ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ಆಯಾಸವೇ? ದೈಹಿಕ, ಮಾನಸಿಕ ಚೈತನ್ಯಕ್ಕೆ ಕಪ್ಪು ಎಳ್ಳು ಸೇವಿಸಿ

Black Sesame Seeds: ಆಧುನಿಕ ಜೀವನ ಶೈಲಿಯಲ್ಲಿ ಆಯಾಸ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಎಂಟು ಗಂಟೆಗಳ ಕಾಲ ಹಾಸಿಗೆಯಲ್ಲಿ ಕಳೆದರೂ ಸುಸ್ತು, ಒತ್ತಡ ಎನ್ನುವುದು ಮತ್ತಷ್ಟು ನಿಶ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರವು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುವಂತಿರಬೇಕು. ನಿಮ್ಮ ಆಹಾರದಲ್ಲಿ ಎಳ್ಳಿನಂತಹ ಬೀಜಗಳನ್ನು ಸೇರಿಸಿಕೊಳ್ಳುವುದು ಉತ್ತಮ. ಈ ಬೀಜದಲ್ಲಿ ಆಕ್ಸಲೇಟ್ಸ್‌ ಮತ್ತು ಫೈಟಿಕ್ ಆ್ಯಸಿಡ್, ಆ್ಯಂಟಿ-ನ್ಯೂಟ್ರಿಯೆಂಟ್ಸ್‌ನಂತಹ ಹಲವು ಪೋಷಕಾಂಶಗಳು ಇವೆ.

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳಿನ ಸೇವನೆ ಮಾಡಿ!

ಸಾಂದರ್ಭಿಕ ಚಿತ್ರ -

Profile
Pushpa Kumari Aug 27, 2026 10:30 PM

ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ಆಯಾಸ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಎಂಟು ಗಂಟೆಗಳ ಕಾಲ ಹಾಸಿಗೆಯಲ್ಲಿ ಕಳೆದರೂ ಸುಸ್ತು, ಒತ್ತಡ ಎನ್ನುವುದು ಮತ್ತಷ್ಟು ನಿಶ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರವು ದೇಹಕ್ಕೆ ಅಗತ್ಯ ಪೋಷಕಾಂಶ ವನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದಲ್ಲಿ ಎಳ್ಳಿನಂತಹ ಬೀಜಗಳನ್ನು (Black Sesame Seeds) ಸೇರಿಸಿಕೊಳ್ಳುವುದು ಉತ್ತಮ. ಈ ಬೀಜದಲ್ಲಿ ಆಕ್ಸಲೇಟ್ಸ್‌ ಮತ್ತು ಫೈಟಿಕ್ ಆ್ಯಸಿಡ್, ಆ್ಯಂಟಿ-ನ್ಯೂಟ್ರಿಯೆಂಟ್ಸ್‌ನಂತಹ ಹಲವು ಪೋಷಕಾಂಶಗಳು ಇವೆ. ಇವು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಬಿಳಿ ಎಳ್ಳಿಗೆ ಹೋಲಿಸಿದರೆ ಕಪ್ಪು ಎಳ್ಳಿನ ಸಿಪ್ಪೆಯಲ್ಲಿ ಅತಿ ಹೆಚ್ಚು ಪೋಷಕಾಂಶಗಳಿರುತ್ತವೆ. ಇದರ ಆರೋಗ್ಯ ಪ್ರಯೋಜನಗಳ ವಿವರ ಇಲ್ಲಿದೆ:

ರಕ್ತಹೀನತೆ ನಿವಾರಣೆ

ಕಬ್ಬಿಣ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ದೇಹದ ಪ್ರತಿಯೊಂದು ಅಂಗಕ್ಕೂ ಆಮ್ಲಜನಕ ತಲುಪಿಸಲು ಸಹಾಯ ಮಾಡುತ್ತದೆ. ಕಪ್ಪು ಎಳ್ಳು ಹೆಚ್ಚಿನ ಸಾಂದ್ರತೆಯಲ್ಲಿ ಕಬ್ಬಿಣ ಮತ್ತು ತಾಮ್ರ ಎರಡನ್ನೂ ನೀಡುತ್ತದೆ. ಇದು ನಿಮ್ಮ ಜೀವಕೋಶಗಳನ್ನು ಸಂರಕ್ಷಿಸಲು ನೆರವಾಗುತ್ತದೆ.

