ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ನಾಳೆ ಕಿಶನ್-ಪೂಜಾ ಎಂಗೇಜ್ಮೆಂಟ್: ಭಾಗ್ಯ ಮನೆಗೆ ಬಂದು ಸೀರೆ ಕೊಟ್ಟೋದ ಆದೀ-ಕನ್ನಿಕಾ

ರಾಮ್ದಾಸ್ ಮಾತನ್ನು ಮೀರಲು ಸಾಧ್ಯವಾಗದೆ ಒಲ್ಲದ ಮನಸ್ಸಿನಿಂದ ಆದೀ-ಕನ್ನಿಕಾ ಸೀರೆ ತೆಗೆದುಕೊಂಡು ಪೂಜಾಗೆ ಕೊಡಲು ಭಾಗ್ಯ ಮನೆಗೆ ತೆರಳಿದ್ದಾರೆ. ಇವರನ್ನು ಕಂಡು ಭಾಗ್ಯಾಗೆ ಶಾಕ್ ಆಗಿದ್ದು, ಸೀರೆ ತೆಗೊಂದು ಇವರು ಬಂದ್ರ ಎಂದು ಅಂದುಕೊಳ್ಳುತ್ತಾಳೆ. ಹಿಂದಿನ ಘಟನೆಯನ್ನೆಲ್ಲ ಮನದಲ್ಲಿ ಇಟ್ಟುಕೊಳ್ಳದೆ ಇಲ್ಲಿ ಭಾಗ್ಯ ಇವರಿಬ್ಬರನ್ನು ಚೆನ್ನಾಗಿಯೇ ವೆಲ್ಕಮ್ ಮಾಡುತ್ತಾಳೆ.

ಭಾಗ್ಯ ಮನೆಗೆ ಬಂದು ಸೀರೆ ಕೊಟ್ಟೋದ ಆದೀ-ಕನ್ನಿಕಾ

Bhagya Lakshmi Serial

Profile Vinay Bhat Jun 14, 2025 12:52 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi,) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆ ಮಾತುಕತೆಯ ಎಪಿಸೋಡ್ ಅದ್ಭುತವಾಗಿ ಮೂಡಿಬರುತ್ತಿದೆ. ಒಂದು ಕಡೆ ಈ ಮದುವೆ ಆಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆದೀಶ್ವರ್ ಹಾಗೂ ಕನ್ನಿಕಾ ಮುಂದಾಗಿದ್ದರೆ ಮತ್ತೊಂದೆಡೆ ರಾಮ್​ದಾಸ್ ಕಾಮತ್ ಈ ಮದುವೆಯನ್ನು ತಡೆಯು ಸಾಧ್ಯವಿಲ್ಲ ಎಂದು ಎಂಗೇಜ್ಮೆಂಟ್ ಮಾಡಲು ಹೊರಟಿದ್ದಾರೆ. ನಾಳೆಯ ಒಳ್ಳೆಯ ದಿನ ಎಂದು ಪೂಜಾ-ಕಿಶನ್ ನಿಶ್ಚಿತಾರ್ಥಕ್ಕೆ ತಯಾರಿ ಆರಂಭವಾಗಿದೆ. ವಿಶೇಷ ಎಂದರೆ ಪೂಜಾಗೆ ಉಡಲು ಎಂಗೇಜ್ಮೆಂಟ್ ಸಾರಿ ಕೊಟ್ಟು ಬನ್ನಿ ಎಂದು ರಾಮ್​ದಾಸ್ ಅವರು ಆದೀಶ್ವರ್ ಹಾಗೂ ಕನ್ನಿಕಾಳನ್ನು ಕಳುಹಿಸಿದ್ದಾರೆ.

