Chaithra Kundapura: ನಾನು ಕುಡುಕ ಆಗಿದ್ದರೆ, ಸಾಬೀತು ಪಡಿಸಲಿ: ಚೈತ್ರಾ ಕುಂದಾಪುರಗೆ ತಂದೆಯಿಂದ ನೇರ ಸವಾಲು
ಇದೀಗ ಚೈತ್ರಾ ಅವರ ಈ ಆರೋಪಕ್ಕೆ ಬಾಲಕೃಷ್ಣ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಕುಡುಕ ಅನ್ನೋದನ್ನು ಬಾಯಿ ಮಾತಿನಲ್ಲಿ ಹೇಳೋದಲ್ಲ, ಸಾಬೀತುಪಡಿಸಲಿ. ಈಗ ಎಲ್ಲವೂ ಪ್ರಚಾರ ಆಗಿದೆ ಅನ್ನೋ ಕಾರಣಕ್ಕೆ ತಪ್ಪಿಸಿಕೊಳ್ಳಲು ಅವಳು ನನ್ನನ್ನು ಕುಡುಕ ಎನ್ನುತ್ತಿದ್ದಾಳೆ. ನನ್ನ ರಕ್ತ ಪರೀಶೀಲನೆ ಮಾಡಿ, ಕುಡಿದು ನಾನು ಮಾತನಾಡಿದ್ದೇನೆ ಅನ್ನೋ ಆರೋಪಕ್ಕೆ ನನಗೆ ದಾಖಲೆ ಬೇಕು ಎಂದು ಹೇಳಿದ್ದಾರೆ.

chaitra kundapura and father

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಎಂಬವರ ಜೊತೆ ಚೈತ್ರಾ ವಿವಾಹವಾಗಿದೆ. ತುಂಬಾ ಸಿಂಪಲ್ ಆಗಿ ನಡೆದಿದ್ದ ಈ ವಿವಾಹಕ್ಕೆ ಬೆರಳಣಿಕೆಯಷ್ಟು ಮಂದಿ ಮಾತ್ರ ಬಂದಿದ್ದರು. ಕೆಲ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದರು. ಇದೀಗ ಮದುವೆ ಆದ ಕೆಲವೇ ದಿನಗಳಲ್ಲಿ ಚೈತ್ರಾ ಕುಂದಾಪುರ ಅವರ ತಂದೆ ಮಾಧ್ಯಮದ ಮುಂದೆ ಬಂದು ಒಂದೊಂದೆ ಬಾಂಬ್ ಸಿಡಿಸುತ್ತಿದ್ದಾರೆ.
ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿ, ಮಗಳ ಮದುವೆಯನ್ನು ನಾನು ಒಪ್ಪುವುದಿಲ್ಲ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ (ಚೈತ್ರಾ ಅವರ ಅಮ್ಮ) ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ’ ಎಂದು ಹೇಳಿದ್ದರು.
ತಂದೆಯ ಆರೋಪದ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರು ತಮ್ಮ ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿರುಗೇಟು ಕೊಟ್ಟು. ‘‘ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು... ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು.. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ..’’ ಎಂದು ಚೈತ್ರಾ ಬರೆದುಕೊಂಡಿದ್ದರು.
ಇದೀಗ ಚೈತ್ರಾ ಅವರ ಈ ಆರೋಪಕ್ಕೆ ಬಾಲಕೃಷ್ಣ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಕುಡುಕ ಅನ್ನೋದನ್ನು ಬಾಯಿ ಮಾತಿನಲ್ಲಿ ಹೇಳೋದಲ್ಲ, ಸಾಬೀತುಪಡಿಸಲಿ. ಈಗ ಎಲ್ಲವೂ ಪ್ರಚಾರ ಆಗಿದೆ ಅನ್ನೋ ಕಾರಣಕ್ಕೆ ತಪ್ಪಿಸಿಕೊಳ್ಳಲು ಅವಳು ನನ್ನನ್ನು ಕುಡುಕ ಎನ್ನುತ್ತಿದ್ದಾಳೆ. ನನ್ನ ರಕ್ತ ಪರೀಶೀಲನೆ ಮಾಡಿ, ಕುಡಿದು ನಾನು ಮಾತನಾಡಿದ್ದೇನೆ ಅನ್ನೋ ಆರೋಪಕ್ಕೆ ನನಗೆ ದಾಖಲೆ ಬೇಕು. ಅವಳ ಪರವಾಗಿರುವ ಡಾಕ್ಟರ್ ಅಗತ್ಯವಿಲ್ಲ. ಕಾನೂನು ಪಾಲನೆ ಮಾಡುವ ಡಾಕ್ಟರ್ ಬೇಕು. ನಮ್ಮ ಊರಿನವರನ್ನು ವಿಚಾರಣೆ ಮಾಡಿ. ನಾನು ಕುಡುಕ ಆಗಿದ್ದರೆ ಇಷ್ಟೆಲ್ಲಾ ಮಾತನಾಡಲು ಹೇಗೆ ಸಾಧ್ಯ? ನನಗೆ ಕುಡಿಯುವ ಅಭ್ಯಾಸವಿಲ್ಲ. ಕುಡುಕು ಅನ್ನೋದನ್ನು ಸಾಬೀತು ಮಾಡಲಿ ಎಂದು ಚೈತ್ರಾ ಕುಂದಾಪುರಗೆ ಸವಾಲು ಹಾಕಿದ್ದಾರೆ.
Rishabh Shetty: ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ರಿಷಭ್ ಶೆಟ್ಟಿ ಬರದಿರಲು ಕಾರಣ ಬಹಿರಂಗ: ಇಲ್ಲಿದೆ ನೋಡಿ
ನಾನು ಜನ್ಮ ಕೊಟ್ಟ ಮಗಳೇ ನನ್ನನ್ನು ಕುಡುಕು ಎಂದು ಹೇಳುತ್ತಿರುವುದು ತಪ್ಪು. ಜನ್ಮ ಕೊಟ್ಟ ತಂದೆಗೆ ಕುಡುಕ ಪಟ್ಟ ಕೊಟ್ಟಿದ್ದಾಳೆ ಅಂತಂದರೆ ಅವಳು ವಿರೋಧವಾಗಿದ್ದಾಳೆ ಎಂದರ್ಥ. ತಂದೆ ಮೇಲೆ ದ್ವೇಷ ಮಾಡುತ್ತಿದ್ದಾಳೆ ಅನ್ನೋದು ಈ ಮೂಲಕ ಸಾಭೀತಾಗಿದೆ. ಅವರು ಕಾನೂನು ಹೋರಾಟಕ್ಕೆ ಇಳಿಯಬೇಕಾದರೆ ಸರಿಯಾದ ದಾಖಲೆಗಳು ಬೇಕು. ಅವಳ ಎಲ್ಲ ಹಗರಣಗಳು ಬಯಲಾಗುತ್ತಿದೆ ಅಲ್ಲವೇ ಹಾಗಾಗಿ ನನ್ನ ಮೇಲೆ ಅವಳಿಗೆ ದ್ವೇಷ ಇದೆ ಎಂದು ಬಾಲಕೃಷ್ಣ ನಾಯ್ಕ್ ಹೇಳಿದ್ದಾರೆ.