ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಮರುಕಳಿಸಿದ ಇತಿಹಾಸ; 2018ರಲ್ಲಿ ಯಡಿಯೂರಪ್ಪ ಎದುರಿಸಿದ ಸ್ಥಿತಿ ಈಗ ತಮಿಳುನಾಡಿನಲ್ಲಿ ದಳಪತಿ ವಿಜಯ್‌ಗೂ ಬಂತಾ? ಅಂದು ಕರ್ನಾಟಕ ರಾಜಕೀಯದಲ್ಲಿ ಆಗಿದ್ದೇನು?

2018ರ ಕರ್ನಾಟಕದ ಸ್ಥಿತಿ ತಮಿಳುನಾಡಲ್ಲೂ ನಿರ್ಮಾಣವಾಗುತ್ತ?

TVK: ತಮಿಳುನಾಡು ರಾಜಕೀಯದಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಬುಧವಾರ (ಮೇ 6) ದಳಪತಿ ವಿಜಯ್‌ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು. ಈ ವೇಳೆ ಅವರು ಐವರು ಕಾಂಗ್ರೆಸ್‌ ಶಾಸಕರು ಸೇರಿ ಒಟ್ಟು 112 ಶಾಸಕರ ಬೆಂಬಲವಿರುವುದಾಗಿ ತಿಳಿಸಿದ್ದರು. ಆದರೆ ರಾಜ್ಯಪಾಲರು 118 ಶಾಸಕರ ಪಟ್ಟಿಯ ಜತೆಗೆ ಮರಲಿ ಬನ್ನಿ ಎಂದು ಸೂಚಿಸಿದ್ದು, ಮುಂದೇನಾಗಲಿದೆ ಎನ್ನುವ ಕುತೂಹಲ ಮೂಡಿದೆ.

ಮಹಿಳೆಯರ ಕುಂಕುಮ ಭಾಗ್ಯ ಅಳಿಸಿದ ಉಗ್ರರಿಗೆ ಆಪರೇಷನ್‌ ಸಿಂದೂರ್‌ ಮೂಲಕ ದಿಟ್ಟ ಉತ್ತರ; ಕಾರ್ಯಾಚರಣೆಗೆ ಈ ಹೆಸರಿಟ್ಟಿದ್ದು ಯಾರು, ಯಾಕೆ? ಇದರ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ

ಕುಂಕುಮ ಭಾಗ್ಯ ಅಳಿಸಿದ ಉಗ್ರರಿಗೆ ಆಪರೇಷನ್‌ ಸಿಂದೂರ್‌ ಮೂಲಕ ದಿಟ್ಟ ಉತ್ತರ

One Year Of Operation Sindoor: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣಗೆ 1 ವರ್ಷ ತುಂಬಿದೆ. ಭಾರತದ ಹೊಡೆತಕ್ಕೆ ಸಿಲುಕಿ ತತ್ತರಿಸಿದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾದರೆ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್‌ ಸಿಂದೂರ್‌ ಎಂದು ಹೆಸರಿಟ್ಟಿದ್ದು ಏಕೆ? ಎನ್ನುವ ವಿವರ ಇಲ್ಲಿದೆ.

ನಾಟಕೀಯ ಬೆಳವಣಿಗೆ ಬಳಿಕ ಕೊನೆಗೂ ಶೃಂಗೇರಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಜೀವರಾಜ್; ಜರ್ನಿ ಹೇಗಿತ್ತು?

ಶೃಂಗೇರಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಜೀವರಾಜ್

Sringeri MLA Row: ಶೃಂಗೇರಿ ಶಾಸಕರಾಗಿ ಘೋಷಿಸಲ್ಪಟ್ಟ ಬಿಜೆಪಿಯ ಡಿ.ಎನ್‌. ಜೀವರಾಜ್‌ ವಿಧಾನಸಭೆ ಚುನಾವಣೆ ನಡೆದು ಸುಮಾರು ಎರಡೂವರೆ ವರ್ಷ ಕಳೆದು ಇದೀಗ ಪ್ರಮಾಣ ವಚನ ಸ್ವೀಕರಿಸಿದರು. ಜೀವರಾಜ್ ಬುಧವಾರ (ಮೇ 6) ಶೃಂಗೇರಿ ಶಾರದಾಂಬೆ ಹೆಸರಲ್ಲಿ ವಿಧಾನ ಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯದ ಮೂವರು ಹಿರಿಯ ಐಪಿಎಸ್‌, ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಮೂವರು ಹಿರಿಯ ಐಪಿಎಸ್‌, ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

