ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
ಮುರಿಗಂಗಾ ನದಿಯಲ್ಲಿ ಸರಕು ಹಡಗು ಮುಳುಗಡೆ; 12 ಬಾಂಗ್ಲಾದೇಶಿ ನಾವಿಕರ ರಕ್ಷಣೆ

ಮುರಿಗಂಗಾ ನದಿಯಲ್ಲಿ ಸರಕು ಹಡಗು ಮುಳುಗಡೆ

ಗಂಗಾಸಾಗರದ ಮುರಿಗಂಗಾ ನದಿಯಲ್ಲಿ ಸರಕು ಹಡಗು ಮುಳುಗಿದ ಘಟನೆ ಬುಧವಾರ ಸಂಭವಿಸಿದ್ದು, ತಕ್ಷಣದ ಪೊಲೀಸ್ ರಕ್ಷಣಾ ಕಾರ್ಯಾಚರಣೆಯಿಂದ 12 ಬಾಂಗ್ಲಾದೇಶಿ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ತನಿಖೆ ಮುಂದುವರಿದಿದೆ ಎಂದು ಪೊಲೀಸರು

ರಾಹುಲ್ ಗಾಂಧಿ ವಿರುದ್ಧ ಶಶಿ ತರೂರ್ ಅಸಮಾಧಾನ! ಕಾಂಗ್ರೆಸ್‌ನ ಮಹತ್ವದ ಸಭೆಗೆ ಗೈರು

ಕಾಂಗ್ರೆಸ್ ವಿರುದ್ಧ ತರೂರ್ ಬಂಡಾಯ?

ಕಾಂಗ್ರೆಸ್ ಸದಸ್ಯ ಶಶಿ ತರೂರ್ ರಾಹುಲ್ ಗಾಂಧಿಯಿಂದ ಸರಿಯಾದ ಗೌರವ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಾರ್ಷಿಕ ವಿಧಾನಸಭಾ ಚುನಾವಣಾ ಸಿದ್ಧತೆ ಕುರಿತು ಕೇರಳದಲ್ಲಿ ನಡೆಯಬೇಕಿದ್ದ ಪ್ರಮುಖ ಕಾಂಗ್ರೆಸ್ ಸಭೆಗೆ ಅವರು ಗೈರಾಗಿದ್ದಾರೆ. ಸಭೆಯಲ್ಲಿ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇರಳ ಘಟಕದ ಹಿರಿಯ ನಾಯಕರು ಭಾಗಿಯಾಗಿದ್ದರು. ತಿರುಬನುಂತಪುರಂನಿಂದ ನಾಲ್ಕು ಬಾರಿ ಸಂಸದರಾಗಿರುವ ಶಶಿ ತರೂರ್ ಹಾಜರಾತಿ ನೀಡದೇ ಹೋದುದರಿಂದ ಪಕ್ಷದೊಳಗಿನ ವಾತಾವರಣ ಚರ್ಚೆಗಳಿಗೆ ವ್ಯಾಪಕ ಗಮನ ಸೆಳೆದಿದೆ.

ಧರ್ಮಸ್ಥಳ ಬುರುಡೆ ಪ್ರಕರಣ; ಇಂದು ಶ್ರೀ ಕ್ಷೇತ್ರದ ಪರ ಸಲ್ಲಿಸಿದ ಅರ್ಜಿ ವಿಚಾರಣೆ, ಬೆಳ್ತಂಗಡಿಗೆ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲಿಯಾರ್  ಭೇಟಿ

ಬೆಳ್ತಂಗಡಿ ನ್ಯಾಯಾಲಯಕ್ಕೆ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲಿಯಾರ್ ಭೇಟಿ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆಗಾಗಿ ಹಿರಿಯ ಹಾಗೂ ಖ್ಯಾತ ವಕೀಲ ರಾಜಶೇಖರ್ ಹಿಲಿಯಾರ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅವರು ವಕೀಲರ ತಂಡದ ಭಾಗವಾಗಿ ಹಾಜರಾಗುತ್ತಿದ್ದು, ಈ ಹಿಂದೆ ಸಿ.ವಿ. ನಾಗೇಶ್ ಅವರು ಕ್ಷೇತ್ರದ ಪರವಾಗಿ ವಕಾಲತ್ತು ವಹಿಸಿದರು.

