ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ಕೆ. ರಾಘವ ಶರ್ಮ ನಿಡ್ಲೆ

ಅಂಕಣಕಾರ, ವಿಶೇ಼ಷ ಭಾತ್ಮೀದಾರ

vishwavani.social@gmail.com

ರಾಘವ ಶರ್ಮ ನಿಡ್ಲೆ ಅವರು ರಾಜಧಾನಿ ದೆಹಲಿಯಲ್ಲಿ 18 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದ ಸಂಡೇ ಇಂಡಿಯನ್ ಸುದ್ದಿ ವಾರ ಪತ್ರಿಕೆಗೆ ದೆಹಲಿಯಲ್ಲಿ 2007ರಿಂದ 3 ವರ್ಷ, ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ 2 ವರ್ಷ ಮತ್ತು ವಿಜಯವಾಣಿ ದಿನಪತ್ರಿಕೆಗೆ ದೆಹಲಿ ವಿಶೇಷ ಪ್ರತಿನಿಧಿಯಾಗಿ 2012ರಿಂದ 2025ರ ತನಕ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2023ರ ತನಕ ವಿಜಯವಾಣಿ ಸೋದರ ಸಂಸ್ಥೆ ದಿಗ್ವಿಜಯ ಸುದ್ದಿ ವಾಹಿನಿಗೂ ವಿಶೇಷ ಪ್ರತಿನಿಧಿ ಆಗಿದ್ದರು 2014, 2019, 2024ರ ಲೋಕಸಭೆ ಚುನಾವಣೆ, ಹಾಗೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರತ್ಯಕ್ಷ ವರದಿ ಮಾಡಿದ ಅನುಭವ ಹೊಂದಿರುವ ಅವರು, ಹತ್ತು ಹಲವು ಕೇಸುಗಳ ಸುಪ್ರೀಂಕೋರ್ಟ್ ಕಲಾಪಗಳ ಬಗ್ಗೆಯೂ ವರದಿ, ವಿಶ್ಲೇಷಣೆಗಳನ್ನು ಮಾಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಸಂಪಾದಕೀಯ ಸಲಹೆಗಾರ ರಾಗಿ ಕೆಲಸ ಮಾಡುತ್ತಿರುವ ಜತೆಗೆ ವಿಶ್ವವಾಣಿ ಪತ್ರಿಕೆಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿದ್ದಾರೆ.

Articles
Raghava Sharma Nidle Column: ಕಟ್ರ ಈದ್ಗಾ ಎನ್ನುವುದನ್ನು ಬ್ರಿಟಿಷ್‌ ಆಡಳಿತವೇ ಒಪ್ಪಿರಲಿಲ್ಲ !

ಕಟ್ರ ಈದ್ಗಾ ಎನ್ನುವುದನ್ನು ಬ್ರಿಟಿಷ್‌ ಆಡಳಿತವೇ ಒಪ್ಪಿರಲಿಲ್ಲ !

ಒಪ್ಪಂದದ ಪ್ರಕಾರ ದೇವಾಲಯದ ಭೂಮಿಯನ್ನು ಟ್ರಸ್ಟ್‌ಗೆ ಮತ್ತು ಪಕ್ಕದ ಶಾಹಿ ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ಹಂಚಿಕೆ ಮಾಡಲಾಗುತ್ತದೆ. ಆ ಸಮಯ ದಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾಸಂಘದ ಅಧ್ಯಕ್ಷರಾಗಿದ್ದ ಗಣೇಶ ವಾಸುದೇವ್ ಮಾವಲಂಕರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು.

