ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Aarama

Vidyashankar Sharma Column: ʼವಿನಯʼವೇ ಭೂಷಣ

ʼವಿನಯʼವೇ ಭೂಷಣ

ವಿನಮ್ರತೆಯನ್ನು ರೂಢಿಸಿಕೊಳ್ಳಲು ನಮ್ಮಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳ ಬೇಕಾ ಗುತ್ತದೆ. ಮೊದಲನೆಯದಾಗಿ, ನಾವು ಒಳ್ಳೆಯ ಕೇಳುಗರಾಗಬೇಕು. ಇದು ವಿನಯವಂತಿಕೆಯ ಬಹುಮುಖ್ಯ ಲಕ್ಷಣವಾಗಿದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಸರಳತೆಯ ಕಡೆಗೆ ನಾವು ಇಡಬಹುದಾದ ದೊಡ್ಡ ಹೆಜ್ಜೆ. ಈ ಹೆಜ್ಜೆಯಿಡಲು ಧೈರ್ಯ ಬೇಕಾಗುತ್ತದೆ.

ಹೊಸ ಯುಗದ ಕಾವ್ಯಾತ್ಮಕ ಉದಯ

ಹೊಸ ಯುಗದ ಕಾವ್ಯಾತ್ಮಕ ಉದಯ

ವಸಂತ ಋತುವಿನ ಮೃದುವಾದ ಗಾಳಿ, ಹಸಿರು ಚಿಗುರುಗಳ ನಗು, ಹೂಗಳ ಸುಗಂಧ-ಇವೆಲ್ಲವೂ ಯುಗಾದಿಯ ಆಗಮನವನ್ನು ಕಾವ್ಯಾತ್ಮಕವಾಗಿ ಸಾರುತ್ತವೆ. ಯುಗಾದಿ ದಿನವು ಜೀವನದ ಒಂದು ತತ್ವಶಾಸ್ತ್ರೀಯ ಪಾಠವನ್ನು ನೀಡುತ್ತದೆ. ಬೇವು-ಬೆಲ್ಲದ ಸಂಯೋಜನೆ, ಕಹಿ ಮತ್ತು ಸಿಹಿಯ ಸಮ್ಮಿಳನವಾಗಿ, ಜೀವನದಲ್ಲಿ ಬರುವ ಸುಖ-ದುಃಖಗಳ ಪ್ರತೀಕ ವಾಗಿದೆ.

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಯುಗಾದಿಯಂದು ಸೂರ್ಯೋದಯದ ಸಮಯದಲ್ಲಿಯೇ ಬ್ರಹ್ಮದೇವ ಸೃಷ್ಟಿಯ ಕಾರ್ಯ ವನ್ನು ಆರಂಭಿಸಿದರು, ಕಾಲಗಣನೆ ಆರಂಭವಾದ ದಿನ ಮತ್ತು ನಾರಾಯಣನ ಏಳನೇ ಪ್ರಸಿದ್ಧ ಅವತಾರವಾದ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಟ್ಟಿಗೆ 14 ವರ್ಷಗಳ ವನವಾಸ ಮುಗಿಸಿ, ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಪಟ್ಟಾಭಿಷಿಕ್ತನಾದ ದಿನ, ಅಂದರೆ ರಾಮರಾಜ್ಯ ಆರಂಭವಾದ ದಿನವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಸೌರಮಾನ ಯುಗಾದಿ ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬೀಳುತ್ತದೆ. ಕರಾವಳಿಯವರು ಸೌರಮಾನ ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸು ತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವು ದೇ ಗುಡಿಪಾಡ್ವ. ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು.

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ಯುಗಾದಿ ಹಬ್ಬವು ದಕ್ಷಿಣ ಭಾರತದ ಜನರಿಗೆ ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಜೀವನದ ಹೊಸ ಆರಂಭದ ಸಂಕೇತವಾಗಿದೆ, ಚೈತ್ರ ಮಾಸದ ಮಾಸದ ಮೊದಲ ದಿನದಂದು, ಬರುವ ಈ ಹಬ್ಬ ವಸಂತ ಋತುವಿನ, ಆಗಮನವನ್ನು ಸೂಚಿಸುತ್ತದೆ. ಯುಗಾದಿ ಎಂಬುದು ‘ಯುಗ ಮತ್ತು ಆದಿ’ ಎಂಬ ಸಂಸ್ಕೃತ ಶಬ್ದಗಳಿಂದ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷದ ಆರಂಭ ಎಂದೇ ಇದರ ಅರ್ಥ.

