ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
Health Tips: ಆರೋಗ್ಯಪೂರ್ಣ ಜೀವನ ಸಾಗಿಸಬೇಕೆ? ಬೆಳಗಿನ ಉಪಾಹಾರ ಹೀಗಿರಲಿ

ಬೆಳಗಿನ ಉಪಾಹಾರ ಹೇಗಿದ್ದರೆ ಸೂಕ್ತ?

Healthy Breakfast: ಬೆಳಗಿನ ಉಪಾಹಾರ ದಿನದ ಅತಿ ಮುಖ್ಯ ಆಹಾರ ಎನ್ನುವುದು ನಿಜ. ಅದರ ಜತೆಗೆ ನಾವು ಯಾವ ರೀತಿಯ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಆರೋಗ್ಯಪೂರ್ಣ ಜೀವನ ನಡೆಸಲು ಬೆಳಗಿನ ಉಪಾಹಾರ ಪೌಷ್ಟಿಕಾಂಶದಿಂದ ಕೂಡಿರಬೇಕು. ಹಾಗಾದರೆ ಉಪಾಹಾರ ಹೇಗಿರಬೇಕು ಎನ್ನುವುದನ್ನು ಇಲ್ಲಿ ನೋಡೋಣ.

ಏಟಿನ ಮೇಲೆ ಏಟು ಬಿದ್ದರೂ ಬುದ್ಧಿ ಕಲಿಯುತ್ತಿಲ್ಲ ಪಾಕಿಸ್ತಾನ; ಆಪರೇಷನ್‌ ಸಿಂದೂರ್‌ ವೇಳೆ ಧ್ವಂಸಗೊಂಡಿದ್ದ ಉಗ್ರರ ನೆಲೆ ಪುನರ್‌ನಿರ್ಮಾಣ

ಆಪರೇಷನ್‌ ಸಿಂದೂರ್‌ ವೇಳೆ ಧ್ವಂಸಗೊಂಡಿದ್ದ ಉಗ್ರರ ನೆಲೆ ಪುನರ್‌ನಿರ್ಮಾಣ

Jaish-e-Mohammed: ಕಳೆದ ವರ್ಷ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಸಮಯದಲ್ಲಿ ನಾಶವಾಗಿದ್ದ ಪಾಕಿಸ್ತಾನದ ಬಹವಾಲ್‌ಪುರದಲ್ಲಿರುವ ಉಗ್ರ ಸಂಘಟನೆ ಜೈಷ್‌-ಎ-ಮೊಹಮ್ಮದ್‌ನ ಕೇಂದ್ರ ಕಚೇರಿ ಮರ್ಕಜ್‌ ಸುಭಾನಲ್ಲಾವನ್ನು ಪುನರ್‌ನಿರ್ಮಿಸಲಾಗಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ ಎನ್ನುವ ಭಾರತದ ವಾದವನ್ನು ಈ ಘಟನೆ ಪುಷ್ಟೀಕರಿಸಿದೆ.

ಐಫೋನ್‌ ಇಎಂಐ ಮಾತ್ರವಲ್ಲ...ಮಹಾರಾಷ್ಟ್ರದ ಜೆನ್‌ ಝೀ ಆತ್ಮಹತ್ಯೆಯ ಇನ್ನಷ್ಟು ಬೆಚ್ಚಿ ಬೀಳಿಸುವ ಅಂಶ ಬಹಿರಂಗ; ಹಿಂದೆಯೂ ಜೀವ ಕಳೆದುಕೊಳ್ಳಲು ಹೋಗಿದ್ದೇಕೆ ಕುನಾಲ್‌?