Raghava Sharma Nidle Column: ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ

ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ

2019ರ ಲೋಕಸಭೆ ಫಲಿತಾಂಶಗಳು 2021ರ ವಿಧಾನಸಭೆ ಚುನಾವಣೆ ಹೋರಾಟಕ್ಕೆ ಬಿಜೆಪಿಯ ನೈತಿಕ ಸ್ಥೈರ್ಯವನ್ನು ದ್ವಿಗುಣಗೊಳಿಸಿತ್ತು. ಈ ಬಾರಿ ಬಂಗಾಳ ಹೋರಾಟವನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿರುವ ಬಿಜೆಪಿ, ಈ ಸಲ ಗೆಲ್ಲದಿದ್ದರೆ ಮುಂದೆಂದೂ ಗೆಲ್ಲಲಾರೆವು ಎನ್ನುತ್ತಾ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿ, ಆ ಮೂಲಕ ಮತದಾರ ಮಹಾಪ್ರಭುವಿನ ಹೃದಯ ಪ್ರವೇಶಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

Raghava Sharma Nidle Column: ಅರಾವಳಿ: ನ್ಯಾಯಾಲಯದ ಮಿತ್ರನ ಆತಂಕ ಬದಿಗೆ ಸರಿಸಿದ್ದೇಕೆ ?

ಅರಾವಳಿ: ನ್ಯಾಯಾಲಯದ ಮಿತ್ರನ ಆತಂಕ ಬದಿಗೆ ಸರಿಸಿದ್ದೇಕೆ ?

ಅರಾವಳಿ ಬೆಟ್ಟಸಾಲುಗಳ ಕುರಿತ ಮರುವ್ಯಾಖ್ಯಾನ ಹಾಗೂ ಈ ಪರಿಸರ ಸೂಕ್ಷ್ಮ ಬೆಟ್ಟಸಾಲುಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ರಚನೆ ಮಾಡುವ ಪ್ರಸ್ತಾವವನ್ನು ಸಿಜೆಐ ಸೂರ್ಯಕಾಂತ್ ಅವರೀಗ ಮುಂದಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

Raghava Sharma Nidle Column: ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್‌ ಎಂದೇ ಅರ್ಥ !

ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್‌ ಎಂದೇ ಅರ್ಥ !

ಧೂಮಪಾನದ ಚಟವಿಲ್ಲದಿದ್ದರೂ, ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್ ಎಂದೇ ಅರ್ಥ!! ಮಾಲಿನ್ಯ ತಗ್ಗಿಸುತ್ತೇವೆ ಎಂದು ದಿಲ್ಲಿ ವಾಸಿಗಳಲ್ಲಿ ಹತ್ತು ಹಲವು ಕನಸುಗಳನ್ನು ಬಿತ್ತಿದ್ದ ಅರವಿಂದ ಕೇಜ್ರಿವಾಲ್ ಈಗ ಮಾಲಿನ್ಯದಲ್ಲಿ ಮರೆಯಾಗಿ ಹೋಗಿದ್ದಾರೆ. ವಾಯುಮಾಲಿನ್ಯ ತಗ್ಗಿಸುವುದರ ಜತೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಪ್ರಮಾಣ ಮಾಡಿದ್ದ ಮಾಜಿ ಸಿಎಂ ಕೇಜ್ರಿವಾಲ, ಭರವಸೆಗಳನ್ನು ಈಡೇರಿಸುವಲ್ಲಿ ಸೋತರು.

Raghav Sharma Nidle Column: ಇಂಡಿ ಮೈತ್ರಿಕೂಟದ ಮೆದುಳು ನಿಷ್ಕ್ರಿಯಗೊಂಡಿದೆಯೇ ?

ಇಂಡಿ ಮೈತ್ರಿಕೂಟದ ಮೆದುಳು ನಿಷ್ಕ್ರಿಯಗೊಂಡಿದೆಯೇ ?