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

Hosmane Muttu Column: ಸಾಂಪ್ರದಾಯಿಕ ‘ಕೂರಿ’ಯ ತಾಂತ್ರಿಕ ಚಮತ್ಕಾರ..!

Hosmane Muttu Column: ಸಾಂಪ್ರದಾಯಿಕ ‘ಕೂರಿ’ಯ ತಾಂತ್ರಿಕ ಚಮತ್ಕಾರ..!

ಅಪರೂಪದ ಹಸ್ತಕಲೆಯಾದ ಈ ಸಾಧನವನ್ನು ಸಿದ್ಧಪಡಿಸಲು ಬೇಕಿರುವುದು ಬರಿ ಕೌಶಲ ವಲ್ಲ; ಅತೀವ ತಾಳ್ಮೆ ಮತ್ತು ನಿಖರತೆ. ಇದರ ತಯಾರಿಕೆಗೆ ಬಿದಿರು, ಬೆತ್ತ ಅಥವಾ ಈಚಲು ಮರದ ತೆಳುವಾದ ಕಡ್ಡಿಗಳೇ ಆಧಾರ. ಇವುಗಳನ್ನು ಸಮಾನ ಅಳತೆಯ ತೆಳು ವಾದ ಪಟ್ಟಿಗಳಾಗಿ ಸೀಳಿ ನಾರಿನಿಂದ ನೈಪುಣ್ಯದಿಂದ ಹೆಣೆದು, ಶಂಕುವಿನಾಕಾರದಲ್ಲಿ ಸಿದ್ಧಪಡಿಸಲಾಗುತ್ತದೆ.

Dr Karaveeraprabhu Kyalakonda Column: ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ

ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ

ಅಸೂಯೆ ಎಂಬ ಶತ್ರು: ನಮ್ಮ ಸಹಪಾಠಿಗಳು ಅಥವಾ ಸಹೋದ್ಯೋಗಿಗಳ ಮೇಲೆ ಸಾಮಾನ್ಯ ವಾಗಿ ಈ ಅಸೂಯೆ ಉಂಟಾಗುತ್ತದೆ. ನಮ್ಮ ಜೀವನದ ಅವಧಿ ಕಿರಿದಾದುದು. ಹೀಗಿರುವಾಗ ವಿನಾಕಾರಣ ಅಸೂಯೆಗೆ ಒಡ್ಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುವುದು ವಿಪರ್ಯಾಸ ವಲ್ಲವೇ? ಅಸೂಯೆ ಎಂಬ ಕಾಯಿಲೆ ಬಹುತೇಕ ಎಲ್ಲರನ್ನೂ ಒಂದಲ್ಲಾ ಒಂದು ಹಂತದಲ್ಲಿ ಕಾಡುವುದು ನಿಜ.

Dr Ravishankar A K Column: ಯುದ್ಧ ಮುಗಿಯದು

Dr Ravishankar A K Column: ಯುದ್ಧ ಮುಗಿಯದು

ಯುದ್ಧ ಮುಗಿಯುವುದಿಲ್ಲ ಎನ್ನುವುದು ಕೇವಲ ಒಂದು ವಾಕ್ಯವಲ್ಲ, ಅದು ಈ ಜಗತ್ತಿನ ಕಟುವಾಸ್ತವ. ಯುದ್ಧಗಳು ಕೇವಲ ಗಡಿಭಾಗಗಳಲ್ಲಿ ನಡೆಯುತ್ತಿಲ್ಲ; ಅವು ಮನುಷ್ಯನ ಆಲೋಚನೆಗಳಲ್ಲಿ, ಮಾರುಕಟ್ಟೆಯ ವ್ಯವಹಾರಗಳಲ್ಲಿ ಮತ್ತು ಸ್ವಾರ್ಥದ ಅಡಿಪಾಯದ ಮೇಲೆ ನಿರಂತರವಾಗಿ ನಡೆಯುತ್ತಲೇ ಇವೆ.

