ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
Delhi Earthquake: ದೆಹಲಿ ಸೇರಿ ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ; ರಿಕ್ಟರ್‌ ಮಾಪಕದಲ್ಲಿ 5.9 ತೀವ್ರತೆ

ದೆಹಲಿಯಲ್ಲಿ ಭಾರಿ ಭೂಕಂಪ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ (ಏಪ್ರಿಲ್‌ 3) ಭೂಕಂಪವಾಗಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪದ ಕೇಂದ್ರಬಿಂದು ಕಂಡು ಬಂದಿದೆ. ರಿಕ್ಟರ್‌ ಮಾಪಕದಲ್ಲಿ 5.9 ದಾಖಲಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತಕ್ಕೆ ತುಸು ನೆಮ್ಮದಿಯ ಸುದ್ದಿ; ಹೊರ್ಮುಜ್‌ ಜಲಸಂಧಿ ದಾಟಿ ದೇಶದತ್ತ ಧಾವಿಸುತ್ತಿದೆ ಎಲ್‌ಪಿಜಿ ಹೊತ್ತ 7ನೇ ಹಡಗು

ಹೊರ್ಮುಜ್‌ ಜಲಸಂಧಿ ದಾಟಿದ ಭಾರತದ ಮತ್ತೊಂದು ಹಡಗು

Strait of Hormuz: ಇರಾನ್‌ನ ಹೊರ್ಮುಜ್‌ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ಭಾರತದ ಮತ್ತೊಂದು ಹಡಗು ದೇಶದತ್ತ ಧಾವಿಸುತ್ತಿದೆ. ಎಲ್‌ಪಿಜಿ ಟ್ಯಾಂಕರ್‌ ಗ್ರೀನ್‌ ಸಾನ್ವಿ ಇದೀಗ ಹೊರ್ಮುಜ್‌ ಜಲಸಂಧಿ ದಾಟಿದೆ ಎಂದು ಹಡಗುಗಳ ಚಲನೆಯನ್ನು ಗಮನಿಸುವ ವೆಸೆಲ್‌ಫೈಂಡರ್‌ ತಿಳಿಸಿದೆ.

Jan Vishwas Bill 2026: ಉದ್ಯಮಸ್ನೇಹಿ ಕಾನೂನಿಗೆ ಜನ ವಿಶ್ವಾಸ ವಿಧೇಯಕ ಸಹಕಾರಿ

ಉದ್ಯಮಸ್ನೇಹಿ ಕಾನೂನಿಗೆ ಜನ ವಿಶ್ವಾಸ ವಿಧೇಯಕ ಸಹಕಾರಿ

ಲೋಕಸಭೆಯಲ್ಲಿ ಮಹತ್ವದ ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026 ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲಿ ಅನುಮೋದನೆಯನ್ನೂ ಪಡೆದಿದೆ. ಇದು ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ಕಾನೂನು ಸುಧಾರಣೆಯಾಗಿದೆ. ಇದು 80 ಕೇಂದ್ರೀಯ ಕಾನೂನುಗಳು ಮತ್ತು 784 ನಿಬಂಧನೆಗಳನ್ನು ಬದಲಿಸಿ ಸುಧಾರಿಸಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ ರಿಲೀಸ್‌ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರಿಲ್ಲ

ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ ಪಟ್ಟಿ ರಿಲೀಸ್‌

Tamil Nadu Assembly Elections: ಏಪ್ರಿಲ್‌ 23ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆದಿದೆ. ಈ ಬಾರಿ ಅಧಿಕಾರಕ್ಕೇರಲೇ ಬೇಕೆಂದು ಬಿಜೆಪಿ ಪಣ ತೊಟ್ಟಿದ್ದು, ಈಗಾಗಲೇ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಕೇಸರಿ ಪಡೆ 27 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಇದರಲ್ಲಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಹೆಸರಿಲ್ಲ.

ಗೊಂಬೆಯ ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ಯುದ್ಧ ಪೀಡಿತ ಗಾಜಾದಲ್ಲಿನ ಈ ವಿಡಿಯೊ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದೇಕೆ?

