ಪ್ರವಾಹ ಪೀಡಿತ ನೇಪಾಳದ ಸುರಂಗದಲ್ಲಿ 93 ಕಾರ್ಮಿಕರು ನಾಪತ್ತೆ: ಪತ್ತೆಗಾಗಿ ಡ್ರೋನ್ ಬಳಸಿದರೂ ಪತ್ತೆಯಾಗದ ಸಂತ್ರಸ್ತರು
Workers Missing in Nepal Tunnel: ನೇಪಾಳದ ಪ್ರವಾಹ ಪೀಡಿತ ಜಲವಿದ್ಯುತ್ ಯೋಜನೆಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ, ಥರ್ಮಲ್ ಡ್ರೋನ್ಗಳನ್ನು ಬಳಸಿ ಸುರಂಗದ ಕೊನೆಯ ಭಾಗದವರೆಗೂ ತಲುಪಿದರೂ ಯಾವುದೇ ಸಂತ್ರಸ್ತರು ಪತ್ತೆಯಾಗಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.
ನೇಫಾಳದಲ್ಲಿ ಡ್ರೋನ್ ಬಳಸಿದರೂ ಪತ್ತೆಯಾಗದ ಕಾರ್ಮಿಕರು -
ಕಠ್ಮಂಡು, ಆ. 31: ನೇಪಾಳದ ಪ್ರವಾಹ (Nepal Flood) ಪೀಡಿತ ಜಲವಿದ್ಯುತ್ ಯೋಜನೆಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ ಥರ್ಮಲ್ ಡ್ರೋನ್ಗಳನ್ನು (Thermal Drones) ಬಳಸಿ ಸುರಂಗದ ಕೊನೆಯ ಭಾಗದವರೆಗೂ ತಲುಪಿದರೂ ಯಾವುದೇ ಸಂತ್ರಸ್ತರು ಪತ್ತೆಯಾಗಿಲ್ಲ. ರಸುವಾ ಜಿಲ್ಲೆಯ ರಸುವಾಗಧಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಕನಿಷ್ಠ 93 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಸದ್ಯಕ್ಕೆ ಅವರ ಯಾವುದೇ ಸುಳಿವು ಪತ್ತೆಯಾಗಿಲ್ಲ.
ರಸುವಾಗಧಿ ಸುರಂಗದಲ್ಲಿ ನಡೆದ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ನೇಪಾಳದ ಸೇನಾ ಸಿಬ್ಬಂದಿ, ಎಂಜಿನಿಯರ್ಗಳು ಮತ್ತು ಡ್ರೋನ್ ತಂಡ ಇತ್ತು. ಭೋಟೆ ಕೋಶಿ ನದಿಯಲ್ಲಿ ಉಂಟಾದ ಭಾರಿ ಪ್ರವಾಹದ ಹಿನ್ನೆಲೆಯಲ್ಲಿ, ಕಾರ್ಮಿಕರು ಸುರಂಗದ ಅತ್ಯಂತ ಕೊನೆಯ ಭಾಗದಲ್ಲಿ ಸಿಲುಕಿಕೊಂಡಿರಬಹುದು ಎಂಬ ಆತಂಕದ ಕಾರಣ ರಕ್ಷಣಾ ಸಿಬ್ಬಂದಿ ಸುರಂಗದ ಒಳಗೆ ಪ್ರವೇಶಿಸಿದ್ದರು.
ತಂಡವು ಅಂತಿಮ ಹಂತವನ್ನು ತಲುಪುವಲ್ಲಿ ಯಶಸ್ವಿಯಾಯಿತು. ಒಳಭಾಗವನ್ನು ಹುಡುಕಲು ಡ್ರೋನ್ಗಳನ್ನು ಬಳಸಲಾಯಿತು. ಆದರೆ ಒಳಗೆ ಯಾರಾದರೂ ಇರಬಹುದು ಎಂಬುದಕ್ಕೆ ಯಾವುದೇ ಸೂಚನೆ ಇರಲಿಲ್ಲ. 111 ಮೆಗಾವ್ಯಾಟ್ ರಸುವಾಗಧಿ ಯೋಜನೆಯ ಸುರಂಗವನ್ನು ಶೋಧಿಸಿದ ನಂತರ ಸೇನೆಯ ನೇತೃತ್ವದ ತಂಡವು ಹಿಂತಿರುಗಿದೆ ಎಂದು ಪ್ರಧಾನಮಂತ್ರಿ ಸಚಿವಾಲಯ ತಿಳಿಸಿದೆ.
