ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿದ್ಯಾ ಇರ್ವತ್ತೂರು

vidyaIrvathur@gmail.com

ಕಾರ್ಕಳ ತಾಲೂಕಿನ ಇರ್ವತ್ತೂರಿನವರಾದ ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಬಳಿಕ ಉದಯವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದು, ನವಸಮಾಜ, ನ್ಯೂಸ್ ಆ್ಯರೋ, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 16 ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದು, ಬರವಣಿಗೆ, ಓದು, ಪ್ರವಾಸ ಇವರ ನೆಚ್ಚಿನ ಹವ್ಯಾಸ. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ಗೆ ಸುದ್ದಿ, ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ.

Articles
Raj Kundra: 60 ಕೋಟಿ ರೂ. ವಂಚನೆ ಪ್ರಕರಣ: ರಾಜ್ ಕುಂದ್ರಾಗೆ ಸಮನ್ಸ್

60 ಕೋಟಿ ರೂ. ವಂಚನೆ ಪ್ರಕರಣ; ರಾಜ್ ಕುಂದ್ರಾಗೆ ಸಮನ್ಸ್

ಸುಮಾರು 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಮೊದಲು ಸಂಪರ್ಕಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಯ ಲೆಕ್ಕಪರಿಶೋಧಕರಿಗೂ ಸಮನ್ಸ್ ನೀಡಲಾಗಿದೆ.

Justice Mohammad Hidayatullah: ಸಿಜೆಐ, ರಾಷ್ಟ್ರಪತಿ, ಉಪ ರಾಷ್ಟ್ರಪತಿ.... ದೇಶದ ಮೂರು ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ ಯಾರು ಗೊತ್ತೇ?

ದೇಶದ ಮೂರು ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ ಇವರು

ದೇಶದ ಮೂರು ಉನ್ನತ ಹುದ್ದೆಗಳಾದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಎಂದರೆ ಮೊಹಮ್ಮದ್ ಹಿದಾಯತುಲ್ಲಾ. ಮೂರು ಪ್ರಮುಖ ಹುದ್ದೆಗಳಲ್ಲಿನ ಇವರ ಪ್ರಯಾಣವು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿನ ಬಲ ಮತ್ತು ಅದರ ನಾಯಕತ್ವದ ಆಳವನ್ನು ಪ್ರತಿಬಿಂಬಿಸುತ್ತದೆ.

Viral News: ಸತ್ತಿದ್ದಾನೆ ಎಂದು ಅಂತ್ಯಕ್ರಿಯೆ ನಡೆಸಲು ತಯಾರಿ; ಎದ್ದು ಕಣ್ಣೇ ಬಿಟ್ಟ ಈ ಭೂಪ!

ಸತ್ತಿದ್ದಾನೆಂದು ತಿಳಿದವ ಕಣ್ಣೇ ಬಿಟ್ಟ!

ಕುಡಿದ ಮತ್ತಿನಲ್ಲಿ ಕೆಸರಿನಲ್ಲಿ ಬಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಶವ ವಿಲೇವಾರಿ ಸಿದ್ಧತೆ ನಡೆಸುತ್ತಿದ್ದಾಗ ಆ ವ್ಯಕ್ತಿ ಎಚ್ಚರಗೊಂಡು ನಾನು ಜೀವಂತವಾಗಿದ್ದೇನೆ ಎಂದು ಹೇಳಿದಾಗ ಸಂಪೂರ್ಣ ಗ್ರಾಮದ ಜನರು ದೆವ್ವ ಎಂದು ಹೆದರಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಏನಿದು ಪ್ರಸಂಗ ಇಲ್ಲಿದೆ ನೋಡಿ..

