ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Operation Sindoor
Spying for Pakistan: ಪಾಕಿಸ್ತಾನಕ್ಕೆ ಬೇಹುಗಾರಿಕೆ; ನೌಕಾಪಡೆ ಪ್ರಧಾನ ಕಚೇರಿ ಗುಮಾಸ್ತನ ಬಂಧನ

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನೌಕಾಪಡೆ ಕಚೇರಿ ಸಿಬ್ಬಂದಿಯ ಬಂಧನ

ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಗುಮಾಸ್ತನಾಗಿದ್ದ ವಿಶಾಲ್, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮತ್ತು ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆಯಲ್ಲಿಯೂ ಸಹ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

Operation Sindoor: ಭಾರತ-ಪಾಕ್ ನಡುವೆ ಡೊನಾಲ್ಡ್ ಟ್ರಂಪ್‌ ಮಧ್ಯಸ್ಥಿಕೆ ವಿಚಾರ; ಶಶಿ ತರೂರ್‌ ಖಡಕ್‌ ಪ್ರತಿಕ್ರಿಯೆ

ಭಾರತವು ಯಾರಿಂದಲೂ ಮಧ್ಯಸ್ಥಿಕೆಯನ್ನು ಕೋರಿಲ್ಲ: ಶಶಿ ತರೂರ್

ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರಲು ಹೊರಟಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ವಾಷಿಂಗ್ಟನ್ ಡಿಸಿಯಲ್ಲಿದ್ದು,ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಭಾರತ- ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ನಡೆಸಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆಯನ್ನು ತಿರಸ್ಕರಿಸಿರುವ ಅವರು ಭಾರತವು ತನ್ನ ಸಂಘರ್ಷದಲ್ಲಿ ಯಾರಿಂದಲೂ ಮಧ್ಯಸ್ಥಿಕೆಯನ್ನು ಕೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Operation Sindoor: ಆಪರೇಷನ್ ಸಿಂದೂರ್ ದಾಳಿಯಿಂದ ಪಾಕಿಸ್ತಾನದ ವೈಮಾನಿಕ, ಭೂ ಸೇನಾ ಸ್ವತ್ತುಗಳಿಗೆ ಅಪಾರ ಹಾನಿ

ಆಪರೇಷನ್ ಸಿಂದೂರ್: ಪಾಕಿಸ್ತಾನ ಸೇನೆಯ 9 ವಿಮಾನಗಳು ನಾಶ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಯುದ್ಧ ವಿಮಾನಗಳು ನಾಶವಾಗಿರುವುದು ಮಾತ್ರವಲ್ಲದೆ ಕಣ್ಗಾವಲು ವಿಮಾನ, ಸಶಸ್ತ್ರ ಡ್ರೋನ್‌ಗಳು, ಸಾರಿಗೆ ವಿಮಾನಗಳು ಸೇರಿದಂತೆ ಅಪಾರ ಪ್ರಮಾಣದ ವೈಮಾನಿಕ ಮತ್ತು ಭೂ ಸೇನಾ ಸ್ವತ್ತುಗಳಿಗೆ ಹಾನಿಯನ್ನುಂಟಾಗಿದೆ ಎಂದು ಮೂಲಗಳು ತಿಳಿಸಿವೆ.

