ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಟೈಂ' ಚೆನ್ನಾಗಿದ್ದರೆ ಮುಳುಗಿದರೂ ಗೊತ್ತಾಗುತ್ತೆ ?

ಜಲಗಂಡಾಂತರಕ್ಕೆ ಸಿಕ್ಕಿ ಆಗುವ ಜೀವಹಾನಿಯನ್ನು ತಡೆಗಟ್ಟಲು ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯ ಹೊಸ ಆವಿಷ್ಕಾರ ಮಾಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸೆಂಜಿತ್ ಚಾಣಕ್ ನೇತೃತ್ವದ ತಂಡ ಎಐ ಆಧಾರಿತ ಪೋರ್ಟಬಲ್ ಮಾನಿಟರಿಂಗ್ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಜಲಗಂಡಾಂತರಕ್ಕೆ ಶೀಘ್ರದಲ್ಲೇ ಮದ್ದು: ಜೀವ ರಕ್ಷಕ ಗಡಿಯಾರ

Profile Ashok Nayak Jun 18, 2025 11:31 AM

ಕರಿಯಪ್ಪ, ಹೆಗ್ಗಡದಿನ್ನಿ

ಜಲಗಂಡಾಂತರಕ್ಕೆ ಸಿಕ್ಕಿ ಆಗುವ ಜೀವಹಾನಿಯನ್ನು ತಡೆಗಟ್ಟಲು ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯ ಹೊಸ ಆವಿಷ್ಕಾರ ಮಾಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸೆಂಜಿತ್ ಚಾಣಕ್ ನೇತೃತ್ವದ ತಂಡ ಎಐ ಆಧಾರಿತ ಪೋರ್ಟಬಲ್ ಮಾನಿಟರಿಂಗ್ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದರ ಬಳಕೆ, ಉಪಯೋಗ ಹೇಗೆ? ಎನುವುದರ ಮಾಹಿತಿ ಇಲ್ಲಿದೆ .

ವಾರ್ಷಿಕ 30 ಲಕ್ಷ ಜನ ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ವರದಿ. ನೀರಿನಲ್ಲಿ ಮುಳುಗಿ ಮೃತಪಡುವ ವರ ಪೈಕಿ ಮಕ್ಕಳು ಹಾಗೂ ಯುವಕರ ಸಂಖ್ಯೆ ಅಧಿಕ. ಶೇಕಡಾ 92ರಷ್ಟು ಮಂದಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲೇ ಜಲಗಂಡಾಂತರಕ್ಕೆ ಸಿಕ್ಕಿ ಉಸಿರು ಬಿಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಜನಸಂಖ್ಯೆಯ ಬಲಾಢ್ಯ ರಾಷ್ಟ್ರ ಭಾರತದ್ದೇ ಪಾರಮ್ಯ.

ಇದನ್ನೂ ಓದಿ: Roopa Gururaj Column: ತುಳಿಯುವವರು ಸಾವಿರ ಮೇಲೆತ್ತುವನು ಒಬ್ಬನೇ !

ನಮ್ಮ ದೇಶದಲ್ಲಿ ವಾರ್ಷಿಕ ಲಕ್ಷಾಂತರ ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಯುವಕ-ಯುವತಿಯ ಸಂಖ್ಯೆಯೇ ಹೆಚ್ಚು. ಜಲಗಂಡಾಂತದಿಂದ ಮಕ್ಕಳು ಹಾಗೂ ಯುವ ಶಕ್ತಿಯ ನ್ನು ಪಾರು ಮಾಡಲು ವಿಜ್ಞಾನಿಗಳು ಸಾಕಷ್ಟು ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.

ಜಲಗಂಡಾಂತರದಿಂದ ಉಂಟಾಗುವ ಸಾವು-ನೋವುಗಳಿಗೆ ಪೂರ್ಣ ವಿರಾಮ ಇಡುವ ಸಕಾಲ ಬಂದಿದೆ. ಈ ನಿಟ್ಟಿನಲ್ಲಿ ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದ ಹೊಸ ಆವಿಷ್ಕಾರ ವನ್ನು ಮಾಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸೆಂಜಿತ್ ಚಾಣಕ್ ನೇತೃತ್ವದ ತಂಡ ನೀರಲ್ಲಿ ಮುಳುಗಿದವರನ್ನು ಹಾಗೂ ಮುಳುಗು ವವರನ್ನು ಪತ್ತೆ ಹಚ್ಚಲು ಅತ್ಯಾಧುನಿಕ ಎಐ ಆಧಾರಿತ ಪೋರ್ಟಬಲ್ ಮಾನಿಟರಿಂಗ್ ಸಾಧನ ವನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ.

ಯಾರಿಗೆಲ್ಲ ಉಪಯೋಗ?

