ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sarigamapa: ಸರಿಗಮಪ ವಿನ್ನರ್ ಶಿವಾನಿ ಸ್ವಾಮಿಗೆ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತೇ?

ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಇದೀಗ ವಿನ್ನರ್ ಶಿವಾನಿ ಸ್ವಾಮಿಗೆ ಹಲವು ಆಕರ್ಷಕ ಬಹುಮಾನ ಸಿಕ್ಕಿದೆ. ಮುಖ್ಯವಾಗಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಮತ್ತು ವೈಟ್ ಗೋಲ್ಡ್ ಕಡೆಯಿಂದ ಗಿಫ್ಟ್‌ ಹ್ಯಾಂಪರ್ ಸಿಕ್ಕಿದೆ.

ಸರಿಗಮಪ ವಿನ್ನರ್ ಶಿವಾನಿ ಸ್ವಾಮಿಗೆ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತೇ?

Shivani swami Winner

Profile Vinay Bhat Jun 9, 2025 7:10 AM

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ (Sa Ri Ga Ma Pa) 21ನೇ ಸೀಸನ್​ಗೆ ತೆರೆಬಿದ್ದಿದೆ. ಈ ಸೀಸನ್‌ನ ವಿನ್ನರ್‌ ಪಟ್ಟವು ಬೀದರ್‌ನ ಶಿವಾನಿ ಸ್ವಾಮಿಗೆ ಒಲಿದಿದೆ. ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಅಷ್ಟೇ ಅಲ್ಲದೇ ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್​ ಆಗಿದ್ದರು.

ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಇದೀಗ ವಿನ್ನರ್ ಶಿವಾನಿ ಸ್ವಾಮಿಗೆ ಹಲವು ಆಕರ್ಷಕ ಬಹುಮಾನ ಸಿಕ್ಕಿದೆ. ಮುಖ್ಯವಾಗಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಮತ್ತು ವೈಟ್ ಗೋಲ್ಡ್ ಕಡೆಯಿಂದ ಗಿಫ್ಟ್‌ ಹ್ಯಾಂಪರ್ ಸಿಕ್ಕಿದೆ. ಇದೆಲ್ಲದರ ಜೊತೆಗೆ ಬಹಳ ಮುಖ್ಯವಾದ ಸರಿಗಮಪ ವಿನ್ನಿಂಗ್ ಟ್ರೋಫಿಯನ್ನು ಶಿವಾನಿ ತಮ್ಮದಾಗಿಸಿಕೊಂಡಿದ್ದಾರೆ.

ಜೊತೆಗೆ ಪರ್ಫಾಮರ್ ಆಫ್ ದಿ ಸೀಸನ್ ಪ್ರಶಸ್ತಿಯು ಶಿವಾನಿ ಸ್ವಾಮಿಗೆ ಸಿಕ್ಕಿದೆ. ಅದಕ್ಕಾಗಿ ಅವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ನೀಡಲಾಗಿದೆ. ಸರಿಗಮಪ ಜೊತೆ ಮಾರುತಿ ಸುಜುಕಿ ಸಂಸ್ಥೆ ಅಸೋಸಿಯೆಟ್ ಆಗಿದೆ. ಹೀಗಾಗಿ ಕಂಪನಿಯ ಕಾರು ಶಿವಾನಿ ಅವರಿಗೆ ಸಿಕ್ಕಿದೆ. ಮೊದಲ ರನ್ನರ್ ಅಪ್ ಆಗಿರುವ ಉಡುಪಿಯ ಆರಾಧ್ಯ ರಾವ್‌ಗೆ 10 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ಮೈಸೂರಿನ ರಶ್ಮಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದು, ಅವರಿಗೆ 5 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.

OTT Malayalam Movies: ಈ ವಾರ ಒಟಿಟಿಗೆ ಬಂದಿವೆ ಒಂದಲ್ಲ.. ಎರಡಲ್ಲ 20ಕ್ಕೂ ಅಧಿಕ ಸಿನಿಮಾಗಳು

ಸರಿಗಮಪ ಸೀಸನ್‌ 21 ಕಾರ್ಯಕ್ರಮದಲ್ಲಿ ಟಾಪ್‌ 3 ಹಂತಕ್ಕೆ ಹೋದ ಮೂವರೂ.. ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಟಾಪ್‌ 3 ಹಂತಕ್ಕೆ ಬಂದವರು - ಶಿವಾನಿ ಸ್ವಾಮಿ, ರಶ್ಮಿ ಹಾಗೂ ಆರಾಧ್ಯ ರಾವ್‌. ಈ ಮೂವರ ಪೈಕಿ ಶಿವಾನಿ ಸ್ವಾಮಿ ವಿನ್ನರ್ ಆಗಿದ್ದು, ಆರಾಧ್ಯ ರಾವ್‌ ರನ್ನರ್‌ ಅಪ್‌ ಆಗಿದ್ದಾರೆ. ರಶ್ಮಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.

ಫಿನಾಲೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದರು. ಈ ಆರು ಮಂದಿಯಲ್ಲಿ ಶಿವಾನಿ ಅವರಿಗೆ ವಿನ್ನರ್​ ಪಟ್ಟ ಸಿಕ್ಕಿದೆ. ಕಳೆದ ವಾರ ನಡೆದ ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫೈನಲ್‌ಗೆ ನೇರಪ್ರವೇಶ ಪಡೆದಿದ್ದರು.