ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ramesh B

Senior Sub Editor

rameshballamule@gmail.com

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಶೂನ್ಯ ಸುಂಕ, ವೈದ್ಯಕೀಯ ವೀಸಾ ಹೆಚ್ಚಳ; ಅಫ್ಘಾನಿಸ್ತಾನ ಭಾರತಕ್ಕೆ ಇನ್ನಷ್ಟು ಹತ್ತಿರ

ಭಾರತದೊಂದಿಗಿನ ಸಂಬಂಧ ವೃದ್ಧಿಗೆ ಅಫ್ಘಾನಿಸ್ತಾನದಿಂದ ಕ್ರಮ

Afghanistan-India: ಭಾರತದೊಂದಿಗಿನ ಸಂಬಂಧವನ್ನು ಅಫ್ಘಾನಿಸ್ತಾನ ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಈಗಾಗಲೇ ಅಫ್ಘಾನಿಸ್ತಾನ ಭಾರತೀಯ ಉದ್ಯಮಗಳಿಗೆ 5 ವರ್ಷಗಳ ತೆರಿಗೆ ವಿನಾಯಿತಿ ನೀಡಿದೆ. ಇದೀಗ ಅಫ್ಘಾನಿಸ್ತಾನದ ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್, ಎರಡೂ ಕಡೆಯಲ್ಲಿ ಕಂಡು ಬಂದಿರುವ ವೀಸಾ ಮತ್ತು ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಜತೆಗೆ ವ್ಯಾಪಾರವನ್ನು 1 ಬಿಲಿಯನ್ ಅಮೆರಿಕನ್‌ ಡಾಲರ್‌ ಏರಿಸಬೇಕೆಂಬ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

Ayodhya Ram Temple: ಕಳೆಗಟ್ಟಿದ ಅಯೋಧ್ಯೆ; ರಾಮ ಮಂದಿರದಲ್ಲಿ ನಾಳೆ ಧ್ವಜಾರೋಹಣ: ಪ್ರಧಾನಿ ನರೇಂದ್ರ ಮೋದಿ ಭಾಗಿ

ಅಯೋಧ್ಯೆ ರಾಮ ಮಂದಿರದಲ್ಲಿ ನಾಳೆ ಧ್ವಜಾರೋಹಣ

ಕಳೆದ ವರ್ಷ ಪ್ರಾಣ ಪ್ರತಿಷ್ಠೆಯ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಇದೀಗ ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಲು ಸಜ್ಜಾಗಿದೆ. ರಾಮ ಮಂದಿರದ ನಿರ್ಮಾನ ಕಾರ್ಯ ಪೂರ್ಣಗೊಂಡಿದ್ದು, ಅದರ ಭಾಗವಾಗಿ ನವೆಂಬರ್‌ 25ರಂದು ಧ್ವಜಾರೋಹರಣ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಸದ್ಯ ಇಡೀ ನಗರ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದೆ.

Aadhaar Card Latest Update: ಆಧಾರ್‌ ಕಾರ್ಡ್‌ಗೆ ಬರಲಿದೆ ಹೊಸ ವಿನ್ಯಾಸ! ಏನಿದು ಬದಲಾವಣೆ?

ಆಧಾರ್‌ ಕಾರ್ಡ್‌ಗೆ ಬರಲಿದೆ ಹೊಸ ವಿನ್ಯಾಸ! ಏನಿದು ಬದಲಾವಣೆ?

