Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ಬ್ಯುಸಿನೆಸ್ ಪಾರ್ಟ್ನರ್ಸ್ ಆದ ತಾಂಡವ್-ಆದೀ
ಕಳೆದ ಕೆಲವು ವಾರಗಳಿಂದ ಈ ಧಾರಾವಾಹಿಯಲ್ಲಿ ಪೂಜಾ-ಕಿಶನ್ನ ಮದುವೆ ಬಗ್ಗೆಯೇ ಎಪಿಸೋಡ್ ಸಾಗುತ್ತಿತ್ತು. ವೀಕ್ಷಕರು ತಾಂಡವ್-ಶ್ರೇಷ್ಠಾ ಎಲ್ಲಿ ಹೋದರು ಎಂದು ಪ್ರಶ್ನೆ ಮಾಡಿದ್ದರ. ಇದಕ್ಕೆ ದೊಡ್ಡ ಟ್ವಿಸ್ಟ್ ಮೂಲಕ ತಾಂಡವ್ ಮತ್ತೆ ಎಂಟ್ರಿ ಕೊಟ್ಟಿದ್ದಾನೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಒಂದರ ಹಿಂದೆ ಒಂದರಂತೆ ಟ್ವಿಸ್ಟ್ ನೀಡಲಾಗುತ್ತಿದೆ. ಒಂದುಕಡೆ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಎಪಿಸೋಡ್ ಕುತೂಹಲ ಮೂಡಿಸುತ್ತಿದ್ದರೆ, ಇದೀಗ ಇಷ್ಟುದಿನ ಸೈಲೆಂಟ್ ಆಗಿದ್ದ ತಾಂಡವ್ ಮತ್ತೆ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ವಾರಗಳಿಂದ ಈ ಧಾರಾವಾಹಿಯಲ್ಲಿ ಪೂಜಾ-ಕಿಶನ್ನ ಮದುವೆ ಬಗ್ಗೆಯೇ ಎಪಿಸೋಡ್ ಸಾಗುತ್ತಿತ್ತು. ವೀಕ್ಷಕರು ತಾಂಡವ್-ಶ್ರೇಷ್ಠಾ ಎಲ್ಲಿ ಹೋದರು ಎಂದು ಪ್ರಶ್ನೆ ಮಾಡಿದ್ದರ. ಇದಕ್ಕೆ ದೊಡ್ಡ ಟ್ವಿಸ್ಟ್ ಮೂಲಕ ತಾಂಡವ್ ಮತ್ತೆ ಎಂಟ್ರಿ ಕೊಟ್ಟಿದ್ದಾನೆ.
ತಾಂಡವ್ ಈಗಾಗಲೇ ಕೆಲಸ ಇಲ್ಲದೆ ತನ್ನದೇ ಒಂದು ಬ್ಯುಸಿನೆಸ್ ಪ್ಲ್ಯಾನ್ ಮಾಡಿ ಪಾರ್ಟ್ನರ್ಗಾಗು ಹುಡುಕುತ್ತಾ ಇದ್ದಾನೆ. ಹಿಂದಿನ ಕಂಪನಿಯಲ್ಲಿ ತಾಂಡವ್ ಬಾಸ್ ಜೊತೆ ಜಗಳ ಆಡಿ ಹಾಗೂ ಆ ಭಾಗ್ಯ ಕೊಡಿಸಿದ ಕೆಲಸ ನನಗೆ ಬೇಡ ಎಂದು ರಿಸೈನ್ ಮಾಡಿ ಬಂದಿದ್ದ. ಬಳಿಕ ತಾನೇ ಒಂದು ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡುತ್ತೇನೆ ಎಂದು ಹೊರಟಿದ್ದಾನೆ. ಆದರೆ, ಇಲ್ಲಿ ತಾಂಡವ್ ಬ್ಯುಸಿನೆಸ್ ಪ್ಲ್ಯಾನ್ ಅದ್ಭುತವಾಗಿದ್ದರೂ ಅದಕ್ಕೆ ದೊಡ್ಡ ಇನ್ವೆಸ್ಟರ್ನ ಅಗತ್ಯ ಇರುತ್ತದೆ. ಹೀಗಾಗಿ ಅಷ್ಟು ಹೊಡ್ಡ ಮಟ್ಟದ ಕಣ ಹಾಕುವವರು ಯಾರೂ ಸಿಗುವುದಿಲ್ಲ.
