ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಇಪಿಎಫ್‌ಒ ಕ್ಷಮಾದಾನ ಯೋಜನೆ: ಉದ್ಯೋಗದಾತ ಸಂಸ್ಥೆಗಳಿಗೆ ದಂಡ ಪಾವತಿ ಇಲ್ಲದೆ ಬಾಕಿ ಮೊತ್ತ ಪಾವತಿಸಲು ಅವಕಾಶ

EPFO ಕ್ಷಮಾದಾನ ಯೋಜನೆಗೆ ಅರ್ಜಿ ಆಹ್ವಾನ

EPFO: ನೌಕರರ ಭವಿಷ್ಯ ನಿಧಿ ಸಂಸ್ಥೆಯು ನೂತನ ಕ್ಷಮಾದಾನ ಯೋಜನೆ- 2026 ಪರಿಚಯಿಸಿದೆ. ಇದು ಆದಾಯ ತೆರಿಗೆ ಕಾಯ್ದೆ- 1961ರ ಅಡಿಯಲ್ಲಿ ಗುರುತಿಸಲ್ಪಟ್ಟ ವಿನಾಯಿತಿ ಪಡೆದ ಭವಿಷ್ಯ ನಿಧಿ ಟ್ರಸ್ಟ್‌ಗಳನ್ನು ನಿರ್ವಹಿಸುವ ಸಂಸ್ಥೆಗಳು ತಮ್ಮ ಸ್ಥಿತಿಯನ್ನು ಕ್ರಮಬದ್ಧಗೊಳಿಸಲು ಒಂದು ಬಾರಿಯ ಅವಕಾಶವನ್ನು ಒದಗಿಸುತ್ತದೆ ಹಾಗೂ ಅರ್ಜಿ ಸಲ್ಲಿಸಲು 6 ತಿಂಗಳ ಕಾಲ ಅವಕಾಶವಿರುತ್ತದೆ.

ಮಲಯಾಳಂ ರಿಯಾಲಿಟಿ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಗಾಯಕಿ ಜಾನಕಿ; ಹಳೆ ವಿಡಿಯೊ ಮತ್ತೆ ವೈರಲ್‌

ಮಲಯಾಳಂ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಜಾನಕಿ

S Janaki: ಸಾವಿರಾರು ಸೂಪರ್‌ ಹಿಟ್‌ ಕನ್ನಡ ಹಾಡುಗಳ ಮೂಲಕ ಚಿತ್ರಪ್ರೇಮಿಗಳ ಮನಗೆದ್ದ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ. 88 ವರ್ಷದ ಅವರು ಜುಲೈ 11ರಂದು ಮೈಸೂರಿನಲ್ಲಿ ಅಸ್ತಂಗತರಾದರು. 4 ರಾಷ್ಟ್ರ ಪ್ರಸಸ್ತಿ ಮುಡಿಗೇರಿಸಿಕೊಂಡಿದ್ದ ಅವರು ತಮ್ಮ ವೃತ್ತಿ ಜೂವನದ ಅತಯಂತ ಕಠಿಣ ಹಾಡನ್ನು ಮಲಯಾಳಂ ರಿಯಾಲಿಟಿ ಶೋದಲ್ಲಿ ಪ್ರಸ್ತಾವಿಸಿದ್ದರು. ಆ ವಿಡಿಯೊ ಮತ್ತೆ ವೈರಲ್‌ ಆಗಿದೆ.

ದಿನ ಭವಿಷ್ಯ, ಜುಲೈ 12, 2026: ಆರೋಗ್ಯದ ಕಡೆ ಗಮನ ಕೊಡಿ; ಅನಗತ್ಯ ಖರ್ಚು ತಪ್ಪಿಸದಿದ್ದರೆ ಸಂಕಷ್ಟ

ಅನಗತ್ಯ ಖರ್ಚು ತಪ್ಪಿಸದಿದ್ದರೆ ಸಂಕಷ್ಟ

Horoscope Today July 12th 2026: ವರ್ಷ ಋತು ಆಷಾಢ ಕೃಷ್ಣ ಪಕ್ಷದ ತ್ರಯೋದಶಿ ವಾರ ಭಾನುವಾರವಾದ ಇಂದು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ವಿಶೇಷ ದಿನ. ಹೊಸ ಕೆಲಸ ಶುರು ಮಾಡಲು ವಿಜಯ ಮುಹೂರ್ತ ಉತ್ತಮ. ಶಿವಲಿಂಗಕ್ಕೆ ನೀರು-ಬಿಲ್ವಪತ್ರೆ ಅರ್ಪಿಸಿದರೆ ಒಳಿತಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಪಂಡಿತರು.

ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ ನೆಲೆಸಿದ್ದು ಕರುನಾಡಲ್ಲಿ; ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆಯ ಮೆಲುಕು

ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆ

S Janaki: ಕನ್ನಡದ ಸೂಪರ್‌ ಹಿಟ್‌ ಚಿತ್ರಗೀತೆಗಳಿಗೆ ಧ್ವನಿ ನೀಡಿದ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌. ಜಾನಕಿ ಇನ್ನಿಲ್ಲ. ಹೌದು, ತಮ್ಮ ಭಾವಪೂರ್ಣ ಧ್ವನಿಯಿಂದಲೇ ಚಿತ್ರರಸಿಕರ ಮನಗೆದ್ದ, ಬರೋಬ್ಬರಿ 6 ದಶಕಗಳ ಕಾಲ ಗಾಯನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ಅವರ ಬಗ್ಗೆ ಸಾಧನೆಯ ಬಗ್ಗೆ ಇಲ್ಲಿದೆ ವಿವರ.

ಈ ಒಂದು ಕಾರಣಕ್ಕೆ ಅಂದು ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದ ಗಾಯಕಿ ಎಸ್‌. ಜಾನಕಿ

ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದೇಕೆ ಗಾಯಕಿ ಎಸ್‌. ಜಾನಕಿ?

ಹಿನ್ನೆಲೆ ಗಾಯನಕ್ಕಾಗಿ 4 ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಗಾಯಕಿ, ಗಾನ ಕೋಗಿಲೆ ಎಸ್‌. ಜಾನಕಿ ಮೈಸೂರಿನಲ್ಲಿ ನಿಧನ ಹೊಂದಿದರು. ಅವರು 2013ರಲ್ಲಿ ತಮ್ಮನ್ನು ಅರಸಿಕೊಂಡು ಬಂದಿದ್ದ ಪದ್ಮ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅದೇಕೆ ಎನ್ನುವ ವಿವರ ಇಲ್ಲಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ; ಮೈಸೂರಿನಲ್ಲಿ ನಿಧನ

ಖ್ಯಾತ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿದ್ದ ಖ್ಯಾತ ಗಾಯಕಿ ಎಸ್‌. ಜಾನಕಿ ನಿಧನ ಹೊಂದಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಶನಿವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟರು.

Pravasi Prapancha: ಧರೆಗಿಳಿದ ಸೀತಾರಾಮ; ರಾಮನಗರದ ಚನ್ನಮಾನಹಳ್ಳಿಯ ಶ್ರೀ ಸೀತಾರಾಮಚಂದ್ರ ದೇವಾಲಯ

ಗಮನ ಸೆಳೆವ ಚನ್ನಮಾನಹಳ್ಳಿಯ ಸೀತಾರಾಮಚಂದ್ರ ದೇವಾಲಯ

ರಾಮನಗರದ ಚನ್ನಮಾನಹಳ್ಳಿಯಲ್ಲಿ ನಿರ್ಮಿಸಲ್ಪಟ್ಟ ಈ ಶ್ರೀ ಸೀತಾರಾಮಚಂದ್ರ ದೇವಾಲಯವು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಂತ ಸುಂದರ ಹಾಗೂ ವೈಭವಯುತ ಕಲಾಕೃತಿಯಾಗಿ ಮೂಡಿಬರಲು ದೇಶದ ಹೆಸರಾಂತ ತಜ್ಞರು, ಅನುಭವಿ ಸ್ಥಪತಿಗಳು, ಶಿಲ್ಪಿಗಳು ಮತ್ತು ಚಿತ್ರಕಲಾವಿದರು ಶ್ರಮಿಸಿದ್ದಾರೆ. ತಮಿಳುನಾಡು ಸರಕಾರದ ಪ್ರಸಿದ್ಧ ಸ್ಥಪತಿಗಳಾದ, ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತಯ್ಯ ಸ್ಥಪತಿಗಳ ಉನ್ನತ ನೇತೃತ್ವದಲ್ಲಿ ಚನ್ನಮಾನಹಳ್ಳಿಯ ಈ ದೇವಾಲಯದ ಸಂಪೂರ್ಣ ವಿನ್ಯಾಸ ನೆರವೇರಿತು.

