ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ramesh B

Senior Sub Editor

rameshballamule@gmail.com

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಯುವ ಜನತೆಯ ಮೊಬೈಲ್‌ ಚಟ ಬಿಡಿಸಲು ಗ್ರಾಮಸ್ಥರಿಂದ ಸೂಪರ್‌ ಐಡಿಯ; ಸಿಟ್‌-ಸ್ಟಿಲ್‌ ಸ್ಪರ್ಧೆಯ ಮೂಲಕ ಮಹತ್ವದ ಸಂದೇಶ ರವಾನೆ

ಯುವ ಜನತೆಯ ಮೊಬೈಲ್‌ ಚಟ ಬಿಡಿಸಲು ಸಿಟ್‌-ಸ್ಟಿಲ್‌ ಸ್ಪರ್ಧೆ

Sit-Still Challenge: ಮೊಬೈಲ್‌ ಚಟದಿಂದ ಜನರನ್ನು ಹೊರ ತರಲು ಪಂಜಾಬ್‌ನ ಹಳ್ಳಿಯೊಂದು ವಿನೂತನ ಪ್ರಯೋಗ ನಡೆಸಿದೆ. ಗ್ರಾಮಸ್ಥರಿಗೆ ಸ್ಪರ್ಧೆಯೊಂದು ಆಯೋಜಿಸಿ ಅವರಿಗೆ ಸವಾಲು ಒಡ್ಡಿದೆ. ಸುಮ್ಮನೆ ಕುಳಿತುಕೊಳ್ಳಿ ಹೆಸರಿನ ಈ ಸ್ಪರ್ಧೆ ಇದೀಗ ದೇಶದ ಗಮನ ಸೆಳೆದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ನಿರ್ದಿಷ್ಟ ಸಮಯದವರೆಗೆ ಒಂದೇ ಕಡೆ ಕುಳಿತಿರಬೇಕು. ಈ ವೇಳೆ ಅವರು ಮೊಬೈಲ್‌ ಫೋನ್‌ ಬಳಸುವಂತಿಲ್ಲ.

ದಳಪತಿ ವಿಜಯ್‌ಗೆ ಭಾರಿ ಹಿನ್ನಡೆ; ಪುದುಚೆರಿ ರೋಡ್‌ ಶೋಗೆ ಅನುಮತಿ ಇಲ್ಲ

ವಿಜಯ್‌ಗೆ ಹಿನ್ನಡೆ; ಪುದುಚೆರಿ ರೋಡ್‌ ಶೋ ಕ್ಯಾನ್ಸಲ್‌

Actor Vijay: ಪುದುಚೆರಿಯಲ್ಲಿ ಡಿಸೆಂಬರ್‌ 5ರಂದು ತಮಿಳಗ ವೆಟ್ರಿ ಕಳಗಂ ಪಕ್ಷ ಆಯೋಜಿಸಲು ಉದ್ದೇಶಿಸಿದ್ದ ರೋಡ್‌ ಶೋವನ್ನು ಪೊಲೀಸರು ರದ್ದುಗೊಳಿಸಿದ್ದಾರೆ. ಆ ಮೂಲಕ ನಟ ವಿಜಯ್‌ಗೆ ಸಾಕಷ್ಟು ಹಿನ್ನಡೆಯಾಗಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಕರೂರು ಕಾಲ್ತುಳಿತದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ.

ಆರೋಗ್ಯಕ್ಕೊಂದು ಹೊಸ ಆಯಾಮ: ಯೋಗಬನ

ಯೋಗಬನ: ಆರೋಗ್ಯಕ್ಕೊಂದು ಹೊಸ ಆಯಾಮ

Yogabana: ವಿವೇಕಾನಂದ ಚಿಂತನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ನಿಟ್ಟಿನಲ್ಲಿ ಡಿವೈನ್ ಪಾರ್ಕ್ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಯೋಗಬನ (Yogabana) ಎಂಬ ಅತಿವಿಶಿಷ್ಟ ಮಾದರಿಯ ಚಿಕಿತ್ಸಾ ಕೇಂದ್ರವನ್ನು ಮುನ್ನೆಲೆಗೆ ತಂದು ಯೋಗ, ಅಧ್ಯಾತ್ಮ, ಪ್ರಕೃತಿ, ಆಯುರ್ವೇದ ಚಿಕಿತ್ಸೆಯ ಜತೆಗೆ ವಿವೇಕಾನಂದರ ಚಿಂತನೆಗಳನ್ನು ಜೀವಂತವಾಗಿರಿಸುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಡಾ. ವಿವೇಕ್. ಇದು ಇರುವುದು ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಸಾಲಿಗ್ರಾಮದಿಂದ ಕೇವಲ ಐದು ಕಿಮೀ ದೂರದಲ್ಲಿ.