Health Tips: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಕಾಮಕಸ್ತೂರಿ ಬೀಜ ತಿಂತೀರಾ?;  ಇದರಿಂದ ಲಾಭಕ್ಕಿಂತ ಅಪಾಯ ಹೆಚ್ಚು ಎನ್ನುತ್ತಾರೆ ಪೌಷ್ಠಿಕ ತಜ್ಞರು

ಈ 4 ಸಮಸ್ಯೆಗಳಿದ್ದರೆ ಕಾಮಕಸ್ತೂರಿ ಬೀಜ ಸೇವಿಸಲೇ ಬೇಡಿ!

ಕಾಮಕಸ್ತೂರಿ ಬೀಜಗಳು ಆರೋಗ್ಯಕ್ಕೆ ಉಪಕಾರಿ ಎಂದು ಪ್ರಸಿದ್ಧಿಯಾದರೂ, ಎಲ್ಲರಿಗೂ ಅವು ಸೂಕ್ತವಲ್ಲ. ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿರುವವರು ಈ ಬೀಜಗಳನ್ನು ಸೇವಿಸಿದರೆ ಲಾಭಕ್ಕಿಂತ ಅಪಾಯ ಹೆಚ್ಚಾಗಬಹುದು ಎಂದು ಪೌಷ್ಠಿಕ ತಜ್ಞರು ಎಚ್ಚರಿಸಿದ್ದಾರೆ. ಇತ್ತೀಚಿನ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಅವರು, ಕಾಮಕಸ್ತೂರಿ ಬೀಜಗಳನ್ನು ಸೇವಿಸಬಾರಾದ ನಾಲ್ಕು ಆರೋಗ್ಯ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ದಳಪತಿ ವಿಜಯ್‌ಯ ಟಿವಿಕೆಗೆ ‘ಸೀಟಿ’, ಕಮಲ್‌ ಹಾಸನ್‌ನ ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ನೀಡಿದ ಚುನಾವಣಾ ಆಯೋಗ

ಟಿವಿಕೆ ಚುನಾವಣಾ ಚಿಹ್ನೆ ಇದು

TVK: 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷ ಏಪ್ರಿಲ್–ಮೇಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸ್ಪರ್ಧಿಸುವ ರಾಜಕೀಯ ಪಕ್ಷಗಳಿಗೆ ಅಧಿಕೃತ ಚುನಾವಣಾ ಚಿಹ್ನೆಗಳನ್ನು ನಿಗದಿ ಮಾಡಿದೆ.

ಅಪ್ರಾಪ್ತರ ಸೋಶಿಯಲ್‌ ಮೀಡಿಯಾ ಬಳಕೆ ನಿಷೇಧಿಸಲು ಸರ್ಕಾರದ ಚಿಂತನೆ

ಇನ್ಮುಂದೆ ಅಪ್ರಾಪ್ತರು ಸೋಶಿಯಲ್‌ ಮೀಡಿಯಾ ಬಳಸುವಂತಿಲ್ಲ!

ಆಸ್ಟ್ರೇಲಿಯಾದ ಮಾದರಿಯಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವ ಕುರಿತು ಆಂಧ್ರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಐಟಿ ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ. ಡಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನೋಮಿಕ್ ಫೋರಮ್‌ನಲ್ಲಿ ಮಾತನಾಡಿದ ಅವರು, ಮಕ್ಕಳು ಸಾಮಾಜಿಕ ಜಾಲತಾಣದ ವಿಷಯಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಅಸಮರ್ಥರಾಗಿರುವುದರಿಂದ, ಮಕ್ಕಳ ರಕ್ಷಣೆಗೆ ಬಲಿಷ್ಠ ಕಾನೂನು ವ್ಯವಸ್ಥೆ ಅಗತ್ಯವಿದೆ ಎಂದು ಹೇಳಿದರು.

