ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..
ನಾಲಿಗೆಗೆ ದಾಸರಾದ ನಮ್ಮ ಪೂರ್ವಜರು, ಶರೀರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪರಿಪೂರ್ಣ ಆಹಾರ ಸೇವಿಸುವುದರ ಬದಲು, ರುಚಿಗೆ ಆದ್ಯತೆ ನೀಡಿದರು. ಮಲಬದ್ಧತೆಯ ಸಮಸ್ಯೆ ಮತ್ತಷ್ಟು ಪ್ರಬಲವಾಯಿತು. ಜೊತೆಗೆ ಮನುಷ್ಯ ಕೆಲವು ಆಲೋಚನೆಗಳಿಗೆ ಸಾರ್ವಕಾಲಿಕವಾಗಿ ಕಟ್ಟು ಬಿದ್ದದ್ದು ಸಮಸ್ಯೆಯನ್ನು ಉಲ್ಭಣಿಸಿತು. ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಮಾಡಲೇಬೇಕು ಎಂಬ ನಿಲುವು.