ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lakshmi Nivasa Serial: ಲಕ್ಷ್ಮೀ ನಿವಾಸದ ಹೊಸ ಲಕ್ಷ್ಮೀ ಮಾಧುರಿ ಯಾರು ಗೊತ್ತೇ?: ಸಿನಿಮಾದಿಂದ ದೂರ ಇಳಿದಿದ್ದೇಕೆ?

ಲಕ್ಷ್ಮಿ ನಿವಾಸ ಧಾರಾವಾಹಿಗೆ ಹಿರಿಯ ನಟಿ ಮಾಧುರಿ ಎಂಟ್ರಿ ಕೊಟ್ಟಿದ್ದಾರೆ. 90ರ ದಶಕದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಗಮನ ಸೆಳೆದಿದ್ದ ಇವರು ಈಗ ಕಿರುತೆರೆಯ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಕಾಶೀನಾಥ್ ನಿರ್ದೇಶಿಸಿದ ಅಜಗಜಾಂತರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಎಂಟ್ರಿ ಕೊಟ್ಟಿದ್ದ ಮಾಧುರಿ ಬಹುಬೇಡಿಕೆಯ ನಟಿಯಾಗಿದ್ದರು.

ಲಕ್ಷ್ಮೀ ನಿವಾಸದ ಹೊಸ ಲಕ್ಷ್ಮೀ ಮಾಧುರಿ ಯಾರು ಗೊತ್ತೇ?

Madhuri Lakshmi Nivasa

Profile Vinay Bhat Jun 26, 2025 7:23 AM

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (lakshmi nivasa) ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿದ್ದ ನಟಿ ಶ್ವೇತಾ ಅವರು ಸೀರಿಯಲ್​ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್​ ಕೊಟ್ಟರು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಅವರು ನಿರ್ಗಮಿಸಿದರು. ಲಕ್ಷ್ಮೀ ನಿವಾಸ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನು ಹೇಳುತ್ತದೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಲೋಕರೂಢಿಯ ಮಾತಿದೆ. ಇಡೀ ಧಾರಾವಾಹಿಗೆ ಅದುವೇ ಜೀವಾಳ.

ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಎಷ್ಟು ಕಷ್ಟಪಡುತ್ತಾರೆ ಎಂದು ಇದರಲ್ಲಿ ತೋರಿಸಲಾಗಿದೆ. ಮನೆಯ ಯಜಮಾನನ ಪಾತ್ರದಲ್ಲಿ ಅಶೋಕ್ ಜೆಂಬೆ ನಟಿಸುತ್ತಿದ್ದಾರೆ. ಅವರ ಪತ್ನಿ ಲಕ್ಮೀ ಪಾತ್ರದಲ್ಲಿ ಶ್ವೇತಾ ಇದ್ದರು. ಇವರು ಈ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಆದರೆ, ಇವರ ದಿಢೀರ್ ನಿರ್ಗಮನ ಧಾರಾವಾಹಿಗೆ ಪೆಟ್ಟು ನೀಡಲಿದೆ ಎನ್ನಲಾಗಿತ್ತು. ಆದರೆ, ಇದನ್ನು ಸರಿದೂಗಿಸಲು ಲಕ್ಷ್ಮೀ ಪಾತ್ರಕ್ಕೆ ಮತ್ತೊಂದು ಪವರ್​ಫುಲ್ ನಟಿಯನ್ನು ಕರೆಸಿದೆ.

