ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ತುಮಕೂರು
Gubbi News: ರಾಷ್ಟ್ರ ಭಕ್ತಿ ಸಮರ್ಪಣೆಗೆ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ : ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಕರೆ

ರಾಷ್ಟ್ರ ಭಕ್ತಿ ಸಮರ್ಪಣೆಗೆ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ

ಬಿಜೆಪಿ ಪಕ್ಷದ ಮೂಲಕ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯ ಕರ್ತರು ಪ್ರತಿ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರ ಧ್ವಜವನ್ನು ಎಲ್ಲಾ ಕಾರ್ಯಕರ್ತರಿಗೆ ನೀಡಲಾಗಿದೆ

Gubbi News: ಸ್ವಚ್ಛತೆ ಶುದ್ಧ ಜಲ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ತಾಪಂ ಇಓ ಶಿವಪ್ರಕಾಶ್

ಜಲ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ತಾಪಂ ಇಓ ಶಿವಪ್ರಕಾಶ್

ಕರಿಶೆಟ್ಟಿಹಳ್ಳಿ ಗ್ರಾಮದ ಬಳಿಯ ಕಸ ವಿಲೇವಾರಿ ಘಟಕ ಹತ್ತಿರ ಸ್ವಚ್ಛತಾ ಕಾರ್ಯ ನಡೆಸಿದ ಇಓ ಶಿವಪ್ರಕಾಶ್ ಅವರು ಸುದ್ದಿಗಾರರ ಜೊತೆ ಮಾತನಾಡಿ ಜಾಗತೀಕ ಯುಗದಲ್ಲಿ ಪರಿಸರ ಕಲುಷಿತ ಗೊಂಡಿದೆ. ಶುದ್ಧ ನೀರು ಗಾಳಿ ದೊರೆಯುವುದು ಕಷ್ಟಕರವಾಗುತ್ತಿದೆ. ಮುಂದಿನ ಪೀಳಿಗೆ ಉಳಿಸುವ ಸಲುವಾಗಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತ ಸರ್ಕಾರ ಪ್ರತಿ ಹಳ್ಳಿಯಲ್ಲೂ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದೆ

Tumkur Protest: ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ; ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

Dharmasthala Case: ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಧಿಗಳ ವೇದಿಕೆ, ಶ್ರೀ ಪುಣ್ಯಕ್ಷೇತ್ರ ಪಾದಯಾತ್ರಿಗಳ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ತುಮಕೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

KN Rajanna: ಕೆಎನ್​ ರಾಜಣ್ಣ ವಜಾ ವಿರೋಧಿಸಿ ಮಧುಗಿರಿ ಬಂದ್​, ಪೆಟ್ರೋಲ್ ಸುರಿದುಕೊಂಡು ಅಭಿಮಾನಿ ಆತ್ಮಹತ್ಯೆ ಯತ್ನ

ಕೆಎನ್​ ರಾಜಣ್ಣ ವಜಾ ವಿರೋಧಿಸಿ ಮಧುಗಿರಿ ಬಂದ್​, ಅಭಿಮಾನಿ ಆತ್ಮಹತ್ಯೆ ಯತ್ನ

Tumkur news: ರಾಜಣ್ಣ ಅವರನ್ನು ವಜಾಗೊಳಿಸಿದ ಕ್ರಮವನ್ನು ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಬೆಂಬಲಿಗರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಿರುಸು ಪಡೆದು, ಬೆಂಬಲಿಗರು ಬಸ್ ತಡೆಯುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಮುಖಂಡರು ಇಂದು ಮಧುಗಿರಿ ಬಂದ್​ಗೆ ಕರೆ ನೀಡಿದ್ದಾರೆ.

Tumkur News: ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣ; ಕಿರುಕುಳಕ್ಕೆ ಬೇಸತ್ತು ಅತ್ತೆಯನ್ನೇ ಕೊಂದಿದ್ದ ಅಳಿಯ!

ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣ: ಮೂವರ ಬಂಧನ

Tumkur News: ತುಮಕೂರು ತಾಲೂಕಿನ ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಎಂಬಾಕೆಯನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧೆಡೆ ದೇಹದ ಅಂಗಾಂಗಗಳನ್ನು ವಿವಿಧ ಕಡೆ ಬಿಸಾಡಿದ ಆರೋಪದಡಿ ಲಕ್ಷ್ಮಿದೇವಮ್ಮ ಕಿರಿಯ ಮಗಳನ್ನು ವಿವಾಹವಾಗಿದ್ದ ಅಳಿಯ ದಂತ ವೈದ್ಯ ರಾಮಚಂದ್ರ ಸೇರಿ ಮೂವರನ್ನು ಕೊರಟಗೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Tumakur Crime: ಮಾನವನ ಕೈ ತುಂಡು ಹಿಡಿದು ಸಂಚರಿಸುತ್ತಿದ್ದ ಬೀದಿ ನಾಯಿ; ತುಮಕೂರನ್ನು ಬೆಚ್ಚಿ ಬೀಳಿಸಿದ ಘಟನೆ

ತುಮಕೂರಿನಲ್ಲಿ ತಲೆ ಇಲ್ಲದ ಮಾನವ ದೇಹದ ಅವಶೇಷ ಪತ್ತೆ

ಗೃಹ ಸಚಿವ ಜಿ. ಪರಮೇಶ್ವರ ಅವರ ವಿಧಾನಸಭಾ ಕ್ಷೇತ್ರ ತುಮಕೂರು ಜಿಲ್ಲೆಯ ಚಿಂಪಾಗನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಬೀದಿ ನಾಯಿಯೊಂದು ಕತ್ತರಿಸಿದ ಮಾನವ ಕೈಯನ್ನು ಬಾಯಲ್ಲಿ ಹಿಡಿದುಕೊಂಡು ಪೊದೆಗಳಿಂದ ಹೊರ ಬರುತ್ತಿರುವುದನ್ನು ದಾರಿ ಹೋಕರೊಬ್ಬರು ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ವೇಳೆ ತಲೆ ಇಲ್ಲದ ಮಾನವನ ದೇಹದ ಅವಶೇಷಗಳು ಪತ್ತೆಯಾಗಿವೆ.

Chikkanayakanahalli News: ಚಿಕ್ಕನಾಯಕನಹಳ್ಳಿಯಲ್ಲಿ ಇನ್ನೂ ಖಾಸಗಿ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದೆ ಅಬಕಾರಿ ಇಲಾಖೆ: ದಂಧೆ ರೂಪ ಪಡೆದ ಬಾಡಿಗೆ ವಹಿವಾಟು?

ಖಾಸಗಿ ಕಟ್ಟಡದಲ್ಲೇ ಇದೆ ಅಬಕಾರಿ ಇಲಾಖೆ; ಲಕ್ಷಾಂತರ ರೂ. ವ್ಯರ್ಥ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಸರ್ಕಾರಿ ಕಟ್ಟಡ ಲಭ್ಯವಿದ್ದರೂ ಅಬಕಾರಿ ಇಲಾಖೆ ಕಚೇರಿಯು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.

Body Found: ರಸ್ತೆಯುದ್ದಕ್ಕೂ ಕಂಡುಬಂದ ಮಹಿಳೆಯ ದೇಹದ ಚೂರುಗಳು; ಬರ್ಬರವಾಗಿ ಕೊಲೆಯಾದಾಕೆ ಯಾರು?

ಮಹಿಳೆಯ ದೇಹದ ಚೂರುಗಳು ಪತ್ತೆ; ಬರ್ಬರವಾಗಿ ಕೊಲೆಯಾದಾಕೆ ಯಾರು?

Tumkur News: ಪೊಲೀಸರು ಈ ಘಟನೆಯನ್ನು ಕೊಲೆಯೆಂದು ಶಂಕಿಸಿದ್ದು, ದೇಹದ ತಲೆ ಮತ್ತು ಮುಂಡವನ್ನು ಪತ್ತೆಹಚ್ಚಲು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಂಡುಬಂದ ಮಹಿಳೆಯ ಬಳೆ ಮತ್ತು ಒಡವೆಗಳ ಆಧಾರದ ಮೇಲೆ ದೇಹದ ಭಾಗಗಳು ಮಹಿಳೆಯದೆಂದು ಗುರುತಿಸಲಾಗಿದೆ.

