ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Viral Video: ಹೆತ್ತ ತಾಯಿ ಎನ್ನುವುದನ್ನೂ ನೋಡದೆ ಕ್ರೂರವಾಗಿ ಹಲ್ಲೆ ನಡೆಸಿದ ಮಗ; ಮನ ಕಲಕುವ ವಿಡಿಯೊ ವೈರಲ್

ಛೇ ಎಂಥಾ ಕಟುಕ ಮಗ; ತಾಯಿ ಮೇಲೆ ಅಮಾನುಷ ಹಲ್ಲೆ

ರಾಜಸ್ಥಾನದಲ್ಲಿ ನಡೆದ ಮನಕಲಕುವ ಘಟನೆಯ ವೈರಲ್ ಆಗಿದೆ. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಇಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತನ್ನ ಹೆತ್ತ ತಾಯಿಗೆ ಮಗ ಥಳಿಸುತ್ತಿರುವ ವಿಡಿಯೊ ಪೊಲೀಸರ ಕೈ ಸೇರಿದೆ. ಪಾಪಿ ಮಗನನ್ನು ದೀಪು ಮೆಹ್ರಾ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Smartphone: ಮೊಬೈಲ್‌ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ ಭಾರತ; ರಫ್ತು ಶೇ. 127ರಷ್ಟು ಹೆಚ್ಚಳ

ಜಾಗತಿಕ ಮೊಬೈಲ್‌ ಹಬ್‌ ಆಗುತ್ತಿದೆ ಭಾರತ

ವಿಶ್ವದ ಮೂರನೇ ಆರ್ಥಿಕ ರಾಷ್ಟ್ರದ ಆಶಯದಲ್ಲಿ ಅಗಾಧ ಬೆಳವಣಿಗೆ ಸಾಧಿಸುತ್ತಿರುವ ಭಾರತ, ಮೊಬೈಲ್‌ ಉದ್ಯಮದಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಮೊಬೈಲ್ ಫೋನ್ ರಫ್ತು ಒಂದೇ ದಶಕದಲ್ಲಿ 127 ಪಟ್ಟು ಹೆಚ್ಚಳ ಕಂಡಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್‌ ಆಗುವತ್ತ ದಾಪುಗಾಲಿರಿಸಿದೆ.

ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಅಡಿಯಲ್ಲಿ ಅವಿತಿತ್ತು ವಿಷಕಾರಿ ಹಾವು; ಅರಿವಿಲ್ಲದೆ 2 ಗಂಟೆ ಸುತ್ತಾಡಿದ ವಿದ್ಯಾರ್ಥಿ ಪಾರಾಗಿದ್ದೇಗೆ?

ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಜಸ್ಟ್ ಬಚಾವ್

ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಪೆಟ್ರೋಲ್ ಟ್ಯಾಂಕ್ ಕೆಳಗೆ ಸೇರಿಕೊಂಡಿದ್ದ ವಿಷಕಾರಿ ಹಾವಿನ ಅರಿವೇ ಇಲ್ಲದೆ ವಿದ್ಯಾರ್ಥಿ ಸುಮಾರು 2 ಗಂಟೆಗಳ ಕಾಲ ಸುತ್ತಾಡಿದ್ದಾನೆ. ಕೊನೆಗೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಸದ್ಯ ಹಾವನ್ನು ಸೆರೆ ಹಿಡಿಯಲಾಗಿದೆ.

