ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರು

Gubbi News: ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡಲ್ಲ, ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು..!!

ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು..!!

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ರೈತರು ಶಾಸಕರು, ಸಂಸದರು ಈ ಹೋರಾಟಕ್ಕೆ ಬರಬೇಕು. ಜಿಲ್ಲೆಯ ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಹೋರಾಟಕ್ಕೆ ಯಾರೊಬ್ಬರ ನೇತೃತ್ವಕ್ಕಿಂತ ಸಾಮೂಹಿಕ ನೇತೃತ್ವದಲ್ಲಿ ಯಾರು ಬರಲಿ ಬಿಡಲಿ ಹೋರಾಟ ಸಾವಿರಾರು ರೈತರೊಟ್ಟಿಗೆ ನಡೆಯಲಿದೆ.

10 ಕೋಟಿ ರುಪಾಯಿಗೂ ಅಧಿಕ ರಾಯಧನ ಬಾಕಿ: ಶಾಸಕ ವೆಂಕಟೇಶ್ ಒಡೆತನದ ಕಲ್ಲುಗಣಿ ಗುತ್ತಿಗೆ ರದ್ದು

ಪಾವಗಡ ಶಾಸಕ ವೆಂಕಟೇಶ್ ಒಡೆತನದ ಕಲ್ಲುಗಣಿ ಗುತ್ತಿಗೆ ರದ್ದು

Pavagada MLA Venkatesh: ಸರ್ಕಾರಿ ನಿಯಮ ಉಲ್ಲಂಘಿಸಿ 10 ಕೋಟಿ ರುಪಾಯಿಗೂ ಅಧಿಕ ರಾಯಧನ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಪಾವಗಡ ತಾಲೂಕಿನ ತಿಪ್ಪಯ್ಯನದುರ್ಗದಲ್ಲಿರುವ ಪಾವಗಡ ಕಾಂಗ್ರೆಸ್ ಶಾಸಕ ವೆಂಕಟೇಶ್, ಪತ್ನಿ ಶಶಿಕಲಾ ಒಡೆತನದ ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಆದೇಶಿಸಿದೆ.

ಪ್ರಧಾನಿ ಮೋದಿ ದೀರ್ಘಾವಧಿ ಆಡಳಿತಕ್ಕೆ ಗುಬ್ಬಿಯಲ್ಲಿ ವಿಶೇಷ ಪೂಜೆ

ಪ್ರಧಾನಿ ಮೋದಿ ದೀರ್ಘಾವಧಿ ಆಡಳಿತಕ್ಕೆ ಗುಬ್ಬಿಯಲ್ಲಿ ವಿಶೇಷ ಪೂಜೆ

ಅತ್ಯಧಿಕ ಅವಧಿಯ ಚುನಾಯಿತ ಪ್ರಧಾನಿಯಾಗಿ ಇಡೀ ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಹನ್ನೆರಡು ವರ್ಷದ ಅಧಿಕಾರ ವಿಶ್ವಕ್ಕೆ ಮಾದರಿಯಾಗಿದೆ. ಜಾಗತಿಕ ಮಟ್ಟದಲ್ಲಿ ವಿಶೇಷ ಹೆಗ್ಗುರುತು ಹಚ್ಚಿದ ಮೋದಿ ಅವರ ಸ್ವಚ್ಛ ಆಡಳಿತ ಸರ್ವಧರ್ಮ ಸಾಕಾರ ಹಾಗೂ ಅಭಿವೃದ್ದಿಯ ಹರಿಕಾರ ಎಂದೆನಿಸಿದ್ದಾರೆ.

Gubbi News: ಹೇಮಾವತಿ ಲಿಂಕ್ ಕೆನಾಲ್ ನಿಲ್ಲಲೇಬೇಕು: ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು

ಹೇಮಾವತಿ ಲಿಂಕ್ ಕೆನಾಲ್ ನಿಲ್ಲಲೇಬೇಕು

ಜಿಲ್ಲೆಯ ಏಳು ತಾಲ್ಲೂಕಿಗೆ ಜೀವನದಿಯಾದ ಹೇಮಾವತಿ ಅವೈಜ್ಞಾನಿಕವಾಗಿ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹೆಸರಲ್ಲಿ ಮಾಗಡಿ ರಾಮನಗರಕ್ಕೆ ಹರಿಸುವ ಕಾಮಗಾರಿಯನ್ನು ಸರ್ಕಾರ ಕೈ ಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೈತರಿಂದ ನಡೆಯಲಿದೆ. ಈ ಬಗ್ಗೆ ಪೂರ್ವ ಭಾವಿ ಸಭೆಯನ್ನು ಗುಬ್ಬಿಯಲ್ಲಿ ಜೂ.11ರಂದು ನಡೆಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.

