ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಎಂಡಬ್ಲ್ಯು ಕಾರ್‌  ಭೀಕರ ಅಪಘಾತ: ಶಾಕುನ್ ಗ್ರೂಪ್ ಎಂಡಿ ವಲ್ಲಭ ಮಹೇಶ್ವರಿ ನಿಧನ

ರಸ್ತೆ ಅಪಘಾತಕ್ಕೆ ಶಾಕುನ್ ಗ್ರೂಪ್ ಎಂಡಿ ವಲ್ಲಭ ಮಹೇಶ್ವರಿ ಬಲಿ

ಶಾಕುನ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ವಲ್ಲಭ ಮಹೇಶ್ವರಿ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಅಲ್ವಾರ್ ಬಳಿ ಅವರು ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.

ಚಾಟ್ ಜಿಪಿಟಿ ಮೂಲಕ ಆತ್ಮಹತ್ಯೆಯ ವಿಧಾನ ಹುಡುಕಾಡಿದ ಯುವತಿಯರು; ಎಲಾನ್‌ ಮಸ್ಕ್ ಹೇಳಿದ್ದೇನು?

ಆತ್ಮಹತ್ಯೆಯ ವಿಧಾನಕ್ಕಾಗಿ ಚಾಟ್ ಜಿಪಿಟಿ ಮೊರೆ ಹೋದ ವಿದ್ಯಾರ್ಥಿನಿಯರು

ಗುಜರಾತ್‌ನ ಸೂರತ್‌ನ ಸ್ವಾಮಿನಾರಾಯಣ ದೇವಸ್ಥಾನದ ಶೌಚಾಲಯದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. 18–20 ವರ್ಷದ ಬಾಲ್ಯದ ಸ್ನೇಹಿತೆಯರಾದ ಅವರು ಕಳೆದ ಶುಕ್ರವಾರ (ಮಾರ್ಚ್‌ 6) ಕಾಲೇಜಿಗೆ ಹೋಗಿ ಮನೆಗೆ ಮರಳಿರಲಿಲ್ಲ. ಮೊಬೈಲ್ ಲೊಕೇಶನ್ ಆಧರಿಸಿ ಹುಡುಕಿದಾಗ ದೇವಸ್ಥಾನದ ಶೌಚಾಲಯದಲ್ಲಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಘಟನಾ ಸ್ಥಳದಲ್ಲಿ ಅರಿವಳಿಕೆ ಮದ್ದು ಮತ್ತು ಸಿರಿಂಜ್‌ಗಳು ದೊರೆತಿದೆ. ಅದನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮೊಬೈಲ್ ಪರಿಶೀಲಿಸಿದಾಗ ಆತ್ಮಹತ್ಯೆಗೆ ಯಾವ ಔಷಧ ಬಳಸಬಹುದು ಎಂದು ChatGPTನಲ್ಲಿ ಹುಡುಕಿರುವುದು ತಿಳಿದುಬಂದಿದೆ. ಈ ಬಗ್ಗೆ ಎಲಾನ್‌ ಮಸ್ಕ್‌ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಮತ್ತೊಂದು ಜನಾಂಗೀಯ ನಿಂದನೆ ಪ್ರಕರಣ; ಮಣಿಪುರದ ಯುವತಿ ಮೇಲೆ ಹಲ್ಲೆ

ಮಣಿಪುರ ಯುವತಿಯ ಮೇಲೆ ದೆಹಲಿಯಲ್ಲಿ ಹಲ್ಲೆ; ಜನಾಂಗೀಯ ನಿಂದನೆ

ನವದೆಹಲಿ ಸಾಕೇತ್ ಜಿಲ್ಲಾ ನ್ಯಾಯಾಲಯದ ಸಮೀಪ ಮಣಿಪುರ ಮೂಲದ ಯುವತಿಯೊಬ್ಬರ ಮೇಲೆ ಅಪರಿಚಿತ ಪುರುಷರ ಗುಂಪು ಅಸಭ್ಯ ಕಮೆಂಟ್ ಮಾಡಿದ ಬಳಿಕ ಹಲ್ಲೆ ನಡೆಸಿದೆ. ಗಾಯಗೊಂಡ ಯುವತಿಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಹಾಗೂ ಬೆದರಿಕೆ ಹಾಕಿದ ಆರೋಪದ ಮೇಲೆ ದಂಪತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ನಿರಾಕರಣೆ; ರಟ್ಟಿನ ಪೆಟ್ಟಿಗೆಯಲ್ಲಿ ಮಗುವಿನ ಶವ ಹೊತ್ತೊಯ್ದ ತಂದೆ