Himanta Biswa Sarma: ಮುಸ್ಲಿಮರ ಸಂಖ್ಯೆ 2041ರ ವೇಳೆಗೆ ಹಿಂದೂ ಜನಸಂಖ್ಯೆಗೆ  ಸಮನಾಗಬಹುದು: ಹಿಮಂತ ಬಿಸ್ವಾ ಶರ್ಮಾ

ಹಿಂದೂ ಜನಸಂಖ್ಯೆಗೆ ಸಮವಾಗಿ ಬೆಳೆಯಲಿದೆ ಮುಸ್ಲಿಂ ಸಮುದಾಯ

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ದಿಬ್ರುಗಢದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ, ರಾಜ್ಯದ ಮುಸ್ಲಿಂ ಜನಸಂಖ್ಯೆಯು ಪ್ರಸ್ತುತ ಬೆಳವಣಿಗೆಯ ದರದಲ್ಲಿ ಮುಂದುವರಿದರೆ 2041ರ ವೇಳೆಗೆ ಹಿಂದೂ ಜನಸಂಖ್ಯೆಯೊಂದಿಗೆ ಸಮಾನವಾಗಲಿದೆ ಎಂದು ಹೇಳಿದ್ದಾರೆ.

Vice President: ಬಿಜೆಪಿಯವರೇ ನೂತನ ಉಪರಾಷ್ಟ್ರಪತಿ: ನಿತೀಶ್ ಕುಮಾರ್ ಆಯ್ಕೆಯ ವದಂತಿ ತಳ್ಳಿ ಹಾಕಿದ ಪಕ್ಷ

ಯಾರಾಗಲಿದ್ದಾರೆ ಮುಂದಿನ ಉಪರಾಷ್ಟ್ರಪತಿ?

ಮುಂದಿನ ಉಪರಾಷ್ಟ್ರಪತಿಯಾಗಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜಗದೀಪ್ ಧನಕರ್ ಅವರ ಆಕಸ್ಮಿಕ ರಾಜೀನಾಮೆಯಿಂದ ಖಾಲಿಯಾದ ಈ ಹುದ್ದೆಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್‌ ಅವರಂತಹ ಮಿತ್ರಪಕ್ಷದ ನಾಯಕರನ್ನು ಪರಿಗಣಿಸುವ ಊಹಾಪೋಹಗಳನ್ನು ಬಿಜೆಪಿ ಅಲ್ಲೆಳೆದಿದೆ.

MP Fund: ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ; ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ 100 ಶಾಲೆಗಳ ಸ್ಮಾರ್ಟ್ ಕ್ಲಾಸ್ ಯೋಜನೆಗೆ 1.46 ಕೋಟಿ ರೂ. ಅನುದಾನ

ಡಾ. ಹೆಗ್ಗಡೆಯವರಿಂದ 100 ಶಾಲೆಗಳಿಗೆ 1.46 ಕೋಟಿ ರೂ. ಅನುದಾನ

ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ತಲಾ 1.46 ಲಕ್ಷ ರೂ.ಯಂತೆ ಒಟ್ಟು 1.46 ಕೋಟಿ ರೂ. ಮೊತ್ತದ ಅನುದಾನವನ್ನು ಮಂಜೂರು ಮಾಡಿದ್ದಾರೆ.

Women Constables: ತೆರೆದ ಸ್ಥಳದಲ್ಲಿ ಸ್ನಾನ, ಕಾರಿಡಾರ್‌ನಲ್ಲಿ CCTV: ಗೋರಖ್‌ಪುರ ತರಬೇತಿ ಶಿಬಿರದ ಅವ್ಯವಸ್ಥೆ ವಿರುದ್ಧ ಮಹಿಳಾ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