Pakistan: ಪಾಕ್‌ ಕುತಂತ್ರಕ್ಕೆ ಮಲೇಷ್ಯಾದಿಂದ ತಕ್ಕ ಪಾಠ; ಮತ್ತೆ ತೀವ್ರ ಮುಖಭಂಗ

ಪಾಕ್‌ ಕುತಂತ್ರಕ್ಕೆ ಮಲೇಷ್ಯಾದಿಂದ ತಕ್ಕ ಪಾಠ; ಮತ್ತೆ ತೀವ್ರ ಮುಖಭಂಗ

Pak Islamic nations call ಭಾರತದ ನಿಯೋಗಕ್ಕೆ ಅಡ್ಡಿಯನ್ನುಂಟು ಮಾಡಲು ಮುಂದಾಗಿರುವ ಕುತಂತ್ರಿ ಪಾಕಿಸ್ತಾನ ʻಇಸ್ಲಾಂ ಧರ್ಮʼ ಎಂಬ ಟ್ರಂಪ್‌ ಕಾರ್ಡ್‌ ಪ್ಲೇ ಮಾಡಲು ಸಂಚು ರೂಪಿಸಿದೆ. ಇಸ್ಲಾಂ ರಾಷ್ಟ್ರಗಳು ಭಾರತದ ವಿರುದ್ಧ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದೆ. ಪಾಕಿಸ್ತಾನ ಭಾರತೀಯ ನಿಯೋಗದ ಮಲೇಷ್ಯಾ ಭೇಟಿಯನ್ನು ಹಳಿತಪ್ಪಿಸಲು ಪ್ರಯತ್ನಿಸಿತು. ಆದರೆ ಪಾಕಿಸ್ತಾನದ ಹಸ್ತಕ್ಷೇಪವನ್ನು ಮಲೇಷ್ಯಾ ತಿರಸ್ಕರಿಸಿದೆ.

Rahul Gandhi: ಆಪರೇಷನ್ ಸಿಂದೂರ್ ಕುರಿತ ರಾಹುಲ್ ಗಾಂಧಿಯ ‘ಶರಣಾಗತಿ’ ಟೀಕೆಗೆ ಬಿಜೆಪಿ ತಿರುಗೇಟು

ರಾಹುಲ್ ಗಾಂಧಿಯ ‘ಶರಣಾಗತಿ’ ಟೀಕೆಗೆ ಬಿಜೆಪಿ ತಿರುಗೇಟು

Operation Sindoor: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಶರಣಾಗತರಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಕ್‌ ಜತೆಗಿನ ಸಂಘರ್ಷಕ್ಕೆ ಅಂತ್ಯ ಹಾಡಿದರು ಎಂಬ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ರಾಹುಲ್ ಗಾಂಧಿಯನ್ನು “ಪ್ರಮಾದ” ಎಂದು ಕರೆದು ಎಕ್ಸ್‌ನಲ್ಲಿ ಟೀಕಿಸಿದ್ದಾರೆ.

ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿಯಾಗಿದೆ ಎಂದು ಒಪ್ಪಿಕೊಂಡ ಪಾಕ್; ಇನ್ನೂ 8 ಸ್ಥಳಗಳ ದಾಖಲೆ ಬಹಿರಂಗ

ಆಪರೇಷನ್ ಸಿಂದೂರ್‌ನಿಂದ ಹೆಚ್ಚಿನ ಹಾನಿಯಾಗಿದೆ ಎಂದ ಪಾಕ್

Operation Sindoor: ಭಾರತದ ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಈ ಹಿಂದೆ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯಾಗಿದೆ ಎಂದು ಆ ದೇಶದ ಗೌಪ್ಯ ದಾಖಲೆಯೊಂದು ಬಹಿರಂಗಪಡಿಸಿದೆ. ದಾಖಲೆಯ ಪ್ರಕಾರ, ಭಾರತದ ದಾಳಿಯಿಂದ ಕನಿಷ್ಠ 8 ಹೆಚ್ಚುವರಿ ಸ್ಥಳಗಳಿಗೆ ಹಾನಿಯಾಗಿದೆ.

Operation Sindoor: ಆಪರೇಷನ್ ಸಿಂದೂರ್‌ ವೇಳೆ ಪಾಕ್‌ ಐಎಸ್ಐಗೆ ರಹಸ್ಯ ಮಾಹಿತಿ ಸೋರಿಕೆ; ಪಂಜಾಬ್ ವ್ಯಕ್ತಿಯ ಬಂಧನ

ಪಾಕ್‌ ಐಎಸ್ಐಗೆ ಆಪರೇಷನ್ ಸಿಂದೂರ್ ಮಾಹಿತಿ ನೀಡಿದ ಪಂಜಾಬ್ ವ್ಯಕ್ತಿ ಅರೆಸ್ಟ್

ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ವೇಳೆ ಸೇನಾ ಚಲನವಲನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಪಂಜಾಬ್ ಪೊಲೀಸರು ಮಂಗಳವಾರ ತರ್ನ್‌ ತರನ್‌ನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಪಾಕಿಸ್ತಾನದ ಐಎಸ್‌ಐ ಜತೆ ಸಂಪರ್ಕದಲ್ಲಿದ್ದ ಮತ್ತು ರಹಸ್ಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.

