ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಕೆ. ರಾಘವ ಶರ್ಮ ನಿಡ್ಲೆ

ಅಂಕಣಕಾರ, ವಿಶೇ಼ಷ ಭಾತ್ಮೀದಾರ

[email protected]

ರಾಘವ ಶರ್ಮ ನಿಡ್ಲೆ ಅವರು ರಾಜಧಾನಿ ದೆಹಲಿಯಲ್ಲಿ 18 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದ ಸಂಡೇ ಇಂಡಿಯನ್ ಸುದ್ದಿ ವಾರ ಪತ್ರಿಕೆಗೆ ದೆಹಲಿಯಲ್ಲಿ 2007ರಿಂದ 3 ವರ್ಷ, ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ 2 ವರ್ಷ ಮತ್ತು ವಿಜಯವಾಣಿ ದಿನಪತ್ರಿಕೆಗೆ ದೆಹಲಿ ವಿಶೇಷ ಪ್ರತಿನಿಧಿಯಾಗಿ 2012ರಿಂದ 2025ರ ತನಕ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2023ರ ತನಕ ವಿಜಯವಾಣಿ ಸೋದರ ಸಂಸ್ಥೆ ದಿಗ್ವಿಜಯ ಸುದ್ದಿ ವಾಹಿನಿಗೂ ವಿಶೇಷ ಪ್ರತಿನಿಧಿ ಆಗಿದ್ದರು 2014, 2019, 2024ರ ಲೋಕಸಭೆ ಚುನಾವಣೆ, ಹಾಗೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರತ್ಯಕ್ಷ ವರದಿ ಮಾಡಿದ ಅನುಭವ ಹೊಂದಿರುವ ಅವರು, ಹತ್ತು ಹಲವು ಕೇಸುಗಳ ಸುಪ್ರೀಂಕೋರ್ಟ್ ಕಲಾಪಗಳ ಬಗ್ಗೆಯೂ ವರದಿ, ವಿಶ್ಲೇಷಣೆಗಳನ್ನು ಮಾಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಸಂಪಾದಕೀಯ ಸಲಹೆಗಾರ ರಾಗಿ ಕೆಲಸ ಮಾಡುತ್ತಿರುವ ಜತೆಗೆ ವಿಶ್ವವಾಣಿ ಪತ್ರಿಕೆಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿದ್ದಾರೆ.

Articles
West Bengal Election ground report by Raghava Sharma Nidle: ಪ್ರತ್ಯೇಕ ಗೋರ್ಖಾಲ್ಯಾಂಡ್‌ ಮುಗಿದ ಅಧ್ಯಾಯ. ಮುಂದೇನು ?

ಪ್ರತ್ಯೇಕ ಗೋರ್ಖಾಲ್ಯಾಂಡ್‌ ಮುಗಿದ ಅಧ್ಯಾಯ. ಮುಂದೇನು ?

ಚುನಾವಣೆಗಳು ಬಂದಾಗಲೇ ಪ್ರತ್ಯೇಕ ಗೋರ್ಖಾಲ್ಯಾಂಡ್ ಕುರಿತ ಚರ್ಚೆಗಳು ಇಲ್ಲಿ ಗರಿಗೆದರುತ್ತವೆ. ಆದರೆ, ನೇಪಾಳ, ಭೂತಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಇಲ್ಲಿನ ಗುಡ್ಡಗಾಡು ಪ್ರದೇಶಗಳನ್ನು ಭದ್ರತೆ ಕಾರಣಗಳಾಗಿ ಪಶ್ಚಿಮ ಬಂಗಾಳದಿಂದ ಪ್ರತ್ಯೇಕಗೊಳಿಸಲು ಸ್ಥಳೀಯ ಸರಕಾರ ವಾಗಲೀ, ಕೇಂದ್ರ ಸರಕಾರವಾಗಲೀ ಮನಸ್ಸು ಮಾಡಿಲ್ಲ. ಪ್ರತ್ಯೇಕ ಗೋರ್ಖಾಲ್ಯಾಂಡ್ ಸಾಧ್ಯವಿಲ್ಲ ಎಂದು 2017ರ ಕೇಂದ್ರ ಸರಕಾರ ಸ್ಪಷ್ಟಪಡಿಸಿತ್ತು

West Bengal Election ground report by Raghava Sharma Nidle: ಚಹಾ ತೋಟದ ಆದಿವಾಸಿಗಳ ಚಿತ್ತ ಕೇಸರಿಯತ್ತ ?

ಚಹಾ ತೋಟದ ಆದಿವಾಸಿಗಳ ಚಿತ್ತ ಕೇಸರಿಯತ್ತ ?