ಕಳಪೆ ಮೂಲಭೂತ ಸೌಕರ್ಯ; ಮಹಿಳಾ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

Uttar Pradesh: ಉತ್ತರ ಪ್ರದೇಶದ ಗೋರಖ್‌ಪುರದ 26ನೇ ಬೆಟಾಲಿಯನ್ PAC ಕೇಂದ್ರದಲ್ಲಿ ತರಬೇತಿಗೆ ಸೇರಿರುವ ಮಹಿಳಾ ಕಾನ್ಸ್‌ಟೇಬಲ್‌ಗಳು ಬುಧವಾರ ಖಾಸಗಿತನಕ್ಕೆ ದಕ್ಕೆಯಾಗುತ್ತಿದೆ ಎಂದು ಮತ್ತು ನೀರು ಹಾಗೂ ವಿದ್ಯುತ್ ವ್ಯವಸ್ಥೆಯ ಕೊರತೆ ವಿರುದ್ಧ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ತರಬೇತಿಗೆ ಸೇರಿದ ಈ ನೂತನ ಕಾನ್ಸ್‌ಟೇಬಲ್‌ಗಳು “ತೆರೆದ ಸ್ಥಳದಲ್ಲಿ ಸ್ನಾನ ಮಾಡಬೇಕಾಗಿದೆ ಎಂದು ದೂರಿದ್ದಾರೆ.

Rameshwaram Cafe: ಪ್ರಸಿದ್ಧ ರಾಮೇಶ್ವರಂ ಕೆಫೆ ಪೊಂಗಲ್‌ನಲ್ಲಿ ಸತ್ತ ಜಿರಳೆ ಪತ್ತೆ: ಗ್ರಾಹಕರಿಂದ ಆಕ್ರೋಶ

ರಾಮೇಶ್ವರಂ ಕೆಫೆಯ ಪೊಂಗಲ್‌ನಲ್ಲಿ ಹುಳು ಪತ್ತೆ..!

Kempegowda International Airport: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯ ಆಹಾರದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿದ್ದು, ಗ್ರಾಹಕರೊಬ್ಬರು ಖರೀದಿಸಿದ ಪೊಂಗಲ್ ತಿಂಡಿಯಲ್ಲಿ ಜಿರಳೆ ಪತ್ತೆಯಾದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಕುರಿತಾದ ಸುದ್ದಿ ವೈರಲ್ ಆಗಿದ್ದು, ವಿಮಾನ ನಿಲ್ದಾಣದ ಆಹಾರದ ಭದ್ರತೆಗೆ ಗಂಭೀರ ಎಚ್ಚರಿಕೆ ನೀಡಿದೆ.

Westarctica: ಗಾಜಿಯಾಬಾದ್‌ನಲ್ಲಿ ನಕಲಿ ‘ವೆಸ್ಟಾರ್ಕ್‌ಟಿಕಾ’ ರಾಯಭಾರ ಕಚೇರಿ ಪತ್ತೆ: ರಾಜತಾಂತ್ರಿಕ ಪ್ಲೇಟ್‌ನ ಕಾರುಗಳ ಜಪ್ತಿ

ವೆಸ್ಟಾರ್ಕ್ಟಿಕಾ ಹೆಸರಿನ ನಕಲಿ ರಾಯಭಾರ ಕಚೇರಿ ಪತ್ತೆ

ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದನ್ನು ಪತ್ತೆ ಹಚ್ಚಲಾಗಿದ್ದು, ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಒಬ್ಬನನ್ನು ಬಂಧಿಸಿದೆ. ಐಷಾರಾಮಿ 2 ಅಂತಸ್ತಿನ ಕಟ್ಟಡವನ್ನು ಬಾಡಿಗೆ ಕಟ್ಟಡದಲ್ಲಿ ಅಮೆರಿಕದ ನೌಕಾಪಡೆಯ ಅಧಿಕಾರಿಯೊಬ್ಬರು ಸ್ಥಾಪಿಸಿದ ಮೈಕ್ರೋನೇಷನ್ ‘ವೆಸ್ಟಾರ್ಕ್ಟಿಕಾ’ದ ರಾಯಭಾರ ಕಚೇರಿಯಾಗಿ ನಡೆಸುತ್ತಿದ್ದ ಹರ್ವರ್ಧನ್ ಜೈನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Dharmasthala: ಧರ್ಮಸ್ಥಳ ಪ್ರಕರಣ; ಬೆಂಗಳೂರು ಕೋರ್ಟ್ ಆದೇಶ ವಿರುದ್ಧ ಥರ್ಡ್ ಐ ಯುಟ್ಯೂಬ್ ಚಾನಲ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಥರ್ಡ್ ಐ ಯುಟ್ಯೂಬ್ ಚಾನಲ್‌ಗೆ ಕಾನೂನು ಪಾಠ ಮಾಡಿದ ಸುಪ್ರೀಂ