ಗೊಂಬೆಯ ಅಣಕು ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ವಿಡಿಯೊ ವೈರಲ್‌

Gaza War: ಗಾಜಾದಲ್ಲಿನ ಪುಟ್ಟ ಮಕ್ಕಳು ತಮ್ಮ ಆಟದ ಗೊಂಬೆಯ ಅಣಕು ಶವ ಸಂಸ್ಕಾರ ನಡೆಸಿದ್ದಾರೆ. ಚಿಂತೆಯಿಲ್ಲದೆ ಆತವಾಡಬೇಕಾದ ಅವರ ಮನಸ್ಸಿನ ಮೇಲೆ ಯುದ್ಧ ಬೀರಿದ ಪರಿಣಾಮ ಇದು ಎನ್ನುವುದು ತಜ್ಞರ ಅಭಿಪ್ರಾಯ. ಇದೇ ಕಾರಣಕ್ಕೆ ಇಡೀ ಜಗತ್ತೇ ಈ ವಿಡಿಯೊವನ್ನು ಆತಂಕದಿಂದ ನೋಡುತ್ತಿದೆ.

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ; ಬೆಂಗಳೂರಿನಲ್ಲಿ ಕಿಲೋ ಮೀಟರ್‌ಗಟ್ಟಲೆ ರಿಕ್ಷಾ ಸಾಲು Video

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ

LPG Crisis: ಪಶ್ಚಿಮ ಏಷ್ಯಾ ಸಂಘರ್ಷ ಏನಾಗಲಿದೆ ಎನ್ನುವ ಗೊಂದಲ ಒಂದೆಡೆಯಾದರೆ, ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಮೀರಿದ ಸಮಸ್ಯೆ ಇದೀಗ ಆಟೋ ಗ್ಯಾಸ್‌ನಲ್ಲಿ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗ್ಯಾಸ್ ಸಿಗದೆ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕುವಂತಾಗಿದೆ. ರಾಜ್ಯದ ಹಲವು ಭಾಗದಲ್ಲಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಇಡೀ ರಾತ್ರಿ ಸ್ಟೇಷನ್‌ಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನ ಹಲವು ಎಲ್‌ಪಿಜಿ ಬಂಕರ್‌ಗಳು ಇಂಧನ ಸಿಗದೇ ಬಂದಾಗಿವೆ.

Gold Price Today On 3rd April 2026: ಮತ್ತೆ ಹೆಚ್ಚಾಯ್ತು ಚಿನ್ನದ ದರ; ಇಂದು ಏರಿಕೆಯಾಗಿದ್ದು ಬರೋಬ್ಬರಿ 1,440 ರುಪಾಯಿ

ಮತ್ತೆ ಹೆಚ್ಚಾಯ್ತು ಚಿನ್ನದ ದರ

Gold Silver Price Today: ಶುಕ್ರವಾರ (ಏಪ್ರಿಲ್‌ 3) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 180 ರುಪಾಯಿ ಹೆಚ್ಚಾಗಿದ್ದು13,835 ರುಪಾಯಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 196 ರುಪಾಯಿ ಅಧಿಕವಾಗಿದ್ದು, 15,093 ರುಪಾಯಿಗೆ ಬಂದು ತಲುಪಿದೆ. ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಜನಗಣತಿ ಆರಂಭ; ಆನ್‌ಲೈನ್‌ನಲ್ಲಿ ವಿವರಗಳನ್ನು ನೀವೇ ತುಂಬಲು ಇಲ್ಲಿದೆ ಗೈಡ್‌ಲೈನ್‌

ಜನಗಣತಿ: ಮಾಹಿತಿ ಮೊಬೈಲ್‌ನಲ್ಲೇ ತುಂಬುದು ಹೇಗೆ?

Census 2027: ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಆರಂಭವಾಗಿದೆ. ಈ ಬಾರಿ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಏನಿದು ಸ್ವಯಂ ಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹೊರ್ಮುಜ್‌ ಜಲಸಂಧಿ ದಾಟಲು ಭಾರತ ಪಾವತಿಸುವ ಟೋಲ್‌ ಮೊತ್ತ ಎಷ್ಟು? ಸಂದೇಹಕ್ಕೆ ಕೇಂದ್ರದಿಂದ ಸ್ಪಷ್ಟನೆ

ಹೊರ್ಮುಜ್‌ ಜಲಸಂಧಿ ದಾಟಲು ಭಾರತ ಟೋಲ್‌ ಪಾವತಿಸುತ್ತಾ? ಕೇಂದ್ರ ಹೇಳಿದ್ದೇನು?