ತಮ್ಮ ನಿಲುವು-ಆಲೋಚನೆಗಳನ್ನು ಅನುಮೋದಿಸುವ ತೀರ್ಪುಗಳು ಕೋರ್ಟಿನಿಂದ ಹೊರ ಬೀಳದಿ ದ್ದಾಗ ನ್ಯಾಯಾಧೀಶರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎನ್ನುವುದೇ ಇಂಡಿಯಾ ಒಕ್ಕೂಟ ಪಕ್ಷಗಳ ಪ್ರತಿಪಾದನೆಯಾದರೆ ; ರಾಹುಲ್ ಗಾಂಧಿ ಅಪರಾಧಿ ಎಂಬ ಸೂರತ್ ನ್ಯಾಯಾಲ ಯದ ತೀರ್ಪಿಗೆ ತಡೆ ನೀಡಿದ್ದ (2023) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೂ ವಾಗ್ದಂಡನೆಗೆ ಒಳಪಡಿಸಬೇಕು ಎಂದೇ ವಾದಿಸಬೇಕಾಗುತ್ತದೆ ಅಲ್ಲವೇ? ಆದರೆ, ವಾಸ್ತವ ಏನೆಂದರೆ ಶೂನ್ಯ ವಿವೇಚನೆ ಇರುವವರಷ್ಟೇ ಆ ರೀತಿ ಯೋಚಿಸುತ್ತಾರಷ್ಟೇ.

Raghav Sharma Nidle Column: ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?

ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?

ನರಮೇಧದಿಂದ ತಪ್ಪಿಸಿಕೊಂಡು ಬರುವ ನಿರಾಶ್ರಿತರು ಕೆಂಪುಹಾಸನ್ನು (ರೆಡ್ ಕಾರ್ಪೆಟ) ಕೇಳುವುದಿಲ್ಲ. ಅವರು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ನೀಡುವ ರಕ್ಷಣೆಯನ್ನಷ್ಟೇ ಕೇಳುತ್ತಾರೆ. ಸಾಮೂಹಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಬಯಸುವ ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮ ನುಸುಳುಕೋರರೆಂದು ಸಾಂವಿಧಾನಿಕ ನ್ಯಾಯಾಲಯ ಪರಿಗಣಿಸಿದರೆ, ಬಲವಂತದ ಸ್ಥಳಾಂತರ ಮತ್ತು ಕಾನೂನುಬಾಹಿರ ವಲಸೆಯ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎನ್ನುವುದು ಪತ್ರದಲ್ಲಿರುವ ತಕರಾರು.

Raghav Sharma Nidle Column: ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?

ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?

ಇಂತಿಪ್ಪ ಶಿವಕುಮಾರ್, 2023ರ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದ ರಿಂದಲೇ, ಎರಡೂವರೆ ವರ್ಷಗಳ ಹಿಂದೆ ವಾಗ್ದಾನ ಮಾಡಿದಂತೆ, ‘ನನ್ನ ಕೆಲಸಕ್ಕೆ ನ್ಯಾಯ ಕೊಡಿ, ವಚನಭ್ರಷ್ಟರಾಗಬೇಡಿ. ನಮ್ಮ ಸಮುದಾಯ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗ‌ ಬೇಡಿ’ ಎಂದು ದಿಲ್ಲಿ ದೊರೆಗಳ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ, ತಮ್ಮ ಪಟ್ಟಾಭಿಷೇಕದ ಸಮಯ ನಿಗದಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.

Raghav Sharma Nidle Column: ಬಿಹಾರ ಗದ್ದುಗೆ ಮೇಲೆ ಯಾದವ- ಮುಸ್ಲಿಂ ಕಣ್ಣು

ಬಿಹಾರ ಗದ್ದುಗೆ ಮೇಲೆ ಯಾದವ- ಮುಸ್ಲಿಂ ಕಣ್ಣು

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಶಾಸಕರೊಬ್ಬರನ್ನೂ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ತೇಜಸ್ವಿ ಯಾದವ್ ಭರವಸೆ ನೀಡಿರುವುದರಿಂದ ಮುಸ್ಲಿಂ ಮತಗಳ ವಿಭಜನೆಗೆ ಕಡಿವಾಣ ಹಾಕುವ ತಂತ್ರ ಹೆಣೆಯಲಾಗಿದೆ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಮುಸ್ಲಿಂ ಮತಗಳ ಸಣ್ಣ ವಿಭಜನೆಯೂ ಆರ್. ಜೆ.ಡಿ.-ಕಾಂಗ್ರೆಸ್‌ಗೆ ಹಾನಿ ಮಾಡಬಲ್ಲದು.