ಇಲ್ಲಿದೆ ವಿಡಿಯೊ:
93 Workers Disappeared Inside Nepal Tunnel. Thermal Drones Found Nothing https://t.co/1nPZt4iDYJ pic.twitter.com/hswRNWakAa
— NDTV (@ndtv) August 31, 2026
ಡ್ರೋನ್ ತಂಡವು ಸುರಂಗದಲ್ಲಿ ಯಾರೂ ಇಲ್ಲ ಎಂಬುದನ್ನು ತಿಳಿದ ನಂತರ, ಹುಡುಕಾಟವನ್ನು ಕೈ ಬಿಡಲಾಯಿತು. ನೇಪಾಳದಲ್ಲಿ ಪ್ರವಾಹದ ನೀರು ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದು, ನೂರಾರು ಕಾರ್ಮಿಕರು ಜಲವಿದ್ಯುತ್ ಯೋಜನೆಗಳಲ್ಲಿ ಭೂಗತರಾಗಿದ್ದಾರೆ. ಕಾಣೆಯಾದವರು ಸುರಂಗಗಳೊಳಗೆ ಸಿಲುಕಿಕೊಂಡಿದ್ದಾರೆಯೇ, ಎತ್ತರದ ಪ್ರದೇಶಗಳಿಗೆ ಪರಾರಿಯಾಗಿದ್ದಾರೆಯೇ ಅಥವಾ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಯೇ ಎಂಬುದು ಇನ್ನೂ ತಿಳುದು ಬಂದಿಲ್ಲ.
ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಭಾರತದ ತಲುಪಿದ 2 ಗೋಲ್ಡನ್ ರಿಟ್ರೈವರ್ ನಾಯಿಗಳು!
ಆಗಸ್ಟ್ 26ರಿಂದ ಸುಮಾರು 900ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಜತೆಗೆ ಸುಮಾರು 4,500 ಜನರು ನಾಪತ್ತೆಯಾಗಿದ್ದಾರೆ. ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ 933 ಜನರು ಕಾಣೆಯಾಗಿದ್ದಾರೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಆರ್ಆರ್ಎಂಎ) ತಿಳಿಸಿದೆ.
ರಕ್ಷಣಾ ಕಾರ್ಯಕರ್ತರು ಇಲ್ಲಿಯವರೆಗೆ 279 ಜನರನ್ನು ಜಲವಿದ್ಯುತ್ ಸುರಂಗಗಳಿಂದ ರಕ್ಷಿಸಿದ್ದಾರೆ. ಇದರಲ್ಲಿ ಅಪ್ಪರ್ ತ್ರಿಶೂಲಿ -1 ಯೋಜನೆಯಿಂದ ರಕ್ಷಿಸಲ್ಪಟ್ಟ 254 ಜನರು ಮತ್ತು ಲ್ಯಾಂಗ್ಟಾಂಗ್ ಖೋಲಾ ಸ್ಥಳದಿಂದ ರಕ್ಷಿಸಲ್ಪಟ್ಟ 18 ಜನರು ಸೇರಿದ್ದಾರೆ. ರಸುವಾ ಮತ್ತು ನುವಕೋಟ್ನಲ್ಲಿನ 11 ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ 897 ಜನರು ಸಂಪರ್ಕದಿಂದ ದೂರ ಉಳಿದಿದ್ದಾರೆ ಎಂದು ಐಪಿಪಿಎಎನ್ ತಿಳಿಸಿದೆ.