Gold Price Today On 11th July 2026: ವೀಕೆಂಡ್‌ ಶಾಪಿಂಗ್‌ ಮಾಡೋರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold silver Price Today: ಚಿನ್ನದ ದರ ಶನಿವಾರ (ಜುಲೈ 11) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 45 ರುಪಾಯಿ ಕಡಿಮೆಯಾಗಿ 13,230 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 49 ರುಪಾಯಿ ಅಗ್ಗವಾಗಿ, 14,433 ರುಪಾಯಿಗೆ ಬಂದಿದೆ.

Karnataka Weather: ರಾಜ್ಯದ ವಿವಿಧೆಡೆ ಗಾಳಿ ಸಹಿತ ಭಾರಿ ಮಳೆ ಸಾಧ್ಯತೆ; ಕರಾವಳಿ ಸಹಿತ ವಿವಿಧ ಜಿಲ್ಲೆಗಳಿಗಳಿಗೆ ಯೆಲ್ಲೋ ಅಲರ್ಟ್‌

ಇಂದು ಕರಾವಳಿ ಸಹಿತ ವಿವಿಧ ಜಿಲ್ಲೆಗಳಿಗಳಿಗೆ ಯೆಲ್ಲೋ ಅಲರ್ಟ್‌

Weather Report: ನಿಧಾನವಾಗಿ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಶುಕ್ರವಾರ ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ 24 ಗಂಟೆಯವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಗಾಳಿ ಸಹಿತ ಮಳೆ ಸುರಿಯಲಿದೆ.

ಬಿಜೆಪಿ ಶಾಸಕ ವೇದವ್ಯಾಸ್‌ ಕಾಮತ್‌ ವಿರುದ್ಧದ ಪ್ರಕರಣ ರದ್ದು: ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಬಿಜೆಪಿ ಶಾಸಕ ವೇದವ್ಯಾಸ್‌ ಕಾಮತ್‌ ವಿರುದ್ಧದ ಪ್ರಕರಣ ರದ್ದು

Vedavyas Kamath: ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಿ. ವೇದವ್ಯಾಸ್ ಕಾಮತ್ ಮತ್ತು ಅವರ ಬೆಂಬಲಿಗರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ರಾಜಕೀಯ ವೈಷಮ್ಯ ಹಾಗೂ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು.

ರಾಜ್ಯದಲ್ಲಿ ಮತ್ತೊಂದು ಲವ್‌ ಜಿಹಾದ್‌? ಹಿಂದೂ ಯುವತಿಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ ನವಾಜ್‌

ಹಿಂದೂ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ನವಾಜ್‌

Love Jihad: ಬೆಂಗಳೂರಿನಲ್ಲಿ ಲವ್‌ ಜಿಹಾದ್‌ ಹೋಲುವ ಪ್ರಕರಣವೊಂದು ನಡೆದಿದೆ. ಬೆಂಗಳೂರಿನ ವರ್ತೂರು ಮುಖ್ಯ ರಸ್ತೆ ಬಳಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಾಡುಗೋಡಿ ವೆನ್ನೆಲ್ಲಾ ಹತ್ಯೆ; ಕರುಳ ಕುಡಿಯನ್ನೇ ಕೊಂದ ಪ್ರಿಯಕರನಿಗೆ ನೆರವಾದ ಪಾಪಿ ತಾಯಿ ಪ್ರಿಯಾಂಕಾಗೆ ಜಾಮೀನು

ವೆನ್ನೆಲ್ಲಾ ಕೊಲೆ ಆರೋಪಿ ತಾಯಿ ಪ್ರಿಯಾಂಕಾಗೆ ಜಾಮೀನು

Vennella Case: ಬೆಂಗಳೂರು ಕಾಡುಗೋಡಿಯ 5 ವರ್ಷದ ಬಾಲಕಿ ವೆನ್ನೆಲ್ಲಾ ಕೊಲೆ ಪ್ರಕರಣದ ಆರೋಪಿ, ತಾಯಿ ಪ್ರಿಯಾಂಕಾಗೆ ಜಾಮೀನು ಸಿಕ್ಕಿದೆ. ಪ್ರಿಯಾಂಕಾ ಪರ ವಕೀಲ ಪ್ರಸನ್ನ ವಾದ ಮಂಡಿಸಿ ಕೊಲೆಯಲ್ಲಿ ಪ್ರಿಯಾಂಕಾ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಬನಶಂಕರಿ ಸ್ಕೈವಾಕ್ ಯೋಜನೆ ತಕ್ಷಣ ಜಾರಿಗೊಳಿಸಲು ಸಚಿವ ಕೃಷ್ಣ ಬೈರೇಗೌಡಗೆ ಸಂಸದ ತೇಜಸ್ವಿ ಸೂರ್ಯ ಪತ್ರ