ಆಸ್ಪತ್ರೆ ನಿರ್ಲಕ್ಷ್ಯ ಆರೋಪ: ರಟ್ಟಿನ ಪೆಟ್ಟಿಗೆಯಲ್ಲಿ ಶವ ಹೊತ್ತೊಯ್ದ ತಂದೆ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯೊಂದು ಅಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಆರೋಪದ ನಡುವೆ ಮನಕಲಕುವ ಘಟನೆ ನಡೆದಿದೆ. ನವಜಾತ ಮಗು ಮೃತಪಟ್ಟ ನಂತರ, ಗ್ರಾಮಕ್ಕೆ ಮರಳಲು ವಾಹನದ ವ್ಯವಸ್ಥೆ ಸಿಗದ ಕಾರಣ ತಂದೆ ಮಗುವಿನ ಶವವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಮನೆಗೆ ಹೊತ್ತೊಯ್ದಿದ್ದಾರೆ. ಘಟನೆ ಕುರಿತು ಜಿಲ್ಲಾಡಳಿತ ತನಿಖೆ ಆರಂಭಿಸಿದೆ.

Astro Tips: ಸೋಮವಾರ ಶಿವನ ಆರಾಧನೆಗೆ ವಿಶೇಷ ದಿನ; ಈ ನಿಯಮಗಳನ್ನು ಪಾಲಿಸಿದರೆ ಸಿಗುತ್ತದೆ ಭೋಲೇನಾಥನ ಕೃಪೆ

ಸೋಮವಾರ ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥ ಸಿದ್ಧಿ!

ಹಿಂದೂ ಧರ್ಮದಲ್ಲಿ ಸೋಮವಾರವನ್ನು ಭಗವಾನ್ ಶಿವನಿಗೆ ಅತ್ಯಂತ ಪ್ರಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಉಪವಾಸವಿಟ್ಟು ಶಿವಲಿಂಗಕ್ಕೆ ಹಾಲು ಅರ್ಪಿಸಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿದರೆ ಶಿವನ ಕೃಪೆ ಲಭಿಸುತ್ತದೆ ಎಂದು ನಂಬಲಾಗಿದೆ. ಸೋಮವಾರ ಶಿವ ಪೂಜೆಯಲ್ಲಿ ಪಾಲಿಸಬೇಕಾದ ನಿಯಮಗಳಾವುವು..? ಎಂಬುದನ್ನು ತಿಳಿಯೋಣ..

Chanakya Niti: ಚಾಣಕ್ಯ ನೀತಿ: ಜೀವನದಲ್ಲಿ ಯಶಸ್ಸು ಪಡೆಯಲು ಈ 5 ಮೂಲ ಮಂತ್ರಗಳನ್ನು ಅಳವಡಿಸಿಕೊಳ್ಳಿ

ಯಶಸ್ಸಿನ ದಾರಿಗೆ ಚಾಣಕ್ಯನ ಸಲಹೆ

ಆಚಾರ್ಯ ಚಾಣಕ್ಯನ ನೀತಿಗಳ ಪ್ರಕಾರ, ಜೀವನದಲ್ಲಿ ಯಶಸ್ಸು ಸಾಧಿಸಲು ಕೆಲವು ಮೂಲ ತತ್ವಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ಆದಾಯ-ವೆಚ್ಚಗಳ ಅರಿವು, ಸ್ವಂತ ಸಾಮರ್ಥ್ಯದ ತಿಳುವಳಿಕೆ, ಹಿತೈಷಿ-ವಿರೋಧಿಗಳ ಗುರುತು, ಸರಿಯಾದ ಸ್ಥಳದ ಆಯ್ಕೆ ಮತ್ತು ಪರಿಸ್ಥಿತಿಗೆ ಅನುಗುಣ ನಿರ್ಧಾರಗಳು ಯಶಸ್ಸಿನ ದಾರಿಯನ್ನು ಸುಗಮಗೊಳಿಸುತ್ತವೆ.