ಲಕ್ಷ್ಮಿ ನಿವಾಸ ಧಾರಾವಾಹಿಗೆ ಹಿರಿಯ ನಟಿ ಮಾಧುರಿ ಎಂಟ್ರಿ ಕೊಟ್ಟಿದ್ದಾರೆ. 90ರ ದಶಕದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಗಮನ ಸೆಳೆದಿದ್ದ ಇವರು ಈಗ ಕಿರುತೆರೆಯ ಮೂಲಕ ಮತ್ತೆ ಕಮ್​ಬ್ಯಾಕ್ ಮಾಡಿದ್ದಾರೆ. ಕಾಶೀನಾಥ್ ನಿರ್ದೇಶಿಸಿದ ಅಜಗಜಾಂತರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಎಂಟ್ರಿ ಕೊಟ್ಟಿದ್ದ ಮಾಧುರಿ ಬಹುಬೇಡಿಕೆಯ ನಟಿಯಾಗಿದ್ದರು. ಚೆಲುವು ಹಾಗೂ ಅಭಿನಯ ಎರಡೂ ಇದ್ದ ಈ ನಟಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಆದರೆ, ಇದ್ದಕ್ಕಿದ್ದ ಹಾಗೇ ಮಾಧುರಿ ನಟನೆಯಿಂದಲೇ ದೂರ ಉಳಿದಿದ್ದರು.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಟಿ ಮಾಧುರಿ ಅವರ ನಿಜನಾಮ ಛಾಯಾದೇವಿ. ಚಿತ್ರರಂಗಕ್ಕಾಗಿ ತಮ್ಮ ಹೆಸರನ್ನ ಮಾಧುರಿ ಎಂದು ಬದಲಿಸಿಕೊಂಡರು. ಇವರು ನಟನೆಗೆ ಇವರು ಬಂದಿದ್ದೇ ಅಚಾನಕ್ಕಾಗಿ. ಐಎಎಸ್‌ ಮಾಡಬೇಕು ಎಂಬ ಆಸೆ ಇವರಿಗಿತ್ತಂತೆ. ಆದರೆ, ಬಣ್ಣದ ಬದುಕು ಇವರನ್ನ ಕೈಬೀಸಿ ಕರೆಯಿತು. ಸಿಕ್ಕ ಅವಕಾಶವನ್ನ ಬಳಸಿಕೊಂಡು ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

Eshani: ಇಶಾನಿಯ ಹೊಸ ಆಲ್ಬಂ ಸಾಂಗ್ ರಿಲೀಸ್: ಸಖತ್ ಹಾಟ್ ಅವತಾರದಲ್ಲಿ ಬಿಗ್ ಬಾಸ್ ಬೆಡಗಿ

ಅಜಗಜಾಂತರ ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ನಟನೆ ಆರಂಭ ಮಾಡಿ ಮುಂದೆ ಸಿಬಿಐ ಶಿವ, ಬಾಂಬೆ ದಾದಾ, ಗೂಂಡಾ ರಾಜ್ಯ, ಬಹುದ್ಧೂರ್ ಹೆಣ್ಣು, ಸ್ಟೇಟ್ ರೌಡಿ, ಸೂರ್ಯಪುತ್ರ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನಾಯಕಿಯಾಗಿ ಪೋಷಕ ನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು.

ಇವರು ಸಿನಿ ರಂಗದಿಂದ ದೂರ ಇಳಿಯಲು ಕಾರಣ ಏನೆಂದು ಅವರೇ ಹೇಳಿದ್ದಾರೆ. ಬಡತನ ಕುಟುಂಬ ಇದ್ದ ಕಾರಣ ಬಣ್ಣದ ಲೋಕದ ಮೇಲೆ ಒಲುವು ಇರಲಿಲ್ಲ. ಆದರೆ ಅದೇಗೋ ಅಜಗಜಾಂತರ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟೇ. ಹಾಗೇ ಹಿಂದಿ ಸೀರಿಯಲ್‌ನತ್ತವೂ ಮುಖ ಮಾಡಿದ್ದೆ. ಆದರೆ ನನ್ನ ಬಗ್ಗೆ ಸಹಿಸದೇ ಇರೋರು ಕೆಲ ಅಪ್ರಪಚಾರ ಮಾಡಲು ಶುರು ಮಾಡಿದರು. ಬೇಕಂತಲೇ ನಾನು ಬಿ ಗ್ರೇಡ್ ನಟಿ ಎಂದು ಬರೆಸುತ್ತಿದ್ದರು. ಇದು ನನಗೆ ಸಿಕ್ಕಾಪಟ್ಟೆ ನೋವುಂಟು ಮಾಡಿತ್ತು. ಬಳಿಕ ಮಕ್ಕಳು, ಫ್ಯಾಮಿಲಿ ಇದ್ದ ಕಾರಣ ಸಿನಿಮಾದಿಂದ ದೂರ ಉಳಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಇವರು ಹೇಳಿದ್ದರು.