ಮಹಾರಾಷ್ಟ್ರದ ಜೆನ್‌ ಝೀ ಆತ್ಮಹತ್ಯೆಗೆ ಟ್ವಿಸ್ಟ್‌

iPhone EMI: ಐಫೋನ್‌ ಹಠಕ್ಕೆ ಬಿದ್ದು ಮಹಾರಾಷ್ಟ್ರದ ಸಂಭಾಜಿ ನಗರ ಜಿಲ್ಲೆಯ ಬೆಟ್ಟದಿಂದ ಜಿಗಿದು ಸಾವಿಗೀಡಾಗಿ, ಹೆತ್ತವರ ಸಾವಿಗೂ ಕಾರಣನಾದ ಕುನಾಲ್‌ ಎಂಬ ಜೆನ್‌ ಝೀಯ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಸಹೋದರನ ಮರಣದ ನಂತರ ನಡೆದ ಕೌಟುಂಬಿಕ ಕಲಹ ಮತ್ತು ಪೋಷಕರ ನಡುವಿನ ಬಿಕ್ಕಟ್ಟೂ ಇದಕ್ಕೆ ಕಾರಣ ಎನ್ನಲಾಗಿದೆ.

ಪಾಠ ಮಾಡಿ ಎಂದರೆ ಡ್ಯಾಮ್‌ನಲ್ಲಿ ವಿದ್ಯಾರ್ಥಿನಿಯರ ಜತೆ ಜಲಕ್ರೀಡೆಯಾಡಿದ ಪ್ರಾಂಶುಪಾಲ; ಸ್ವಿಮ್ಮಿಂಗ್‌ ವಿಡಿಯೊ ವೈರಲ್‌

ವಿದ್ಯಾರ್ಥಿನಿಯರ ಜತೆ ಜಲಕ್ರೀಡೆಯಾಡಿದ ಪ್ರಾಂಶುಪಾಲ

Viral Video: ರಾಜಸ್ಥಾನದ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರ ಜತೆ ಅಣೆಕಟ್ಟಿನಲ್ಲಿ ಈಜಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆಯ ವಿಡಿಯೊ ವೈರಲ್‌ ಆಗಿದೆ. ಘಟನೆಯ ಬಳಿಕ ಅವರನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಪ್ರಾಂಶುಪಾಲರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ದೆಹಲಿಯಲ್ಲಿ ಮಹಾರಾಷ್ಟ್ರ ದುರಂತ ನೆನಪಿಸುವ ಘಟನೆ: ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ಯಮುನಾ ನದಿಗೆ ಹಾರಿದ ಶಿಕ್ಷಕ

ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ಯಮುನಾ ನದಿಗೆ ಹಾರಿದ ಶಿಕ್ಷಕ

iPhone EMI: ಡ್ಯಾನ್ಸ್‌ ಶಿಕ್ಷಕನೊಬ್ಬ ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ದೆಹಲಿಯಲ್ಲಿ ಯಮುನಾ ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ದೆಹಲಿಯ ಡ್ಯಾನ್ಸ್‌ ಶಿಕ್ಷಕ ದೀಪಕ್‌ ಕುಮಾರ್‌ ಎಂದು ಗುರುತಿಸಲಾಗಿದೆ. ನೀರಿಗೆ ಬಿದ್ದು ಒದ್ದಾಡುತ್ತಿದ್ದ ದೀಪಕ್‌ ಕುಮಾರ್‌ನನ್ನು ಗಮನಿಸಿ ತಕ್ಷಣವೇ ದಡಕ್ಕೆ ಕರೆದುಕೊಂಡ ಬರಲಾಯಿತು.

ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಹತ್ಯೆ; ನಿವೃತ್ತ ಶಿಕ್ಷಕ ಸೇರಿ ಕುಟುಂಬದ ನಾಲ್ವರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆ

ಬಾಂಗ್ಲಾದೇಶದಲ್ಲಿ ನಾಲ್ವರು ಹಿಂದೂಗಳು ಹತ್ಯೆ; ಕಾರಣ ನಿಗೂಢ

Bangladesh Horror: ಬಾಂಗ್ಲಾದೇಶದಲ್ಲಿ ನಾಲ್ವರು ಹಿಂದೂಗಳ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ರಂಗ್‌ಪುರದಲ್ಲಿರುವ ದಸ್‌ಪಾರಾದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ನಿವೃತ್ತ ಶಿಕ್ಷಕ ಗಣಪತಿ ಚಕ್ರಬರ್ತಿ (65), ಪತ್ನಿ ಪ್ರೀತಿಲತಾ ಚಕ್ರಬರ್ತಿ (50) ಮತ್ತು ಅವರ ಪುತ್ರಿ ಅಗಾಮಿ ಚಕ್ರಬರ್ತಿ ಪ್ರಾರ್ಥಿ (23) ಹಾಗೂ ಪುತ್ರ ಪ್ರಿಯಮ್‌ ಚಕ್ರಬರ್ತಿ (12) ಎಂದು ಗುರುತಿಸಲಾಗಿದೆ.

ನಿವೃತ್ತಿ ಜೀವನದ ಪ್ಲ್ಯಾನಿಂಗ್‌ ಮಾಡ್ತಿದ್ದೀರಾ?: ನೆಮ್ಮದಿಯ ಭವಿಷ್ಯಕ್ಕಾಗಿ ಇಲ್ಲಿದೆ ಭಾರತದ ಟಾಪ್ ಉಳಿತಾಯ ಯೋಜನೆಗಳ ಪಟ್ಟಿ

ಭಾರತದ ಟಾಪ್ ಉಳಿತಾಯ ಯೋಜನೆಗಳ ಪಟ್ಟಿ ಇಲ್ಲಿದೆ

Retirement Savings Schemes: ವೃದ್ಧಾಪ್ಯದಲ್ಲಿ ಯಾರ ಮೇಲೂ ಆರ್ಥಿಕವಾಗಿ ಅವಲಂಬಿತರಾಗದೆ ನೆಮ್ಮದಿಯ ಜೀವನ ನಡೆಸಲು ಚಿಕ್ಕ ವಯಸ್ಸಿನಲ್ಲೇ ಹಣಕಾಸಿನ ಯೋಜನೆ ರೂಪಿಸುವುದು ಅತಿಮುಖ್ಯ. ಭಾರತದಲ್ಲಿ ನಿವೃತ್ತಿ ನಂತರ ಉತ್ತಮ ಆದಾಯ ಹಾಗೂ ಭದ್ರತೆ ನೀಡುವ ಪ್ರಮುಖ ಉಳಿತಾಯ ಯೋಜನೆಗಳ ವಿವರ ಇಲ್ಲಿದೆ.

ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯ ದರ್ಶನ

ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯ ದರ್ಶನ

Pravasi Prapancha: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಿಯು ಇಂದು ಅನ್ನದಾಸೋಹ, ಪರಿಸರ ಕಾಳಜಿ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ವಿಶಿಷ್ಟ ಕೇಂದ್ರವಾಗಿ ರೂಪುಗೊಂಡಿದೆ. 'ದೇವರಿಗೆ ದುಡ್ಡು, ಚಿನ್ನ-ಬೆಳ್ಳಿ ಕೊಡುವ ಬದಲು ದಾಸೋಹಕ್ಕೆ ಒಂದು ಹಿಡಿ ಅಕ್ಕಿ ಅಥವಾ ತರಕಾರಿ ನೀಡಿ, ದೇವಸ್ಥಾನಕ್ಕೆ ಪ್ಲಾಸ್ಟಿಕ್ ತರಬೇಡಿ' ಎಂದು ಭಕ್ತರಲ್ಲಿ ಕಳಕಳಿಯಿಂದ ಕೇಳಿಕೊಳ್ಳುವ ಮೂಲಕ ಭಕ್ತಿಗೂ ಮೀರಿದ ಸಾಮಾಜಿಕ ಜವಾಬ್ದಾರಿಯನ್ನು ಸಾರುತ್ತಿದ್ದಾರೆ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಮಲ್ಲೇಶ್ ಗುರೂಜೀ. ಗೌಡಗೆರೆ ಕ್ಷೇತ್ರದ ಉಗಮ, ಅಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು, ಯುವಜನತೆಯ ಸ್ಪಂದನೆ ಹಾಗೂ ಮುಂಬರುವ 2027ರ ಬೃಹತ್ ಮಹಾಮಸ್ತಕಾಭಿಷೇಕದ ಕುರಿತು ಗುರೂಜಿಯವರು ಪ್ರವಾಸಿ ಪ್ರಪಂಚದ ಸಂದರ್ಶನದಲ್ಲಿ ಹಂಚಿಕೊಂಡ ವಿಶೇಷ ಮಾತುಕತೆ ಇಲ್ಲಿದೆ.

