ಚಿಕ್ಕನಾಯಕನಹಳ್ಳಿಗೆ ಶನಿವಾರ ನಟ ಕಿಚ್ಚ ಸುದೀಪ್ ಭೇಟಿ
ನಟ ಸುದೀಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಡಿವಿಪಿ ಶಾಲಾ ಮೈದಾನದಲ್ಲಿ ಚಿತ್ರತಂಡದಿಂದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.