Gold Price Today on 1St December 2025: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್‌ ಇಷ್ಟಿದೆ

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ

Gold Rate Today: ಚಿನ್ನದ ದರದಲ್ಲಿ ಸೋಮವಾರ (ಡಿಸೆಂಬರ್‌ 1) ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 66 ರೂ. ಹೆಚ್ಚಳ ಕಂಡುಬಂದಿದೆ. ಆ ಮೂಲಕ 22 ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 11,960 ರೂ. ಮತ್ತು 13,048 ರೂ.ಗೆ ತಲುಪಿದೆ.

ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದರೆ ಆಪರೇಷನ್‌ ಸಿಂದೂರ್‌ 2.0; ಶತ್ರು ರಾಷ್ಟ್ರಕ್ಕೆ ಖಡಕ್‌ ಎಚ್ಚರಿಕೆ ನೀಡಿದ ಬಿಎಸ್‌ಎಫ್‌

ಆಪರೇಷನ್‌ ಸಿಂದೂರ್‌ 2.0 ಕಾರ್ಯಾಚರಣೆಗೆ ಬಿಎಸ್‌ಎಫ್‌ ಸಿದ್ಧ

Operation Sindoor 2.0: ಭಾರತದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಿಂದ ಸಾಕಷ್ಟು ಪೆಟ್ಟು ತಿಂದಿರುವ ಪಾಕಿಸ್ತಾನಕ್ಕೆ ಇದೀಗ ಬಿಎಸ್‌ಎಫ್‌ ಕಠಿಣ ಎಚ್ಚರಿಕೆ ನೀಡಿದೆ. ಮತ್ತೆ ಬಾಲ ಬಿಚ್ಚಿದರೆ, ಉಗ್ರ ಚಟುವಟಿಕೆ ಆರಂಭಿಸಿದರೆ ಆಪರೇಷನ್‌ 2.0 ಆರಂಭಿಸುವುದಾಗಿಯೂ, ಈ ಬಾರಿಯ ಹೊಡೆತ ಇನ್ನಷ್ಟು ಶಕ್ತವಾಗಿರುವುದಾಗಿಯೂ ತಿಳಿಸಿದೆ.

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ; 2 ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 10 ಮಂದಿ ಸಾವು

ತಮಿಳುನಾಡಿನಲ್ಲಿ 2 ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 10 ಮಂದಿ ಸಾವು

Road Accident: 2 ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ 10 ಮಂದಿ ಮೃತಪಟ್ಟು 20 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕುಮ್ಮನಗುಡಿಯಲ್ಲಿ ನಡೆದಿದೆ. ಸದ್ಯ ಸ್ಥಳದಲ್ಲೆ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಪ್ರೀತಿಗೆ ಸಾವಿಲ್ಲ; ಜಾತಿಯ ಕಾರಣಕ್ಕೆ ಕೊಲೆಗೀಡಾದ ಪ್ರಿಯಕರನನ್ನೇ ವರಿಸಿದ ಯುವತಿ: ಮನ ಕಲುಕುವ ಲವ್‌ ಸ್ಟೋರಿ ಇಲ್ಲಿದೆ

ಜಾತಿಯ ಕಾರಣಕ್ಕೆ ಕೊಲೆಗೀಡಾದ ಪ್ರಿಯಕರನನ್ನೇ ವರಿಸಿದ ಯುವತಿ

ಮಹಾರಾಷ್ಟ್ರದ ನಾಂದೇಡ್‌ ಇತ್ತೀಚೆಗೆ ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಯುವಕನ್ನು ಜಾತಿಯ ಹೆಸರಿನಲ್ಲಿ ಥಳಿಸಿ, ಗುಂಡು ಹಾರಿಸಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಇದರಿಂದ ಕುಸಿದ ಆತನ ಪ್ರೇಯಸಿ ಮೃತದೇಹವನ್ನು ವರಿಸಿದ್ದು, ಆತನ ಮನೆಯಲ್ಲೇ ವಾಸಿಸುವುದಾಗಿ ತಿಳಿಸಿದ್ದಾಳೆ. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ದಬ್ಬಾಳಿಕೆ ಇರುವಲ್ಲಿ ಜಿಹಾದ್‌ ಕಂಡುಬರುತ್ತದೆ; ವಿವಾದದ ಕಿಡಿ ಹೊತ್ತಿಸಿದ ಮೌಲಾನ ಮಹಮೂದ್ ಮದನಿ

