Hanuman Chalisa: ಯುಕೆ ಸಂಸತ್ನಲ್ಲಿ ಹನುಮಾನ್ ಚಾಲೀಸಾ ಪಠಣೆ- ಐತಿಹಾಸಿಕ ಕ್ಷಣಕ್ಕೆ ಧೀರೇಂದ್ರ ಶಾಸ್ತ್ರಿ ಸಾಕ್ಷಿ
ಯುಕೆ ಸಂಸತ್ನ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತದ ಪವಿತ್ರ ಗ್ರಂಥವಾದ ಹನುಮಾನ್ ಚಾಲೀಸಾವನ್ನು ಸಂಸತ್ ಭವನದಲ್ಲಿ ಪಠಿಸಲಾಗಿದೆ. ಬಾಗೇಶ್ವರ್ ಧಾಮ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಬಾಗೇಶ್ವರ್ ಧಾಮ್ ಬಾಬಾ ಎಂದು ಕರೆಯಲ್ಪಡುವ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಸಮ್ಮುಖದಲ್ಲಿ, ಹಲವಾರು ಅಧಿಕಾರಿಗಳು ಮತ್ತು ಸಂಸತ್ ಸದಸ್ಯರು ಭಕ್ತಿಯಿಂದ ಚಾಲೀಸಾವನ್ನು ಪಠಿಸುತ್ತಿರುವುದು ಕಂಡುಬಂದಿದೆ.

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ

ಲಂಡನ್: ಯುಕೆ ಸಂಸತ್ನ (UK Parliament) ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತದ ಪವಿತ್ರ ಗ್ರಂಥವಾದ ಹನುಮಾನ್ ಚಾಲೀಸಾವನ್ನು (Hanuman Chalisa) ಸಂಸತ್ ಭವನದಲ್ಲಿ ಪಠಿಸಲಾಗಿದೆ. ಬಾಗೇಶ್ವರ್ ಧಾಮ್ನ (Bageshwar Dham) ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಬಾಗೇಶ್ವರ್ ಧಾಮ್ ಬಾಬಾ ಎಂದು ಕರೆಯಲ್ಪಡುವ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Krishna Shastri) ಸಮ್ಮುಖದಲ್ಲಿ, ಹಲವಾರು ಅಧಿಕಾರಿಗಳು ಮತ್ತು ಸಂಸತ್ ಸದಸ್ಯರು ಭಕ್ತಿಯಿಂದ ಚಾಲೀಸಾವನ್ನು ಪಠಿಸುತ್ತಿರುವುದು ಕಂಡುಬಂದಿದೆ.
“ಲಂಡನ್ ಸಂಸತ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಗೌರವಾನ್ವಿತ ಸರ್ಕಾರದಿಂದ ಶ್ರೀ ಹನುಮಾನ್ ಚಾಲೀಸಾ ಪಠಿಸಲಾಗಿದೆ. ಸಂಸತ್ನಲ್ಲಿ ಉಪಸ್ಥಿತರಿದ್ದ ಎಲ್ಲ ಅತಿಥಿಗಳು ಭಕ್ತಿಯಿಂದ ಪಾಲ್ಗೊಂಡರು” ಎಂದು ಬಾಗೇಶ್ವರ್ ಧಾಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
लंदन के संसद के इतिहास में पहली बार… श्री हनुमान चालीसा पाठ पूज्य सरकार द्वारा..संसद में आए सभी अतिथियों ने मनोभाव से किया पाठ… #bageshwardhamsarkar #london #hanumanchalisa #parliament #bageshwardhamlondon #bageshwardham #acharyadhirendrakrishnashastri pic.twitter.com/yI8Ov4ga1D
— Bageshwar Dham Sarkar (Official) (@bageshwardham) July 16, 2025
ಭಾರತೀಯ ಧಾರ್ಮಿಕ ಗ್ರಂಥವೊಂದು ಬ್ರಿಟಿಷ್ ಸಂಸತ್ನಲ್ಲಿ ಪಠಿಸಲ್ಪಟ್ಟಿರುವುದು ಇದೇ ಮೊದಲ ಸಂದರ್ಭ. ಈ ವರ್ಷದ ಏಪ್ರಿಲ್ನಲ್ಲಿ, ಜಮ್ಮು ಕಾಶ್ಮೀರದ ಪಾಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಭಾರತೀಯ ಮತ್ತು ಪಾಕಿಸ್ತಾನಿ ವಲಸಿಗರ ನಡುವಿನ ಪ್ರತಿಭಟನೆಯ ವೇಳೆ ಭಾರತೀಯ ವಲಸಿಗರು ಪಾಕಿಸ್ತಾನ ಹೈಕಮಿಷನ್ ಎದುರು ಹನುಮಾನ್ ಚಾಲೀಸಾ ಪಠಿಸಿದ್ದರು.
ಈ ಸುದ್ದಿಯನ್ನು ಓದಿ: Robbery: ರಾಂಚಿ ಪವರ್ ಗ್ರೀಡ್ ಸಿಬ್ಬಂದಿಗಳನ್ನು ಒತ್ತೆಯಾಳಾಗಿಟ್ಟುಕೊಂಡು 16 ಲಕ್ಷ ರೂ. ಲೂಟಿ ಮಾಡಿದ ದರೋಡೆಕೋರರು
ಇದಕ್ಕೂ ಮುನ್ನ ಧೀರೇಂದ್ರ ಕೃಷ್ಣ ಶಾಸ್ತ್ರಿ ತಮ್ಮ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ತಮ್ಮ ಶೈಲಿಯ ಬಟ್ಟೆ ಮತ್ತು ಸನ್ಗ್ಲಾಸ್ಗಳಿಂದ ಸುದ್ದಿಯಾಗಿದ್ದರು. ವಿಮಾನದಲ್ಲಿ ದುಬಾರಿ ಜಾಕೆಟ್ ಧರಿಸಿರುವ ಫೋಟೋಗಳು ಮತ್ತು ಕ್ರೂಸ್ನಲ್ಲಿ ಸಂತೋಷವಾಗಿರುವ ಚಿತ್ರಗಳು ಟ್ರೋಲ್ಗೆ ಒಳಗಾಗಿದ್ದವು.
ಹನುಮಾನ್ ಚಾಲೀಸಾ ಪಠಣವು ಘಟನೆಯು ಭಾರತೀಯ ಸಂಸ್ಕೃತಿಯ ಜಾಗತಿಕ ಮನ್ನಣೆಯನ್ನು ಎತ್ತಿ ತೋರಿಸಿದೆ. ಈ ಘಟನೆ ಯುಕೆ ಸಂಸತ್ನಲ್ಲಿ ಭಾರತೀಯ ಧಾರ್ಮಿಕ ಮೌಲ್ಯಗಳ ಗೌರವವನ್ನು ಪ್ರದರ್ಶಿಸಿದ್ದು, ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯನಿರ್ವಹಿಸಿದೆ.