ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadhguru Shri Madhusudan Sai: ಮಕ್ಕಳಿಗೆ ಕಲಿಸಲು ಒತ್ತಡ ಹೇರುವ 'ಪ್ರೆಶರ್ ಕುಕ್ಕರ್' ವ್ಯವಸ್ಥೆ ಸರಿಯಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ

ವೃತ್ತಿಪರತೆ, ಗುಣಮಟ್ಟ ಹಾಗೂ ಶ್ರೇಷ್ಠತೆ ವಿಚಾರಗಳಲ್ಲಿ ಚೀನಾದವರ ಶ್ರದ್ಧೆ ಮೆಚ್ಚುಗೆಗೆ ಪಾತ್ರ ವಾಗುತ್ತದೆ. ೧೦೦ ವರ್ಷಗಳ ಹಿಂದೆ ಚೀನಾ ಬಡ ದೇಶವಾಗಿತ್ತು. ಆದರೆ ಈಗ ಜಗತ್ತಿನ ಉನ್ನತ ದೇಶವಾಗಿ ಹೊಮ್ಮಿದೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ದೊಡ್ಡ ಆರ್ಥಿಕತೆಯಾಗಿ ಬೆಳೆದು ಬಂದಿರುವುದು ಯಶಸ್ಸಿನ ಕಥೆ ಮತ್ತು ಶ್ಲಾಘನೀಯವಾಗಿದೆ

ಮಕ್ಕಳಿಗೆ ಕಲಿಸಲು ಒತ್ತಡ ಹೇರುವ 'ಪ್ರೆಶರ್ ಕುಕ್ಕರ್' ವ್ಯವಸ್ಥೆ ಸರಿಯಲ್ಲ

ಚಿಕ್ಕಬಳ್ಳಾಪುರ ತಾಲ್ಲೂಕು ಚೇಳೂರಿನಲ್ಲಿ 'ಸಾಯಿ ಸ್ವಾಸ್ಥ್ಯ ಅರ್ಜೆಂಟ್ ಕೇರ್' ಕೇಂದ್ರವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಶನಿವಾರ ಉದ್ಘಾಟಿಸಿದರು. ಇದರಲ್ಲಿ ರೋಗಪತ್ತೆ ಮತ್ತು ಸಮಾಲೋಚನೆಯ ಸೇವೆಗಳೂ ಉಚಿತವಾಗಿ ಸಿಗುತ್ತವೆ. -

Ashok Nayak Ashok Nayak Oct 11, 2025 11:46 PM

ಚಿಕ್ಕಬಳ್ಳಾಪುರ : ಶಾಲಾ ಸಮಯದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದಕ್ಕಾಗಿ ಶಿಕ್ಷಕರು ಸಾಕಷ್ಟು ಶ್ರಮಿಸಬೇಕು. ಹಾಗೆಂದು ಕೋಚಿಂಗ್ ತರಗತಿಗಳ ಮೂಲಕ ಹೆಚ್ಚಿನ ಒತ್ತಡ ತರಬಾರದು. ಮಕ್ಕಳ ಮೇಲಿನ ಪ್ರೆಶರ್ ಕುಕ್ಕರ್ ವ್ಯವಸ್ಥೆ ಸರಿಯಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadhguru Shri Madhusudan Sai) ಅಭಿಪ್ರಾಯಪಟ್ಟರು.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ ೫೭ನೇ ದಿನವಾದ ಶನಿವಾರ ಆಶೀರ್ವಚನ ನೀಡಿದ ಸದ್ಗುರು, ಚೀನಾದಲ್ಲಿ ಮಕ್ಕಳು ಶಾಲೆಯಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲಿಯಬೇಕು. ಅಲ್ಲಿ ಕೋಚಿಂಗ್ ತರಗತಿಗಳಿಗೆ ಅವಕಾಶವಿಲ್ಲ. ಕೋಚಿಂಗ್ ತರಗತಿಗಳ ವ್ಯವಹಾರವನ್ನು ಸಂಪೂರ್ಣ ವಾಗಿ ಬಂದ್ ಮಾಡಿದ್ದಾರೆ ಎಂದು ವಿವರಿಸಿದರು.

