ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ನಿನ್ನಂಥ ಅಪ್ಪ ಇಲ್ಲ; ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಎಂಆರ್‌ಐ ಮೆಷಿನ್ ಒಳಗೆ ಹೋದ ತಂದೆ: ಭಾವುಕ ಕ್ಷಣ ಇಲ್ಲಿದೆ

ಮಗನಿಗೆ ಭಯವಾಗುತ್ತೆ ಅಂತ ಎಂಆರ್‌ಐ ಮೆಷಿನ್ ಒಳಗೆ ಹೋದ ತಂದೆ

Viral Video: ಪುಟ್ಟ ಮಗನಿಗೆ ಭಯವಾಗುತ್ತದೆ ಎನ್ನುವ ಕಾರಣಕ್ಕೆ ತಂದೆ ಕೂಡ ಎಂಆರ್‌ಐ ಸ್ಕ್ಯಾನಿಂಗ್‌ ಮೆಷಿನ್‌ ಒಳ ಹೋದ ಘಟನೆ ನಡೆದಿದೆ. ತಂದೆ-ಮಗನ ಈ ಭಾವನಾತ್ಮಕ ಕ್ಷಣ ಕಂಡು ಹಲವರ ಕಣ್ಣಂಚು ಒದ್ದೆಯಾಗಿದ್ದರೆ, ಇನ್ನು ಕೆಲವರು ಇಂತಹ ಅಪ್ಪನನ್ನು ಪಡೆದ ಪುತ್ರನೇ ಭಾಗ್ಯವಂತ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

"ತಕ್ಷಣ ಹೊರ್ಮುಜ್‌ ಜಲಸಂಧಿ ತೆರೆಯದಿದ್ದರೆ ತೈಲ ಘಟಕ, ವಿದ್ಯುತ್‌ ಸ್ಥಾವರ, ಖರ್ಗ್‌ ದ್ವೀಪ ನಾಶ ಮಾಡುತ್ತೇವೆʼʼ: ಇರಾನ್‌ಗೆ ಟ್ರಂಪ್‌ನಿಂದ ಮತ್ತೊಂದು ಬೆದರಿಕೆ

ಇರಾನ್‌ಗೆ ಮತ್ತೊಮ್ಮೆ ಟ್ರಂಪ್‌ ಬೆದರಿಕೆ; ತೈಲ ಘಟಕ ಧ್ವಂಸಗೊಳಿಸುವ ಎಚ್ಚರಿಕೆ

Iran, Israel-US War: ಕೂಡಲೇ ಹೊರ್ಮುಜ್‌ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ತೈಲ ಘಟಕಗಳು ಮತ್ತು ಮೂಲ ಸೌಕರ್ಯಗಳ ಮೇಲೆ ಶಕ್ತವಾಗಿ ದಾಳಿ ನಡೆಸುವುದಾಗಿ ಅಮೆರಿಕ ಮತ್ತೊಮ್ಮೆ ಎಚ್ಚರಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಸೋಶಿಯಲ್‌ ಮೀಡಿಯಶದಲ್ಲಿ ಬರೆದುಕೊಂಡಿದ್ದಾರೆ.

BOB Recruitment 2026: ಪದವೀಧರರೇ ಗಮನಿಸಿ; ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 104 ಹುದ್ದೆ

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 104 ಹುದ್ದೆ

Bank of Baroda Jobs: ಬ್ಯಾಂಕ್‌ ಆಫ್‌ ಬರೋಡ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 104 ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಏಪ್ರಿಲ್‌ 16.

ಶಾಂತಿ ಮಾತುಕತೆಗೆ ವಿವಿಧ ದೇಶಗಳ ನಾಯಕರನ್ನು ಸ್ವಾಗತಿಸುವ ವೇಳೆ ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್

ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್; ವಿಡಿಯೊ ವೈರಲ್‌

Ishaq Dar: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷದ ವಾತಾವರಣವನ್ನು ಮಾತುಕತೆ ಮೂಲಕ ತಿಳಿಗೊಳಿಸಲು ಪಾಕಿಸ್ತಾನ ಮುಂದಾಗಿದೆ. ಅದಕ್ಕಾಗಿ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಸ್‌ನ ವಿದೇಶಾಂಗ ಸಚಿವರನ್ನು ಸ್ವಾಗತಿಸುವ ವೇಳೆ ಪಾಕ್‌ ಉಪ ಪ್ರಧಾನಿಯೂ ಆಗಿರುವ ವಿದೇಶಾಂಗ ಸಚಿವ ಇಶಾಕ್ ದಾರ್ ಜಾರಿ ಬೀಳುತ್ತಿರುವ ವಿಡಿಯೊ ವೈರಲ್‌ ಆಗಿದೆ.