Laxmikant L.V. Column: ತಂಪೆರೆಯುವ ಅಕ್ಷರದ ಮಳೆ

Laxmikant L.V. Column: ತಂಪೆರೆಯುವ ಅಕ್ಷರದ ಮಳೆ

ಸೂರ್ಯನು ನತ್ತ ನೆತ್ತಿಯ ಮೇಲೆ ಬೆಂಕಿಯ ಉಂಡೆಗಳನ್ನು ಸುರಿಸುತ್ತಿದ್ದಾನೆ. ಮರಗಿಡಗಳು ಬಸವಳಿದು ನಿಂತಿವೆ, ರಸ್ತೆಗಳು ಬಿಕೋ ಎನ್ನುತ್ತಿವೆ. ಇಪ್ಪತ್ತೊಂದನೇ ಶತಮಾನದ ಈ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಎನ್ನುವ ಮಾತು ಬರಿ ಸುದ್ದಿಯಲ್ಲ, ಅದು ನಮ್ಮ ಚರ್ಮಕ್ಕೆ ತಾಗುವ ಸುಡುವಾಸ್ತವ.

Ranganath Gudimani Column: ತಾಳುವಿಕೆಗಿಂತ ಅನ್ಯ ತಪವಿಲ್ಲ

ತಾಳುವಿಕೆಗಿಂತ ಅನ್ಯ ತಪವಿಲ್ಲ

ಮದುವೆಯ ಸಮಯದಲ್ಲಿ ಸಪ್ತಪದಿ ತುಳಿದು ವಧುವಿಗೆ ವರನು ತಾಳಿ ಕಟ್ಟುವುದು ಯಾಕೆ? ಸಂಸಾರ ಸಾಗರದಲ್ಲಿ ತಾಳಿಕೊಂಡು ಒಂದಾಗಿ, ಚೆಂದಾಗಿ ಸುಖವಾಗಿ ಬಾಳಿ ಬದುಕಲು ತಾನೇ? ಭೂಮಿಗೆ ಬಿದ್ದ ಬೀಜವು ಮೊಳೆತು ಹುಲುಸಾಗಿ ಬೆಳೆಯಲು ಕಾಲಾವಕಾಶ ಬೇಕಲ್ಲವೇ? ಅದಕ್ಕಾ ಗಿಯೇ ಭರವಸೆಯ ಜತೆಗೆ ತಾಳ್ಮೆಯಿಂದ ಕಾಯಬೇಕು.

ಜೀವನ್ಮುಕ್ತ ಸ್ಥಿತಿ ಅರ್ಥಮಾಡಿಕೊಳ್ಳುವುದು

ಜೀವನ್ಮುಕ್ತ ಸ್ಥಿತಿ ಅರ್ಥಮಾಡಿಕೊಳ್ಳುವುದು

ನಿರಂತರ ಮಾನಸಿಕ ಗದ್ದಲ ನಿಂತು ಹೋಗಿ ಒಳಗೆ ಮೌನ ಇರುತ್ತದೆ. ಸಂಪೂರ್ಣವಾಗಿ ನಿಶ್ಚಲತೆ ಮನಸ್ಸನ್ನು ತುಂಬಿರುತ್ತದೆ. ಏನೇ ಕೆಲಸ ಮಾಡಿದರೂ ‘ನಾನು ಮಾಡುತ್ತಿದ್ದೇನೆ’ ಎಂಬ ಭಾವನೆ ಇರುವುದಿಲ್ಲ. ವಿಷಯಗಳು ‘ನಾನು’ ಎಂಬುದಿಲ್ಲದೆ ತಾನಾಗಿಯೇ ನಡೆಯುತ್ತವೆ. ಹೊರಗಡೆ ನಷ್ಟ, ಅವಮಾನ, ಅನಾರೋಗ್ಯ ಅಥವಾ ಹೊಗಳಿಕೆ ಏನೇ ಆಗಲಿ ಅವರ ನಿಶ್ಚಲತೆಯನ್ನು ಅವು ಕದಡುವುದಿಲ್ಲ

Maya Balachandra Column: ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?

ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?

ವ್ಯಕ್ತಿ ಅಥವಾ ವಸ್ತುವಿನ ಇರುವಿಕೆಯನ್ನು ಗುರುತಿಸಬೇಕಾದರೆ, ಆ ವ್ಯಕ್ತಿ ಅಥವಾ ವಸ್ತು ವಿನ ಪರಿಚಯ ಇರಲೇಬೇಕು. ಇಲ್ಲವಾದಲ್ಲಿ, ನಮ್ಮೆದುರಿಗೆ ಇದ್ದರೂ, ಆ ವ್ಯಕ್ತಿ/ವಸ್ತುವನ್ನು ಗುರುತಿಸಲು ಸೋತು ಬಿಡುತ್ತೇವೆ. ‘ಇದೆ’ ಎಂದುಕೊಳ್ಳುವ ವಸ್ತುವಿನ ಯಾವ ಪರಿಚಯ ವೂ ಇಲ್ಲದಿದ್ದ ಮೇಲೆ, ಆ ನಂಬಿಕೆ ಏನು ತಾನೆ ಮಾಡಲು ಸಾಧ್ಯ? ಹಾಗಾಗಿ, ಎಲ್ಲಕ್ಕಿಂತ ಮೊದಲು, ನಮ್ಮ ಮನಸ್ಸಿನಲ್ಲಿ, ಭಗವಂತ ಅಥವಾ ದೇವರ ಚಿತ್ರಣ ಹೇಗಿದೆ ಅನ್ನುವುದು ಬಹಳ ಮುಖ್ಯ.