Aadhaar Card: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್‌ ಕಾರ್ಡ್‌ನಲ್ಲಿ ಡಿಸೆಂಬರ್‌ನಿಂದ ಹೊಸ ಮಹತ್ವದ ವಿನ್ಯಾಸವನ್ನು ಮಾಡುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ಹೊಸ ಬದಲಾವಣೆಯಲ್ಲಿ ಆಧಾರ್‌ ಕಾರ್ಡ್‌ನಲ್ಲಿ ಕಾರ್ಡ್‌ದಾರರ ಫೋಟೊ ಮತ್ತು ಕ್ಯುಆರ್‌ ಕೋಡ್‌ ಮಾತ್ರ ಇರಲಿದೆ. ಇದರಿಂದ ಕಾರ್ಡ್‌ದಾರರ ವೈಯಕ್ತಿಕ ವಿವರಗಳಾದ ಹೆಸರು, ವಿಳಾಸ, 12 ಅಂಕಿಗಳ ಆಧಾರ್‌ ಸಂಖ್ಯೆ ಬಹಿರಂಗವಾಗಿ ಕಾಣಿಸುವುದಿಲ್ಲ.

ಪಾಕಿಸ್ತಾನದ ಪೇಶಾವರ ಅರೆಸೇನಾ ಪಡೆಯ ಕಚೇರಿ ಮೇಲೆ ಉಗ್ರರ ದಾಳಿ; 6 ಮಂದಿ ಸಾವು

ಪಾಕಿಸ್ತಾನದಲ್ಲಿ ಉಗ್ರರ ದಾಳಿ; 6 ಮಂದಿ ಸಾವು

ಪಾಕಿಸ್ತಾನದಲ್ಲಿ ಮತ್ತೆ ಭಯೋತ್ಪಾದಕರ ದಾಳಿ ನಡೆದಿದ್ದು, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಪೇಶಾವರದಲ್ಲಿರುವ ಅರೆ ಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ನವೆಂಬರ್‌ 24ರಂದು ಬಂದೂಕುಧಾರಿಗಳು ದಾಳಿ ನಡೆಸಿದ್ದು, ಮೃತರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

Dharmendra: ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ನಿಧನ

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ನಿಧನ

ಬಾಲಿವುಡ್‌ ಹೀ ಮ್ಯಾನ್‌ ಖ್ಯಾತಿಯ ಹಿರಿಯ ನಟ ಧರ್ಮೇಂದ್ರ ಮೃತಪಟ್ಟಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರ. ಕೆಲವು ದಿನಗಳ ಹಿಂದೆ 89 ವರ್ಷದ ಧರ್ಮೇಂದ್ರ ಅವರ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರು ಚೇತರಿಸಿಕೊಂಡು ಮುಂಬೈಯ ಬ್ರೀಜ್‌ ಕ್ಯಾಂಡ್‌ ಆಸ್ಪತ್ರೆಯಿಂದ ಡಿಸ್‌ಚಾರ್ಚ್‌ ಆಗಿದ್ದರು.

ರಾಜ್ಯದ 2 ಲಕ್ಷ ಶಿಕ್ಷಕರ ಭವಿಷ್ಯ ಅತಂತ್ರ; ದೆಹಲಿಯಲ್ಲಿ ಸೋಮವಾರ ಪ್ರತಿಭಟನೆ

2 ಲಕ್ಷ ಶಿಕ್ಷಕರ ಭವಿಷ್ಯ ಅತಂತ್ರ; ದೆಹಲಿಯಲ್ಲಿ ನಾಳೆ ಪ್ರತಿಭಟನೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸೋಮವಾರ (ನವೆಂಬರ್‌ 24) ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಜರುಗಲಿದೆ. ʼʼಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಹಸ್ರಾರು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆʼʼ ಎಂದು ಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

Rajnath Singh: ಸಿಂಧ್‌ ಪ್ರಾಂತ್ಯ ಮತ್ತೆ ಭಾರತದ ಭಾಗವಾಗಲಿದೆ; ರಾಜನಾಥ್‌ ಸಿಂಗ್‌ ಎಚ್ಚರಿಕೆಗೆ ಪತರಗುಟ್ಟಿದ ಪಾಕಿಸ್ತಾನ

ಸಿಂಧ್‌ ಪ್ರಾಂತ್ಯ ಮತ್ತೆ ಭಾರತದ ಭಾಗವಾಗಲಿದೆ: ರಾಜನಾಥ್‌ ಸಿಂಗ್‌

Sindh Region: ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯ ಭಾರತದ ಕೈವಶವಾಮಾಡುತ್ಗುತಿದೆ. ಇದಕ್ಕೆ ಕಾರಣವಾಗಿದ್ದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಹೇಳಿಕೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʼʼಪಾಕಿಸ್ತಾನದ ಸಿಂಧ್‌ ಪ್ರಾಂತ್ಯ ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದುʼʼ ಎಂದಿದ್ದಾರೆ.

ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ: ವಿಶ್ವ ದಾಖಲೆ ಬರೆದ 'ಒಂದು ಜಗತ್ತು ಒಂದು ಕುಟುಂಬ' ಸಾಂಸ್ಕೃತಿಕ ಮಹೋತ್ಸವ

ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ

Sri Sathya Sai Baba Birth Centenary: ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಚಿಕ್ಕಬಳ್ಳಾಪುರದ ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ಸಂಪನ್ನವಾಯಿತು. ಇದೇ ವೇಳೆ 1 'ಒಂದು ಜಗತ್ತು ಒಂದು ಕುಟುಂಬ' ವಿಶ್ವ ಸಾಂಸ್ಕೃತಿಕ ಮಹೋತ್ಸವವು ವಿಶ್ವದ ಅತಿ ದೀರ್ಘ ಸಾಂಸ್ಕೃತಿಕ ಉತ್ಸವ ಎಂದು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದ್ದು ವಿಶೇಷ.

ಪಾಕಿಸ್ತಾನದ ಡ್ರೋನ್‌ ಮೂಲಕ ಏಕಕಾಲಕ್ಕೆ ಬಾಂಬ್‌ ಸಾಗಿಸಲು ಸಂಚು ರೂಪಿಸಿದ್ದ ಉಗ್ರರು; ಫರಿದಾಬಾದ್‌ ಸ್ಫೋಟಕ ಪತ್ತೆಯೊಂದಿಗೆ ಬಯಲಾಗಿದ್ದು ಬಹುದೊಡ್ಡ ವಿಧ್ವಂಸಕ ಕೃತ್ಯ

ಪಾಕ್‌ ಡ್ರೋನ್‌ ಮೂಲಕ ಬಾಂಬ್‌ ಸಾಗಿಸಲು ಸಂಚು ರೂಪಿಸಿದ್ದ ಉಗ್ರರು

White-Collar Terror Module: ನವೆಂಬರ್‌ 10ರಂದು ದೆಹಲಿ ಕೆಂಪು ಕೋಟೆ ಬಳಿ ನಡೆದ ಬಾಂಬ್‌ ದಾಳಿಯ ಜಾಡು ಹಿಡಿದು ಹೊರಟ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಒಂದೊಂದೇ ರಹಸ್ಯ ಬಿಚ್ಚಿಕೊಳ್ಳುತ್ತಿದೆ. ಉಗ್ರರು ಪಾಕಿಸ್ತಾನದಿಂದ ಬಹು ದೂರ ಸಾಗಬಲ್ಲ ಡ್ರೋನ್‌ ತರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು ಎನ್ನುವುದು ಇದೀಗ ಗೊತ್ತಾಗಿದೆ.

ಜಮ್ಮು ಕಾಶ್ಮೀರದ ವೈದ್ಯಕೀಯ ಕಾಲೇಜಿನ 50 ಸೀಟ್‌ಗಳ ಪೈಕಿ 42 ಮುಸ್ಲಿಂ ವಿದ್ಯಾರ್ಥಿಗಳು; ಬಿಜೆಪಿಯಿಂದ ವಿರೋಧ

ಜಮ್ಮು ವೈದ್ಯಕೀಯ ಕಾಲೇಜಿನಲ್ಲಿ ಬಹುತೇಕ ಮುಸ್ಲಿಂ ವಿದ್ಯಾರ್ಥಿಗಳು

ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಹೊಸದಾಗಿ ಆರಂಭವಾಗಿರುವ ಶ್ರೀ ಮಾತಾ ವೈಷ್ಣೋ ದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಎಕ್ಸಲೆನ್ಸ್‌ ವೈದ್ಯಕೀಯ ಕಾಲೇಜಿನ 2025-26ರ ಶೈಕ್ಷಣಿಕ ವರ್ಷದ 50 ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ 42 ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದ್ದು, ವಿವಾದಕ್ಕೆ ಕಾರಣವಾಗಿದೆ. ಪ್ರವೇಶ ಪಡೆದ ಮುಸ್ಲಿಂ ವಿದ್ಯಾರ್ಥಿಗಳ ಸೀಟನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

WCD Shivamogga Recruitment 2025: ಶಿವಮೊಗ್ಗ ಅಂಗನವಾಡಿಯಲ್ಲಿದೆ 544 ಹುದ್ದೆ; 10, 12ನೇ ತರಗತಿ ಪಾಸಾದವರು ಅಪ್ಲೈ ಮಾಡಿ

ಶಿವಮೊಗ್ಗ ಅಂಗನವಾಡಿಯಲ್ಲಿದೆ 544 ಹುದ್ದೆ

Job Guide: ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ 544 ಅಂಗನವಾಡಿ ವರ್ಕರ್‌ (ಕಾರ್ಯಕರ್ತೆ) ಮತ್ತು ಹೆಲ್ಪರ್‌ (ಸಹಾಯಕಿ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಡಿಸೆಂಬರ್‌ 15.

ಒತ್ತಡ, ನಿದ್ರೆ ನಿರ್ವಹಣೆ ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಮಾನಸಿಕ ಆರೋಗ್ಯಕ್ಕೆ ಒತ್ತಡ, ನಿದ್ರೆ ನಿರ್ವಹಣೆ ಸಹಕಾರಿ

Mental Health: ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಎನ್ನುವುದು ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಅನೇಕರು ಮಾನಸಿಕ ತುಮುಲ ಅನುಭವಿಸುತ್ತಿದ್ದಾರೆ. ಇದರಿಂದ ಹೊರ ಬರಲು ಉತ್ತಮ ನಿದ್ರೆ ಜತೆಗೆ ಒತ್ತಡ ನಿರ್ವಹಣೆ ಮುಖ್ಯ. ಈ ಬಗ್ಗೆ ವಿವರ ಇಲ್ಲಿದೆ.

ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ತನಿಖೆಗೆ ಎಸ್ಐಟಿ ರಚನೆ: ಡಿ.ಕೆ. ಶಿವಕುಮಾರ್

ಭೂಸ್ವಾಧೀನ ಕೋರ್ಟ್: ಕರ್ತವ್ಯ ಲೋಪ ತನಿಖೆಗೆ ಎಸ್ಐಟಿ ರಚನೆ

D.K. Shivakumar: ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಜಲ ಸಂಪನ್ಮೂಲ, ಬಿಡಿಎ ಭೂಸ್ವಾಧೀನ ಪ್ರಕರಣಗಳ ಕುರಿತು ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಶನಿವಾರ ಸಭೆ ನಡೆಸಿದರು. ಈ ವೇಳೆ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.

ಇವಳೆಂಥಾ ತಾಯಿ? 7 ದಿನಗಳ ಮಗುವನ್ನು 6 ಲಕ್ಷ ರೂ.ಗೆ ಸೇಲ್‌ ಮಾಡಿದ ಮಹಿಳೆ

7 ದಿನಗಳ ಮಗುವನ್ನು 6 ಲಕ್ಷ ರೂ.ಗೆ ಸೇಲ್‌ ಮಾಡಿದ ಮಹಿಳೆ

ಮಕ್ಕಳ ಮಾರಾಟ ಜಾಲ ತೆಲಂಗಾಣದ ಕರಿಂನಗರದಲ್ಲಿ ಸಕ್ರಿಯವಾಗಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಈ ಮಹಿಳೆ ಮಧ್ಯವರ್ತಿಯ ಸಹಾಯದಿಂದ ತನ್ನ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕರಿಂನಗರ ಟೌನ್‌ 2 ಪೊಲೀಸರು ಮಾಹಿತಿ ನೀಡಿದ್ದಾರೆ.