Karnataka Governmnet: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ನಾಲ್ವರು ಐಎಎಸ್‌ ಮತ್ತು ಮೂವರು ಐಪಿಎಸ್ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಚೇತನ್ ಸಿಂಗ್ ರಾಥೋಡ್, ಸಂದೀಪ್ ಪಾಟೀಲ್, ನಿತೀಶ್‌ ಕೆ., ಮುಹಮ್ಮದ್‌ ಇಕ್ರಾಮುಲ್ಲಾ ಶರೀಫ್‌, ಡಾ. ಚೇತನ್ ಸಿಂಗ್ ರಾಥೋಡ್, ಸಂದೀಪ್ ಪಾಟೀಲ್ ಮತ್ತು ಅನುಪಮ್ ಅಗರ್ವಾಲ್ ವರ್ಗಾವಣೆಗೊಂಡ ಅಧಿಕಾರಿಗಳು.

ತುಮಕೂರಲ್ಲಿ ಲವ್‌, ಮ್ಯಾರೇಜ್‌, ದೋಖಾ ಪ್ರಕರಣ; ಗರ್ಭಿಣಿ ಪತ್ನಿಯನ್ನು ಬಿಟ್ಟು ಮತ್ತೊಂದು ಮದುವೆಗೆ ಮುಂದಾದ ಪತಿ

ಗರ್ಭಿಣಿ ಪತ್ನಿಯನ್ನು ಬಿಟ್ಟು ಮತ್ತೊಂದು ಮದುವೆಗೆ ಮುಂದಾದ ಖತರ್ನಾಕ್‌ ಪತಿ

Tumkur News: ಗರ್ಭಿಣಿ ಪತ್ನಿಯನ್ನು ಬಿಟ್ಟು ಪತಿ ಮತ್ತೊಂದು ಮದುವೆಯಾಗಲು ಹೊರಟು ಸಿಕ್ಕಿಬಿದ್ದಿರುವ ಘಟನ ತಮಕೂರಿನಲ್ಲಿ ನಡೆದಿದೆ. ತುಮಕೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿರುವ ಸಂತ್ರಸ್ತೆ ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆಯ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ವಿಜಯಪುರದಲ್ಲಿ 3 ವರ್ಷದ ಬಾಲಕ ಮೇಲೆ ದಾಳಿ ಮಾಡಿ 30 ಮೀಟರ್‌ ದೂರ ಎಳೆದೊಯ್ದ ಬೀದಿ ನಾಯಿ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

3 ವರ್ಷದ ಬಾಲಕನನ್ನು 30 ಮೀಟರ್‌ ದೂರ ಎಳೆದೊಯ್ದ ಬೀದಿ ನಾಯಿ

Stray Dog Attacks: ವಿಜಯಪುರದಲ್ಲಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಘಟನೆಯ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಬಾಲಕನ ಮೇಲೆ ಬೀದಿ ನಾಯಿ ಆಕ್ರಮಣ ಮಾಡುತ್ತಿರುವುದು ಕಂಡು ಬಂದಿದೆ.

ತಿಂಗಳ ಅಂತರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಪ್ರಧಾನಿ ಮೋದಿ; ಮೇ 10ರಂದು ಬೆಂಗಳೂರಿಗೆ ಭೇಟಿ

ಮೇ 10ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ

Narendra Modi: ಕಳೆದ ತಿಂಗಳು ಮಂಡ್ಯ ಜಿಲ್ಲೆಗೆ ಆಗಮಿಸಿ ಆದಿ ಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರಮೈಕ್ಯ ಮಂದಿರವನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ತಿಂಗಳ ಅಂತರದಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೇ 10ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Sirsi-Haveri Road: ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಸಾವಿರಾರು ಸಾರ್ವಜನಿಕರು; ಶಿರಸಿ-ಹಾವೇರಿ ಹೈವೆ ಬಂದ್‌: ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್‌ ಜಾಮ್‌

ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಜನ; ಶಿರಸಿ-ಹಾವೇರಿ ಹೈವೇ ಬಂದ್‌

Sirsi News: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅವ್ಯಸ್ಥೆಯಿಂದ ರೋಸಿ ಹೋದ ಸಾವಿರಾರು ಮಂದಿ ಮಂಗಳವಾರ (ಮೇ 5) ಶಿರಸಿಯ ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕಿಲೋ ಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡು ಬಂದಿದ್ದು ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು.

