‘ವಿಶ್ವವಾಣಿ’ ವರದಿಗೆ ಎಚ್ಚೆತ್ತುಕೊಂಡ ಜೆಸ್ಕಾಂ
ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೀವ್ರ ಪರದಾಟ ಸೃಷ್ಟಿಯಾಗಿತ್ತು. ಅಲ್ಲದೆ ಕೃಷಿ ಪಂಪ್ಸೆಟ್ಗಳು ಸ್ಥಗಿತ ಗೊಂಡಿದ್ದರಿಂದ ಕೈಗೆ ಬಂದ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದವು. ರೈತರು ಮತ್ತು ಗ್ರಾಮಸ್ಥರ ಈ ದಾರುಣ ಸ್ಥಿತಿಯ ಕುರಿತು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಮಾಗಣಗೇರಿ ಯಲ್ಲಿ ವಿದ್ಯುತ್ ವ್ಯತ್ಯಯ, ಕ್ರಮಕ್ಕೆ ಒತ್ತಾಯ’ ಎಂದು ಸವಿಸ್ತಾರವಾದ ವಿಶೇಷ ವರದಿ ಪ್ರಕಟ ವಾಗಿತ್ತು.