಿಸಿದ್ದಾಳೆ. 7 ದಿನಗಳ ಕಾಲ ನಾಪತ್ತೆಯಾಗಿ ಇದೀಗ ಉಂತ್ವಾಸ ಗ್ರಾಮದ 45 ವರ್ಷದ ಮಹಿಳೆ ತನ್ನ ಪ್ರಿಯತಮನ ನಿವಾಸಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪುತ್ರ ನೀಡಿದ ನಾಪತ್ತೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Rukmini Vasanth: ರುಕ್ಮಿಣಿ ವಸಂತ್‌ಗೆ ಅವಕಾಶಗಳ ಬಾಗಿಲು ತೆರೆದ ʼಕಾಂತಾರ ಚಾಪ್ಟರ್‌ 1'; ಕನ್ನಡತಿ ಈಗ ಪರಭಾಷೆಯಲ್ಲೂ ಬ್ಯುಸಿ

ಕನ್ನಡತಿ ರುಕ್ಮಿಣಿ ವಸಂತ್‌ ಈಗ ಪರಭಾಷೆಯಲ್ಲೂ ಬ್ಯುಸಿ

ಸದ್ಯ ಪರಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡ ಕಲಾವಿದರ ಪೈಕಿ ರುಕ್ಮಿಣಿ ವಸಂತ್‌ ಕೂಡ ಒಬ್ಬರು. ಅದರಲ್ಲಿಯೂ ಇತ್ತೀಚೆಗೆ ರಿಲೀಸ್‌ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ʼಕಾಂತಾರ ಚಾಪ್ಟರ್‌ 1' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ಯಾನ್‌ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದ ರುಕ್ಮಿಣಿ ಅವರ ರಾಜಕುಮಾರಿ ಕನಕವತಿ ಪಾತ್ರ ರಿಷಬ್‌ ಶೆಟ್ಟಿ ಅವರ ಬೆರ್ಮೆ ಪಾತ್ರದಷ್ಟೇ ಜನಪ್ರಿಯವಾಗಿದೆ. ನಾಯಕನಿಗೆ ಸರಿಸಮನಾಗಿ ನಿಲ್ಲುವ ನಾಯಕಿಯಾಗಿ ಅವರು ಕಾಣಿಸಿಕೊಂಡ ರೀತಿಗೆ, ಪವರ್‌ಫುಲ್‌ ನಟನೆಗೆ ನೋಡುಗರು ಫಿದಾ ಆಗಿದ್ದಾರೆ. ಇದರೊಂದಿಗೆ ಅವರಿಗೆ ವಿವಿಧ ಚಿತ್ರರಂಗಗಳಿಂದ ಅವಕಾಶ ಹರಿದು ಬರುತ್ತಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ʼಕಾಂತಾರ ಚಾಪ್ಟರ್‌ 1'; ಮೋಡಿ ಮಾಡಿದ ಇಂಗ್ಲಿಷ್‌, ಸ್ಪಾನಿಷ್‌ ವರ್ಷನ್‌

ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆದ ʼಕಾಂತಾರ ಚಾಪ್ಟರ್‌ 1'

Kantara Chapter 1 Box Office Collection: ಅಕ್ಟೋಬರ್‌ 2ರಂದು ತೆರೆ ಕಂಡ ಹೊಂಬಾಳೆ ಫಿಲ್ಮ್ಸ್‌-ರಿಷಬ್‌ ಶೆಟ್ಟಿ ಕಾಂಬಿನೇಷನ್‌ನ ʼಕಾಂತಾರ ಚಾಪ್ಟರ್‌ 1' ಕರ್ನಾಟಕವೊಂದರಲ್ಲೇ 268 ಕೋಟಿ ರೂ. ಗಳಿಸಿದೆ. ಕರ್ನಾಟಕದಲ್ಲಿ 250 ಕೋಟಿ ರೂ. ಗಡಿ ದಾಟಿದ ಮೊದಲ ಕನ್ನಡ ಚಲನಚಿತ್ರ 'ಕಾಂತಾರ ಚಾಪ್ಟರ್‌ 1' ಎನ್ನುವುದು ವಿಶೇಷ. ʼಕಾಂತಾರ ಚಾಪ್ಟರ್‌ 1' ತೆರೆಕಂಡು 29 ದಿನ ಕಳೆದಿದ್ದು, ಜಾಗತಿಕವಾಗಿ 867 ಕೋಟಿ ರೂ. ಬಾಚಿಕೊಂಡು ಮುನ್ನಡೆಯುತ್ತಿದೆ. ಆ ಮೂಲಕ 2025ರಲ್ಲಿ ಅತೀ ಹೆಚ್ಚು ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ರಿಷಬ್‌ ಶೆಟ್ಟಿ ನಟನೆಯ ಜತೆಗೆ ನಿರ್ದೇಶನದಲ್ಲೂ ಗಮನ ಸೆಳೆದಿದ್ದಾರೆ.

Loading...