ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Das: ಸೋಷಿಯಲ್ ಮೀಡಿಯಾಗೆ ದಿಢೀರ್ ಗುಡ್ ಬೈ ಹೇಳಿದ ದೀಪಿಕಾ ದಾಸ್: ಏನಾಯ್ತು?

ಇನ್ಸ್ಟಾಗ್ರಾಮ್ನಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿರುವ ದೀಪಿಕಾ ದಾಸ್ ಆಗಾಗ್ಗೆ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಆದರೀಗ ದೀಪಿಕಾ ದಿಢೀರ್ ಆಗಿ ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ದಾರೆ. ಈ ಕುರಿತು ಅವರೇ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾಗೆ ದಿಢೀರ್ ಗುಡ್ ಬೈ ಹೇಳಿದ ದೀಪಿಕಾ ದಾಸ್

Deepika Das

Profile Vinay Bhat May 28, 2025 4:08 PM

ಬಿಗ್ ಬಾಸ್ ಕನ್ನಡ ಸೀಸನ್ 7 ರ ಮೂಲಕ ಕನ್ನಡಿಗರ ಮನೆಮಾತಾದ ದೀಪಿಕಾ ದಾಸ್ (Deepika Das) ಇದೀಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ನಾಗಿಣಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿದ್ದ ದೀಪಿಕಾ ಬಳಿಕ ಬಿಗ್ ಬಾಸ್​ಗೆ ಕಾಲಿಟ್ಟರು. ಅಲ್ಲಿಂದ ಹೊರಬಂದ ಬಳಿಕ ಯಾವುದೇ ಧಾರಾವಾಹಿಯಲ್ಲಿ ಇವರು ನಟಿಸಿಲ್ಲ. ಬದಲಾಗಿ ಪಾರು ಪಾರ್ವತಿ ಎಂಬ ಸಿನಿಮಾ ಮಾಡಿದರು. ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿರುವ ನಟಿ ದೀಪಿಕಾರ ಮೊದಲ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತಾದರೂ, ಥಿಯೇಟರ್‌ನಲ್ಲಿ ಹೆಚ್ಚು ದಿನ ಇರಲಿಲ್ಲ.

ಈ ಸಿನಿಮಾ ಇತ್ತೀಚೆಗಷ್ಟೆ ಒಟಿಟಿಗೆ ಕೂಡ ಬಂದಿತ್ತು. ಆದರೆ, ಆ ಬಳಿಕ ಇವರು ಯಾವುದೇ ಸಿನಿಮಾ, ಧಾರಾವಾಹಿಯಲ್ಲಿ ನಟಿಸುವ ಬಗ್ಗೆ ಅಪ್ಡೇಟ್ ಇರಲಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿರುವ ಇವರು ಆಗಾಗ್ಗೆ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಆದರೀಗ ದೀಪಿಕಾ ದಿಢೀರ್ ಆಗಿ ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ದಾರೆ. ಈ ಕುರಿತು ಅವರೇ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

‘‘ನಾನು ಸ್ವಲ್ಪ ಸಮಯದವರೆಗೆ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಧನ್ಯವಾದಗಳು.’’ ಎಂದು ದೀಪಕಾ ದಾಸ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ಇದಕ್ಕಿದ್ದಂತೆ ನಟಿಗೆ ಏನಾಯಿತು?, ದಿಢೀರ್ ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಅವರಿಗೆ ತುಂಬಾನೇ ಟಾಕ್ಸಿಕ್ ಎನಿಸಿರಬಹುದು ಎಂದು ಹೇಳಲಾಗುತ್ತಿದೆ.

ಶೈನ್ ಶೆಟ್ಟಿ ಗೆದ್ದಿದ್ದ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ದೀಪಿಕಾ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ 9 ರಲ್ಲೂ ಭಾಗವಹಿಸಿದ್ದರು. 2 ಸೀಸನ್‌ನಲ್ಲೂ ಟಾಪ್ ಫೈನಲಿಸ್ಟ್ ಆಗಿದ್ದರು. ಆದರೆ, ಎರಡು ಬಾರಿಯೂ ಬಿಗ್ ಬಾಸ್ ಗೆಲುವಿನ ಪಟ್ಟ ಮಿಸ್ ಆಗಿತ್ತು. ಕನ್ನಡದ ಜೊತೆ ತಮಿಳಿನಲ್ಲೂ ದೀಪಿಕಾ ದಾಸ್‌ ನಟಿಸಿ ಬಂದಿದ್ದಾರೆ. ಆದರೆ ಕನ್ನಡ ಕಿರುತೆರೆ ಅವರಿಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದೆ.

ಅಂದಹಾಗೆ ಕಳೆದ ವರ್ಷ ಮಾರ್ಚ್ 1ರಂದು ಉದ್ಯಮಿ ದೀಪಕ್ ಜೊತೆ ದೀಪಿಕಾ ದಾಸ್ ಮದುವೆಯಾದರು. ಗುರುಹಿರಿಯರ ಒಪ್ಪಿಗೆ ಪಡೆದು ಪ್ರೀತಿಸಿದ ಹುಡುಗನ ಜೊತೆ ಗೋವಾದಲ್ಲಿ ನಟಿ ಹಸೆಮಣೆ ಏರಿದರು.

Bhagya Lakshmi Serial: ಸ್ಫೋಟಕ ತಿರುವು: ಆದೀಶ್ವರ್ ಕಾಮತ್ ಬಂದಿದ್ದು ಪೂಜಾ-ಕಿಶನ್ ಮದುವೆ ನಿಲ್ಲಿಸಲು