Strait of Hormuz: ಪಶ್ವಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಹೊರ್ಮುಜ್‌ ಮೇಲಿನ ಹಿಡಿತ ಇನ್ನೂ ಸಡಿಲಗೊಳಿಸಿಲ್ಲ. ಈ ಮಧ್ಯೆ ಇರಾನ್‌ ಟೋಲ್‌ ವ್ಯವಸ್ಥೆ ಜಾರಿಗೊಳಿಸಿದೆ ಎನ್ನಲಾಗಿದ್ದು, ಭಾರತದ ಹಡಗುಗಳು ಇದುವರೆಗೆ ಎಷ್ಟು ಮೊತ್ತ ಪಾವತಿಸಿದೆ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ಇದಕ್ಕೆ ಇದೀಗ ಕೇಂದ್ರ ಉತ್ತರಿಸಿದೆ.

ಪ್ರತಿಷ್ಠಿತ ಆ್ಯಪಲ್‌ ಸಂಸ್ಥೆಯ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026; ಟಾಪ್‌ 50 ವಿಜೇತರ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಸ್ಥಾನ

ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಅಂತಾರಾಷ್ಟ್ರೀಯ ಮನ್ನಣೆ

Swift Student Challenge 2026: ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಅನನ್ಯಾ ಬಾಬು ಪ್ರಸಾದ್‌ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ಟೆಕ್‌ ದೈತ್ಯ, ಅಮೆರಿಕ ಮೂಲದ ಆ್ಯಪಲ್‌ ಐಎನ್‌ಸಿ ನಡೆಸಿದ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026ರ ಟಾಪ್‌ 50 ವಿಜೇತರ ಪೈಕಿ ಅನನ್ಯಾ ಕೂಡ ಒಬ್ಬರು ಎಂದು ತಿಳಿಸಿದೆ.

ಚಂಡೀಗಢ ಬಿಜೆಪಿ ಕಚೇರಿ ಮೇಲೆ ಗ್ರೆನೇಡ್‌ ಎಸೆದ ದುಷ್ಕರ್ಮಿಗಳು: ಖಲಿಸ್ತಾನಿ ಉಗ್ರರ ಕೃತ್ಯ?

ಚಂಡೀಗಢದ ಬಿಜೆಪಿ ಕಚೇರಿ ಬಳಿ ಭಾರಿ ಸ್ಫೋಟ

Punjab News: ಪಂಜಾಬ್‌ನ ಚಂಡೀಗಢದಲ್ಲಿರುವ ಬಿಜೆಪಿ ಕಚೇರಿಯ ಹೊರಗೆ ಬುಧವಾರ (ಏಪ್ರಿಲ್ 1) ಸಂಜೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸಂಜೆ 5:20ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಕಾರು ಮತ್ತು ಸ್ಕೂಟರ್‌ನ ವಿಂಡ್‌ಶೀಲ್ಡ್ ಹಾನಿಗೊಳಗಾಗಿದೆ.

ಅಸ್ಸಾಂನ ಟೀ ಗಾರ್ಡನ್‌ಗೆ ನರೇಂದ್ರ ಮೋದಿ ಭೇಟಿ; ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತು, ಸೆಲ್ಫಿಗೆ ಪೋಸ್‌ ನೀಡಿದ ಪ್ರಧಾನಿ