Dr N Someshwara Column: ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಆಯುರ್ವೇದವು ಮಕ್ಕಳಿಲ್ಲದ ಸ್ಥಿತಿಯನ್ನು ‘ವಂಧ್ಯತ್ವ’ ಎಂದು ಕರೆದಿದೆ. ಮಕ್ಕಳಾಗ ಬೇಕಾದರೆ ‘ನಾಲ್ಕು ಗರ್ಭ ಸಂಭವ ಸಾಮಾಗ್ರಿ’ಗಳು ಅಗತ್ಯ. ಮೊದಲನೆಯದು ಋತು. ಒಂದು ಬೀಜವು ಮೊಳೆಯಬೇಕಾದರೆ ಅದಕ್ಕೆ ಅನುಕೂಲಕರ ಋತು ಅಗತ್ಯ. ಎಲ್ಲ ಋತುಗಳಲ್ಲೂ ಬೀಜ ಮೊಳೆಯದು. ಹಾಗಾಗಿ ಮಕ್ಕಳಾಗಲೂ ‘ಫಲವಂತಿಕೆಯ ಅವಧಿ’ (ಫರ್ಟೈಲ್ ವಿಂಡೋ) ಎನ್ನುವುದು ಇರುತ್ತದೆ.

Maya Balachandra Column: ಜೈಸಾ ಅನ್ನ್‌, ವೈಸಾ ಮನ್...:‌ ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?

ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?

ಮಾತು ಮಾತಿಗೆ ಅಜ್ಜಿಯ ಅಡುಗೆಯನ್ನು ಕೊಂಡಾಡುವುದಷ್ಟೇ; ಹೋಗುವುದು ಮಾತ್ರ ದರ್ಶಿನಿ, ಫಾಸ್ಟ್‌ ಫುಡ್, ಸ್ಟ್ರೀಟ್ ಫುಡ್, ಕಲೋನಿಯಲ್ ಫುಡ್ ಜಾಯಿಂಟ್ ಗಳಿಗೆ. ಅಜ್ಜಿಯ ಅಡುಗೆಯ ಬಗ್ಗೆ ಮಾತನಾಡಿದ ನಾಲಿಗೆಯು ಸವಿಯುವುದು ಅಲ್ಲಿನ ವ್ಯಂಜನಗಳನ್ನೇ. ನಮ್ಮ ಅಕ್ಷರಮಾಲೆಯಲ್ಲಿ ವ್ಯಂಜನಗಳಿಗೆ ಸ್ವರಗಳು ಮೇಲ್ಪಂಕ್ತಿ ಆಗಿರುವಂತೆ, ಊಟದ ತಟ್ಟೆಯ ಲ್ಲಿಯೂ, ಸ್ವರವಾಗಿ ಅನ್ನ, ವ್ಯಂಜನವಾಗಿ ಸಾರು-ಸಾಂಬಾರ್ -ಪಲ್ಯಗಳು ಇದ್ದರೇನೇ ಅದು ಸಂಪೂರ್ಣ ಎನಿಸಿಕೊಳ್ಳುವುದು. ಅನ್ನ-ಸಾರು ಎಂದರೆ ಮೂಗು ಮುರಿಯುವ ಇಂದಿನ ತಲೆಮಾರಿಗೆ ಅದರ ಮಹತ್ವ ತಿಳಿಯುವ ಆಸಕ್ತಿ ಸಹ ಇಲ್ಲ.

