Viral Video: ವಾಹನಗಳಿಗೆ ಬಲವಂತವಾಗಿ ʼಐ ಲವ್ ಮುಹಮ್ಮದ್ʼ ಸ್ಟಿಕ್ಕರ್ ಅಂಟಿಸಿದ ಅಪರಿಚಿತರು; ವಿಡಿಯೊ ವೈರಲ್ ಬೆನ್ನಲ್ಲೇ ಆಕ್ರೋಶ
I Love Muhammad Stickers: ಮುಂಬೈಯ ಕುರ್ಲಾದಲ್ಲಿ ಬೈಕ್ಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ ವಾಹನಗಳ ಮೇಲೆ ಐ ಲವ್ ಮುಹಮ್ಮದ್ ಎಂದು ಬರೆದಿರುವ ಸ್ಟಿಕ್ಕರ್ಗಳನ್ನು ಅಳವಡಿಸಲಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಅಭಿಯಾನವು ತ್ವರಿತವಾಗಿ ಕೋಮು ಸಂಘರ್ಷವಾಗಿ ಮಾರ್ಪಟ್ಟಿದೆ.

-

ಮುಂಬೈ: ಬೈಕ್ಗಳು ಮತ್ತು ರಿಕ್ಷಾಗಳು ಸೇರಿದಂತೆ ವಾಹನಗಳ ಮೇಲೆ ಐ ಲವ್ ಮುಹಮ್ಮದ್ (I Love Muhammad) ಎಂದು ಬರೆದಿರುವ ಸ್ಟಿಕ್ಕರ್ಗಳನ್ನು ಕೆಲವರು ಬಲವಂತವಾಗಿ ಅಂಟಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ (Viral Video) ಮುಂಬೈನ (Mumbai) ಕುರ್ಲಾದಲ್ಲಿ ವಿವಾದ ಭುಗಿಲೆದ್ದಿದೆ. ಸೆಪ್ಟೆಂಬರ್ 19ರಂದು ಹಂಚಿಕೊಂಡ ಈ ವಿಡಿಯೊದಲ್ಲಿ, ವಾಹನಗಳಿಗೆ ಅಡ್ಡಿಪಡಿಸುವ ಮತ್ತು ಒಪ್ಪಿಗೆಯಿಲ್ಲದೆ ಸ್ಟಿಕ್ಕರ್ಗಳನ್ನು ಅಂಟಿಸುವ ಗುಂಪನ್ನು ತೋರಿಸಲಾಗಿದೆ. ಈವರೆಗೆ ಭಾಗಿಯಾಗಿರುವವರ ವಿರುದ್ಧ ಪೊಲೀಸ್ ಕ್ರಮದ ಬಗ್ಗೆ ಯಾವುದೇ ದೃಢೀಕೃತ ವರದಿಗಳು ಬಂದಿಲ್ಲ.
'ಐ ಲವ್ ಮಹಾದೇವ್' ಬ್ಯಾನರ್ಗಳು
ಈ ಅಭಿಯಾನವು ತ್ವರಿತವಾಗಿ ಕೋಮು ಸಂಘರ್ಷವಾಗಿ ಮಾರ್ಪಟ್ಟಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಹಿಂದೂ ಸಂಘಟನೆಗಳು ʼಐ ಲವ್ ಮಹಾದೇವ್ʼ ಬ್ಯಾನರ್ ಅಳವಡಿಸುವುದಾಗಿ ಘೋಷಿಸಿವೆ. ಮುಸ್ಲಿಂ ಸಂಘಟನೆಗಳ ಪ್ರಚೋದನಕಾರಿ ಅಭಿಯಾನವನ್ನು ಎದುರಿಸಲು ಈ ಕ್ರಮವನ್ನು ಅಳವಡಿಸಲು ಮುಂದಾಗಿದೆ ಎಂದು ಸಂಬಂಧಪಟ್ಟ ನಾಯಕರು ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಚರ್ಚಿಸಲು ಸೆಪ್ಟೆಂಬರ್ 24ರಂದು ಆರೆ ಮಿಲ್ಕ್ ಕಾಲೋನಿಯಲ್ಲಿ ಸಭೆಯನ್ನು ನಿಗದಿಪಡಿಸಲಾಗಿತ್ತು.
ವಿಡಿಯೊ ವೀಕ್ಷಿಸಿ:
I love Muhammad (S.A.W) Kurla West#ILoveMuhammed #ilovemuhammed #ilovemuhammedﷺ #ılovemuhammed #ilovemuhammed #ilovemuhammedsaw pic.twitter.com/dGjfVYEYvI
— Gallinews India (@gallinews) September 19, 2025
ಮುಂಬೈಯಲ್ಲಿ ನಡೆದ ಸ್ಟಿಕ್ಕರ್ ಅಭಿಯಾನವು ಕಾನ್ಪುರದಲ್ಲಿ ಉಂಟಾದ ಉದ್ವಿಗ್ನತೆಗೆ ಸಂಬಂಧಿಸಿದೆ ಎಂದು ವರದಿಯಾಗಿದೆ. ಅಲ್ಲಿ ಪೊಲೀಸರು ಸಾರ್ವಜನಿಕ ರಸ್ತೆಗಳಲ್ಲಿ ಇದೇ ರೀತಿಯ 'ಐ ಲವ್ ಮುಹಮ್ಮದ್' ಬ್ಯಾನರ್ಗಳನ್ನು ಪ್ರದರ್ಶಿಸಿದವರ ವಿರುದ್ಧ ಪ್ರಕರಣ ಕೈಗೊಂಡರು. ಇದು ಇತರ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದರು. ಆ ಘಟನೆಯ ನಂತರ, ಮುಂಬೈಯ ಮುಸ್ಲಿಂ ಗುಂಪುಗಳು ಧಾರ್ಮಿಕ ಅಭಿವ್ಯಕ್ತಿಯ ಸಂಕೇತವಾಗಿ ಮಸೀದಿಗಳ ಹೊರಗೆ ಮತ್ತು ನಗರದ ಬೀದಿಗಳಲ್ಲಿ ಬ್ಯಾನರ್ಗಳನ್ನು ನಿರ್ಮಿಸಿದವು.