International WomensDay: ಮಾರ್ಚ್‌ 8 ಮಹಿಳಾ ದಿನಾಚರಣೆ: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಇಲ್ಲಿದೆ

ಅಂತಾರಾಷ್ಟ್ರೀಯ ಮಹಿಳಾ ದಿನ: ಮಾರ್ಚ್‌ 8ರ ಮಹತ್ವವೇನು..?

ಪ್ರತಿ ವರ್ಷ ಮಾರ್ಚ್‌ 8ರಂದು ಆಚರಿಸುವ ಅಂತರರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗೌರವಿಸುವ ಹಾಗೂ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ. ಈ ದಿನದ ಇತಿಹಾಸ, ಆಚರಣೆಯ ಉದ್ದೇಶ ಮತ್ತು 2026ರ ಥೀಮ್ ಕುರಿತು ಮಾಹಿತಿ ನೀಡಲಾಗಿದೆ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ಉಡುಗೊರೆಗಳನ್ನ ನೀಡಿದರೆ ಬರಲಿದೆ ಸಂಪತ್ತು ಮತ್ತು ಸಮೃದ್ಧಿ

ಉಡುಗೊರೆ ನೀಡುವಾಗ ಈ ವಾಸ್ತು ನಿಯಮಗಳನ್ನು ಪಾಲಿಸಿ

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಶುಭ ಫಲಗಳು ದೊರಕುತ್ತವೆ ಎಂಬ ನಂಬಿಕೆ ಇದೆ. ಜೋಡಿ ಆನೆಯ ವಿಗ್ರಹ, ಹೂವುಗಳು ಹಾಗೂ ಬೆಳ್ಳಿಯ ವಸ್ತುಗಳು ಮಂಗಳಕರವೆಂದು ಹೇಳಲಾಗುತ್ತದೆ. ಆದರೆ ಗಡಿಯಾರ, ಚಾಕು, ಕಬ್ಬಿಣದ ವಸ್ತುಗಳು ಮುಂತಾದವುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ಸಲಹೆ ನೀಡುತ್ತದೆ.

Astro Tips: ಮುತ್ತಿನ ಉಂಗುರ ಧರಿಸಲು ಯೋಚಿಸುತ್ತಿದ್ದೀರಾ? ಮೊದಲು ಈ ಜ್ಯೋತಿಷ್ಯ ಸಲಹೆ ತಿಳಿದುಕೊಳ್ಳಿ

ಮುತ್ತು ಧರಿಸುವವರಿಗೆ ಮುಖ್ಯ ಸೂಚನೆ ಇಲ್ಲಿದೆ

ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನು ಮನಸ್ಸು, ಭಾವನೆಗಳು ಮತ್ತು ನಿದ್ರೆಯ ಮೇಲೆ ಪ್ರಮುಖ ಪ್ರಭಾವ ಹೊಂದಿರುವ ಗ್ರಹ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಮಾನಸಿಕ ಅಶಾಂತಿ, ಆತಂಕ ಮತ್ತು ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಬೆಳ್ಳಿಯ ಉಂಗುರದಲ್ಲಿ ನೈಸರ್ಗಿಕ ಮುತ್ತು ಧರಿಸುವುದರಿಂದ ಮನಶಾಂತಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಗೂಗಲ್‌ನ ಸುಂದರ್ ಪಿಚೈ ತಿಂಗಳ ವೇತನ ಏಕಾಏಕಿ ಇಷ್ಟೊಂದು ಹೆಚ್ಚಳ? ಪ್ಯಾಕೇಜ್‌ ಕೇಳಿದ್ರೆ ಶಾಕ್‌ ಆಗ್ತೀರಾ!