ದೇವರಾಜ ಅರಸು ಬರುವುದಕ್ಕೂ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಪ್ರಶ್ನೆ

ದೇವರಾಜ ಅರಸುಗಿಂತ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ರಮೇಶ್‌ ಕುಮಾರ್

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಡಿ.ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಮತ್ತು ʼಡಿ.ದೇವರಾಜ ಅರಸು ಸಮಸಮಾಜದ ಕನಸುಗಾರ' ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಮಾತನಾಡಿದ್ದಾರೆ.

MLA S R Srinivas: ಲಿಂಕ್ ಕೆನಾಲ್ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾಹಿತಿಯ ನೀಡಿದ್ದೇನೆ: ಶಾಸಕ ಎಸ್ ಆರ್ ಶ್ರೀನಿವಾಸ್*

ಲಿಂಕ್ ಕೆನಾಲ್ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ

ತಾಲೂಕಿನ ಮದನ ಘಟ್ಟ, ಸಾರಿಗೆ ಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಒಟ್ಟು 5 ಕೋಟಿ ರೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಚಿವ ಸ್ಥಾನಕ್ಕೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಒಂದು ಬಾರಿ ಮಾತ್ರ ಕೇಳಿದ್ದು, ಸಾಧಕ ಬಾಧಕಗಳನ್ನು ನೋಡಿ ವಿಚಾರ ಮಾಡುವ ಭರವಸೆ ನೀಡಿದ್ದಾರೆ. ಹಾಗಾಗಿ ಅದನ್ನು ಮೀರಿ ಪ್ರತಿನಿತ್ಯ ಅವರ ಮನೆಗೆ ಹೋದರೆ ಸರಿ ಹೋಗುವುದಿಲ್ಲ

ಬೆಳಗ್ಗೆ 10 ಗಂಟೆಯೊಳಗೆ ಸಿಬ್ಬಂದಿ ಹಾಜರಿರಬೇಕು, ಗುರುತಿನ ಚೀಟಿ ಕಡ್ಡಾಯ: ಚಿಕ್ಕನಾಯಕನಹಳ್ಳಿ ತಾಪಂನೂತನ ಇಒ ಶಿವರಾಜಯ್ಯ ಖಡಕ್ ಸೂಚನೆ

ಬೆಳಗ್ಗೆ 10 ಗಂಟೆಯೊಳಗೆ ಸಿಬ್ಬಂದಿ ಹಾಜರಿರಬೇಕು: ಇಒ ಶಿವರಾಜಯ್ಯ ಸೂಚನೆ

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಕಚೇರಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಬೆಳಿಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಅಲ್ಲದೆ, ಕರ್ತವ್ಯದ ಅವಧಿಯಲ್ಲಿ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ತಾಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.

BESCOM Online Services: ಸಾಫ್ಟ್‌ವೇರ್‌ ಅಳವಡಿಕೆ: 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ

ಸಾಫ್ಟ್‌ವೇರ್‌ ಅಳವಡಿಕೆ: 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ

ಐಪಿಡಿಎಸ್‌ ಐಟಿ ಅಪ್ಲಿಕೇಶನ್‌ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್‌ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಜೂನ್‌ 10ರಿಂದ 30ರವರೆಗೆ ಬೆಸ್ಕಾಂನ ಆನ್‌ಲೈನ್‌ ಸೇವೆಗಳು ಲಭ್ಯ ವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಚಿನ್ನದ ಪದಕದ ಬದಲು ಚೆಕ್ ನೀಡಲು ಮುಂದಾದ ತುಮಕೂರು ವಿವಿ; ವಿದ್ಯಾರ್ಥಿಗಳ ಪ್ರತಿಭಟನೆ

ಚಿನ್ನದ ಪದಕದ ಬದಲು ಚೆಕ್ ನೀಡಲು ಮುಂದಾದ ತುಮಕೂರು ವಿವಿ

Tumkur News: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ವಿವಿ ವತಿಯಿಂದ ಚೆಕ್ ನೀಡಲು ಮುಂದಾದಾಗ ವಿದ್ಯಾರ್ಥಿಗಳು ಚೆಕ್ ವಾಪಸ್ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.