Raghav Sharma Nidle Column: ಹಲವರ ಭವಿಷ್ಯ ಬರೆಯಲಿರುವ ಬಿಹಾರ ಕದನ

ಹಲವರ ಭವಿಷ್ಯ ಬರೆಯಲಿರುವ ಬಿಹಾರ ಕದನ

35 ವರ್ಷಗಳಿಂದ ಬಿಹಾರ ಮತದಾರನ ಅವಗಣನೆಗೆ ಒಳಗಾಗಿರುವ ಕಾಂಗ್ರೆಸ್, ಇಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಕಂಡುಕೊಂಡರೆ, ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟದ ನಾಯಕತ್ವ ವಹಿಸಿ ಕೊಳ್ಳಲು ಪ್ರಾದೇಶಿಕ ಪಕ್ಷಗಳೊಂದಿಗೆ ಚೌಕಾಸಿ ಮಾಡಬಹುದು. ಚುನಾವಣಾ ರಣನೀತಿಕಾರನನ್ನು ರಾಜಕಾರಣಿಯಾಗಿ ಬಿಹಾರದ ಜನ ಸ್ವೀಕರಿಸಿದರೆ, ಹೊಸ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ತಮ್ಮ ಪಕ್ಷದ ಬಾಹುಗಳನ್ನು ಬೇರೆಡೆಗೆ ವಿಸ್ತರಿಸಲು ಇದು ನಾಂದಿ ಹಾಡಬಹುದು.

Raghav Sharma Nidle Column: ಮಹಾಮೈತ್ರಿಯೊಳಗೆ ಅಪನಂಬಿಕೆಯ ಅಪಸ್ವರ

ಮಹಾಮೈತ್ರಿಯೊಳಗೆ ಅಪನಂಬಿಕೆಯ ಅಪಸ್ವರ

1940 ಮತ್ತು 2025ರ ನಡುವಿನ ಮುಖ್ಯ ವ್ಯತ್ಯಾಸ ಏನೆಂದರೆ- ಅಂದು ಕಾಂಗ್ರೆಸ್‌ನಲ್ಲಿ ದೃಢ, ಸಮರ್ಥ ಮತ್ತು ಜನಸಮೂಹ ಸ್ವೀಕರಿಸುವ ನಾಯಕರ ದಂಡೇ ಇತ್ತು. ಇಂದು, ಚುನಾವಣೆ ಮೇಲೆ ಚುನಾವಣೆ ಸೋತರೂ ಒಂದೇ ಕುಟುಂಬಕ್ಕೇ ಅಂಟಿಕೊಂಡ ಹಾಗೂ ಜನಪ್ರಿಯತೆ ಗಳಿಸಲು ಹೆಣಗಾಡುತ್ತಿರುವ ನಾಯಕ ಮತ್ತು ನಾಯಕರಿದ್ದಾರೆ ಅಷ್ಟೇ.

Raghava Sharma Nidle Column: ನ್ಯಾಯಮೂರ್ತಿಗಳ ಮೇಲಿನ ದಾಳಿ ಹೊಸತೇನಲ್ಲ. ಆದರೆ...

ನ್ಯಾಯಮೂರ್ತಿಗಳ ಮೇಲಿನ ದಾಳಿ ಹೊಸತೇನಲ್ಲ. ಆದರೆ...

