Puttakkana Makkalu: ಸಾವಿರ ಸಂಚಿಕೆ ಪೂರೈಸಿದ ಪ್ರಯುಕ್ತ ಪುಟ್ಟಕ್ಕನ ಮಕ್ಕಳು ತಂಡದಿಂದ ಭರ್ಜರಿ ಪಾರ್ಟಿ: ಉಮಾಶ್ರೀ ಸಖತ್ ಸ್ಟೆಪ್ಸ್
ಜನಪ್ರಿಯ ನಟಿ ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಧಾರಾವಾಹಿ ಇತ್ತೀಚೆಗಷ್ಟೆ ಬರೋಬ್ಬರಿ 1000 ಸಂಚಿಕೆ ಪೂರೈಸಿದ ದಾಖಲೆ ಬರೆದಿತ್ತು. ಇದೀಗ ಈ ಸಂಭ್ರಮದ ಬೆನ್ನಲ್ಲೇ ಧಾರಾವಾಹಿ ತಂಡ ಭರ್ಜರಿ ಪಾರ್ಟಿ ಮಾಡಿದೆ. ಎಲ್ಲರೂ ಬೊಂಬಾಟ್ ಆಗಿ ಸೆಲೆಬ್ರೇಷನ್ ಮಾಡಿದ್ದಾರೆ.

Puttakkana Makkalu Serial

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಸಾವಿರ ಸಂಚಿಕೆ ಪೂರೈಸಿದ ಬಳಿಕ ಪಿಕ್-ಟಪ್ ತೆಗೆದುಕೊಂಡಿದೆ. ಕೆಲ ಇಂಟ್ರೆಸ್ಟಿಂಗ್ ಎಪಿಸೋಡ್ಗಳು ಪ್ರಸಾರ ಕಾಣುತ್ತಿದೆ. ಜನಪ್ರಿಯ ನಟಿ ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಧಾರಾವಾಹಿ ಇತ್ತೀಚೆಗಷ್ಟೆ ಬರೋಬ್ಬರಿ 1000 ಸಂಚಿಕೆ ಪೂರೈಸಿದ ದಾಖಲೆ ಬರೆದಿತ್ತು. ಇದೀಗ ಈ ಸಂಭ್ರಮದ ಬೆನ್ನಲ್ಲೇ ಧಾರಾವಾಹಿ ತಂಡ ಭರ್ಜರಿ ಪಾರ್ಟಿ ಮಾಡಿದೆ. ಎಲ್ಲರೂ ಬೊಂಬಾಟ್ ಆಗಿ ಸೆಲೆಬ್ರೇಷನ್ ಮಾಡಿದ್ದಾರೆ.
ತಂದೆ ದೂರವಾಗಿ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದು. ತೆಲುಗಿನ ರಾಧಮ್ಮ ಕೂತುರು ಧಾರಾವಾಹಿ ರೀಮೆಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು ಕಥೆಯನ್ನು ಬೆಳೆಸಲಾಗಿತ್ತು. 2021, ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಒಂದು ಹಂತದ ವರೆಗೆ ಈ ಧಾರಾವಾಹಿ ನಂಬರ್ ಒನ್ ಪಟ್ಟದಲ್ಲಿತ್ತು. ಆದರೆ, ನಿರ್ದೇಶಕರ ಕೆಲವು ತೀರ್ಮಾನ ಧಾರಾವಾಹಿ ಹಳಿ ತಪ್ಪುವಂತೆ ಮಾಡಿತು. ಬಳಿಕ ಈಗ ಮತ್ತೆ ಧಾರಾವಾಹಿ ಕುತೂಹಲ ಮೂಡಿಸುತ್ತಿದೆ.
ಸಾವಿರ ಸಂಚಿಕೆ ಪೂರೈಸಿದ ಹಿನ್ನಲೆಯಲ್ಲಿ ಮಾಡಿದ ಪಾರ್ಟಿಯಲ್ಲಿ ಹಿರಿಯ ನಟಿ ಉಮಾಶ್ರೀ ಸೇರಿದಂತೆ ಪ್ರತಿಯೊಬ್ಬ ಕಲಾವಿದರಿಗೂ ನೆನಪಿನ ಕಾಣಿಕೆ ನೀಡಲಾಗಿದೆ. ಈ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಅವರು ಜನರ ಪ್ರೀತಿಗೆ ಭಾವುಕರಾಗಿದರು. ಸಾವಿರದ ಶರಣು ಹೇಳುತ್ತಾ ಕೇಕ್ ಕಟ್ ಮಾಡೋದರ ಮೂಲಕ ಸಿಹಿ-ಕಹಿ ಎಲ್ಲವನ್ನು ಸವಿದು ಮತ್ತಷ್ಟು ಮನರಂಜನೆಯ ಅನುಭವ ನೀಡೋ ಭರವಸೆ ನೀಡಿದೆ ತಂಡ. ಎಲ್ಲರನ್ನೂ ಗೌರವಿನಿದ ಬಳಿಕ ನಡೆದ ಪಾರ್ಟಿಯಲ್ಲಿ ಉಮಾಶ್ರೀ ಸಖತ್ ಸ್ಟೆಪ್ಸ್ ಕೂಡ ಹಾಕಿದರು. ಈಗಲೂ ದಾಖಲೆ ಇರುವುದು ಏನೆಂದರೆ, ಈ ಧಾರಾವಾಹಿ ಮೊದಲ ವಾರದ ರೇಟಿಂಗ್ ನಲ್ಲಿ 13.5 ಟಿ ವಿ ಆರ್ ಗಳಿಸಿ ಇಡೀ ಭಾರತದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ದಾಖಲೆ ಸೃಷ್ಟಿಸಿತು. (ವಿಡಿಯೋ ಕೃಪೆ: DV Dreams)
ಇತ್ತೀಚೆಗಷ್ಟೆ ನಿರ್ದೇಶಕರು ಧಾರಾವಾಹಿ ಮುಕ್ತಾಯ ಆಗುವುದಿಲ್ಲ ಎಂದು ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ‘‘ಪುಟ್ಟಕ್ಕನ ಮಕ್ಕಳು ಧಾರಾವಾಹಿ ಝೀ-5 ಮಾರ್ಕೆಟಿಂಗ್ನಲ್ಲಿ ಮುಂದಿದೆ. ಹಾಗಾಗಿ ಸದ್ಯಕ್ಕೆ ನಡೆದುಕೊಂಡು ಹೋಗುತ್ತಿದೆ. ಎಷ್ಟು ದಿನ ಮುಂದುವರೆಯುತ್ತದೆ ಎನ್ನುವುದು ವಾಹಿನಿಗೆ ಬಿಟ್ಟಿದ್ದು. ಇನ್ನು 150-200 ಎಪಿಸೋಡ್ ಮಾಡಲು ನಮಗೆ ವಾಹಿನಿಯಿಂದ ಆಶ್ವಾಸನೆ ಸಿಕ್ಕಿದೆ. ಮಾರ್ಕೆಟಿಂಗ್ ಲೀಡ್ ಇರುವಾಗ ವಾಹಿನಿ ಅದನ್ನು ಟಚ್ ಮಾಡುವುದಿಲ್ಲ’’ ಎಂದು ಆರೂರು ಜಗದೀಶ್ ಹೇಳಿದ್ದಾರೆ.
Bhagya Lakshmi Serial: ಭಾಗ್ಯ ಮೇಲೆ ಮತ್ತೊಂದು ಕಥೆ ಕಟ್ಟಿದ ಕನ್ನಿಕಾ: ನಂಬಿಯೇ ಬಿಟ್ಟ ಆದೀಶ್ವರ್