Gubbi news: ತ್ರಿವಿಧ ದಾಸೋಹ ತತ್ವ ಶರಣರ ಆಸ್ತಿ : ಎಂ.ಜಿ.ಸಿದ್ದರಾಮಯ್ಯ
12ನೇ ಶತಮಾನದ ಶರಣರ ಹಾಗೂ ವಚನಕಾರರ ತತ್ತ್ವಾದರ್ಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಯುವ ಸಮುದಾಯಕ್ಕೆ ಪರಿಚಯಿಸುವ ಅಗತ್ಯವಿದೆ. ಶರಣರ ಮಾನವೀಯ ಮೌಲ್ಯಗಳನ್ನು ಸಮಾಜ ದಲ್ಲಿ ಪಸರಿಸಿ ವಿಶ್ವ ಶಾಂತಿ ಕಾಪಾಡಲು ಶರಣ ಸಾಹಿತ್ಯ ಪರಿಷತ್ತು ಕಾರ್ಯ ಚಟುವಟಿಕೆಗಳು, ಕಾರ್ಯಗಾರ, ಚಿಂತನಾ ಶಿಬಿರಗಳು, ಸಂವಾದ, ದತ್ತಿ ಉಪನ್ಯಾಸ ಹೀಗೆ ಅನೇಕ ಕಾರ್ಯಕ್ರಮ ನಿರಂತರ ನಡೆಸಿದ್ದೇವೆ