ದೈಹಿಕ ಮತ್ತು ಮಾನಸಿಕ ಚೈತನ್ಯ

ನಿಮ್ಮ ದೇಹವು ಸೆರುಲೋಪ್ಲಾಸ್ಮಿನ್ ಅನ್ನು ಸಂಶ್ಲೇಷಿಸಲು ತಾಮ್ರದ ಅಗತ್ಯವಿರುತ್ತದೆ. ಇದು ಕಬ್ಬಿಣವನ್ನು ಜೀವಕೋಶ ಮೈಟೊಕಾಂಡ್ರಿಯಾಕ್ಕೆ ಸಾಗಿಸಲು ಅಗತ್ಯವಿರುವ ಕಿಣ್ವ. ಅದೇ ರೀತಿ ವಿಟಮಿನ್ ಬಿ1, ಬಿ3, ಹಾಗೂ ಮೆಗ್ನೀಸಿಯಮ್ ಸಮೃದ್ಧವಾಗಿದ್ದು, ನರಗಳ ದೌರ್ಬಲ್ಯ ಕಡಿಮೆ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳು ಮತ್ತು ಒತ್ತಡ

ಕಪ್ಪು ಎಳ್ಳು ಆಕ್ಸಿಡೇಟಿವ್ ಒತ್ತಡದ ಗುರುತುಗಳನ್ನು ಕಡಿಮೆ ಮಾಡುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡಿ ನೇರವಾಗಿ ದೈಹಿಕ ಆಯಾಸವನ್ನು ಇಲ್ಲವಾಗಿಸುತ್ತದೆ.

ರಕ್ತ ಪರಿಚಲನೆ ಅಭಿವೃದ್ಧಿ

ಆರೋಗ್ಯಕರ ರಕ್ತನಾಳಗಳ ಸ್ಥಿತಿಸ್ಥಾಪಕತ್ವವು ಸುಗಮ ಪರಿಚಲನೆಯನ್ನು ನೀಡುತ್ತದೆ. ಇದು ಪ್ರಮುಖ ಅಂಗಗಳಿಗೆ ಆಮ್ಲಜನಕವನ್ನು ವೇಗವಾಗಿ ತಲುಪಿಸಲು ಸಹಾಯ ಮಾಡುತ್ತದೆ.

ಸಿಹಿ ತಿಂದರೆ ಒತ್ತಡ ನಿವಾರಣೆಯಾಗುತ್ತೆ ಎನ್ನುವುದು ನಿಜವೆ? ಈ ಬಗ್ಗೆ ತಜ್ಞರು ಹೇಳುವುದೇನು?

ಹೇಗೆ ಸೇವಿಸಬೇಕು?

  • ಎಳ್ಳನ್ನು ಸಣ್ಣ ಉರಿಯಲ್ಲಿ 2-3 ನಿಮಿಷ ಲಘುವಾಗಿ ಹುರಿದು, ತಣ್ಣಗಾದ ಮೇಲೆ ಪುಡಿ ಮಾಡಿ ಇಟ್ಟುಕೊಳ್ಳಿ.
  • ದಿನಕ್ಕೆ 1 ಚಮಚ ಸೇವಿಸಿದರೆ ಸಾಕು.
  • ಕಾಯಿಸಿದ ಹಾಲಿಗೆ 1 ಚಮಚ ಎಳ್ಳಿನ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬಹುದು. ಮೊಸರು ಅಥವಾ ಸ್ಮೂಥಿಗಳ ಮೇಲೆ ಉದುರಿಸಿ ಸೇವಿಸಬಹುದು.