ಎಲ್ಒಸಿಯಲ್ಲಿ ನೆಲಬಾಂಬ್ ಸ್ಫೋಟ: ಇಬ್ಬರು ಯೋಧರ ಸ್ಥಿತಿ ಗಂಭೀರ
Landmine Explosion: ಜಮ್ಮು-ಕಾಶ್ಮೀರದ ಮೆಂಧರ್ ಸೆಕ್ಟರ್ನ ಕಂಗಾ ಗಾಲಿ ಪ್ರದೇಶದಲ್ಲಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ನೆಲಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ತಕ್ಷಣವೇ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾಂದರ್ಭಿಕ ಚಿತ್ರ -
ಶ್ರೀನಗರ, ಆ. 6: ಜಮ್ಮು-ಕಾಶ್ಮೀರದ ಮೆಂಧರ್ ಸೆಕ್ಟರ್ನ ಕಂಗಾ ಗಾಲಿ ಪ್ರದೇಶದಲ್ಲಿ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ನೆಲಬಾಂಬ್ ಸ್ಫೋಟಗೊಂಡ (Landmine Explosion) ಪರಿಣಾಮ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭಾರಿ ಮಳೆಯಿಂದಾಗಿ ಸೇನೆಯ ಒಳನುಸುಳುವಿಕೆ ತಡೆ ವ್ಯವಸ್ಥೆಯ ಭಾಗವಾಗಿದ್ದ ಹಲವು ಭೂಸುರಂಗಗಳು ಕೊಚ್ಚಿಹೋಗಿದ್ದವು. ಅವುಗಳಲ್ಲಿ ಒಂದನ್ನು ನಿಷ್ಕ್ರಿಯಗೊಳಿಸುವ ವೇಳೆ ಅದು ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ನೆಲ ಬಾಂಬ್ ಅನ್ನು ಮೊದಲು ಸೇನಾ ಗಸ್ತು ತಿರುಗುತ್ತಿದ್ದ ತಂಡ ಗುರುತಿಸಿತ್ತು. ನಂತರ ತಜ್ಞರನ್ನು ಕರೆಸಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಯಿತು. ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ತಕ್ಷಣವೇ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಳನುಸುಳುವಿಕೆ ತಡೆ ವ್ಯವಸ್ಥೆಯ ಭಾಗವಾಗಿ ಎಲ್ಒಸಿಯ ಉದ್ದಕ್ಕೂ ನೆಲಬಾಂಬ್ಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವು ಕೆಲವೊಮ್ಮೆ ಮಳೆಯ ಸಂದರ್ಭದಲ್ಲಿ ಕೊಚ್ಚಿ ಹೋಗುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರತ್ಯೇಕ ಬೆಳವಣಿಗೆಯಲ್ಲಿ ನಲ್ವಾ ದೇಗ್ವಾರ್ ಟೆರ್ವಾನ್ ಪ್ರದೇಶದಲ್ಲಿ ತುಕ್ಕು ಹಿಡಿದ, ಸ್ಫೋಟಗೊಳ್ಳದ ಫಿರಂಗಿಯೊಂದು ಪತ್ತೆಯಾಗಿದ್ದು, ನಂತರ ಸೇನೆಯ ಬಾಂಬ್ ನಿಷ್ಕ್ರಿಯ ದಳ ಅದನ್ನು ಸುರಕ್ಷಿತವಾಗಿ ನಾಶಪಡಿಸಿತು. ಈ ಹ್ಯಾಂಡ್ ಗ್ರೆನೇಡ್ ಅನ್ನು ಆ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಗಮನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ರೈತನ ಜೀವ ಉಳಿಸಲು ತನ್ನ ಲೈಫ್ ಜಾಕೆಟ್ ನೀಡಿ ತಾನೇ ಪ್ರವಾಹದಲ್ಲಿ ಕೊಚ್ಚಿ ಹೋದ ಈಜು ತರಬೇತುದಾರ
ಪಹಲ್ಗಾಮ್ನಲ್ಲಿ ಮೇಘಸ್ಫೋಟದಿಂದ ಅಪಾರ ಹಾನಿ, ಸೋನಾಮಾರ್ಗ್ನಲ್ಲಿ ಭೂಕುಸಿತ
ಕಾಶ್ಮೀರ ಕಣಿವೆಯಲ್ಲಿ ಪ್ರತಿಕೂಲ ಹವಾಮಾನದ ನಡುವೆ, ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನ ಬಟ್ಕೂಟ್ ಪ್ರದೇಶದಲ್ಲಿ ಅಣೆಕಟ್ಟು ಒಡೆದು, ಹಠಾತ್ ಪ್ರವಾಹ ಉಂಟಾಗಿ ಭಾರಿ ಸಮಸ್ಯೆ ತಲೆದೋರಿದೆ.
