Bhagya Lakshmi Serial: ಕೋಪದಲ್ಲಿ ಅಮ್ಮನ ಮನೆಬಿಟ್ಟು ತಾಂಡವ್ ಮನೆಗೆ ಹೋದ ತನ್ವಿ
ರಾತ್ರಿ ಆಗುತ್ತ ಬಂದರೂ ತನ್ವಿ ಮನೆಗೆ ಬಂದಿಲ್ಲ.. ಭಾಗ್ಯ ಆಫೀಸ್ನಿಂದ ಬಂದೊಡನೆ ಈ ವಿಚಾರವನ್ನು ಮನೆಯವರು ಗಾಬರಿಯಲ್ಲಿ ಹೇಳಿದ್ದಾರೆ. ಅದಕ್ಕೆ ಭಾಗ್ಯ, ಅವಳು ಬರ್ತಾಳೆ.. ಕೋಪದಲ್ಲಿ ಯಾರದ್ದೊ ಫ್ರೆಂಡ್ ಮನೆಗೆ ಹೋಗಿರ್ತಾಳೆ, ಕೋಪ ತಣ್ಣಗಾದ ನಂತರ ಅವಳಾಗಿಯೇ ಬರ್ತಾಳೆ.. ನನ್ನ ಮಗಳ ಬಗ್ಗೆ ನನಗೆ ಗೊತ್ತು.. ನೀವು ಟೆನ್ಶನ್ ಮಾಡಬೇಡಿ ಎಂದಿದ್ದಾಳೆ.

Bhagya lakshmi serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ದೊಡ್ಡ ಹುದ್ದೆ ಸಿಕ್ಕಿರುವ ಜೊತೆಗೆ ಕುಟುಂಬದ ಕಲಹ ಕೂಡ ಹೆಚ್ಚಾಗುತ್ತಿದೆ. ಆಫೀಸ್ ಕೆಲಸದ ಮಧ್ಯೆ ಮನೆಯಲ್ಲಿ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರ ಪೆಟ್ಟು ತನ್ವಿ ಮೇಲೆ ಬಿದ್ದಿದೆ. ಭಾಗ್ಯಾಗೆ ತಿಳಿಯದಂತೆ ಮನೆಯೊಳಗೆ ಅನೇಕ ವಿಷಯಗಳು ನಡೆಯುತ್ತಿವೆ. ಇದೇ ಸಂದರ್ಭವನ್ನು ಶ್ರೇಷ್ಠಾ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದು, ಭಾಗ್ಯಾಳನ್ನು ಹೇಗಾದರು ಮಾಡಿ ಕುಗ್ಗಿಸಬೇಕೆಂದು ಒಂದರ ಹಿಂದೆ ಒಂದರಂತೆ ಬಾಣ ಬಿಡುತ್ತಿದ್ದಾಳೆ.
ಕೆಲ ದಿನಗಳ ಹಿಂದೆ ಭಾಗ್ಯ ಮಗಳು ತನ್ವಿ ಕ್ಲಾಸ್ಗೆ ಬಂಕ್ ಹಾಕಿದ ಕಾರಣ ಕಾಲೇಜ್ನಿಂದ ಸಸ್ಪೆಂಡ್ ಆಗಿದ್ದು, ಪೇರೆಂಟ್ಸ್ ಬರೋ ತನಕ ಕಾಲೇಜಿಗೆ ಬರಬಾರದು ಎಂದು ಪ್ರಿನ್ಸಿಪಾಲ್ ಹೇಳಿದ್ದರು. ಹೀಗಾಗಿ ತನ್ವಿ ಈ ವಿಚಾರ ಅಮ್ಮನ ಬಳಿ ಹೇಳದೆ ತಂದೆ ತಾಂಡವ್ನನ್ನು ಕರೆದುಕೊಂಡು ಹೋಗಿದ್ದಾಳೆ. ಆರಂಭದಲ್ಲಿ ಆತ ಕೂಡ ಒಪ್ಪದಿದ್ದಾಗ ಬಳಿಕ ಶ್ರೇಷ್ಠಾ ಮನವೊಲಿಸಿ ತಾಂಡವ್-ಶ್ರೇಷ್ಠಾ-ತನ್ವಿ ಮೂವರು ಕಾಲೇಜಿಗೆ ಹೋಗಿ ಎಲ್ಲ ಸರಿ ಮಾಡಿದ್ದರು.
