ದುಡ್ಡಿಲ್ಲದೆ ಜಗವಿಲ್ಲ, ದುಡ್ಡಿದ್ದರೆ ಜಗವೆಲ್ಲ !
ಒಂದು ಸಂಸ್ಥೆ ನಡೆಯಬೇಕಾದರೆ ಹಣ ಬಹಳ ಮುಖ್ಯವಾಗುತ್ತದೆ. ಇವತ್ತಿಗೆ ಅವರ ಪ್ರಕಾಶನ ಸಂಸ್ಥೆ, ಟ್ರಸ್ಟ್ ತನ್ನೆಲ್ಲಾ ಖರ್ಚುಗಳನ್ನು ಸರಿದೂಗಿಸಿಕೊಂಡು ಎರಡು ಕೋಟಿಯಷ್ಟು ಹಣ ವನ್ನು ಹೊಂದಿದೆ ಎನ್ನುವ ಮಾತನ್ನು ಅವರು ಆಡಿದರು. ಒಳ್ಳೆಯ ಕೆಲಸ ಮಾಡಲು ಕೂಡ ಹಣ ಬೇಕು. ಹಣ ಗಳಿಸುವುದು, ಅದು ಕೂಡ ಸನ್ಮಾರ್ಗದಲ್ಲಿ ಹಣ ಗಳಿಸುವುದು ತಪ್ಪಲ್ಲ. ಅದು ಹಕ್ಕು. ಈ ಮಾತುಗಳನ್ನು ನಮ್ಮ ಎಲ್ಲಾ ಕಲಾವಿದರು, ಬರಹಗಾರರು ಅರಿತುಕೊಳ್ಳಬೇಕು.