2009ರಲ್ಲಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ ಮುಂಬೈ ಮೂಲದ ಪವಿತ್ರಾ ಮುರಳಿ ಎಂಬ ಮಹಿಳೆಯೊಬ್ಬರು ಚಪ್ಪಲಿ ಎಸೆದರು. ಆದರೆ ಗುರಿ ತಪ್ಪಿತ್ತು. ಮುಂಬೈನ ಬಾಸ್ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮಾಡು ತ್ತಿದ್ದಾಗ ಈ ದಾಳಿ ಮಾಡಲಾಯ್ತು.

Raghava Sharma Nidle Column: ನ್ಯಾಯಾಂಗವನ್ನೇ ಹೊಣೆಯಾಗಿಸುವುದು ಪಲಾಯನವಾದವಲ್ಲವೇ ?

ನ್ಯಾಯಾಂಗವನ್ನೇ ಹೊಣೆಯಾಗಿಸುವುದು ಪಲಾಯನವಾದವಲ್ಲವೇ ?

ಸುಪ್ರೀಂಕೋರ್ಟ್ ನಲ್ಲಿ ಒಂದು ನ್ಯಾಯಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳು (ಸಿಜೆಐ ಪೀಠದಲ್ಲಿ ಮೂವರು) ಕೂರುವುದರಿಂದ ನಿತ್ಯಕ್ಕೆ 17 ನ್ಯಾಯಪೀಠಗಳಷ್ಟೇ (ಆರೇಳು ವರ್ಷಗಳ ಹಿಂದೆ 10-12 ಪೀಠಗಳಷ್ಟೇ ಇದ್ದವು) ಕೆಲಸ ಮಾಡುತ್ತವೆ. ದೇಶದ ವಿವಿಧ ರಾಜ್ಯಗಳ ಜನಸಂಖ್ಯೆಯ ಅನುಪಾತದಲ್ಲಿ ಆಯಾ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಇದುವರೆಗೆ ಸಾಧ್ಯವಾಗಿಲ್ಲ.

Raghav Sharma Nidle Column: ಮೋದಿ- ನಿತೀಶರ ಆ 2 ಚಿತ್ರಗಳು

Raghav Sharma Nidle Column: ಮೋದಿ- ನಿತೀಶರ ಆ 2 ಚಿತ್ರಗಳು

2005ರಿಂದ ಬಿಹಾರ ಎನ್‌ಡಿಎ ಮುನ್ನಡೆಸುತ್ತಿದ್ದ ನಿತೀಶ್, ಮುಂದೊಂದು ದಿನ ದೇಶದ ಪ್ರಧಾನಿ ಯಾಗಬೇಕೆಂಬ ತಮ್ಮ ಕನಸಿಗೆ ಮೋದಿಯೇ ಪ್ರಮುಖ ಅಡ್ಡಿಯಾಗಬಲ್ಲರು ಎಂಬುದನ್ನು ಮೊದಲೇ ಗ್ರಹಿಸಿದ್ದರು. ಹಾಗಾಗಿಯೇ, ಗುಜರಾತ್ ಗಲಭೆ ಕಾರಣಕ್ಕಾಗಿ ಮೋದಿಯವರನ್ನು ಅಪರಾಧಿ ಎಂದು ಬಿಂಬಿಸುತ್ತಲೇ, ದ್ವೇಷಿಸುತ್ತಿದ್ದ ನಿತೀಶ್, ಬಿಹಾರದಲ್ಲಿ ಕೋಮುವಾದದ ಗಾಳಿ ಸೋಕಲು ಎಂದಿಗೂ ಬಿಡಲಾರೆ 2005ರ ಪೂರ್ವದ ಹೇಳುತ್ತಿದ್ದರು.

