ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
Share Market: ಸೆನ್ಸೆಕ್ಸ್‌ 510 ಅಂಕ ಜಿಗಿತ: ಸತತ 4ನೇ ದಿನ ಚೇತರಿಕೆ; ಐಟಿ ಸ್ಟಾಕ್ಸ್‌ ಜೋಶ್

ಷೇರುಪೇಟೆಯಲ್ಲಿ ಮತ್ತೆ ಗೂಳಿ ಅಬ್ಬರ; ಸೆನ್ಸೆಕ್ಸ್‌ 510 ಅಂಕ ಜಿಗಿತ

Stock Market Today: ಷೇರು ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿದೆ. ಏಪ್ರಿಲ್‌ 7ಕ್ಕೆ ಸೆನ್ಸೆಕ್ಸ್‌ 510 ಅಂಕ ಚೇತರಿಸಿದ್ದು, 74,616ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 155 ಅಂಕ ಏರಿಕೆಯಾಗಿ 23,123ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ 2 ಪರ್ಸೆಂಟ್‌ ರಿಬೌಂಡ್‌ ಆಯಿತು. ಡಾಲರ್‌ ಎದುರು ರುಪಾಯಿ ಮೌಲ್ಯವು 0.1% ಏರಿಕೆಯಾಗಿದ್ದು, 92 ರುಪಾಯಿ 98 ಪೈಸೆಯಷ್ಟಿತ್ತು.

ಅಸ್ಸಾಂ ಚುನಾವಣೆ: ಕೊನೆಯ ಹಂತದ ಪ್ರಚಾರದ ಅಬ್ಬರ; ಅಭಿವೃದ್ಧಿಗಾಗಿ ಎನ್‌ಡಿಎ ಬೆಂಬಲಿಸುವಂತೆ ಮೋದಿ ಮನವಿ Video

ಅಸ್ಸಾಂ ಚುನಾವಣೆ: ಕೊನೆಯ ಹಂತದ ಪ್ರಚಾರದಲ್ಲಿ ಗುಡುಗಿದ ಮೋದಿ

ಅಸ್ಸಾಂನಲ್ಲಿ ಚುನಾವಣಾ ಕಾವು ಜೋರಾಗಿದೆ. ಮತದಾನಕ್ಕೆ ಇನ್ನು ಕೇವಲ 2 ದಿನ ಉಳಿದಿದೆ. ಕೊನೆಯ ಹಂತದ ಪ್ರಚಾರದಲ್ಲಿ ವಿವಿಧ ಪಕ್ಷಗಳು ತೊಡಗಿಸಿಕೊಂಡಿವೆ. 126 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್‌ 9ರಂದು ಮತದಾನ ನಡೆಯಲಿದೆ. ಈ ಬಾರಿಯೂ ಬಿಜೆಪಿ ಮೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.

"ಒಂದೇ ರಾತ್ರಿಯಲ್ಲಿ ಇಡೀ ಇರಾನ್ ನಾಶವಾಗಲಿದೆ": ಕದನವಿರಾಮ ಒಪ್ಪಂದ ತಿರಸ್ಕರಿಸಿದ ಬೆನ್ನಲ್ಲೇ ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಒಂದೇ ರಾತ್ರಿಯಲ್ಲಿ ಇಡೀ ಇರಾನ್ ನಾಶವಾಗಲಿದೆ: ಟ್ರಂಪ್‌ ಬೆದರಿಕೆ

Donald Trump: ಅಮೆರಿಕ-ಇಸ್ರೇಲ್‌-ಇರಾನ್‌ ಯುದ್ಧ ಆರಂಭವಾಗಿ 1 ತಿಂಗಳು ದಾಟಿದ್ದು, ಇನ್ನೂ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ಅಮೆರಿಕ ಅಧ್ಯಕಷ ಡೊನಾಲ್ಡ್‌ ಟ್ರಂಪ್‌ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ ಬೆದರಿಕೆ ಹಾಕಿದ್ದಾರೆ. ಇರಾನ್‌ ಹೊರ್ಮುಜ್‌ ಜಲಸಂಧಿ ತರೆಯದಿದ್ದಾರೆ ದೇಸವನ್ನೇ ನಾಶಪಡಿಸುವುದಾಗಿ ಎಚ್ಚರಿಸಿದ್ದಾರೆ.

ಕಸ್ಟಡಿಯಲ್ಲಿ ತಂದೆ-ಮಗ ಸಾವು: 9 ಪೊಲೀಸರಿಗೆ ಮರಣದಂಡನೆ; ಮಧುರೈ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು

ಕಸ್ಟಡಿಯಲ್ಲಿ ತಂದೆ-ಮಗ ಸಾವು: 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ

Madurai Court: ತಂದೆ-ಮಗನ ಲಾಕಪ್‌ ಡೆತ್‌ ಆರೋಪಿಗಳಾದ 9 ಪೊಲೀಸ್‌ ಅಧಿಕಾರಿಗಳಿಗೆ ಮಧುರೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ. 2020ರಲ್ಲಿ ಶಾಂತಕುಲಂ ಜೈಲಿನಲ್ಲಿ ಮೃತಪಟ್ಟ ಜಯರಾಜ್‌ ಮತ್ತು ಬೆನ್ನಿಕ್ಸ್‌ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪು ನೀಡಿದೆ.

ಕೊಲೆ ರಹಸ್ಯ ಭೇದಿಸಿದ ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲ್‌; ಏನಿದು ಥ್ರಿಲ್ಲರ್‌ ಸಿನಿಮಾವನ್ನೂ ಮೀರಿಸುವ ರೋಚಕ ಘಟನೆ?

ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲಿಯಿಂದ ಕೊಲೆ ರಹಸ್ಯ ಬಯಲು

Crime News: ರಸ್ತೆ ಬದಿ ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣವನ್ನು ಭೇದಿಸಿದ್ದು ಖಾಲಿ ಮದ್ಯದ ಬಾಟಲ್‌ ಎಂದರೆ ನಂಬುತ್ತೀರಾ? ಹೌದು, ನಿರುಪಯುಕ್ತ ಎಂದು ನಿರ್ಲಕ್ಷಿಸುವ ವಸ್ತುವೊಂದು ಹೇಗೆ ಕೆಲವೊಮ್ಮೆ ಮುಖ್ಯವಾಗುತ್ತದೆ ಎನ್ನುವುದಕ್ಕೆ ಈ ಘಟನೆ ಮುಖ್ಯ ಸಾಕ್ಷಿ.

ತಪ್ಪಿತು ಭಾರಿ ಗಂಡಾಂತರ: ಆಟಿಕೆ ಕಾರು ಮೂಲಕ ಸ್ಫೋಟಕ್ಕೆ ಸಂಚು ರೂಪಿಸಿದ್ದ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಇಬ್ಬರು ಉಗ್ರರು ಅರೆಸ್ಟ್‌

ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಇಬ್ಬರು ಉಗ್ರರು ಬಲೆಗೆ

Jaish-e-Mohammed: ದೆಹಲಿ ಪೊಲೀಸ್‌ ಸ್ಪೆಷಲ್‌ ಸೆಲ್‌ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಕಾರ್ಯಾರಣೆ ನಡೆಸಿ ಮಹಾರಾಷ್ಟ್ರದ ಮುಂಬೈಯಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಇಬ್ಬರು ಉಗ್ರರು ಬಂಧಿಸಿದೆ. ಈ ಉಗ್ರರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು.

ದೇಶದ್ರೋಹಿ ಮಗನಿಗೆ ದೇಶಪ್ರೇಮಿ ಅಪ್ಪ; ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದ ರಿಜ್ವಾನ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದ ತಂದೆ

ಉಗ್ರ ಚಟುವಟಿಕೆ ನಡೆಸುತ್ತಿದ್ದ ರಿಜ್ವಾನ್‌ಗೆ ಶಿಕ್ಷೆಯಾಗಲಿ ಎಂದ ತಂದೆ

ಉಗ್ರ ಚಟುವಟಿಕೆ ನಡೆಸುತ್ತಿದ್ದ ರಿಜ್ವಾನ್‌ನನ್ನು ಉತ್ತರ ಪ್ರದೇಶದ ಖುಷಿನಗರದಿಂದ ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆತನ ತಂದೆ ನಿಜಾಮುದ್ದೀನ್, ಮಗ ತಪ್ಪು ಮಾಡಿದ್ದರೆ ಆತನಿಗೆ ಶಿಕ್ಷೆಯಾಗಲಿ ಎಂದು ಎಂದು ಹೇಳಿದ್ದಾರೆ. ಸದ್ಯ ರಿಜ್ವಾನ್‌ ವಿಚಾರಣೆ ಮುಂದುವರಿದಿದೆ.