Kerala Assembly Election 2026: ದೇವರ ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಪ್ರಚಾರ; ಎಲ್‌ಡಿಎಫ್‌-ಯುಡಿಎಫ್‌ ವಿರುದ್ಧ ಗುಡುಗು

ಕೇರಳಂನಲ್ಲಿ ಮೋದಿ ಮಿಂಚು; ದೇವರ ನಾಡಲ್ಲಿ ಈ ಬಾರಿ ತಾವರೆ ಅರಳುತ್ತಾ?

ಕೇರಳಂ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ದೇಶದ ಕುತೂಹಲ ಕೆರಳಿಸಿದೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ಗೆ ಟಕ್ಕರ್‌ ಕೊಟ್ಟು ಈ ಬಾರಿ ಬಿಜೆಪಿ ಕೆಲವು ಕ್ಷೇತ್ರಗಳಲ್ಲಾದರೂ ಜಯ ಗಳಿಸಲಿದೆ ಎನ್ನುವ ಲೆಕ್ಕಾಚಾರ ಅರಂಭವಾಗಿದೆ. 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೇರಳಂನ ಜನತೆ ಕೇಸರಿ ಪಕ್ಷದತ್ತ ಒಲವು ತೋರಿಸುತ್ತಿರುವುದು ಎನ್‌ಡಿಎಯ ನಿರೀಕ್ಷೆ ಮೂಡುವಂತೆ ಮಾಡಿದೆ. ಅಲ್ಲದೆ ಭಾನುವಾರ (ಮಾರ್ಚ್‌ 29) ಪ್ರಧಾನಿ ನರೇಂದ್ರ ಮೋದಿ ಕೇರಳಂಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಪಾಲಕ್ಕಾಡ್‌ ಮತ್ತು ತ್ರಿಶೂರ್‌ನಲ್ಲಿ ಸಂಚರಿಸಿ ಮಿಂಚು ಹರಿಸಿದರು.

ಇಂಡಿಯೋ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ; ತಪ್ಪಿದ ಭಾರಿ ಅನಾಹುತ

ಇಂಡಿಯೋ ವಿಮಾನದ ಎಕ್ಸಿಟ್‌ ಡೋರ್‌ ತೆರೆಯಲು ಯತ್ನಿಸಿದ ಪ್ರಯಾಣಿಕ

IndiGo Flight: ದೆವ್ವ ಹಿಡಿದಿದೆ ಎಂದು ಹೇಳಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಇಂಡಿಯೋ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ಶನಿವಾರ ನಡೆದಿದೆ. ಅದೃಷ್ಟವಶಾತ್‌ ಬಾಗಿಲು ತೆರೆಯದ ಕಾರಣ ಬಹುದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

Naveen Jain: ರಾಮನವಮಿ ಮೆರವಣಿಗೆ ವೇಳೆ ಗುಂಡು ಹಾರಿಸಿದ ಬಿಜೆಪಿ ಶಾಸಕ; ಭುಗಿಲೆದ್ದ ವಿವಾದ

ರಾಮನವಮಿ ಮೆರವಣಿಗೆ ವೇಳೆ ಗುಂಡು ಹಾರಿಸಿದ ಬಿಜೆಪಿ ಶಾಸಕ

ರಾಮನವಮಿ ಮೆರವಣಿಗೆ ವೇಳೆ ಬಿಜೆಪಿ ಶಾಸಕ ನವೀನ್‌ ಜೈನ್‌ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಒಡಿಶಾದಲ್ಲಿ ನಡೆದಿದ್ದು, ದೂರು ದಾಖಲಾಗಿದೆ. ಶಾಸಕರಿಗೆ ರಿವಾಲ್ವರ್‌ ನೀಡಿದ ವೈಯಕ್ತಿಕ ಭದ್ರತಾ ಅಧಿಕಾರಿ ಪ್ರೇಮ್‌ಚಂದ್ ನಾಗ್ ಅವರನ್ನು ಅಮಾನತುಗೊಳಿಸಲಾಗಿದೆ.