ಸಾಧನೆಗೆ ವಯಸ್ಸು ಅಡ್ಡಿಯಲ್ಲ; 76ನೇ ವರ್ಷದಲ್ಲಿ LLMನಲ್ಲಿ 4ನೇ ರ‍್ಯಾಂಕ್ ಪಡೆದ ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ

76ನೇ ವಯಸ್ಸಿನಲ್ಲಿ 4ನೇ ರ‍್ಯಾಂಕ್ ಪಡೆದ ವಿ. ತಿಪ್ಪೇಸ್ವಾಮಿ

Tumkur News: ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ 76ನೇ ವಯಸ್ಸಿನಲ್ಲಿ ಕಾನೂನು ವಿಭಾಗದ ಎಲ್‌ಎಲ್‌ಎಂ ಕೋರ್ಸ್‌ನಲ್ಲಿ ನಾಲ್ಕನೇ ರ‍್ಯಾಂಕ್ ಪಡೆಯುವ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಅವರು ಪ್ರಮಾಣ ಪತ್ರ ಸ್ವೀಕರಿಸಿದರು.

Tumkur News: ಬ್ಯಾಕ್‌ಬೆಂಚ್ ಗುಡ್‌ಬೈ; ಶ್ರೀ ಸತ್ಯಸಾಯಿ ಗುರುಕುಲಮ್‌ನಲ್ಲಿ U ಆಕಾರದ ಆಸನ ವ್ಯವಸ್ಥೆ: ಗಮನ ಸೆಳೆದ ಪ್ರಯೋಗ

ಶ್ರೀ ಸತ್ಯಸಾಯಿ ಗುರುಕುಲಮ್‌ನಲ್ಲಿ ಯು ಆಕಾರದ ಆಸನ ವ್ಯವಸ್ಥೆ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಕಾರುಣ್ಯ ನಿಕೇತನಂ ಶಾಲೆಯಲ್ಲಿ ಬ್ಯಾಕ್‌ಬೆಂಚ್ ವ್ಯವಸ್ಥೆಗೆ ವಿದಾಯ ಹೇಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಮ್‌ ಸಂಸ್ಥೆಯ ಅಧೀನದಲ್ಲಿರುವ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ 8ನೇ ತರಗತಿಯಲ್ಲಿ ವಿನೂತನ ಪ್ರಯೋಗ ಆರಂಭಿಸಲಾಗಿದೆ. ವಿದ್ಯಾರ್ಥಿಗಳನ್ನು ಯು ಆಕಾರದಲ್ಲಿ ಕೂರಿಸಲಾಗುತ್ತಿದೆ.

ಗುರುಗಳ ಆಶೀರ್ವಾದವೇ ಯಶಸ್ಸಿನ ರಹಸ್ಯ: ಹಂದನಕೆರೆ, ತಿಪಟೂರು ಕಾಡಸಿದ್ದೇಶ್ವರ ಮಠಗಳೊಂದಿಗೆ ಡಿಕೆಶಿಗೆ ಅವಿನಾಭಾವ ಬಾಂಧವ್ಯ

ತುಮಕೂರಿನ ಧಾರ್ಮಿಕ ಕ್ಷೇತ್ರಗಳೊಂದಿಗೆ ಡಿಕೆಶಿಗೆ ಅವಿನಾಭಾವ ಬಾಂಧವ್ಯ

CM DK Shivakumar: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳೊಂದಿಗೆ ಅವರಿಗಿರುವ ದಶಕಗಳ ಅವಿನಾಭಾವ ಬಾಂಧವ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಕುರಿತ ವಿವರ ಇಲ್ಲಿದೆ.

ಕಮರ್ಷಿಯಲ್ ಶೆಡ್ಡುಗಳ ನಿರ್ಮಾಣ ಕಣ್ಮುಚ್ಚಿ ಕುಳಿತ ನಗರಸಭೆ, ಸಾರ್ವಜನಿಕರ ಆಕ್ರೋಶ: ಜನವಸತಿ ಪ್ರದೇಶಗಳಲ್ಲಿ ಅನಧಿಕೃತ ಕಮರ್ಷಿಯಲ್ ಶೆಡ್ಡುಗಳು!