ಆದರೆ, ಈ ಯಾವುದೇ ವಿಚಾರ ಭಾಗ್ಯಾಗೆ ತಿಳಿದಿರುವುದಿಲ್ಲ. ಭಾಗ್ಯಾಳಿಗೆ ಬುದ್ದಿ ಕಲಿಸಬೇಕೆಂದು ಶ್ರೇಷ್ಠಾ ತನ್ನ ಫ್ರೆಂಡ್ನ ಸಹಾಯದಿಂದ ಭಾಗ್ಯಾಗೆ ಕಾಲ್ ಮಾಡಿ, ನಿಮ್ಮ ಮಗಳು ತನ್ವಿ ಕಾಲೇಜ್ ಇಂದ ಸಸ್ಪೆಂಡ್ ಆಗಿರುವ ವಿಷಯ ನಿಮಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾನೆ. ಈ ಸುದ್ದಿ ಕೇಳಿ ಭಾಗ್ಯಾಗೆ ಶಾಕ್ ಆಗಿದೆ. ಮನೆಗೆ ಬಂದವಳೇ ತನ್ವಿಯನ್ನು ಕರೆದು, ನೀನು ಕಾಲೇಜ್ ಇಂದ ಸಸ್ಪೆಂಡ್ ಆಗಿದ್ಯಾ, ನಮಗೆ ಈ ವಿಷಯ ಹೇಳಲೇ ಇಲ್ಲ ಅಲ್ವಾ.. ನಿನ್ನೆ ಎಲ್ಲ ಕಾಲೇಜಿಗೆ ಹೋಗ್ತಾ ಇದ್ದೀಯ ಅಂತ ಹೇಳಿ ಎಲ್ಲಿಗೆ ಹೋಗ್ತಿದ್ದೆ?, ನಾಳೆ ನಾನು ಬರುತ್ತೇನೆ.. ಕಾಲೇಜಿಗೆ ಹೋಗಿ ಮಾತಾಡೋಣ ಎಂದು ಹೇಳಿದ್ದಾಳೆ.
ಆಗ ತನ್ವಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಜೊತೆಗೆ ಕಾಲೇಜಿಗೆ ಬರೋದು ಬೇಡ ಮೊನ್ನೆ ಪಪ್ಪಾ ಬಂದಿದ್ದಾರೆ ಎಂದಿದ್ದಾಳೆ. ಆಗ ಕುಸುಮಾ, ತಾಂಡವ್ ಇದಕ್ಕೆಲ್ಲ ಒಪ್ಪಲ್ಲ ನೀನು ಸುಳ್ಳು ಹೇಳಬೇಡ ಎಂದಿದ್ದಾರೆ. ಆಗ ತನ್ವಿ, ಮೊದಲಿಗೆ ಪಪ್ಪ ಒಪ್ಪಲಿಲ್ಲ.. ಬಳಿಕ ಶ್ರೇಷ್ಠಾ ಆಂಟಿ ಬಂದು ಪಪ್ಪಾನ ಕನ್ವೆನ್ಸ್ ಮಾಡಿದ್ರು.. ಅವರು ಇರಲಿಲ್ಲ ಅಂದ್ರೆ ನಾನು ಪುನಃ ಕಾಲೇಜು ಹೋಗೋ ಹಾಗೆ ಆಗುತ್ತಿರಲಿಲ್ಲ ಎಂದಿದ್ದಾಳೆ. ಇದು ಭಾಗ್ಯಾಗೆ ಸಿಟ್ಟು ತರಿಸಿದೆ. ಹಿಂದು-ಮುಂದು ನೋಡದೆ ತನ್ವಿಯ ಕೆನ್ನೆಗೆ ಭಾಗ್ಯ ಬಾರಿಸಿದ್ದಾಳೆ.
