ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Rare Lizards Seized: 60 ಲಕ್ಷ ರೂ. ಮೌಲ್ಯದ ಅಪರೂಪದ ಹಲ್ಲಿಗಳ ಕಳ್ಳ ಸಾಗಣೆ! ಅಸ್ಸಾಂನಲ್ಲಿ ಸಿಕ್ಕಿಬಿದ್ದ ಕಿಡಿಗೇಡಿಗಳು

ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಈಶಾನ್ಯ ರಾಜ್ಯಗಳಲ್ಲಿ ಅತ್ಯಂತ ಅಪರೂಪವಾಗಿ ಟೋಕೇ ಗೆಕ್ಕೊ ಹಲ್ಲಿಗಳು ಕಾಣ ಸಿಗುತ್ತವೆ. ಈ ಹಲ್ಲಿಗಳ ವಿಶಿಷ್ಟ ಗುಣ ಲಕ್ಷಣ, ಔಷಧೀಯ ಗುಣ ಹಾಗೂ ಅಲಭ್ಯತೆಯಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಕಳ್ಳ ಸಾಗಣೆ ಕೂಡಾ ಹೆಚ್ಚಾಗಿದೆ. ಆರೋಪಿಗಳು ಚಿಲ್ಲರೆ ಮೊತ್ತಕ್ಕೆ ಹಲ್ಲಿಗಳನ್ನು ಖರೀದಿಸಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾರೆ.

Nainar Nagendran: ತಮಿಳುನಾಡು ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ನೈನಾರ್ ನಾಗೇಂದ್ರನ್ ಯಾರು...? ಹಿನ್ನಲೆ ಏನು..?

ನೈನಾರ್ ನಾಗೇಂದ್ರನ್ ರಾಜಕೀಯ ಜೀವನ ಶುರುವಾಗಿದ್ದೇಗೆ..?

Nainar Nagendran: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಮಿಳುನಾಡು ಬಿಜೆಪಿಯ 13ನೇ ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ. ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾಗೇಂದ್ರನ್ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅಣ್ಣಾಮಲೈ, ಎಲ್.ಮುರುಗನ್ ಸೇರಿದಂತೆ ಹಲವು ನಾಯಕರು ನಾಗೇಂದ್ರನ್ ಹೆಸರನ್ನು ಸೂಚಿಸಿದ್ದರು. ಈಗ ಅಂತಿಮವಾಗಿ ನೈನಾರ್ ನಾಗೇಂದ್ರನ್ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ನೇಮಿಸಲಾಗಿದ್ದು, ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Shanti Kranti: ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಶಾಂತಿ ಕ್ರಾಂತಿ' ಬಾಕ್ಸ್ ಆಫೀಸ್ ಅಲ್ಲಿ ಸೋತಿದ್ದೇಕೆ..?

'ಶಾಂತಿ ಕ್ರಾಂತಿ' ಕ್ರೇಜಿಸ್ಟಾರ್ ಜೀವನ ಬದಲಾಯಿಸಿದ್ದೇಗೆ..?

Shanti Kranti: ಸ್ಯಾಂಡಲ್‌ವುಡ್‌ನಲ್ಲಿ ಹಲವು ನೂತನ ವಿನೂತನ ಪ್ರಯೋಗಗಳನ್ನು ಮಾಡಿದವರಲ್ಲಿ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌ ಮೊದಲಿಗರು. 'ಪ್ರೇಮಲೋಕ' ಸಿನಿಮಾ ಮಾಡಿ, 38 ವರ್ಷಗಳ ಹಿಂದೆಯೇ ಇತಿಹಾಸ ನಿರ್ಮಿಸಿದವರು ರವಿಚಂದ್ರನ್‌. ಬಳಿಕ ಅವರು ಮಾಡಿದ 'ಶಾಂತಿ ಕ್ರಾಂತಿ' ಚಿತ್ರದ್ದು ಮತ್ತೊಂದು ದಾಖಲೆ. ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿ ಹಣವನ್ನು ನೀರಿನಂತ ಖರ್ಚು ಮಾಡಿದ್ದರು 'ಕ್ರೇಜಿ ಸ್ಟಾರ್‌'. ಆ ಸಿನಿಮಾ ಕುರಿತ ಒಂದು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

Crime News: ಅತ್ಯಾಚಾರ, ಗುಂಡಿನ ದಾಳಿ ಆರೋಪ- ತನಿಖೆಯಲ್ಲಿ ಬಯಲಾಯಿತು ಕಿʻಲೇಡಿʼಯ ಖತರ್ನಾಕ್‌ ಪ್ಲಾನ್‌

ಹನಿಟ್ರ್ಯಾಪ್‌ಗೆ ಈಕೆ ಮಾಡಿದ ಖತರ್ನಾಕ್‌ ಪ್ಲ್ಯಾನ್‌ ಏನ್‌ ಗೊತ್ತಾ?

Crime News: ಹಣದಾಸೆಗಾಗಿ ರಾಜಕಾರಣಿಯ ಮಗ ತನ್ನನ್ನು ಅತ್ಯಾಚಾರದ ಮಾಡಿ ಗುಂಡು ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದ್ರೆ ತನಿಖೆ ವೇಳೆ ನಿಜಾಂಶ ಬಯಲಾಗಿದ್ದು, ಇದು ಮಹಿಳೆ ಕಟ್ಟಿದ್ದ ಕಟ್ಟು ಕಥೆ ಎಂದು ತಿಳಿದು ಬಂದಿದೆ. ಪೊಲೀಸರನ್ನು ನಂಬಿಸಲು ತನ್ನ ದೇಹದೊಳಗೆ ಶಸ್ತ್ರ ಚಿಕೆತ್ಸೆ ಮೂಲಕ ಆ ಮಹಿಳೆ ಗುಂಡು ಸೇರಿಸಿಕೊಂಡಿದ್ದು, ಈ ಘಟನೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಅಮಾನವೀಯ! ಮುಟ್ಟಾಗಿದ್ದ ವಿದ್ಯಾರ್ಥಿನಿಯನ್ನು ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪಾಂಶುಪಾಲ

ತರಗತಿ ಹೊರಗೆ ಕೂತು ಪರೀಕ್ಷೆ ಬರೆದ ಮುಟ್ಟಾಗಿದ್ದ ವಿದ್ಯಾರ್ಥಿನಿ

ಪರೀಕ್ಷೆ ವೇಳೆ ವಿದ್ಯಾರ್ಥಿನಿಗೆ ಮುಟ್ಟಿನ ನೋವು ಏಕಾಏಕಿ ಶುರುವಾಗಿತ್ತು. ಪ್ರಾಂಶುಪಾಲರ ಬಳಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಆಕೆಯನ್ನು ಗಂಟೆಗಳ ಕಾಲ ಕೊಠಡಿಯಿಂದ ಹೊರಗೆ ನಿಲ್ಲಿಸಿರುವ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸದ್ಯ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ! ಲವ್ ಮಾಡಿದ ಹುಡುಗಿಗೆ ಇದೆಂಥಾ ಶಿಕ್ಷೆ?

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ!

ಮಗಳು ಅನ್ಯ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಆಕ್ರೋಶಗೊಂಡ ತಂದೆಯೊಬ್ಬ ತಾನು ಹೆತ್ತ ಮಗಳೂ ಅಂತಲೂ ನೋಡದೆ ಆಕೆಯನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮುಖೇಶ್ ಸಿಂಗ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ.

Saipallavi: ಮದ್ವೆ ಆಗಿ, ಮಕ್ಕಳು ಇರೋ ನಟನ ಜತೆ ಸಾಯಿ ಪಲ್ಲವಿ ಡೇಟಿಂಗ್?