ಅಸ್ಸಾಂನಲ್ಲಿ ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ಪ್ರಧಾನಿ ಮೋದಿ

ʼʼಚಹಾ ಅಸ್ಸಾಂನ ಆತ್ಮ. ಇಲ್ಲಿನ ಚಹಾ ಜಗತ್ತಿನಾದ್ಯಂತ ಪಸರಿಸಿದೆʼʼ-ಅಸ್ಸಾಂನ ಚಹಾ ತೋಟಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಉದ್ಘರಿಸಿದ ಪರಿ ಇದು. ಏಪ್ರಿಲ್‌ 1ರಂದು ಅಸ್ಸಾಂನ ದಿಬ್ರುಗಢಕ್ಕೆ ತೆರಳಿದ ಮೋದಿ ಅಲ್ಲಿನ ಚಹಾ ತೋಟಕ್ಕೆ ಭೇಟಿ ನೀಡಿ ಒಂದಷ್ಟು ಹೊತ್ತು ಕಳೆದರು. ಅಲ್ಲಿನ ಕಾರ್ಮಿಕರೊಂದಿಗೆ ಸೇರಿ ತಾವೂ ಚಹಾ ಎಲೆ ಕಿತ್ತರು. ಜತೆಗೆ ಅವರೊಂದಿಗೆ ಮಾತುಕತೆ ನಡೆಸಿದರು. ಹರಟೆ ಹೊಡೆದರು. ಸೆಲ್ಫಿಗೆ ಪೋಸ್‌ ನೀಡಿದರು. ಮಾತ್ರವಲ್ಲ ಅಸ್ಸಾಂನ ಸಾಂಪ್ರದಾಯಿಕ ಹಾಡಿಗೆ ಕಿವಿಯಾದರು, ಜಾನಪದ ನೃತ್ಯವನ್ನು ಆನಂದಿಸಿದರು. ಹೀಗೆ ಚಾಯ್‌ವಾಲಾ ಮೋದಿ ಚಹಾ ತೋಟದಲ್ಲಿ ಮಿಂಚು ಹರಿಸಿದರು.

Gold Price Today On 1st April: ಮತ್ತೆ ಏರಿಕೆಯಾದ ಚಿನ್ನದ ದರ; ಇಂದು ಹೆಚ್ಚಾಗಿದ್ದು ಇಷ್ಟು

ಮತ್ತೆ ಏರಿಕೆಯಾದ ಚಿನ್ನದ ದರ

Gold Rate: ಬುಧವಾರ (ಏಪ್ರಿಲ್‌ 1) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 180 ರುಪಾಯಿ ಹೆಚ್ಚಾಗಿದ್ದು13,885 ರುಪಾಯಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 197 ರುಪಾಯಿ ಅಧಿಕವಾಗಿದ್ದು, 15,148 ರುಪಾಯಿಗೆ ಬಂದು ತಲುಪಿದೆ.

ಫಾಸ್ಟ್‌ಟ್ಯಾಗ್ ಪಾಸ್, ಆನ್‌ಲೈನ್ ಬ್ಯಾಂಕ್ ಪೇಮೆಂಟ್...: ಹೊಸ ಆರ್ಥಿಕ ವರ್ಷಕ್ಕೆ ಹೊಸ ನಿಯಮ; ಇಂದಿನಿಂದ ಬದಲಾಗಿವೆ ಹಲವು ರೂಲ್ಸ್‌

ಇಂದಿನಿಂದ ಬದಲಾಗಿವೆ ಹಲವು ರೂಲ್ಸ್‌

New Rule: ಏಪ್ರಿಲ್ 1ರಿಂದ ಮುಂದಿನ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸಿಗೆ ಸಂಬಂಧಿಸಿದ ಹಲವಾರು ಬದಲಾವಣೆಗಳು ಕೂಡ ಆಗಲಿದೆ. ಇದರಲ್ಲಿ ಮುಖ್ಯವಾಗಿ ಆನ್‌ಲೈನ್ ಬ್ಯಾಂಕ್ ಪೇಮೆಂಟ್, ತೆರಿಗೆ ನಿಯಮಗಳು, ಪ್ಯಾನ್‌, ಕ್ರೆಡಿಟ್ ಕಾರ್ಡ್ ನಿಯಮಗಳು ಸೇರಿವೆ. ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ಕೆಲವು ನಿಯಮಗಳು ಇಲ್ಲಿವೆ.

ಇರಾನ್‌ ವಿರುದ್ಧದ ಯುದ್ಧ ಅಮೆರಿಕವನ್ನೇ ನಾಶ ಮಾಡುತ್ತ? ಆ್ಯಪಲ್‌, ಮೈಕ್ರೋಸಾಫ್ಟ್‌ ಸೇರಿ 18 ಟೆಕ್‌ ಕಂಪನಿ ಮೇಲೆ ದಾಳಿಯ ಎಚ್ಚರಿಕೆ