Madhya Pradesh Horror: 2ನೇ ಪತ್ನಿಯನ್ನು ಕೊಂದು ಮೃತದೇಹದೊಂದಿಗೆ 2 ದಿನ ಕಳೆದ ಪಾಪಿ ಪತಿ; ಮೈ ಜುಂ ಎನಿಸುವ ಭಯಾನಕ ಕೃತ್ಯ ಬಯಲು

ಪತ್ನಿಯನ್ನು ಕೊಂದು ಮೃತದೇಹದೊಂದಿಗೆ 2 ದಿನ ಕಳೆದ ಪಾಪಿ

Crime News: ಮಧ್ಯ ಪ್ರದೇಶದಲ್ಲಿ ದೇಶವೇ ಬೆಚ್ಚಿ ಬಿದ್ದ ಅಮಾನುಷ ಕೃತ್ಯವೊಂದು ನಡೆದಿದೆ. ಪಾಪಿ ಪತಿಯೊಬ್ಬ ತನ್ನ 2ನೇ ಪತ್ನಿಯನ್ನು ಕೊಂದು ಏನೂ ನಡೆದೇ ಇಲ್ಲವೆಂಬಂತೆ ಚಿಕ್ಕ ಮಕ್ಕಳೊಂದಿಗೆ ಮೃತದೇಹದ ಜತೆ 2 ದಿನ ಕಳೆದಿದ್ದಾನೆ. ಪತ್ನಿಯನ್ನು ಕೊಂದ ಪಾಪಿ 38 ವರ್ಷದ ಜಗದೀಶ್‌ ದಾಬರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Keralam Assembly Elections 2026: ʼʼಕೇರಳಂ ಮತದಾರರು ಬದಲಾವಣೆ ಬಯಸಿದ್ದಾರೆʼʼ: ಕಣ್ಣೂರಿನಲ್ಲಿ ಡಿ.ಕೆ. ಶಿವಕುಮಾರ್‌ ಅಬ್ಬರದ ಪ್ರಚಾರ Video

ಕೇರಳಂನಲ್ಲಿ ಡಿಕೆಶಿ ಅಬ್ಬರದ ಪ್ರಚಾರ

ಕೇರಳಂ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ. ಏಪ್ರಿಲ್‌ 9ರಂದು ನಡೆಯುವ ಒಂದೇ ಹಂತದ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ಸತತ 2 ಅಧಿಕಾರದಲ್ಲಿರುವ ಎಲ್‌ಡಿಎಫ್‌ ಒಕ್ಕೂಟವನ್ನೂ ಮಣಿಸಲೇಬೇಕೆಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಪಣ ತೊಟ್ಟಿದ್ದರೆ, ಪ್ರಭಾವ ಬೀರಲು ಎನ್‌ಡಿಎ ಸಜ್ಜಾಗಿದೆ. ವಿಶೇಷ ಎಂದರೆ ಯುಡಿಎಫ್‌ ಪರವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇರಳದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮತದಾರರನ್ನು ಭೇಟಿಯಾಗಿ ಮನವೊಲಿಸಲು ಮುಂದಾಗಿದ್ದು, ಭರ್ಜರಿ ರೋಡ್‌ ಶೋ ನಡೆಸುತ್ತಿದ್ದಾರೆ.

ಜನಗಣತಿ ಆರಂಭ: ಆನ್‌ಲೈನ್‌ನಲ್ಲಿ ವಿವರಗಳನ್ನು ನೀವೇ ತುಂಬಲು ಇಲ್ಲಿದೆ ಗೈಡ್‌ಲೈನ್‌ Video

ಡಿಜಿಟಲ್‌ ಜನಗಣತಿ, ಮೊಬೈಲ್‌ನಲ್ಲೇ ಮಾಡುವುದು ಹೇಗೆ?

ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಆರಂಭವಾಗಿದೆ. ಹೌದು, ಏಪ್ರಿಲ್‌ 1ರಂದು ಕರ್ನಾಟಕವೂ ಸೇರಿ 8 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಆರಂಭವಾದ ಜನಗಣತಿ ಡಿಜಿಟಲ್‌ ವಿಧಾನದಲ್ಲಿ ನಡೆಯುತ್ತಿದೆ. ಜತೆಗೆ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಅಂದರೆ ನಿಮ್ಮ ವಿವರವನ್ನು ನೀವೇ ಸರ್ಕಾರಕ್ಕೆ ನೀಡಬಹುದು. ಅದು ಹೇಗೆ? ಏನಿದು ಡಿಜಿಟಲ್‌ ಜನಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

West Asia Crisis: ಭಾರತಕ್ಕೆ ಬರುತ್ತಿದ್ದ ಇರಾನ್​ನ ತೈಲ ತುಂಬಿದ ಹಡಗು ಚೀನಾದತ್ತ ತೆರಳುತ್ತಿರುವ ಕಾರಣ ಬಹಿರಂಗ; ಈ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

ಭಾರತಕ್ಕೆ ಬರುತ್ತಿದ್ದ ಇರಾನ್​ನ ಹಡಗು ಚೀನಾದತ್ತ ತಿರುಗಿದ್ದೇಕೆ?

ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ತೈಲ ತುಂಬಿದ ಹಡಗು ಚೀನಾದತ್ತ ಮುಖ ಮಾಡಿದೆ. ಪಾವತಿ ಸಮಸ್ಯೆಯಿಂದ ಹಡಗನ್ನು ಚೀನಾದತ್ತ ತಿರುಗಿಸಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ವ್ಯಾಪಾರ ಒಪ್ಪಂದದ ಕಾರಣದಿಂದ ಈ ಸಹಜ ಬೆಳವಣಿಗೆ ನಡೆದಿದೆ ಎಂದು ಸ್ಪಷ್ಟಪಡಿಸಿದೆ.

Pravasi Prapancha: ಜಗತ್ತು ಸುತ್ತಿಸುತ್ತಾ ಪ್ರವಾಸಿಗನೊಳಗೆ ಕನಸಿನ ಬೀಜ ಬಿತ್ತುತ್ತಿರುವ MSIL ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌

ವಿಶ್ವಾಸವೇ ಅಸ್ತ್ರ-ನಂಬಿಕೆಯೇ ಆಸ್ತಿ: ಆರ್ಥಿಕ ಬಲ ತುಂಬುವ MSIL ಚಿಟ್‌ ಫಂಡ್

MSIL ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ಸರಕಾರದ ಪ್ರತಿಷ್ಠಿತ ಉದ್ದಿಮೆಯಾಗಿ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದೆ. ಲಕ್ಷಾಂತರ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡಿದೆ. ಸುದೀರ್ಘ ಐವತ್ತು ವರ್ಷಗಳ ಹಿನ್ನೆಲೆಯಿರುವ ಎಂಎಸ್‌ಐಎಲ್‌ ವ್ಯಾವಹಾರಿಕ ಸಂಸ್ಥೆ ಮಾತ್ರವಲ್ಲದೆ, ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದೆ. ಆ ಪೈಕಿ ಎಂಎಸ್‌ಐಲ್‌ ಟೂರ್ಸ್‌ & ಟ್ರಾವೆಲ್ಸ್‌ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

Gold Price Today On 4th April 2026: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ದರ ಚೆಕ್‌ ಮಾಡಿ