Gubbi News: ಹಾಗಲವಾಡಿ ಕೆರೆಗೆ ಈ ವರ್ಷವೇ ನೀರು ಹರಿಸಲು ಕ್ರಮ ಕೈಗೊಳ್ಳಿ : ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚನೆ

ಹಾಗಲವಾಡಿ ಕೆರೆಗೆ ಈ ವರ್ಷವೇ ನೀರು ಹರಿಸಲು ಕ್ರಮ ಕೈಗೊಳ್ಳಿ

ರಸಗೊಬ್ಬರ ಕೊರತೆ ಬಾರದಂತೆ ಕೃಷಿ ಅಧಿಕಾರಿಗಳು ನಿಗಾ ವಹಿಸಬೇಕು. ಖಾಸಗಿ ಅಂಗಡಿಗಳು ಕಾಳ ಸಂತೆ ಮಾರಾಟ ಮಾಡಿದಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲದ ಈ ಸಮಯ ಕೃಷಿ ಇಲಾಖೆಯ ಕೆಲಸ ಹೆಚ್ಚು. ಬಿತ್ತನೆ ಬೀಜ, ಗೊಬ್ಬರ ಇನ್ನಿತರ ಪರಿಕರಗಳ ಕೊರತೆ ಬಾರದಂತೆ ನಿಗಾ ವಹಿಸಿ ಎಂದು ಸೂಚಿಸಿದ ಶಾಸಕರು ಶಿಕ್ಷಣ ಇಲಾಖೆ ಕೂಡಲೇ ಹಳೆಯ ಶಾಲಾ ಕಟ್ಟಡಗಳು, ಶಿಥಿಲಾವಸ್ಥೆಯ ಕೊಠಡಿಗಳು ಕೆಡವಿ ನಿವೇಶನ ಮಾಡಲು ಪಟ್ಟಿ ತಯಾರಿಸಬೇಕು

Adichunchanagairi Mutt Sri: ಜಿಡಿಪಿ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಜಿಡಿಪಿ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶ

ಅಮೆರಿಕಾದಂತಹ ದೇಶಗಳು ನಮ್ಮ ದೇಶದ ಮೇಲೆ ಸವಾರಿ ಮಾಡಲು ಕಾರಣವೇ ಆರ್ಥಿಕ ಹಿನ್ನಡೆ ಕಾರಣವಿತ್ತು. ಈಗ ಅಬಿವೃದ್ದಿ ಪಥದಲ್ಲಿ ಭಾರತ ದಾಪುಗಾಲು ಹಾಕಿದೆ. ಆರ್ಥಿಕವಾಗಿ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಸಹ ಉತ್ತಮ ಮಾರ್ಗವಾಗಿದೆ. ನಮ್ಮ ದೇಶದಲ್ಲಿ ಶೇ 50 ರಷ್ಟು ರೈತರು ದುಡಿಮೆ ಮಾಡುತ್ತಿದ್ದರು. ಅವರ ಆರ್ಥಿಕತೆಯ ಪ್ರಮಾಣ ಮಾತ್ರ ಶೇ.18 ರಷ್ಟು ಮಾತ್ರ ಇತ್ತು

M L A T B Jayachandra: ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು

ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯಬಾರದು

ಸೆಪ್ಟಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರಾ ಕ್ಷೇತ್ರಕ್ಕೆ ಭೇಟಿ ಕೊಡುವು ದರಿಂದ ನಾವು ಕನಿಷ್ಠ 10 ರಿಂದ 15 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚುವ ಕಾರ್ಯ ಕೈಗೊಳ್ಳಬೇಕಾಗಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು, ಅರ್ಹ ಫಲಾನುಭವಿ ಗಳಿಗೆ ಮಾತ್ರ ನಿವೇಶನ ಸಿಗಬೇಕು

Chikkanayakanahalli News: ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕ ಸುರೇಶ್‌ ಬಾಬುರಿಂದ ಚರ್ಚೆ ​

ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕರಿಂದ ಚರ್ಚೆ ​

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ಒದಗಿಸು ವುದು ಹಾಗೂ ಜಾಗತಿಕ ಪರಿಸರದಲ್ಲಿ ನಮ್ಮ ಪಾತ್ರದ ಬಗ್ಗೆ ಜೆ.ಡಿ.ಎಲ್.ಪಿ. ನಾಯಕ ಮತ್ತು ಶಾಸಕರಾದ ಸಿ.ಬಿ. ಸುರೇಶ್‌ಬಾಬು ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

Peacocks Death: ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳು ನಿಗೂಢ ಸಾವು

ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳು ನಿಗೂಢ ಸಾವು

Tumkur News: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ 5 ಗಂಡು ಹಾಗೂ 14 ಹೆಣ್ಣು ಸೇರಿ ಒಟ್ಟು 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವುದು ಪತ್ತೆ ಆಗಿದೆ.

DPIIT Delegation: ಫಾಕ್ಸ್‌ಕಾನ್, ಏರೋಸ್ಪೇಸ್ ವಲಯ, ಕ್ವಿನ್ ಸಿಟಿ, ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಡಿಪಿಐಐಟಿ ನಿಯೋಗ ಭೇಟಿ

ಫಾಕ್ಸ್‌ಕಾನ್, ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೇಂದ್ರದ ನಿಯೋಗ ಭೇಟಿ

ಕೇಂದ್ರ ಸರ್ಕಾರದ ಕೈಗಾರಿಕಾ ಹಾಗೂ ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ಅಮರ್ ದೀಪ್ ಸಿಂಗ್ ಭಾಟಿಯಾ ಅವರ ನೇತೃತ್ವದ ಉನ್ನತ ನಿಯೋಗದ ಪ್ರತಿನಿಧಿಗಳು, ದೇವನಹಳ್ಳಿಯ ಫಾಕ್ಸ್‌ಕಾನ್, ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ ಸೇರಿ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Gubbi News: ರಸ್ತೆ ಬದಿ ಗಿಡ ನೆಟ್ಟ ಯುವಕರ ತಂಡ : ಪರಿಸರ ಕಾಳಜಿ ಕುರಿತು ಜಾಗೃತಿ

ರಸ್ತೆ ಬದಿ ಗಿಡ ನೆಟ್ಟ ಯುವಕರ ತಂಡ : ಪರಿಸರ ಕಾಳಜಿ ಕುರಿತು ಜಾಗೃತಿ

ಮಳೆಗಾಲದಲ್ಲಿ ಸಸಿ ನೆಟ್ಟು ಪೋಷಿಸುವ ಪಣ ತೊಟ್ಟ ಯುವಕರು ಸಾರ್ವಜನಿಕ ಸ್ಥಳದಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಸಿರೇ ಉಸಿರು ಎಂಬ ವಾಕ್ಯಗಳು ಶಾಲಾ ಆವರಣದಲ್ಲಿ ಅಷ್ಟೇ ಕಾಣಸಿಗುತ್ತದೆ. ಈ ನಿಟ್ಟಿನಲ್ಲಿ ಈ ಗ್ರಾಮೀಣ ಯುವಕರು ಶಾಲಾ ಆವರಣ ಹೊರತಾಗಿ ರಸ್ತೆ ಬದಿ, ದೇವಸ್ಥಾನ ಸ್ಥಳ, ಕೆರೆ ಪಕ್ಕ, ಸರ್ಕಾರಿ ಸ್ಥಳ ಹೀಗೆ ಅನೇಕ ಭಾಗದಲ್ಲಿ ಸಸಿ ನೆಡುವ ಹಾಗೂ ಪೋಷಿಸುವ ಹೊಣೆ ಹೊರಲು ನಮ್ಮ ತಂಡ ಸಜ್ಜಾಗಿದೆ