Vastu Tips: ಮನೆಗೆ ಲಕ್ಷ್ಮೀಯನ್ನು ಆಹ್ವಾನಿಸಲು ಇಲ್ಲಿದೆ ಸುಲಭ ಉಪಾಯ

ಮನೆಗೆ ಸಮೃದ್ಧಿಯನ್ನು ಹೀಗೆ ಆಹ್ವಾನಿಸಿ

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ವೃದ್ಧಿಯಾಗಬೇಕಾದರೆ ಕೆಲವೊಂದು ನಿಯಮಗಳ ಅನುಷ್ಠಾನ ಮಾಡಿಕೊಳ್ಳಬೇಕು. ಜತೆಗೆ ಇದರಿಂದ ಸಂಪತ್ತನ್ನು ಸುಲಭವಾಗಿ ಮನೆಗೆ ಆಕರ್ಷಿಸಬಹುದು. ಮನೆಗೆ ಲಕ್ಷ್ಮೀ ದೇವಿ ಅಂದರೆ ಸಂಪತ್ತಿನ ಅಧಿದೇವತೆಯನ್ನು ಆಹ್ವಾನಿಸಲು ಅಗತ್ಯವಾದ ವಾಸ್ತು ಶಾಸ್ತ್ರವು ಹೇಳಿರುವ ಕೆಲವು ಸುಲಭ ಪರಿಹಾರೋಪಾಯಗಳು ಇಲ್ಲಿವೆ.

Postpartum Psychosis: ದೇಶವೇ ಬೆಚ್ಚಿ ಬೀಳುವ ಘಟನೆ: ನವಜಾತ ಶಿಶುವನ್ನು ಫ್ರೀಜರ್‌ನಲ್ಲಿ ಇಟ್ಟ ತಾಯಿ

ನವಜಾತ ಶಿಶುವನ್ನು ಫ್ರೀಜರ್‌ನಲ್ಲಿ ಇಟ್ಟ ತಾಯಿ

ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರಲ್ಲ ಎನ್ನುವ ಮಾತಿದೆ. ಆದರೆ ಇದನ್ನು ಕೆಲವರು ಸುಳ್ಳು ಮಾಡುತ್ತಿದ್ದಾರೆ. ಇಲ್ಲೊಬ್ಬಳು ಹೆತ್ತ ತಾಯಿಯೇ ತನ್ನ ಮಗುವನ್ನು ಫ್ರೀಜರ್‌ನಲ್ಲಿ ಇರಿಸಿ ಸಾಯಲು ಬಿಟ್ಟಿದ್ದಳು. ಆದರೆ ಅದೃಷ್ಟವಶಾತ್ ಕುಟುಂಬ ಸದಸ್ಯರು ಮಗುವನ್ನು ರಕ್ಷಿಸಿದ್ದಾರೆ.

Bomb Threat: ಬಾಂಬ್ ಬೆದರಿಕೆ; ಕೇರಳ ಸಿಎಂ ನಿವಾಸ, ಜಿಲ್ಲಾ ನ್ಯಾಯಾಲಯದಲ್ಲಿ ಶೋಧ

ಬಾಂಬ್ ಬೆದರಿಕೆ: ಕೇರಳದಲ್ಲಿ ಶೋಧ

ಕೇರಳ ಮುಖ್ಯಮಂತ್ರಿಯ ಅಧಿಕೃತ ನಿವಾಸ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇಮೇಲ್ ಮೂಲಕ ಬೆದರಿಕೆ ಬಂದ ಬಳಿಕ ಸೋಮವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು.

Brain Eating Amoeba: ಮೆದುಳು ತಿನ್ನುವ ಅಮೀಬಾ ಸೋಂಕು: ಕೇರಳದಲ್ಲಿ ಮತ್ತೊಂದು ಬಲಿ

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೊಂದು ಬಲಿ

ಕೇರಳದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ವರ್ಷದ ಮಹಿಳೆ ಶೋಭನಾ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಸೋಂಕಿನಿಂದ ಎರಡು ದಿನಗಳ ಹಿಂದೆ ಸುಲ್ತಾನ್ ಬತ್ತೇರಿ ಮೂಲದ 45 ವರ್ಷದ ರತೀಶ್ ಸಾವನ್ನಪ್ಪಿದ್ದರು.

The Bengal Files: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಬೆಂಗಾಳ್‌ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ

'ದಿ ಬೆಂಗಾಳ್‌ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಬೆಂಗಾಳ ಫೈಲ್ಸ್ʼ ಹಿಂದಿ ಚಿತ್ರದಲ್ಲಿ ತಮ್ಮ ಅಜ್ಜ ಗೋಪಾಲ್ ಚಂದ್ರ ಮುಖರ್ಜಿ ಅವರನ್ನು ಮಾನಹಾನಿಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರರಾದ ಶಂತನು ಮುಖರ್ಜಿ ಸಲ್ಲಿಸಿರುವ ದೂರನ್ನು ಪರಿಶೀಲಿಸಿರುವ ಕೋಲ್ಕತಾ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. 1946ರ ಆಗಸ್ಟ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಕೋಮು ಗಲಭೆಯನ್ನು ಆಧರಿಸಿರುವ ಚಿತ್ರ ಇದಾಗಿದೆ.