ಬನಶಂಕರಿ ಸ್ಕೈವಾಕ್ ಯೋಜನೆ ಜಾರಿಗೊಳಿಸಲು ತೇಜಸ್ವಿ ಸೂರ್ಯ ಪಟ್ಟು

Banashankari Skywalk: ಬಹುಬೇಡಿಕೆಯ ಬೆಂಗಳೂರಿನ ಬನಶಂಕರಿ ಸ್ಕೈವಾಕ್‌ ಯೋಜನೆಯನ್ನು ಜಾರುಗೊಳಿಸಬೇಕೆಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಒಂದು ಸರಳ ಸ್ಕೈವಾಕ್ ನಿರ್ಮಾಣಕ್ಕೂ ಇಷ್ಟು ವರ್ಷ ಬೇಕೇ? ಎಂದೂ ಅವರು ಪ್ರಶ್ನಿಸಿದ್ದಾರೆ.

ʼʼನನ್ನನ್ನು ಕ್ಷಮಿಸಿʼʼ: ಶಿಕ್ಷಕಿ ಬೈದಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು; ಡೆತ್‌ನೋಟ್‌ನಲ್ಲಿ ಏನಿದೆ?

ಶಿಕ್ಷಕಿ ಬೈದಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು

Self Harming: ಶಿಕ್ಷಕಿ ಬೈದರು, ಅವಮಾನ ಮಾಡಿದರೆಂಬ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮಧುಶ್ರೀ ಎಂದು ಗುರುತಿಸಲಾಗಿದೆ.

Bengaluru Road Rage: ʼʼನಮ್ಮಲ್ಲಿರುವ ಚಿನ್ನ ತೆಗೆದುಕೊಂಡು ಬಿಟ್ಟುಬಿಡಿʼʼ: ಮಡಿಲಲ್ಲಿ 10 ತಿಂಗಳ ಮಗುವನ್ನಿಟ್ಟುಕೊಂಡು  ಮಹಿಳೆ ಬೇಡಿಕೊಂಡರೂ ದಾಳಿ ನಡೆಸಿದ ದುಷ್ಕರ್ಮಿಗಳು

ಮಹಿಳೆ ಕೈ ಮುಗಿದು ಬೇಡಿಕೊಂಡರೂ ದಾಳಿ ನಡೆಸಿದ ದುಷ್ಕರ್ಮಿಗಳು

Bengaluru-Mysuru Expressway: ಜುಲೈ 5ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದ ರೋಡ್‌ ರೇಜ್‌ಗೆ ಸಂಬಂಧಿಸಿದ ಇನ್ನಷ್ಟು ಆಘಾತಕಾರಿ ವಿವರಗಳು ಹೊರ ಬಿದ್ದಿವೆ. ಕಾರ್‌ನಲ್ಲಿದ್ದ ಪತ್ನಿ ಕೈ ಮುಗಿದು ಬೇಡಿಕೊಂಡರೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸಾಗರ್‌ ಹೇಳಿದ್ದಾರೆ.

ʼʼಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿʼʼ: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷಕ್ಕೆ ಭಾರತ ಆತಂಕ

ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಭಾರತ ಕಳವಳ

Iran-US War: ಇರಾನ್‌-ಅಮೆರಿಕ ನಡುವಿನ ಸಂಘರ್ಷ ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ತಾರಕಕ್ಕೇರಿದೆ. ಈ ಪರಿಸ್ಥಿತಿ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. "ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುವ ವಾಣಿಜ್ಯ ಹಡಗಿನ ಮೇಲಿನ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇಂತಹ ಬೆಳವಣಿಗೆಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಹಾಳು ಮಾಡುತ್ತವೆ ಮತ್ತು ಜಾಗತಿಕ ಇಂಧನ ಸರಬರಾಜು, ಕಡಲ ವಾಣಿಜ್ಯದ ಅಡೆತಡೆಯಿಲ್ಲದ ಹರಿವಿಗೆ ಬೆದರಿಕೆ ಒಡ್ಡುತ್ತವೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಸೋತರೂ ಬುದ್ಧಿ ಕಲಿಯದ ದೀದಿ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ; ವಿಡಿಯೊ ವೈರಲ್‌

ಟಿಎಂಸಿ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ

Mamata Banerjee: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಿಎಂಸಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತೊಬ್ಬರ ಕೆನ್ನೆಗೆ ಹೊಡೆದಿದ್ದು, ವಿಡಿಯೊ ವೈರಲ್‌ ಆಗಿದೆ.