ಬಂಗಾಳದಲ್ಲಿ ಕಾರ್ಮಿಕರ ಕೊರತೆ ಹಾಗೂ ಹವಾಮಾನ ಬದಲಾವಣೆಗಳಿಂದಾಗಿ ಈಚಿನ ವರ್ಷ ಗಳಲ್ಲಿ ಚಹಾ ಉತ್ಪಾದನೆ ಸಣ್ಣ ಮಟ್ಟಿಗೆ ತಗ್ಗಿದೆ. ಇಲ್ಲಿನ ಪಟ್ಟಣ-ಗ್ರಾಮೀಣ ಭಾಗಗಳ ವಿಶಾಲ ಜಮೀನುಗಳಲ್ಲಿ ಹಸಿರೆಲೆಗಳಿಂದ ಕಂಗೊಳಿಸುವ ಟೀ ಗಾರ್ಡನ್‌ಗಳಲ್ಲಿ ಆದಿವಾಸಿ ಸಮುದಾಯದ ಕಾರ್ಮಿಕರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಎಲೆಗಳನ್ನು ಕೀಳುತ್ತಿರುವ ದೃಶ್ಯ ಕಾಣಸಿಗುತ್ತದೆ.

West Bengal Election ground report by Raghava Sharma Nidle: ದೀದಿ 1500 ರುಪಾಯಿ V/s ಮೋದಿ 3000 ರುಪಾಯಿ +33%

ದೀದಿ 1500 ರುಪಾಯಿ V/s ಮೋದಿ 3000 ರುಪಾಯಿ +33%

ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಯರಿಗೆ 1700 ರು. ನೀಡಲಾಗುತ್ತಿದೆ. ರಾಜ್ಯದ ಕಾಯಂ ಸರಕಾರಿ ನೌಕರರನ್ನು ಹೊರತುಪಡಿಸಿ ಅರ್ಹ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಸರಕಾರದ ಮತ್ತಿತರ ಮಹಿಳಾಪರ ಯೋಜನೆಗಳೂ ಗಮನ ಸೆಳೆದಿವೆ. ಏತನ್ಮಧ್ಯೆ, ಬಿಜೆಪಿ 3000 ರು. ನೆರವಿನ (2 ಪಟ್ಟು ಹೆಚ್ಚು) ಘೋಷಣೆಯ ಜತೆಗೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವುದನ್ನು ಗಟ್ಟಿ ಧ್ವನಿಯಿಂದ ಪ್ರಚಾರ ಮಾಡುತ್ತಿದೆ.

West Bengal Election ground report by Raghava Sharma Nidle: ಬಂಗಾಳಿಗರ ಮೌನದೊಳಗೊಂದು ಸಂದೇಶವಿದೆಯೇ?

ಬಂಗಾಳಿಗರ ಮೌನದೊಳಗೊಂದು ಸಂದೇಶವಿದೆಯೇ?

ಮೂವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಮೇಲೆ, “ನಮಗೆ ಈ ಬಾರಿ ಬದಲಾವಣೆ ಬೇಕು" ಎಂದ ಒಬ್ಬಾತ, “ನಮ್ಮ ಗ್ರಾಮದ ಪರಿಸ್ಥಿತಿ ನೋಡಿ. ಯುವಕರಿಗೆ ಕೆಲಸವಿಲ್ಲ. ಬಡತನದಿಂದ ಜನ ನರಳುತ್ತಿದ್ದಾರೆ. ಕಂಪನಿ, ಕಾರ್ಖಾನೆಗಳಿಲ್ಲ. ಈ ಬಗ್ಗೆ ಉಲ್ಟಾ ಮಾತನಾಡುವ ಹಾಗಿಲ್ಲ. ಹಲ್ಲೆ ಮಾಡಿ ಬಾಯಿ ಮುಚ್ಚಿಸು ತ್ತಾರೆ" ಎಂದು ಆಕ್ರೋಶ ಹೊರ ಹಾಕಿದ. “ಹಲ್ಲೆ ಮಾಡುವುದು ಯಾರು?" ಎಂದಿದ್ದಕ್ಕೆ, “ಯಾರ ಕೈಯಲ್ಲಿ ಅಧಿಕಾರ ಇದೆಯೋ ಅವರು ಮಾಡುತ್ತಾರೆ" ಎಂದು ಉತ್ತರಿಸಿದ.

Raghava Sharma Nidle Column: ನ್ಯಾ.ವರ್ಮಾ ರಾಜೀನಾಮೆ: ಆರೋಪಗಳೂ ಸಮಾಧಿ ಸೇರುವವೇ ?

ನ್ಯಾ.ವರ್ಮಾ ರಾಜೀನಾಮೆ: ಆರೋಪಗಳೂ ಸಮಾಧಿ ಸೇರುವವೇ ?