ಬೆಂಗಳೂರು ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ, ಥರ್ಡ್ ಐ ಯೂಟ್ಯೂಬ್ ಚಾನಲ್ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಹಾಕಿದ ಅರ್ಜಿಯನ್ನು ಸ್ವೀಕರಿಸದೆ ಮೊದಲು ಹೈಕೋರ್ಟ್‌ಗೆ ಹೋಗಿ ಎಂದು ಕಟ್ಟುನಿಟ್ಟಿನ ಸಂದೇಶ ನೀಡಿದೆ. ಥರ್ಡ್ ಹೈ ಯುಟ್ಯೂಬ್ ಚಾನೆಲ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Tirumala Tirupati Devasthanam: ತಿರುಮಲದಲ್ಲಿ ಶ್ರೀವಾಣಿ ದರ್ಶನ ಟಿಕೆಟ್ ಕೇಂದ್ರ ಉದ್ಘಾಟನೆ: ಭಕ್ತರಿಗೆ ಕಾಯುವ ತಲೆಬಿಸಿ ಇಲ್ಲ

ತಿರುಮಲ ಭಕ್ತರ ಗಮನಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ತಿರುಮಲ ತಿರುಪತಿ ದೇವಸ್ಥಾನ ಭಕ್ತರಿಗೆ ಟಿಕೆಟ್ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಂಗಳವಾರ ಹೊಸ ಶ್ರೀವಾಣಿ ದರ್ಶನ ಟಿಕೆಟ್ ಕೇಂದ್ರವನ್ನು ಉದ್ಘಾಟಿಸಿದೆ. ತಿರುಮಲದ ಅಣ್ಣಮಯ್ಯ ಭವನದ ಎದುರು ಇರುವ ಈ ಕೇಂದ್ರವನ್ನು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಉದ್ಘಾಟಿಸಿದರು.

Robbery Case: ಗನ್ ತೋರಿಸಿ ನಿವೃತ್ತ NSG ಸಿಬ್ಬಂದಿಯ ಮನೆಯಲ್ಲಿ ದರೋಡೆ; ಆರೋಪಿಯ ಬಂಧನ

NSG ಸಿಬ್ಬಂದಿ ಮನೆಯಲ್ಲಿ 60 ಲಕ್ಷ ರೂ. ದರೋಡೆ

ನಿವೃತ್ತ NSG ಸಿಬ್ಬಂದಿಯೊಬ್ಬರ ಮನೆಯಲ್ಲಿ ಶನಿವಾರ ನಡೆದ 60 ಲಕ್ಷ ರೂ. ಮೌಲ್ಯದ ದರೋಡೆ (Robbery) ಪ್ರಕರಣಕ್ಕೆ ಸಂಬಂಧಿಸಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ 35 ವರ್ಷದ ಆರೋಪಿ ಅಲೋಕ್ ಕುಮಾರ್ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ರಾಷ್ಟ್ರೀಯ ಭದ್ರತಾ ಪಡೆ (NSG) ಸಿಬ್ಬಂದಿಯಾದ 86 ವರ್ಷದ ಭೀಮಸೇನ್, ಈಗ ಕಿನಾರಿ ಮಾರ್ಕೆಟ್‌ನಲ್ಲಿ ಒಡವೆ ವ್ಯಾಪಾರ ನಡೆಸುತ್ತಿದ್ದಾರೆ. ಶನಿವಾರ ಅವರು ತನ್ನ ಮಗ ಸಂದೀಪ್, ಸೊಸೆ ನೀಲಂ ಮತ್ತು ಮೊಮ್ಮಗನೊಂದಿಗೆ ಮನೆಯಲ್ಲಿದ್ದಾಗ ದರೋಡೆ ನಡೆದಿದೆ.