ಇರಾನ್‌ನಿಂದ ಆ್ಯಪಲ್‌ ಸೇರಿ 18 ಟೆಕ್‌ ಕಂಪನಿ ಮೇಲೆ ದಾಳಿಯ ಎಚ್ಚರಿಕೆ

US-Iran–Israel War: ಇರಾನ್‌ ಅಮೆರಿಕದ ಮೇಲೆ ಬಲವಾಗಿ ತಿರುಗಿ ಬೀಳುವ ಎಚ್ಚರಿಕೆ ನೀಡಿದೆ. ಬುಧವಾರ (ಏಪ್ರಿಲ್‌ 1) ಅಮೆರಿಕದ ಹೆಗ್ಗುರತಾದ, ಟೆಕ್‌ ದೈತ್ಯ ಕಂಪನಿಗಳಾದ ಆ್ಯಪಲ್‌, ಮೈಕ್ರೋಸಾಫ್ಟ್‌ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಅಮೆರಿಕದ ತಂತ್ರಜ್ಞಾನ ವಲಯವನ್ನು ಮತ್ತು ಕಂಪನಿಗಳನ್ನು ನಾಶಪಡಿಸುವುದಾಗಿ ಹೇಳಿದೆ.

ʼʼಅಮೆರಿಕದಿಂದ ತೈಲ ಖರೀದಿಸಿ ಇಲ್ಲವೇ ಹೊಸ ಮಾರ್ಗ ಕಂಡುಕೊಳ್ಳಿʼʼ: ಯುದ್ಧಕ್ಕೆ ನೆರವಾಗದ ರಾಷ್ಟ್ರಗಳ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಗುಟುರು

ಯುದ್ಧಕ್ಕೆ ನೆರವಾಗದ ರಾಷ್ಟ್ರಗಳ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಗುಡುಗು

Donald Trump: ಇರಾನ್‌ ವಿರುದ್ಧದ ಯುದ್ಧದಲ್ಲಿ ತಮ್ಮ ನೆರವಿಗೆ ಬಾರದ ಇಂಗ್ಲೆಂಡ್‌, ಫ್ರಾನ್ಸ್‌ನಂತಹ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಗುಡುಗಿದ್ದಾರೆ. ʼʼತೈಲಕ್ಕಾಗಿ ನಿಮ್ಮದೇ ದಾರಿ ಕಂಡುಕೊಳ್ಳಿʼʼ ಎಂದು ಹೇಳಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್​ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

ನಿನ್ನಂಥ ಅಪ್ಪ ಇಲ್ಲ; ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಎಂಆರ್‌ಐ ಮೆಷಿನ್ ಒಳಗೆ ಹೋದ ತಂದೆ: ಭಾವುಕ ಕ್ಷಣ ಇಲ್ಲಿದೆ

ಮಗನಿಗೆ ಭಯವಾಗುತ್ತೆ ಅಂತ ಎಂಆರ್‌ಐ ಮೆಷಿನ್ ಒಳಗೆ ಹೋದ ತಂದೆ

Viral Video: ಪುಟ್ಟ ಮಗನಿಗೆ ಭಯವಾಗುತ್ತದೆ ಎನ್ನುವ ಕಾರಣಕ್ಕೆ ತಂದೆ ಕೂಡ ಎಂಆರ್‌ಐ ಸ್ಕ್ಯಾನಿಂಗ್‌ ಮೆಷಿನ್‌ ಒಳ ಹೋದ ಘಟನೆ ನಡೆದಿದೆ. ತಂದೆ-ಮಗನ ಈ ಭಾವನಾತ್ಮಕ ಕ್ಷಣ ಕಂಡು ಹಲವರ ಕಣ್ಣಂಚು ಒದ್ದೆಯಾಗಿದ್ದರೆ, ಇನ್ನು ಕೆಲವರು ಇಂತಹ ಅಪ್ಪನನ್ನು ಪಡೆದ ಪುತ್ರನೇ ಭಾಗ್ಯವಂತ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

"ತಕ್ಷಣ ಹೊರ್ಮುಜ್‌ ಜಲಸಂಧಿ ತೆರೆಯದಿದ್ದರೆ ತೈಲ ಘಟಕ, ವಿದ್ಯುತ್‌ ಸ್ಥಾವರ, ಖರ್ಗ್‌ ದ್ವೀಪ ನಾಶ ಮಾಡುತ್ತೇವೆʼʼ: ಇರಾನ್‌ಗೆ ಟ್ರಂಪ್‌ನಿಂದ ಮತ್ತೊಂದು ಬೆದರಿಕೆ