Gold Price Today On 5th May 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಭಾರಿ ಇಳಿಕೆ

ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

Gold Silver Rate: ಇಂದು ಚಿನ್ನದ ದರ ಇಳಿಕೆಯಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 40 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 13,675 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 44 ರುಪಾಯಿ ಅಗ್ಗವಾಗಿದ್ದು, 14,918 ರುಪಾಯಿಗೆ ಬಂದು ತಲುಪಿದೆ.

ʼʼಗಂಗಾ ನದಿ ಹರಿಯುವ ರಾಜ್ಯಗಳಲ್ಲೆಲ್ಲ ಬಿಜೆಪಿ ಸರ್ಕಾರʼʼ: ವಿಜಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಸಾಂಪ್ರದಾಯಿಕ ಬೆಂಗಾಳಿ ಉಡುಗೆ ತೊಟ್ಟು ಗಮನ ಸೆಳೆದ ಮೋದಿ

PM Narendra Modi: ದೇಶದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜಯೋತ್ಸವ ಭಾಷಣ ಮಾಡಿದರು. ವಿಶೇಷ ಉಡುಗೆ ತೊಟ್ಟು ಅವರು ದೆಹಲಿಯ ಬಿಜೆಪಿ ಕಚೇರಿಗೆ ಮೋದಿ ಆಗಮಿಸಿದರು. ಈ ವೇಳೆ ಅವರು ತೊಟ್ಟ ಉಡುಗೆ ಗಮನ ಸೆಳೆಯಿತು. ಬೆಂಗಾಳಿ ಶೈಲಿಯಲ್ಲಿ ಧೋತಿ-ಕುರ್ತಾ ಧರಿಸಿ ಪಶ್ಚಿಮ ಬಂಗಾಳ ಜನತೆಗೆ ಪ್ರಬಲ ರಾಜಕೀಯ ಸಂದೇಶ ಸಾರಿದರು. ಜತೆಗೆ ಬಿಜೆಪಿ

ರಾಜಕೀಯ ಗುರು ಮಮತಾ ಬ್ಯಾನರ್ಜಿ ವಿರುದ್ಧವೇ ತೊಡೆ ತಟ್ಟಿದ ಸುವೇಂದು ಅಧಿಕಾರಿ; ಟಿಎಂಸಿ ಭದ್ರಕೋಟೆಯನ್ನು ಬಿಜೆಪಿ ನಾಯಕ ಒಡೆದಿದ್ದು ಹೇಗೆ? ಹೋರಾಟದ ಹಾದಿ ಹೇಗಿತ್ತು?

ಮಮತಾ ಬ್ಯಾನರ್ಜಿ ವಿರುದ್ಧವೇ ತೊಡೆ ತಟ್ಟಿದ ಸುವೇಂದು ಅಧಿಕಾರಿ

Suvendu Adhikari: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, 293 ಸ್ಥಾನಗಳ ಪೈಕಿ ಬಿಜೆಪಿ 200ಕ್ಕಿಂತ ಅಧಿಕ ಕಡೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಬಿಜೆಪಿ ಇತಿಹಾಸ ರಚಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವತ್ತ ದಾಪುಗಾಲು ಇಟ್ಟಿದೆ. ಹಾಗಾದರೆ ಯಾರು ಈ ಸುವೇಂದು ಅಧಿಕಾರಿ? ಅವರ ಹೋರಾಟದ ಹಾದಿ ಹೇಗಿತ್ತು? ಇಲ್ಲಿದೆ ವಿವರ.