Tiptur News: ಜನವಸತಿ ಪ್ರದೇಶಗಳಲ್ಲಿ ಅನಧಿಕೃತ ಕಮರ್ಷಿಯಲ್ ಶೆಡ್ಡುಗಳು!

ನಗರ ಪ್ರದೇಶದಲ್ಲಿ ಕೆಲ ಸೈಟಿನ ಮಾಲೀಕರು ಹಣ ಮಾಡುವ ಆಸೆಯಿಂದಾಗಿ ಶೆಡ್ಡು ಗಳನ್ನು ನಿರ್ಮಿಸಿ ಬಾಡಿಗೆಗೆ ಅಥವಾ ಜಾಗವನ್ನು ಭೋಗ್ಯಕ್ಕೆ ಕೊಡುತ್ತಿದ್ದಾರೆ. ಅಂತಹ ಶೆಡ್ಡುಗಳ ಬಾಡಿಗೆದಾರರು ಯಾವ ರೀತಿಯಲ್ಲಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಅಕ್ಕಪಕ್ಕ ದವರಿಗೆ ತೊಂದರೆಯಾಗುತ್ತಿದೆಯೇ ಎಂಬುದನ್ನು ಅರಿಯಬೇಕಿದೆ.

ಡಿಕೆಶಿ ಸಂಪುಟದಲ್ಲಿ ಪುಟ್ಟರಂಗಶೆಟ್ಟಿಗೆ ಮಂತ್ರಿಗಿರಿ ನೀಡಿ: ರಾಜ್ಯ ಉಪ್ಪಾರ ಸಂಘ ಒತ್ತಾಯ

ಸಿ. ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ: ಉಪ್ಪಾರ ಸಂಘ ಒತ್ತಾಯ

Chikkanayakanahalli News: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಡಿ.ಕೆ. ಶಿವಕುಮಾರ್‌ ಅವರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ಕಲ್ಲೇಶ್ ಒತ್ತಾಯಿಸಿದ್ದಾರೆ.

Railway Minister V.Somanna: ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ರೈಲ್ವೆ ಸಚಿವ ವಿ.ಸೋಮಣ್ಣ

ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಕೇಂದ್ರ ಸರ್ಕಾರ ಮಹತ್ವದ ಲಸಿಕೆ ಅಭಿಯಾನ ಇಂದು ಆರಂಭಿಸಿದೆ. ಆದರೆ ಈ ವ್ಯಾಕ್ಸಿನ್ ಬಗ್ಗೆ ಯಾರಿಗೂ ಮಾಹಿತಿಯಾಗಲಿ, ಪ್ರಚಾರವಾಗಲಿ ಮಾಡಿಲ್ಲ. 16900 ವ್ಯಾಕ್ಸಿನ್ ಜಿಲ್ಲೆಗೆ ಬಂದಿ ದ್ದರೂ ಹೆಣ್ಣು ಮಕ್ಕಳ ಆರೋಗ್ಯ ಬಗ್ಗೆ ಇಲಾಖೆಯು ನಿರಾಸಕ್ತಿ ತೋರಿರುವುದು ಬೇಸರ ತಂದಿದೆ.

MLA S.R.Srinivas: ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನಕ್ಕೆ ಕಾಡು ಗೊಲ್ಲರ ಆಗ್ರಹ

ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನಕ್ಕೆ ಕಾಡು ಗೊಲ್ಲರ ಆಗ್ರಹ

ಕಾಂಗ್ರೆಸ್ ಆಡಳಿತ ತರುವಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಶ್ರಮ ವಿದೆ. ಸಮಸ್ತ ಕಾಡುಗೊಲ್ಲರ ಪರವಾಗಿ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಲು ಮುಖ್ಯಮಂತ್ರಿಗಳು ಗುಬ್ಬಿಯ ಶ್ರೀನಿವಾಸ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳ ಬೇಕು. ಎಲ್ಲಾ ಓಬಿಸಿ ವರ್ಗಗಳನ್ನು ಕೈ ಹಿಡಿದ ವಾಸಣ್ಣ ನಮ್ಮ ಸಮಾಜಕ್ಕೆ ಆಧಾರವಾಗಲಿದ್ದಾರೆ