ಖ್ಯಾತ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್!?‌ ಅಷ್ಟಕ್ಕೂ ಯಾರು ಆತ?

Saipallavi: ಸೌತ್ ಇಂಡಿಯಾದ ಸ್ಟಾರ್ ಹಿರೋಯಿನ್ ಸಾಯಿ ಪಲ್ಲವಿ. ಇವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ಹಾಗಿದ್ದರೂ ಸಾಯಿ ಪಲ್ಲವಿ ಬಗ್ಗೆ ಕಿಡಿಗೇಡಿಗಳು ಗಾಸಿಪ್ ಹಬ್ಬಿಸುತ್ತಾರೆ. ಈ ಅಂಥದ್ದೇ ರೂಮರ್ ಒಂದು ಸಾಯಿ ಪಲ್ಲವಿ ಬಗ್ಗೆ ಕೇಳಿ ಬಂದಿದೆ. ಅವರು ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ಯಾರೋ ಹಬ್ಬಿಸಿಬಿಟ್ಟಿದ್ದಾರೆ.

Shankara Narayanan: ಮಗಳನ್ನು ಅತ್ಯಾಚಾರಗೈದು ಕೊಂದಿದ್ದ ಹಂತಕನನ್ನು ಹತ್ಯೆ ಮಾಡಿ ಸಂಚಲನ ಮೂಡಿಸಿದ್ದ ಶಂಕರನಾರಾಯಣನ್‌ ನಿಧನ

ಮಗಳ ಹಂತಕನನ್ನು ಕೊಂದ ತಂದೆ ಶಂಕರನಾರಾಯಣನ್‌ ಇನ್ನಿಲ್ಲ!

Shankara Narayanan: 2001 ಫೆಬ್ರವರಿ 9 ರಂದು ನಡೆದ ಈ ಸುದ್ದಿ ಕೇಳಿದ್ರೆ ಎಂಥವರಿಗೂ ಕರುಳು ಚುರುಕು ಎನ್ನುತ್ತದೆ, ಏನು ಅರಿಯದ, ಮುಂದೆ ಬಾಳಿ ಬದುಕಬೇಕಿದ್ದ ಶಂಕರನಾರಾಯಣರ ಪುತ್ರಿ ಕೃಷ್ಣಪ್ರಿಯ(13)ಳನ್ನು ಮುಹಮ್ಮದ್ ಕೋಯ ಎಂಬಾತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಲೆಗೈದಿದ್ದನು. ಇದರಿಂದ ಹತಾಶೆಗೊಂಡ ತಂದೆ ಮಗಳ ಸಾವಿಗೆ ನ್ಯಾಯ ದೊರಕಿಸಲು ಕೊಲೆ ಪ್ರಕರಣದ ಆರೋಪಿಯನ್ನು ಕೊಂದಿದ್ದರು.

TTD: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್!  ವಾಟ್ಸಾಪ್‌ ಮೂಲಕವೇ ದರ್ಶನ ಟಿಕೆಟ್‌ ಬುಕಿಂಗ್‌

ಇನ್ಮುಂದೆ ತಿರುಪತಿ ತಿಮ್ಮನ ದರ್ಶನ ಸುಲಭ

TTD: ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಿ ಶ್ರೀವಾರಿಯ ದರ್ಶನ ಪಡೆಯುತ್ತಾರೆ. ಹೀಗೆ ತಿರುಮಲಕ್ಕೆ ಆಗಮಿಸುವ ಬಹುತೇಕ ಭಕ್ತರು ಒಂದು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡುತ್ತಾರೆ. ಇವರಿಗೆ ಸಹಾಯ ಮಾಡಲು ಟಿಟಿಡಿ ಹೊಸ ಯೋಜನೆಯನ್ನು ತಂದಿದೆ. ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಸಂತಸದ ಸುದ್ದಿಯನ್ನು ನೀಡಿದೆ. ಅದೇನೆಂದರೆ ಶ್ರೀವಾರಿ ದರ್ಶನ ಟಿಕೆಟ್ ಬುಕ್ ಮಾಡಲು ಸುಲಭ ಮಾರ್ಗವನ್ನು ತರಲು ಟಿಟಿಡಿ ನಿರ್ಧರಿಸಿದೆ.