Frude Case: 2 ಕೋಟಿ ರೂ. ಎಗರಿಸಿ ಗರ್ಲ್‌ಫ್ರೆಂಡ್‌ ಜತೆ ಪೊಲೀಸಪ್ಪ ಜೂಟ್! ಇವ್ನು ಸಿಕ್ಕಿ ಬಿದ್ದಿದ್ದೇ ರೋಚಕ

ಕೋಟಿ ಕೋಟಿ ಎಗರಿಸಿ ಪ್ರೇಯಸಿ ಜೊತೆ ಪೊಲೀಸಪ್ಪ ಜಾಲಿ ಟ್ರಿಪ್‌

ದೆಹಲಿ ಪೊಲೀಸ್ (Delhi Police) ಸಬ್ ಇನ್ಸ್‌ಪೆಕ್ಟರ್ (Sub-Inspector) ಒಬ್ಬರು 2 ಕೋಟಿ ರೂಪಾಯಿಗಳನ್ನು ಕದ್ದು ತನ್ನ ಸಬ್ ಇನ್ಸ್‌ಪೆಕ್ಟರ್ ಗೆಳತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ-ಪೂರ್ವ ಜಿಲ್ಲೆಯ ಸೈಬರ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಂಕುರ್ ಮಲಿಕ್, ನಕಲಿ ದೂರುದಾರರ ಹೆಸರಿನಲ್ಲಿ ಕೋರ್ಟ್ ಆದೇಶ ಪಡೆದು ಕಳವು ಮಾಡಿದ ಹಣವನ್ನು ತನ್ನ ಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ.

Indian Railway Department: ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ಬೆಂಗಳೂರು ಸೇರಿ  7 ರೈಲ್ವೇ ಸ್ಟೇಷನ್‌ಗಳಲ್ಲಿ AI ತಂತ್ರಜ್ಞಾನ ಅಳವಡಿಕೆ

ಬೆಂಗಳೂರು ಸೇರಿ 7 ರೈಲ್ವೇ ಸ್ಟೇಷನ್‌ಗಳಲ್ಲಿ AI ತಂತ್ರಜ್ಞಾನ ಅಳವಡಿಕೆ

AI-based facial identification: ಭಾರತೀಯ ರೈಲ್ವೆ ಇಲಾಖೆಯು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ರೈಲು ನಿಲ್ದಾಣಗಳಲ್ಲಿ ಅಪರಾಧ ತಡೆಗಟ್ಟಲು ಮತ್ತು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ. ಬೆಂಗಳೂರು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ನವದೆಹಲಿ, ಚೆನ್ನೈ, ಹೌರಾ, ಅಹಮದಾಬಾದ್, ಮತ್ತು ಪುಣೆ ಸೇರಿ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ AI-ಚಾಲಿತ ಮುಖ ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

Blackmail Case: ಪತ್ನಿ ಸ್ನಾನ ಮಾಡುತ್ತಿರುವ ವಿಡಿಯೊ ರೆಕಾರ್ಡ್‌ ಮಾಡಿ ಪತಿ ಬ್ಲ್ಯಾಕ್‌ಮೇಲ್‌! EMI ಕಟ್ಟುವಂತೆ ಬೆದರಿಕೆ

ಪತ್ನಿಯ ಖಾಸಗಿ ವಿಡಿಯೋ ರೆಕಾರ್ಡ್‌ ಮಾಡಿ ಪತಿಯಿಂದಲೇ ಬ್ಲ್ಯಾಕ್‌ಮೇಲ್‌!