2024ರ ದುರಂತ ನೆನಪಿಸಿದ ವಯನಾಡ್‌ ಭೂ ಕುಸಿತ; ಅವಘಡಕ್ಕೆ ಕಾರಣ ವಿವರಿಸಿದ ಸರ್ಕಾರ

ವಯನಾಡ್‌ ಭೂ ಕುಸಿತ ಕಾರಣ ತಿಳಿಸಿದ ಸಚಿವ

Wayanad Landslide: 2024ರಲ್ಲಿ ದೇಶವನ್ನೇ ನಡುಗಿಸಿದ ಕೇರಳಂನ ವಯನಾಡು ಭೂ ಕುಸಿತ ಮಾದರಿಯ ದುರಂತ ಮತ್ತೆ ಅದೇ ಸ್ಥಳದಲ್ಲಿ ಮರುಕಳಿಸಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಐವರು ಮೃತೊಟ್ಟಿರುವ ಶಂಕೆ ವ್ಯಕ್ತವಾಗಿದೆ. ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ಕೋಝಿಕ್ಕೋಡ್‌ ಜಿಲ್ಲೆಯೊಂದಿಗೆ ಸಂಪರ್ಕ ಕಲ್ಪಿಸುವ ಆನೆಕಂಪೋಯಿಲ್-ಕಲ್ಲಾಡಿ- ಮೇಪ್ಪಾಡಿ ಸುರಂಗ ರಸ್ತೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮೀನಾಕ್ಷಿ ಸೇತುವೆಯ ಬಳಿ ಈ ಭೂಕುಸಿತ ಸಂಭವಿಸಿದೆ.

Crime News: ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು; ಸಹೋದರನ ಸಣ್ಣ ಅನುಮಾನದಿಂದ ಬೆಳಕಿಗೆ ಬಂತು ಭಯಾನಕ ಸಂಚು

ಸರ್ಕಾರಿ ಕೆಲಸಕ್ಕಾಗಿ ತಾಯಿಯನ್ನೇ ಕೊಂದ ಮಗಳು

Rajasthan News: ಕೆಲವು ದಿನಗಳ ಹಿಂದೆ ಪಾಪಿ ಪುತ್ರನೊಬ್ಬ ಸರ್ಕಾರಿ ಕೆಲಸಕ್ಕಾಗಿ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿತ್ತು. ಇದೀಗ ಅಂತಹದ್ದೇ ಮತ್ತೊಂದು ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. ರಾಜಸ್ಥಾನದ ಜೈಪುರದಲ್ಲಿ 23 ವರ್ಷದ ಯುವತಿ ಅನುಕಂಪದ ಸರ್ಕಾರಿ ಕೆಲಸ ಹೊಂದಲು ತಾಯಿಯನ್ನೇ ಕೊಲೆ ಮಾಡಿಸಿ ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾಳೆ.

ಪ್ರವಾಸಿಗರಿಗೆ ‍ಗುಡ್‌ನ್ಯೂಸ್‌: ಪ್ರಕೃತಿಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್‌ ಯಾತ್ರಾ ಟೂರ್

ಪ್ರಕೃತಿಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್‌ ಯಾತ್ರಾ ಟೂರ್

Adigas Yatra: ಕನ್ನಡಿಗರ ನೆಚ್ಚಿನ ಅಡಿಗಾಸ್‌ ಯಾತ್ರಾ ಇದೀಗ ಪ್ರಕೃತಿಪ್ರಿಯರ ನೆಚ್ಚಿನ ಮೇಘಾಲಯಕ್ಕೆ ಪ್ರವಾಸ ಹಮ್ಮಿಕೊಂಡಿದೆ. ಅಡಿಗಾಸ್‌ ಯಾತ್ರಾದ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ: ಫೋನ್‌ ನಂಬರ್‌: 080-26616678/ 7022259008/ 9449478944.