New Aadhaar App: ಫೇಸ್ ಐಡಿ, ಕ್ಯೂಆರ್ ಕೋಡ್ ಇರುವ ಹೊಸ ಆಧಾರ್ ಆಪ್‌ ರಿಲೀಸ್‌- ಏನಿದರ ವಿಶೇಷತೆ?

ಫೇಸ್ ಐಡಿ, ಕ್ಯೂಆರ್ ಕೋಡ್ ಇರುವ ಹೊಸ ಆಧಾರ್ ಆಪ್‌ ರಿಲೀಸ್‌

New Aadhaar App: ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆಯತ್ತ ಪ್ರಮುಖ ಹೆಜ್ಜೆಯಾಗಿ, ಕೇಂದ್ರವು ಮಂಗಳವಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ, ಅದು ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ಆಗಿ ಪರಿಶೀಲಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ

Kunal Kamra: ʼಮೆಂಟಲ್ ಹಾಸ್ಪಿಟಲ್‌ ಉತ್ತಮʼ ಎಂದು ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ‌

ಹಿಂದಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಕುನಾಲ್ ಕಮ್ರಾ‌

Kunal Kamra: ಬಿಗ್‌ ಬಾಸ್‌ ಭಾರತದ ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದು. ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ನಡೆಸಿಕೊಡುವ ಶೋ ಬೇರೆ ಎಲ್ಲಾ ಭಾಷೆಗಳಿಗಿಂತ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವು ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಇತ್ತೀಚಿಗೆ ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಾಮಿಡಿಯನ್‌ ಕುನಾಲ್‌ ಕಮ್ರಾ ಅವರು ಮಾತ್ರ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸುವ ಆಫರ್‌ ಅನ್ನು ತಿರಸ್ಕರಿಸಿದ್ದಾರೆ.

US-China tariff War: ಅಮೆರಿಕದ ಸುಂಕದ ವಿರುದ್ದ ಹೋರಾಡಲು ಭಾರತದ ನೆರವು ಕೇಳಿದ ಚೀನಾ; ಚೈನೀಸ್‌ ಅಧಿಕಾರಿ ಹೇಳಿದ್ದೇನು?

ಅಮೆರಿಕದ ಸುಂಕದ ವಿರುದ್ದ ಹೋರಾಡಲು ಭಾರತದ ನೆರವು ಕೇಳಿದ ಚೀನಾ

US-China tariff War: ಅಮೆರಿಕದ ಹೊಸ ಸುಂಕ ನೀತಿಯು ಜಾಗತಿಕ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಡೊನಾಲ್ಡ್‌ ಟ್ರಂಪ್‌ ಅವರ ಈ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಗಳು ಮಕಾಡೆ ಮಲಗಿದೆ. ಈ ಮಧ್ಯೆ ಚೀನಾ ಮೇಲೆ ಶೇ. 104ರಷ್ಟು ಸುಂಕ ವಿಧಿಸುವ ಮೂಲಕ, ಡೊನಾಲ್ಡ್‌ ಟ್ರಂಪ್‌ ಸುಂಕ ಸಮರ ಸಾರಿದ್ದು, ಅಮೆರಿಕ-ಚೀನಾದ ನಡುವಿನ ಈ ಯುದ್ಧದಿಂದ ಆರ್ಥಿಕ ಕ್ಷೇತ್ರದಲ್ಲಿ ಬಿಕ್ಕಟ್ಟು ಮೂಡುತ್ತಿದೆ. ಈ ಹಿನ್ನಲೆ ಅಮೆರಿಕಾ ವಿಧಿಸಿರುವ ಹೆಚ್ಚುವರಿ ಸುಂಕ ವಿರುದ್ಧ ಹೋರಾಡಲು ಚೀನಾ ಭಾರತದ ನೆರವನ್ನು ಕೇಳಿದೆ.

RSS Song: ಭಾರೀ ವಿವಾದ ಸೃಷ್ಟಿಸ್ತಿದೆ RSSನ "ಗಣ ಗೀತಂ" ಹಾಡು; ಅಷ್ಟಕ್ಕೂ ನಡೆದಿದ್ದೇನು?

ಭಾರೀ ವಿವಾದ ಸೃಷ್ಟಿಸ್ತಿದೆ RSSನ "ಗಣ ಗೀತಂ" ಹಾಡು

RSS Song: ಕೇರಳದ ಕೋಟುಕ್ಕಲ್‌ನಲ್ಲಿರುವ ತಿರುವಾಂಕೂರು ದೇವಾಸಂ ಬೋರ್ಡ್ ಆಡಳಿದ ಆಡಿಯಲ್ಲಿ ಬರುವ ದೇವಸ್ಥಾನದಲ್ಲಿ, ಆರ್‌ಎಸ್‌ಎಸ್‌ನ "ಗಣ ಗೀತಂ" ಹಾಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಘಟನೆ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ದೇವಸ್ಥಾನವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Career After PUC: ಪಿಯುಸಿ ಮುಗೀತು.. ಮುಂದೇನು? ಈ ಕೋರ್ಸ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪಿಯುಸಿ ಮುಗೀತು.. ಮುಂದೇನು? ಇಲ್ಲಿದೆ ಡಿಟೇಲ್ಸ್‌

Career After PUC: ಪಿಯುಸಿ ಫಲಿತಾಂಶವನ್ನು ಕೈಯಲ್ಲಿಟ್ಟುಕೊಂಡಿರುವ ವಿದ್ಯಾರ್ಥಿ ಹಾಗೂ ಅವರ ಪೋಷಕರಿಗೆ ಪಿಯುಸಿ ನಂತರ ಏನು ಮಾಡಬೇಕು? ಯಾವ ವಿಷಯ ಆಯ್ಕೆಗೆ ಹೆಚ್ಚು ಬೇಡಿಕೆ ಇದೆ? ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ಸರಿಯಾದ ನಿರ್ಧಾರ ಬಹಳ ಮುಖ್ಯ. ಆದಾಗ್ಯೂ ಪಿಯುಸಿ ನಂತರದ ಕೋರ್ಸ್‌ ಆಯ್ಕೆ ಬಗ್ಗೆ ಸ್ವಲ್ಪ ಗೊಂದಲವಾಗುವುದು ಸಾಮಾನ್ಯ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ ಉತ್ತರ ಇಲ್ಲಿದೆ ನೋಡಿ

Smuggling Case: ಡೆಲ್ಲಿ ಏರ್‌ಪೋರ್ಟ್‌ನಲ್ಲಿ 1.2 ಕೆಜಿ ಚಿನ್ನ ಕಳ್ಳಸಾಗಣೆಗೆ ಯತ್ನ- ಇರಾಕ್‌ ಪ್ರಜೆ ಅರೆಸ್ಟ್‌

ಕಳ್ಳಸಾಗಣೆ ಮಾಡ್ತಿದ್ದ ಬರೋಬ್ಬರಿ 1.2 ಕೆ.ಜಿ ಚಿನ್ನ ವಶಕ್ಕೆ

Smuggling Case: ಬಾಗ್ದಾದ್‌ ನಿಂದ ಆಗಮಿಸುತ್ತಿದ್ದ ಇರಾಕಿ ಪ್ರಜೆಯನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು, ಆತನ ಬಳಿಯಿಂದ ಚಿನ್ನ ಎಂದು ಶಂಕಿಸಲಾದ 1203 ಗ್ರಾಂ ಹಳದಿ ಲೋಹ, ಬೆಳ್ಳಿ ಲೇಪಿತ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Drink & Drive Case: ಮತ್ತೊಂದು ಡ್ರಿಂಕ್‌ & ಡ್ರೈವ್‌ ಕೇಸ್‌- ಕಾರು ಚಾಲಕನ ಹುಚ್ಚಾಟಕ್ಕೆ ಮೂವರು ಬಲಿ