ಮಹಿಳೆಯೊಬ್ಬಳು ತನ್ನ ಪತಿಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪುಣೆಯ ಅಂಬೆಗಾಂವ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

Supreme Court: ಜೀವನಾಂಶಕ್ಕೆ 12 ಕೋಟಿ ರೂ, BMW ಕಾರು, ಮುಂಬೈನಲ್ಲಿ ಐಷಾರಾಮಿ ಮನೆ- ಪತ್ನಿಯ ಡಿಮ್ಯಾಂಡ್ಸ್‌ ನ್ಯಾಯಾಧೀಶರೇ ಶಾಕ್‌!

ಜೀವನಾಂಶವಾಗಿ 12 ಕೋಟಿ ರೂ, BMW ಕಾರಿಗೆ ಮಹಿಳೆ ಡಿಮ್ಯಾಂಡ್‌!

ಜೀವನಾಂಶಕ್ಕೆ 12 ಕೋಟಿ ರೂ, ಮುಂಬೈನಲ್ಲಿ ಮನೆ ಕೇಳಿದ ಮಹಿಳೆಗೆ ‘ನೀವೇಕೆ ಗಳಿಸಬಾರದು? ಎಂದ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಜೀವನಾಂಶ ವಿವಾದದ ವಿಚಾರಣೆಯಲ್ಲಿ, “ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ, ಸ್ವತಃ ಗಳಿಸಬೇಕು, ಜೀವನಾಂಶಕ್ಕಾಗಿ ಕೇಳಬಾರದು” ಎಂದು ಮಹಿಳೆಯೊಬ್ಬರಿಗೆ ತರಾಟೆಗೆ ತೆಗೆದುಕೊಂಡರು.

Maharashtra Crime: ವೇಟ್ ಮಾಡಿ ಅಂದಿದ್ದೇ ತಪ್ಪಾಯ್ತು; ಸ್ವಲ್ಪ ಹೊತ್ತು ಕಾಯಿರಿ ಎಂದಿದ್ದ ರಿಸೆಪ್ಷನಿಸ್ಟ್‌ ಮೇಲೆ ರೋಗಿಯ ಸಂಬಂಧಿಯಿಂದ ಹಲ್ಲೆ

ಥಾಣೆ ಆಸ್ಪತ್ರೆಯಲ್ಲಿ ರಿಸೆಪ್ಶನಿಸ್ಟ್ ಮೇಲೆ ಭೀಕರ ಹಲ್ಲೆ

ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ಪ್ರದೇಶದ ಕ್ಲಿನಿಕ್‌ನಲ್ಲಿ ಮಂಗಳವಾರ ರಿಸೆಪ್ಷನಿಸ್ಟ್‌ ಮಹಿಳೆ ಮೇಲೆ ರೋಗಿಯ ಸಂಬಂಧಿಯೊಬ್ಬ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Lucknow Murder: 10 ವರ್ಷಗಳ ಹಿಂದೆ ತಾಯಿಯನ್ನು ಅವಮಾನಿಸಿದ್ದ ವ್ಯಕ್ತಿಯ ಕೊಲೆ; ಆರೋಪಿಗಳು ಸಿಕ್ಕಿಬಿದ್ದಿದೇ ರೋಚಕ