Kerala Assembly Polls 2026: ಗಡಿನಾಡು ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರ; ಕನ್ನಡತಿ, ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಪರ ಮತ ಯಾಚನೆ

ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರದ ಪ್ರಚಾರ

ಕೇರಳಂನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಹೀಗಾಗಿ ರಾಜ್ಯಾದ್ಯಂತ ಪ್ರಚಾರದ ಕಾವು ಜೋರಾಗಿದೆ. ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಸತತ 3ನೇ ಬಾರಿಗೆ ಆಡಳಿತಕ್ಕೆ ಬರುವ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಶತಾಯ ಗತಾಯ ಸರ್ಕಾರ ರಚಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಮತ್ತೊಮ್ಮೆ ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಿದೆ. ಅದರಲ್ಲಿಯೂ ಗಡಿನಾಡು ಕಾಸರಗೋಡಿನಲ್ಲಿ ಎನ್‌ಡಿಎ ಪ್ರಚಾರ ಜೋರಾಗಿದೆ. ಸಂಸದ, ಯುವ ನಾಯಕ ಸಂಸದ ತೇಜಸ್ವಿ ಸೂರ್ಯ ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿ ಅಖಾಡಕ್ಕಿಳಿದಿದ್ದಾರೆ. ಕಾಸರಗೋಡು ಎನ್‌ಡಿಎ ಅಭ್ಯರ್ಥಿ, ಕನ್ನಡತಿ ಎಂ.ಎಲ್‌. ಅಶ್ವಿನಿ ಪರ ಕ್ಷೇತ್ರದಾದ್ಯಂತ ಓಡಾಡಿ ಮತ ಯಾಚಿಸಿದರು.

Uttar Pradesh Horror: ನರ ರೂಪದ ರಾಕ್ಷಸ; ವ್ಯಕ್ತಿಯ ತಲೆ ಕಡಿದು ಮನೆಗೆ ಕೊಂಡೊಯ್ದು ಏನೂ ಆಗದಂತೆ ಅಡುಗೆ ಮಾಡಿದ ಪಾಪಿ!

ಕ್ಷುಲ್ಲಕ ಕಾರಣಕ್ಕೆ ಐಸ್‌ಕ್ರೀಂ ವ್ಯಾಪಾರಿಯ ತಲೆ ಕಡಿದ ಮಧ್ಯವಯಸ್ಕ

Crime News: ಮಧ್ಯ ವಯಸ್ಕನೊಬ್ಬ 25 ವರ್ಷದ ವ್ಯಕ್ತಿಯನ್ನು ಕೊಲೆಗೈದು ರುಂಡವನ್ನು ಮನೆಗೊಯ್ದು ಏನೂ ನಡೆದೇ ಇಲ್ಲದಂತೆ ಅಡುಗೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಈ ವೀಭತ್ಸ ಘಟನೆ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ.

ಭಾರತದ ವಿರುದ್ಧ ಕಾರ್ಯಾಚರಿಸುವ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಈಗಲೂ ಆಶ್ರಯ ನೀಡುತ್ತಿದೆ; ಅಮೆರಿಕದ ವರದಿಯಲ್ಲಿದೆ ಬೆಚ್ಚಿ ಬೀಳಿಸುವ ಅಂಶ

ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಈಗಲೂ ಆಶ್ರಯ ತಾಣ

ಭಾರತದ ವಿರುದ್ಧ ಕಾರ್ಯಾಚರಿಸುವ ಉಗ್ರ ಸಂಘಟನೆಗಳಿಗೆ ಈಗಲೂ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಅಮೆರಿಕದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ ಮತ್ತು ಜಮ್ಮು ಕಾಶ್ಮೀರವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನೆಲದಲ್ಲಿ ಹುಲುಸಾಗಿ ಬೆಳೆಯುತ್ತಿವೆ ಎಂದು ತಿಳಿಸಿದೆ.