ಮಧುಗಿರಿ ತಾಪಂನಲ್ಲಿ 4.24 ಕೋಟಿ ಗುಳುಂ; ಮೂವರು ಇಒಗಳ ಸಸ್ಪೆಂಡ್

ಮಧುಗಿರಿ ತಾಪಂನಲ್ಲಿ 4.24 ಕೋಟಿ ಗುಳುಂ; ಮೂವರು ಇಒಗಳ ಸಸ್ಪೆಂಡ್

ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ನೌಕರರ ಗಳಿಕೆ ರಜೆ ನಗದೀಕರಣ ಮಂಜೂರಾತಿಯಲ್ಲಿ ಅಕ್ರಮ ಎಸಗಿ, ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿ ಮೂವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Tiptur Rain: ಕೊಬ್ಬರಿ ನಾಡಿನಲ್ಲಿ ಬಿರುಗಾಳಿ ಸಹಿತ ವರುಣಾರ್ಭಟ; ಧರೆಗೆ ಉರುಳಿದ ನೂರಾರು ಕಲ್ಪವೃಕ್ಷ, ಶೆಡ್‌ ಶೀಟ್‌ ಬಿದ್ದು ಬಾಲಕನಿಗೆ ಗಂಭೀರ ಗಾಯ

ಕೊಬ್ಬರಿ ನಾಡಿನಲ್ಲಿ ವರುಣಾರ್ಭಟ; ಧರೆಗೆ ಉರುಳಿದ ನೂರಾರು ಕಲ್ಪವೃಕ್ಷ

Tiptur News: ತಿಪಟೂರಿನಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಮೇತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ತೆಂಗಿನಕಾಯಿ ಫ್ಯಾಕ್ಟರಿ ಕಾರ್ಮಿಕರಿಗೆಂದು ನಿರ್ಮಿಸಿದ್ದ ಶೆಡ್ಡುಗಳ ಮೇಲ್ಚಾವಣಿ ಹಾರಿ ಹೋಗಿವೆ. ಹುಳಿಯಾರು ಮುಖ್ಯ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬಿರುಗಾಳಿಯ ಅರ್ಭಟಕ್ಕೆ 500ಕ್ಕೂ ಹೆಚ್ಚು ತೆಂಗಿನ ಮರಗಳು ಬಿದ್ದು ಹೋಗಿವೆ, 3000ಕ್ಕೂ ಹೆಚ್ಚು ಬಾಳೆ ಗಿಡಗಳು ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು ನೆಲಕಚ್ಚಿವೆ.

ಸ್ವಗ್ರಾಮ ಹನುಮಂತನಹಳ್ಳಿಯಲ್ಲಿ ನೆರವೇರಿದ ಮಾಜಿ ಸಚಿವ ವೆಂಕಟರಮಣಪ್ಪ ಅಂತ್ಯಕ್ರಿಯೆ; ಸಿದ್ದರಾಮಯ್ಯ ಸೇರಿ ಗಣ್ಯರಿಂದ ಅಂತಿಮ ದರ್ಶನ

ಸ್ವಗ್ರಾಮದಲ್ಲಿ ನೆರವೇರಿದ ಮಾಜಿ ಸಚಿವ ವೆಂಕಟರಮಣಪ್ಪ ಅಂತ್ಯಕ್ರಿಯೆ

Former Minister Venkataramanappa: ಪಾವಗಡ ತಾಲೂಕಿನ ಹನುಮಂತನಹಳ್ಳಿಯ ತೋಟದಲ್ಲಿ ಸಕಲ ಸರ್ಕಾರಿ ಗೌರಗಳೊಂದಿಗೆ ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಮುಖಂಡ ವೆಂಕಟರಮಣಪ್ಪ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ರಾಜಕೀಯ ಗಣ್ಯರು, ಸಾರ್ವಜನಿಕರು, ಅಭಿಮಾನಿಗಳು ಸೇರಿ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ರುದ್ರಪ್ಪ ಲಮಾಣಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಶ್ರೀ ಸೇವಾಲಾಲ್ ಲಂಬಾಣಿ ಸಂಘ ಒತ್ತಾಯ

ರುದ್ರಪ್ಪ ಲಮಾಣಿಗೆ ಡಿಸಿಎಂ ಸ್ಥಾನ ನೀಡಿ; ಬಿ.ಟಿ. ಕುಮಾರ್ ಒತ್ತಾಯ

ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಮುಂಬರುವ ಸಂಪುಟ ಪುನಾರಚನೆಯಲ್ಲಿ ಉಪಮುಖ್ಯಮಂತ್ರಿ ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಮತ್ತು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸಮಾಜದ ಪಕ್ಷದ ಮುಖಂಡರುಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ತಾ.ಶ್ರೀ ಸೇವಾಲಾಲ್ ಲಂಬಾಣಿ ಸಂಘ ಮನವಿ ಮಾಡಿದೆ.

ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ; ಶನಿವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

Former minister Venkataramanappa Death: ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ (80) ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆ ಪಾವಗಡ ತಾಲೂಕಿನ ಸ್ವ ಗ್ರಾಮದ ಹನುಮಂತನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ.

Tiptur News: ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ತಿಪಟೂರಿನ ಪ್ರಣವ್ ಲೋಕೇಶ್ ಆಯ್ಕೆ

ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ಪ್ರಣವ್ ಲೋಕೇಶ್

Tiptur News: ತಿಪಟೂರು ನಗರದ ಜೈ ಮಾರುತಿ ಟೇಕ್ವಾಂಡೋ ತರಬೇತಿ ಕೇಂದ್ರದ ವಿದ್ಯಾರ್ಥಿ ಪ್ರಣವ್ ಲೋಕೇಶ್ ಥೈಲ್ಯಾಂಡ್‌ನಲ್ಲಿ ಮೇ 30ರಂದು ಶನಿವಾರ ಹಾಗೂ ಮೇ 31ರಂದು ಭಾನುವಾರ ನಡೆಯಲಿರುವ ಅಂತಾರಾಷ್ಟಿಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

ʼʼಮುಂದೆ ಇದೆ ಭಾರಿ ಸವಾಲು, ಎಚ್ಚರಿಕೆ ಅಗತ್ಯʼʼ:  ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ದೊರೆಯುತ್ತಿದ್ದಂತೆ ಸ್ಫೋಟಕ ಭವಿಷ್ಯ ನುಡಿದ  ಕರಿಬಸವೇಶ್ವರ ಸ್ವಾಮೀಜಿ

ಡಿಕೆಶಿ ಸಿಎಂ ಪಟ್ಟ ದೊರೆಯುತ್ತಿದ್ದಂತೆ ಸ್ಫೋಟಕ ಭವಿಷ್ಯ ನುಡಿದ ಅಜ್ಜಯ್ಯ

DK Shivakumar: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸದ್ಯದಲ್ಲೇ ಸಿಎಂ ಪಟ್ಟಕ್ಕೆ ಏರಲಿದ್ದಾರೆ. ಹಾಗಂತ ಡಿಕೆಶಿ ಅವರ ಮುಂದಿನ ಹಾದಿ ಹೂವಿನ ಹಾಸಲ್ಲ. ಕಲ್ಲು-ಮುಳ್ಳುಗಳ, ಸವಾಲಿನ ಹಾದಿಯೇ ಮುಂದಿದೆ ಎಂದು ಡಿಕೆಶಿ ಅವರ ಪರಮ ದೈವ, ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಹೇಳಿದ್ದಾರೆ. ಸದ್ಯ ಈ ಭವಿಷ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ರೇಷ್ಮೆ ಉತ್ಪಾದನೆ: ತುಮಕೂರು ರಾಜ್ಯದಲ್ಲೇ ಪ್ರಥಮ

ರೇಷ್ಮೆ ಉತ್ಪಾದನೆ: ತುಮಕೂರು ರಾಜ್ಯದಲ್ಲೇ ಪ್ರಥಮ

ಮಾ 2020ರ ಅಂತ್ಯಕ್ಕೆ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಜಿಲ್ಲೆಯ ರೈತರು ರೇಷ್ಮೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯಾಗಿ ಸ್ವೀಕರಿಸಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 10223 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುವ ಗುರಿಯನ್ನು ತಲುಪಲಾಗಿದ್ದು, ಹಸಿರು ಹೊದಿಕೆಯಂತೆ ಕಾಡುತ್ತಿರುವ ಹಿಪ್ಪು ನೇರಳೆ ತೋಟಗಳು ಜಿಲ್ಲೆಯ ಆರ್ಥಿಕತೆಗೆ ಬಲ ತುಂಬುತ್ತಿವೆ.

Loading...