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Gold Rate Today: ಚಿನ್ನದ ದರ ಶನಿವಾರ ಯಥಾಸ್ಥಿತಿ ಕಾಯ್ತುಕೊಂಡಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 13,835 ರುಪಾಯಿಗೆ ಇದ್ದು, 24 ಕ್ಯಾರಟ್‌ನ 1 ಗ್ರಾಂ ಚಿನ್ನ 15,093 ರುಪಾಯಿಯಲ್ಲೇ ಮುಂದುವರಿದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,10,680 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,38,350 ರುಪಾಯಿ ಹಾಗೂ 100 ಗ್ರಾಂಗೆ 13,83,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,20,744 ರುಪಾಯಿ, 10 ಗ್ರಾಂಗೆ 1,50,930 ರುಪಾಯಿ ಹಾಗೂ 100 ಗ್ರಾಂಗೆ 15,09,300 ರುಪಾಯಿ ಇದೆ.

Delhi Earthquake: ದೆಹಲಿ ಸೇರಿ ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ; ರಿಕ್ಟರ್‌ ಮಾಪಕದಲ್ಲಿ 5.9 ತೀವ್ರತೆ

ದೆಹಲಿಯಲ್ಲಿ ಭಾರಿ ಭೂಕಂಪ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ (ಏಪ್ರಿಲ್‌ 3) ಭೂಕಂಪವಾಗಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪದ ಕೇಂದ್ರಬಿಂದು ಕಂಡು ಬಂದಿದೆ. ರಿಕ್ಟರ್‌ ಮಾಪಕದಲ್ಲಿ 5.9 ದಾಖಲಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತಕ್ಕೆ ತುಸು ನೆಮ್ಮದಿಯ ಸುದ್ದಿ; ಹೊರ್ಮುಜ್‌ ಜಲಸಂಧಿ ದಾಟಿ ದೇಶದತ್ತ ಧಾವಿಸುತ್ತಿದೆ ಎಲ್‌ಪಿಜಿ ಹೊತ್ತ 7ನೇ ಹಡಗು

ಹೊರ್ಮುಜ್‌ ಜಲಸಂಧಿ ದಾಟಿದ ಭಾರತದ ಮತ್ತೊಂದು ಹಡಗು

Strait of Hormuz: ಇರಾನ್‌ನ ಹೊರ್ಮುಜ್‌ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ಭಾರತದ ಮತ್ತೊಂದು ಹಡಗು ದೇಶದತ್ತ ಧಾವಿಸುತ್ತಿದೆ. ಎಲ್‌ಪಿಜಿ ಟ್ಯಾಂಕರ್‌ ಗ್ರೀನ್‌ ಸಾನ್ವಿ ಇದೀಗ ಹೊರ್ಮುಜ್‌ ಜಲಸಂಧಿ ದಾಟಿದೆ ಎಂದು ಹಡಗುಗಳ ಚಲನೆಯನ್ನು ಗಮನಿಸುವ ವೆಸೆಲ್‌ಫೈಂಡರ್‌ ತಿಳಿಸಿದೆ.

Jan Vishwas Bill 2026: ಉದ್ಯಮಸ್ನೇಹಿ ಕಾನೂನಿಗೆ ಜನ ವಿಶ್ವಾಸ ವಿಧೇಯಕ ಸಹಕಾರಿ

ಉದ್ಯಮಸ್ನೇಹಿ ಕಾನೂನಿಗೆ ಜನ ವಿಶ್ವಾಸ ವಿಧೇಯಕ ಸಹಕಾರಿ

ಲೋಕಸಭೆಯಲ್ಲಿ ಮಹತ್ವದ ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026 ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲಿ ಅನುಮೋದನೆಯನ್ನೂ ಪಡೆದಿದೆ. ಇದು ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ಕಾನೂನು ಸುಧಾರಣೆಯಾಗಿದೆ. ಇದು 80 ಕೇಂದ್ರೀಯ ಕಾನೂನುಗಳು ಮತ್ತು 784 ನಿಬಂಧನೆಗಳನ್ನು ಬದಲಿಸಿ ಸುಧಾರಿಸಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ ರಿಲೀಸ್‌ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರಿಲ್ಲ

ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ ಪಟ್ಟಿ ರಿಲೀಸ್‌

Tamil Nadu Assembly Elections: ಏಪ್ರಿಲ್‌ 23ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆದಿದೆ. ಈ ಬಾರಿ ಅಧಿಕಾರಕ್ಕೇರಲೇ ಬೇಕೆಂದು ಬಿಜೆಪಿ ಪಣ ತೊಟ್ಟಿದ್ದು, ಈಗಾಗಲೇ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಕೇಸರಿ ಪಡೆ 27 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಇದರಲ್ಲಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಹೆಸರಿಲ್ಲ.