Viral Video: ಕ್ಷುಲ್ಲಕ ಕಾರಣಕ್ಕೆ ಜಗಳ; ಗ್ರಾಹಕರ ಮೇಲೆ ಹಲ್ಲೆ- ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ದೂರು

ಗ್ರಾಹಕರ ಮೇಲೆ ಹಲ್ಲೆ ನಡೆಸಿದ ರೆಸ್ಟೋರೆಂಟ್ ಸಿಬ್ಬಂದಿ

ನಹರ್‌ಗಢದ ಐತಿಹಾಸಿಕ ಕೋಟೆಯಲ್ಲಿರುವ ಜೈಪುರದ ಪದವ್ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ಮಹಿಳಾ ಗ್ರಾಹಕರೊಬ್ಬರು ಆಸನ ವ್ಯವಸ್ಥೆ ಕುರಿತು ರೆಸ್ಟೋರೆಂಟ್‌ ಸಿಬ್ಬಂದಿಯೊಂದಿಗೆ ಜಗಳ ಪ್ರಾರಂಭಿಸಿದ್ದು, ಇದು ಮಾತಿನ ಚಕಮಕಿಗೆ ಕಾರಣವಾಗಿದೆ. ಬಳಿಕ ಗ್ರಾಹಕರು ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

Vice President Election: ಉಪರಾಷ್ಟ್ರಪತಿ ಚುನಾವಣೆ- ಸಿ.ಪಿ. ರಾಧಾಕೃಷ್ಣನ್ ಗೆಲುವು ಖಚಿತ? ಏನಿದೆ NDA ಲೆಕ್ಕಾಚಾರ?

ನಾಳೆ ಉಪರಾಷ್ಟ್ರಪತಿ ಚುನಾವಣೆ-ಏನಿದೆ NDA ಲೆಕ್ಕಾಚಾರ?

ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ರಹಸ್ಯ ಮತದಾನ ನಡೆಯಲಿದೆ. ಇದರ ಪ್ರಕ್ರಿಯೆ ಹೇಗಿರುತ್ತದೆ, ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ, ಆಡಳಿತ ಮತ್ತು ವಿರೋಧ ಪಕ್ಷಗಳ ಲೆಕ್ಕಾಚಾರಗಳು ಯಾವ ರೀತಿಯಲ್ಲಿ ಇದೆ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿವೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

Volodymyr Zelensky: ಟ್ರಂಪ್‌ ಸುಂಕ ಹೆಚ್ಚಳ ನೀತಿಗೆ ಜೈ ಎಂದ ಝೆಲೆನ್ಸ್ಕಿ

ಸುಂಕ ಹೆಚ್ಚಳ: ಟ್ರಂಪ್ ನಿರ್ಧಾರ ಸರಿಯಾಗಿದೆ ಎಂದ ಝೆಲೆನ್ಸ್ಕಿ

Zelensky supports Trump: ಸಂದರ್ಶನವೊಂದರಲ್ಲಿ ಮಾತನಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದು, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಕಾಲದಲ್ಲಿ ಇದು ಸರಿಯಾದ ನಿರ್ಣಯ ಎಂದು ಹೇಳಿದ್ದಾರೆ.

Sanjay Dutt: ಜೋಡಿ ಕೊಲೆ ಹಂತಕ ನಟ ಸಂಜಯ್‌ ದತ್‌ ಕುತ್ತಿಗೆಗೆ ಬ್ಲೇಡ್‌ ಇಟ್ಟಿದ್ನಂತೆ!

ಜೋಡಿ ಕೊಲೆ ಹಂತಕ ನಟ ಸಂಜಯ್‌ ದತ್‌ ಕುತ್ತಿಗೆಗೆ ಬ್ಲೇಡ್‌ ಇಟ್ಟಿದ್ನಂತೆ!

1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಜೈಲಿನಲ್ಲಿದ್ದಾಗ ನಡೆದ ಒಂದು ಭಯಾನಕ ಘಟನೆಯನ್ನು ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋನಲ್ಲಿ ಹಂಚಿಕೊಂಡಿದ್ದಾರೆ. ಎರಡು ಕೊಲೆಗಳನ್ನು ಮಾಡಿದ್ದ ಅಪರಾಧಿಯೊಬ್ಬ ತನ್ನ ಕುತ್ತಿಗೆಗೆ ಬ್ಲೇಡ್ ಹಿಡಿದಿದ್ದ ಎಂದು ನಟ ನೆನಪಿಸಿಕೊಂಡಿದ್ದಾರೆ.