Pravasi Prapancha: ಗೌಡಗೆರೆಯ ಶಕ್ತಿ ಧಾಮ; ಕರುಣೆ ತೋರುವ ಚಾಮುಂಡೇಶ್ವರಿ

ಗೌಡಗೆರೆಯ ಶಕ್ತಿ ಧಾಮ: ಕರುಣೆ ತೋರುವ ಚಾಮುಂಡೇಶ್ವರಿ

Gowdagere Sri Chamundeshwari Basavappa Kshetra: ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರವು ಕಷ್ಟದಲ್ಲಿರುವ ಜೀವಗಳಿಗೆ ಭರವಸೆ ನೀಡುವ, ನಂಬಿದ ಭಕ್ತರಿಗೆ ಅಭಯ ನೀಡುವ ಜೀವಂತ ಶಕ್ತಿಪೀಠದ ಜತೆಗೆ ಒಂದು ಸುಂದರ ಪ್ರವಾಸಿ ತಾಣವೂ ಹೌದು. ಬೃಹತ್ ಪಂಚಲೋಹದ ದೇವಿಯ ವಿಗ್ರಹ, ನಿರಂತರ ದಾಸೋಹ ಮತ್ತು ದೈವಿಕ ಶಕ್ತಿಯ ಅನುಭವ ಪಡೆಯಲು ಪ್ರತಿಯೊಬ್ಬ ಭಕ್ತನೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪವಿತ್ರ ಧಾಮ ಇದು.

ಮಾಜಿ ಸಚಿವ ಬಿ.ಸಿ. ನಾಗೇಶ್ ಪಾರ್ಥೀವ ಶರೀರದ ಅಂತಿಮ ರಥಯಾತ್ರೆ ಸಾಗುತ್ತಿದ್ದಂತೆ ಆಜಾನ್ ಕೂಗದೆ ಸೌಹಾರ್ದತೆ ಮೆರೆದ ಮುಸ್ಲಿಮರು

ತಿಪಟೂರಿನಲ್ಲಿ ಸೌಹಾರ್ದತೆ ಮೆರೆದ ಮುಸ್ಲಿಮರು

BC Nagesh: ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಸ್ಟ್‌ 18ರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ಅವರ ಪಾರ್ಥೀವ ಶರೀರದ ಮೆರವಣಿಗೆ ವೇಳೆ ತಿಪಟೂರಿನಲ್ಲಿ ಮುಸ್ಲಿಮರು ಆಜಾನ್ ಕೂಗದೆ ಗೌರವ ಸಲ್ಲಿಸಿದರು.

Karnataka Weather: ಮನೆಯಿಂದ ಹೊರಡುವಾಗ ಛತ್ರಿ, ರೈನ್‌ ಕೋಟ್‌ ಕೈಯಲ್ಲಿರಲಿ; ರಾಜ್ಯಾದ್ಯಂತ ಇಂದು ಮಳೆಯಾಗುವ ಸಾಧ್ಯತೆ

ಬೆಂಗಳೂರು ಸೇರಿ ರಾಜ್ಯಾದ್ಯಂತ ಇಂದು ವರ್ಷಧಾರೆಯಾಗುವ ಸಾಧ್ಯತೆ

Weather Report: ಬುಧವಾರ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಸುರಿದ ಮಳೆ ಗುರುವಾರವೂ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆ ಸುರಿದರೆ, ಉಳಿದೆಡೆ ಹಗಯರ ವರ್ಷಧಾರೆಯಾಗಲಿದೆ.