ಕಾರು ಚಾಲಕನ ಹುಚ್ಚಾಟಕ್ಕೆ ಮೂವರು ಬಲಿ; 6 ಮಂದಿ ಸ್ಥಿತಿ ಗಂಭೀರ

Viral Video: ರಾಜಸ್ಥಾನದ ಜೈಪುರದಲ್ಲಿ ಭೀಕರ ರಸ್ತೆ ಅಪಘಾತದಿಂದಾಗಿ ಮೂವರು ಮಂದಿ ಅಸುನೀಗಿದ್ದು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಯೊಬ್ಬ ತನ್ನ ಕಾರನ್ನು ಚಲಾಯಿಸಿದರ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಉಳಿದವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Indian Techie: ಇಸ್ರೇಲ್‌ ಜತೆ ಮೈಕ್ರೋಸಾಫ್ಟ್‌ ಒಪ್ಪಂದ- ಬಿಲ್‌ ಗೇಟ್ಸ್‌ ಮುಂದೆಯೇ ಪ್ರತಿಭಟಿಸಿದ ಭಾರತೀಯ ಮೂಲದ ಟೆಕ್ಕಿ

ಬಿಲ್‌ ಗೇಟ್ಸ್‌ ವಿರುದ್ದ ರೊಚ್ಚಿಗೆದ್ದ ಭಾರತೀಯ ಟೆಕ್ಕಿ

Viral Video: ಇಸ್ರೇಲ್‌ಗೆ ಯುದ್ಧ ತಂತ್ರಜ್ಞಾನ ಒದಗಿಸಲು ಮೈಕ್ರೋಸಾಫ್ಟ್‌ ಒಪ್ಪಂದ ಮಾಡಿಕೊಂಡಿರುವುದನ್ನು ವಿರೋಧಿಸಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು ಸಿಇಒ ಸತ್ಯ ನಾಡೆಲ್ಲಾ ಮತ್ತು ಮಾಜಿ ಸಿಇಒಗಳಾದ ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್ ಅವರ ಮುಂದೆಯೇ ಪ್ರತಿಭಟನೆ ನಡೆಸಿ, ಬಹಿರಂಗವಾಗಿ ಟೀಕಿಸಿದ್ದಾರೆ.

Malappuram District: ಮಲಪ್ಪುರಂ ಜಿಲ್ಲೆ ʼಪ್ರತ್ಯೇಕ ರಾಷ್ಟ್ರʼವಂತೆ! ವಿವಾದದ ಕಿಡಿ ಹಚ್ಚಿದ ಕೇರಳದ ನಾಯಕ

ಮಲಪ್ಪುರಂ ಇನ್ಮುಂದೆ ಜಿಲ್ಲೆಯಲ್ಲ...ʼಪ್ರತ್ಯೇಕ ರಾಷ್ಟ್ರʼವಂತೆ!

