Ugramm Manju: ಬಿಗ್ ಬಾಸ್ನಿಂದ ಹೊರಬಂದ ಬಳಿಕ ನಡೆದ ಆ ಘಟನೆ ನೆನೆದು ಕಣ್ಣೀರಿಟ್ಟ ಉಗ್ರಂ ಮಂಜು
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಉಗ್ರಂ ಮಂಜು, ತಮ್ಮದೇ ಮ್ಯಾಜರಿಸಂ ಮೂಲಕ ಕರ್ನಾಟಕ ಜನತೆಗೆ ಇಷ್ಟವಾದವರು. ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಕೂಡ ಶುರುಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಭಿಮಾನಿಗಳ ಪ್ರೀತಿ. ಈಗ ಆ ಪ್ರೀತಿಯನ್ನು ನೆನೆದು ಮಂಜು ಅವರು ಕಣ್ಣೀರಿಟ್ಟಿದ್ದಾರೆ.

Ugramm Manju

ಬಿಗ್ ಬಾಸ್ಗೆ (Bigg Boss) ಹೋಗಿ ಬಂದ ಬಳಿಕ ಅದೆಷ್ಟೊ ಕಲಾವಿದರ ಬದುಕು ಬದಲಾಗಿದೆ. ಹಿಂದೆ ಮೂಲೆಗುಂಪಾಗಿದ್ದ ಕೆಲ ಕಲಾವಿದರು ಈ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಅವರ ಬದಕು ಬಂಗಾರವಾಗಿದೆ. ಈ ಸಾಲಿನಲ್ಲಿ ಇಂದು ನಮಗೆ ಮುಂಚೂಣಿಯಲ್ಲಿ ಕಾಣುತ್ತಿರುವ ವ್ಯಕ್ತಿ ಎಂದರೆ ಅದು ಉಗ್ರಂ ಮಂಜು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಮಂಜು, ತಮ್ಮದೇ ಮ್ಯಾಜರಿಸಂ ಮೂಲಕ ಕರ್ನಾಟಕ ಜನತೆಗೆ ಇಷ್ಟವಾದವರು.
ಬಿಗ್ ಬಾಸ್ ಬರುವುದಕ್ಕೂ ಮುನ್ನ ಲೈಫ್ ಅನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಬೇಕಾಬಿಟ್ಟಿ ಹಣ ಖರ್ಚು, ಕುಡಿತದ ಚಟಕ್ಕೆ ಒಳಗಾಗಿದ್ದರು. ಇದನ್ನು ಸ್ವತಃ ಅವರೇ ದೊಡ್ಮನೆಯೊಳಗೆ ಹೇಳಿದ್ದರು. ಆದರೀಗ ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಶುರುಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಭಿಮಾನಿಗಳ ಪ್ರೀತಿ. ಈಗ ಆ ಪ್ರೀತಿಯನ್ನು ನೆನೆದು ಮಂಜು ಅವರು ಕಣ್ಣೀರಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವಾಗ ಭಾವುಕರಾದ ಉಗ್ರಂ ಮಂಜು, ‘‘ಇತ್ತೀಚೆಗಷ್ಟೆ ಉಜಿರೆ ಬಳಿಯಿರುವ ರಾಮ ಮಂದಿರಕ್ಕೆ ಹೋದಾಗ, ಅಲ್ಲಿ ಸಿಕ್ಕಾಪಟ್ಟೆ ಬಿಸಿಲಿತ್ತು. ದೇವರ ದರ್ಶನ ಮುಗಿಸಿ ಗೇಟ್ ಬಳಿ ಹೋದಾಗ ಒಬ್ಬ ತಾಯಿ ಓಡಿ ಬಂದ್ರು. ಅವರಿಗೆ 48 ರಿಂದ 50 ವರ್ಷ ವಯಸ್ಸಾಗಿರಬಹುದು. ಅವರು ನನ್ನ ಬಳಿ ಬಂದು ನಿಮ್ಮನ್ನು ನೋಡೋಕೆ ಬಂದೆ ಎಂದು ಕಣ್ಣಲ್ಲಿ ನೀರಾಕಿದ್ರು. ನಮಗೋಸ್ಕರ ಒಬ್ಬ ತಾಯಿ ಆ ಉರಿಬಿಸಿಲಿನಲ್ಲಿ ಬರಿ ಕಾಲಿನಲ್ಲಿ ಅವರ ಗ್ರಂಧಿಗೆ ಅಂಗಡಿ ಬಿಟ್ಟು, ಓಡಿ ಬಂದು ನನ್ನ ಬಳಿ ಮಾತನಾಡಿದ್ದರು’’ ಎಂದು ಹೇಳಿದ್ದಾರೆ.
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಸ್ಟಾರ್ ನಟಿ: ಕಾರಣವೇನು?
‘‘ಈ ರೀತಿ ಸುಮಾರು ಅನುಭವಗಳು ಆಗಿವೆ. ಇನ್ಯಾರೋ ಹಿರಿಯರು ಬಂದು ಆಶೀರ್ವಾದ ಮಾಡ್ತಾರೆ. ಅಪ್ಪ-ಅಮ್ಮನನ್ನು ಕೇಳಿದೆ ಅಂತ ಹೇಳಿ ಅಂತಾರೆ. ಹೀಗೆ ಪ್ರತಿ ಸಲವೂ ಆಗುತ್ತಲೇ ಇರುತ್ತೆ. ಇದೆಲ್ಲಾ ನೋಡಿದಾಗ ಖುಷಿಯಾಗುತ್ತದೆ’’ ಎಂದು ಉಗ್ರಂ ಮಂಜು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾವುಕರಾಗಿದ್ದಾರೆ.
ಮಂಜು ಅವರಿಗೆ ಸದ್ಯ ಸಿನಿಮಾದಲ್ಲಿ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೆ ಜೊತೆಗೆ ಇನ್ನೂ ಎರಡು ಮೂರು ಸಿನಿಮಾಗಳಲ್ಲಿ ಮಂಜು ಮುಖ್ಯ ಪಾತ್ರ ಮಾಡುತ್ತಿದ್ದಾರೆಂಬ ಸುದ್ದಿ ಇದೆ.