ದಬ್ಬಾಳಿಕೆ ಇರುವಲ್ಲಿ ಜಿಹಾದ್‌ ಕಂಡುಬರುತ್ತದೆ ಎಂದ ಮುಸ್ಲಿಂ ಮುಖಂಡ

Maulana Mahmood Madani: ʼʼದಬ್ಬಾಳಿಕೆ ಎಲ್ಲಿ ಇರುತ್ತದೆಯೋ ಅಲ್ಲಿ ಜಿಹಾದ್‌ ಕಂಡುಬರುತ್ತದೆʼʼ-ಇದು ಮುಸಿಂ ಮುಖಂಡರೊಬ್ಬರು ಜಿಹಾದ್‌ ಅನ್ನು ಸಮರ್ಥಿಸಿಕೊಂಡ ಪರಿ. ಹೌದು ಮುಸ್ಲಿಂ ಸಂಘಟನೆ ಜಮಿಯತ್‌ ಉಲೇಮಾ-ಎ-ಹಿಂದ್‌ ಮುಖಂಡ ಮೌಲಾನ ಮಹಮೂದ್ ಮದನಿ ಜಿಹಾದ್‌ ಅನ್ನು ಸಮರ್ಥಿಸಿಕೊಳ್ಳುವುದರ ಜತೆಗೆ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗ ವಿಫಲವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿ, ವೈದ್ಯೆ, 2 ಬಾರಿ ಮುರಿದು ಬಿದ್ದ ವಿವಾಹ...ದೆಹಲಿ ಬಾಂಬ್‌ ಸ್ಫೋಟದ ರೂವಾರಿ  ಶಾಹೀನ್ ಉಗ್ರ ಜಾಲದ ಭಾಗವಾಗಿದ್ದೇಗೆ?

ದೆಹಲಿ ಬಾಂಬ್‌ ಸ್ಫೋಟದ ರೂವಾರಿ ಶಾಹೀನ್ ಉಗ್ರ ಜಾಲದ ಭಾಗವಾಗಿದ್ದೇಗೆ?

Delhi Blast: ದೆಹಲಿ ಕೆಂಪು ಕೋಟೆ ಸಮೀಪ ನಡೆದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿ ಮಹತ್ವದ ಸಂಗತಿ ಹೊರ ಬಂದಿದೆ. ಬಂಧಿತಳಾಗಿರುವ ಪ್ರಕರಣದ ಆರೋಪಿ ಶಾಹೀನ್ ಸಯೀದ್‌ ಕುರಿತಾದ ಮತ್ತಷ್ಟು ರಹಸ್ಯ ಹೊರ ಬಿದ್ದಿದೆ. 2 ಬಾರಿ ಮದುವೆ ಮುರಿದು ಬಿದ್ದ ಆಕೆ ಕೊನೆಗೆ ಕೈ ಹಿಡಿದದ್ದು ಭಯೋತ್ಪಾದಕ ಡಾ. ಮುಜಮ್ಮಿಲ್ ಶಕೀಲ್‌ನನ್ನು. ಬಳಿಕ ಆಕೆಯೂ ನಿಧಾನವಾಗಿ ಭಯೋತ್ಪಾದಕ ಜಾಲದ ಭಾಗವಾದಳು. ಈ ಬಗ್ಗೆ ಇಲ್ಲಿದೆ ವಿವರ.