ಮುಡಾ ಹಗರಣ: 2 ಸಾವಿರ ಕೋಟಿ ರುಪಾಯಿ ಮೌಲ್ಯದ 1,100 ನಿವೇಶನಗಳ ಹಂಚಿಕೆ ರದ್ದುಪಡಿಸಿ ಸರ್ಕಾರದಿಂದ ಆದೇಶ

ಮುಡಾ ಹಗರಣ: ಸರ್ಕಾರದಿಂದ ಮಹತ್ವದ ಆದೇಶ

Muda Scam: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ 50:50 ಅನುಪಾತದ ಅಡಿಯಲ್ಲಿ ಮಾಡಲಾಗಿದ್ದ1,100 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಈ ಕುರಿತ ಆದೇಶವನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೊರಡಿಸಿದ್ದಾರೆ.

ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಎಂದ ವಧು; ಫೋಟೊದಲ್ಲಿದ್ದವನೇ ಬೇರೆ, ಎದುರು ನಿಂತವನೇ ಬೇರೆ!

ಮಂಟಪಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ವಧು

Viral Video: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ಮಂಟಪದಲ್ಲಿ ವರನನ್ನು ನೋಡಿದ ವಧು ಕೊನೆಯ ಕ್ಷಣದಲ್ಲಿ ವರಿಸಲು ನಿರಾಕರಿಸಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇತ್ತ ವೃಷಭಾವತಿ ನಾಲೆಯಲ್ಲಿ ತೇಲಿದ 500 ರುಪಾಯಿಯ ಕಂತೆ ಕಂತೆ ನೋಟು; ಅತ್ತ ನಕಲಿ ಔಷಧ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ: ಏನಾಗ್ತಿದೆ ರಾಮನಗರದಲ್ಲಿ?

ರಾಮನಗರದಲ್ಲಿ ಬೃಹತ್ ನಕಲಿ ಔಷಧ ತಯಾರಿಸುತ್ತಿದ್ದ ಜಾಲ ಪತ್ತೆ

Ramanagara News: ರಾಮನಗರ ಸದ್ಯ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ರಾಮನಗರ ತಾಲೂಕಿನ ಭೈರಮಂಗಲದ ವೃಷಭಾವತಿ ನಾಲೆಯಲ್ಲಿ ಕಂತೆ ಕಂತೆ ನೋಟುಗಳು ತೇಲುತ್ತಿರುವುದನ್ನು ಕಂಡು ಬಂದಿದ್ದು, ಘಟನೆಯ ವಿಡಿಯೊ ವೈರಲ್‌ ಆಗಿದೆ. ಅತ್ತ ರಾಮನಗರದ ದೊಡ್ಡೇರಿ ಗ್ರಾಮದ ಬಳಿ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧ ದಂಧೆ ಜಾಲ ಪತ್ತೆಯಾಗಿದೆ. ಈ ಎರಡೂ ಘಟನೆಗಳ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಯಿಲೆಗೆ ತಕ್ಕಂತೆ ಆಹಾರ ವಿತರಿಸಲು ಆರೋಗ್ಯ ಇಲಾಖೆ ಚಿಂತನೆ; ಹೀಗಿರಲಿದೆ ಮೆನು

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಕಾಯಿಲೆಗೆ ತಕ್ಕಂತೆ ಆಹಾರ

Nutritional Meal Scheme: ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ವಯಸ್ಸು, ಕಾಯಿಲೆ ಹಾಗೂ ಚಿಕಿತ್ಸೆಗೆ ಅನುಗುಣವಾಗಿ ವಿಭಿನ್ನ ಮಾದರಿಯ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

GTTC Diploma ಓದಿದವರಿಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ; ಸರ್ಕಾರದಿಂದ ಮಹತ್ವದ ಆದೇಶ

GTTC Diploma ಓದಿದವರೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ

VAO Recruitment: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಗ್ರೂಪ್‌ ಸಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಜಿಟಿಟಿಸಿ ನಡೆಸುತ್ತಿರುವ 3+1 (1 ವರ್ಷದ ಇಂಟರ್ನ್‌ಶಿಪ್‌ ಸೇರಿದಂತೆ) ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್‌ ಪೂರೈಸಿದವರೂ ಅಪ್ಲೈ ಮಾಡಬಹುದು ಎಂದು ತಿಳಿಸಿದೆ.

ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ

BC Nagesh: ಬಿಜೆಪಿ ನಾಯಕ, ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಸೌಖ್ಯದಿಂದ ಮಂಗಳವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬುಧವಾರ (ಆಗಸ್ಟ್‌ 19) ತಿಪಟೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ʼʼನೇಣು ಹಾಕಿದ್ರೂ ʼವಂದೇ ಮಾತರಂʼ ಹಾಡೋದು 2 ಪ್ಯಾರಾ ಮಾತ್ರʼʼ: ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಿದ ಬಿ.ಕೆ. ಹರಿಪ್ರಸಾದ್‌

ʼವಂದೇ ಮಾತರಂʼ: ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಿದ ಹರಿಪ್ರಸಾದ್‌

Vande Mataram Controversy: ʼವಂದೇ ಮಾತರಂʼ ಗೀತೆಯ ಬಗ್ಗೆ ಕಾಂಗ್ರೆಸ್‌ ನಿಲುವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. ''ನಮ್ಮನ್ನು ಜೈಲಿಗೆ ಹಾಕಿದ್ರೂ ನೇಣು ಹಾಕಿದ್ರೂ ನಾವು ʼವಂದೇ ಮಾತರಂʼನ 2 ಪ್ಯಾರಾ ಮಾತ್ರ ಹಾಡೋದುʼʼ ಎಂದು ಹೇಳಿದ್ದಾರೆ.

Viral Video: ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು! ಮ್ಯಾಜಿಕ್‌ ಅಲ್ಲ, ಕಳಪೆ ಕಾಮಗಾರಿಯ ಎಫೆಕ್ಟ್‌

ನೋಡನೋಡುತ್ತಿದ್ದಂತೆ ರಸ್ತೆಯಿಂದ ಜಿನುಗಿತು ನೀರು; ವಿಡಿಯೊ ವೈರಲ್‌

Indore's Smart City Road: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಭಾರಿ ಕಾಮಗಾರಿ ಅಕ್ರಮವೊಂದು ಬಯಲಾಗಿದೆ. ಸುಮಾರು 80 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಿರ್ಮಿಸಿದ್ದ ರಸ್ತೆಯೊಂದು ಪೈಪ್‌ಲೈನ್ ಪರೀಕ್ಷೆ ನಡೆಸುತ್ತಿದ್ದ ವೇಳೆಯಲ್ಲೇ ಏಕಾಏಕಿ ಬಿರುಕು ಬಿಟ್ಟಿದೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಜೀವ ಭಯವಿದೆʼʼ: ಹನೂರು ಶೂಟೌಟ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಪ್ರತ್ಯಕ್ಷ; ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ ಹೇಳಿದ್ದೇನು?

ಹನೂರು ಶೂಟೌಟ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಪ್ರತ್ಯಕ್ಷ

Hanur Encounter: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿ ವೇಳೆ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮಹಿಮಾ ದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಯಬಿಟ್ಟಿದ್ದಾನೆ. ಜತೆಗೆ ತನಗೆ ಜೀವ ಬೆದರಿಕೆ ಇದೆ ಎಂದಿದ್ದಾನೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ  ಶಿವಶಂಕರಪ್ಪ ಸಾಹುಕಾರ್‌ ಮರುನೇಮಕಕ್ಕೆ ಹೈಕೋರ್ಟ್‌ ಸೂಚನೆ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಮರುನೇಮಕ

Shivashankarappa Sahukar: ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರಿಗೆ ಹೂಕೋರ್ಟ್‌ನಿಂದ ರಿಲೀಫ್‌ ಸಿಕ್ಕಿದ್ದು, 7 ದಿನಗಳಲ್ಲಿ ಮರುನೇಮಕ ಮಾಡುವಂತೆ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.