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

ವೇದಕಾಲದ ಋಷಿಗಳಿಗೆ ಯಾವುದೋ ಒಂದು ಕ್ಷಣದಲ್ಲಿ ಹೇಗೆ ನಿರ್ದಿಷ್ಟ ಮಂತ್ರವು ಸುರಿಸು ತ್ತದೆಯೋ, ಹಾಗೆಯೇ ವಿಜ್ಞಾನಿಗಳಿಗೂ ಪರಿಹಾರವು ಮಿಂಚಿನಂತೆ ಹೊಳೆಯುತ್ತದೆ. ಅಂಥ ಮಿಂಚಿನ ಹೊಳಹು ‘ಹೃದಯದ ಗತಿನಿಯಂತ್ರಕ’ದ (ಕಾರ್ಡಿಯಾಕ್ ಪೇಸ್‌ ಮೇಕರ್) ಆವಿಷ್ಕಾರಕ್ಕೆ ಅನುವು ಮಾಡಿಕೊಟ್ಟ ಕಥೆಯು ರೋಚಕವಾಗಿದೆ.

Dr N Someshwara Column: ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ರಕ್ತವು 120-140 ಎಂಎಂಎಚ್‌ಜಿ ಒತ್ತಡದಲ್ಲಿ ಮಹಾಧಮನಿಯನ್ನು ಪ್ರವೇಶಿಸುತ್ತದೆ. ಮಹ ಧಮನಿಯಿಂದ ಹೊರಡುವ ಅನೇಕ ರಕ್ತನಾಳಗಳ ಮೂಲಕ, ರಕ್ತವು ದೇಹದ ಎಲ್ಲ ಭಾಗಗಳಿಗೆ ರವಾನೆಯಾಗುತ್ತದೆ. ಕೆಲವರು ರಕ್ತದ ಏರೊತ್ತಡದಿಂದ (ಹೈ ಬ್ಲಡ್ ಪ್ರೆಶರ್) ನರಳುವುದುಂಟು. ಈ ಏರೊತ್ತಡವನ್ನು ನಿಯಂತ್ರಿಸದಿದ್ದರೆ, ಗರಿಷ್ಠ 140 ಎಂಎಂಎಚ್‌ಜಿ ಯಲ್ಲಿ ಸಾಗಬೇಕಾದ ರಕ್ತವು 180 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಸಾಗಬಹುದು.

Dr Maithri Bhat Column: ಕರುಳುಬಳ್ಳಿಯ ನಂಟು

ಕರುಳುಬಳ್ಳಿಯ ನಂಟು

ಸಮಾಜ ಮತ್ತು ಭಾಷೆಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಏಕೆಂದರೆ ಭಾಷೆಯು ಇತಿಹಾಸದಲ್ಲಿ ದಾಖಲಾಗಿದ್ದರೂ, ಅದರ ನಿರ್ವಹಣೆ ಸಾಧ್ಯವಾಗುವುದು ಭಾಷೆಯನ್ನು ಬಳಸುವ ಮತ್ತು ಅರ್ಥ ಮಾಡಿಕೊಳ್ಳುವ ಜನರಿಂದ ಮಾತ್ರ. ಕಲಿಯುವಿಕೆ ಮತ್ತು ಕಲಿಸುವಿಕೆ ಯ ಮೂಲಕ ಭಾಷೆಯು ಸಂಸ್ಕೃತಿಯಾಗಿ ಪಸರಿಸುತ್ತದೆ.

Dr N Someshwara Column: ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣ, ಕಲ್ಲಿದ್ದಿಲಿನ ಉಪಯೋಗವು ಮಿತಿಮೀರಿತ್ತು. ಎಲ್ಲೆಲ್ಲೂ ಕಪ್ಪು ಮಸಿಯದೇ ಕಾರು ಬಾರು. ಮನೆಯ ಒಳ-ಹೊರ ಗೋಡೆಗಳಲ್ಲಿ ಕಪ್ಪು ಛಾಯೆ ಯಿಂದ ಕೂಡಿದ್ದ ಕಾರಣ, ಜನರ ಮನಸ್ಸೂ ಸಹ ಒಂದು ರೀತಿ ಮಂಕುಬಡಿದಂತಿತ್ತು.

Dr N Someshwara Column: ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಮಾನವ ಮತ್ತೊಬ್ಬ ಮಾನವನೊಂದಿಗೆ ಮಾತಿನ ಮೂಲಕ, ಪಶು-ಪಕ್ಷಿಗಳು ತಮಗೆ ಅರ್ಥವಾಗು ವಂಥ ಶಬ್ದಗಳ ಮೂಲಕ ಸಂಪರ್ಕ ನಡೆಸುತ್ತವೆ. ಇವೆರಡರ ಲಭ್ಯವಿಲ್ಲದ ಕೆಲವು ಜೀವಿಗಳು ವಾಸನಾಯುಕ್ತ ವಾದ ಹಲವು ಸಾವಯವ ಸಂಕೀರ್ಣ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವುದರ ಮೂಲಕ ಸಂಪರ್ಕ ನಡೆಸುತ್ತವೆ.