ಮದುಮಗಳಿಗೆ ಚಿನ್ನದ ನಾಣ್ಯ-ರೇಷ್ಮೆ ಸೀರೆ, ಪ್ರತಿ ಮಹಿಳೆಗೆ 2,500 ರುಪಾಯಿ ನಗದು, ನಿರುದ್ಯೋಗ ಭತ್ಯೆ; ಟಿವಿಕೆ ಗೆಲುವಿಗೆ ಪ್ರಣಾಳಿಕೆ ಕಾರಣವಾಗಿದ್ದೇಗೆ?

ಟಿವಿಕೆ ಗೆಲುವಿಗೆ ಪ್ರಧಾನ ಪಾತ್ರ ವಹಿಸಿದ ಪ್ರಣಾಳಿಕೆ

TVK Manifesto: ರಾಷ್ಟ್ರ ರಾಜಕೀಯದಲ್ಲೇ ಹೊಸದೊಂದು ಇತಿಹಾಸವನ್ನು ತಮಿಳುನಾಡು ಬರೆದಿದೆ. ಸದಾ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುತ್ತ ಬಂದಿರುವ ತಮಿಳುನಾಡಿನಲ್ಲಿ ಇದೀಗ ನೂತನ ರಾಜಕೀಯ ಅಧ್ಯಾಯ ಆರಂಭವಾಗಿದೆ. ಕಾಲಿವುಡ್‌ನ ಸೂಪರ್‌ ಸ್ಟಾರ್‌ ಆಗಿ ಮೆರೆದು ರಾಜಕೀಯ ಪ್ರವೇಶಿಸಿದ ವಿಜಯ್‌ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. 2024ರಲ್ಲಿ ವಿಜಯ್‌ ಹುಟ್ಟು ಹಾಕಿದ ತಮಿಳಗ ವೆಟ್ರಿ ಕಳಗಂ (TVK) ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 234 ಕ್ಷೇತ್ರಗಳ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್‌ ನಂಬರ್‌ 118.

ತಮಿಳುನಾಡು ರಾಜಕೀಯವನ್ನೇ ತಿದ್ದಿ ಬರೆದ ಟಿವಿಕೆ; ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್‌

ತಮಿಳುನಾಡು ರಾಜಕೀಯವನ್ನೇ ತಿದ್ದಿ ಬರೆದ ಟಿವಿಕೆ

Vijay: ಕಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್‌ ಆಗಿ ಮೆರೆದು ದಿಢೀರ್‌ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮ್ಮಿಕ್ಕಿ ಟಿವಿಕೆ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದ್ದ ದಳಪತಿ ವಿಜಯ್‌ ಇದೀಗ ತಮಿಳುನಾಡಿನಲ್ಲಿ ಮ್ಯಾಜಿಕ್‌ ಮಾಡಿದ್ದಾರೆ. ಎಲ್ಲರ ಊಹೆಯನ್ನೂ ತಲೆಕೆಳಗಾಗಿಸಿ ಟಿವಿಕೆ ಇದೀಗ ಸರ್ಕಾರ ರಚನೆಯತ್ತ ಸಾಗುತ್ತಿದೆ. ಈಗಾಗಲೇ ಟಿವಿಕೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Keralam Election Results 2026: ಕೇರಳಂನಲ್ಲಿ ಎಲ್‌ಡಿಎಫ್‌ನ ಕೆಂಪು ಕೋಟೆ ಒಡೆದು ಅಧಿಕಾರದತ್ತ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌: ಸಿಎಂ ಪಿಣರಾಯಿ ವಿಜಯನ್‌ಗೆ ಭಾರಿ ಮುಖಭಂಗ

ಕೇರಳಂನಲ್ಲಿ ಅಧಿಕಾರದತ್ತ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌

Assembly Election Result 2026: ಎಕ್ಸಿಟ್‌ ಪೋಲ್‌ ವರದಿಯಂತೆ ಕೇರಳಂನಲ್ಲಿ ಎಡಪಕ್ಷ ನೇತೃತ್ವದ ಎಲ್‌ಡಿಎಫ್‌ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರ್ಕಾರ ರಚನೆಯತ್ತ ಮುನ್ನಡೆಯುತ್ತಿದೆ. ಈಗ ಬಂದಿರುವ ಪ್ರಕಾರ ಯುಡಿಎಫ್‌ 92 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎಲ್‌ಡಿಎಫ್‌ 46 ಕಡೆಗಳಿಗೆ ಸೀಮಿತವಾಗಿದೆ. ಇನ್ನು ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುಂದಿದೆ.