ರಾಜಸ್ಥಾನದ ಕೋಟಾದಿಂದ ಎಂಬಿಬಿಎಸ್ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದಾರೆ. ಮಕ್ಕಳು ಏನನ್ನಾದರೂ ಪೂರ್ಣಗೊಳಿಸಲು ಒತ್ತಡಕ್ಕೆ ಒಳಗಾಗುತ್ತಾರೆ. ಇದೇ ಕಾರಣಕ್ಕೆ ದೇಶದಲ್ಲಿ ಅನೇಕ ಮಕ್ಕಳನ್ನು ಕಳೆದುಕೊಂಡಿದ್ದೇವೆ. ಪೋಷಕರು ಮತ್ತು ಶಿಕ್ಷಕರು ಈ ವಿಚಾರ ಅರಿತುಕೊಳ್ಳಬೇಕು. ಮಕ್ಕಳನ್ನು ಸಹಜವಾಗಿ ಇರಲು, ಕಲಿಯಲು, ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದರು.

ಇದನ್ನೂ ಓದಿ: Child Death: ಬೆಂಗಳೂರಿನಲ್ಲಿ ಘೋರ ದುರಂತ, ಕಾರಿನಡಿಗೆ ಸಿಲುಕಿ ಮಗು ಸಾವು

ವೃತ್ತಿಪರತೆ, ಗುಣಮಟ್ಟ ಹಾಗೂ ಶ್ರೇಷ್ಠತೆ ವಿಚಾರಗಳಲ್ಲಿ ಚೀನಾದವರ ಶ್ರದ್ಧೆ ಮೆಚ್ಚುಗೆಗೆ ಪಾತ್ರ ವಾಗುತ್ತದೆ. ೧೦೦ ವರ್ಷಗಳ ಹಿಂದೆ ಚೀನಾ ಬಡ ದೇಶವಾಗಿತ್ತು. ಆದರೆ ಈಗ ಜಗತ್ತಿನ ಉನ್ನತ ದೇಶವಾಗಿ ಹೊಮ್ಮಿದೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ದೊಡ್ಡ ಆರ್ಥಿಕತೆಯಾಗಿ ಬೆಳೆದು ಬಂದಿರುವುದು ಯಶಸ್ಸಿನ ಕಥೆ ಮತ್ತು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಇಂಜೆಟಿ ಶ್ರೀನಿವಾಸ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ' ಪುರಸ್ಕಾರ ನೀಡಿ ಗೌರವಿಸ ಲಾಯಿತು.

'ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಯೋಜನೆ'ಗೆ ಬೆಂಬಲ ನೀಡುತ್ತಿರುವ 'ಗ್ರಾಂಟ್ ಥಾರ್ನ್ಟನ್ ಇಂಡಸ್ ಪ್ರೈವೇಟ್ ಲಿಮಿಟೆಡ್'ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ನಿರ್ದೇಶಕರಾದ ದೀಪಕ್ ದಾಸ್ ಪ್ರಶಸ್ತಿ ಸ್ವೀಕರಿಸಿದರು. ಅನ್ನಪೂರ್ಣ ಕೇಂದ್ರಗಳಿಗೆ ಬೆಂಬಲ ನೀಡುತ್ತಿರುವ 'ಒರಾಕಲ್ ಕಾರ್ಪೊರೇಷನ್'ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಉಪಾಧ್ಯಕ್ಷ ಸತ್ಯಾಲಂಕ ಅವರು ಪ್ರಶಸ್ತಿ ಸ್ವೀಕರಿಸಿದರು. ಹಾಂಕಾAಗ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಫ್ಲಿ ಫು ನಾ ನೇಯಿ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ' ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಮನಗರದ ಡಾ ದೈವಕುಮಾರ್ ಮತ್ತು ತುಮಕೂರಿನ ವೇದಾಂತ್ ಎಸ್ ತಮ್ಮ ಜೀವನದಲ್ಲಿನ ಪರಿವರ್ತನೆಯ ಪಯಣದ ಬಗ್ಗೆ ವಿವರಿಸಿದರು. ಹಾಂಕಾAಗ್ ಪ್ರತಿನಿಧಿ ಮುಕೇಶ್ ದಯಾರಾಮ್,ವಿಶಾಲ್ ದಾಸ್ವಾನಿ, ಚೀನಾ ಪ್ರತಿನಿಧಿ ಚೆನ್‌ಯಿವೆನ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.