Prince Harry: ಯುಕೆಯಲ್ಲಿ ಪ್ರಿನ್ಸ್ ಹ್ಯಾರಿ-ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗುವರೇ?

ಪ್ರಿನ್ಸ್ ಹ್ಯಾರಿ ತಂದೆಯನ್ನು ಭೇಟಿಯಾಗುವರೇ?

ರಾಜಮನೆತನದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು 20 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಿನ್ಸ್ ಹ್ಯಾರಿ ಬ್ರಿಟನ್‌ಗೆ ಮರಳುತ್ತಿದ್ದಾರೆ. ಹ್ಯಾರಿ ಅವರು ತಮ್ಮ ಅಜ್ಜಿ ರಾಣಿ ಎಲಿಜಬೆತ್ ಅವರ ಮೂರನೇ ವರ್ಷದ ಪುಣ್ಯತಿಥಿಯ ಅಂಗವಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮವಾದ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದು, ಈ ವೇಳೆ ಅವರು ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಬಹುದು ಎನ್ನಲಾಗಿದೆ.

Physical Abuse: ಹುಟ್ಟುಹಬ್ಬದಂದೇ ಯುವತಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ

ಗೆಳೆಯರಿಂದಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಕೆಲವು ತಿಂಗಳ ಹಿಂದೆಯಷ್ಟೇ ಪರಿಚಿತರಾಗಿದ್ದ ಗೆಳೆಯರು ಯುವತಿಯೊಬ್ಬಳ ಮೇಲೆ ಆಕೆಯ ಹುಟ್ಟುಹಬ್ಬದ ದಿನದಂದೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರವೆಂದು ಕರೆಯಲ್ಪಡುವ ಕೋಲ್ಕತಾ ನಗರದ ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಮದರಸಾದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ: ಐವರ ಬಂಧನ

ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ: ಐವರ ಬಂಧನ

ಮದರಸಾದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಐವರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಒಡಿಶಾದ ನಯಾಗಢ ಜಿಲ್ಲೆಯ ಮದರಸಾದಲ್ಲಿ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಹತ್ಯೆ ಮಾಡಲಾಗಿತ್ತು.

Syrians Arrest: ಗಾಜಾ ಸಂತ್ರಸ್ತರ ಪರವಾಗಿ ಹಣ ಸಂಗ್ರಹ: ಮೂವರು ಸಿರಿಯನ್ನರ ಬಂಧನ

ದೆಹಲಿಯಲ್ಲಿ ಮೂವರು ಸಿರಿಯನ್ನರ ಬಂಧನ

ಗಾಜಾ ಸಂತ್ರಸ್ತರ ಪರವಾಗಿ ಎಂದು ಹೇಳಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದ ಮೂವರು ಸಿರಿಯನ್ನರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ದೆಹಲಿಯಿಂದ ದುಬೈ ಮೂಲಕ ಡಮಾಸ್ಕಸ್‌ಗೆ ಹೋಗಲು ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದರು. ಇವರು ಗಾಜಾ ಸಂತ್ರಸ್ತರ ಪರವಾಗಿ ಸಂಗ್ರಹಿಸಿದ ಹಣವನ್ನು ಆರೋಪಿಗಳು ಐಷಾರಾಮಿ ಜೀವನ ನಡೆಸಲು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

Operation Sindoor: ಓಣಂ ಹಬ್ಬದಂದು ರಂಗೋಲಿ ಹಾಕಿದ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ FIR

RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್; ಕಾರಣವೇನು?