ಭಾಗ್ಯ ಹೊಡೆದಿರುವುದು ತನ್ವಿಗೆ ತುಂಬಾ ಸಿಟ್ಟು ತರಿಸಿದೆ. ಮರುದಿನ ಕಾಲೇಜ್ಗೆ ತೆರಳಿದರೂ ಕ್ಲಾಸ್ಗೆ ಹೋಗದೆ ಕ್ಯಾಂಪಸ್ನಲ್ಲಿ ಕುಳಿತಿರುತ್ತಾಳೆ. ಆಗ ಶ್ರೇಷ್ಠಾಳ ಕಾಲ್ ಬರುತ್ತದೆ. ಯಾಕೆ ತನ್ವಿ ನಿನ್ನ ವಾಯ್ಸ್ ಡಲ್ ಇದೆ ಎಂದು ಕೇಳುತ್ತಾಳೆ. ಹಾಗೇನಿಲ್ಲ ಸರಿಯಾಗೇ ಇದ್ದೀನಿ ಎಂದು ತನ್ವಿ ಹೇಳಿದರು.. ತನ್ನ ಮಾತಿನಿಂದ ಶ್ರೇಷ್ಠಾ ಆಕೆಯ ಬಾಯಿಯಿಂದ ನಿಜಬರುವಂತೆ ಮಾಡಿದ್ದಾಳೆ. ಈ ಸಂದರ್ಭ ತನ್ವಿ ಅಳುತ್ತ ಅಮ್ಮ ಹೊಡೆದಿರುವ ವಿಚಾರ ಹೇಳಿದ್ದಾಳೆ.
ಆಗ ಶ್ರೇಷ್ಠಾ ತನ್ವಿಯ ತಲೆಯಲ್ಲಿ ಭಾಗ್ಯ ಬಗ್ಗೆ ಇಲ್ಲಸಲ್ಲದ ಸುಳ್ಳು ತುಂಬಿದ್ದಾಳೆ. ಏನು ನಿನ್ಗೆ ಹೊಡೆದ್ಳ ಇಷ್ಟು ಸಿಲ್ಲಿ ವಿಷಯಕ್ಕೆ.. ಮಗು ನೀನು ನಿನ್ನ ಮೇಲೆ ಕೈ ಎತ್ತೊದಕ್ಕೆ ಹೇಗೆ ನಸ್ಸು ಬಂತು ಅವಳಿಗೆ.. ನಿನ್ನ ಕಾಲೇಜಿಗೆ ನಿನ್ನ ಪಪ್ಪಾನ ಕರ್ಕೊಂಡು ಹೋದ್ರೆ ತಪ್ಪೇನಿದೆ.. ನಿನ್ಗೆ ಮನೆಗೆ ಹೋಗೋಕೆ ಇಷ್ಟ ಇಲ್ಲ ಅಂದ್ರೆ ಹೇಳು.. ನಮ್ಮ ಮನೆಗೆ ಬಾ ಇದುಕೂಡ ನಿನ್ನ ಮನೆಯೇ ಎಂದು ಹೇಳಿದ್ದಾಳೆ. ಅಲ್ಲದೆ ನೀನು ನಿನ್ನ ಪಪ್ಪನ ಜೊತೆ ಟೈಮ್ ಸ್ಪೆಂಡ್ ಮಾಡು ಆಗ ಎಲ್ಲ ಸರಿ ಆಗುತ್ತೆ ನಿನ್ನ ಕರ್ಕೊಂಡು ಹೋಗೋಕೆ ನಾನು ಕಾಲೇಜ್ ಹತ್ರ ಬರ್ತೀನಿ ಈಗ ಎಂದಿದ್ದಾಳೆ.