ಇರಾನ್‌ಗೆ ಮತ್ತೊಮ್ಮೆ ಟ್ರಂಪ್‌ ಬೆದರಿಕೆ; ತೈಲ ಘಟಕ ಧ್ವಂಸಗೊಳಿಸುವ ಎಚ್ಚರಿಕೆ

Iran, Israel-US War: ಕೂಡಲೇ ಹೊರ್ಮುಜ್‌ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ತೈಲ ಘಟಕಗಳು ಮತ್ತು ಮೂಲ ಸೌಕರ್ಯಗಳ ಮೇಲೆ ಶಕ್ತವಾಗಿ ದಾಳಿ ನಡೆಸುವುದಾಗಿ ಅಮೆರಿಕ ಮತ್ತೊಮ್ಮೆ ಎಚ್ಚರಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಸೋಶಿಯಲ್‌ ಮೀಡಿಯಶದಲ್ಲಿ ಬರೆದುಕೊಂಡಿದ್ದಾರೆ.

BOB Recruitment 2026: ಪದವೀಧರರೇ ಗಮನಿಸಿ; ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 104 ಹುದ್ದೆ

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 104 ಹುದ್ದೆ

Bank of Baroda Jobs: ಬ್ಯಾಂಕ್‌ ಆಫ್‌ ಬರೋಡ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 104 ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಏಪ್ರಿಲ್‌ 16.

ಶಾಂತಿ ಮಾತುಕತೆಗೆ ವಿವಿಧ ದೇಶಗಳ ನಾಯಕರನ್ನು ಸ್ವಾಗತಿಸುವ ವೇಳೆ ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್

ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್; ವಿಡಿಯೊ ವೈರಲ್‌

Ishaq Dar: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷದ ವಾತಾವರಣವನ್ನು ಮಾತುಕತೆ ಮೂಲಕ ತಿಳಿಗೊಳಿಸಲು ಪಾಕಿಸ್ತಾನ ಮುಂದಾಗಿದೆ. ಅದಕ್ಕಾಗಿ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಸ್‌ನ ವಿದೇಶಾಂಗ ಸಚಿವರನ್ನು ಸ್ವಾಗತಿಸುವ ವೇಳೆ ಪಾಕ್‌ ಉಪ ಪ್ರಧಾನಿಯೂ ಆಗಿರುವ ವಿದೇಶಾಂಗ ಸಚಿವ ಇಶಾಕ್ ದಾರ್ ಜಾರಿ ಬೀಳುತ್ತಿರುವ ವಿಡಿಯೊ ವೈರಲ್‌ ಆಗಿದೆ.

Kerala Assembly Election 2026: ದೇವರ ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಪ್ರಚಾರ; ಎಲ್‌ಡಿಎಫ್‌-ಯುಡಿಎಫ್‌ ವಿರುದ್ಧ ಗುಡುಗು

ಕೇರಳಂನಲ್ಲಿ ಮೋದಿ ಮಿಂಚು; ದೇವರ ನಾಡಲ್ಲಿ ಈ ಬಾರಿ ತಾವರೆ ಅರಳುತ್ತಾ?

ಕೇರಳಂ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ದೇಶದ ಕುತೂಹಲ ಕೆರಳಿಸಿದೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ಗೆ ಟಕ್ಕರ್‌ ಕೊಟ್ಟು ಈ ಬಾರಿ ಬಿಜೆಪಿ ಕೆಲವು ಕ್ಷೇತ್ರಗಳಲ್ಲಾದರೂ ಜಯ ಗಳಿಸಲಿದೆ ಎನ್ನುವ ಲೆಕ್ಕಾಚಾರ ಅರಂಭವಾಗಿದೆ. 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೇರಳಂನ ಜನತೆ ಕೇಸರಿ ಪಕ್ಷದತ್ತ ಒಲವು ತೋರಿಸುತ್ತಿರುವುದು ಎನ್‌ಡಿಎಯ ನಿರೀಕ್ಷೆ ಮೂಡುವಂತೆ ಮಾಡಿದೆ. ಅಲ್ಲದೆ ಭಾನುವಾರ (ಮಾರ್ಚ್‌ 29) ಪ್ರಧಾನಿ ನರೇಂದ್ರ ಮೋದಿ ಕೇರಳಂಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಪಾಲಕ್ಕಾಡ್‌ ಮತ್ತು ತ್ರಿಶೂರ್‌ನಲ್ಲಿ ಸಂಚರಿಸಿ ಮಿಂಚು ಹರಿಸಿದರು.