ಡೊನಾಲ್ಡ್‌ ಟ್ರಂಪ್‌-ನರೇಂದ್ರ ಮೋದಿ ಫೋನ್‌ ಸಂಭಾಷಣೆಯಲ್ಲಿ ಎಲಾನ್‌ ಮಸ್ಕ್‌ ಭಾಗವಹಿಸಿಲ್ಲ; ಭಾರತದಿಂದ ಸ್ಪಷ್ಟನೆ

ಟ್ರಂಪ್‌-ಮೋದಿ ಫೋನ್‌ ಸಂಭಾಷಣೆಯಲ್ಲಿ ಎಲಾನ್‌ ಮಸ್ಕ್‌ ಭಾಗವಹಿಸಿಲ್ಲ

Narendra Modi: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆಸಿದ ಫೋನ್‌ ಸಂಭಷಣೆಯಲ್ಲಿ ಉದ್ಯಮಿ ಎಲಾನ್‌ ಮಸ್ಕ್‌ ಪಾಲ್ಗೊಂಡಿದ್ದರು ಎನ್ನುವ ಸುದ್ದಿಯನ್ನು ಭಾರತ ನಿರಾಕರಿಸಿದೆ.

ಕೋಲಾರ ಪಿಡಿಒ ಸಂಘದ ಚುನಾವಣೆ: ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್, ಉಪಾಧ್ಯಕ್ಷೆ ಮಂಗಳಾಂಬ Video

ಕೋಲಾರ ಪಿಡಿಒ ಸಂಘದ ಜಿಲ್ಲಾಧ್ಯಕ್ಷರಾಗಿ ಮಹೇಶ್ ಕುಮಾರ್ ಆಯ್ಕೆ

ಕೋಲಾರ ಪಂಚಾಯತ್‌ ಅಭಿವೃದ್ದಿ ಸಂಘದ (PDO) ಜಿಲ್ಲಾಧ್ಯಕ್ಷರಾಗಿ ಕೆ. ಮಹೇಶ್‌ ಕುಮಾರ್, ಉಪಾಧ್ಯಕ್ಷರಾಗಿ ಎಂ. ಮಂಗಳಾಂಬ ಹಾಗೂ ಖಜಾಂಚಿಯಾಗಿ ಎನ್. ಸಂಪರಾಜ್ ಜಯಭೇರಿ ಭಾರಿಸಿದ್ದಾರೆ. ತಾಲೂಕು ಪಂಚಾಯತ್‌ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ಕುಮಾರ್ 77 ಮತ, ಎ.ಚಂಗಲರಾಯಗೌಡ 42 ಮತ, ಉಪಾಧ್ಯಕ್ಷ ಸ್ಥಾನದ ಎಂ. ಮಂಗಳಾಂಬ 61 ಮತ, ಎಸ್.ಎನ್. ಮೇಘಾ 55 ಮತ, ಖಜಾಂಚಿ ಸ್ಥಾನದ ಅಭ್ಯರ್ಥಿ ಎನ್. ಸಂಪರಾಜ್ 66 ಮತ, ಆರ್.ಮಂಜುನಾಥ ಪ್ರಸಾದ್ 51 ಮತ ಪಡೆದುಕೊಂಡರು. ಆಯ್ಕೆ ವೇಳೆ ತಾ.ಪಂ. ಇಒ ಮಂಜುನಾಥ್, ಹುತ್ತೂರು ಪಿಡಿಒ ಜಿ. ಲಕ್ಷ್ಮೀ, ಐತರಾಸನಹಳ್ಳಿಯ ಜಿ.ಎಸ್. ಸತೀಶ್ ಕುಮಾರ್, ಕೊಂಡರಾಜನಹಳ್ಳಿಯ ಎಂ. ರಾಮಕೃಷ್ಣ,ಮಾರ್ಜೇನಹಳ್ಳಿಯ ಎಚ್.ಸಿ. ಮಧುಮತಿ, ಮುದುವತ್ತಿಯ ಎಚ್.ಎಂ.ರವಿ, ನರಸಾಪುರ ಎಂ. ಮುನಿರಾಜು, ಶಾಪೂರಿನ ಕೆ.ಸಿ. ಬಾಲಾಜಿ, ವಕ್ಕಲೇರಿಯ ಎ. ಭಾರತಮ್ಮ ಮತ್ತಿತರರು ಉಪಸ್ಥಿತರಿದ್ದರು.

ಮಾರ್ಚ್‌ 27ರ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ; ಕಾರಣವೇನು?

ನಾಳೆಯ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ

Special Cabinet Meeting: ಬಾಗಲಕೋಟೆ ಮತ್ತು ದಾವಣೆಗೆರೆ ದಕ್ಷಿಣ ಕ್ಷೇತ್ರಗಳಿಗೆ ಉಪ ಚುನಾವಣೆ (Byelection) ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಮಾರ್ಚ್‌ 26) ಮಧ್ಯಾಹ್ನ 12 ಗಂಟೆಗೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರದ ಅಪರ ಕಾರ್ಯದರ್ಶಿ ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

ಶಾಲೆಗಳಲ್ಲಿ ʼವಂದೇ ಮಾತರಂʼ 6 ಚರಣ ಹಾಡುವುದು ಕಡ್ಡಾಯ ಆದೇಶ ವಿರೋಧಿಸಿ ಅರ್ಜಿ; ಹೈಕೋರ್ಟ್‌ ಹೇಳಿದ್ದೇನು?

ʼವಂದೇ ಮಾತರಂʼ 6 ಚರಣ ಹಾಡುವುದು ಕಡ್ಡಾಯ ಆದೇಶ ವಿರೋಧಿಸಿ ಅರ್ಜಿ

Karnataka High Court: ಶಾಲೆಗಳಲ್ಲಿ ಪ್ರತಿದಿನ ಬಂಕಿಮ ಚಟರ್ಜಿ ಅವರ 'ವಂದೇ ಮಾತರಂ' ಗೀತೆಯನ್ನು ಎಲ್ಲ 6 ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ನಡೆಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಮಾರ್ಚ್‌ 30ರ ಬದಲು ಹೊಸ ದಿನಾಂಕ ನಿಗದಿ

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ

SSLC Examination: ಮಾರ್ಚ್‌ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಅದರ ಬದಲು ಮಾರ್ಚ್‌ 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಪಾಲಕರಿಗೆ ಗುಡ್‌ನ್ಯೂಸ್‌; 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ

1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ ಸಡಿಲಿಕೆ ಘೋಷಿಸಿದ ರಾಜ್ಯ ಸರ್ಕಾರ

Madhu Bangarappa: ಶಾಲಾ ದಾಖಲಾತಿ ವಯಸ್ಸಿನ ಮಿತಿಯ ವಿಚಾರವಾಗಿ ಗೊಂದಲದಲ್ಲಿದ್ದ ಪಾಲಕರಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ರಿಲೀಫ್‌ ಮೂಡಿದೆ. 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಈ ವರ್ಷವೂ ಸಡಿಲಿಕೆ ಮಾಡುವುದಾಗಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ ಮುಡಾ ಹಗರಣ; ಹೈಕೋರ್ಟ್‌ನಿಂದ ತುರ್ತು ನೋಟಿಸ್‌

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಕುಟುಂಬಸ್ಥರಿಗೆ ಹೈಕೋರ್ಟ್‌ ನೋಟಿಸ್‌

MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಹೈಕೋರ್ಟ್ ಗುರುವಾರ ತುರ್ತು ನೋಟಿಸ್ ಜಾರಿ ಮಾಡಿದೆ. ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಸಲ್ಲಿಸಿದ ಬಿ ರಿಪೋರ್ಟ್‌ ಅನ್ನು ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ನೋಟಿಸ್‌ ಜಾರಿ ಮಾಡಿದೆ.

