Gold Suresh: ಗೋಲ್ಡ್ ಸುರೇಶ್ ವಂಚನೆ ಕೇಸ್ಗೆ ಬಿಗ್ ಟ್ವಿಸ್ಟ್
ಮೈನುದ್ದೀನ್ ಎಂಬುವರಿಗೆ ಗೋಲ್ಡ್ ಸುರೇಶ್ ಕೇಬಲ್ ಚಾನೆಲ್ ಸೆಟಪ್ ಮಾಡಿಕೊಡಬೇಕಿತ್ತು. ಇದರ ಸಲುವಾಗಿ ನಡೆದ ವ್ಯವಹಾರದಲ್ಲಿ ಗೋಲ್ಡ್ ಸುರೇಶ್ ವಂಚನೆ ಎಸಗಿದ್ದಾರೆ, ತಮಗೆ ವಾಪಸ್ ಬರಬೇಕಿದ್ದ ಹಣವನ್ನ ಗೋಲ್ಡ್ ಸುರೇಶ್ ನೀಡಿಲ್ಲ ಎಂದು ಮೈನುದ್ಧೀನ್ ಆರೋಪಿಸಿದ್ದಾರೆ.

Gold Suresh

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭಾಗವಹಿಸಿ ಫೇಮಸ್ ಆಗಿದ್ದ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಈಗ ವಂಚನೆ ಆರೋಪ ಕೇಳಿಬಂದಿದೆ. ರಾಯಚೂರಿನ ಮಾನ್ವಿ ಪಟ್ಟಣದ ಯುವಕ ಮೈನುದ್ದಿನ್ ಎಂಬಾತ ಗೋಲ್ಡ್ ಸುರೇಶ್ ವಿರುದ್ಧ ದೂರು ದಾಖಲಿಸಿದ್ದು, ಸುರೇಶ್ 14 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಗಂಭೀರ ವಂಚನೆ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಗೋಲ್ಡ್ ಸುರೇಶ್ ಕೂಡ ತಿರುಗೇಟು ಕೊಟ್ಟರು.. ಇದರ ಬೆನ್ನಲ್ಲೇ ಈ ವಂಚನೆ ಕೇಸ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಮೈನುದ್ದೀನ್ ಎಂಬುವರಿಗೆ ಗೋಲ್ಡ್ ಸುರೇಶ್ ಕೇಬಲ್ ಚಾನೆಲ್ ಸೆಟಪ್ ಮಾಡಿಕೊಡಬೇಕಿತ್ತು. ಇದರ ಸಲುವಾಗಿ ನಡೆದ ವ್ಯವಹಾರದಲ್ಲಿ ಗೋಲ್ಡ್ ಸುರೇಶ್ ವಂಚನೆ ಎಸಗಿದ್ದಾರೆ, ತಮಗೆ ವಾಪಸ್ ಬರಬೇಕಿದ್ದ ಹಣವನ್ನ ಗೋಲ್ಡ್ ಸುರೇಶ್ ನೀಡಿಲ್ಲ ಎಂದು ಮೈನುದ್ಧೀನ್ ಆರೋಪಿಸಿದ್ದಾರೆ. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಈಗ ಅವರು ಹಣವನ್ನು ಮರಳಿ ನೀಡುತ್ತಿಲ್ಲ ಎಂದು ಮೈನುದ್ದೀನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ವೈರಲ್ ಆಗುತ್ತಿದೆ ಎಂಬೊತ್ತಿಗೆ ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದರು. 