ಚೊಚ್ಚಲ ಪ್ರಯತ್ನದಲ್ಲೇ ತಮಿಳುನಾಡಿನಲ್ಲಿ ದಳಪತಿ ವಿಜಯ್‌ ಕಮಾಲ್;‌ ಟಿವಿಕೆಗೆ ಭಾರಿ ಮುನ್ನಡೆ

ಚೊಚ್ಚಲ ಪ್ರಯತ್ನದಲ್ಲೇ ತಮಿಳುನಾಡಿನಲ್ಲಿ ದಳಪತಿ ವಿಜಯ್‌ ಕಮಾಲ್

Assembly Election Result 2026: ಭಾರಿ ಕುತೂಹಲ ಕೆರಳಿಸಿದ ಪಂಚ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರ ಬೀಳುತ್ತಿದೆ. ಬಹುತೇಕ ಕಡೆಗಳಲ್ಲಿ ಎಕ್ಸಿಟ್‌ ಪೋಲ್‌ ವರದಿಯಂತೆ ಫಲಿತಾಂಶ ಬರುತ್ತಿದ್ದು, ತಮಿಳುನಾಡಿನಲ್ಲಿ ಮಾತ್ರ ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಆರಂಭಿಕ ಟ್ರೆಂಡ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೇರಳಂನಲ್ಲಿ ದೇಶದ ಕೊನೆಯ ಎಡರಂಗ ಸರ್ಕಾರವೂ ಪತನ? ನಾಳೆ ಹೊರ ಬೀಳಲಿದೆ ಫಲಿತಾಂಶ

ದೇಶದ ಕೊನೆಯ ಎಡರಂಗ ಸರ್ಕಾರ ಕೇರಳಂನಲ್ಲಿ ನಾಳೆ ಪತನವಾಗುತ್ತ?

Keralam Assembly Elections: ಬಹುನಿರೀಕ್ಷಿತ ಪಂಚ ವಿಧಾನಸಭೆ ಚುನಾವಣೆಗಳಫಲಿತಾಂಶ ಮೇ 4ರಂದು ಘೋಷಭೆಯಾಗಲಿದ್ದು, ಕೇರಳಂನಲ್ಲಿ ಯಾರು ಸರ್ಕಾರ ರಚಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. 2 ಅವಧಿಯಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್‌ ಸೋತು ಯುಡಿಎಫ್‌ ಸರ್ಕಾರ ರಚಿಸಲಿದೆ ಎನುವ ಲೆಕ್ಕಾಚಾರ ನಡೆಯುತ್ತಿದೆ. ಜತೆಗೆ ಬಿಜೆಪಿ 3ನೇ ಶಕ್ತಿಯಾಗಿ ಹೊರಹೊಮ್ಮಲಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕ್ಲೈಮ್ಯಾಕ್ಸ್‌ನಲ್ಲಿ ಭಾರಿ ಟ್ವಿಸ್ಟ್‌; ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದ ವಿಜಯೇಂದ್ರ

ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

BY Vijayendra: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.‌ ಜೀವರಾಜ್‌ ಮುನ್ನಡೆ ಸಾಧಿಸಿದ್ದು, ಬಿಜೆಪಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

Gold Price Today On 3rd May 2026: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ಚೆಕ್‌ ಮಾಡಿ

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Gold Silver Price Today: ಶನಿವಾರ ಏರಿಕೆಯಾಗಿದ್ದ ಚಿನ್ನದ ದರ ಭಾನುವಾರ (ಮೇ 3) ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾನುವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,835 ರುಪಾಯಿ ಕಂದು ಬಂದಿದ್ದು, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 15,093 ಇದೆ.