ತೀವ್ರ ಮತ್ತು ಸ್ಥಳೀಯ ಮಳೆಯ ನಂತರ, ವಾರ್ಡ್ಬಲ್ ನಲ್ಲಾ ಮತ್ತು ಹತ್ತಿರದ ಹಲವಾರು ಚರಂಡಿಗಳು ಅಲ್ಪಾವಧಿಯಲ್ಲಿಯೇ ಉಕ್ಕಿ ಹರಿಯಿತು. ಇದರಿಂದಾಗಿ ಲಿಡ್ಡರ್ ನಲ್ಲಾದಲ್ಲಿ ನೀರಿನ ಮಟ್ಟ ಕೇವಲ ಎರಡು ಗಂಟೆಗಳಲ್ಲಿ ಹಲವಾರು ಅಡಿಗಳಷ್ಟು ಏರಿತು. ಶೇಷ್ನಾಗ್ ನಲ್ಲಾ ಮತ್ತು ಆರು ಕಣಿವೆಯಲ್ಲಿ ನೀರಿನ ಮಟ್ಟ ನಿಯಂತ್ರಣದಲ್ಲಿದೆ ಎಂದು ವರದಿ ತಿಳಿಸಿದೆ. ಬಟ್ಕೋಟ್ ಬಳಿಯ ಅರಣ್ಯದ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಲಿಡ್ಡರ್ ನದಿಯಲ್ಲಿ ಹಠಾತ್ ಭಾರಿ ಹರಿವಿಗೆ ಕಾರಣವಾಯಿತು.
ಐಶ್ಮುಖಂ-ಪಹಲ್ಗಮ್ ರಸ್ತೆಯ ಲ್ಯಾಂಗ್ನೈ ಸೇತುವೆಯ ಬಳಿ ಭಾರಿ ಮಳೆ ಮತ್ತು ಭಾರಿ ನೀರಿನ ಹರಿವು ರಸ್ತೆಯನ್ನು ಮುಚ್ಚಿಹಾಕಿದೆ. ಇದಲ್ಲದೆ, ಲ್ಯಾಂಗ್ನೈ ಬಟ್ಕೋಟ್ ಸೇತುವೆಯು ನೀರಿನ ಪ್ರವಾಹದಿಂದ ಹಾನಿಗೊಳಗಾಗಿದೆ. ಮೇಘಸ್ಫೋಟದಿಂದಾಗಿ ನಾಲ್ಕು ಪ್ರಮುಖ ಪ್ರದೇಶಗಳಾದ ಶೋಪಿಯಾನ್, ಬಂಡಿಪೋರಾ, ಕುಪ್ವಾರಾ ಮತ್ತು ಪಹಲ್ಗಾಮ್ನಲ್ಲಿ ಪ್ರವಾಹ ಉಂಟಾಗಿದೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಪೀಡಿತ ಪ್ರದೇಶಗಳಿಂದ ದೂರವಿರಲು ಸೂಚಿಸಲಾಗಿದೆ.