Kanimozhi Karunanidhi: ಭಾರತದ ರಾಷ್ಟ್ರೀಯ ಭಾಷೆ ಯಾವುದು? ಈ ಪ್ರಶ್ನೆಗೆ ಸ್ಪೇನ್‌ನಲ್ಲಿರುವ ಕನಿಮೋಳಿ ಕೊಟ್ಟ ಉತ್ತರವೇನು ಗೊತ್ತೇ?

ಭಾರತದ ರಾಷ್ಟ್ರೀಯ ಭಾಷೆ ಪ್ರಶ್ನಿಗೆ ಕನಿಮೋಳಿ ಹೇಳಿದ್ದೇನು?

ಆಪರೇಷನ್ ಸಿಂದೂರ್ ಅನಂತರ ಭಾರತದ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಸ್ಪೇನ್‌ಗೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ Kanimozhi Karunanidhi) ಅವರಲ್ಲಿ ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಸಂಸದೆ ನೀಡಿರುವ ಉತ್ತರವು ಜಗತ್ತಿಗೆ ಒಂದು ಮಹತ್ವದ ಸಂದೇಶವಾಗಿದೆ

Bhagwant Mann: ಆಪರೇಷನ್‌ ಸಿಂದೂರ್‌ ಎಂದರೆ ʼಒನ್‌ ನೇಷನ್‌ ಒನ್‌ ಹಸ್ಬೆಂಡ್‌ʼ ಯೋಜನೆಯೇ? ನಾಲಿಗೆ ಹರಿಬಿಟ್ಟ ಪಂಜಾಬ್‌ ಸಿಎಂ ಭಗವಂತ್‌ ಮಾನ್‌

ಆಪರೇಷನ್‌ ಸಿಂದೂರ್‌ ಬಗ್ಗೆ ನಾಲಿಗೆ ಹರಿಬಿಟ್ಟ ಭಗವಂತ್‌ ಮಾನ್‌

Operation Sindoor: ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಬಗ್ಗೆ ವ್ಯಂಗ್ಯವಾಡಿದ ಪಂಜಾಬ್‌ ಮುಖ್ಯಮಂತ್ರಿ, ಭಗವಂತ್‌ ಮಾನ್‌ ವಿವಾದ ಮೈಮೇಲೆ ಎಳದುಕೊಂಡಿದ್ದಾರೆ. ʼʼಬಿಜೆಪಿ ಪ್ರತಿ ಮನೆಗೆ ಸಿಂದೂರವನ್ನು ಕಳುಹಿಸುತ್ತಿದೆಯಂತೆ. ನೀವು (ಮಹಿಳೆಯರು) ಸಿಂದೂರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಇಟ್ಟುಕೊಳ್ಳುತ್ತೀರಾ? ಇದು ʼಒಂದು ದೇಶ, ಒಬ್ಬ ಪತಿʼ ಯೋಜನೆಯೆ?ʼʼ ಎಂದು ಪ್ರಶ್ನಿಸಿದ್ದಾರೆ.

LeT Commander Saifullah Khalid: ಉಗ್ರರ ಪೋಷಕ ಪಾಕಿಸ್ತಾನದ ಮತ್ತೊಂದು ಕರಾಳ ಮುಖ  ರಿವೀಲ್‌!

ಉಗ್ರರ ಪೋಷಕ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ರಿವೀಲ್‌!

Pakistani Minister Backs LeT Commander:ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ನಾಯಕ ಹಾಗೂ ಪಹಲ್ಗಾಮ್‌ ದಾಳಿ ಹಿಂದಿನ ರವಾರಿ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಪರವಾಗಿ ಸ್ಥಳೀಯ ರಾಜಕೀಯ ಮುಖಂಡನೊಬ್ಬ ಬಹಿರಂಗವಾಗಿ ಬ್ಯಾಟಿಂಗ್‌ ನಡೆಸಿದ್ದಾರೆ.ಪಾಕಿಸ್ತಾನಿ ರಾಜಕಾರಣಿ ಮಲಿಕ್ ಅಹ್ಮದ್ ಖಾನ್ ಅವರನ್ನು ಬೆಂಬಲಿಸಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೈಫುಲ್ಲಾನನ್ನು ಸುಖಾ ಸುಮ್ಮನೆ ದೂಷಿಸಲಾಗಿದೆ ಎಂದು ಹೇಳಿದ್ದಾರೆ.

