Anti Naxal Operation: ತಲೆಗೆ 45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ಎನ್ಕೌಂಟರ್
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ (Anti Naxal Operation) ಸಂದರ್ಭದಲ್ಲಿ ಭದ್ರತಾ ಪಡೆಗಳು ಉನ್ನತ ನಕ್ಸಲ್ ಕಮಾಂಡರ್ ಭಾಸ್ಕರ್ ಅವರನ್ನು ಗುಂಡಿಕ್ಕಿ ಕೊಂದಿದೆ. ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಭಾಸ್ಕರ್, ಮಾವೋವಾದಿಗಳ ಟಿಎಸ್ಸಿಯ ಮಂಚೇರಿಯಲ್-ಕೊಮರಾಂಭೀಮ್ (ಎಂಕೆಬಿ) ವಿಭಾಗದ ಕಾರ್ಯದರ್ಶಿಯಾಗಿದ್ದ.


ಛತ್ತೀಸ್ಗಢ: ನಕ್ಸಲ್ ಕಮಾಂಡರ್ (Naxal commander) ಅನ್ನು ಗುರುವಾರ ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ (Naxal commander Encounter) ಮಾಡಿರುವ ಘಟನೆ ಛತ್ತೀಸ್ಗಢದ (Chhattisgarh) ಬಿಜಾಪುರ ಜಿಲ್ಲೆಯ ( Bijapur district) ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದಿದೆ. ಮೃತ ನಕ್ಸಲ್ ಕಮಾಂಡರ್ ಭಾಸ್ಕರ್ ಎಂದು ಗುರುತಿಸಲಾಗಿದೆ. ಈತನ ಪತ್ತೆಗೆ 45 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ನಕ್ಸಲ್ ಕಮಾಂಡರ್ ಭಾಸ್ಕರ್ ಎನ್ಕೌಂಟರ್ ಸಮಯದಲ್ಲಿ ಎಕೆ -47 ರೈಫಲ್, ಸ್ಫೋಟಕಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಪಡೆಗಳು ಉನ್ನತ ನಕ್ಸಲ್ ಕಮಾಂಡರ್ ಭಾಸ್ಕರ್ ಅವರನ್ನು ಗುಂಡಿಕ್ಕಿ ಕೊಂದಿದೆ. ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಭಾಸ್ಕರ್, ಮಾವೋವಾದಿಗಳ ಟಿಎಸ್ಸಿಯ ಮಂಚೇರಿಯಲ್-ಕೊಮರಾಂಭೀಮ್ (ಎಂಕೆಬಿ) ವಿಭಾಗದ ಕಾರ್ಯದರ್ಶಿಯಾಗಿದ್ದ. ಆತನ ಮೇಲೆ ಛತ್ತೀಸ್ಗಢದಲ್ಲಿ 25 ಲಕ್ಷ ಮತ್ತು ತೆಲಂಗಾಣದಲ್ಲಿ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿ ನಿಲ್ಲಿಸಿದ ಬಳಿಕ ನಕ್ಸಲ್ ಕಮಾಂಡರ್ ಮೃತದೇಹವನ್ನು ವಶಕ್ಕೆ ಪಡೆಯಲಾಯಿತು. ಪ್ರಾಥಮಿಕ ಗುರುತುಗಳ ಪ್ರಕಾರ ಮೃತದೇಹವು ಭಾಸ್ಕರ್ ಅಲಿಯಾಸ್ ಮೈಲಾರಪು ಅಡೆಲ್ಲು ಎಂದು ಗುರುತಿಸಲಾಗಿದ್ದು, ಆತ ತೆಲಂಗಾಣ ರಾಜ್ಯ ಸಮಿತಿ (ಟಿಎಸ್ಸಿ)ಯ ನಿಷೇಧಿತ ಮಾವೋವಾದಿಗಳ ವಿಶೇಷ ವಲಯ ಸಮಿತಿ (ಎಸ್ಜೆಡ್ಸಿ) ಸದಸ್ಯನಾಗಿದ್ದ ಎನ್ನಲಾಗಿದೆ.
ಭಾಸ್ಕರ್ ಎನ್ಕೌಂಟರ್ ವೇಳೆ ಎಕೆ -47 ರೈಫಲ್, ಸ್ಫೋಟಕಗಳು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲ್ ಕಮಾಂಡರ್ ಭಾಸ್ಕರ್ ಹತ್ಯೆಯು ಈ ಪ್ರದೇಶದಲ್ಲಿ ಮಾವೋವಾದಿ ಕಾರ್ಯಾಚರಣೆಗಳಿಗೆ ಗಮನಾರ್ಹ ಹೊಡೆತವನ್ನು ನೀಡಿದೆ ಎನ್ನುತ್ತಾರೆ ಅಧಿಕಾರಿಗಳು. ನಕ್ಸಲ್ ಕಮಾಂಡರ್ ಭಾಸ್ಕರ್ ಎನ್ಕೌಂಟರ್ ನಲ್ಲಿ ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್), ಜಿಲ್ಲಾ ಮೀಸಲು ಪಡೆ (ಡಿಆರ್ಜಿ), ಸಿಆರ್ಪಿಎಫ್ನ ವಿಶೇಷ ಘಟಕ ಕೋಬ್ರಾ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: Tiruapati Laddu: ತಿರುಪತಿ ಲಡ್ಡು ಆನ್ಲೈನ್ನಲ್ಲಿ ಅನಧಿಕೃತ ಮಾರಾಟಕ್ಕೆ ತಡೆ
ಇದರೊಂದಿಗೆ ಗುರುವಾರ ಮುಂಜಾನೆ ಅದೇ ಪ್ರದೇಶದಲ್ಲಿ ನಡೆದ ಇನ್ನೊಂದು ಎನ್ಕೌಂಟರ್ನಲ್ಲಿ ಹಿರಿಯ ಮಾವೋವಾದಿ ನಾಯಕ ಸುಮಾರು 67 ವರ್ಷದ ನರಸಿಂಹ ಚಲಂ ಅಲಿಯಾಸ್ ಸುಧಾಕರ್ ಸಾವನ್ನಪ್ಪಿದ್ದಾನೆ. ಈತ ಆಂಧ್ರಪ್ರದೇಶದವನಾಗಿದ್ದು ಛತ್ತೀಸ್ಗಢದಲ್ಲಿ ಹಲವಾರು ನಕ್ಸಲ್ ದಾಳಿಗಳಿಗೆ ಪ್ರಮುಖ ಕರಣವಾಗಿದ್ದನು.