ಅದರಂತೆ ಶ್ರೇಷ್ಠಾ ತಕ್ಷಣವೇ ತನ್ವಿ ಕಾಲೇಜ್ ಹತ್ರ ಬಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ತಾಂಡವ್ ಆಫೀಸ್ನಿಂದ ಮನೆಗೆ ಬಂದೊಡನೆ ತನ್ವಿಯನ್ನು ನೋಡಿ ಖುಷಿ ಪಟ್ಟು ತಬ್ಬಿಕೊಂಡಿದ್ದಾನೆ. ತನ್ವಿ ಕೂಡ ಅಳುತ್ತ ಹಗ್ ಮಾಡಿದ್ದಾಳೆ. ಯಾಕೆ ಅಳುತ್ತಿದ್ದೀಯಾ?, ಏನಾಯಿತು ಎಂದು ತಾಂಡವ್ ಕೇಳಿದಾಗ, ಈ ಭಾಗ್ಯ ಇದ್ದಾಳಲ್ಲ ಅವಳು ತನ್ವಿಗೆ ಸರಿಯಾಗಿ ಹೊಡೆದು ಕಳುಹಿಸಿದ್ದಾಳೆ ಎಂದು ಶ್ರೇಷ್ಠಾ ಹೇಳಿದ್ದಾಳೆ. ಇದನ್ನ ಕೇಳಿ ತಾಂಡವ್ಗೆ ಎಲ್ಲಿಲ್ಲದ ಕೋಪ ಬಂದಿದೆ.
BBK 12 Contestant: ಬಿಗ್ ಬಾಸ್ ಆರಂಭಕ್ಕೆ ಐದೇ ದಿನ ಬಾಕಿ: ಹೊರಬಿತ್ತು ಸ್ಪರ್ಧಿಗಳ ಹೊಸ ಪಟ್ಟಿ
ಮತ್ತೊಂದೆಡೆ ರಾತ್ರಿ ಆಗುತ್ತ ಬಂದರೂ ತನ್ವಿ ಮನೆಗೆ ಬಂದಿಲ್ಲ.. ಭಾಗ್ಯ ಆಫೀಸ್ನಿಂದ ಬಂದೊಡನೆ ಈ ವಿಚಾರವನ್ನು ಮನೆಯವರು ಗಾಬರಿಯಲ್ಲಿ ಹೇಳಿದ್ದಾರೆ. ಅದಕ್ಕೆ ಭಾಗ್ಯ, ಅವಳು ಬರ್ತಾಳೆ.. ಕೋಪದಲ್ಲಿ ಯಾರದ್ದೊ ಫ್ರೆಂಡ್ ಮನೆಗೆ ಹೋಗಿರ್ತಾಳೆ, ಕೋಪ ತಣ್ಣಗಾದ ನಂತರ ಅವಳಾಗಿಯೇ ಬರ್ತಾಳೆ.. ನನ್ನ ಮಗಳ ಬಗ್ಗೆ ನನಗೆ ಗೊತ್ತು.. ನೀವು ಟೆನ್ಶನ್ ಮಾಡಬೇಡಿ ಎಂದಿದ್ದಾಳೆ. ಸದ್ಯ ತನ್ವಿ ಶ್ರೇಷ್ಠಾ-ತಾಂಡವ್ ಮನೆಯಲ್ಲಿ ಇರುವ ವಿಚಾರ ಭಾಗ್ಯಾಗೆ ಗೊತ್ತಿಲ್ಲ.. ಗೊತ್ತಾದ್ರೆ ಏನು ಮಾಡುತ್ತಾಳೆ ಎಂಬುದು ನೋಡಬೇಕಿದೆ.. ಮತ್ತೊಂದೆಡೆ ತನ್ನ ಮಗಳ ಮೇಲೆ ಭಾಗ್ಯ ಹೊಡೆದಿದ್ದಕ್ಕೆ ತಾಂಡವ್ಗೆ ಕೋಪ ಬಂದಿದೆ.. ಇವನು ಏನು ಮಾಡುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.