ತೈಲ ಕೊರತೆ ವದಂತಿ; ಬೆಳಗಾವಿಯಲ್ಲಿ ನೀರು ತುಂಬುವ ಬ್ಯಾರೆಲ್‌ನೊಂದಿಗೆ ಪೆಟ್ರೋಲ್‌ ಬಂಕ್‌ಗೆ ಲಗ್ಗೆ ಇಟ್ಟ ಗ್ರಾಹಕರು Video

ತೈಲ ಕೊರತೆ ವದಂತಿ; ಬೆಳಗಾವಿ ಪೆಟ್ರೋಲ್‌ ಬಂಕ್‌ಗೆ ಲಗ್ಗೆ ಇಟ್ಟ ಗ್ರಾಹಕರು

Belagavi News: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಸಹಜವಾಗಿ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ವಾಣಿಜ್ಯ ಸಿಲಿಂಡ್‌ರ್ ಪೂರೈಕೆ ಸ್ಥಗಿತಗೊಂಡು ಜನರು ಆತಂಕಗೊಂಡಿದ್ದಾರೆ. ಅದರ ಮಧ್ಯೆ ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ವದಂತಿ ಹಬ್ಬಿದ್ದರಿಂದ ಸೋಮವಾರ (ಮಾರ್ಚ್‌ 23) ರಾತ್ರೋರಾತ್ರಿ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಿಗೆ ಜನರು ಮುಗಿಬಿದ್ದರು. ಹಲವರು ನೀರು ತುಂಬುವ ಬ್ಯಾರೆಲ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ತುಂಬಲು ಮುಂದಾದರು.

Gold Price Today On 24th March: ಮತ್ತೆ ಇಳಿಕೆಯಾಯ್ತು ಚಿನ್ನದ ದರ; ಇಂದು ಕಡಿಮೆಯಾಗಿದ್ದು ಬರೋಬ್ಬರಿ 2,160 ರುಪಾಯಿ

ಮತ್ತೆ ಇಳಿಕೆಯಾಯ್ತು ಚಿನ್ನದ ದರ

Gold Silver Price Today: ಸತತ 2ನೇ ದಿನವಾದ ಮಂಗಳವಾರ (ಮಾರ್ಚ್‌ 24)ವೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 270 ರುಪಾಯಿ ಕಡಿಮೆಯಾಗಿದ್ದು 12,865 ರುಪಾಯಿಗೆ ಕುಸಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 294 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಬಂದು ತಲುಪಿದೆ.

ನಷ್ಟ ಪರಿಹಾರ ಸಿಗುವ ತನಕ ಯುದ್ಧ ಮುಂದುವರಿಯಲಿದೆ; ಅಮೆರಿಕದ ಕದನ ವಿರಾಮಕ್ಕೆ ಷರತ್ತು ವಿಧಿಸಿದ ಇರಾನ್‌

ಅಮೆರಿಕದ ಕದನ ವಿರಾಮ ಪ್ರಸ್ತಾವಕ್ಕೆ ಷರತ್ತು ವಿಧಿಸಿದ ಇರಾನ್‌

US-Israel-Iran War: ಅಮೆರಿಕ-ಇಸ್ರೇಲ್‌-ಇರಾನ್‌ ನಡುವಿನ ಕದನ ಅಂತ್ಯದತ್ತ ಸಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಇಸ್ರೇಲ್‌ ಜತೆಗೂಡಿ ದಾಳಿ ನಡೆಸುತ್ತಿರುವ ಅಮೆರಿಕ ಇದೀಗ ಶಾಂತಿ ಮಂತ್ರ ಜಪಿಸಲು ಮುಂದಾಗಿದೆ. ಅಮೆರಿಕ ನಷ್ಟ ಪರಿಹಾರ ಒದಗಿಸುವ ಯುದ್ಧ ನಿಲ್ಲುವುದಿಲ್ಲ ಎಂದು ಇರಾನ್‌ ತಿಳಿಸಿದೆ.