Javed Akhtar: ಕೆಲವರು ಹಣ, ಇನ್ನು ಕೆಲವರು ಹೆಸರು ಗಳಿಸುವಲ್ಲಿ ಬ್ಯುಸಿಯಾಗಿದ್ದಾರೆ; ಬಾಲಿವುಡ್‌ ಮಂದಿಗೆ ಟಾಂಗ್‌ ಕೊಟ್ಟ ಜಾವೇದ್ ಅಖ್ತರ್

ಆಪರೇಷನ್ ಸಿಂದೂರ್: ಬಾಲಿವುಡ್ ಮೌನದ ಬಗ್ಗೆ ಜಾವೇದ್ ಅಖ್ತರ್ ಹೇಳಿದ್ದೇನು?

ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ ಈ ಕುರಿತು ಬಾಲಿವುಡ್ ಸೆಲೆಬ್ರಿಟಿಗಳು ಮೌನವಹಿಸಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಟೀಕಿಸಿತು. ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಬಾಲಿವುಡ್ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar), ವಿಮರ್ಶಕರಿಗೆ ತಿರುಗೇಟು ನೀಡಿ ಕೆಲವರು ಹಣ, ಇನ್ನು ಕೆಲವರು ಹೆಸರು ಗಳಿಸುವಲ್ಲಿ ಬ್ಯುಸಿಯಾಗಿದ್ದಾರೆ.. ಅವರನ್ನು ಬಿಟ್ಟುಬಿಡಿ ಎಂದರು.

ಆಪರೇಷನ್‌ ಸಿಂದೂರ್‌ ಬಗ್ಗೆ ಯುಟರ್ನ್‌ ಹೊಡೆದ ಕೊಲಂಬಿಯಾ; ಪಾಕ್‌ ಪರ ಹೇಳಿಕೆ ವಾಪಸ್‌

ಪಾಕ್‌ ಪರ ಹೇಳಿಕೆ ವಾಪಸ್‌ ಪಡೆಯಲಿದೆ ಕೊಲಂಬಿಯಾ

ಭಾರತವು ಆಪರೇಷನ್ ಸಿಂದೂರ್‌ ಆರಂಭಿಸಿದ ಬಳಿಕ ಪಾಕಿಸ್ತಾನದಲ್ಲಿ ನಡೆದ ಸಾವುಗಳಿಗೆ ಸಂತಾಪ ಸೂಚಿಸಿದ್ದ ಕೊಲಂಬಿಯಾ ಈಗ ಭಾರತದ ಭಯೋತ್ಪಾದನಾ ವಿರೋಧಿ ನಿಲುವಿಗೆ ಬೆಂಬಲ ಸೂಚಿಸಿದೆ. ಈ ಕುರಿತಾದ ಹೇಳಿಕೆಯನ್ನು ಶೀಘ್ರದಲ್ಲೇ ಹೊರಡಿಸಲಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷೀಯ ತಂಡದ ಕೊಲಂಬಿಯಾ ಭೇಟಿಯ ನಂತರ ಈ ಬದಲಾವಣೆ ಕಂಡುಬಂದಿದೆ.

Operation Sindoor: ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ಸಹಾಯ ಮಾಡಿದ್ನಂತೆ ಈ ಪುಟ್ಟ ಬಾಲಕ!

ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ಪುಟ್ಟ ಬಾಲಕನಿಂದ ಸಹಾಯ

ಆಪರೇಷನ್ ಸಿಂದೂರ್ ಸಮಯದಲ್ಲಿ 10 ವರ್ಷದ ಶ್ರವಣ್ ಸಿಂಗ್ ತನ್ನ ಹೊಲದಲ್ಲಿ ಬೀಡು ಬಿಟ್ಟಿದ್ದ ಭಾರತೀಯ ಸೇನೆಗೆ ಹಾಲು, ಲಸ್ಸಿ, ನೀರು ಮತ್ತು ಐಸ್ ನೀಡಿದ್ದಾನೆ. ಆತನ ದೇಶಭಕ್ತಿಗೆ ಮೆಚ್ಚಿ ಭಾರತೀಯ ಸೇನೆ ‘ಸಿವಿಲ್ ವಾರಿಯರ್’ ಅನ್ನು ಗೌರವಿಸುವ ಸಮಾರಂಭದಲ್ಲಿ ಅವನಿಗೆ ಉಡುಗೊರೆಯಾಗಿ ಸ್ಮರಣಿಕೆಯನ್ನು ನೀಡಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ‌ ವೈರಲ್(Viral News) ಆಗಿ ನೆಟ್ಟಿಗರಿಂದ ಮೆಚ್ಚುಗೆ ಗಳಿಸಿದೆ.

