ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anirudh Ravichander: ಬೆಂಗಳೂರಿನಲ್ಲಿ ನಡೆದ ಅನಿರುದ್ಧ್ ಸಂಗೀತ ಸಂಜೆಗೆ ಭರ್ಜರಿ ರೆಸ್ಪಾನ್ಸ್

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ ಮುಂತಾದ ಕಡೆ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊದಲ ಬಾರಿಗೆ ಬೆಂಗಳೂರಿನ ಟೆರಾಫಾರ್ಮ್ ಅರೆನಾದಲ್ಲಿ ಅದ್ಧೂರಿಯಾಗಿ ಜರುಗಿದೆ.

ಅನಿರುದ್ಧ್ ಮ್ಯೂಸಿಕಲ್ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಬೆಂಗಳೂರು ಮಂದಿ

Anirudh Ravichander

Profile Pushpa Kumari Jun 2, 2025 5:42 PM

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಬೆಂಗಳೂರಿನಲ್ಲಿ ಪ್ರಸ್ತುತ ಪಡಿಸಿದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಮ್ಯೂಸಿಕ್ ಹಬ್ಬಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ ಮುಂತಾದ ದೇಶಗಳಲ್ಲಿ ಯಶಸ್ವಿಯಾಗಿ ನಡೆದ ಹುಕುಂ ಟೂರ್ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಟೆರಾಫಾರ್ಮ್ ಅರೆನಾದಲ್ಲಿ ಅದ್ಧೂರಿಯಾಗಿ ಜರುಗಿತು. ಅನಿರುದ್ಧ್ ಸೂಪರ್ ಹಿಟ್ ಹಾಡುಗಳಿಗೆ ಸಂಗೀತ ಪ್ರಿಯರು ತಲೆದೂಗುತ್ತಾ ಕುಣಿದು ಕುಪ್ಪಳಿಸಿದರು.

ಟೆರಾಫಾರ್ಮ್ ಅರೇನಾದಲ್ಲಿ ನಡೆದ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕನ್ಸರ್ಟ್ ಟಿಕೆಟ್ ಸೇಲ್‌ನಲ್ಲಿ ಬೃಹತ್ ದಾಖಲೆ ಸೃಷ್ಟಿ ಮಾಡಿತ್ತು. ಅನಿರುದ್ಧ್ ರವಿಚಂದರ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಕೇವಲ 60 ನಿಮಿಷದಲ್ಲೇ ಅಂದರೆ ಕೇವಲ ಒಂದೇ ಗಂಟೆಯಲ್ಲೇ ಮಾರಾಟವಾಗಿತ್ತು. ಇದೀಗ ಈ ಟೂರ್ ಬೆಂಗಳೂರಿನಲ್ಲಿಯೂ ಧಾಮ್ ಧೂಮ್ ಆಗಿ ನಡೆದಿರುವ ಖುಷಿಯಲ್ಲಿದ್ದಾರೆ ಕೆವಿಎನ್ ಸಂಸ್ಥಾಪಕ ವೆಂಕಟ್ ಎನ್.ನಾರಾಯಣ್.

ಇದನ್ನು ಓದಿ: Chowkidar Movie: ಅಪ್ಪ-ಮಗನ ಬಾಂಧವ್ಯ ಸಾರುವ ಗೀತೆಯ ಮೂಲಕ ಮೋಡಿ ಮಾಡಿದ ʼಚೌಕಿದಾರ್‌ʼ

ಈ ಬಗ್ಗೆ ಮಾತನಾಡಿರುವ ಅವರು, ʼʼಬೆಂಗಳೂರು ಯಾವಾಗಲೂ ಸಂಗೀತವನ್ನು ಅದರ‌ ನಿಜವಾದ ರೂಪದಲ್ಲಿ ಸ್ವೀಕರಿಸಿದೆ. ಇದು ಕೇವಲ ಮ್ಯೂಸಿಕ್ ಕನ್ಸರ್ಟ್ ಅಲ್ಲ, ಇದೊಂದು ಉತ್ಸವ. ಇದು ಕೇವಲ ಆರಂಭ. ಸಾವಿರಾರು ಸಂಗೀತ ಪ್ರಿಯರು ಹಾಡಿಗೆ ಹೆಜ್ಜೆ ಹಾಕುತ್ತಾ, ನೃತ್ಯ ಮಾಡಿದ್ದಾರೆ. ಇದು ಅನಿರುದ್ದ್ ಅವರ ಅಭಿಮಾನಿಗಳ ಬಾಂಧವ್ಯಕ್ಕೆ ಸಾಕ್ಷಿʼʼ ಎಂದರು. ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಅಚ್ಚರಿಗಳನ್ನು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆ ಗಳಿವೆ.