Karnataka Weather: ಕಡಿಮೆಯಾಯ್ತು ಹಿಂಗಾರು ಮಳೆ ಅಬ್ಬರ; ಹೆಚ್ಚಾಯ್ತು ಉಷ್ಣಾಂಶ

ರಾಜ್ಯಾದ್ಯಂತ ಕಡಿಮೆಯಾಯ್ತು ಹಿಂಗಾರು ಮಳೆ ಅಬ್ಬರ

ಕರ್ನಾಟಕ ಹವಾಮಾನ ವರದಿ: ಶುಕ್ರವಾರ ರಾಜ್ಯಾದ್ಯಂತ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಇನ್ನು ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನಾಳೆ ಉಡುಪಿಗೆ ನರೇಂದ್ರ ಮೋದಿ ಭೇಟಿ; ಕನ್ನಡದಲ್ಲೇ ಪೋಸ್ಟ್‌ ಹಂಚಿಕೊಂಡ ಪ್ರಧಾನಿ

ನಾಳೆ ಉಡುಪಿಗೆ ನರೇಂದ್ರ ಮೋದಿ ಭೇಟಿ; ಕನ್ನಡದಲ್ಲೇ ಸಂತಸ ಹಂಚಿಕೊಂಡ ಪ್ರಧಾನಿ

Laksha Kantha Gita Parayana: ಶುಕ್ರವಾರ (ನವೆಂಬರ್‌ 28) ಉಡುಪಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮೋದಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೇವರ ದರ್ಶನ ಹಾಗೂ ರೋಡ್‌ ಶೋ ಮಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಕನ್ನಡದಲ್ಲೇ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ಗೆ ಸಿದ್ದರಾಮಯ್ಯ ʼಪವರ್‌ʼ ಫುಲ್‌ ಡಿಚ್ಚಿ?; ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದೇನು?

ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ಕೊಟ್ರಾ ಸಿದ್ದರಾಮಯ್ಯ?

Karnataka CM Row: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವಿನ ಕುರ್ಚಿ ಕಾಳಗ ತಾರಕಕ್ಕೇರಿದೆ. ಸಿಎಂ ಪಟ್ಟಕ್ಕಾಗಿ ಇಬ್ಬರು ನಾಯಕರ ಬಣ ಪೈಪೋಟಿ ನಡೆಸುತ್ತಿದೆ. ಈ ಮಧ್ಯೆ ಡಿಕೆಶಿ ಮತ್ತು ಸಿದ್ದರಾಮಯ್ಯ ಎಕ್ಸ್‌ ಪೋಸ್ಟ್‌ ಮೂಲಕ ಪರಸ್ಪರ ಟೀಕಿಸುತ್ತಿದ್ದಾರಾ ಎನ್ನುವ ಅನುಮಾನ ಮೂಡ ತೊಡಗಿದೆ. ಆ ಕುರಿತಾದ ವಿವರ ಇಲ್ಲಿದೆ.

ಹೈಕಮಾಂಡ್ ಕರೆದರೆ ಸಿದ್ದರಾಮಯ್ಯ ಜತೆ ದೆಹಲಿಗೆ ಹೋಗುತ್ತೇನೆ: ಡಿ.ಕೆ. ಶಿವಕುಮಾರ್

ಹೈಕಮಾಂಡ್ ಕರೆದರೆ ಸಿದ್ದರಾಮಯ್ಯ ಜತೆ ದೆಹಲಿಗೆ ಹೋಗುತ್ತೇನೆ: ಡಿಕೆಶಿ

DK Shivakumar: ʼʼಹೈಕಮಾಂಡ್ ನಾಯಕರು ದೆಹಲಿಗೆ ಕರೆದರೆ ಹೋಗುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼʼಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಯನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ” ಎಂದರು.

ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಹಾ ದ್ರೋಹ: ಡಿ.ಕೆ. ಶಿವಕುಮಾರ್‌ ಹೆಸರು ಉಲ್ಲೇಖಿಸಿ ಜೆಡಿಎಸ್‌ ಹೀಗೆ ಹೇಳಿದ್ದೇಕೆ?

ಡಿ.ಕೆ. ಶಿವಕುಮಾರ್‌ ವಿರುದ್ಧ ಜೆಡಿಎಸ್‌ ವ್ಯಂಗ್ಯ

JDS: ಡಿ.ಕೆ. ಶಿವಕುಮಾರ್‌ ಅವರನ್ನು ಅಣಕಿಸಿ ಜೆಡಿಎಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಶೇರ್‌ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎನ್ನುವ ಅವರ ಮಾತನ್ನೇ ಉಲ್ಲೇಖಿಸಿ ಅವರನ್ನು ವ್ಯಂಗ್ಯವಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಾಹಾ ದ್ರೋಹ! ಅಲ್ಲವೇ ಡಿ.ಕೆ. ಶಿವಕುಮಾರ್‌? ಎಂದು ಪ್ರಶ್ನಿಸಿದೆ.