Narendra Modi: ಈ ಬಾರಿ ಕ್ಯಾಮೆರಾದಲ್ಲಿ ಎಲ್ಲವೂ ಸೆರೆಯಾಗಿದೆ; ಪಾಕ್‌ ಮೇಲಿನ ದಾಳಿಯ ಕುರಿತು ಸಾಕ್ಷಿ ಕೇಳಿದ್ದ ವಿಪಕ್ಷಗಳಿಗೆ ತಿವಿದ ಮೋದಿ

ಸಾಕ್ಷಿ ಇದೆ; ಪುರಾವೆ ಕೇಳಿದ್ದ ವಿಪಕ್ಷಗಳಿಗೆ ತಿವಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಪ್ರವಾಸದಲ್ಲಿದ್ದಾರೆ. ಅವರು ಇಂದು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ 5,536 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು. ಈ ಸಮಯದಲ್ಲಿ ಅವರು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

Operation Sindoor: "ನಮ್ಮ ದಾಳಿಗೆ ಪಾಕ್‌ ರೇಂಜರ್‌ಗಳು ಓಡಿ ಹೋದರು"; ಆಪರೇಷನ್‌ ಸಿಂದೂರದ ಹೊಸ ವಿಡಿಯೋ ಹಂಚಿಕೊಂಡ BSF

ಆಪರೇಷನ್‌ ಸಿಂದೂರದ ಹೊಸ ವಿಡಿಯೋ ಹಂಚಿಕೊಂಡ BSF

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಕುರಿತು ಸೇನೆ ಹಲವು ವಿಡಿಯೋಗಳನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಪಾಕಿಸ್ತಾನದ ರೇಂಜರ್‌ಗಳು ಓಡಿ ಹೋಗಿರುವುದು ಕಂಡು ಬಂದಿದೆ.

Operation Sindoor logo: ಆಪರೇಷನ್‌ ಸಿಂದೂರ್‌ ಲೋಗೋ ಡಿಸೈನ್‌ ಮಾಡಿದ್ದು ಯಾರು? ಇಲ್ಲಿದೆ ಡಿಟೇಲ್ಸ್‌

ಆಪರೇಷನ್‌ ಸಿಂದೂರ್‌ ಲೋಗೋ ಡಿಸೈನ್‌ ಮಾಡಿದ್ದು ಯಾರು?

Operation Sindoor:ಉಗ್ರರ ವಿರುದ್ಧ ದಾಳಿ ಆರಂಭಿಸುತ್ತಿದ್ದಂತೆ ಆಪರೇಷನ್‌ ಸಿಂದೂರ್‌ನ ಲೋಗೋ ಅನಾವರಣಗೊಂಡಿತ್ತು. ಇದು ದೇಶಕ್ಕಾದ ನಷ್ಟ ಮತ್ತು ನ್ಯಾಯಕ್ಕಾಗಿ ಭುಗಿಲೆದ್ದ ಆಕ್ರೋಶವನ್ನು ಪ್ರತಿನಿಧಿಸುವಂತಿದೆ. ಇನ್ನು ಈ ಲೋಗೋವನ್ನು ಈ ಲೋಗೋವನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹರ್ಷ್ ಗುಪ್ತಾ ಮತ್ತು ಹವಾಲ್ದಾರ್ ಸುರಿಂದರ್ ಸಿಂಗ್ ರಚಿಸಿದ್ದಾರೆ.