2015 ರಿಂದ ನಾನು ಬಿಸಿನೆಸ್ ಆರಂಭಿಸಿದೆ. 2017ರಲ್ಲಿ ಸ್ನೇಹಿತರ ಮೂಲಕ ಮೈನುದ್ದೀನ್ ಪರಿಚಯವಾದರು. ನನಗೆ ಅವರು 7 ಲಕ್ಷ ರೂಪಾಯಿ ಕೊಟ್ಟಿದ್ದರು. 1 ಲಕ್ಷ ರೂಪಾಯಿಯಷ್ಟು ನಾನು ಕೆಲಸ ಮಾಡಿಕೊಟ್ಟಿದ್ದೆ. ಉಳಿದ 6 ಲಕ್ಷ ಹಣವನ್ನ ನಾನು ವಾಪಸ್ ಕೊಟ್ಟಿದ್ದೇನೆ ಎಂದು ಸುರೇಶ್ ಕ್ಲಾರಿಟಿ ಕೊಟ್ಟರು. ಅಲ್ಲದೆ 2017ರಲ್ಲಿಯೇ ನಾನು ಅವರಿಗೇನು ಕೊಡಬೇಕಾಗಿತ್ತೋ, ಕೊಟ್ಟು ಮುಗಿಸಿದ್ದೆ. 2018ರಿಂದ ನಾನು ನನ್ನ ಪಾಡಿಗೆ ಬಿಸಿನೆಸ್ ಮಾಡಿಕೊಂಡು ಬಂದೆ. ಈಗ ನನ್ನ ಬಳಿ ಹಣವಿದೆ ಅನ್ನೋ ಕಾರಣಕ್ಕೆ ಆರೋಪ ಮಾಡಿದ್ದಾನೆ. ನಾನು ಉದ್ಯಮಿಯಾಗಿ ಬೆಳೆದಿರುವ ಕಾರಣ ವಿನಾಕಾರಣ ಆರೋಪ ಮಾಡಿದ್ದಾರೆ ಎಂದರು.
Bhagya Lakshmi Serial: ಆಗಿರೋದು ಎಂಗೇಜ್ಮೆಂಟ್ ಅಷ್ಟೆ, ಮದುವೆ ಆಗಲ್ಲ ಎಂದ ಆದೀಶ್ವರ್
ಸುರೇಶ್ ಅವರ ಈ ಹೇಳಿಕೆ ಬೆನ್ನಲ್ಲೇ, ‘‘ಗೋಲ್ಡ್ ಸುರೇಶ್ ಹೇಳುತ್ತಿರುವುದೆಲ್ಲಾ ಸುಳ್ಳು’’ ಎಂದು ಮೈನುದ್ದೀನ್ ಹೇಳುತ್ತಿದ್ದಾರೆ. ನಮ್ಮಿಂದ ಪಡೆದ 7,50,000ದಲ್ಲಿ ಕೇವಲ 2,50,000 ಹಣ ಕೊಟ್ಟಿದ್ದಾರೆ. ಉಳಿದ ಹಣ ಕೇಳಿದ್ರೆ ಯಾವ ಹಣವೂ ಕೊಡೋದಿಲ್ಲ ಎನ್ನುತ್ತಿದ್ದಾರೆ. ಫರ್ನಿಚರ್ಗಾಗಿ ಖರ್ಚು ಮಾಡಿದ್ದೇನೆ ಎಂದು ನಿನ್ನೆ ಹೇಳಿದ್ದಾರೆ. ಆದ್ರೆ, ಇನ್ನುಳಿದ ಐದು ಲಕ್ಷದ ಕೇಳಿದ್ರೆ ಫರ್ನಿಚರ್ ಮಾಡಿದ್ದೀವಿ ಅಂತ ಹೇಳ್ತಿದ್ದಾರೆ. ಆದ್ರೆ ಐದು ಲಕ್ಷದ ಕೆಲಸ ಗೋಲ್ಡ್ ಸುರೇಶ್ ಮಾಡಿಲ್ಲ ಎಂದು ಮೈನುದ್ದೀನ್ ದೂರು ನೀಡಲು ಮುಂದಾಗಿದ್ದಾರೆ. ಸದ್ಯ ಈ ಪ್ರಕರಣ ಎಲ್ಲಿಗೆ ತಲುಪುತ್ತೊ ನೋಡಬೇಕಿದೆ.