ಆ.3ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ವ್ಯತ್ಯಯ

ಬೆಸ್ಕಾಂ ಚಿ.ನಾ.ಹಳ್ಳಿ ಉಪಕೇಂದ್ರ ಎಫ್-೧೭ ದುರ್ಗದಕೆರೆ ಐಪಿ ಪೂರಕದ ೧೧೦/೧೧ ಲಿಂಕ್ ಲೈನ್ ನಿರ್ವಹಣಾ ಕಾಮಾಗಾರಿ ಮತ್ತು ಎಫ್-೦೨ ಚಿ.ನಾ.ಹಳ್ಳಿ ಟೌನ್ ಪೂರಕದ ಲೈನ್ ಕ್ರಾಸಿಂಗ್ ಹಮ್ಮಿ ಕೊಂಡಿರುವ ಕಾರಣ ಆ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫.೩೦ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Chikkanayakanahalli News: ಓವರ್ ಡೋಸ್ ಇಂಜೆಕ್ಷನ್ ಆರೋಪ : ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

ಓವರ್ ಡೋಸ್ ಇಂಜೆಕ್ಷನ್ ಆರೋಪ : ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

ಪುಷ್ಪಾವತಿ ಅವರು ಜುಲೈ 22 ರಂದು ಮನೆಯವರ ಜೊತೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಾಯಿಗಂಗಾ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಗ ತಪಾಸಣೆ ಮಾಡುತ್ತಿದ್ದ ಡ್ಯೂಟಿ ನರ್ಸ್ ಡಾಕ್ಟರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ಆಸ್ಪತ್ರೆಯಿಂದ ದೂರ ಇದ್ದ ಕಾರಣ ಅವರು ಬರಲು ಆಗುವುದಿಲ್ಲ ಎಂದಿದ್ದರು. ನರ್ಸ್ ಏನು ಸಮಸ್ಯೆ ಎಂದು ಪುಷ್ಪಾವತಿ ಅವರನ್ನು ಕೇಳಿದ್ದಾರೆ.

ಉಚಿತ ನೇತ್ರ ತಪಾಸಣೆ ಶಿಬಿರ

ಉಚಿತ ನೇತ್ರ ತಪಾಸಣೆ ಶಿಬಿರ

ಕಣ್ಣು ಮಾನವನ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತಿ ಜಾಗರೂಕತೆಯಿಂದ ಕಾಪಾಡಿ ಕೊಳ್ಳಬೇಕು. ನಮ್ಮ ಸೇವಾ ಸಂಸ್ಥೆಯು ಸತತ 27 ವರ್ಷಗಳಿಂದ ನಿರಂತರವಾಗಿ ವಿವಿಧ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. 8 ಲಕ್ಷ ಕುಟುಂಬಗಳಿಗೆ ಸಾಮಾಜಿಕವಾಗಿ ಸ್ಪಂದಿಸಿದ್ದೇವೆ. ಉಚಿತ ನೇತ್ರ ತಪಾಸಣ ಶಿಬಿರ ಮಾಡಿ ಸಾವಿರಾರು ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ.

Tiptur News: ತಿಪಟೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ನ್ಯಾಯ ಕೊಡಿಸಲು ಕುಟುಂಬಸ್ಥರ ಆಗ್ರಹ

ತಿಪಟೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು

Tiptur News: ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಗದಹಳ್ಳಿಯಲ್ಲಿ ಜರುಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಹರ್ಷ ಬಿ.ಪಿ (25) ಮೃತ ಯುವಕ ಎಂದು ಗುರುತಿಸಲಾಗಿದೆ.

Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ- ಶ್ರೀ ಸಿದ್ದಲಿಂಗ ಸ್ವಾಮೀಜಿ

ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ: ಶ್ರೀ ಸಿದ್ದಲಿಂಗ ಸ್ವಾಮೀಜಿ

Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ. ಎಲ್ಲರೂ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುಬೇಕೆಂಬ ಕನಸು ಹೊತ್ತಿರುವ ಈ ಗುಣ ಇತರರಿಗೆ ಮಾದರಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

Koratagere Accident: ಗೊಬ್ಬರ ತುಂಬಿದ ಲಾರಿ ಬೇಕರಿಗೆ ನುಗ್ಗಿ ಇಬ್ಬರ ದುರ್ಮರಣ, ಮೂವರ ಸ್ಥಿತಿ ಗಂಭೀರ

ಗೊಬ್ಬರ ತುಂಬಿದ ಲಾರಿ ಬೇಕರಿಗೆ ನುಗ್ಗಿ ಇಬ್ಬರ ದುರ್ಮರಣ

Koratagere News: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲದ ಬಸ್‌ ನಿಲ್ದಾಣದ ಬಳಿ ಮಂಗಳವಾರ ಮಧ್ಯಾಹ್ನ ಅಪಘಾತ ನಡೆದಿದೆ. ಗೊಬ್ಬರ ತುಂಬಿದ ಲಾರಿ ಬ್ರೇಕ್ ಫೇಲ್ಯೂರ್ ಆಗಿ, ಬೇಕರಿಗೆ ನುಗ್ಗಿದ ಪರಿಣಾಮ, ಬೇಕರಿ ಮುಂಭಾಗ ಎಲೆ ಹಾಗೂ ಬಳೆ ಮಾರುತಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Chikkanayakanahalli News: ಹೆತ್ತ ತಂದೆತಾಯಿಗಳಿಗೆ ಗುರುಹಿರಿಯರಿಗೆ ವಿಧೇಯರಾಗಿ ಸಂಸ್ಕೃತಿ, ಸಂಸ್ಕಾರವಂತರಾಗಿ ಶಿಕ್ಷಣದಲ್ಲಿ ಸಾಧನೆ ಮಾಡಿ: ಶಾಸಕ ಸಿ.ಬಿ.ಸುರೇಶ್‌ ಬಾಬು

ತಂದೆ-ತಾಯಿ, ಗುರುಹಿರಿಯರಿಗೆ ವಿಧೇಯರಾಗಿ ಶಿಕ್ಷಣದಲ್ಲಿ ಸಾಧನೆ ಮಾಡಿ

ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ವಿಷಯವಾರು ೪೦ಜನ ಶಿಕ್ಷಕರ ತಂಡವನ್ನು ಮಾಡಿದ್ದು ಈ ಶಿಕ್ಷಕರು ಪ್ರತಿಶಾಲೆಗಳಿಗೆ ಭೇಟಿ ನೀಡುವುದು ಈ ಪ್ರೇರಣ ಶಿಬಿರದಲ್ಲಿ ಪಾಲ್ಗೊಳ್ಳುವುದು, ಗೂಗಲ್ ಮೀಟ್ ಈ ಮೂಲಕ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಹಾಗೂ ವಿಷಯಗಳಲ್ಲಿ ಇರುವಂತಹ ಸಂದೇಹಗಳನ್ನು ಬಗೆಹರಿಸುವಂತಹ ಕೆಲಸವನ್ನು ಮಾಡುತ್ತಾರೆ

Chikkanayakanahalli News: ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅನುದಾನ ಮಂಜೂರು

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅನುದಾನ ಮಂಜೂರು

ಹಂದನಕೆರೆ ಹೋಬಳಿಯ ಬಂದ್ರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ವತಿಯಿಂದ 1.5 ಲಕ್ಷ  ಅನುದಾನ ಮಂಜೂರು ಗೊಂಡಿದೆ. ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಅವರು ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜ ರವರಿಗೆ ನೀಡಿದರು

MR.TIPTUR-2025: ದೇಹದಾರ್ಢ್ಯ ಸ್ಪರ್ಧೆ; ಪ್ರಜ್ವಲ್‌ಗೆ ʼಮಿಸ್ಟರ್ ತಿಪಟೂರುʼ ಗರಿ

ದೇಹದಾರ್ಢ್ಯ ಸ್ಪರ್ಧೆ; ಪ್ರಜ್ವಲ್‌ಗೆ ʼಮಿಸ್ಟರ್ ತಿಪಟೂರುʼ ಗರಿ

Tiptur News: ತಿಪಟೂರು ನಗರದ ಜಿ.ಕೆ.ಎಂ. ನಗರದಲ್ಲಿ ಟೀಮ್ ಹಲ್ಕ್ ವತಿಯಿಂದ ‘ಮಿಸ್ಟರ್ ತಿಪಟೂರು’ ದೇಹದಾರ್ಢ್ಯ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಗೃಹ ಮಂಡಳಿ ಅಧ್ಯಕ್ಷ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

Loading...