ಮಣಿಪುರದಲ್ಲಿ ವ್ಯಕ್ತಿಯನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆ; ಭೀಕರ ಕೊಲೆಯ ವಿಡಿಯೊ ವೈರಲ್

ಮಣಿಪುರದಲ್ಲಿ ಬೆಳಕಿಗೆ ಬಂತು ಮತ್ತೊಂದು ಭಯಾನಕ ಕೃತ್ಯ

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಮುಂದುವರಿದಿರುವ ಜಾತಿ ಆಧಾರಿತ ಹಿಂಸಾಚಾರದ ನಡುವೆ, ಮೈತೈ ಸಮುದಾಯದ 38 ವರ್ಷದ ವ್ಯಕ್ತಿಯನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಮೊದಲು “ನನ್ನನ್ನು ಬಿಡಿ” ಎಂದು ಬೇಡಿಕೊಳ್ಳುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಿಂದಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಕೆಟ್ಟ ದಾಖಲೆ ಬರೆದ ಬೆಂಗಳೂರು; ವಿಶ್ವದಲ್ಲೇ 2ನೇ ಅತಿ ಕೆಟ್ಟ ಟ್ರಾಫಿಕ್‌: ವರ್ಷಕ್ಕೆ 7 ದಿನ ರಸ್ತೆಯಲ್ಲೇ ಕಳೆಯುತ್ತಿದ್ದಾರೆ ಜನ

ಟ್ರಾಫಿಕ್ ಜಾಮ್‌ನಲ್ಲಿ ಬೆಂಗಳೂರಿಗೆ ದೇಶದಲ್ಲೇ ಅಗ್ರಸ್ಥಾನ

ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ, ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿ ಗುರುತಿಸಿಕೊಂಡಿದೆ. ನಗರದ ಸರಾಸರಿ ಟ್ರಾಫಿಕ್ ದಟ್ಟಣೆ ಶೇ. 74.4ರಷ್ಟಿದ್ದು ಕಳೆದ ವರ್ಷಕ್ಕಿಂತ ಶೇ. 1.7ರಷ್ಟು ಹೆಚ್ಚಳವಾಗಿದೆ. ಮೆಕ್ಸಿಕೋ ಸಿಟಿ ಮೊದಲ ಸ್ಥಾನದಲ್ಲಿದ್ದರೆ, ಐರ್ಲೆಂಡ್‌ನ ಡಬ್ಲಿನ್ ಮೂರನೇ ಸ್ಥಾನ ಪಡೆದಿದೆ.

Vastu Tips: ನೀವು ಹೊಸ ಮನೆ ಕಟ್ಟುವ ಪ್ಲಾನ್ ಅಲ್ಲಿ ಇದ್ದೀರಾ?; ಹಾಗಾದ್ರೆ ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಿ!

ಹೊಸ ಮನೆ ಕಟ್ಟುತ್ತಿದೀರಾ? ಈ ವಿಷಯ ಮರೆಯಬೇಡಿ

ಹೊಸ ಮನೆ ನಿರ್ಮಾಣ ಮಾಡುವ ಮೊದಲು ವಾಸ್ತು ಶಾಸ್ತ್ರದ ಪ್ರಮುಖ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಭೂಮಿಯ ಆಯ್ಕೆ, ಮನೆ ದಿಕ್ಕು, ಪ್ರವೇಶ ದ್ವಾರ, ಅಡುಗೆಮನೆ, ಪೂಜಾಗೃಹ ಹಾಗೂ ನೀರಿನ ವ್ಯವಸ್ಥೆಗಳಿಗೆ ಸರಿಯಾದ ವಾಸ್ತು ಪಾಲನೆಯಿದ್ದರೆ ಮನೆಗೆ ಸುಖ, ಶಾಂತಿ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ಲಭಿಸುತ್ತದೆ. ತಪ್ಪಾದ ವಾಸ್ತು ಕ್ರಮಗಳಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಈ ವಾಸ್ತು ನಿಯಮಗಳು ಸಹಾಯಕವಾಗುತ್ತವೆ.

Astro Tips: ಈ ಎಲ್ಲಾ ಗ್ರಹ ದೋಷಕ್ಕೆ ನವಿಲುಗರಿಯೇ ರಾಮಬಾಣ! ಹೇಗೆ ನೋಡಿ

ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ನವಿಲು ಗರಿ

ನವಿಲುಗರಿ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಪವಿತ್ರ ಅಲಂಕಾರ. ಕೃಷ್ಣನ ಕೊಳಲಿನ ನಾದಕ್ಕೆ ಮರುಳಾದ ನವಿಲುಗಳ ಭಕ್ತಿಯ ಸಂಕೇತವಾಗಿ ಕೃಷ್ಣನು ತನ್ನ ಮುಕುಟದಲ್ಲಿ ಧರಿಸಿದ ನವಿಲುಗರಿಯನ್ನು, ವಾಸ್ತು ದೋಷ ನಿವಾರಣೆ, ಜಾತಕ ಹಾಗೂ ಗ್ರಹ ದೋಷ ಶಮನ, ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರಲು ಸಹಾಯಕವಾದ ಮಂಗಳಕರ ವಸ್ತುವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.