ಆಪರೇಷನ್ ಸಿಂದೂರ್ ಹೆಸರಿನ ಹೂವಿನ ರಂಗೋಲಿಯನ್ನು (ಪೂಕಳಂ) ಕೇರಳದ ದೇವಾಲಯದ ಮುಂದೆ ಹಾಕಿರುವ ಆರೋಪದಲ್ಲಿ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೇವಾಲಯದ ಆವರಣದಲ್ಲಿ ಧ್ವಜಗಳು ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಹೈಕೋರ್ಟ್ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tihar Jail: ವಿಜಯ್ ಮಲ್ಯ, ನೀರವ್ ಮೋದಿ ಭಾರತಕ್ಕೆ ಹಸ್ತಾಂತರ- ತಿಹಾರ್ ಜೈಲು ಭದ್ರತೆ ಪರಿಶೀಲಿಸಿದ ಯುಕೆ ತಂಡ

ತಿಹಾರ್ ಜೈಲು ಪರಿಶೀಲಿಸಿದ ಯುಕೆ ಅಧಿಕಾರಿಗಳು

ವಿಜಯ್ ಮಲ್ಯ, ನೀರವ್ ಮೋದಿ ಅವರನ್ನು ದೇಶಕ್ಕೆ ಒಪ್ಪಿಸಲು ಭಾರತ ಒತ್ತಾಯಿಸುತ್ತಿರುವ ಮಧ್ಯೆಯೇ ಯುನೈಟೆಡ್ ಕಿಂಗ್‌ಡಮ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ತಂಡವು ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೊದಲ ಬಾರಿಗೆ ಅಪರಾಧಿಗಳು ಮತ್ತು ಹೆಚ್ಚಿನ ಭದ್ರತೆಯ ಕೈದಿಗಳನ್ನು ಇರಿಸಿರುವ ಜೈಲು ಸಂಖ್ಯೆ 4 ಅನ್ನು ಸಿಪಿಎಸ್ ನಿಯೋಗವು ಪರಿಶೀಲನೆ ನಡೆಸಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Sheikh Abdul Rashid: ಜೈಲಿನಲ್ಲಿರುವ ಸಂಸದ ಎಂಜಿನಿಯರ್‌ ರಶೀದ್‌ ಮೇಲೆ ತೃತೀಯ ಲಿಂಗಿಗಳಿಂದ ಅಟ್ಯಾಕ್‌!

ಜೈಲಿನಲ್ಲಿರುವ ಸಂಸದನ ಮೇಲೆ ತೃತೀಯ ಲಿಂಗಿಗಳಿಂದ ಅಟ್ಯಾಕ್‌!

ಕಾನೂನುಬಾಹಿರ ಚಟುವಟಿಕೆ ಆರೋಪದಲ್ಲಿ ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಸಂಸದ ಶೇಖ್ ಅಬ್ದುಲ್ ರಶೀದ್ (MP Sheikh Abdul Rashid) ಮೇಲೆ ತಿಹಾರ್ ಜೈಲಿನಲ್ಲಿ ಟ್ರಾನ್ಸ್‌ಜೆಂಡರ್ ಕೈದಿಗಳುಹಲ್ಲೆ ನಡೆಸಿದ್ದಾರೆ. ಆದರೆ ಇದು ಕೊಲೆ ಪಿತೂರಿ ಅಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Viral News: ಕೋಲ್ಡ್‌ ಪ್ಲೇ ಕಾರ್ಯಕ್ರಮದಲ್ಲಿ ಸಿಇಒ ಜೊತೆ ಸಿಕ್ಕಿಬಿದ್ದಿದ್ದ HRಗೆ ಪತಿಯಿಂದ ಡಿವೋರ್ಸ್‌

ಸಿಇಒ ಜೊತೆ ಸಿಕ್ಕಿಬಿದ್ದಿದ್ದ HRಗೆ ಪತಿಯಿಂದ ಡಿವೋರ್ಸ್‌

ಆಸ್ಟ್ರೋನಮರ್ ಸಿಇಒ ಆಂಡಿ ಬ್ರಯಾನ್ ಅವರೊಂದಿಗಿನ ಸಂಬಂಧ ಬಹಿರಂಗಗೊಂಡ ಬಳಿಕ ಅವರ ಸಂಸ್ಥೆಯ ಎಚ್‍ಆರ್ ಕ್ರಿಸ್ಟಿನ್ ಕ್ಯಾಬೋಟ್ ತನ್ನ ಪತಿಯೊಂದಿಗೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಬ್ರಯಾನ್ ಮತ್ತು ಕ್ರಿಸ್ಟಿನ್ ಕ್ಯಾಬೋಟ್ ಜೋಡಿ ಕೆಮರಾ ಕಣ್ಣಿಗೆ ಸಿಕ್ಕಿ ಬಿದ್ದಿತ್ತು.