ಹೀಗೆ ಒಂದು ಕಡೆ ತನ್ನ ಬ್ಯುಸಿನೆಸ್ ಪ್ಲ್ಯಾನ್ ಬಗ್ಗೆ ಪಿಪಿಟಿ ಮೂಲಕ ತೋರಿಸುತ್ತಿರುವಾಗ ಅಲ್ಲಿಗೆ ಆದೀಶ್ವರ್ ಕಾಮತ್ ಎಂಟ್ರಿ ಆಗುತ್ತದೆ. ತಾಂಡವ್ನ ಬ್ಯುಸಿನೆಸ್ ಪ್ಲ್ಯಾನ್ ಕೇಳಿ ವಾವ್.. ಬ್ರಿಲಿಯೆಂಟ್.. ನಿಜವಾಗ್ಲೂ ಈ ಐಡಿಯಾ ತುಂಬಾ ಚೆನ್ನಾಗಿದೆ.. ನಾನು ಈ ಐಡಿಯಾನ ತೆಗೋತ ಇದ್ದಾನೆ ಎಂದು ಎಂದು ಆದೀ ಹೇಳುತ್ತಾನೆ. ಇದನ್ನ ಕೇಳಿ ತಾಂಡವ್ಗೆ ಖುಷಿ ಆಗುತ್ತದೆ. ಆದರೆ, ಇಲ್ಲಿ ತಾಂಡವ್ ಭಾಗ್ಯಾಳ ಮಾಜಿ ಗಂಡ ಎಂಬ ವಿಚಾರ ಆದೀಗೆ ತಿಳಿದಿಲ್ಲ.
ಪೂಜಾ-ಕಿಶನ್ ಮದುವೆಗೆ ಮೀನಾಕ್ಷಿ ಒಪ್ಪಿಗೆ, ಆದರೆ..:
ಮತ್ತೊಂದೆಡೆ ಪೂಜಾ-ಕಿಶನ್ ಮದುವೆಗೆ ಎಲ್ಲರ ಎದುರು ಮೀನಾಕ್ಷಿ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ, ಇದೊಂದು ಪ್ಲ್ಯಾನ್ ಅಷ್ಟೆ. ಕಿಶನ್, ಯಾರಿಗೂ ಹೇಳದೆ ಪೂಜಾಳನ್ನು ಮದುವೆ ಆಗಲೆಂದು ದೇವಸ್ಥಾನಕ್ಕೆ ಕರೆದುಕೊಂಡು ಬಂದಿರುತ್ತಾನೆ. ಆದರೆ, ಈ ಮದುವೆ ಕಾರ್ಯ ಕಿಶನ್ ಯಾರಿಗೂ ತಿಳಿಯದಂತೆ ಸೃಷ್ಟಿಸಿದ ಒಂದು ಡ್ರಾಮ. ಸ್ವತಃ ಪೂಜಾಳಿಗೂ ಈ ಸೀಕ್ರೆಟ್ ತಿಳಿದಿಲ್ಲ. ಕಿಶನ್ಗೆ 100 ಪರ್ಸೆಂಟ್ ನಂಬಿಕೆ ಇತ್ತು. ಈ ರೀತಿ ಓಡಿ ಬಂದು ಮದುವೆ ಆಗೋದು ಭಾಗ್ಯ-ಪೂಜಾ ಮನೆಯವರ ಗುಣ ಅಲ್ಲ.. ಅವಳು ಇದಕ್ಕೆ ಒಪ್ಪಲ್ಲ ಎಂಬುದು ಕಿಶನ್ಗೆ ಗೊತ್ತಿತ್ತು. ಭಾಗ್ಯ ಮನೆಯವರ ಗುಣ ಎಂತಹದು ಎಂದು ಆದೀಶ್ವರ್ ಹಾಗೂ ಮೀನಾಕ್ಷಿಗೆ ಸಾಕ್ಷಿ ಸಮೇತ ತೋರಿಸಲು ಕಿಶನ್ ಆಡಿದ ನಾಟ ಇದಾಗಿದೆ.
ಕಿಶನ್ ಅಂದುಕೊಂಡಂತೆ ಪೂಜಾ ಈ ಓಡಿ ಬಂದು, ಯಾರಿಗೂ ಹೇಳದಂತೆ ಮದುವೆ ಆಗಲು ಒಪ್ಪಿಗೆ ಸೂಚಿಸುವುದಿಲ್ಲ. ಇದನ್ನೆಲ್ಲ ಭಾಗ್ಯ ಹಾಗೂ ಕಿಶನ್ ಮನೆಯವರು ದೂರದಿಂದ ನೋಡುತ್ತಾ ಇರುತ್ತಾರೆ. ಆದೀ ಕಿಶನ್ಗೆ ಬೈಯಲು ಮುಂದಾಗುತ್ತಾನೆ. ಆಗ ಕಿಶನ್ ಇದೆಲ್ಲ ನಾನು ಮಾಡಿದ ಒಂದು ಡ್ರಾಮ.. ಭಾಗ್ಯ ಮನೆಯವರು ಒಳ್ಳೆಯವರು ಎಂದು ನಿಮಗೆ ಬಾಯಲ್ಲಿ ಎಷ್ಟು ಹೇಳಿದರೂ ಅರ್ಥ ಆಗಲಿಲ್ಲ.. ಅದಕ್ಕೆ ಬೇರೆ ದಾರಿಯಿಲ್ಲದೆ ಈರೀತಿ ನಾಟಕ ಆಡಬೇಕಾಯಿತು ಎಂದಿದ್ದಾನೆ.