Pakistan's Nur Khan Airbase: ಭಾರತದ ದಾಳಿಯಿಂದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಭಾರೀ ಹಾನಿ; ದಾಳಿಯ ಚಿತ್ರಗಳು ವೈರಲ್

ಚೂರು-ಚೂರಾದ ನೂರ್ ಖಾನ್ ಏರ್‌ಬೇಸ್‌; ಇಲ್ಲಿದೆ ಫೋಟೋಸ್

Pakistan's Nur Khan Airbase: ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತದ ಆಪರೇಷನ್ ಸಿಂಧೂರ್ ದಾಳಿಯಿಂದಾಗಿ ಈ ಹಿಂದೆ ಅಂದಾಜಿಸಿದ್ದಕ್ಕಿಂತ ದೊಡ್ಡ ಪ್ರಮಾಣದ ಹಾನಿಯಾಗಿರುವುದು ಇತ್ತೀಚಿನ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. ಭಾರತದ ದಾಳಿ ನಡೆಸಿದ ಸ್ಥಳದ ಸಮೀಪ ಸಂಕೀರ್ಣವೇ ಸಂಪೂರ್ಣವಾಗಿ ಧ್ವಂಸಗೊಂಡಿರುವುದು ಬೆಳಕಿಗೆ ಬಂದಿದೆ ಎಂದು ದಿ ಇಂಟೆಲ್ ಲ್ಯಾಬ್ ಬಿಡುಗಡೆ ಮಾಡಿರುವ ಚಿತ್ರಗಳಿಂದ ತಿಳಿದುಬಂದಿದೆ

Indus Waters Treaty: ಸಿಂಧೂ ನದಿ ಒಪ್ಪಂದದ ಬಗ್ಗೆ ಚರ್ಚೆ- ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿದೆಯಾ ಜಲಯುದ್ಧ?

ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿದೆಯಾ ಜಲಯುದ್ಧ?

India-Pak Tensions: ಪಾಕಿಸ್ತಾನಕ್ಕೆ ಭಾರತದ ಹಕ್ಕಿನ ನೀರು ಸಿಗುವುದಿಲ್ಲ, ಭಾರತೀಯರ ರಕ್ತದೊಂದಿಗೆ ಆಟವಾಡುವುದು ಇನ್ನು ಪಾಕಿಸ್ತಾನಕ್ಕೆ ದುಬಾರಿಯಾಗಲಿದೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ಬಿಕಾನೆರ್‌ನಲ್ಲಿ ಘೋಷಿಸಿದ್ದಾರೆ. ಸಿಂಧೂ ನದಿ ಒಪ್ಪಂದವನ್ನುಸ್ಥಗಿತಗೊಳಿಸಿರುವುದಾಗಿ ಸ್ಪಷ್ಟಪಡಿಸಿದ ಅವರು, ಆಪರೇಷನ್ ಸಿಂಧೂರ್ ಇನ್ನೂ ಕೊನೆಗೊಂಡಿಲ್ಲ, ಕೇವಲ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದಿದ್ದಾರೆ.

PM Narendra Modi: ಆಪರೇಷನ್‌ ಸಿಂದೂರ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ; ಬಿಜೆಪಿ ನಾಯಕರಿಗೆ ಮೋದಿ ಖಡಕ್‌ ವಾರ್ನಿಂಗ್‌

ಆಪರೇಷನ್‌ ಸಿಂದೂರ್‌; ಬಿಜೆಪಿ ನಾಯಕರಿಗೆ ಮೋದಿ ಖಡಕ್‌ ವಾರ್ನಿಂಗ್‌

Operation Sindoor:ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂಧೂರ್ ಕುರಿತು ಕೆಲವು ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿವೆ, ಇದರಿಂದಾಗಿ ಪಕ್ಷವು ಮುಜುಗರಕ್ಕೀಡಾಗಿದೆ. ಹೀಗಾಗಿ ತಮ್ಮ ಪಕ್ಷದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

Pakistani Intruder: ಗಡಿ ದಾಟಿ ಒಳ ಬರುತ್ತಿದ್ದ ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್‌

ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್‌

ಶುಕ್ರವಾರ (ಮೇ 23) ರಾತ್ರಿ ಗಡಿ ಭದ್ರತಾ ಪಡೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಪ್ರಜೆಯನ್ನ ಹೊಡೆದುರುಳಿಸಿದೆ. ಆಪರೇಷನ್‌ ಸಿಂದೂರ್‌ ಬಳಿಕ ಪಾಕಿಸ್ತಾನ ದಾಳಿ ನಡೆಸಿದ್ದು, ಭಾರತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

