ಋಷಿಕೇಶದ ಗಂಗಾ ನದಿ ಬಳಿ ಮದ್ಯಪಾನ ಮಾಡಿದ ಮಹಿಳೆ; ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ, ವಿಡಿಯೊ ವೈರಲ್
woman drank alcohol: ಉತ್ತರಾಖಂಡದ ಋಷಿಕೇಶ್ನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರಿಯಾಣದ ಮಹಿಳಾ ಪ್ರವಾಸಿಗರೊಬ್ಬರು ಗಂಗಾ ನದಿಯ ತೀರದಲ್ಲಿ ಮದ್ಯಪಾನ ಮಾಡುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ಉಂಟಾಯಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಋಷಿಕೇಶದ ಗಂಗಾ ನದಿ ಬಳಿ ಮದ್ಯಪಾನ ಮಾಡಿದ ಮಹಿಳೆ -
ಡೆಹ್ರಾಡೂನ್, ಏ.8: ಉತ್ತರಾಖಂಡದ ಋಷಿಕೇಶ್ನಲ್ಲಿ (Rishikesh) ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರಿಯಾಣದ ಮಹಿಳಾ ಪ್ರವಾಸಿಗರೊಬ್ಬರು ಗಂಗಾ ನದಿಯ (Ganga River) ತೀರದಲ್ಲಿ ಮದ್ಯಪಾನ ಮಾಡುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ಉಂಟಾಯಿತು. ಮಹಿಳೆಯು ಪವಿತ್ರ ಪ್ರದೇಶವಾದ ಗಂಗಾ ತೀರದಲ್ಲಿ ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿದಾಗ, ಆಕೆ ಕೋಪಗೊಂಡು ಅವರ ಮೇಲೆ ಕೂಗಾಡಲು ಆರಂಭಿಸಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಈ ಘಟನೆ ಏಪ್ರಿಲ್ 6ರಂದು ನೀಲಕಂಠ ಮಾರ್ಗದ ಫೂಲ್ ಚಟ್ಟಿ ಪ್ರದೇಶದ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಮಾತಿನ ಚಕಮಕಿಯ ಸಮಯದಲ್ಲಿ ಆಕೆ, ನಿಮ್ಮ ಜೀವನೋಪಾಯವು ನಮ್ಮ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾಳೆ. ಅಂದರೆ ಪ್ರವಾಸಿಗರು ಬರುವುದರಿಂದಲೇ ಅವರ ಆದಾಯ ಉತ್ತಮವಾಗುತ್ತದೆ ಎಂಬುದಾಗಿ ಆ ಮಹಿಳೆ ಹೇಳಿದ್ದಾಳೆ.
ತಾನು ತನ್ನ ಸ್ವಂತ ಹಣದಿಂದ ಕುಡಿಯುತ್ತಿದ್ದು, ಪ್ರವಾಸಿಗರನ್ನು ಅನ್ಯಾಯವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾಳೆ. ಮಹಿಳೆಯ ಪತಿ ಮಧ್ಯಪ್ರವೇಶಿಸಿ ಆಕೆಯನ್ನು ಸ್ಥಳದಿಂದ ದೂರ ಕರೆದೊಯ್ಯುವವರೆಗೂ ವಾಗ್ವಾದ ಉಲ್ಬಣಗೊಂಡಿತು.
ಇಲ್ಲಿದೆ ವಿಡಿಯೊ:
A woman from Haryana was drinking alcohol with her husband on the Ganga riverbank in Rishikesh. When locals & police stopped them, she lashed out: 'We tourists sustain your livelihood... your money is what we're drinking!'
— Ghar Ke Kalesh (@gharkekalesh) April 7, 2026
pic.twitter.com/2gCKe6QOfP
ಅಂದಹಾಗೆ, ಋಷಿಕೇಶವು ಆಧ್ಯಾತ್ಮಿಕ ವಲಯವಾಗಿದ್ದು, ಪವಿತ್ರ ನದಿಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಅನೇಕ ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಆಧ್ಯಾತ್ಮಿಕ ಮತ್ತು ಪರಿಸರ ಮಾನದಂಡಗಳನ್ನು ಎತ್ತಿಹಿಡಿಯಲು ಅಧಿಕಾರಿಗಳು ಘಾಟ್ಗಳು ಮತ್ತು ನದಿ ದಂಡೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವೈಯಕ್ತಿಕ ಸ್ವಾತಂತ್ರ್ಯ, ಸ್ಥಳೀಯ ಸಂಸ್ಕೃತಿ ಗೌರವ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಪ್ರವಾಸಿಗರ ವರ್ತನೆ ಬಗ್ಗೆ ಜನರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ಪ್ರವಾಸಿ ಹಣಕ್ಕೆ ಸ್ವಾಗತ ಇದೆ. ಆದರೆ ಗಂಗಾ ನಿಮ್ಮ ವೈಯಕ್ತಿಕ ಬಾರ್ ಅಲ್ಲ. ಶಾಂತಿ ಮತ್ತು ಆಧ್ಯಾತ್ಮಕ್ಕಾಗಿ ಬನ್ನಿ, ಪವಿತ್ರ ನದಿ ತೀರವನ್ನು ಹರಿಯಾಣ ಪಾರ್ಟಿ ಸ್ಥಳವನ್ನಾಗಿ ಮಾಡಬೇಡಿ. ಇಲ್ಲಿನ ವಾತಾವರಣವನ್ನು ಗೌರವಿಸಿ, ಇಲ್ಲದಿದ್ದರೆ ಮನೆಯಲ್ಲೇ ಇರಿ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಇದು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ನೀವು ಪ್ರವಾಸಿಗರಾಗಿ ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯ ಸಂಸ್ಕೃತಿ ಹಾಗೂ ಭಾವನೆಗಳನ್ನು ಗೌರವಿಸಿ. ನೀವು ಬೇರೆಡೆ ಕುಡಿಯಬಹುದು. ನಿಂದನೆ ಮತ್ತು ಸಮಸ್ಯೆಗಳನ್ನು ಸೃಷ್ಟಿಸುವುದು ಏಕೆ? ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಅವರಿಗೆ ಇಷ್ಟೊಂದು ದುರಹಂಕಾರ ಮತ್ತು ಅರ್ಹತೆ ಎಲ್ಲಿಂದ ಬರುತ್ತದೆ? ಅವರು ಜೀವನದಲ್ಲಿ ಏನು ಸಾಧಿಸಿದ್ದಾರೆ? ಎಂದು ಮಗದೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಪ್ರವಾಸೋದ್ಯಮವು ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂಬುದು ನಿಜ. ಆದರೆ ಯಾವುದೇ ಪವಿತ್ರ ಸ್ಥಳದೊಂದಿಗೆ ನೀವು ಬಯಸಿದಂತೆ ವರ್ತಿಸುವ ಸ್ವಾತಂತ್ರ್ಯವನ್ನು ನೀವು ಹೊಂದಿದ್ದೀರಿ ಎಂದು ಅರ್ಥವಲ್ಲ. ನೀವು ಆನಂದಿಸುತ್ತಿರುವ ಸ್ಥಳವನ್ನು ಗೌರವಿಸಿ ಎಂದು ವ್ಯಕ್ತಿಯೊಬ್ಬರು ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ.