ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ

Dhruvanth: ಬಿಗ್‌ ಬಾಸ್‌ ಸೀಸನ್‌ ಈಗ ಫಿನಾಲೆ ಹಂತ ತಲಪುತ್ತಿದೆ. ಸ್ಪರ್ಧಿಗಳ ಜೊತೆ ಪೈಪೋಟಿ ಜೊತೆಗೆ ವಾದ ವಿವಾದಗಳೂ ಆಗುತ್ತಿವೆ. ನಿನ್ನೆ ತನಕ ಧ್ರುವಂತ್‌ ಹಾಗೂ ಅಶ್ವಿನಿ ಅವರು ತಾಯಿ ಮಗನಂತೆ ಇದ್ದು, ಏಕಾಏಕಿ ಜಗಳ ಮಾಡಿಕೊಂಡಿದ್ದಾರೆ. ಇದರ ಪ್ರೋಮೋ ಕೂಡ ಔಟ್‌ ಆಗಿದೆ. ಆದರೀಗ ಎಲ್ಲವೂ ಬದಲಾಗಿದೆ. ಇಷ್ಟೂ ದಿನ ಧ್ರುವಂತ್‌ ಕಂಡು ಉರಿದು ಬೀಳುತ್ತಿದ್ದ ರಕ್ಷಿತಾ ಈಗ ಧ್ರುವಂತ್‌ ಅವರು ಪಾಪ ಎಂದಿದ್ದಾರೆ.

ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾಗೆ ಮೂಡಿದೆ ಅನುಕಂಪ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 8, 2026 8:09 PM

ಬಿಗ್‌ ಬಾಸ್‌ ಸೀಸನ್‌ (Bigg Boss Kannada 12) ಈಗ ಫಿನಾಲೆ (Finale) ಹಂತ ತಲಪುತ್ತಿದೆ. ಸ್ಪರ್ಧಿಗಳ ಜೊತೆ ಪೈಪೋಟಿ ಜೊತೆಗೆ ವಾದ ವಿವಾದಗಳೂ ಆಗುತ್ತಿವೆ. ನಿನ್ನೆ ತನಕ ಧ್ರುವಂತ್‌ (Dhruvanth) ಹಾಗೂ ಅಶ್ವಿನಿ (Ashwini Gowda) ಅವರು ತಾಯಿ ಮಗನಂತೆ ಇದ್ದು, ಏಕಾಏಕಿ ಜಗಳ ಮಾಡಿಕೊಂಡಿದ್ದಾರೆ. ಇದರ ಪ್ರೋಮೋ (Promo) ಕೂಡ ಔಟ್‌ ಆಗಿದೆ. ಆದರೀಗ ಎಲ್ಲವೂ ಬದಲಾಗಿದೆ. ಇಷ್ಟೂ ದಿನ ಧ್ರುವಂತ್‌ ಕಂಡು ಉರಿದು ಬೀಳುತ್ತಿದ್ದ ರಕ್ಷಿತಾ (Rakshitha Shetty) ಈಗ ಧ್ರುವಂತ್‌ ಅವರು ಪಾಪ ಎಂದಿದ್ದಾರೆ.

ಧ್ರುವಂತ್‌ ತುಂಬಾ ಪಾಪ

ಅಶ್ವಿನಿ ಮೊದಲಿಗೆ ಧ್ರುವಂತ್‌ ತುಂಬಾ ಪಾಪ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಅವರು ನಾನು ಧ್ರುವಂತ್‌ ಅವರನ್ನು ಹೇಟ್‌ ಮಾಡಲ್ಲ. ನನಗೆ ಕೂಡ ಅವರ ಬಗ್ಗೆ ಬೇಜಾರ್‌ ಆಗುತ್ತೆ. ಧ್ರುವಂತ್‌ ಕೂಡ ತುಂಬಾ ಕೆಟ್ಟ ಮನುಷ್ಯ ಅಲ್ಲ. ಅವರ ಒಂದೊಂದು ಮಾತು ಕೂಡ ಇಷ್ಟ ಆಗಲ್ಲ ಎಂದಿದ್ದಾರೆ. ಅತ್ತ ರಾಶಿಕಾ ಅವರು, ಧನುಷ್‌ ಜೊತೆ , ಈಗ ಅಶ್ವಿನಿ ಹಾಗೂ ರಕ್ಷಿತಾ ಒಂದಾಗಿದ್ದಾರೆ ಎಂದಿದ್ದಾರೆ. ಗಿಲ್ಲಿ ಆ ಕ್ಷಣಕ್ಕೆ ಧ್ರುವಂತ್‌ ನ್ಯುಟ್ರಲ್‌ ಆದ್ರಲ್ಲ ಅದಿಕ್ಕೆ ರಕ್ಷಿತಾ ಹೋಗಿರೋದು ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಟವರ್‌ನಿಂದ ಬಿದ್ದ ಸ್ಪರ್ಧಿ, ಯಾರ ಕೈ ಸೇರಲಿದೆ ಮೊದಲ ಟಿಕೆಟ್?

ಅತ್ತ ಅಶ್ವಿನಿ ಅವರು ರಕ್ಷಿತಾಗೆ, ಇನ್ನು ನಾವು ಒಂದು ವಾರ ಇರ್ತೀವಿ. ನಮ್ಮ ಪಾಪ ಕರ್ಮ , ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಬಿಟ್ಟು ಬಿಡಬೇಕು ಎಂದಿದ್ದಾರೆ.

ಇದಕ್ಕೂ ಮುಂಚೆ ನಾಮಿನೇಶನ್‌ ಸಮಯದಲ್ಲಿ ರಕ್ಷಿತಾ ಅವರು ಧ್ರುವಂತ್‌ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದರು. ಮನೆಯಲ್ಲಿ ಧ್ರುವಂತ್‌ ಅವರು ರಕ್ಷಿತಾ ಅಸಹ್ಯ ಎಂಬ ಪದ ಬಳಕೆ ಮಾಡಿದ್ದರು. ಈ ರೀತಿ ಮಾತನಾಡಿದ್ದಕ್ಕೆ ರಕ್ಷಿತಾ ಫುಲ್‌ ಗರಂ ಆಗಿದ್ದರು. ನಾಮಿನೇಶನ್‌ ವೇಳೆಯೂ ಈ ಕಾರಣಗಳನ್ನು ಹೇಳಿ, ನಿಮಗೆ ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡಲ್ಲ ಎಂದಿದ್ದರು.

ಧ್ರುವಂತ್‌-ಅಶ್ವಿನಿ ಜಗಳ; ಗಿಲ್ಲಿಗೆ ಸಖತ್‌ ಮಜಾ!

ಧ್ರುವಂತ್‌ ಹಾಗೂ ಅಶ್ವಿನಿ ಮಧ್ಯೆ ಸಣ್ಣ ಜಗಳ ಆಗಿದೆ. ಇದು ಮನೆಯವರ ಗಮನಕ್ಕೆ ಬಂತು. ಏನು ಮ್ಯಾಟರ್‌ಗೆ ಜಗಳ ಆಗಿದ್ದು? ನೋಡಿ ಸಖತ್‌ ಬೇಜಾರ್‌ ಆಯ್ತು ಎಂದಿದ್ದಾರೆ ಗಿಲ್ಲಿ. ಅದಕ್ಕೆ ಧ್ರುವಂತ್‌, ಕಣ್ಣು ಮುಂದೆ ಆಗ್ತಾ ಇರೋದು ನೋಡಿಕೊಂಡು ಸುಮ್ಮನೆ ಇರೋಕೆ ಆಗ್ತಿಲ್ಲ ಎಂದಿದ್ದಾರೆ.

ಇದಕ್ಕೆ ಕುಮ್ಮಕ್ಕು ಕೊಟ್ಟ ಗಿಲ್ಲಿ, ಹೌದಣ್ಣ ಎಂದಿದ್ದಾರೆ. ರಘು ಕೂಡ ಗಿಲ್ಲಿ ಮತ್ತು ಧನುಷ್‌ ಜೊತೆ, ಅಶ್ವಿನಿ ಒಬ್ಬರೇ ಇದ್ದಾಗ, ಇವರೇ ಸಪೋರ್ಟ್‌ ಮಾಡಿದ್ದು ಎಂದಿದ್ದಾರೆ. ಇನ್ನು ಸಹವಾಸ ಬೇಡ ಅಂತ ಸೈಲೆಂಟ್‌ ಆಗ್ತೀರಾ ಅಂತ ಗಿಲ್ಲಿ ಮತ್ತಷ್ಟು ಧ್ರುವಂತ್‌ಗೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್‌, ಆಗಿರೋದು, ಆಗುತ್ತ ಇರೋದು ಎಲ್ಲದೂ ಒಳ್ಳೆಯದಕ್ಕೆ ಎಂದಿದ್ದಾರೆ ಧ್ರುವಂತ್‌. ಅಶ್ವಿನಿ ಹಾಗೂ ಧ್ರುವಂತ್‌ ಜಗಳ ಮನೆಮಂದಿ ಸಖತ್‌ ಹಬ್ಬ ಮಾಡಿದ್ದಾರೆ.

ಇದನ್ನೂ ಓದಿ: ‌Bigg Boss Kannada 12: ಗಿಲ್ಲಿ ನಟನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌! ಮಿಕ್ಕ ಸ್ಪರ್ಧಿಗಳಿಗೆ ಎಷ್ಟಿದ್ದಾರೆ ಬೆಂಬಲಿಗರು?

ಇನ್ನು ನಿನ್ನೆಯಷ್ಟೇ ಧ್ರುವಂತ್‌ ಅವರು ಕ್ಯಾಮೆರಾ ಮುಂದೆ , ನಾನು ಅಶ್ವಿನಿ ಅವರನ್ನು ತಾಯಿಯ ಸ್ಥಾನದಲ್ಲಿ ನೋಡುತ್ತಾ ಇದ್ದೇನೆ. ಅವರಿಗೆ ಒಬ್ಬರ ಸಪೋರ್ಟ್‌ ಬೇಕಿದೆ. ಆದರೆ ನಾನು ವೈಯಕ್ತಿಕವಾಗಿಯೇ ಆಡ್ತಾ ಇದ್ದೇನೆ. ಯಾವುದೇ ಗ್ರೂಪ್‌ಗೂ ಸೇರಿಲ್ಲ ಅಂತ ಕ್ಲಾರಿಟಿ ಬೇರೆ ಕೊಟ್ಟಿದ್ದರು. ಅಷ್ಟೇ ಅಲ್ಲ ಮನೆಯಲ್ಲಿ ಈಗ ಅಶ್ವಿನಿ ಹಾಗೂ ಧ್ರುವಂತ್‌ ಪ್ರತ್ಯೇಕವಾಗಿ ಅಡುಗೆ ಬೇರೆ ಮಾಡಿಕೊಳ್ಳುತ್ತಿದ್ದಾರೆ. ಆದರೀಗ ಏಕಾಏಕಿ ಇವರಿಬ್ಬರ ಮಧ್ಯೆ ಮನಸ್ತಾಪ ಶುರುವಾಗಿದೆ.