IBPS PO–2026: ಬ್ಯಾಂಕ್ ಅಧಿಕಾರಿಯಾಗುವ ಕನಸಿಗೆ ಇಲ್ಲಿದೆ ಸುವರ್ಣಾವಕಾಶ; ಪರೀಕ್ಷಾ ಮಾದರಿಯಲ್ಲಾದ ಮಹತ್ವದ ಬದಲಾವಣೆ ಗಮನಿಸಿ

ಬ್ಯಾಂಕ್‌ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ; ರೀಸನಿಂಗ್‌ಗೆ ಆದ್ಯತೆ

IBPS Exam: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ 2026-27ನೇ ಸಾಲಿನ CRP-PO/MT-XVI ಅಧಿಸೂಚನೆಯನ್ನು ಪ್ರಕಟಿಸಿದೆ. ಪರೀಕ್ಷಾ ಮಾದರಿ ಕಳೆದ ವರ್ಷದಂತೆಯೇ ಕಂಡರೂ, ಆಳವಾಗಿ ಪರಿಶೀಲಿಸಿದರೆ ಹಲವು ಮಹತ್ವದ ಬದಲಾವಣೆಗಳು ಗೋಚರಿಸುತ್ತವೆ. ಪರೀಕ್ಷೆಗೆ ಯಾವ ರೀತಿ ತಯಾರಾಗಬೇಕು ಎನನುವ ವಿವರ ಇಲ್ಲಿದೆ.

Karnataka BJP: ಬಿಜೆಪಿಯಲ್ಲಿ ಮುಂದುವರಿದ ಶಿಸ್ತು ಕ್ರಮ; ಮಹೇಶ್‌ ಬೆನ್ನಲ್ಲೇ ಮತ್ತೋರ್ವ ನಾಯಕನ ಉಚ್ಚಾಟನೆ

ಪಕ್ಷ ವಿರೋಧಿ ಚಟುವಟಿಕೆ: ಬಿಜೆಪಿಯಿಂದ ಮತ್ತೋರ್ವ ನಾಯಕನ ಉಚ್ಚಾಟನೆ

ರಾಜ್ಯ ಬಿಜೆಪಿಯಲ್ಲಿ ಶಿಸ್ತುಕ್ರಮ ಮುಂದುವರಿದಿದ್ದು, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ 6 ವರ್ಷ ಅಮಾನತು ಮಾಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು.

ರಾಜ್ಯ ಸರ್ಕಾರಕ್ಕೆ ಭಾರಿ ಮುಖಭಂಗ; ಕೋಮುಗಲಭೆ ಸೇರಿ 52 ಕ್ರಿಮಿನಲ್ ಪ್ರಕರಣ ವಾಪಸಾತಿ ನಿರ್ಧಾರಕ್ಕೆ ಮಧ್ಯಂತರ ತಡೆ

52 ಕ್ರಿಮಿನಲ್ ಪ್ರಕರಣ ವಾಪಸಾತಿ ನಿರ್ಧಾರಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಲ್ಲಿ ಸಚಿವ ಯು.ಟಿ. ಖಾದರ್ ಶಿಫಾರಸು ಮಾಡಿದ ಪ್ರಕರಣಗಳೂ ಇವೆ ಎನ್ನುವುದು ವಿಶೇಷ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.

Madapattana Quarry Tragedy: ಮಾದಪಟ್ಟಣ ಕಲ್ಲು ಕ್ವಾರಿ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ; ಸ್ಫೋಟದಿಂದ ಅವಘಡ ಸಂಭವಿಸಿಲ್ಲ ಎಂದ ಸಿಎಂ ಡಿ.ಕೆ. ಶಿವಕುಮಾರ್‌

ಮಾದಪಟ್ಟಣ ಕಲ್ಲು ಕ್ವಾರಿ ದುರಂತ; ಮೃತರ ಗುರುತು ಪತ್ತೆ

Bengaluru Tragedy: ಬೆಂಗಳೂರು ಹೊರವಲಯದ ತಾವರೆಕೆರೆ ಸಮೀಪದ ಮಾಗಡಿ ರಸ್ತೆಯ ಮಾದಪಟ್ಟಣ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿಸು ಸಂಭವಿಸಿದ ಭೀಕರ ದುರಂತದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಗುರುವಾರ (ಜುಲೈ 2) ಬೆಳಗ್ಗೆ ಏಕಾಏಕಿ ಬಂಡೆ ಕುಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು ರಾಮು (46), ರಾಜಪಾಲ್​​ ಸಿಂಗ್​ (35), ಸತ್ಯನಾರಾಯಣ ಸಿಂಗ್​ (31), ರಾಮ ವತಾರ್​ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್​ ಸಿಂಗ್​​ ಮತ್ತು ಭುವನೇಶ್ವರ ಸಿಂಗ್​ ಎಂದು ಗುರುತಿಸಲಾಗಿದೆ.

Loading...