ದೀಪಕ್ ಆತ್ಮಹತ್ಯೆ ಪ್ರಕರಣ; ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ಶಿಮ್ಜಿತಾ ಪೊಲೀಸ್ ವಶಕ್ಕೆ

ದೀಪಕ್ ಆತ್ಮಹತ್ಯೆ ಪ್ರಕರಣ: ಶಿಮ್ಜಿತಾ ಪೊಲೀಸ್ ವಶಕ್ಕೆ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ವಡಕರ ಮೂಲದ ಶಿಮ್ಜಿತಾ ಮುಸ್ತಫಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೀಪಕ್‌ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಾಗೂ ವಿಡಿಯೊ ವೈರಲ್ ಆಗಿರುವ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ವಶಕ್ಕೆ ಪಡೆಯುವ ಮೊದಲು ಶಿಮ್ಜಿತಾ ಮುಸ್ತಫಾ ಅವರನ್ನು ಕೋಯಿಲಾಂಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ತಂದೆ–ಮಗಳಿಗೆ 1 ಲಕ್ಷ ರುಪಾಯಿ ಪರಿಹಾರ ನೀಡಲು ಏರ್ ಇಂಡಿಯಾಗೆ ಆದೇಶಿಸಿದ ಗ್ರಾಹಕ ನ್ಯಾಯಾಲಯ; ಏನಿದು ಪ್ರಕರಣ?

ಏರ್ ಇಂಡಿಯಾಗೆ ಗ್ರಾಹಕ ಆಯೋಗದ ಚಾಟಿ

ದೆಹಲಿ–ನ್ಯೂಯಾರ್ಕ್ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಸೇವಾ ನ್ಯೂನತೆ ಕಂಡುಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪ್ರಯಾಣಿಕ ಮತ್ತು ಅವರ ಪುತ್ರಿಗೆ 1 ಲಕ್ಷ ರುಪಾಯಿ ಪರಿಹಾರ ಹಾಗೂ 50 ಸಾವಿರ ರುಪಾಯಿ ನ್ಯಾಯಾಲಯ ವೆಚ್ಚ ಪಾವತಿಸಲು ನವದೆಹಲಿಯ ಜಿಲ್ಲಾ ಗ್ರಾಹಕ ಆಯೋಗ ಆದೇಶಿಸಿದೆ. ಹೆಚ್ಚಿನ ಟಿಕೆಟ್ ದರ ಪಡೆದಿದ್ದರೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲವೆಂದು ಆಯೋಗ ಅಭಿಪ್ರಾಯಪಟ್ಟಿದೆ.

ಎರಡೂವರೆ ತಿಂಗಳ ನಾಯಿ ಮರಿ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಥಳಿಸಿದ ಪಾಪಿ!

ನಾಯಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಮಹಾರಾಷ್ಟ್ರದ ಮುಂಬೈ ಮಲಾಡ್ ಕುರಾರ್ ಗ್ರಾಮದಲ್ಲಿ 2.5 ತಿಂಗಳ ನಾಯಿ ಮರಿಯ ಮೇಲೆ 20 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಪೊಲೀಸರು ನಾಯಿ ಮರಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ.