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಭಾರಿ ದುರಂತ; ಹೊಂಡಕ್ಕೆ ಈಜಲು ತೆರಳಿದ ಇಬ್ಬರು ಬಾಲಕರು ಜಲಸಮಾಧಿ

ಹೊಂಡಕ್ಕೆ ಈಜಲು ತೆರಳಿದ ಇಬ್ಬರು ಬಾಲಕರು ಜಲಸಮಾಧಿ

Belagavi News: ಪ್ರಸಿದ್ಧ ಬೆಳಗಾವಿ ಕಪಿಲೇಶ್ವರ ದೇವಾಲಯ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಶಿವಂ ಪರಶುರಾಮ ಸುಂಡೀಕರ್ (7), ಪರಶುರಾಮ ನಿಲಜಕರ್ (11) ಮೃತರು. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದ ನಾಲ್ವರು ಮಕ್ಕಳ ಮೃತದೇಹ; ತಾಯಿ ನಾಪತ್ತೆ: ದೇಶವನ್ನೇ ಬೆಚ್ಚಿಬೀಳಿಸಿದ ನಿಗೂಢ ಪ್ರಕರಣ

ಮನೆಯೊಳಗೆ ನಾಲ್ವರು ಮಕ್ಕಳ ಸಾವು; ತಾಯಿ ನಾಪತ್ತೆ

Uttar Pradesh Horror: ಉತ್ತರ ಪ್ರದೇಶದ ಅಂಬೇಡ್ಕರ್‌ ನಗರದಲ್ಲಿ ನಿಗೂಢ ಪ್ರಕರಣವೊಂದು ನಡೆದಿದ್ದು, ಮನೆಯೊಳಗೆ ನಾಲ್ವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಕ್ಕಳ ತಾಯಿ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತ ಮಕ್ಕಳನ್ನು ಶಫಿಕ್‌ (14), ಸೌದ್‌ (10), ಉಮರ್‌ (8) ಮತ್ತು ಸಾದಿಯಾ (7) ಎಂದು ಗುರುತಿಸಲಾಗಿದೆ.

30 ವರ್ಷದ ಜಡ್ಜ್‌ ಆತ್ಮಹತ್ಯೆಗೆ ಶರಣು; ಕಾರ್ಯದೊತ್ತಡ, ವೈಯಕ್ತಿಕ ಕಾರಣ-ಜೀವ ಕಳೆದುಕೊಂಡಿದ್ದೇಕೆ?

30 ವರ್ಷದ ನ್ಯಾಯಾಧೀಶ ಆತ್ಮಹತ್ಯೆಗೆ ಶರಣು; ಕಾರಣ ನಿಗೂಢ

Self Harming: ದೆಹಲಿಯಲ್ಲಿ 30 ವರ್ಷದ ಜಡ್ಜ್‌ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಪ್ರೇಮ್‌ ಕುಮಾರ್‌ ಶರ್ಮ ಅವರ ಪುತ್ರ ಅಮನ್‌ ಕುಮಾರ್‌ ಶರ್ಮ ಎಂದು ಗುರುತಿಸಲಾಗಿದೆ. ಸಫ್ದರ್ಜಂಗ್‌ನ ಅವರ ಗ್ರೀನ್‌ ಪಾರ್ಕ್‌ ಮನೆಯ ಬಾತ್‌ ರೂಂನಲ್ಲಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.

Pravasi Prapancha: ಹಿತವಾದ ಮನಸಿಗೆ ಹದವಾದ ಕಾಫಿ; ನೆನಪಲ್ಲುಳಿಯುವ ಮಾತಾಸ್‌ ಘಮ

ನೆನಪಲ್ಲುಳಿಯುವ ಮಾತಾಸ್‌ ಕಾಫಿ ಘಮ

Mathas Coffee: ಮಾತಾಸ್‌ ಕಾಫಿ ಎಂದರೆ ಕರ್ನಾಟಕದ ಜನರಿಗೆ ಎಮೋಷನ್‌ ಆಗಿಬಿಟ್ಟಿದೆ. ಮಾತಾಸ್‌ ಅವರು ಬರಿ ಕಾಫಿ ಪುಡಿ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಇವರು ಕಾಫಿ ಸಂಸ್ಕೃತಿಯನ್ನು ಪ್ರತಿಯೊಬ್ಬರ ಜೀವನದ ಭಾಗವಾಗಿಸಲು ಶ್ರಮಿಸುತ್ತಿದ್ದಾರೆ. ನೀವು ಹೊಟೇಲ್‌ಗೆ ಹೋದಾಗ ಅಲ್ಲಿ ಬರುವ ಆ ನೊರೆ ಭರಿತ ಫಿಲ್ಟರ್ ಕಾಫಿಯ ಹಿಂದಿರೋ ಶ್ರಮವೇ ಇವರ ಬ್ರ್ಯಾಂಡ್ ಮೇಲೆ ಜನರಿಟ್ಟಿರುವ ನಂಬಿಕೆ.