110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾ ಮಿಲಿಟರಿ ವಿಮಾನ ಪತನ; 80 ಮಂದಿ ಸಾವಿನ ಶಂಕೆ

ಕೊಲಂಬಿಯಾ ಮಿಲಿಟರಿ ವಿಮಾನ ಪತನ

Colombian Military Plane Crashes: ಸುಮಾರು 110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಸೋಮವಾರ (ಮಾರ್ಚ್‌ 23) ಪತನವಾಗಿದ್ದು, ಸುಮಾರು 80 ಮಂದಿ ಮೃತಪಟ್ಟಿದ್ದಾರೆ. ಕೊಲಂಬಿಯಾದ ಪೋರ್ಟೊ ಲೆಗುಯಿಜಾಮೊದ ದಕ್ಷಿಣ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಣಾಳಿಕೆಯಲ್ಲಿ ಮಾತ್ರ, ಕಾರ್ಯರೂಪದಲ್ಲಿ ಇಲ್ಲ; ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿಸಲು ಪಕ್ಷಗಳಿಗೆ ನಿರಾಸಕ್ತಿ

ರಾಮ ಸೇತುವನ್ನು ಪಾರಂಪರಿಕ ಸ್ಮಾರಕವನ್ನಾಗಿಸಲು ಇಲ್ಲ ಆಸಕ್ತಿ

Ram Setu: ಪೌರಾಣಿಕ ಕೃತಿ ʼರಾಮಾಯಣʼದಲ್ಲಿ ಬರುವ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವುದಾಗಿ ಚುನಾವಣೆ ವೇಳೆ ವಿವಿಧ ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳುತ್ತಿದ್ದರೂ, ಇದುವರೆಗೆ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎನ್ನುವ ಸತ್ಯ ಇದೀಗ ಬಯಲಾಗಿದೆ. ಆರ್‌ಟಿಐ ಮೂಲಕ ಹೊರಬಿದ್ದ ಮಾಹಿತಿಯಲ್ಲಿ ರಾಮ ಸೇತು ಭಾರತೀಯ ಪುರಾತತ್ವ ಸಮೀಕ್ಷೆ ಅಡಿಯಲ್ಲಿ ರಕ್ಷಿಸ್ಪಟ್ಟಿಲ್ಲ ಎನ್ನುವುದು ಗೊತ್ತಾಗಿದೆ.

ʼʼಇರಾನ್‌ ವಿರುದ್ಧ ಕ್ರಮ ಕೈಗೊಳ್ಳಿʼʼ: ವಿಶ್ವ ನಾಯಕರಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕರೆ; ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸೂಚನೆ

ಇರಾನ್‌ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವ ನಾಯಕರಿಗೆ ಇಸ್ರೇಲ್‌ ಪ್ರಧಾನಿ ಕರೆ

Benjamin Netanyahu: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ 3ನೇ ವಾರಕ್ಕೆ ಕಾಲಿಟ್ಟಿದ್ದು, ಸದ್ಯ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ತಮ್ಮ ದೇಶದ ಮೇಲೆ ಇರಾನ್‌ ನಡೆಸಿರುವ ಕ್ಷಿಪಣಿ ದಾಳಿಗೆ ಕೆಂಡಾಮಂಡಲರಾಗಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಶತ್ರು ನಿರ್ನಾಮ; ಕುಟುಂಬಸ್ಥರಿಂದಲೇ ಲಷ್ಕರ್‌-ಎ-ತೋಯ್ಬಾ ಕಮಾಂಡರ್‌ ಬಿಲಾಲ್‌ ಆರಿಫ್‌ ಸರಾಫಿ ಹತ್ಯೆ

ಲಷ್ಕರ್‌-ಎ-ತೋಯ್ಬಾ ಕಮಾಂಡರ್‌ ಬಿಲಾಲ್‌ ಆರಿಫ್‌ ಸರಾಫಿಯ ಹತ್ಯೆ

Bilal Arif Sarafi: ಉಗ್ರ ಸಂಘಟನೆ ಲಷ್ಕರ್‌-ಎ-ತೋಯ್ಬಾದ ಕಮಾಂಡರ್‌ ಬಿಲಾಲ್‌ ಆರಿಫ್‌ ಸರಾಫಿಯನ್ನು ಪಾಕಿಸ್ತಾನದಲ್ಲಿ ಹತ್ಯೆಯಾಗಿದೆ. ಆತನ ಕುಟುಂಬಸ್ಥರೇ ಇರಿದು, ಗುಂಡಿಟ್ಟು ಆತನನ್ನು ಕೊಲೆ ಮಾಡಿದ್ದಾರೆ. ಈದ್‌ ಆಚರಣೆಯ ಬಳಿಕ ಶನಿವಾರ ಈ ಹತ್ಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Loading...