ಬಿಟ್ ಹೋಗ್ಬೇಡ ನನ್ನ; ಆತ್ಮಹತ್ಯೆ ಮಾಡಿಕೊಂಡ ಮಾಲಕನ ಮೃತದೇಹದ ಪಕ್ಕದಲ್ಲೇ ಕಾದು ಕುಳಿತ ಶ್ವಾನ

ಮಾಲಕನ ಮೃತದೇಹ ಪಕ್ಕವೇ ಕಾದು ಕುಳಿತ ಶ್ವಾನ

ಮಧ್ಯ ಪ್ರದೇಶದ ಶಿವಪುರಿಯಲ್ಲಿ ತನ್ನ ಮಾಲಕನ ಆತ್ಮಹತ್ಯೆಯ ಬಳಿಕವೂ ಸಾಕು ನಾಯಿ ಇಡೀ ರಾತ್ರಿ ಮೃತದೇಹದ ಪಕ್ಕದಲ್ಲೇ ಕಾವಲು ಕಾದ ಮನಕಲುಕುವ ಘಟನೆ ನಡೆದಿದೆ. ಶವ ಯಾತ್ರೆಯಲ್ಲೂ ಹೆಜ್ಜೆ ಹಾಕಿ ಅಂತ್ಯ ಸಂಸ್ಕಾರ ಮುಗಿಯುವವರೆಗೂ ನಿಂತಿದೆ. ಈ ಘಟನೆಯ ದೃಶ್ಯ ವೈರಲ್ ಆಗಿದ್ದು, ಶ್ವಾನದ ನಿಷ್ಠೆ ಕಂದು ನೆಟ್ಟಿಗರು ಕಣ್ಣೀರಾಗಿದ್ದಾರೆ.

VIDEO: ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ಸ್ನೇಹಿತೆಗೆ ಆತ್ಮಸ್ಥೈರ್ಯ ತುಂಬಲು ತಲೆ ಬೋಳಿಸಿಕೊಂಡ ಸಹಪಾಠಿಗಳು! ಹೃದಯ ಮಿಡಿಯುವಂತಿದೆ ಈ ವಿಡಿಯೋ

ಕ್ಯಾನ್ಸರ್ ರೋಗಿಗೆ ಬೆಂಬಲವಾಗಿ ನಿಂತ ಜೋಧ್ಪುರದ ವಿದ್ಯಾರ್ಥಿಗಳು

ವಿದ್ಯಾರ್ಥಿನಿಯೋರ್ವಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಿಮೋಥೆರಪಿ ಚಿಕಿತ್ಸೆಯ ನಂತರ ಆಕೆಯ ತಲೆ ಕೂದಲು ಸಂಪೂರ್ಣವಾಗಿ ಉದುರಿ ಹೋಗಿತ್ತು. ಇದಿರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಾಲಕಿಯು ಸ್ನೇಹಿತರ ಮುಂದೆ ಬರಲೂ ಹಿಂಜೆರಿಯುತ್ತಿದ್ದಳು. ತಮ್ಮ ಸಹಪಾಠಿಯ ಈ ಸ್ಥಿತಿಯನ್ನು ಕಂಡು ತೀವ್ರ ದಃಖ ವ್ಯಕ್ತಪಡಿಸಿದ ಸ್ನೇಹಿತೆಯರು ಹಾಗೂ ಶಿಕ್ಷಕಿಯರು ಆಕೆಯ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದರು.

ರೀಲ್ಸ್‌ಗಾಗಿ ಲೈಂಗಿಕ ಕಿರುಕುಳ ಆರೋಪ ಕೇಸ್‌;   ಶಿಮ್ಜಿತಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲು

ಪ್ರಾಣ ಕಸಿದ ರೀಲ್ಸ್‌: ಲೈಂಗಿಕ ಕಿರುಕುಳವೇ ಅಥವಾ ಫಾಲೋವರ್ಸ್‌ಗಾಗಿ ನಾಟಕವೇ?

ಕೇರಳದ ಕೋಝಿಕೋಡ್ ಜಿಲ್ಲೆಯ ನಿವಾಸಿ ದೀಪಕ್ ಬಸ್ ಪ್ರಯಾಣದ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ಮುಸ್ತಫಾ ವಿಡಿಯೊ ಹಂಚಿಕೊಂಡ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ದೀಪಕ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟ್ರೋಲ್ ಮಾಡಿದ್ದರು.ಇದೀಗ ಶಿಮ್ಜಿತಾ ಮುಸ್ತಫಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದಾರೆ.

Vastu Tips: ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಾಗಬೇಕಾ? ಹಾಗಾದ್ರೆ ಅವರ  ಅಧ್ಯಯನದ ಟೇಬಲ್ ಮೇಲೆ ಈ ಒಂದು ವಸ್ತು ಇಡಿ

ಮಕ್ಕಳು ಓದುವಂತೆ ಮಾಡುವುದು ಹೇಗೆ.?

