Bhagya Lakshmi Serial: ಮುಖಾಮುಖಿಯಾದ ಭಾಗ್ಯ- ಆದೀಶ್ವರ್: ಮೊದಲ ಭೇಟಿಯಲ್ಲೇ ಗಲಾಟೆ
ಕುಸುಮಾ ಹಾಗೂ ಭಾಗ್ಯ ಕಾರಿನಲ್ಲಿ ಹೋಗುತ್ತಿರುವಾಗ ಸಿಗ್ನಲ್ನಲ್ಲಿ ಆದೀಶ್ವರ್ನ ಕಾರು ಭಾಗ್ಯ ಕಾರಿಗೆ ಒರೆಸಿಕೊಂಡು ಹೋಗಿದೆ. ಆದರೆ, ಈ ಸಂದರ್ಭ ಆದೀಶ್ವರ್ನ ಕಾರಿನಲ್ಲಿ ಆತ ಇರಲಿಲ್ಲ ಬಲದಾಗಿ ಡ್ರೈವರ್ ಚಲಾಯಿಸುತ್ತಿದ್ದ. ಭಾಗ್ಯ-ಕುಸುಮಾಳಿಂದ ಡ್ರೈವರ್ ತಪ್ಪಿಸಿಕೊಂಡು ಕಾರನ್ನು ಆದೀಶ್ವರ್ಗೆ ನೀಡಿದ್ದಾನೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ರೋಚಕಕತೆ ಸೃಷ್ಟಿಸುತ್ತಿದೆ. ಹೊಸದಾಗಿ ಸೃಷ್ಟಿಯಾಗಿರುವ ಆದೀಶ್ವರ್ ಕಾಮತ್ ಪಾತ್ರದಲ್ಲಿ ಹರೀಶ್ ರಾಜ್ ನಟಿಸುತ್ತಿದ್ದು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಕನ್ನಿಕಾ ಅವಮಾನ ಮಾಡಿದ ನಂತರ ಕಿಶನ್ ತಂದೆ ಭಾಗ್ಯ ಮನೆಗೆ ಬಂದು ಪೂಜಾನೇ ನಮ್ಮ ಮನೆಯ ಸೊಸೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಕನ್ನಿಕಾ ತನ್ನ ದೊಡ್ಡ ಅಣ್ಣ ಆದೀಶ್ವರ್ ಕಾಮತ್ ಅವರನ್ನು ವಿದೇಶದಿಂದ ಕರೆಸಿ ಈ ಮದುವೆ ಯಾವುದೇ ಕಾರಣಕ್ಕೂ ಆಗಲು ಬಿಡಬಾರದು ಎಂದು ಹೇಳಿದ್ದಾಳೆ. ಇದರ ಬೆನ್ನಲ್ಲೇ ಭಾಗ್ಯ ಹಾಗೂ ಆದೀಶ್ವರ್ ಅಚಾನಕ್ ಆಗಿ ಮುಖಾಮುಖಿ ಆಗಿದ್ದಾರೆ.
ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿ, ಭಾಗ್ಯ ಮನೆಯವರು ಮಾಡಿರುವ ಚೀಪ್ ಎಮೋಷನಲ್ ಟ್ರಿಕ್ಗೆ ಅಪ್ಪ ಬಿದ್ದುಬಿಟ್ಟಿದ್ದಾರೆ. ಎಲ್ಲಿ ನಮ್ಮ ಫ್ಯಾಮಿಲಿ ಒಡೆದೋಗುತ್ತೋ ಅನ್ನೋ ಭಯ ಆಗ್ತಿದೆ ನೀನು ಬಾ ಎಂದು ಆದೀಶ್ವರ್ನನ್ನು ಮನೆಗೆ ಕರೆಸಿದ್ದಾಳೆ. ಮನೆಗೆ ಬಂದ ಬಳಿಕ ಅಪ್ಪ ನಿಮ್ಮ ಜೊತೆ ಮಾತನಾಡ ಬೇಕು ಎಂದು ರೂಮ್ಗೆ ಕರೆದಿದ್ದಾನೆ. ಏನೋ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು ಅಂತ ಕರ್ಕೊಂಡು ಬಂದಿಯಲ್ಲ.. ಏನು? ಎಂದು ಕೇಳಿದ್ದಾರೆ. ಅದಕ್ಕೆ ಆದೀ, ನೀವು ಕಿಶನ್ ಮದುವೆ ವಿಚಾರವನ್ನು ಮಾತಡೋಕೆ ಶುರು ಮಾಡಿದ್ದೀರಿ ಅಂತ ನನ್ಗೆ ಗೊತ್ತಾಗಿದೆ. ನೀವು ಕಿಶನ್ ಮದುವೆನ ಯಾರದೋ ಜೊತೆ ಮಾಡೋಕೆ ಹೊರಟಿದ್ದೀರಿ ಅಲ್ವಾ.. ನಾನು ಅದನ್ನ ನಿಲ್ಲಿಸೋಕೆ ಬಂದಿದ್ದೀನಿ ಎಂದು ಆದೀ ಹೇಳಿದ್ದಾನೆ.