ಈ ಮದುವೆ ನಿಲ್ಲಿಸಲು ಆದೀಶ್ವರ್ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಭಾಗ್ಯಾಗೆ ದುಡ್ಡಿನ ಆಸೆ ತೋರಿಸಿ ಮದುವೆ ಮುರಿಯಬಹುದು ಎಂಬ ಆದೀಶ್ವರ್​ನ ಪ್ಲ್ಯಾನ್ ಕಂಪ್ಲೀಟ್ ಫ್ಲಾಫ್ ಆಗಿದೆ. ಈ ದುಡ್ಡಲ್ಲಿ ನನ್ನ ಸ್ವಾಭಿಮಾನ ಕೊಂಡುಕೊಳ್ಳೋಕೆ ಆಗುತ್ತಾ?, ನಾವು ಮಿಡಲ್ ಕ್ಲಾಸ್ ಪೀಪಲ್ ಆಗಿರಬಹುದು.. ಕಷ್ಟ ಪಟ್ಟು ಕೆಲಸ ಮಾಡುತ್ತೇವೆ.. ನಮ್ಮನ್ನ ನಾವು ದುಡ್ಡಿಗೆ ಮಾರ್ಕೊಳ್ಳಲ್ಲ.. ನನ್ನಂತ ಎಷ್ಟೋ ಜನರನ್ನು ನೀವು ಲೈಫ್​ನಲ್ಲಿ ನೋಡಿರಬಹುದು ಆದರೆ, ನನ್ನನ್ನ ನೋಡಿರಲ್ಲ ಎಂದು ಆದೀಗೆ ಭಾಗ್ಯ ಖಡಕ್ ಆಗಿ ಹೇಳಿದ್ದಾಳೆ.

ರಾಮ್​ದಾಸ್ ಕೂಡ ಭಾಗ್ಯ ಖಂಡಿತಾ ಆ ಹಣ ತೆಗೆದುಕೊಳ್ಳಲ್ಲ. ಭಾಗ್ಯ ಎಲ್ಲರಂತಲ್ಲ ಶ್ರಮದ ಶ್ರೀಮಂತಿಕೆ ಇರುವವರ ಹತ್ರ ದುಡ್ಡಿನ ಶ್ರೀಮಂತಿಕೆ ಆಟ ಯಾವತ್ತೂ ನಡೆಯಲ್ಲ.. ನೀವು ತಪ್ಪು ತಿಳಿದುಕೊಂಡಿದ್ದೀರಿ ಅವಳ ಮೇಲೆ ಎಂದು ಹೇಳಿ ಹೋಗುತ್ತಾರೆ. ಆದರೆ, ಕನ್ನಿಕಾ ಆದೀ ಬಳಿ ಮತ್ತೊಂದೆ ಕಥೆ ಕಟ್ಟಿ ಭಾಗ್ಯ ನಮ್ಮ ಮನೆ ಆಸ್ತಿಗಾಗಿ ಇದೆಲ್ಲ ಮಾಡುತ್ತಿದ್ದಾಳೆ. ಈ ಮದುವೇ ಆಗಲೇ ಬಾರದಿ ಎಂದು ಹೇಳುತ್ತಾಳೆ.

ಇದರ ಮಧ್ಯೆ ರಾಮ್​ದಾಸ್ ಬಂದು ನಾಳೆಯೇ ಎಂಗೇಜ್ಮೆಂಟ್ ಎಂಬ ಶಾಕ್ ಕೊಡುತ್ತಾರೆ. ಪುರೋಹಿತರ ಬಳಿ ಮಾತನಾಡಿದ್ದೇನೆ. ನಾಳೆಯೇ ಒಳ್ಳೆಯ ದಿನ ಉಂಟಂತೆ.. ಹೀಗಾಗಿ ಆದಷ್ಟು ಬೇಡ ಮಾಡಿ ಮುಗಿಸೋಣ ಎಂದು ಹೇಳುತ್ತಾರೆ. ಪೂಜಾಗೆ ಎಂಗೇಜ್ಮೆಂಟ್​ಗೆ ಉಡಲು ಸೀರೆ ಕೊಡಬೇಕಲ್ಲ ಎಂದು ರಾಮ್​ದಾಸ್ ಅವರು ಆದೀ ಮತ್ತು ಕನ್ನಿಕಾಳನ್ನು ಕರೆದು.. ಇದರಲ್ಲಿ ಒಂದು ಒಳ್ಳೆಯ ಸೀರೆಯನ್ನು ಸೆಲೆಕ್ಟ್ ಮಾಡಿ ಭಾಗ್ಯ ಮನೆಗೆ ಕೊಟ್ಟು ಬನ್ನಿ ಎಂದು ಹೇಳುತ್ತಾರೆ.