ಸುಂದರ್ ಪಿಚೈಗೆ ಭಾರೀ ಸಂಭಾವನೆ ಹೆಚ್ಚಳ

ಗೂಗಲ್‌ನ ಮೂಲ ಸಂಸ್ಥೆ Alphabet ತನ್ನ ಸಿಇಒ ಸುಂದರ್ ಪಿಚೈ ಅವರ ಮುಂದಿನ ಮೂರು ವರ್ಷಗಳ ಸಂಭಾವನೆಯನ್ನು ಸುಮಾರು 692 ಮಿಲಿಯನ್ ಡಾಲರ್ಗೆ ಹೆಚ್ಚಿಸಿದೆ. ಈ ಪ್ಯಾಕೇಜ್‌ನಲ್ಲಿ ಪರ್ಫಾರ್ಮೆನ್ಸ್ ಸ್ಟಾಕ್ ಯೂನಿಟ್‌ಗಳು, ನಿರ್ಬಂಧಿತ ಷೇರುಗಳು ಹಾಗೂ ವಾರ್ಷಿಕ 2 ಮಿಲಿಯನ್ ಡಾಲರ್ ವೇತನ ಸೇರಿವೆ. ಪಿಚೈ ಅವರ ನೇತೃತ್ವದಲ್ಲಿ ಗೂಗಲ್‌ನ ಮಾರುಕಟ್ಟೆ ಮೌಲ್ಯವು ಗಣನೀಯವಾಗಿ ಏರಿಕೆಯಾಗಿದ್ದು, ಅವರು ಜಾಗತಿಕವಾಗಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ.

ಇಸ್ರೇಲ್‌- ಇರಾನ್ ಯುದ್ಧ ಭೀತಿ: ಕಚ್ಚಾ ತೈಲ ಬೆಲೆ ಶೇಕಡಾ 12ರಷ್ಟು ಏರಿಕೆ, 90 ಡಾಲರ್‌ ದಾಟಿದ ಬ್ಯಾರೆಲ್ ಬೆಲೆ

ಯುದ್ಧ ಭೀತಿ ನಡುವೆ ಕಚ್ಚಾ ತೈಲ ಬೆಲೆ ಏರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ನಂತರ ಇರಾನ್ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕ್ರೂಡ್ ಆಯಿಲ್ WTI ಫ್ಯೂಚರ್ಸ್ ಸುಮಾರು 12% ಏರಿಕೆಯಾಗಿ ಬ್ಯಾರೆಲ್‌ಗೆ ಸುಮಾರು $90 ದಾಟಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಜಾಗತಿಕ ತೈಲ ಪೂರೈಕೆಗೆ ಅಪಾಯ ಇರುವ ಭೀತಿಯಿಂದ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ. ಈ ಪರಿಸ್ಥಿತಿ ಭಾರತದಂತಹ ಹೆಚ್ಚಿನ ತೈಲ ಆಮದು ಮಾಡುವ ದೇಶಗಳ ಇಂಧನ ಭದ್ರತೆ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟ ಅಮೆರಿಕ! ಟ್ರಂಪ್‌ ಹೇಳಿದ್ದೇನು?

ಭಾರತಕ್ಕೆ ರಷ್ಯಾ ತೈಲ ಖರೀದಿಗೆ ತಾತ್ಕಾಲಿಕ ಅವಕಾಶ

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯನ್ನು ಸ್ಥಿರಗೊಳಿಸಲು ಅಮೆರಿಕ ಭಾರತಕ್ಕೆ ಸಮುದ್ರದಲ್ಲಿ ಬಾಕಿಯಿರುವ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿ ಸಂಸ್ಕರಿಸಲು ತಾತ್ಕಾಲಿಕ ಅನುಮತಿ ನೀಡಿದೆ. ಇದು ಕೇವಲ ಅಲ್ಪಾವಧಿಯ ಕ್ರಮವಾಗಿದ್ದು, ಜಾಗತಿಕ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

Astro Tips; ಶನಿ ದೋಷ ನಿವಾರಣೆಗೆ ಏನು ಮಾಡಬೇಕು? ಶನಿವಾರ ಪಾಲಿಸಬೇಕಾದ ಸರಳ ಪರಿಹಾರಗಳು ಇಲ್ಲಿವೆ

ಶನಿ ಸಾಡೇಸಾತಿ ಕಾಟವೇ..? ಈ ಪರಿಹಾರಗಳನ್ನು ಪಾಲಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ದುರ್ಬಲವಾಗಿದ್ದರೆ ಶನಿ ದೋಷ, ಸಾಡೇಸಾತಿ ಅಥವಾ ಮಹಾದಶೆಯಂತಹ ಪರಿಣಾಮಗಳು ಕಾಣಿಸಬಹುದು. ಇಂತಹ ಸಂದರ್ಭಗಳಲ್ಲಿ ಶನಿವಾರ ಶನಿ ಸ್ತೋತ್ರ ಪಠಿಸುವುದು, ಶಿವನಿಗೆ ಹಾಲು ಮತ್ತು ಕಪ್ಪು ಎಳ್ಳು ಅರ್ಪಿಸುವುದು, ದಾನ ಧರ್ಮ ಮಾಡುವುದು ಹಾಗೂ ಹನುಮಂತನ ಪೂಜೆ ಮಾಡುವುದರಿಂದ ಶನಿಯ ದುಷ್ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ

Vastu Tips: ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಶುಭವೇ? ವಾಸ್ತು-ಫೆಂಗ್ ಶೂಯಿ ಹೇಳೋದೇನು?

ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ

ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಒಂಟೆಯ ಪ್ರತಿಮೆ ಅಥವಾ ಚಿತ್ರವನ್ನು ಇಡುವುದು ಶುಭಕರವೆಂದು ಹೇಳಲಾಗುತ್ತದೆ. ಒಂಟೆ ಸಹನೆ, ಹೊಂದಿಕೊಳ್ಳುವಿಕೆ, ಪರಿಶ್ರಮ ಮತ್ತು ಬದುಕುಳಿಯುವ ಸಾಮರ್ಥ್ಯದ ಸಂಕೇತವಾಗಿದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚುವುದು, ನಕಾರಾತ್ಮಕತೆ ದೂರಾಗುವುದು ಹಾಗೂ ಆರ್ಥಿಕ ಮತ್ತು ಮಾನಸಿಕ ಸ್ಥಿರತೆ ಬರಲು ಸಹಾಯವಾಗುತ್ತದೆ ಎಂದು ನಂಬಿಕೆ ಇದೆ. ವಿಶೇಷವಾಗಿ ವಾಯುವ್ಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಒಂಟೆಯ ಪ್ರತಿಮೆ ಇಡುವುದು ಉತ್ತಮ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎನ್ನಲಾಗುತ್ತದೆ.

ಅಪ್ರಾಪ್ತ ಬಾಲಕಿಯ ಮೇಲೆ ಡೊನಾಲ್ಡ್‌ ಟ್ರಂಪ್‌ ಲೈಂಗಿಕ ದೌರ್ಜನ್ಯ? ಇರಾನ್‌ ಸಂಘರ್ಷದ ಮಧ್ಯೆ ಮತ್ತೊಮ್ಮೆ ಹಲ್‌ಚಲ್‌ ಎಬ್ಬಿಸಿದ ಎಪ್ಸ್ಟೀನ್ ಫೈಲ್ಸ್‌

ಅಮೆರಿಕದಲ್ಲಿ ಎಪ್ಸ್ಟೀನ್ ದಾಖಲೆ ಬಹಿರಂಗ: ಟ್ರಂಪ್ ವಿರುದ್ಧ ಗಂಭೀರ ಆರೋಪ

ಅಮೆರಿಕದ ನ್ಯಾಯಾಂಗ ಇಲಾಖೆ ಇತ್ತೀಚೆಗೆ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಹೊಸ ದಾಖಲೆಗಳನ್ನು ಬಹಿರಂಗಪಡಿಸಿದೆ. ಈ ದಾಖಲೆಗಳಲ್ಲಿ ಅಂದಿನ ಅಪ್ರಾಪ್ತ ಬಾಲಕಿಯೊಬ್ಬಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವುದು ಉಲ್ಲೇಖವಾಗಿದೆ. ಆದರೆ ಶ್ವೇತಭವನ ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತವೆಂದು ತಳ್ಳಿಹಾಕಿದ್ದು, ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ಹೇಳಿದೆ.

ದೇಶದಲ್ಲಿ ಸದ್ಯಕ್ಕಂತೂ ತೈಲ ಬೆಲೆ ಏರಿಕೆಯಾಗುವುದಿಲ್ಲ, ಆತಂಕ ಬೇಡ: ಕೇಂದ್ರದಿಂದ ಭರವಸೆ; ರಷ್ಯಾದಿಂದ ತೈಲ ಖರೀದಿಸಲಿದೆ ಭಾರತ

ಇಂಧನ ಸಂಕಷ್ಟದ ನಡುವೆ ಭಾರತದ ನೆರವಿಗೆ ಧಾವಿಸಿದ ರಷ್ಯಾ

ಅಮೆರಿಕ–ಇಸ್ರೇಲ್–ಇರಾನ್ ಯುದ್ಧದ ಹಿನ್ನೆಲೆ ಇಂಧನ ಪೂರೈಕೆಯಲ್ಲಿ ಅನಿಶ್ಚಿತತೆ ಇದ್ದರೂ, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಪೂರೈಕೆ ವ್ಯತ್ಯಯ ಎದುರಾದರೂ ಭಾರತ ಬಳಿ 74ರಿಂದ 90 ದಿನಗಳವರೆಗೆ ಆಗುವಷ್ಟು ಸಾಕಷ್ಟು ತೈಲ ಮೀಸಲು ದಾಸ್ತಾನು ಇದೆ ಎಂದು ತಿಳಿಸಲಾಗಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ: ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ

ಪಶ್ಚಿಮ ಏಷ್ಯಾ ಬಿಕ್ಕಟ್ಟು ನಡುವೆ ಭಾರತಕ್ಕೆ ಅಮೆರಿಕ ಇಂಧನ ಭರವಸೆ

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಗಳಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಈ ಹಿನ್ನೆಲೆ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ವ್ಯತ್ಯಯವಾಗದಂತೆ ಅಮೆರಿಕ ಸಹಕರಿಸಲು ಸಿದ್ಧವಿದೆ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ತಿಳಿಸಿದ್ದಾರೆ. ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಅಮೆರಿಕ ಬದ್ಧವಾಗಿದ್ದು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದವೂ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು.

Chanakya Niti: ಈ 4 ಸಂದರ್ಭಗಳಲ್ಲಿ ಧೈರ್ಯ ಪ್ರದರ್ಶಿಸುವುದಕ್ಕಿಂತ, ದೂರ ಹೋಗುವುದೇ ಜಾಣತನ ಎನ್ನುತ್ತಾರೆ ಚಾಣಕ್ಯ

ಈ 4 ಸಂದರ್ಭಗಳಲ್ಲಿ ದೂರ ಉಳಿಯುವುದೇ ಉತ್ತಮ

ಆಚಾರ್ಯ ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಕೆಲವು ಸಂದರ್ಭಗಳಲ್ಲಿ ಧೈರ್ಯ ತೋರಿಸುವುದಕ್ಕಿಂತ ಅಲ್ಲಿಂದ ದೂರ ಹೋಗುವುದು ಉತ್ತಮ. ಹಿಂಸಾಚಾರ, ಶತ್ರುವಿನ ದಾಳಿ, ಆರ್ಥಿಕ ಸಂಕಷ್ಟ ಇರುವ ಸ್ಥಳ ಹಾಗೂ ಅಪರಾಧಿಗಳ ಸಾನ್ನಿಧ್ಯದಲ್ಲಿರುವುದು ಅಪಾಯಕಾರಿಯಾಗಿದೆ. ಹಾಗಾಗಿ ಈ 4 ಸಂದರ್ಭಗಳಲ್ಲಿ ದೂರ ಉಳಿಯುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯ

Sankashta Chaturthi: ಸಂಕಷ್ಟ ಚತುರ್ಥಿ 2026: ವಿಘ್ನೇಶ್ವರನ ಕೃಪೆಗೆ ಇಂದು ಈ ಮಂತ್ರಗಳನ್ನು ಪಠಿಸಿ

ವಿಘ್ನೇಶ್ವರನ ಆರಾಧನೆಯಿಂದ ದೂರಾಗುತ್ತವೆ ಸಂಕಷ್ಟಗಳು

ಸಂಕಷ್ಟ ಚತುರ್ಥಿ ದಿನವನ್ನು ವಿಘ್ನೇಶ್ವರನ ಆರಾಧನೆಗೆ ಸಮರ್ಪಿತವಾದ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಉಪವಾಸವಿದ್ದು ಗಣೇಶನ ಪೂಜೆ ಮಾಡಿ ವಿಶೇಷ ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

Vastu Tips: ಮನೆಯ ಈ ಐದು ಸ್ಥಳಗಳಲ್ಲಿ ನವಿಲುಗರಿ ಇಟ್ಟರೆ  ಐಶ್ವರ್ಯ ಹೆಚ್ಚಾಗೋದು ಗ್ಯಾರಂಟಿ..!

ವಾಸ್ತು ಪ್ರಕಾರ ನವಿಲು ಗರಿ ಇಡುವುದರಿಂದ ಐಶ್ವರ್ಯ ಹೆಚ್ಚಳ!

ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಗೆ ಪವಿತ್ರ ಸ್ಥಾನವಿದ್ದು, ಇದು ದುಷ್ಟಶಕ್ತಿಗಳನ್ನು ದೂರ ಮಾಡಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಪೂಜಾ ಕೋಣೆ, ಹಣ ಇಡುವ ಸ್ಥಳ, ಮುಖ್ಯ ಬಾಗಿಲು ಹಾಗೂ ಓದು ಮೇಜು ಸೇರಿದಂತೆ ಕೆಲವು ವಿಶೇಷ ಸ್ಥಳಗಳಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಆರ್ಥಿಕ ಸ್ಥಿರತೆ, ಮನಶಾಂತಿ ಮತ್ತು ಕುಟುಂಬದ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ನಿತೀಶ್ ಕುಮಾರ್ ನಂತರ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು? ರೇಸ್‌ನಲ್ಲಿರುವ ಪ್ರಮುಖ ನಾಯಕರು ಇವರೇ

ಬಿಹಾರ ಸಿಎಂ ಕುರ್ಚಿಗೆ ಮೂವರು ನಾಯಕರು ರೇಸ್‌ನಲ್ಲಿ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿ ರಾಜ್ಯಸಭೆ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆಗಳು ಜೋರಾಗಿವೆ. ಹಾಗಾದರೆ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ರಾಜಕೀಯ ವಲಯದಲ್ಲಿ ಮೂವರು ಪ್ರಮುಖ ನಾಯಕರ ಹೆಸರು ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಇರಾನ್ ಕ್ಷಿಪಣಿ ದಾಳಿ: ಮೃತ ಇಬ್ಬರು ಭಾರತೀಯ ನಾವಿಕರ ಗುರುತು ಪತ್ತೆ

ಇರಾನ್ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರ ದುರ್ಮರಣ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ದಾಳಿಯಿಂದ ಹಡಗು ತೀವ್ರವಾಗಿ ಹಾನಿಗೊಳಗಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಭಾರತೀಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.

ಡೊನಾಲ್ಡ್‌ ಟ್ರಂಪ್, ಜೋ ಬೈಡನ್ ಹತ್ಯೆಗೆ ಸುಪಾರಿ ಕೊಡ್ತಾ ಇರಾನ್‌? ಮಧ್ಯಪ್ರಾಚ್ಯ ಸಂಘರ್ಷಕ್ಕೆ ಪಾಕಿಸ್ತಾನದಿಂದ ಸ್ಫೋಟಕ ಟ್ವಿಸ್ಟ್‌

ಟ್ರಂಪ್, ಬೈಡನ್ ಹತ್ಯೆಗೆ ಇರಾನ್‌ನಿಂದ ಸುಪಾರಿ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆ ಮಾಡಲು ಇರಾನ್ ಸುಪಾರಿ ನೀಡಿದೆ ಎಂದು ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಅಮೆರಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇರಾನ್ ವಿರುದ್ಧದ ದಾಳಿಗೆ ಬಳಕೆಯಾಯ್ತೆ ಭಾರತೀಯ ನೌಕಾನೆಲೆ? ಅಮೆರಿಕ ಮಾಜಿ ಸೇನಾಧಿಕಾರಿ ಹೇಳಿಕೆ ಖಂಡಿಸಿದ ವಿದೇಶಾಂಗ ಸಚಿವಾಲಯ

ಇರಾನ್ ಯುದ್ಧದಲ್ಲಿ ಭಾರತ ಪಾತ್ರವಿಲ್ಲ: ವಿದೇಶಾಂಗ ಸಚಿವಾಲಯ

ಅಮೆರಿಕ ಸೇನೆಯ ಮಾಜಿ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್, ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಭಾರತೀಯ ನೌಕಾನೆಲೆಗಳನ್ನು ಬಳಸುತ್ತಿದೆ ಎಂದು ಹೇಳಿಕೆ ನೀಡಿದ ವಿಡಿಯೊ ವೈರಲ್ ಆಗಿತ್ತು. ಆದರೆ ಈ ಆರೋಪಗಳನ್ನು ಭಾರತ ಸರ್ಕಾರ ತಳ್ಳಿಹಾಕಿದ್ದು, ಅಮೆರಿಕ ನೌಕಾಪಡೆ ಯಾವುದೇ ಭಾರತೀಯ ನೌಕಾನೆಲೆ ಅಥವಾ ಬಂದರು ಸೌಲಭ್ಯಗಳನ್ನು ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

Loading...