ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಆರ್‌ಸಿಬಿ ಪರ ವಿರಾಟ್‌ ಕೊಹ್ಲಿಗಾಗಿ ಮತ್ತೊಂದು ಐಪಿಎಲ್‌ ಕಪ್‌ ಗೆಲ್ಲುತ್ತೇವೆʼ: ಯಶ್‌ ದಯಾಳ್‌!

Yash Dayal on RCB's Maiden IPL Cup: ಸತತ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ ಗೆಲುವು ಸಾಧಿಸಿದ ಆರ್‌ಸಿಬಿ ಈ ಸಾಧನೆಯನ್ನು ಮಾಡಿತ್ತು. ಈ ಬಗ್ಗೆ ವೇಗಿ ಯಶ್‌ ದಯಾಳ್‌ ಮಾತನಾಡಿದ್ದಾರೆ.

'ವಿರಾಟ್ ಕೊಹ್ಲಿಗಾಗಿ ಮತ್ತೊಂದು ಕಪ್‌ ಗೆಲ್ಲುತ್ತೇವೆʼ: ಯಶ್ ದಯಾಳ್!

ವಿರಾಟ್‌ ಕೊಹ್ಲಿಗಾಗಿ ಮತ್ತೊಂದು ಕಪ್‌ ಗೆಲ್ಲುತ್ತೇವೆಂದ ಯಶ್‌ ದಯಾಳ್‌.

Profile Ramesh Kote Jun 6, 2025 6:59 PM

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್‌ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ (IPL 2025) ಪ್ರಶಸ್ತಿ ಗೆಲ್ಲಬೇಕೆಂಬ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ (Virat Kohli) ಕನಸನ್ನು ಕೊನೆಗೂ ನನಸಾಗಿಸಿದ್ಧೇವೆ ಎಂದು ಆರ್‌ಸಿಬಿ ವೇಗಿ ಯಶ್ ದಯಾಳ್ (Yash Dayal) ತಿಳಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಇನ್ನೂ ಸಾಕಷ್ಟು ಟ್ರೋಫಿ ಗೆಲ್ಲುತ್ತೇವೆ ಎಂಬ ಭರವಸೆಯನ್ನು ಎಡಗೈ ವೇಗಿ ನೀಡಿದ್ದಾರೆ. ಜೂನ್‌ 3 ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ 6 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಆರ್‌ಸಿಬಿ ಮೊಟ್ಟ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು.

ಐಪಿಎಲ್‌ ಟೂರ್ನಿಯ ಆರಂಭಿಕ ಆವೃತ್ತಿಯಿಂದ ಇಲ್ಲಿಯವರೆಗೂ ಆರ್‌ಸಿಬಿ ತಂಡದ ಪರ ಆಡುತ್ತಾ ಬಂದಿರುವ ವಿರಾಟ್ ಕೊಹ್ಲಿ, ಟ್ರೋಫಿ ಗೆಲ್ಲಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಜೂನ್ 3 (ಮಂಗಳವಾರ) ನಡೆದಿದ್ದ ಫೈನಲ್ ಪಂದ್ಯದಲ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದ ಕೊಹ್ಲಿ, ತಂಡದ ಮೊತ್ತ 190 ತಲುಪಲು ನೆರವು ನೀಡಿದ್ದರು. ನಂತರ ಗುರಿ ಹಿಂಬಾಲಿಸಿದ್ದ ಪಂಜಾಬ್ ಕಿಂಗ್ಸ್, ಶಶಾಂಕ್ ಸಿಂಗ್ (61* ರನ್) ಅರ್ಧಶತಕದ ಹೊರತಾಗಿಯೂ ಆರ್‌ಸಿಬಿ ಬೌಲರ್‌ಗಳ‌ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿ 184 ರನ್‌ಗಳಿಗೆ ಸೀಮಿತವಾಗಿತ್ತು.

RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ!

ಭವಿಷ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುತ್ತೇವೆ: ಯಶ್ ದಯಾಳ್

2025ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಸಂತಸವನ್ನು ವೇಗಿ ಯಶ್ ದಯಾಳ್ ಹಂಚಿಕೊಂಡಿದ್ದು, ಭವಿಷ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

"ವಿರಾಟ್ ಕೊಹ್ಲಿಗಾಗಿ ನಾವು ಈಗ ಏನು ನೀಡಿದ್ದೇವೋ ಅದು ತುಂಬಾ ಕಡಿಮೆ. ಆರ್‌ಸಿಬಿ ಫ್ರಾಂಚೈಸಿ ಪರ 18 ವರ್ಷಗಳಿಂದ ಆಡಿರುವ ಅವರು, ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಕೊನೆಗೂ ಅವರಿಗಾಗಿ ಟ್ರೋಫಿ ಗೆದ್ದಿರುವುದು ಸಂತಸ ತಂದಿದೆ. ಭವಿಷ್ಯದಲ್ಲಿ ಇನ್ನೂ ಸಾಕಷ್ಟು ಟ್ರೋಫಿ ಗೆಲ್ಲುತ್ತೇವೆ," ಎಂದು ಎಡಗೈ ವೇಗಿ ಭರವಸೆಯನ್ನು ನೀಡಿದ್ದಾರೆ.