Air India: ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೊಂದು ದುರಂತ; ಕೆನಡಾದಿಂದ ಮರಳುತ್ತಿದ್ದ ಪ್ರಯಾಣಿಕ ಸಾವು

ಕೆನಡಾದಿಂದ ಮರಳುತ್ತಿದ್ದ ಏರ್‌ ಇಂಡಿಯಾ ಪ್ರಯಾಣಿಕ ಸಾವು

ಎದೆ ನೋವು ಕಾಣಿಸಿಕೊಂಡು 70 ವರ್ಷದ ಪ್ರಯಾಣಿಕರೊಬ್ಬರು ಏರ್‌ ಇಂಡಿಯಾ ವಿಮಾನದಲ್ಲಿ ಮೃತಪಟ್ಟ ಘಟನೆ ನವೆಂಬರ್‌ 21ರಂದು ನಡೆದಿದೆ. ಮೃತರನ್ನು ದೆಹಲಿ ನಿವಾಸಿ ದಲ್ಬಿರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಕೆನಡಾದ ವ್ಯಾಂಕೋವರ್‌ನಿಂದ ಮರಳುತ್ತಿದ್ದ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡು ಕೊನೆಯುಸಿರೆಳೆದರು.

G20 Summit: ಮತ್ತೊಮ್ಮೆ ಮೆಲೋಡಿ ಮೋಡಿ; ಜಿ20 ಶೃಂಗಸಭೆಯಲ್ಲಿ ಗಮನ ಸೆಳೆದ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ

ಜಿ20 ಶೃಂಗಸಭೆಯಲ್ಲಿ ನಗು ವಿನಿಮಯ ಮಾಡಿಕೊಂಡ ಮೋದಿ, ಮೆಲೊನಿ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಆತ್ಮೀಯವಾಗಿ ಮಾತನಾಡಿದರು. ಇಬ್ಬರು ನಾಯಕರು ಕೈಕುಲುಕಿ, ನಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Karnataka Weather: ರಾಜ್ಯದಲ್ಲಿ ಚಳಿಗೆ ಮಳೆಯ ಸಾಥ್‌; ಈಶಾನ್ಯ ಮಾನ್ಸೂನ್‌ ಮತ್ತೆ ಚುರುಕು

ರಾಜ್ಯದಲ್ಲಿ ಈಶಾನ್ಯ ಮಾನ್ಸೂನ್‌ ಮತ್ತೆ ಚುರುಕು

ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಕೆಲ ದಿನಗಳಿಂದ ದುರ್ಬಲವಾಗಿದ್ದ ಈಶಾನ್ಯ ಮಾನ್ಸೂನ್‌ ಮತ್ತೆ ಚುರುಕುಗೊಂಡಿದೆ. ಶನಿವಾರ (ನವೆಂಬರ್‌ 22) ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Bengaluru Robbery Case: ಬೆಂಗಳೂರು ದರೋಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಚಾಲಕ ಸಹಿತ ಮತ್ತೆ ಮೂವರು ವಶಕ್ಕೆ

ಬೆಂಗಳೂರು ದರೋಡೆ ಪ್ರಕರಣ; ಚಾಲಕ ಸಹಿತ ಮತ್ತೆ ಮೂವರು ವಶಕ್ಕೆ

ಬೆಂಗಳೂರು ನಡೆದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಸಿಎಂಎಸ್‌ ವಾಹನದ ಚಾಲಕ, ಕ್ಯಾಷಿಯರ್‌ ಮತ್ತು ಗನ್‌ ಮ್ಯಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರು ನಡೆಸಿ ಚಾಲಕನನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದಾರೆ.