Raghava Sharma Nidle Column: ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

ಇಡೀ ಪ್ರಕರಣದಲ್ಲಿ ಎಸ್‌ಐಟಿಗೆ ಷಡ್ಯಂತ್ರದ ವಾಸನೆ ಬಡಿದ ಪರಿಣಾಮ, ಚಿನ್ನಯ್ಯನ ಹಿಂದೆ-ಮುಂದೆ ಇದ್ದ ಎಲ್ಲರನ್ನೂ ವಿಚಾರಣೆಗೊಳಪಡಿಸಿ, ಒಳಸಂಚಿನ ಜಾಲವನ್ನು ಬೇಧಿಸಲಾಗುತ್ತಿದೆ. ಕಳೆದೆರಡೂವರೆ ತಿಂಗಳಲ್ಲಿ ಬುರುಡೆ ಕೇಸು ದೇಶದಲ್ಲಿ ಸಂಚಲನ ಸೃಷ್ಟಿಸಿದರೂ, ಸುಪ್ರೀಂ ಕೋರ್ಟಿ ನದ ಮಹತ್ವದ ಬೆಳವಣಿಗೆಯನ್ನು 140 ದಿನಗಳ ಕಾಲ ಮುಚ್ಚಿಟ್ಟಿದ್ದೇಕೆ ಎನ್ನುವುದೇ ದಿಗ್ಭ್ರಮೆ ಮೂಡಿಸಿದೆ.

Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

35 ವರ್ಷಗಳಿಂದ ಬಿಹಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ತಲೆಕೆಡಿಸಿಕೊಂಡಂತಿಲ್ಲ. ಅವರ ಮುಖ್ಯ ಟಾರ್ಗೆಟ್ ಸಿಎಂ ನಿತೀಶ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕರೇ ಆಗಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿ ನಾಯಕರ ನಿದ್ದೆಗೆಡಿಸಿರುವ ಪಿಕೆ, ಎನ್‌ಡಿಎ ಮತಬ್ಯಾಂಕ್ ಬೇಧಿಸುವ ಪಕ್ಕಾ ಲೆಕ್ಕಾಚಾರ ಹಾಕಿ ಕೊಂಡಂತಿದೆ.

Raghava Sharma Nidle Column: ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

ಧರ್ಮಸ್ಥಳದ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ಸಲ್ಲಿಸಿ, ಈಗ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿರುವ (ಮುಸುಕುಧಾರಿ) ಸಿ.ಎನ್. ಚಿನ್ನಯ್ಯ ಹಾಗೂ ಆತನ ಸಹಚರರು ಯೂಟ್ಯೂಬ್ ಚಾನೆಲ್‌ ಗಳನ್ನು ಬಳಸಿಕೊಂಡು ಧರ್ಮಸ್ಥಳದ ಬಗ್ಗೆ ಎಂತೆಂಥಾ ಕಥೆಗಳನ್ನು ಹೆಣೆದರು ಎಂಬುದನ್ನು ಇಡೀ ದೇಶವೇ ನೋಡಿದೆ.

Raghava Sharma Nidle Column: ಚರ್ಚೆ ಹುಟ್ಟು ಹಾಕಿದ ಕೊಲಿಜಿಯಂ ತೀರ್ಮಾನ

ಚರ್ಚೆ ಹುಟ್ಟು ಹಾಕಿದ ಕೊಲಿಜಿಯಂ ತೀರ್ಮಾನ

ದೇಶದಲ್ಲಿ ನ್ಯಾ. ಪಾಂಚೋಲಿ ಅವರಿಗಿಂತ ಹೆಚ್ಚು ಸೇವಾ ಹಿರಿತನ ಹೊಂದಿದ ಅನೇಕ ನ್ಯಾಯ ಮೂರ್ತಿ ಗಳಿರುವಾಗ, ನ್ಯಾ.ಪಾಂಚೋಲಿಯವರನ್ನೇ ಆಯ್ಕೆ ಮಾಡುವುದಕ್ಕೆ ನನ್ನ ಸಹಮತಿಯಿಲ್ಲ ಎಂದಿದ್ದ ನ್ಯಾ.ಬಿ.ವಿ. ನಾಗರತ್ನ, ತಮ್ಮ ವಿರೋಧದ ಅಭಿಪ್ರಾಯಗಳನ್ನು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲೂ ಪ್ರಕಟಿಸಬೇಕು ಎಂದು ಈಜಿooಛ್ಞಿಠಿ ಘೆಟಠಿಛಿ (ಅಸಮ್ಮತಿಯ ಟಿಪ್ಪಣಿ)ನಲ್ಲಿ ದಾಖಲಿಸಿದ್ದಾರೆ.