Vellappally Natesan: ಕೇರಳದಲ್ಲಿ ಮುಸ್ಲಿಮರೇ ಹೆಚ್ಚಾಗಿ ಇರುವ ಮಲಪ್ಪುರಂ ಜಿಲ್ಲೆಯನ್ನು ʼಪ್ರತ್ಯೇಕ ದೇಶʼಎಂದು ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಅವರು ಕರೆದಿದ್ದು, ವಿವಾದದ ಕಿಡಿ ಹೊತ್ತಿಸಿದೆ. ದೇಶದಲ್ಲಿ ವಕ್ಫ್‌ ಮಸೂದೆ ವಿರುದ್ಧ ಮುಸ್ಲಿಮರ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಹೊತ್ತಲ್ಲೇ ಈ ಹೇಳಿಕೆ ಬಂದಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Viral Video: ನಗು ನಗುತ್ತಲೇ ಭಾಷಣ ಮಾಡುತ್ತಿದ್ದ  20 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಭಾಷಣ ಮಾಡುತ್ತಿದ್ದಾಗಲೇ ದಾರುಣ ಅಂತ್ಯ ಕಂಡ ವಿದ್ಯಾರ್ಥಿನಿ..!

Viral Video: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಬೀಳ್ಕೊಡುಯ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದು, ತಾವು ಆ ಕಾಲೇಜಿನಲ್ಲಿ ಕಳೆದ ಸಂತೋಷದ ಕ್ಷಣಗಳ ಬಗ್ಗೆ ನಗು ನಗುತ್ತಲೇ ವಿವರಣೆ ನೀಡುತ್ತಿದ್ದ ವೇಳೆಯೇ ಸಾವನ್ನಪ್ಪಿದ್ದಾಳೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ವರ್ಷಾ ಖರತ್ ಎಂದು ಗುರುತಿಸಲಾಗಿದ್ದು, ಭಾಷಣದ ನಡುವೆ ಅವರ ಧ್ವನಿ ಏಕಾಏಕಿ ಕ್ಷೀಣಿಸಲು ಆರಂಭವಾಗಿದೆ ಏಕಾಏಕಿ ಕೆಳಗೆ ಬಿದ್ದು ಪ್ರಾಣ ಹೋಗಿದೆ.

Accident: ಡ್ರಿಂಕ್‌ & ಡ್ರೈವ್‌ ಕೇಸ್‌- ಓರ್ವ ಸಾವು, 6 ಮಂದಿಗೆ ಗಂಭೀರ ಗಾಯ; ಖ್ಯಾತ ನಿರ್ದೇಶಕಿ ಅರೆಸ್ಟ್

ಡ್ರಿಂಕ್‌ & ಡ್ರೈವ್‌ ಕೇಸ್‌; ಖ್ಯಾತ ನಿರ್ದೇಶಕಿ ಅರೆಸ್ಟ್

Accident: ದೇಶಾದ್ಯಂತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಡಿದು ವಾಹನ ಚಲಾಯಿಸುವಂತಿಲ್ಲ ಎಂಬ ಕಾನೂನನ್ನು ತರಲಾಗಿದೆ. ಹೀಗಿದ್ದರೂ ಅದೆಷ್ಟೋ ಜನರು ಕಂಠ ಪೂರ್ತಿ ಕುಡಿದು ಬೇಕಾಬಿಟ್ಟಿ ವಾಹನಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಇಂತಹ ಹುಚ್ಚಾಟಗಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿಗಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Fake Doctor: ಗ್ಯಾಸ್‌ ಟ್ರಬಲ್‌ ಎಂದವನಿಗೆ ಹಾರ್ಟ್‌ ಸರ್ಜರಿ; ನಕಲಿ ವೈದ್ಯನಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ 15 ಶಸ್ತ್ರಚಿಕಿತ್ಸೆ