Karnataka CM Row: ಡಿ.ಕೆ. ಶಿವಕುಮಾರ್‌ ಪರ ನಂಜಾವಧೂತ ಸ್ವಾಮೀಜಿ ಬ್ಯಾಟಿಂಗ್‌; ಸಿಎಂ ಪಟ್ಟ ನೀಡಲು ಆಗ್ರಹ

ಡಿ.ಕೆ. ಶಿವಕುಮಾರ್‌ ಪರ ನಂಜಾವಧೂತ ಸ್ವಾಮೀಜಿ ಬ್ಯಾಟಿಂಗ್‌

Nanjavadhoota Swamiji: ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿ ತೀವ್ರವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಸಿಎಂ ಕುರ್ಚಿ ಕಾದಾಟ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಶ್ರೀ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ಡಿ.ಕೆ. ಶಿವಕುಮಾರ್‌ ಪರ ಬ್ಯಾಟ್‌ ಬೀಸಿದ್ದಾರೆ. ಡಿಕೆಶಿ ಅವರಿಗೆ ಸಿಎಂ ಪಟ್ಟ ಸಿಗಬೇಕು ಎಂದಿದ್ದಾರೆ.

ಪರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡಿದ್ರು; ಪತಿಯ ದೌರ್ಜನ್ಯ ಎಳೆ ಎಳೆಯಾಗಿ ಬಿಚ್ಚಿಟ್ಟ ಸೆಲಿನಾ ಜೇಟ್ಲಿ

ಪತಿಯ ದೌರ್ಜನ್ಯ ಎಳೆ ಎಳೆಯಾಗಿ ಬಿಚ್ಚಿಟ್ಟ ಸೆಲಿನಾ ಜೇಟ್ಲಿ

Celina Jaitly: ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿಯ 14 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಆಸ್ಟ್ರೀಯಾ ಉದ್ಯಮಿ ಪೀಟರ್‌ ಹೇಗ್‌ನನ್ನು ವರಿಸಿದ್ದ ಅವರು ಇದೀಗ ಡಿವೋಸರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಪತಿ ತನ್ನ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತಿದ್ದರು ಎನ್ನುವುದನ್ನು ತಿಳಿಸಿದ್ದಾರೆ. ತನ್ನ ನಗ್ನ ಚಿತ್ರ ತೋರಿಸಿ ಪರ ಪುರುಷರೊಂದಿಗೆ ಮಲಗುವಂತೆ ಪೀಡಿಸುತ್ತಿದ್ದುದಾಗಿ ವಿವರಿಸಿದ್ದಾರೆ.

ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ; 13 ಮಂದಿ ಸಾವು: 7 ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ

ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ; 13 ಮಂದಿ ಸಾವು

Hong Kong Fire: ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು ಕನಿಷ್ಠ 13 ಮಂದಿ ಬಲಿಯಾಗಿದ್ದಾರೆ. ಹಾಂಗ್‌ ಕಾಂಗ್‌ನ ತೈ ಪೊ ಜಿಲ್ಲೆಯ ಹೌಸಿಂಗ್‌ ಕಾಂಪ್ಲೆಕ್ಸ್‌ನಲ್ಲಿರುವ 7 ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಬೆಂಕಿ ವ್ಯಾಪಿಸಿದ್ದು, ಇಡೀ ಕಟ್ಟಡಗಳೇ ಹೊತ್ತಿ ಉರಿದಿವೆ. ಅಗ್ನಿಶಾಮಕ ದಳದ 128 ವಾಹನಗಳು ಮತ್ತು 57 ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆಗೆ ಉತ್ತೇಜನ; ಕೇಂದ್ರದಿಂದ 7,280 ಕೋಟಿ ರೂ. ಅನುಮೋದನೆ

ಶಾಶ್ವತ ಆಯಸ್ಕಾಂತ ತಯಾರಿಕೆಗೆ 7,280 ಕೋಟಿ ರೂ. ಅನುಮೋದನೆ

ಪ್ರಮುಖ ಉದ್ಯಮಗಳಾದ ಎಲೆಕ್ಟ್ರಿಕ್‌ ವಾಹನ, ಏರೋಸ್ಪೇಸ್‌, ಎಲೆಕ್ಟ್ರಾನಿಕ್ಸ್‌, ವೈದ್ಯಕೀಯ ಸಲಕರಣೆ ಮತ್ತು ರಕ್ಷಣೆಯ ಉಪಕರಣಗಳಲ್ಲಿ ವ್ಯಾಪಕವಾಗಿ ಬಳಸುವ ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತ ತಯಾರಿಕೆಗೆ ಕೇಂದ್ರ ಯೋಜನೆ ಪ್ರಕಟಿಸಿದ್ದು, 7,280 ಕೋಟಿ ರೂ. ಅನುಮೋದಿಸಿದೆ.