Raghava Sharma Nidle Column: ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದರೂ, ಅವರನ್ನು ಸಚಿವ ಸ್ಥಾನದಿಂದ ಸಿಎಂ ಎಂ.ಕೆ. ಸ್ಟ್ಯಾಲಿನ್ ತೆಗೆದುಹಾಕಿರಲಿಲ್ಲ. ಹೀಗಾಗಿ, ಇದನ್ನು ತಡೆಯಲು ಹೊಸ ಕಾನೂನು ತರುವ ಮೂಲಕ, ‘ರಾಜಕೀಯ ನೈತಿಕತೆ’ಯ ಸಂದೇಶ ಸಾರಲು ಬಿಜೆಪಿ ಯತ್ನಿಸಿದೆ.

Raghav Sharma Nidle Column: ಸೋಶಿಯಲ್‌ ಮೀಡಿಯಾ ಟ್ರಯಲ್‌ ಗೆ ಬೇಕಿದೆ ಮೂಗುದಾರ

ಸೋಶಿಯಲ್‌ ಮೀಡಿಯಾ ಟ್ರಯಲ್‌ ಗೆ ಬೇಕಿದೆ ಮೂಗುದಾರ

ನಿರ್ದಿಷ್ಟ ಪ್ರದೇಶದಲ್ಲಿ ನಡೆದ/ನಡೆಯುತ್ತಿರುವ ಘಟನೆಯನ್ನು ಯಥಾವತ್ತಾಗಿ ವರದಿ ಮಾಡುವ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಮಾಧ್ಯಮಗಳಿಗಿದೆ, ಸೋಷಿಯಲ್ ಮೀಡಿಯಾಗಳೂ ಈ ಹಕ್ಕನ್ನು ಬಳಸಿಕೊಳ್ಳುತ್ತಿವೆ. ಅದೇ ರೀತಿ ಅಪರಾಧ ತನಿಖೆಯ ಸಮಯದಲ್ಲಿ ಆರೋಪಿಗಳಿಗೂ ಕಾನೂನಾತ್ಮಕ ರಕ್ಷಣೆ ಪಡೆಯುವ ಹಕ್ಕಿದೆ ಎನ್ನುವುದೂ ಗಮನಾರ್ಹ.

Raghava Sharma Nidle Column: ಕಳಸಾ-ಬಂಡೂರಿಯ ಗ್ರಹಣ ಬಿಡುವುದು ಯಾವಾಗ ?

ಕಳಸಾ-ಬಂಡೂರಿಯ ಗ್ರಹಣ ಬಿಡುವುದು ಯಾವಾಗ ?

ಒಂದು ವೇಳೆ ರಾಜ್ಯ ಸರಕಾರ ಯಾವುದೇ ಅನುಮತಿಯಿಲ್ಲದೆ ಕಾಮಗಾರಿ ಶುರು ಮಾಡಿದಲ್ಲಿ ಅದು ರಾಜ್ಯಕ್ಕೆ ಕಾನೂನಾತ್ಮಕವಾಗಿ ತಿರುಗುಬಾಣವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ರಾಜ್ಯದ ಕ್ರಮವನ್ನು ಗೋವಾ ಖಂಡಿತವಾಗಿಯೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ, ಅಲ್ಲಿಂದ ಕರ್ನಾಟಕಕ್ಕೆ ಪ್ರತಿಕೂಲ ಆಗಬಲ್ಲ ಆದೇಶ ಪಡೆದುಕೊಳ್ಳಲು ಮುಂದಾಗಬಹುದು.