Airspace banned: ಜೂನ್.23ರವರೆಗೆ ಪಾಕ್ ವಿಮಾನಗಳಿಗೆ, ಫೈಟರ್‌ ಜೆಟ್‌ಗಳಿಗೆ ಭಾರತದ ವಾಯುಮಾರ್ಗ ಬಂದ್

ಪಾಕ್ ವಿಮಾನಗಳಿಗೆ ವಾಯುಪ್ರದೇಶ ಬಂದ್‌ ಮತ್ತೆ ವಿಸ್ತರಣೆ

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ಭಾರತವು ಶುಕ್ರವಾರ ಪಾಕಿಸ್ತಾನದ ವಿಮಾನಗಳ ಮೇಲಿನ ವಾಯುಪ್ರದೇಶ ನಿಷೇಧವನ್ನು ಒಂದು ತಿಂಗಳವರೆಗೆ, ಅಂದರೆ ಜೂನ್ 23, 2025 ರವರೆಗೆ ವಿಸ್ತರಿಸಿದೆ.

Pahalgam Terror attack: ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕಿದೆ ಎಂದ ಜರ್ಮನಿ

ಭಯೋತ್ಪಾದನೆ ವಿರೋಧಿ ಭಾರತದ ನಿಲುವಿಗೆ ಜರ್ಮನಿ ಬೆಂಬಲ

ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಜರ್ಮನ್ ವಿದೇಶಾಂಗ ಸಚಿವ (German Foreign Minister) ಜೋಹಾನ್ ವಾಡೆಫುಲ್ ( Johann Wadephul), ಭಯೋತ್ಪಾದನೆಯ ವಿರುದ್ಧ ಸಮರವನ್ನು ಮುಂದುವರಿಸಿರುವ ಭಾರತವನ್ನು ಜರ್ಮನಿ (germany) ಬೆಂಬಲಿಸಿದೆ. ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಎಂದು ಹೇಳಿದ್ದಾರೆ.

PM Narendra Modi: ಹೇ..ನರೇಂದರ್‌! ಪ್ರಧಾನಿ ಮೋದಿಗೆ ಇಂದಿರಾ ಗಾಂಧಿ ಬೋಧನೆ-ಏನಿದು ವೈರಲ್‌ ವಿಡಿಯೊ?

ಮೋದಿಗೆ ಇಂದಿರಾ ಗಾಂಧಿ ಬೋಧನೆ- ಇಲ್ಲಿದೆ ವಿಡಿಯೊ

India Gandhi Teaches Modi: ಇಷ್ಟು ದಿನ ಇದು ಪ್ರಧಾನಿ ಮೋದಿಯನ್ನು ಒಂದಿಲ್ಲೊಂದು ಹೇಳಿಕೆ ಮೂಲಕ ಟೀಕಿಸುತ್ತಿದ್ದ ಕಾಂಗ್ರೆಸ್‌ ಇದೀಗ ವಿಡಿಯೊವೊಂದನ್ನು ಹರಿ ಬಿಟ್ಟು ಪರೋಕ್ಷವಾಗಿ ಕುಟುಕಿದೆ. ಗ್ರಾಫಿಕ್‌ ಮೂಲಕ ಕ್ರಿಯೇಟ್‌ ಮಾಡಿರುವ ಈ ವಿಡಿಯೊದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೋದಿಗೆ ನೀತಿ ಪಾಠ ಹೇಳುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

Terrorists infiltration: ಸ್ಫೋಟಕ ಸಂಗತಿ ಬಯಲು!ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ

ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮೇ 8 ರಂದು ಸುಮಾರು 45 ರಿಂದ 50 ಭಯೋತ್ಪಾದಕರ ತಂಡ ಒಳನುಸುಳಲು ಪ್ರಯತ್ನಿಸಿದೆ. ಇದನ್ನು ಪಾಕಿಸ್ತಾನ ಬೆಂಬಲಿಸಿದ್ದು, ಗಡಿಯಾಚೆಗಿನ ಶೆಲ್ ದಾಳಿ ಎನ್ನಲಾಗಿದೆ. ಆದರೆ ಈ ಪ್ರಯತ್ನವನ್ನು ಗಡಿ ಭದ್ರತಾ ಪಡೆ (Border Security Force ) ಯಶಸ್ವಿಯಾಗಿ ತಡೆದಿದೆ.