ಆಧುನಿಕ ಸ್ಪರ್ಧಾತ್ಮಕ ಜೀವನದಲ್ಲಿ ಪಾಲಕರ ನಿರೀಕ್ಷೆ ಮತ್ತು ಅಂಕಗಳ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ನಿರಾಸೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಯಶಸ್ಸಿಗೆ ಕೇವಲ ಶ್ರಮವಲ್ಲದೆ ಓದುವ ವಾತಾವರಣ, ಏಕಾಗ್ರತೆ ಮತ್ತು ಮನಸ್ಸಿನ ಸ್ಥಿತಿಯೂ ಮುಖ್ಯವಾಗಿದ್ದು, ವಾಸ್ತು ಶಾಸ್ತ್ರವು ಮಕ್ಕಳ ಅಧ್ಯಯನ ಹಾಗೂ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮಗೂ ನಿಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆ ಇದ್ದರೆ ಅವರ ಅಧ್ಯಯನ ಕೊಠಡಿಯನ್ನು ವಾಸ್ತು ಪ್ರಕಾರ ಹೀಗೆ ಇಡಿ

Varsha Bhavisya: 2026: ಕುಂಭ ರಾಶಿಯುವರಿಗೆ ಶನಿ ಕಾಟ! ಈ ಯಂತ್ರ ಧರಿಸಿದರೆ ಎಲ್ಲ ಸಮಸ್ಯೆಗಳೂ ಪರಿಹಾರ

ಈ ವರ್ಷ ಕುಂಭ ರಾಶಿಯವರಿಗೆ ಶನಿ ಕಾಟ !

2026ರಲ್ಲಿ ಗ್ರಹಗಳ ಮಹತ್ವದ ಸಂಚಾರದಿಂದ ಕುಂಭ ರಾಶಿಯವರ ಜೀವನದಲ್ಲಿ ಶನಿ ಪ್ರಭಾವ ಹೆಚ್ಚಾಗಲಿದೆ. ಶನಿಯಿಂದ ಕೆಲ ಸವಾಲುಗಳು ಎದುರಾದರೂ, ಶಿಸ್ತು, ಸಹನೆ ಮತ್ತು ಪರಿಶ್ರಮದಿಂದ ಅವನ್ನು ಜಯಿಸಬಹುದು. ಶನಿ ಕಾಟ ನಿವಾರಣೆಗೆ ದಾನ, ಶನಿ ಆರಾಧನೆ, ನಿಯಮಿತ ಪ್ರಾರ್ಥನೆ ಹಾಗೂ ಸತ್ಪಥದಲ್ಲಿ ನಡೆಯುವಂತೆ ಭಾರತೀಯ ಜೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ

ರಾಷ್ಟ್ರಗೀತೆಗೆ ಅಗೌರವ ಆರೋಪ: ಕಲಾಪದ ಮೊದಲ ದಿನವೇ ಸದನದಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ

ರಾಷ್ಟ್ರಗೀತೆಗೆ ಅಪಮಾನ ಆರೋಪ; ವಿಧಾನಸಭೆಯಿಂದ ಹೊರನಡೆದ ರಾಜ್ಯಪಾಲ

ರಾಷ್ಟ್ರಗೀತೆ ಹಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ಅವರು ಸರ್ಕಾರದ ಅನುಮೋದಿತ ಭಾಷಣ ಓದಲು ನಿರಾಕರಿಸಿ ಸದನದಿಂದ ಹೊರನಡೆದಿದ್ದಾರೆ. ಈ ಘಟನೆಯಿಂದ ರಾಜ್ಯಪಾಲ ಮತ್ತು ಸರ್ಕಾರದ ನಡುವೆ ತೀವ್ರ ಸಂಘರ್ಷ ಉಂಟಾಗಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇದನ್ನು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದ್ದಾರೆ.

Varsha Bhavisya:  ಎಚ್ಚರ; ಮಕರ ರಾಶಿಯವರಿಗೆ ಅಕ್ಟೋಬರ್ ಬಳಿಕ ಸಮಸ್ಯೆ ಎದುರಾಗಬಹುದು

ಮಕರ ರಾಶಿಯವರ ವರ್ಷ ಭವಿಷ್ಯ ಹೇಗಿದೆ?

2026ರಲ್ಲಿ ಶನಿ, ಗುರು, ರಾಹು–ಕೇತುಗಳ ಮಹತ್ವದ ಸಂಚಾರದಿಂದ ಮಕರ ರಾಶಿಯವರಿಗೆ ಜೀವನದ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾದರೂ ಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನಮಾನ ವೃದ್ಧಿ, ಹೊಸ ಅವಕಾಶಗಳು ಲಭ್ಯವಾಗಬಹುದು.

Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ

ಈ ವಾಸ್ತು ಟಿಪ್ಸ್ ಪಾಲಿಸಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕುಗಳು ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಪ್ರವೇಶದ್ವಾರ, ಕೊಠಡಿಗಳು ಹಾಗೂ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸುಖ, ಸಮೃದ್ಧಿ ಮತ್ತು ಶಾಂತಿ ದೊರೆಯುತ್ತದೆ. ಆದರೆ ಮನೆ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಪಾಲಿಸದೇ ಹೋದರೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಅವಳು ನಮ್ಮ ಕುಟುಂಬವನ್ನೇ ನಾಶ ಮಾಡಿದ್ದಾಳೆ; ಪತ್ನಿ ಅಪರ್ಣಾಗೆ ವಿಚ್ಛೇದನ ಘೋಷಿಸಿದ ಮುಲಾಯಂ ಸಿಂಗ್‌ ಕಿರಿಯ ಪುತ್ರ ಪ್ರತೀಕ್ ಯಾದವ್

ಪತ್ನಿ ಅಪರ್ಣಾ ವಿರುದ್ಧ ಕಿಡಿಕಾರಿದ ಪ್ರತೀಕ್‌ ಯಾದವ್

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಸೋಮವಾರ ತಮ್ಮ ಪತ್ನಿ, ಬಿಜೆಪಿ ನಾಯಕಿ ಅಪರ್ಣಾ ಯಾದವ್‌ಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ʼʼಅಪರ್ಣಾ ಅವರಿಂದ ನಮ್ಮ ಕುಟುಂಬದ ಸಂಬಂಧಗಳು ಹಾಳಾಗಿದ್ದು, ನಾವೆಲ್ಲರೂ ಮಾನಸಿಕ ಹಿಂಸೆ ಅನುಭವಿಸಿದ್ದೇವೆʼʼ ಎಂದು ಪ್ರತೀಕ್ ಯಾದವ್ ಆರೋಪಿಸಿದ್ದಾರೆ.

Viral Video:  ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌; ವೈರಲ್‌ ಆಗ್ತಿದೆ ವಿಡಿಯೋ

ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆಯೇ ಶ್ವಾನಗಳ ಸುಖ ನಿದ್ರೆ!

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವಾರ್ಡ್‌ನಲ್ಲಿ ರೋಗಿಗಳಿಗಾಗಿ ಇರುವ ಬೆಡ್‌ಗಳ ಮೇಲೆಯೇ ನಾಯಿಗಳು ಮಲಗಿರುವ ದೃಶ್ಯಗಳಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ನಡುವೆ ಈ ದುಸ್ಥಿತಿ ಕಂಡುಬಂದಿದ್ದು, ಆಸ್ಪತ್ರೆಯ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯ ಕಂಡು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನೀರಿನ ಹೊಂಡಕ್ಕೆ ಬಿದ್ದ ಟೆಕ್ಕಿಯನ್ನು ಕಾಪಾಡಲು ಸೊಂಟಕ್ಕೆ ಹಗ್ಗ ಕಟ್ಟಿ ಹಾರಿದ ಡೆಲಿವರಿ ಬಾಯ್‌; ನೀರು ತಣ್ಣಗಿದೆ ಎಂದು ನೆರವಿಗೆ ಬಾರದ ರಕ್ಷಣಾ ಸಿಬ್ಬಂದಿ

ಟೆಕ್ಕಿಯನ್ನು ರಕ್ಷಿಸಲು ನೀರು ತುಂಬಿದ ಗುಂಡಿಗೆ ಹಾರಿದ ಡೆಲಿವರಿ ಬಾಯ್

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದ ಪರಿಣಾಮ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ. ನೀರು ತಣ್ಣಗಿದೆ ಹಾಗೂ ಗುಂಡಿಯಲ್ಲಿ ಕಬ್ಬಿಣದ ರಾಡುಗಳಿವೆ ಎಂಬ ಕಾರಣ ನೀಡಿ ತುರ್ತು ರಕ್ಷಣಾ ಸಿಬ್ಬಂದಿ ಕಾಪಾಡಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಡೆಲಿವರಿ ಬಾಯ್ ಒಬ್ಬರು ತಮ್ಮ ಪ್ರಾಣದ ಅಪಾಯವನ್ನೂ ಲೆಕ್ಕಿಸದೆ ರಕ್ಷಣೆಗೆ ಮುಂದಾಗಿದ್ದಾರೆ.

Loading...