Vastu Tips: ರಾತ್ರಿ ಬಾತ್‌ರೂಂ ಬಾಗಿಲು ತೆರೆದಿಟ್ಟು ಮಲಗಬೇಡಿ

ಸಮಸ್ಯೆಗಳನ್ನು ಆಹ್ವಾನಿಸಬಹುದು ಬಾತ್‌ರೂಂ

ರಾತ್ರಿ ಮನೆಯಲ್ಲಿ ಸ್ನಾನಗೃಹದ ಬಾಗಿಲನ್ನು ತೆರೆದು ಇರಿಸುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ. ಮನೆಯ ಸ್ನಾನಗೃಹ ಮತ್ತು ಶೌಚಾಲಯ ನಕಾರಾತ್ಮಕ ಶಕ್ತಿಯ ಕೇಂದ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಾಗಿಲನ್ನು ರಾತ್ರಿ ತೆರೆದು ಇರಿಸುವುದರಿಂದ ನಾನಾ ರೀತಿಯ ಸಮಸ್ಯೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

Vastu Tips: ಆಪತ್ತು ತರಬಹುದು ಅಡುಗೆ ಮನೆಯಲ್ಲಿರುವ ತೆರೆದ ಕಸದ ಬುಟ್ಟಿ

ಅಡುಗೆಮನೆಯಲ್ಲಿ ಇಡಬೇಡಿ ತೆರೆದ ಕಸದ ಬುಟ್ಟಿ

ಅಡುಗೆ ಮನೆ ಸ್ವಚ್ಛ ಮತ್ತು ಶುದ್ಧವಾಗಿರಬೇಕು. ಇಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು. ಅಡುಗೆ ಮನೆಯಲ್ಲಿ ತೆರೆದ ಕಸದ ಬುಟ್ಟಿಯನ್ನು ಇಡುವುದು ಅಪಾಯವನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಅಡುಗೆ ಮನೆಯಲ್ಲಿ ಯಾವತ್ತೂ ತೆರೆದ ಕಸದ ಬುಟ್ಟಿಯನ್ನು ಇಡಬೇಡಿ.

Vasudha Chakravarthy: ನಿಗೂಢವಾಗಿ ಸಾವನ್ನಪ್ಪಿದ ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ವಸುಧಾ ಚಕ್ರವರ್ತಿ

ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ನಿಗೂಢ ಸಾವು

ಕೆಲವು ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ವಸುಧಾ ಚಕ್ರವರ್ತಿ ಅವರ ಶವ ಶನಿವಾರ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ. ಇವರು ಆಗಸ್ಟ್ 27ರಂದು ಬೆಂಗಳೂರಿನಿಂದ ಕೊಲ್ಲೂರಿಗೆ ಬಂದಿದ್ದು, ಅತಿಥಿ ಗೃಹದ ಮುಂದೆ ತಮ್ಮ ಕಾರನ್ನು ನಿಲ್ಲಿಸಿ ದೇವಾಲಯಕ್ಕೆ ಬಂದಿದ್ದರು.

IndiGo Flight: ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ʼಹರ್ ಹರ್ ಮಹಾದೇವ್ʼ ಘೋಷಣೆ ಕೂಗಿದ ವಕೀಲ

ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಗಲಾಟೆ ಮಾಡಿದ ವಕೀಲ

ದೆಹಲಿ-ಕೋಲ್ಕತ್ತಾ ಇಂಡಿಗೋ ವಿಮಾನದಲ್ಲಿ ಸೋಮವಾರ ಕುಡಿದ ಮತ್ತಿನಲ್ಲಿದ್ದ ವಕೀಲರೊಬ್ಬರು ಹರ್ ಹರ್ ಮಹಾದೇವ್ ಎಂಬ ಧಾರ್ಮಿಕ ಘೋಷಣೆಗಳನ್ನು ಕೂಗಿದರು. ಈ ವಿಚಾರದಲ್ಲಿ ವಿಮಾನ ಸಿಬ್ಬಂದಿಯೊಂದಿಗೆ ಅವರು ಜಗಳವಾಡಿದ್ದರಿಂದ ವಿಮಾನವು 30 ನಿಮಿಷಗಳಿಗೂ ಹೆಚ್ಚು ಕಾಲ ಪಾರ್ಕಿಂಗ್ ಬೇಯಲ್ಲಿ ಸಿಲುಕಿಕೊಂಡಿತ್ತು.

Loading...