ಗೊಂಬೆಯ ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ಯುದ್ಧ ಪೀಡಿತ ಗಾಜಾದಲ್ಲಿನ ಈ ವಿಡಿಯೊ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದೇಕೆ?

ಗೊಂಬೆಯ ಅಣಕು ಅಂತ್ಯ ಸಂಸ್ಕಾರ ನಡೆಸಿದ ಮಕ್ಕಳು; ವಿಡಿಯೊ ವೈರಲ್‌

Gaza War: ಗಾಜಾದಲ್ಲಿನ ಪುಟ್ಟ ಮಕ್ಕಳು ತಮ್ಮ ಆಟದ ಗೊಂಬೆಯ ಅಣಕು ಶವ ಸಂಸ್ಕಾರ ನಡೆಸಿದ್ದಾರೆ. ಚಿಂತೆಯಿಲ್ಲದೆ ಆತವಾಡಬೇಕಾದ ಅವರ ಮನಸ್ಸಿನ ಮೇಲೆ ಯುದ್ಧ ಬೀರಿದ ಪರಿಣಾಮ ಇದು ಎನ್ನುವುದು ತಜ್ಞರ ಅಭಿಪ್ರಾಯ. ಇದೇ ಕಾರಣಕ್ಕೆ ಇಡೀ ಜಗತ್ತೇ ಈ ವಿಡಿಯೊವನ್ನು ಆತಂಕದಿಂದ ನೋಡುತ್ತಿದೆ.

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ; ಬೆಂಗಳೂರಿನಲ್ಲಿ ಕಿಲೋ ಮೀಟರ್‌ಗಟ್ಟಲೆ ರಿಕ್ಷಾ ಸಾಲು Video

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ

LPG Crisis: ಪಶ್ಚಿಮ ಏಷ್ಯಾ ಸಂಘರ್ಷ ಏನಾಗಲಿದೆ ಎನ್ನುವ ಗೊಂದಲ ಒಂದೆಡೆಯಾದರೆ, ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಮೀರಿದ ಸಮಸ್ಯೆ ಇದೀಗ ಆಟೋ ಗ್ಯಾಸ್‌ನಲ್ಲಿ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗ್ಯಾಸ್ ಸಿಗದೆ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕುವಂತಾಗಿದೆ. ರಾಜ್ಯದ ಹಲವು ಭಾಗದಲ್ಲಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಇಡೀ ರಾತ್ರಿ ಸ್ಟೇಷನ್‌ಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನ ಹಲವು ಎಲ್‌ಪಿಜಿ ಬಂಕರ್‌ಗಳು ಇಂಧನ ಸಿಗದೇ ಬಂದಾಗಿವೆ.

Gold Price Today On 3rd April 2026: ಮತ್ತೆ ಹೆಚ್ಚಾಯ್ತು ಚಿನ್ನದ ದರ; ಇಂದು ಏರಿಕೆಯಾಗಿದ್ದು ಬರೋಬ್ಬರಿ 1,440 ರುಪಾಯಿ

ಮತ್ತೆ ಹೆಚ್ಚಾಯ್ತು ಚಿನ್ನದ ದರ

Gold Silver Price Today: ಶುಕ್ರವಾರ (ಏಪ್ರಿಲ್‌ 3) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 180 ರುಪಾಯಿ ಹೆಚ್ಚಾಗಿದ್ದು13,835 ರುಪಾಯಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 196 ರುಪಾಯಿ ಅಧಿಕವಾಗಿದ್ದು, 15,093 ರುಪಾಯಿಗೆ ಬಂದು ತಲುಪಿದೆ. ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಜನಗಣತಿ ಆರಂಭ; ಆನ್‌ಲೈನ್‌ನಲ್ಲಿ ವಿವರಗಳನ್ನು ನೀವೇ ತುಂಬಲು ಇಲ್ಲಿದೆ ಗೈಡ್‌ಲೈನ್‌

ಜನಗಣತಿ: ಮಾಹಿತಿ ಮೊಬೈಲ್‌ನಲ್ಲೇ ತುಂಬುದು ಹೇಗೆ?

