ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮದುವೆ ಆಗಲು ಒಪ್ಪದ ಪೂಜಾ: ಕಷ್ಟಕ್ಕೆ ಸಿಲುಕಿಕೊಂಡ ಕಿಶನ್

ನೀನು ಈತರ ನಿರ್ಧಾರ ತೆಗೊತಿ ಅಂತ ನಾನು ಅಂದುಕೊಂಡಿರಲಿಲ್ಲ.. ಅವರು ನಮ್ಮ ಮದುವೆಗೆ ಒಪ್ಪಿಕೊಂಡಿಲ್ಲ ಅಂದ್ರೆ ನಾವು ಅವರನ್ನು ಕನ್ವೆನ್ಸ್ ಮಾಡಬೇಕು.. ಅದು ನಮ್ಮ ಜವಾಬ್ದಾರಿ.. ಅದು ಬಿಟ್ಟು ಈರೀತಿ ಓಡಿ ಬಂದ್ರೆ ಹೇಗೆ.. ನನ್ಗೆ ಇದು ಸರಿ ಕಾಣಿಸುತ್ತಿಲ್ಲ ಎಂದು ಪೂಜಾ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾಳೆ.

ಮದುವೆ ಆಗಲು ಒಪ್ಪದ ಪೂಜಾ: ಕಷ್ಟಕ್ಕೆ ಸಿಲುಕಿಕೊಂಡ ಕಿಶನ್

Bhagya Lakshmi serial

Profile Vinay Bhat Jun 26, 2025 11:51 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಎಪಿಸೋಡ್ ಕುತೂಹಲ ಮೂಡಿಸಿದೆ. ಯಾರಿಗೂ ಹೇಳದೆ ಕಿಶನ್, ಪೂಜಾಳನ್ನು ಮದುವೆ ಆಗಲೆಂದು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾನೆ. ಸ್ವತಃ ಪೂಜಾಗೆ ಕೂಡ ಈ ವಿಚಾರ ತಿಳಿದಿಲ್ಲ. ಹೂವಿನ ಮಾಲೆ ಬದಲಾಯಿಸುವ ಘಳಿಗೆಯಲ್ಲೇ ಪೂಜಾಗೆ ನಾವು ಇವತ್ತು ಮದುವೆ ಆಗುತ್ತಿದ್ದೇವೆ ಎಂಬ ವಿಚಾರ ಗೊತ್ತಾಗಿದೆ. ಮನೆಯಲ್ಲಿ ಯಾರಿಗೂ ಹೇಳದೆ ಇಬ್ಬರೂ ದೇವಸ್ಥಾನಕ್ಕೆ ಬಂದಿದ್ದಾರೆ. ಆದರೆ, ಪೂಜಾ ನಾವು ಈರೀತಿ ಮದುವೆ ಆಗುವುದ ಸರಿಯಲ್ಲ ಎಂದು ಹೇಳಿದ್ದಾಳೆ.

ಪೂಜಾ-ಕಿಶನ್ ಮದುವೆ ಯಾವುದೇ ಕಾರಣಕ್ಕೂ ಆಗ ಬಾರದು ಎಂದು ಆದೀಶ್ವರ್, ಮೀನಾಕ್ಷಿ ಮತ್ತು ಕನ್ನಿಕಾ ನಾನಾ ಪ್ರಯತ್ನ ಮಾಡಿದರು. ಎಂಗೇಜ್ಮೆಂಟ್ ಹೇಗೋ ಆಯ್ತು ಆದ್ರೆ ಮದುವೆ ಮಾತ್ರ ಯಾವುದೇ ಕಾರಣಕ್ಕೆ ಆಗಲು ಬಿಡಲ್ಲ ಎಂದು ಮೀನಾಕ್ಷಿ ಉಪವಾಸ ಕೂತಿದ್ದಳು. ಕಿಶನ್​ನ ಅನೇಕ ಬಾರಿ ಕನ್ವೆನ್ಸ್ ಮಾಡಲು ಟ್ರೈ ಮಾಡಿದರು. ಕಿಶನ್ ಬಳಿ ಎಮೋಷನ್ ಡ್ರಾಮಾ ಆಡಿ ಈ ಮದುವೆ ಆಗಬಾರದು ಎಂದು ಪೀಡಿಸುತ್ತಿದ್ದರು.

