ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೈತರ ಹಿತಕ್ಕೆ ಅಮೇರಿಕ ಒಪ್ಪಂದ ಮಾಡಿರುವುದು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರೈತ ಪರ ಕೆಲಸಗಳನ್ನು ಎಂದೂ ಮಾಡಿಲ್ಲ. ವಿಷಯವಂತೂ ಮೊದಲೇ ತಿಳಿಯಲ್ಲ, ಯಾರೋ ಹೇಳುತ್ತಾರೆ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದ ಅವರು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ರೈತರ ಪರವಾಗಿ ನಿಂತು ಸರಿಯಾಗಿ ಉಪಯೋಗ ಮಾಡಿಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವ ನೈತಿಕತೆ ಉಳಿಸಿ ಕೊಂಡಿಲ್ಲ

ರೈತರ ಹಿತಕ್ಕೆ ಅಮೇರಿಕ ಒಪ್ಪಂದ ಮಾಡಿರುವುದು

-

Ashok Nayak
Ashok Nayak Feb 16, 2026 10:30 PM

ಗುಬ್ಬಿ: ರೈತ ಪರ ಆಲೋಚನೆ ಮಾಡದ ರಾಹುಲ್ ಗಾಂಧಿ ಬರೀ ಟೀಕೆ ಮಾಡುವುದನ್ನ ಬಿಟ್ಟರೆ ಬೇರೇನೂ ಕೆಲಸವೇ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ( Union Minister HD Kumaraswamy) ನೇರವಾಗಿ ಕಿಡಿಕಾರಿದರು.

ತಾಲ್ಲೂಕಿನ ಕಳ್ಳಿಪಾಳ್ಯ ಗೇಟ್ ಬಳಿ ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರೈತ ಪರ ಕೆಲಸಗಳನ್ನು ಎಂದೂ ಮಾಡಿಲ್ಲ. ವಿಷಯವಂತೂ ಮೊದಲೇ ತಿಳಿಯಲ್ಲ, ಯಾರೋ ಹೇಳುತ್ತಾರೆ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದ ಅವರು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ರೈತರ ಪರವಾಗಿ ನಿಂತು ಸರಿಯಾಗಿ ಉಪಯೋಗ ಮಾಡಿಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವ ನೈತಿಕತೆ ಉಳಿಸಿ ಕೊಂಡಿಲ್ಲ ಎಂದರು.

ಇದನ್ನೂ ಓದಿ: Gubbi News ಮಾದಾರ ಮಹಾಸಭಾದ ಕಡಬ ಹೋಬಳಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ

ರೈತರ ಹಿತ ಕಾಯಲು ಅಮೆರಿಕಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು. ದೇಶಕ್ಕೆ ರೈತರನ್ನ ಏನು ಮಾರಾಟ ಮಾಡುತ್ತಿದ್ದಾರೆಯೇ.? ನಮಗೆ ಅಷ್ಟು ತಲೆಯಲ್ಲಿ ಬುದ್ಧಿ ಇಲ್ಲವೇ.? ಆ ರೀತಿ ಏನಾದರೂ ಇದ್ದರೆ ನಾವೇ ಈ ಒಪ್ಪಂದವನ್ನು ವಿರೋಧ ಮಾಡು ತ್ತಿದ್ದೆವು ಎಂದು ತಿರುಗೇಟು ನೀಡಿದ ಅವರು ದೇಶದ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಎಲ್ಲಾ ರೀತಿಯಲ್ಲಿಯೂ ಈ ಒಪ್ಪಂದದಿಂದ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿಯೇ ಎಲ್ಲಾ ಆಗುಹೋಗುಗಳ ಲೆಕ್ಕಾಚಾರ ಮಾಡಿ ಪ್ರಧಾನಿ ಮೋದಿ ಅವರು ಈ ಒಪ್ಪಂದದ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದರು.

ನಂತರ ಸ್ಥಳೀಯ ಸ್ನಾತಕೋತ್ತರ ಪದವಿ ಪಡೆದ ಯುವತಿಯೊಬ್ಬಳ ಅರ್ಜಿ ಸ್ವೀಕರಿಸಿ ಸೂಕ್ತ ಉದ್ಯೋಗ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ, ಯೋಗಾನಂದಕುಮಾರ್, ಜಿ.ಡಿ.ಸುರೇಶಗೌಡ, ಕಾರ್ಯಕರ್ತರಾದ ಸೋಮಶೇಖರ್, ಕಾಂತರಾಜ್, ಡಿ.ರಘು, ಶಿವಾನಂದ್, ವೆಂಕಟೇಶ್ ಇತರರು ಇದ್ದರು.