ಇದೇ ವೇಳೆಗೆ ಅಲ್ಲಿದೆ ರಾಮ್ದಾಸ್ ಕಾಮತ್ ಎಂಟ್ರಿ ಆಗಿದೆ. ಮೀನಾಕ್ಷಿ-ಕನ್ನಿಕಾ- ಆದೀ ಇನ್ನಾದರು ನೀವು ನಂಬಿ ಭಾಗ್ಯ ಮನೆಯವರು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಎರಡೂ ಮನೆಯವರು ಇದ್ದೀರಿ.. ಇನ್ನು ಈ ಗೊಂದಲಗಳು ಬೇಡ.. ಇಂದೇ ಈ ಮದುವೆ ನಡೆದು ಹೋಗಲಿ ಎಂದು ರಾಮ್ದಾಸ್ ಕಾಮತ್ ಕಿಶನ್ ಬಳಿ ಪೂಜಾಗೆ ತಾಳಿ ಕಟ್ಟಲು ಹೇಳಿದ್ದಾರೆ.
ಆದರೆ, ಇದಕ್ಕೆ ಮೀನಾಕ್ಷಿ ಆಕ್ಷೇಪ ವ್ಯಕ್ತಪಡಿಸುತ್ತಾಳೆ. ಸದ್ಯ ಇಲ್ಲಿ ಮದುವೆ ನಿಲ್ಲಿಸಿದರೆ ಸಾಕು ಎಂದು ಅಂದುಕೊಂಡ ಮೀನಾಕ್ಷಿ, ನನಗೆ ಈ ಮದುವೆ ಒಪ್ಪಿಗೆ ಇದೆ ಆದ್ರೆ ಈ ಮದುವೆಯನ್ನು ಅದ್ಧೂರಿಯಾಗಿ ಮಾಡೋಣ.. ಇಲ್ಲಿ ಬೇಡ ಎಂದು ಹೇಳಿದ್ದಾಳೆ. ಈ ಮೂಲಕ ಸಮಯ ತೆಗೊಂದು ಈ ಮದುವೆಯನ್ನು ನಿಲ್ಲಿಸುವ ಪ್ಲ್ಯಾನ್ ಮೀನಾಕ್ಷಿಯದ್ದಾಗಿದೆ. ಇದಕ್ಕಾಗಿ ಕನ್ನಿಕಾ ಜೊತೆ ಸೇರಿ ಒಂದೊಂದೆ ಪ್ಲ್ಯಾನ್ ಹೆಣೆಯುತ್ತಿದ್ದಾರೆ. ಮೊದಲಿಗೆ ಭಾಗ್ಯ ಮನೆಗೆ ಇವರಿಬ್ಬರು ಬಂದು ನಮ್ಮದೊಂದು ಹರಕೆ ಇದೆ.. ಕಿಶನ್ನ ತುಲಾಭಾರ ಆಗಬೇಕು.. ಇದನ್ನ ಹುಡುಗಿ ಮನೆಯವರೇ ಮಾಡಬೇಕು.. ಅಷ್ಟೇ ಅಲ್ಲ ಇದು ಚಿನ್ನದಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ.
ಸದ್ಯ ಭಾಗ್ಯಾಗೆ ಒಂದರ ಹಿಂದೆ ಒಂದರಂತೆ ಕಷ್ಟಗಳು ಬಂದೊದಗಿದೆ. ಈ ಮದುವೆ ಹೇಗೆ ಮಾಡೋದು ಎಂಬ ಟೆನ್ಶನ್ ಒಂದು ಕಡೆಯಿದ್ದರೆ ಮತ್ತೊಂದೆಡೆ ತಾಂಡವ್-ಆದೀ ಜೊತೆಯಾಗಿದ್ದಾರೆ. ತಾಂಡವ್, ಭಾಗ್ಯ ಬಗ್ಗೆ ಆದೀ ಬಳಿಕ ಏನೆಲ್ಲ ಸುಳ್ಳು ಹೇಳುತ್ತಾನೆ?, ಇದನ್ನೆಲ್ಲ ಭಾಗ್ಯ ಹೇಗೆ ಎದುರಿಸುತ್ತಾಳೆ ಎಂಬುದು ನೋಡಬೇಕಿದೆ.
BBT 9: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಮನ್ ಮ್ಯಾನ್ಗೂ ಅವಕಾಶ: ಅರ್ಜಿ ಸಲ್ಲಿಸುವುದು ಹೇಗೆ?