ಫರಿದಾಬಾದ್‌ ಅಲ್‌ ಪಲಾಹ್‌ ವಿವಿ ಪಕ್ಕದ ಮದ್ರಸಾಕ್ಕೂ ವ್ಯಾಪಿಸಿದ ದೆಹಲಿ ಬಾಂಬ್‌ ಸ್ಫೋಟದ ತನಿಖೆ; ನೆಲ ಮಾಳಿಗೆಯಲ್ಲಿ ಅಡಗಿದ್ಯಾ ಉಗ್ರ ಸಂಚಿನ ರಹಸ್ಯ?

ದೆಹಲಿ ಸ್ಫೋಟ: ಅಲ್‌ ಪಲಾಹ್‌ ವಿವಿ ಪಕ್ಕದ ಮದ್ರಸಾದ ನೆಳ ಮಾಳಿಗೆಯಲ್ಲಿ ಶೋಧ

ದೆಹಲಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕಾಗಿದ್ದು, ಫರಿದಾಬಾದ್‌ನ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದ ಕೇವಲ 900 ಮೀಟರ್‌ ದೂರಲ್ಲಿರುವ ಮದ್ರಸಾದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮದ್ರಸಾದ ನೆಲ ಮಾಳಿಗೆಯನ್ನು ತನಿಖಾಧಿಕಾರಿಗಳು ಶೋಧಿಸಿದ್ದು, ಪ್ರಕರಣದ ಸಂಚು ಹೊರ ಬೀಳುವ ಸಾಧ್ಯತೆ ಇದೆ.

Cyclone Senyar: ಭಾರತಕ್ಕೆ ಅಪ್ಪಳಿಸಲಿದೆ ಸೆನ್ಯಾರ್ ಚಂಡಮಾರುತ; ಭಾರಿ ಮಳೆಯ ಮುನ್ನೆಚ್ಚರಿಕೆ

ಭಾರತಕ್ಕೆ ಅಪ್ಪಳಿಸಲಿದೆ ಸೆನ್ಯಾರ್ ಚಂಡಮಾರುತ

IMD: ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ರೂಪುಗೊಳ್ಳುವ ಲಕ್ಷಣ ಗೋಚರಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ ಸೆನ್ಯಾರ್ ಎಂದು ಹೆಸರಿಡಲಾಗಿದೆ. ಮಲೇಷ್ಯಾ ಮತ್ತು ಮಲಕ್ಕಾ ಜಲಸಂಧಿಯ ಬಳಿ ವಾಯುಭಾರ ಕುಸಿತವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಇದು ಸೆನ್ಯಾರ್ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ದಕ್ಷಿಣ ಭಾರತದಲ್ಲ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಶೂನ್ಯ ಸುಂಕ, ವೈದ್ಯಕೀಯ ವೀಸಾ ಹೆಚ್ಚಳ; ಅಫ್ಘಾನಿಸ್ತಾನ ಭಾರತಕ್ಕೆ ಇನ್ನಷ್ಟು ಹತ್ತಿರ

ಭಾರತದೊಂದಿಗಿನ ಸಂಬಂಧ ವೃದ್ಧಿಗೆ ಅಫ್ಘಾನಿಸ್ತಾನದಿಂದ ಕ್ರಮ

Afghanistan-India: ಭಾರತದೊಂದಿಗಿನ ಸಂಬಂಧವನ್ನು ಅಫ್ಘಾನಿಸ್ತಾನ ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಈಗಾಗಲೇ ಅಫ್ಘಾನಿಸ್ತಾನ ಭಾರತೀಯ ಉದ್ಯಮಗಳಿಗೆ 5 ವರ್ಷಗಳ ತೆರಿಗೆ ವಿನಾಯಿತಿ ನೀಡಿದೆ. ಇದೀಗ ಅಫ್ಘಾನಿಸ್ತಾನದ ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್, ಎರಡೂ ಕಡೆಯಲ್ಲಿ ಕಂಡು ಬಂದಿರುವ ವೀಸಾ ಮತ್ತು ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಜತೆಗೆ ವ್ಯಾಪಾರವನ್ನು 1 ಬಿಲಿಯನ್ ಅಮೆರಿಕನ್‌ ಡಾಲರ್‌ ಏರಿಸಬೇಕೆಂಬ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