ಇಂಡಿಯೋ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ; ತಪ್ಪಿದ ಭಾರಿ ಅನಾಹುತ

ಇಂಡಿಯೋ ವಿಮಾನದ ಎಕ್ಸಿಟ್‌ ಡೋರ್‌ ತೆರೆಯಲು ಯತ್ನಿಸಿದ ಪ್ರಯಾಣಿಕ

IndiGo Flight: ದೆವ್ವ ಹಿಡಿದಿದೆ ಎಂದು ಹೇಳಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಇಂಡಿಯೋ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ಶನಿವಾರ ನಡೆದಿದೆ. ಅದೃಷ್ಟವಶಾತ್‌ ಬಾಗಿಲು ತೆರೆಯದ ಕಾರಣ ಬಹುದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

Naveen Jain: ರಾಮನವಮಿ ಮೆರವಣಿಗೆ ವೇಳೆ ಗುಂಡು ಹಾರಿಸಿದ ಬಿಜೆಪಿ ಶಾಸಕ; ಭುಗಿಲೆದ್ದ ವಿವಾದ

ರಾಮನವಮಿ ಮೆರವಣಿಗೆ ವೇಳೆ ಗುಂಡು ಹಾರಿಸಿದ ಬಿಜೆಪಿ ಶಾಸಕ

ರಾಮನವಮಿ ಮೆರವಣಿಗೆ ವೇಳೆ ಬಿಜೆಪಿ ಶಾಸಕ ನವೀನ್‌ ಜೈನ್‌ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಒಡಿಶಾದಲ್ಲಿ ನಡೆದಿದ್ದು, ದೂರು ದಾಖಲಾಗಿದೆ. ಶಾಸಕರಿಗೆ ರಿವಾಲ್ವರ್‌ ನೀಡಿದ ವೈಯಕ್ತಿಕ ಭದ್ರತಾ ಅಧಿಕಾರಿ ಪ್ರೇಮ್‌ಚಂದ್ ನಾಗ್ ಅವರನ್ನು ಅಮಾನತುಗೊಳಿಸಲಾಗಿದೆ.

Kerala Assembly Polls 2026: ಗಡಿನಾಡು ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರ; ಕನ್ನಡತಿ, ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಪರ ಮತ ಯಾಚನೆ

ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರದ ಪ್ರಚಾರ

ಕೇರಳಂನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಹೀಗಾಗಿ ರಾಜ್ಯಾದ್ಯಂತ ಪ್ರಚಾರದ ಕಾವು ಜೋರಾಗಿದೆ. ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಸತತ 3ನೇ ಬಾರಿಗೆ ಆಡಳಿತಕ್ಕೆ ಬರುವ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಶತಾಯ ಗತಾಯ ಸರ್ಕಾರ ರಚಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಮತ್ತೊಮ್ಮೆ ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಿದೆ. ಅದರಲ್ಲಿಯೂ ಗಡಿನಾಡು ಕಾಸರಗೋಡಿನಲ್ಲಿ ಎನ್‌ಡಿಎ ಪ್ರಚಾರ ಜೋರಾಗಿದೆ. ಸಂಸದ, ಯುವ ನಾಯಕ ಸಂಸದ ತೇಜಸ್ವಿ ಸೂರ್ಯ ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿ ಅಖಾಡಕ್ಕಿಳಿದಿದ್ದಾರೆ. ಕಾಸರಗೋಡು ಎನ್‌ಡಿಎ ಅಭ್ಯರ್ಥಿ, ಕನ್ನಡತಿ ಎಂ.ಎಲ್‌. ಅಶ್ವಿನಿ ಪರ ಕ್ಷೇತ್ರದಾದ್ಯಂತ ಓಡಾಡಿ ಮತ ಯಾಚಿಸಿದರು.

Loading...