ಈ ಸಂದರ್ಭ ಕಿಶನ್​ಗೆ ಏನು ಮಾಡಬೇಕು ಎಂದು ದೋಚುವುದಿಲ್ಲ.. ಅತ್ತ ಮನೆಯವರು ಇತ್ತ ಪೂಜಾ.. ಪೂಜಾಳನ್ನು ಬಿಟ್ಟರೆ ಮತ್ಯಾರನ್ನೂ ನಾನು ಮದುವೆ ಆಗುವುದಿಲ್ಲ ಎಂದು ಕಿಶನ್ ಪಟ್ಟು ಹಿಡಿದಿದ್ದಾನೆ. ಕೊನೆಯಲ್ಲಿ ಬೇರೆ ದಾರಿಯಿಲ್ಲದೆ ಕಿಶನ್ ಮನೆಯಲ್ಲಿ ನಾನು ಮದುವೆ ಆಗಲು ಹೊರಟಿದ್ದೇನೆ ಲೆಟರ್ ಬರೆದಿಟ್ಟು ಮನೆಬಿಟ್ಟು ಹೋಗಿದ್ದಾನೆ. ಈ ವಿಚಾರ ತಿಳಿದ ಕೂಡಲೇ ಆದೀ ಭಾಗ್ಯಾಗೆ ಕಾಲ್ ಮಾಡಿ ಮನಬಂದಂತೆ ಮಾತನಾಡುತ್ತಾನೆ.

ಕಿಶನ್ ಹಾಗೂ ಪೂಜಾ ದೇವಸ್ಥಾನದಲ್ಲಿ ಯಾರಿಗೂ ಗೊತ್ತಾಗದಂತೆ ಮದುವೆ ಮಾಡುವ ಪ್ಲ್ಯಾನ್ ಭಾಗ್ಯಾಳದ್ದೇ ಎಂದು ಆದೀ ಅಂದುಕೊಂಡಿದ್ದಾನೆ. ಕೊನೆಗೂ ನಿಮ್ಮ ಥರ್ಡ್ ಕ್ಲಾಸ್ ಬುದ್ದಿ ತೋರಿಸಿಬಿಟ್ರಲ್ಲ.. ಕಿಶನ್ ಇಲ್ಲಿ ಲೆಟರ್ ಬರೆದಿಟ್ಟು ಮದುವೆ ಆಗಲು ಹೊರಟಿದ್ದಾನೆ.. ಇದೆಲ್ಲ ನಿನ್ದೆ ಪ್ಲ್ಯಾನ್ ಅಂತ ಗೊತ್ತು ಮರಿಯಾದೆಯಿಂದ ಕಿಶನ್ ಎಲ್ಲಿ ಅಂತ ಹೇಳು ಎಂದಿದ್ದಾನೆ. ಆದ್ರೆ, ಭಾಗ್ಯಗೆ ಈ ವಿಚಾರ ಗೊತ್ತಿರುವುದಿಲ್ಲ.. ಆಕೆ ಎಷ್ಟೇ ಹೇಳಿದರು ಅದನ್ನು ಆದೀ ಕೇಳುವುದಿಲ್ಲ.

ಅತ್ತ ಕಿಶನ್ ಕರೆದಿದ್ದಾನೆ ಎಂದು ಪೂಜಾ ಬರುತ್ತಾಳೆ. ಪೂಜಾಳನ್ನು ಕಿಶನ್ ಕಾರಿನಲ್ಲಿ ಕೂರಿಸಿ ನಿನಗೊಂದು ಸರ್​ಪ್ರೈಸ್ ಇದೆ ಎಂದು ಹೇಳಿ ಮೊದಲಿಗೆ ಸೀರೆ ಅಂಗಡಿಗೆ ಕರೆದುಕೊಂಡು ಹೋಗಿ ಅದನ್ನು ಉಟ್ಟು ಬಾ ಎಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕಿಶನ್ ಸ್ನೇಹಿತೆ ಮದುವೆಯ ಎಲ್ಲ ತಯಾರಿ ಮಾಡಿರುತ್ತಾಳೆ. ಪೂಜಾಳಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಾಗುವುದಿಲ್ಲ. ಮೊದಲಿಗೆ ಕಿಶನ್ ಒಂದು ಸಣ್ಣ ಪೂಜೆ ಇದೆ ಎಂದು ಸುಳ್ಳು ಹೇಳುತ್ತಾನೆ. ಕೊನೆಯಲ್ಲಿ ಕಿಶನ್ ಇವತ್ತು ನಾವು ಮದುವೆ ಆಗುತ್ತಿದ್ದೇವೆ ಎಂಬ ಸತ್ಯ ಹೇಳುತ್ತಾನೆ.



ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಸಲು ತುಂಬಾ ಪ್ರಯತ್ನ ಮಾಡಿದೆ.. ಆದರೆ ಇದಕ್ಕೆ ಅವು ಒಪ್ಪುತ್ತಿಲ್ಲ.. ಒಂದಲ್ಲ ಒಂದು ಪ್ರಾಬ್ಲಂ ನಮ್ಮ ಮದುವೆಗೆ ಬರುತ್ತಲೇ ಇದೆ.. ಈ ಎಲ್ಲ ಸಮಸ್ಯೆಗೆ ಪರಿಹಾರ ಹುಡುಕೋಣ ಅಂತ ಕರ್ಕೊಂಡು ಬಂದಿರೋದು.. ನಾವು ಈಗ ಮದುವೆ ಆಗೋಣ ಎಂದಿದ್ದಾನೆ. ಇದು ಪೂಜಾಗೆ ಆಘಾತ ಉಂಟುಮಾಡಿದೆ. ಕಿಶನ್ ಏನು ಹೇಳ್ತಾ ಇದ್ದೀಯಾ?, ಇದ್ದಕ್ಕಿದ್ದಂತೆ ಮದುವೆ ಅಂದ್ರೆ ಹೇಗೆ, ಇದೇನಾ ನೀನು ಸರ್​ಪ್ರೈಸ್ ಅಂತ ಹೇಳಿದ್ದು.. ನೀನು ಈತರ ನಿರ್ಧಾರ ತೆಗೊತಿ ಅಂತ ನಾನು ಅಂದುಕೊಂಡಿರಲಿಲ್ಲ.. ಅವರು ನಮ್ಮ ಮದುವೆಗೆ ಒಪ್ಪಿಕೊಂಡಿಲ್ಲ ಅಂದ್ರೆ ನಾವು ಅವರನ್ನು ಕನ್ವೆನ್ಸ್ ಮಾಡಬೇಕು.. ಅದು ನಮ್ಮ ಜವಾಬ್ದಾರಿ.. ಅದು ಬಿಟ್ಟು ಈರೀತಿ ಓಡಿ ಬಂದ್ರೆ ಹೇಗೆ.. ನನ್ಗೆ ಇದು ಸರಿ ಕಾಣಿಸುತ್ತಿಲ್ಲ ಎಂದು ಪೂಜಾ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾಳೆ.

ಆದರೆ, ಕಿಶನ್ ಇವತ್ತು ನಮ್ಮ ಮದುವೆ ಆಗಿಲ್ಲ ಅಂದ್ರೆ ಮುಂದೆ ಯಾವತ್ತೂ ನಮ್ಮ ಮದುವೆ ಆಗಲ್ಲ ಎಂದು ಹೇಳಿದ್ದಾನೆ. ಇದೇವೇಳೆ ಈ ದೇವಸ್ಥಾನಕ್ಕೆ ಭಾಗ್ಯ ಮನೆಯವರು ಮತ್ತು ಆದೀ ಮನೆಯವರು ಬಂದಿದ್ದಾರೆ. ಸದ್ಯ ಧಾರಾವಾಹಿ ರೋಚಕತೆ ಸೃಷ್ಟಿಸಿದ್ದು ಈ ಮದುವೆ ಆಗುತ್ತೊ ಅತವಾ ಇಲ್ಲವೊ ಎಂಬುದು ನೋಡಬೇಕಿದೆ.

Lakshmi Nivasa Serial: ಲಕ್ಷ್ಮೀ ನಿವಾಸದ ಹೊಸ ಲಕ್ಷ್ಮೀ ಮಾಧುರಿ ಯಾರು ಗೊತ್ತೇ?: ಸಿನಿಮಾದಿಂದ ದೂರ ಇಳಿದಿದ್ದೇಕೆ?