ಈಜಾಡುವವರು, ಈಜು ಕಲಿಯುವವರು, ಜಲಕ್ರೀಡೆಗಳನ್ನು ಆಡುವವರು, ಜಲ ಸಾಹಸಗಳನ್ನು ಮಾಡುವವರು ನೀರಿನಲ್ಲಿ ಮುಳುಗುತ್ತಿದ್ದರೆ ಅಥವಾ ನೀರಿನಿಂದ ಜೀವಕ್ಕೆ ಆಪತ್ತು ಬರುವ ಸಂದರ್ಭ ಇದ್ದರೆ ಈ ಸಾಧನ ಅಳವಡಿಸಿಕೊಂಡವರು ಸುರಕ್ಷಿತ ಆಗಲಿದ್ದಾರೆ. ನದಿ, ಸರೋವರ, ಕೆರೆ, ಬಾವಿ ಸೇರಿ ನೀರಿನ ಯಾವುದೇ ಮೂಲದಲ್ಲಿ ವ್ಯಕ್ತಿ ಮುಳುಗಿದರೂ ಈ ಅತ್ಯಾಧುನಿಕ ಪೋರ್ಟಬಲ್ ಮಾನಿಟರಿಂಗ್ ಸಾಧನ ಕೆಲವೇ ಸೆಕೆಂಡುಗಳಲ್ಲಿ ಜೀವಹಾನಿ ತಡೆಯಲಿದೆ.

watch

ವ್ಯಕ್ತಿ ಮುಳುಗಿದ ಸ್ಥಳ, ನೀರಿನ ಪ್ರಮಾಣ, ಹೃದಯ ಬಡಿತ, ನಾಡಿಮಿಡಿತ, ನೀರಿನಲ್ಲಿ ಮುಳುಗಿದ ವ್ಯಕ್ತಿ ಎಷ್ಟು ಆಳದಲ್ಲಿ , ಯಾವ ಸ್ಥಳದಲ್ಲಿದ್ದಾನೆ. ಆರೋಗ್ಯ ಸ್ಥಿತಿ ಯಾವ ಹಂತದಲ್ಲಿದೆ ಎಂಬು ದನ್ನು ಈ ಸಾಧನ ನಿಖರವಾಗಿ ಮಾಹಿತಿ ನೀಡಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ?

ಈ ನವೀನ ಸುರಕ್ಷತಾ ಸಾಧನವು ರಿಯಲ್-ಟೈಮ್ ಸೆನ್ಸಾರ್‌ಗಳು ಮತ್ತು ಡೇಟಾ ವಿಶ್ಲೇಷಣೆಯನ್ನು ಸಂಯೋಜಿಸುತ್ತದೆ. ಈಜು ಬರುವ ಹಾಗೂ ಬಾರದೆ ಇರುವವರು ನೀರಿನಲ್ಲಿ ನಿತ್ರಾಣಗೊಂಡು ಮುಳುಗುವ ಸನ್ನಿವೇಶ ಇದ್ದರೆ ಅಂತಹ ಪ್ರಾಥಮಿಕ ಲಕ್ಷಣಗಳನ್ನು ಈ ಸಾಧನ ಪತ್ತೆ ಹಚ್ಚಲಿದೆ. ರಕ್ಷಣಾ ತಂಡಗಳು ಹಾಗೂ ಡಿವೈಸ್ ಮೇಲ್ವಿಚಾರಕರಿಗೆ ಮಾನವ ಸಂಪನ್ಮೂಲದ ಸಹಾಯವಿಲ್ಲದೇ ತ್ವರಿತ ಸಂದೇಶವನ್ನು ಸೆನ್ಸಾರ್ ಮೂಲಕ ರವಾನೆ ಮಾಡಲಿದೆ. ಜಿಪಿಎಸ್ ಲೊಕೆಷನ್ ಆಧಾರದ ಮೇಲೆ ಈ ಸಾಧನ ನಿಭಾಯಿಸುವವ ರಿಗೆ ಹಾಗೂ ಸ್ಥಳೀಯ ರಕ್ಷಣಾ ತಂಡಗಳಿಗೆ ಮೊಬೈಲ್ ಆಪ್ ಮೂಲಕ ತುರ್ತು ಸಂದೇಶ ರವಾನೆ ಆಗಲಿದೆ.

ಸದ್ಯದಲ್ಲೇ ಮಾರುಕಟ್ಟೆಗೆ

ಮುಂದಿನ ದಿನಮಾನಗಳಲ್ಲಿ ಜಲಗಂಡಾತರಕ್ಕೆ ಆಪತ್ಬಾಂಧವ ಆಗಲಿರುವ ಈ ಸಾಧನ ಗಡಿಯಾ ರದ ಆಕಾರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಬಳಕೆಗೆ ಸುಲಭ ಮತ್ತು ಆತ್ಯಾಧುನಿಕ ತಂತ್ರಾಂಶ ಗಳನ್ನು ಒಳಗೊಂಡಿದೆ. ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ಕ್ಷೇತ್ರದಲ್ಲಿ ತೊಡಗಿಸಿಕೊಂಡ ವೃತ್ತಿಪರರ ರಕ್ಷಣೆಯ ಉದ್ದೇಶವನ್ನಿಟ್ಟುಕೊಂಡು ಈ ಸಾಧನವನ್ನು ಕಂಡು ಹಿಡಿಯಲಾಗಿದೆ.

ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಸಾಧನದ ಕಾರ್ಯಕ್ಷಮತೆ ಸಾಧಕ-ಬಾಧಕಗಳನ್ನು ಪರಿಶೀಲನೆ ನಡೆಸಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿ ಕೊಟ್ಟಿದೆ. 3-4 ಕಂಪನಿಗಳು ಈ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿವೆ. ಕೇವಲ 300 ರಿಂದ 400 ರೂಪಾಯಿಯಲ್ಲಿ ಮುಂದಿನ 6 ತಿಂಗಳಲ್ಲಿ ಗ್ರಾಹಕರ ಕೈಗೆ ಈ ಸಾಧನ ಲಭ್ಯ ಎಂದಿದ್ದಾರೆ ಬನಾರಸ್ ಹಿಂದು ವಿವಿ ವಾರಾಣಸಿಯ ಪ್ರಾಧ್ಯಾಪಕ ಡಾ.ಪ್ರಸೆಂಜಿತ್ ಚಾಣಕ್.