Wealth Creation Guide: ನಿಮ್ಮ ಹಣ ಡಬಲ್‌ ಮಾಡುತ್ತೆ ರೂಲ್‌ 72; ಏನಿದು ಫಾರ್ಮ್ಯುಲಾ? ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ ಸಂಪೂರ್ಣ ವಿವರ

ನಿಮ್ಮ ಹಣ ಡಬಲ್‌ ಮಾಡುತ್ತೆ ರೂಲ್‌ 72

Rule of 72: ಚಕ್ರಬಡ್ಡಿಯಲ್ಲಿ ನಿಮ್ಮ ಹೂಡಿಕೆ ಎಷ್ಟು ಬೇಗ ಇಮ್ಮಡಿಯಾಗುತ್ತದೆ ಎಂಬುದನ್ನು ತಿಳಿಯಲು ತಜ್ಞರು ಶಿಫಾರಸು ಮಾಡುವ ಸೂತ್ರವೇ 72. ಈ ಫಾರ್ಮ್ಯುಲಾದಿಂದ ಹೂಡಿಕೆದಾರರು ತಮ್ಮ ಹೂಡಿಕೆ ಎಷ್ಟು ಬೇಗ ಇಮ್ಮಡಿಯಾಗಬಲ್ಲುದು ಎಂಬುದನ್ನು ತಿಳಿಯಬಹುದು. ಈ ಬಗ್ಗೆ ಉದಾಹರಣೆ ಸಮೇತ ವಿವರ ಇಲ್ಲಿದೆ.

ಆಸ್ಪತ್ರೆಯಲ್ಲಿ ಭಾವಿ ಪತ್ನಿಯೊಂದಿಗೆ ಹೆಜ್ಜೆ ಹಾಕಿದ ವೈದ್ಯ; ʼʼಗುರು ಇದು ಡ್ಯಾನ್ಸ್‌ ಫ್ಲೋರ್‌ ಅಲ್ಲʼʼ ಎಂದ ನೆಟ್ಟಿಗರು

ಆಸ್ಪತ್ರೆಯಲ್ಲಿ ಭಾವಿ ಪತ್ನಿಯೊಂದಿಗೆ ಹೆಜ್ಜೆ ಹಾಕಿದ ವೈದ್ಯ

Viral Video: ವೈದ್ಯನೊಬ್ಬ ಆಸ್ಪತ್ರೆಯಲ್ಲಿ ತನ್ನ ಭಾವಿ ಪತ್ನಿಯೊಂದಿಗೆ ಡ್ಯಾನ್ಸ್‌ ಮಾಡಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ಶಾಮ್ಲಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯನನ್ನು ಡಾ. ವಕಾರ್ ಸಿದ್ದಿಕಿ ಎಂದು ಗುರುತಿಸಲಾಗಿದೆ.

Tejas Fighter Jet Crash: ದುಬೈ ಏರ್‌ ಶೋನಲ್ಲಿ ಭಾರತದ ತೇಜಸ್‌ ಯುದ್ಧ ವಿಮಾನ ಪತನ

ದುಬೈ ಏರ್‌ ಶೋನಲ್ಲಿ ತೇಜಸ್‌ ಯುದ್ಧ ವಿಮಾನ ಪತನ

Dubai Air Show 2025: ದುಬೈಯಲ್ಲಿ ನಡೆಯುತ್ತಿರುವ ಏರ್‌ ಶೋದಲ್ಲಿ ಭಾರತದ ತೇಜಸ್‌ ಯುದ್ಧ ವಿಮಾನ ಪತನವಾಗಿದೆ. ಎಚ್‌ಎಎಲ್‌ ನಿರ್ಮಿತ ಈ ಲಘು ಯುದ್ಧ ವಿಮಾನ ಏಕಾಏಕಿ ಭೂಮಿಗೆ ಅಪ್ಪಳಿಸಿದೆ. ಪೈಲಟ್ ಮೃತಪಟ್ಟಿದ್ದಾರೆ. ಮಧ್ಯಾಹ್ನ 2:10ರ ವೇಳೆಗೆ ಈ ಘಟನೆ ನಡೆದಿದೆ.

