ಡೆಡ್ಲಿ ಆಕ್ಸಿಡೆಂಟ್- ಸಚಿವೆ ಜಸ್ಟ್ ಮಿಸ್!
UP Minister Rani Maurya: ಆಗ್ರಾ–ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ ಅವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಶುಕ್ರವಾರ ರಾತ್ರಿ ಲಕ್ನೋಗೆ ತೆರಳುತ್ತಿದ್ದ ವೇಳೆ, ಸಚಿವೆಯ ಕಾರಿನ ಮುಂದಿನಿಂದ ಸಾಗುತ್ತಿದ್ದ ಲಾರಿಯ ಒಂದು ಟೈರ್ ಅಕಸ್ಮಾತ್ ಸಿಡಿದಿದೆ. ಇದರಿಂದ ಲಾರಿ ನಿಯಂತ್ರಣ ತಪ್ಪಿ ಸಚಿವೆಯ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆದರೆ, ಚಾಲಕ ತಕ್ಷಣ ಎಚ್ಚರಿಕೆ ವಹಿಸಿ ಕಾರನ್ನು ಬದಿಗೆ ಸರಿಸಿದ್ದರಿಂದ ಭಾರೀ ಅಪಘಾತ ತಪ್ಪಿದೆ.