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

ಛೇದನಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರುರೂಪಿಸುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಸುರೂಪಿಕಾ ಶಸ್ತ್ರ ವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರಬುನಾದಿ ಹಾಕಿ ‘ಸುರೂಪಿಕ ಶಸ ವೈದ್ಯಕೀಯ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರರಾದವರು ಸುಶ್ರುತ ಮಹರ್ಷಿಗಳು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ವ್ಯಾಪಾರ ದಲ್ಲಿ ಸ್ಥಿರತೆ ತರಲು ಒಂದು ಹೊಸ ವ್ಯವಸ್ಥೆಯ ಅಗತ್ಯವಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ದೂರದೃಷ್ಟಿಯ ಫಲವಾಗಿ, ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರಲು ಚಾಣಾಕ್ಷ ಹೆಜ್ಜೆಯೊಂದನ್ನು ಇಡಲಾಯಿತು. 1944ರ ಜುಲೈ 22ರಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಬ್ರೆಟನ್‌ವುಡ್ಸ್‌ನಲ್ಲಿ ವಿಶ್ವದ 44 ರಾಷ್ಟ್ರ ಗಳ ಪ್ರತಿನಿಧಿಗಳನ್ನು ಸೇರಿಸಿ, ಅಲ್ಲಿಯವರೆಗೆ ಆಳಿದ್ದ ಬ್ರಿಟಷ್ ಪೌಂಡ್‌ನ ಬದಲು ಡಾಲರನ್ನು ವ್ಯಾಪಾರದ ವಿನಿಮಯ ಜಗತ್ತಿನ ಅಧಿಪತ್ಯಕ್ಕೆ ಏರಿಸಲಾಯಿತು. ಇದೇ ‘ಬ್ರೆಟನ್‌ವುಡ್ಸ್ ಒಪ್ಪಂದ’.

Constitution: ಸಂವಿಧಾನದ ಜಾಗೃತಿ: ಪ್ರಜಾಪ್ರಭುತ್ವದ ಜೀವಾಳ

ಸಂವಿಧಾನದ ಜಾಗೃತಿ: ಪ್ರಜಾಪ್ರಭುತ್ವದ ಜೀವಾಳ

ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಮರೆತಂತೆ ಕಾಣುವ ಘಟನೆಗಳು ಹೆಚ್ಚಾ ಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ; ಧರ್ಮನಿರಪೇಕ್ಷತೆ ಎಂಬ ತತ್ವವನ್ನು ವಕ್ರವಾಗಿ ಬಳಸಲಾಗುತ್ತಿದೆ; ಸಮಾನತೆಯ ಬದಲು ಮೇಲುಗೈ ಮನೋಭಾವ ಬೆಳೆದು ಬರುತ್ತಿದೆ.

ಅದ್ದೂರಿ ಮದುವೆಗಳು ಬೇಕು

ಅದ್ದೂರಿ ಮದುವೆಗಳು ಬೇಕು

ಬೆಂಗಳೂರಿನಲ್ಲಿರಲಿ ಅಥವಾ ಯಾವುದೇ ಊರಿನಲ್ಲಿರಲಿ ಒಂದು ಮದುವೆ ಎಂದರೆ ಅದು ನೂರಾರು ಜನರಿಗೆ ಉದ್ಯೋಗ ಸೃಷ್ಟಿಗೆ ದಾರಿಯಾಗಿದೆ ಎನ್ನುವುದು ಸುಳ್ಳಲ್ಲ. ಒಂದು ಸಾಧಾರಣ ಕಲ್ಯಾಣ ಮಂದಿರವಾದರೆ ಕಡಿಮೆ ಎಂದರೆ 80ರಿಂದ 100 ಜನರಿಗೆ ಕನಿಷ್ಠ 2-3 ದಿನ ಉದ್ಯೋಗ. ಇನ್ನು ದೊಡ್ಡ ಪ್ರದೇಶವಾದಷ್ಟೂ ಉದ್ಯೋಗ ಸೃಷ್ಟಿ ಜಾಸ್ತಿಯಾಗುತ್ತದೆ.

Loading...