Viral Video: ಆಟೋ ರಿಕ್ಷಾವನ್ನೇ ಓಯೋ ರೂಮ್‌ ಮಾಡಿಕೊಂಡ ಜೋಡಿ; ರಸ್ತೆ ಮಧ್ಯೆಯೇ ರೊಮ್ಯಾನ್ಸ್‌

ಆಟೋ ರಿಕ್ಷಾವನ್ನೇ ಓಯೋ ರೂಮ್‌ ಮಾಡಿಕೊಂಡ ಜೋಡಿ

ನಿಂತಿದ್ದ ಆಟೋಗೆ ಕರ್ಟನ್‌ ಮುಚ್ಚಿ ಯುವಕ-ಯುವತಿ ರೊಮ್ಯಾನ್ಸ್ ಮಾಡಿದ ಘಟನೆ ಆಂಧ್ರ ಪ್ರದೇಶದ ಏಲೂರು ನಗರದಲ್ಲಿ ನಡೆದಿದೆ. ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ, ಹಗಲಲ್ಲೇ ಕಂಡು ಬಂದ ಜೋಡಿಯ ಈ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ ಕೆಲವರು ಪರಿಶೀಲಿಸಿದಾಗ ಕಾಮಕಾಂಡ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

Stock Market: ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ; ಸೆನ್ಸೆಕ್ಸ್‌ 400 ಅಂಕ ಜಿಗಿತ, ಕಾರಣವೇನು?

ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ; ಕಾರಣವೇನು?

Share Market: ಗುರುವಾರ ಸೆನ್ಸೆಕ್ಸ್‌ 400 ಅಂಕ ಏರಿಕೆಯಾಗಿದೆ. ನಿಫ್ಟಿ 26,200 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಹೆಚ್ಚು ಲಾಭವನ್ನು ಗಳಿಸಿತು. ಈ ಏರಿಕೆಗೆ ಕಾರಣವೇನು ಎನ್ನುವ ವಿವರ ಇಲ್ಲಿದೆ.

Actor Vijay: ಕರೂರು ಕಾಲ್ತುಳಿತ ದುರಂತದ ಬೆನ್ನಲ್ಲೇ ಮತ್ತೊಂದು ರ‍್ಯಾಲಿಗೆ ಸಜ್ಜಾದ ದಳಪತಿ ವಿಜಯ್‌

ಕರೂರು ಕಾಲ್ತುಳಿತ ದುರಂತದ ಬೆನ್ನಲ್ಲೇ ವಿಜಯ್‌ ಮತ್ತೊಂದು ರ‍್ಯಾಲಿಗೆ ಸಜ್ಜು

Tamilaga Vettri Kazhagam: ಸೆಪ್ಟೆಂಬರ್‌ 27ರಂದು ತಮಿಳುನಾಡಿನ ಕರೂರಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಆಯೋಜಿಸಿದ್ದ ರ‍್ಯಾಲಿಯಲ್ಲಿ 41 ಮಂದಿ ಅಸುನೀಗಿದ್ದರು. ಇದರ ಬೆನ್ನಲ್ಲೇ ಪಕ್ಷ ಮತ್ತೊಂದು ರ‍್ಯಾಲಿ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಡಿಸೆಂಬರ್‌ 4ರಂದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ರ‍್ಯಾಲಿ ಆಯೋಜಿಸಲು ಒಪ್ಪಿಗೆ ನೀಡುವಂತೆ ಪಕ್ಷ ಅರ್ಜಿ ಸಲ್ಲಿಸಿದೆ.

Loading...