RCB vs PBKS: ಶಿಖರ್‌ ಧವನ್‌ರ ಐಪಿಎಲ್‌ ಬೌಂಡರಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಆರ್‌ಸಿಬಿ ವೇಗಿಗಳಿಗೆ ದಯಾಳ್ ಶ್ಲಾಘನೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಾಶ್‌ ಹೇಝಲ್‌ವುಡ್ ಅವರೊಂದಿಗೆ ಬೌಲಿಂಗ್ ಹಂಚಿಕೊಂಡ ಅನುಭವದ ಕುರಿತು ದಯಾಳ್ ತಮ್ಮ ಅನಿಸಿಕೆ ತಿಳಿಸಿದ್ದಾರೆ.

"ಅವರಿಬ್ಬರು ನಿಜಕ್ಕೂ ವಿಶ್ವ ಶ್ರೇಷ್ಠ ಬೌಲರ್‌ಗಳು. ಮೆಗಾ ಹರಾಜಿನಲ್ಲಿ ಭುವಿ ಭಯ್ಯಾ ಹಾಗೂ ಜಾಶ್‌ ಹೇಝಲ್‌ವುಡ್ ಅವರು ತಂಡ ಕೂಡಿಕೊಂಡ ನಂತರ ನನ್ನ ಕೆಲಸ ಸುಲಭವಾಯಿತು. ಇದರಿಂದ ನನ್ನ ಮೇಲಿನ ಒತ್ತಡವೂ ಕಡಿಮೆಯಾಯಿತು. ನಮ್ಮ ಬೌಲಿಂಗ್ ಯೋಜನೆಯು ಸರಳವಾಗಿದ್ದು, ಪಂದ್ಯದಲ್ಲೂ ಅದಕ್ಕೆ ಬದ್ಧರಾಗಿದ್ದೆವು. ನಾನು ಅವರೊಂದಿಗೆ ಬೌಲಿಂಗ್ ಅನ್ನು ಆನಂದಿಸಿದ್ದು, ಮುಂದಿನ ದಿನಗಳಲ್ಲೂ ಅವರೊಂದಿಗೆ ಚೆಂಡು ಹಂಚಿಕೊಳ್ಳಲು ಸಂತಸಪಡುತ್ತೇನೆ. ಜಾಶ್‌ ಹೇಝಲ್‌ವುಡ್ ಅವರಿಂದ ಪರಿಪೂರ್ಣವಾಗಿ ಬೌಲ್ ಮಾಡುವ ವಿಧಾನ ಕಲಿತುಕೊಂಡೆ. ನಿಯಮಿತ ಸಮಯದವರೆಗೂ ನಾವು ನಾಣ್ಯವನ್ನು ಗುರಿಯಾಗಿಸಿ ಬೌಲ್ ಮಾಡುತ್ತಿದ್ದರೆ ಆಗ ಆಫ್ ಸ್ಟಂಪ್ ಮೇಲೆ ಬೌಲ್ ಮಾಡಲು ಸುಲಭವಾಗುತ್ತದೆ," ಎಂದು ಯಶ್ ದಯಾಳ್ ಹೇಳಿದ್ದಾರೆ.

2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಜಾಶ್‌ ಹೇಝಲ್‌ವುಡ್ ಗರಿಷ್ಠ ವಿಕೆಟ್ ಟೇಕರ್ ಆಗಿದ್ದು, 12 ಇನಿಂಗ್ಸ್‌ಗಳಿಂದ 22 ವಿಕೆಟ್ ಪಡೆದಿದ್ದರೆ, ಭುವನೇಶ್ವರ್ ಕುಮಾರ್ (17) ಹಾಗೂ ಯಶ್ ದಯಾಳ್ (13) ತಂಡ ತಮ್ಮದೇ ಆದ ಕೊಡುಗೆಯನ್ನು ತಂಡಕ್ಕೆ ನೀಡಿದ್ದಾರೆ.