ನಕಲಿ ವೈದ್ಯನಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ 15 ಸರ್ಜರಿ

Fake Doctor: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ನಕಲಿ ವೈದ್ಯರೊಬ್ಬರುಹೃದ್ರೋಗ ತಜ್ಞರಂತೆ ನಟಿಸಿ ಮಿಷನರಿ ಆಸ್ಪತ್ರೆಯಲ್ಲಿ ಹೃದಯದ ಸರ್ಜರಿ ಮಾಡಿದ್ದಾರೆ. ಹೊಟ್ಟೆ ಉರಿ - ಗ್ಯಾಸ್ಟ್ರಿಕ್ ಎಂದು ಬಂದವಸಿಗೆ ಹಾರ್ಟ್ ಆಪರೇಶ್ ಮಾಡಿದ್ದು, ಈ ನಕಕಿ ವೈದ್ಯ ಮಾಡಿದ ಎಡವಟ್ಟಿನಿಂದ ಚಿಕಿತ್ಸೆಗೆ ಎಂದು ಬಂದವನು ಸಾವನ್ನಪ್ಪಿದ್ದಾನೆ. ಈ ಹಿಂದೆಯೂ ಸಾಕಷ್ಟು ಜನರಿಗೆ ಈ ನಕಲಿ ವೈದ್ಯ ಚಿಕಿತ್ಸೆ ನೀಡಿದ್ದು, 15 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾನೆ.

Kunal Kamra: ಕುತ್ತು ತಂದ ಕಾಮಿಡಿ; FIR ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಕುನಾಲ್‌ ಕಮ್ರಾ

'ದೇಶದ್ರೋಹಿ' ಹೇಳಿಕೆ; ಹೈಕೋರ್ಟ್​ ಮೆಟ್ಟಿಲೇರಿದ​ ಕುನಾಲ್‌ ಕಮ್ರಾ..!

Kunal Kamra: ಮಹಾರಾಷ್ಟ್ರದ ಶಿವಸೇನಾ ನಾಯಕ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಕುರಿತು ಕಾಮಿಡಿ ಶೋವೊಂದರಲ್ಲಿ ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಸ್ಟ್ಯಾಂಡ್-ಅಪ್ ಕಾಮೀಡಿಯನ್‌ ಕುನಾಲ್‌ ಕಮ್ರಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Manav Sharma: ಟೆಕ್ಕಿ ಮಾನವ್ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ತಿಂಗಳ ನಂತರ ಪತ್ನಿ, ಮಾವನ ಬಂಧನ

ಟೆಕ್ಕಿ ಮಾನವ್ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌

ಉತ್ತರ ಪ್ರದೇಶದ ಆಗ್ರಾದಲ್ಲಿ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಸುಮಾರು ಒಂದು ತಿಂಗಳ ನಂತರ, ಪೊಲೀಸರು ಅವರ ಪತ್ನಿ ನಿಖಿತಾ ಶರ್ಮಾ ಮತ್ತು ಮಾವ ನೃಪೇಂದ್ರ ಶರ್ಮಾ ಅವರನ್ನು ಬಂಧಿಸಿದ್ದಾರೆ.

Gaurav Khanna: ಸೆಲೆಬ್ರಿಟಿ ಮಾಸ್ಟರ್‌ಶೆಫ್‌ನಲ್ಲಿ ವಿದೇಶಿ ಶೆಫ್‌ನ ಖಾದ್ಯ ನಕಲು ಮಾಡಿದರೇ ಗೌರವ್ ಖನ್ನಾ?

ವಿದೇಶಿ ಶೆಫ್‌ನ ಖಾದ್ಯ ನಕಲು ಮಾಡಿದರೇ ಗೌರವ್ ಖನ್ನಾ?

Celebrity MasterChef India: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸೆಲೆಬ್ರಿಟಿ ಮಾಸ್ಟರ್‌ಶೆಫ್‌ ರಿಯಾಲಿಟಿ ಶೋ ಹೊಸ ವಿವಾದ ಹುಟ್ಟು ಹಾಕಿದೆ. ಭಾರತದ ಖ್ಯಾತ ಟಿವಿ ನಟ ಗೌರವ್‌ ಖನ್ನಾಅವರು ಮಾಡಿದ ಒಂದು ವಿಶಿಷ್ಟ ಸಿಹಿ ಖಾದ್ಯದ ನಿಜವಾದ ಸೃಷ್ಟಿಕರ್ತ ಯಾರು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.