ರಾಮ್​ದಾಸ್ ಮಾತನ್ನು ಮೀರಲು ಸಾಧ್ಯವಾಗದೆ ಒಲ್ಲದ ಮನಸ್ಸಿನಿಂದ ಆದೀ-ಕನ್ನಿಕಾ ಸೀರೆ ತೆಗೆದುಕೊಂಡು ಪೂಜಾಗೆ ಕೊಡಲು ಭಾಗ್ಯ ಮನೆಗೆ ತೆರಳಿದ್ದಾರೆ. ಇವರನ್ನು ಕಂಡು ಭಾಗ್ಯಾಗೆ ಶಾಕ್ ಆಗಿದ್ದು, ಸೀರೆ ತೆಗೊಂದು ಇವರು ಬಂದ್ರ ಎಂದು ಅಂದುಕೊಳ್ಳುತ್ತಾಳೆ. ಹಿಂದಿನ ಘಟನೆಯನ್ನೆಲ್ಲ ಮನದಲ್ಲಿ ಇಟ್ಟುಕೊಳ್ಳದೆ ಇಲ್ಲಿ ಭಾಗ್ಯ ಇವರಿಬ್ಬರನ್ನು ಚೆನ್ನಾಗಿಯೇ ವೆಲ್​ಕಮ್ ಮಾಡುತ್ತಾಳೆ. ತೆಗೋ ಪೂಜಾ ಇದು ನಮ್ಮ ಸಂಪ್ರದಾಯ.. ಅಪ್ಪ ಕೊಡೋಕೆ ಹೇಳಿದ್ದಾರೆ ಎಂದು ಆದೀಶ್ವರ್ ಪೂಜಾನ ಕೈಯಲ್ಲಿ ಸಾರಿ ಕೊಡುತ್ತಾನೆ.

ನಾವಿನ್ನು ಹೊರಡ್ತೀವಿ ಎಂದು ಇಬ್ಬರೂ ಎದ್ದು ಹೊರಹೋಗುತ್ತಾರೆ. ಆಗ ಭಾಗ್ಯ ಕೂಡ ಹೊರಬಂದಾಗ, ನೋಡಿ ನಾನೇ ಬಂದು ಸೀರೆ ಕೊಟ್ಟಿದ್ದೀನಿ ಅಂದ ಮಾತ್ರಕ್ಕೆ ಕಿಶನ್-ಪೂಜಾ ಮದುವೆಗೆ ನಾನು ಒಪ್ಪಿಗೆ ಸೂಚಿಸಿದ್ದೇನೆ ಅಂತ ಅರ್ಥ ಅಲ್ಲ ಎಂದು ಹೇಳುತ್ತಾನೆ. ಸದ್ಯ ಭಾಗ್ಯ ಮನಸ್ಸು ಚಂಚಲದಲ್ಲಿದೆ. ರಾಮ್​ದಾಸ್ ಹಾಗೂ ಕಿಶನ್​ಗೆ ಬಿಟ್ಟು ಮತ್ಯಾರಿಗೂ ಆ ಮನೆಯಲ್ಲಿ ಇರುವವರಿಗೆ ಈ ಮದುವೆ ಇಷ್ಟವಿಲ್ಲ. ಹೀಗಿದ್ದಾಗ ಭಾಗ್ಯ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ. ಎಂಗೇಜ್ಮೆಂಟ್ ಆಗುತ್ತಾ ಅಥವಾ ಇದನ್ನು ಸ್ವತಃ ಭಾಗ್ಯಾಳೇ ನಿಲ್ಲಿಸುತ್ತಾಳ ಎಂಬುದು ನೋಡಬೇಕಿದೆ.

Karna Serial: ಕರ್ಣ ಧಾರಾವಾಹಿಗೆ ಭವ್ಯಾ ಗೌಡ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?