5 ವಿಧಾನಸಭಾ ಚುನಾವಣೆಗಳ ರಿಸಲ್ಟ್‌ ಘೋಷಣೆಗೆ ದಿನಗಣನೆ; ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕೋಟೆಯಲ್ಲಿ ಕಮಲ ಕಮಾಲ್‌? ಕೇರಳಂನಲ್ಲಿ ಎಡರಂಗದ ಆಡಳಿತ ಅಂತ್ಯ? ಟಿವಿಕೆಗೆ ʼವಿಜಯʼ?

5 ವಿಧಾನಸಭಾ ಚುನಾವಣೆಗಳ ರಿಸಲ್ಟ್‌ ಘೋಷಣೆಗೆ ದಿನಗಣನೆ

Assembly Election Result 2026: ಬಹುನಿರೀಕ್ಷಿತ 5 ವಿಧಾನಸಭೆಗಳ ಚುನಾವಣೆ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್‌ ರೂಂ ಸೇರಿದೆ. ಉತ್ತರದ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆ ನಡೆದಿದ್ದು, ಈಗಾಗಲೇ ಎಕ್ಸಿಟ್‌ ಪೋಲ್‌ ರಿಪೋರ್ಟ್‌ ಹೊರ ಬಿದ್ದು ಫಲಿತಾಂಶದ ಅಸ್ಪಷ್ಟ ಚಿತ್ರ ಲಭಿಸಿದೆ. ಮೇ 4ರಂದು 8 ಗಂಟೆ ಆಗುತ್ತಿದ್ದಂತೆ ಮತ ಎಣಿಕೆ ಆರಂಭವಾಗಲಿದ್ದು, ಯಾವ ರಾಜ್ಯ ಯಾರಿಗೆ ಒಲಿಯಲಿದೆ ಎನ್ನುವುದರ ಸ್ಪಷ್ಟ ಚಿತ್ರಣ ದೊರೆಯಲಿದೆ. ಹೀಗಾಗಿ ಇಡೀ ದೇಶದ ಚಿತ್ತ ಫಲಿತಾಂಶದತ್ತ ನೆಟ್ಟಿದ್ದು, ಅದಾದ ಬಳಿಕ ರಾಷ್ಟ್ರ ರಾಜಕೀಯದಲ್ಲೇ ಒಂದಷ್ಟು ಸ್ಥಿತ್ಯಂತರ ನಡೆಯುತ್ತ ಎನ್ನುವ ಕುತೂಹಲ ಮೂಡಿದೆ. ಹಾಗಾದರೆ ಯಾವ ರಾಜ್ಯದಲ್ಲಿ ಸದ್ಯದ ಟ್ರೆಂಡ್‌ ಹೇಗಿದೆ? ಯಾರಿಗೆ ಗೆಲುವಿನ ಅವಕಾಶ ಅಧಿಕವಾಗಿದೆ? ಎಕ್ಸಿಟ್‌ ಪೋಲ್‌ ವರದಿ ಏನು ಹೇಳುತ್ತಿವೆ? ಎನ್ನುವುದನ್ನು ನೋಡಿಕೊಂಡು ಬರೋಣ.

ತಾತನಾದ ಸಂಭ್ರಮದಲ್ಲಿದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸಂಸದ ತೇಜಸ್ವಿ ಸೂರ್ಯ ಅಭಿನಂದನೆ

ʼತಾತʼ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸಂಸದ ತೇಜಸ್ವಿ ಸೂರ್ಯ ಅಭಿನಂದನೆ

D.K. Shivakumar: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಶುಕ್ರವಾರ (ಮೇ 1) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ನಾಯಕ, ಸಂಸದ ತೇಜಸ್ವಿ ಸೂರ್ಯ ಅಭಿನಂದನೆ ಸಲ್ಲಿಸಿದ್ದಾರೆ.

Loading...