ಇದನ್ನು ಕೇಳಿ ರಾಮ್ದಾಸ್ ಕಾಮತ್ಗೆ ಶಾಕ್ ಆಗಿದೆ. ಈ ಮದುವೆಯಿಂದ ನಮ್ಮ ಮನೆಗೆ ಒಳ್ಳೆಯದಾಗಲ್ಲ ಎಂದು ಆದೀ ಹೇಳಿದ್ದಾನೆ. ಆದರೆ, ರಾಮ್ದಾಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಂಗೆ ಹಾಗೆ ಅನಿಸ್ತಿಲ್ಲ.. ಈ ಮದುವೆಯಿಂದ ನಮ್ಮ ಮನೆಗೆ ಒಳ್ಳೆಯದೇ ಆಗುತ್ತೆ ಎಂದು ಹೇಳಿ ಬಾಯಿಮುಚ್ಚಿಸಿದ್ದಾನೆ. ಈ ಮೂಲಕ ಕನ್ನಿಕಾಳ ಮದುವೆ ಮುರಿಯುವ ಪ್ಲ್ಯಾನ್ ಫೇಲ್ ಆದಂತಿದೆ.
ಇದಾದ ಬಳಿಕ ಕುಸುಮಾ ಹಾಗೂ ಭಾಗ್ಯ ಕಾರಿನಲ್ಲಿ ಹೋಗುತ್ತಿರುವಾಗ ಸಿಗ್ನಲ್ನಲ್ಲಿ ಆದೀಶ್ವರ್ನ ಕಾರು ಭಾಗ್ಯ ಕಾರಿಗೆ ಒರೆಸಿಕೊಂಡು ಹೋಗಿದೆ. ಆದರೆ, ಈ ಸಂದರ್ಭ ಆದೀಶ್ವರ್ನ ಕಾರಿನಲ್ಲಿ ಆತ ಇರಲಿಲ್ಲ ಬಲದಾಗಿ ಡ್ರೈವರ್ ಚಲಾಯಿಸುತ್ತಿದ್ದ. ಭಾಗ್ಯ-ಕುಸುಮಾಳಿಂದ ಡ್ರೈವರ್ ತಪ್ಪಿಸಿಕೊಂಡು ಕಾರನ್ನು ಆದೀಶ್ವರ್ಗೆ ನೀಡಿದ್ದಾನೆ. ಬಳಿಕ ಕಾರನ್ನು ಆದೀ ಡ್ರೈವ್ ಮಾಡಿಕೊಂಡು ಹೋಗುವಾಗ ಭಾಗ್ಯ-ಕುಸುಮಾಗೆ ಮತ್ತೆ ಅದೇ ಕಾರಿ ಕಾಣಿಸಿದೆ. ಭಾಗ್ಯ ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ಆದೀ ಜೊತೆ ಜಗಳವಾಡುತ್ತಾರೆ.
ಸದ್ಯ ಇಲ್ಲಿ ಭಾಗ್ಯ-ಕುಸುಮಾಗೆ ತಾವು ಜಗಳ ಆಡುತ್ತಿರುವುದು ಕಿಶನ್ನ ಅಣ್ಣನ ಜೊತೆ ಎಂಬುದು ತಿಳಿದಿಲ್ಲ.. ಅತ್ತ ಆದೀಗೂ ಗೊತ್ತಿಲ್ಲ. ಮೊದಲೇ ಭಾಗ್ಯ ಕುಟುಂಬದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದ ಆದೀ ಮುಂದೆ ಇವರ ಮನೆಯವಳೇ ನಮ್ಮ ಮನೆಗೆ ಸೊಸೆ ಆಗಿ ಬರುವವಳು ಎಂದು ಗೊತ್ತಾದಾಗ ಏನಾಗುತ್ತೆ?, ಅತ್ತ ಮದುವೆ ನಿಲ್ಲಿಸಲು ಕನ್ನಿಕಾಳ ಮುಂದಿನ ಪ್ಲ್ಯಾನ್ ಏನು ಎಂಬುದೆಲ್ಲ ನೋಡಬೇಕಿದೆ.
Seetha Rama: ಸೀತಾ ಕೈ ಸೇರಿತು ಮಹತ್ವದ ಸಾಕ್ಷಿ: ಬಯಲಾಯಿತು ಭಾರ್ಗವಿ ಆಟ