ಇನ್ನು ಈ ಸಂಬಂಧ ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಬ್ಯಾನರ್ಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮಾಡಲಾಗಿದೆ ಎಂದು ಕೊಂಕಣ ಪ್ರಾಂತ್ಯದ ಸಹ-ಸಂಚಾಲಕ ಗೌತಮ್ ರವಾರಿಯಾ ಹೇಳಿದ್ದಾರೆ. ನಾವು ಆ ಬ್ಯಾನರ್ಗಳನ್ನು ವಿರೋಧಿಸುವುದಿಲ್ಲ. ಆದರೆ ಅವುಗಳ ಉದ್ದೇಶದ ಬಗ್ಗೆ ನಮಗೆ ಅನುಮಾನವಿದೆ. ಕಾಶ್ಮೀರದಲ್ಲಿ, ಈ ಬ್ಯಾನರ್ಗಳನ್ನು ಹೊತ್ತ ಜನರು ಪೊಲೀಸರನ್ನು ಬೆನ್ನಟ್ಟಿದರು, ಇದು ಅಪಾಯಕಾರಿ ಸಂಕೇತವಾಗಿದೆ ಎಂದು ಅವರು ಹೇಳಿದರು. ಇದನ್ನು ಮುಂದೆ ಪ್ರತಿ ರಾಜ್ಯದಲ್ಲೂ ಮುಂದುವರೆಸುವ ಆತಂಕವಿದೆ ಎಂದು ಅವರು ಹೇಳಿದರು.
ವಿಡಿಯೊ ವೀಕ್ಷಿಸಿ:
Mumbai के गरबा पंडालों में I Love Mahadev" के पोस्टर लेकर पहुंचीं महिलाएं और युवतियां | SNN NEWS #MumbaiGarba #ILoveMahadev #Navratri2025 #GarbaPandals #MumbaiFestival #MahadevDevotees #GarbaNight pic.twitter.com/tID5lVLOq6
— SRIJAN News (@srijannewshindi) September 27, 2025
ಮತ್ತೊಂದೆಡೆ, ಬ್ಯಾನರ್ಗಳ ವಿರುದ್ಧ ಪೊಲೀಸರ ಕ್ರಮವನ್ನು ತಾರತಮ್ಯ ಎಂದು ಮುಸ್ಲಿಂ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ. ಮುಂಬೈ ಮೂಲದ ರಾಝಾ ಅಕಾಡೆಮಿ ಎಂಬ ಗುಂಪು ಸೆಪ್ಟೆಂಬರ್ 24ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವೊಂದನ್ನು ಸಲ್ಲಿಸಿ, ಉತ್ತರ ಪ್ರದೇಶದಲ್ಲಿ ಪ್ರಕರಣಗಳ ನೋಂದಣಿಯನ್ನು ಖಂಡಿಸಿದೆ. ಪೊಲೀಸರು ರಾಜಕೀಯ ಪ್ರೇರಿತ ನಿರ್ದೇಶನಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಪೊಲೀಸರ ಪಾತ್ರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಜನರನ್ನು ಮೌನಗೊಳಿಸುವುದು ಅಲ್ಲ. ಇಂತಹ ಕ್ರಮಗಳು ಮುಸ್ಲಿಂ ಸಮುದಾಯದೊಳಗೆ ಭಯ ಮತ್ತು ಪರಕೀಯತೆಯನ್ನು ಸೃಷ್ಟಿಸುತ್ತವೆ ಮತ್ತು ದೇಶದ ಪ್ರಜಾಪ್ರಭುತ್ವದ ರಚನೆಯನ್ನು ದುರ್ಬಲಗೊಳಿಸುತ್ತವೆ ಎಂದು ಗುಂಪು ತನ್ನ ಪತ್ರದಲ್ಲಿ ತಿಳಿಸಿದೆ. ಇಂತಹ ಕ್ರಮಗಳು ಸಂವಿಧಾನದ 19(1)(ಎ), 21 ಮತ್ತು 25ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಅದು ವಾದಿಸಿದೆ. ಪೊಲೀಸ್ ಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮತ್ತು ತಮ್ಮ ಅಧಿಕಾರವನ್ನು ಮೀರಿದ ಆರೋಪ ಹೊತ್ತಿರುವ ಅಧಿಕಾರಿಗಳಿಗೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದೆ.
ಇದನ್ನೂ ಓದಿ: Viral Video: ದಸರಾ ಕಾರ್ಯಕ್ರಮಕ್ಕೆ ಶೂ ಧರಿಸಿ ಬಂದ ತಹಸೀಲ್ದಾರ್ ಮೇಲೆ ಅಟ್ಯಾಕ್! ವಿಡಿಯೊ ನೋಡಿ