Kalash Stolen: ಚಿನ್ನ, ವಜ್ರ ಖಚಿತ ಬರೋಬ್ಬರಿ 1ಕೋಟಿ ರೂ. ಮೌಲ್ಯ ಕಲಶ ಕಳವು- ಲೋಕಸಭಾ ಸ್ಪೀಕರ್ ಇದ್ದ ಕಾರ್ಯಕ್ರಮದಲ್ಲೇ ಕಳ್ಳತನ
150 ಗ್ರಾಂ ವಜ್ರಗಳು, ಮುತ್ತು-ರತ್ನಗಳಿಂದ ಕೂಡಿದ್ದ 760 ಗ್ರಾಂ ಚಿನ್ನದ ಕಲಶ ಜನದಟ್ಟಣೆಯ ನಡುವೆ ಕಾಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉದ್ಯಮಿ ಸುಧೀರ್ ಜೈನ್ ನಿಯಮಿತವಾಗಿ ಪೂಜೆಗೆ ಕಲಶವನ್ನು ತರುತ್ತಿದ್ದರು. ಕಳೆದ ಮಂಗಳವಾರ, ಕಾರ್ಯಕ್ರಮದ ಮಧ್ಯದಲ್ಲಿ ಅದು ವೇದಿಕೆಯಿಂದ ಕಣ್ಮರೆಯಾಗಿದೆ ಕಳ್ಳತನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

-

ನವದೆಹಲಿ: ದೆಹಲಿಯ ಕೆಂಪು ಕೋಟೆಯಲ್ಲಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಒಂದು ಕೋಟಿ ಮೌಲ್ಯದ ಚಿನ್ನ, ವಜ್ರ-ಖಚಿತ 'ಕಲಶ' ಕಳವು 1 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ರತ್ನ-ಖಚಿತ ಕಲಶವೊಂದು ಕಳವಾಗಿದೆ. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಹಲವಾರು ವಿಐಪಿಗಳು ಭಾಗವಹಿಸಿದ್ದರು. ಇನ್ನು ಖದೀಮ ಈ ಕಲಶವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
150 ಗ್ರಾಂ ವಜ್ರಗಳು, ಮುತ್ತು-ರತ್ನಗಳಿಂದ ಕೂಡಿದ್ದ 760 ಗ್ರಾಂ ಚಿನ್ನದ ಕಲಶ ಜನದಟ್ಟಣೆಯ ನಡುವೆ ಕಾಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉದ್ಯಮಿ ಸುಧೀರ್ ಜೈನ್ ನಿಯಮಿತವಾಗಿ ಪೂಜೆಗೆ ಕಲಶವನ್ನು ತರುತ್ತಿದ್ದರು. ಕಳೆದ ಮಂಗಳವಾರ, ಕಾರ್ಯಕ್ರಮದ ಮಧ್ಯದಲ್ಲಿ ಅದು ವೇದಿಕೆಯಿಂದ ಕಣ್ಮರೆಯಾಗಿದೆ ಕಳ್ಳತನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೈನ ಅರ್ಚಕನ ವೇಷದಲ್ಲಿ ಬಂದ ಶಂಕಿತನನ್ನು ಪೊಲೀಸರು ಗುರುತಿಸಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೊ ಇಲ್ಲಿದೆ
CCTV of the incident
— Atulkrishan (@iAtulKrishan1) September 6, 2025
The thief was caught on camera not by the cops
He will be arrested soon
A priceless gold & diamond-studded kalash (worth ~₹1 crore) was stolen
Police have identified a suspect from CCTV footage. @DcpNorthDelhi@DcpNorthDelhi @DelhiPolice @CPDelhi… https://t.co/Rj0KXwyh5N pic.twitter.com/06yHaBZrQy
ಕಳ್ಳತನ ಮತ್ತು ಆವರಣದಿಂದ ಹೊರನಡೆಯುವ ಅವನ ಚಟುವಟಿಕೆಗಳೆಲ್ಲವೂ ಸೆರೆಯಾಗಿವೆ. ಕದ್ದ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಚೀಲವನ್ನು ಅವನು ತನ್ನ ಭುಜದ ಮೇಲೆ ಇಟ್ಟುಕೊಂಡು ಹೊರನಡೆಯುವುದನ್ನು ದೃಶ್ಯಗಳು ತೋರಿಸುತ್ತವೆ. ಸುಧೀರ್ ಜೈನ್ ಅವರ ಸಹೋದರ ಪುನೀತ್ ಜೈನ್ ಮಾತನಾಡಿ, ಶಂಕಿತ ಈ ಹಿಂದೆಯೂ ಹಲವಾರು ಕಳ್ಳತನ ನಡೆಸಿರುವ ದಾಖಲೆ ಇದೆ. ಕಾರ್ಯಕ್ರಮದಿಂದ ಓಂ ಬಿರ್ಲಾ ಹೊರಬಂದ ನಂತರ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: 5 ಲಕ್ಷ ರೂ. ಮೌಲ್ಯದ ಲಬುಬು ಗೊಂಬೆಗಳ ಕಳವು- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