ಎಣ್ಣೆ ಪಾರ್ಟಿಯಿಂದ ಸಿಕ್ಕಿ ಬಿದ್ರು ಕೊಲೆ ಆರೋಪಿಗಳು

ತಾಯಿಯ ಮೇಲೆ ದಶಕದ ಹಿಂದೆ ದೌರ್ಜನ್ಯ ಎಸಗಿದ್ದ ವ್ಯಕ್ತಿಯನ್ನು ಯುವಕನೊಬ್ಬ ಕೊಲೆಗೈದ ಘಟನೆ ಲಖನೌನಲ್ಲಿ ನಡೆದಿದೆ. ಸೋನು ಕಶ್ಯಪ್ ಎಂಬಾತ ತಾಯಿಯ ಅವಮಾನಕ್ಕೆ ಪ್ರತೀಕಾರವಾಗಿ 10 ವರ್ಷಗಳ ಕಾಲ ಮನೋಜ್ ಎಂಬಾತನನ್ನು ಹುಡುಕಾಡಿದ್ದ. ತನ್ನ ಸ್ನೇಹಿತರಾದ ರಂಜೀತ್, ಆದಿಲ್, ಸಲಾಮು ಮತ್ತು ರೆಹಮತ್ ಅಲಿಯೊಂದಿಗೆ ಸೇರಿ ಮನೋಜ್‌ನನ್ನು ಕೊಂದಿದ್ದಾನೆ.

Murder Case: ದೃಶ್ಯಂ ಸಿನಿಮಾ ಸ್ಟೈಲ್​ನಲ್ಲಿ ಪತಿಯನ್ನು ಕೊಂದು ರೂಮ್‌ನಲ್ಲೇ ಹೂತು ಹಾಕಿದ ಪತ್ನಿ..!

ದೃಶ್ಯಂ ಸ್ಟೈಲ್‌ನಲ್ಲಿ ಡೆಡ್ಲಿ ಮರ್ಡರ್‌! ಮಿಸ್ಟ್ರಿ ಬಯಲಾಗಿದ್ದೇ ರೋಚಕ

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಗಂಡನನ್ನು ಕೊಂದಿದ್ದಾಳೆ. ಅಷ್ಟೇ ಅಲ್ಲದೆ ಸಿನಿಮಾ ಸ್ಟೈಲ್​ನಲ್ಲಿ ಸಾಕ್ಷಿ ನಾಶ ಮಾಡಿರುವ ಘಟನೆ ಮಹಾರಾಷ್ಟ್ರದ ನಾಲಾಸೋಪಾರಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಶಾಕ್​ ಆಗಿದ್ದು, ದೃಶ್ಯಂಸಿನಿಮಾ ರೀತಿಯಲ್ಲಿ ಕೊಲೆಗೈದಿರುವ ವಿಷಯ ತನಿಖೆ ವೇಳೆ ಬಯಲಾಗಿದೆ.

DHARMASTHALA CASE: ಧರ್ಮಸ್ಥಳದ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಗ್ಯಾಗ್ ಆರ್ಡರ್ ಆದೇಶ ಹೊರಡಿಸಿದ ಕೋರ್ಟ್‌!

ಧರ್ಮಸ್ಥಳ ವಿರುದ್ಧದ 8,842 ವಿಡಿಯೊ ಲಿಂಕ್‌ ಡಿಲೀಟ್‌ಗೆ ಆದೇಶ

ಧರ್ಮಸ್ಥಳದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಗ್ಯಾಗ್ ಆರ್ಡರ್ ಆದೇಶ ಹೊರಡಿಸಿದೆ.

Jagdeep Dhankhar: ಕಾರ್ಯಾವಧಿ ಮುಗಿಯೋ ಮುನ್ನವೇ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಾಯಕರು ಇವರೇ ನೋಡಿ!

ಅವಧಿಗೂ ಮುನ್ನ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳು ಇವರು..!

74 ವರ್ಷದ ಜಗದೀಪ್ ಧನ್‌ಕರ್ ಅವರು ಸೋಮವಾರ ಭಾರತದ ಉಪರಾಷ್ಟ್ರಪತಿಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಗಳಿಗೆ ಕಳುಹಿಸಿದ ಅಧಿಕೃತ ಪತ್ರದಲ್ಲಿ ಆರೋಗ್ಯ ಕಾರಣಗಳನ್ನು ರಾಜೀನಾಮೆಗೆ ಕಾರಣವಾಗಿ ಉಲ್ಲೇಖಿಸಿದ್ದಾರೆ. 2022ರಿಂದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿದ್ದ ಧನ್‌ಖರ್‌ರ ಅವಧಿ 2027ರವರೆಗೆ ಇತ್ತು. ಸಂವಿಧಾನದ 67(ಎ) ಲೇಖನದಂತೆ ರಾಜೀನಾಮೆ ತಕ್ಷಣದಿಂದ ಜಾರಿಗೆ ಬಂದಿದೆ.

Jagdeep Dhankhar: ಜಗದೀಪ್ ಧನ್‌ಕರ್ ರಾಜೀನಾಮೆ- ಮುಂದಿನ ಉಪರಾಷ್ಟ್ರಪತಿ ಚುನಾವಣೆ ಯಾವಾಗ?

ಧನ್‌ಕರ್ ರಾಜೀನಾಮೆ- ಮುಂದಿನ ಉಪರಾಷ್ಟ್ರಪತಿ ಚುನಾವಣೆ ಯಾವಾಗ?

The Next VP Election: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಖರ್ ಅವರು ಆರೋಗ್ಯ ಕಾರಣಗಳಿಂದ ಸೋಮವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕಾರಣದಿಂದ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ ಸಿಂಗ್ ಅವರು ಸಂವಿಧಾನದ ನಿಯಮಗಳಂತೆ ರಾಜ್ಯಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2022ರ ಆಗಸ್ಟ್‌ನಲ್ಲಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಹರಿವಂಶ್ ನಾರಾಯಣ ಸಿಂಗ್, ಮುಂದಿನ ಉಪರಾಷ್ಟ್ರಪತಿ ಚುನಾವಣೆಯವರೆಗೆ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

Rashmika Mandanna: ದೇವರಕೊಂಡ-ರಶ್ಮಿಕಾ ಡೇಟಿಂಗ್ ಊಹಾಪೋಹಕ್ಕೆ ರೆಕ್ಕೆ: ‘ಡಿಯರ್ ಡೈರಿ’ಗೆ ವಿಜಯ್‌ ರೆಡ್ ಹಾರ್ಟ್

ಪರ್ಫ್ಯೂಮ್ ಬ್ರ್ಯಾಂಡ್‌ ಲಾಂಚ್ ಮಾಡಿದ ಕೊಡಗಿನ ಬೆಡಗಿ

ರಶ್ಮಿಕಾ ಮಂದಣ್ಣ ಹೊಸ ಉದ್ಯಮವೊಂದನ್ನು ಆರಂಭಿಸಿದ್ದು, 'ಡಿಯರ್ ಡೈರಿ' ಎಂಬ ತಮ್ಮದೇ ಆದ ಪರ್ಫ್ಯೂಮ್ ಕಂಪನಿಯನ್ನು ತೆರೆದಿದ್ದಾರೆ. ವಿವಿಧ ಸುವಾಸನೆಯ ಸೆಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಹಲವಾರು ಸುಗಂಧದ್ರವ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಉತ್ತೇಜನ ನೀಡಿರುವ ಪಿಸಿಎ ಕಂಪನಿಯು ರಶ್ಮಿಕಾ ಅವರ ಬ್ರ್ಯಾಂಡ್‌ ಮಾರಾಟ ಮಾಡಲು ಸಹಕಾರ ನೀಡಲಿದೆ.

Supreme Court: ಐಐಟಿ ಖರಗ್‌ಪುರ, ಶಾರದಾ ವಿವಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ; ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆ

ಐಐಟಿ, ಶಾರದಾ ವಿಶ್ವವಿದ್ಯಾಲಯದ ಆತ್ಮಹತ್ಯೆ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ

ಐಐಟಿ ಖರಗ್‌ಪುರ ಮತ್ತು ಶಾರದಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಿನ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದೆ. ತನಿಖೆಯಲ್ಲಿ ಯಾವುದೇ ತಪ್ಪು ಅಥವಾ ಸಾಂಸ್ಥಿಕ ವೈಫಲ್ಯ ಕಂಡುಬಂದರೆ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

Loading...