ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್*

ಬೆಸ್ಕಾಂ ಎಸ್ಓ ಎಂಎನ್ ಕೋಟೆ ಜಯರಾಮ್ ಮಾತನಾಡಿ ಅಂಬೇಡ್ಕರ್ ಪಟ್ಟಂತ ಶ್ರಮ ಇವತ್ತು ದಲಿತರು ಸ್ವಾಭಿಮಾನಿಗಳಾಗಿ ಬದುಕಲು ದಾರಿದೀಪವಾಗಿದೆ. ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದರು. ಗ್ರಾಪಂ ಮಾಜಿ ಉಪಾಧ್ಯಕ್ಷ ದಿಲೀಪ್ ಮಾತನಾಡಿ ಎಲ್ಲಾ ವರ್ಗದ ಜನರಿಗೆ ಸಂವಿ ಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ಮಹಾನ್ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಎಂದು ತಿಳಿಸಿದರು.

ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ನಾಯಕ ಡಾ.ಅಂಬೇಡ್ಕರ್*

-

Profile
Ashok Nayak Apr 25, 2026 8:23 PM

ಗುಬ್ಬಿ : ತಾಲೂಕು ಎಂಎನ್ ಕೋಟೆ ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಬೆಸ್ಕಾಂ ಎಸ್ಓ ಎಂಎನ್ ಕೋಟೆ ಜಯರಾಮ್ ಮಾತನಾಡಿ ಅಂಬೇಡ್ಕರ್ ಪಟ್ಟಂತ ಶ್ರಮ ಇವತ್ತು ದಲಿತರು ಸ್ವಾಭಿಮಾನಿಗಳಾಗಿ ಬದುಕಲು ದಾರಿದೀಪವಾಗಿದೆ. ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದರು. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿಲೀಪ್ ಮಾತನಾಡಿ, ಎಲ್ಲಾ ವರ್ಗದ ಜನರಿಗೆ ಸಂವಿ ಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ಮಹಾನ್ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಎಂದು ತಿಳಿಸಿದರು. 

ಇದನ್ನೂ ಓದಿ: Gubbi News: ಅಂಬೇಡ್ಕರ್ ಜಯಂತೋತ್ಸವ ದೇಶಾದ್ಯಂತ ನಡೆಯುವ ದಲಿತರ ಹಬ್ಬ : ಗೂಳೂರು ಸಿದ್ದರಾಜು

ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ್  ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ದಲಿತ ಹೋರಾಟಗಾರ ಮಾದಣ್ಣ, ಗೋವಿಂದರಾಜು, ಬಸವರಾಜು, ಎಂ ಆರ್ ಕುಮಾರ್, ಶಿವಕುಮಾರ್, ಚನ್ನಬಸವರಾಜು, ಮಂಜುನಾಥ್, ಶಿವರಾಜು, ರಂಗನಾಥ ಸ್ವಾಮಿ, ನರಸಿಂಹಮೂರ್ತಿ, ಹರೀಶ್, ಶ್ರೀನಿವಾಸ್ ಸೇರಿದಂತೆ ಬಾಬೂಜಿ ಯುವಕ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.