ಬೆಂಗಳೂರು ಡಬಲ್‌ ಮರ್ಡರ್‌ ಮಿಸ್ಟ್ರಿ ಕಹಾನಿಗೆ ಕ್ಲೈಮ್ಯಾಕ್ಸ್‌; ಪ್ರಿಯಕರನ ಜತೆ ಸೇರಿ ಪತಿ, ಪುತ್ರನನ್ನೇ ಕೊಂದ ಕಿʼಲೇಡಿʼ ಅರೆಸ್ಟ್‌

ಪ್ರಿಯಕರನ ಜತೆ ಸೇರಿ ಪತಿ, ಪುತ್ರನನ್ನೇ ಕೊಂದ ಮಹಿಳೆ ಅರೆಸ್ಟ್‌

Bengaluru News: ಬೆಂಗಳೂರಿನ ಚಿಕ್ಕಬಾವಣಾವರದ ಮನೆಯೊಂದರಲ್ಲಿ ಮೃತಪಟ್ಟ ಟೆಕ್ಕಿ ಮತ್ತು ಅವರ 5 ವರ್ಷದ ಪುತ್ರನ ನಿಗೂಢ ಸಾವಿನ ರಹಸ್ಯ ಬಯಲಾಗಿದೆ. ಮೃತರನ್ನು ಅಭಿನವ್‌ (38) ಹಾಗೂ ಅವರ ಪುತ್ರ ಯದುವೀರ್‌ (5) ಎಂದು ಗುರುತಿಸಲಾಗಿದೆ. ಅಭಿನವ್‌ ಅವರ ಪತ್ನಿ ಹರಿಣಿಯೇ ಈ ಹತ್ಯೆ ಮಾಡಿದ್ದಾಳೆ ಎನ್ನುವುದು ತಿಳಿದು ಬಂದಿದೆ.

ನಾಗರ ಪಂಚಮಿ ಹಬ್ಬದಂದೇ ಘೋರ ದುರಂತ; ಹಾವು ಕಡಿದು ಇಬ್ಬರು ಸಾವು

ನಾಗರ ಪಂಚಮಿ ಹಬ್ಬದಂದೇ ಹಾವು ಕಡಿದು ಇಬ್ಬರು ಸಾವು

Snake Bite: ನಾಗರ ಪಂಚಮಿ ಹಬ್ಬದಂದು ಪ್ರತ್ಯೇಕ ಘಟನೆಗಳಲ್ಲಿ ಹಾವು ಕಡಿದು ಇಬ್ಬರು ಮೃತಪಟ್ಟ ಘಟನೆ ಬೀದರ್‌ ಮತ್ತು ಬೆಳಗಾವಿಯಲ್ಲಿ ನಡೆದಿದೆ. ಮೃತರನ್ನು ಮೃತರನ್ನು ಬೀದರ್‌ನ ಭೀಮ ಜಾಧವ (48) ಮತ್ತು ಬೆಳಗಾವಿಯ ಸತ್ಯವ್ವ ಶಿಂಗೆ (43) ಎಂದು ಗುರುತಿಸಲಾಗಿದೆ.

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ‘ಯಾರಿವಳು ಯಾರಿವಳು’ ಸಾಂಗ್ ಹಾಡಿದ ಕಾವಿಧಾರಿ; ಸ್ವಾಮೀಜಿಯ ಬಿಂದಾಸ್ ವಿಡಿಯೊ ವೈರಲ್

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ಸಿನಿಮಾ ಗೀತೆ ಹಾಡಿದ ಸ್ವಾಮೀಜಿ

Viral Video: ಕಲಬುರಗಿಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈರಲ್‌ ವಿಡಿಯೊದಲ್ಲಿ ಅವರು ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿದೆ.

Loading...