Raghava Sharma Nidle Column: ನಿತೀಶ್‌ ರನ್ನು ಮುಗಿಸಲು ಚಿರಾಗ್‌, ಪಾಸ್ವಾನ್‌ ವ್ಯೂಹ

ನಿತೀಶ್‌ ರನ್ನು ಮುಗಿಸಲು ಚಿರಾಗ್‌, ಪಾಸ್ವಾನ್‌ ವ್ಯೂಹ

1990ರ ನಂತರದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2020ರ ಚುನಾವಣೆ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. 30 ವರ್ಷಗಳ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವೊಂದು (ಬಿಜೆಪಿ) ರಾಜ್ಯ ಚುನಾವಣೆಯಲ್ಲಿ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿತ್ತು. ಅಲ್ಲಿಯವರೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಜೆಡಿಯು ಎಂಬ ಎರಡು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಹಿರಿಯಣ್ಣನ ಸ್ಥಾನ ಸಿಕ್ಕಿತ್ತು.

Raghav Sharma Nidle Column: ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

‘ರಾಜ್ಯ ಕಾಂಗ್ರೆಸ್‌ನ ಪರಮೋಚ್ಚ ನಾಯಕ ನಾನೇ ಮತ್ತು ಶಾಸಕರೂ ನನ್ನೊಂದಿಗಿದ್ದಾರೆ’ ಎನ್ನುವ ಮೂಲಕ ಶಿವಕುಮಾರ್ ಪಕ್ಷದೊಳಗಿನ ವಿಶ್ವಾಸಾರ್ಹ ನಾಯಕ ಅಲ್ಲ ಎಂಬುದನ್ನೂ ಅವರೂ ಪರೋಕ್ಷವಾಗಿ ತಿಳಿಸಿದ್ದಾರೆ. ಸಿಎಂ ಸ್ಥಾನದ ಕನಸು ಕಾಣಬಹುದು. ಆದರೆ, ‘ಅದಕ್ಕೆ ನಾ ಬಿಡಲಾರೆ’ ಎಂದಿರುವ ಸಿದ್ದರಾಮಯ್ಯ, ‘ಶಿವಕುಮಾರ್ ಕನಸು ನನಸಾಗದು’ ಎಂಬ ಸಂದೇಶ ಕೊಟ್ಟಿದ್ದಾರೆ.

Raghava Sharma Nidle Column: ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?

ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?

ಕೃಷ್ಣಾ ನ್ಯಾಯಾಧೀಕರಣದ 2013ರ ಸ್ಪಷ್ಟೀಕರಣ ತೀರ್ಪುಗಳನ್ನು ಪ್ರಶ್ನಿಸಿ ಮೂರೂ ರಾಜ್ಯಗಳ ಸಿವಿಲ್ ಅಪೀಲ್‌ಗಳು ಸುಪ್ರೀಂಕೋರ್ಟ್ ಕಡತಗಳಲ್ಲಿ ಈಗಲೂ ಧೂಳು ತಿನ್ನುತ್ತಿವೆ. ಸಿವಿಲ್ ಅಪೀಲ್‌ಗಳ ಬಗ್ಗೆ ಈ ಹಿಂದೆ ಹಲವು ಸುದೀರ್ಘ ವಿಚಾರಣೆ ಗಳು ನಡೆದಿದ್ದರೂ, ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಇನ್ನೂ ಹೊರ ಬೀಳದಿರುವುದು ರಾಜ್ಯದ ಕೃಷ್ಣಾ ಕಣಿವೆ ಭಾಗದ ಜನರ ಗೋಳನ್ನು ಹೆಚ್ಚಿಸುತ್ತಲೇ ಇದೆ.