Census 2027: ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಆರಂಭವಾಗಿದೆ. ಈ ಬಾರಿ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಏನಿದು ಸ್ವಯಂ ಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹೊರ್ಮುಜ್‌ ಜಲಸಂಧಿ ದಾಟಲು ಭಾರತ ಪಾವತಿಸುವ ಟೋಲ್‌ ಮೊತ್ತ ಎಷ್ಟು? ಸಂದೇಹಕ್ಕೆ ಕೇಂದ್ರದಿಂದ ಸ್ಪಷ್ಟನೆ

ಹೊರ್ಮುಜ್‌ ಜಲಸಂಧಿ ದಾಟಲು ಭಾರತ ಟೋಲ್‌ ಪಾವತಿಸುತ್ತಾ? ಕೇಂದ್ರ ಹೇಳಿದ್ದೇನು?

Strait of Hormuz: ಪಶ್ವಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಹೊರ್ಮುಜ್‌ ಮೇಲಿನ ಹಿಡಿತ ಇನ್ನೂ ಸಡಿಲಗೊಳಿಸಿಲ್ಲ. ಈ ಮಧ್ಯೆ ಇರಾನ್‌ ಟೋಲ್‌ ವ್ಯವಸ್ಥೆ ಜಾರಿಗೊಳಿಸಿದೆ ಎನ್ನಲಾಗಿದ್ದು, ಭಾರತದ ಹಡಗುಗಳು ಇದುವರೆಗೆ ಎಷ್ಟು ಮೊತ್ತ ಪಾವತಿಸಿದೆ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ಇದಕ್ಕೆ ಇದೀಗ ಕೇಂದ್ರ ಉತ್ತರಿಸಿದೆ.

ಪ್ರತಿಷ್ಠಿತ ಆ್ಯಪಲ್‌ ಸಂಸ್ಥೆಯ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026; ಟಾಪ್‌ 50 ವಿಜೇತರ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಸ್ಥಾನ

ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಅಂತಾರಾಷ್ಟ್ರೀಯ ಮನ್ನಣೆ

Swift Student Challenge 2026: ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಅನನ್ಯಾ ಬಾಬು ಪ್ರಸಾದ್‌ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ಟೆಕ್‌ ದೈತ್ಯ, ಅಮೆರಿಕ ಮೂಲದ ಆ್ಯಪಲ್‌ ಐಎನ್‌ಸಿ ನಡೆಸಿದ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026ರ ಟಾಪ್‌ 50 ವಿಜೇತರ ಪೈಕಿ ಅನನ್ಯಾ ಕೂಡ ಒಬ್ಬರು ಎಂದು ತಿಳಿಸಿದೆ.

ಚಂಡೀಗಢ ಬಿಜೆಪಿ ಕಚೇರಿ ಮೇಲೆ ಗ್ರೆನೇಡ್‌ ಎಸೆದ ದುಷ್ಕರ್ಮಿಗಳು: ಖಲಿಸ್ತಾನಿ ಉಗ್ರರ ಕೃತ್ಯ?

ಚಂಡೀಗಢದ ಬಿಜೆಪಿ ಕಚೇರಿ ಬಳಿ ಭಾರಿ ಸ್ಫೋಟ

Punjab News: ಪಂಜಾಬ್‌ನ ಚಂಡೀಗಢದಲ್ಲಿರುವ ಬಿಜೆಪಿ ಕಚೇರಿಯ ಹೊರಗೆ ಬುಧವಾರ (ಏಪ್ರಿಲ್ 1) ಸಂಜೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸಂಜೆ 5:20ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಕಾರು ಮತ್ತು ಸ್ಕೂಟರ್‌ನ ವಿಂಡ್‌ಶೀಲ್ಡ್ ಹಾನಿಗೊಳಗಾಗಿದೆ.

Loading...