Ayodhya Ram Temple: ಕಳೆಗಟ್ಟಿದ ಅಯೋಧ್ಯೆ; ರಾಮ ಮಂದಿರದಲ್ಲಿ ನಾಳೆ ಧ್ವಜಾರೋಹಣ: ಪ್ರಧಾನಿ ನರೇಂದ್ರ ಮೋದಿ ಭಾಗಿ

ಅಯೋಧ್ಯೆ ರಾಮ ಮಂದಿರದಲ್ಲಿ ನಾಳೆ ಧ್ವಜಾರೋಹಣ

ಕಳೆದ ವರ್ಷ ಪ್ರಾಣ ಪ್ರತಿಷ್ಠೆಯ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಇದೀಗ ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಲು ಸಜ್ಜಾಗಿದೆ. ರಾಮ ಮಂದಿರದ ನಿರ್ಮಾನ ಕಾರ್ಯ ಪೂರ್ಣಗೊಂಡಿದ್ದು, ಅದರ ಭಾಗವಾಗಿ ನವೆಂಬರ್‌ 25ರಂದು ಧ್ವಜಾರೋಹರಣ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಸದ್ಯ ಇಡೀ ನಗರ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದೆ.

Aadhaar Card Latest Update: ಆಧಾರ್‌ ಕಾರ್ಡ್‌ಗೆ ಬರಲಿದೆ ಹೊಸ ವಿನ್ಯಾಸ! ಏನಿದು ಬದಲಾವಣೆ?

ಆಧಾರ್‌ ಕಾರ್ಡ್‌ಗೆ ಬರಲಿದೆ ಹೊಸ ವಿನ್ಯಾಸ! ಏನಿದು ಬದಲಾವಣೆ?

Aadhaar Card: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್‌ ಕಾರ್ಡ್‌ನಲ್ಲಿ ಡಿಸೆಂಬರ್‌ನಿಂದ ಹೊಸ ಮಹತ್ವದ ವಿನ್ಯಾಸವನ್ನು ಮಾಡುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ಹೊಸ ಬದಲಾವಣೆಯಲ್ಲಿ ಆಧಾರ್‌ ಕಾರ್ಡ್‌ನಲ್ಲಿ ಕಾರ್ಡ್‌ದಾರರ ಫೋಟೊ ಮತ್ತು ಕ್ಯುಆರ್‌ ಕೋಡ್‌ ಮಾತ್ರ ಇರಲಿದೆ. ಇದರಿಂದ ಕಾರ್ಡ್‌ದಾರರ ವೈಯಕ್ತಿಕ ವಿವರಗಳಾದ ಹೆಸರು, ವಿಳಾಸ, 12 ಅಂಕಿಗಳ ಆಧಾರ್‌ ಸಂಖ್ಯೆ ಬಹಿರಂಗವಾಗಿ ಕಾಣಿಸುವುದಿಲ್ಲ.

ಪಾಕಿಸ್ತಾನದ ಪೇಶಾವರ ಅರೆಸೇನಾ ಪಡೆಯ ಕಚೇರಿ ಮೇಲೆ ಉಗ್ರರ ದಾಳಿ; 6 ಮಂದಿ ಸಾವು

ಪಾಕಿಸ್ತಾನದಲ್ಲಿ ಉಗ್ರರ ದಾಳಿ; 6 ಮಂದಿ ಸಾವು

ಪಾಕಿಸ್ತಾನದಲ್ಲಿ ಮತ್ತೆ ಭಯೋತ್ಪಾದಕರ ದಾಳಿ ನಡೆದಿದ್ದು, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಪೇಶಾವರದಲ್ಲಿರುವ ಅರೆ ಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ನವೆಂಬರ್‌ 24ರಂದು ಬಂದೂಕುಧಾರಿಗಳು ದಾಳಿ ನಡೆಸಿದ್ದು, ಮೃತರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

Loading...