ನ್ಯಾ.ವರ್ಮಾ ವಿರುದ್ಧದ ತನಿಖೆಯನ್ನು ಸಮಿತಿ ಇನ್ನೇನು ಪೂರ್ಣಗೊಳಿಸುವ ಹಂತದಲ್ಲಿತ್ತು. ಆದರೆ, ಅವರು ಏಪ್ರಿಲ್ 9ರಂದು ರಾಜೀನಾಮೆ ಸಲ್ಲಿಸಿದರು. ಇದರಿಂದಾಗಿ, ಸಮಿತಿಯ ಅಸ್ತಿತ್ವವೇ ಬಹುತೇಕ ಅಪ್ರಸ್ತುತ ಎನಿಸಿಕೊಳ್ಳಲಿದೆ. ನ್ಯಾ. ವರ್ಮಾ 2031ಕ್ಕೆ ನಿವೃತ್ತಿಯಾಗಬೇಕಿತ್ತು. ಆದರೆ, ರಾಜೀನಾಮೆ ಯಿಂದ ನ್ಯಾಯಾಂಗ ವೃತ್ತಿಜೀವನ ಅಕಾಲಿಕವಾಗಿ ಮುಕ್ತಾಯಗೊಂಡಿದೆ.

West Bengal Election ground report by Raghava Sharma Nidle: ʼದೀದಿʼ ಭದ್ರಕೋಟೆ ಭೇದಿಸುವರೇ ಮೋದಿ ?

ʼದೀದಿʼ ಭದ್ರಕೋಟೆ ಭೇದಿಸುವರೇ ಮೋದಿ ?

ಉತ್ತರ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ರಾಜಕೀಯ ನೆಲೆ ವಿಸ್ತರಣೆ ಮಾಡಿ, ಚುನಾವಣೆ ಗೆದ್ದಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಇನ್ನೂ ಸಾಧ್ಯವಾಗಿಲ್ಲ. ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಒಡಿಶಾ ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿರುವ ಬಿಜೆಪಿಗೆ ಮಮತಾ ದೀದಿಯ ರಾಜಕೀಯ ಭದ್ರಕೋಟೆಯನ್ನು ಪೂರ್ತಿ ಭೇದಿಸಲು ಸಾಧ್ಯವಾಗಿಲ್ಲ.

Raghava Sharma Nidle Column: ಕಮಲ ಮುಡಿಗೇರಿಸಲು ಸಜ್ಜಾಗಿದ್ದಾರಾ ರಾಘವ್‌ ಛಡ್ಡಾ ?

ಕಮಲ ಮುಡಿಗೇರಿಸಲು ಸಜ್ಜಾಗಿದ್ದಾರಾ ರಾಘವ್‌ ಛಡ್ಡಾ ?

ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ, ಕೇಜ್ರಿವಾಲ್ ಸೇರಿ ಹಲವರು ಬಂಧನ ಕ್ಕೊಳಗಾದರೂ ಅವರಿಗೆ ನೈತಿಕ ಬೆಂಬಲ ನೀಡುವ ಅಥವಾ ಕೇಂದ್ರದ ವಿರುದ್ಧ ಪ್ರತಿಭಟಿಸುವ ಧೋರಣೆಯನ್ನು ಛಡ್ಡಾ ಪ್ರದರ್ಶಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಮೌನವಾಗಿದ್ದರಿಂದ ಕೇಜ್ರಿವಾಲ-ಛಡ್ಡಾ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು.

Raghava Sharma Nidle Column: ಕುರ್ಮಿ ಚೇತನಾ ರ್ಯಾಲಿಯಿಂದ ರಾಜ್ಯಸಭೆ ಹಾದಿಯತ್ತ...!

ಕುರ್ಮಿ ಚೇತನಾ ರ್ಯಾಲಿಯಿಂದ ರಾಜ್ಯಸಭೆ ಹಾದಿಯತ್ತ...!

ನಮ್ಮ ಚುನಾವಣಾಪೂರ್ವ ಭರವಸೆಗಳೆಲ್ಲವೂ ಗಾಳಿಗೆ ತೂರಲಾಗುತ್ತಿದೆ. ಇದು ಲಾಲೂ ಯಾದವ್ ಸ್ವಾರ್ಥ ತುಂಬಿದ ಒನ್ ಮ್ಯಾನ್ ಸರ್ಕಾರ ಎಂಬ ಸಿಟ್ಟು ನಿತೀಶ್‌ರಲ್ಲಿ ನಿತ್ಯವೂ ಹೆಚ್ಚುತ್ತಲೇ ಇತ್ತು. 1992ರ ಅಂತ್ಯದ ವೇಳೆಗೆ ದಿಲ್ಲಿ ಪ್ರವಾಸದಲ್ಲಿದ್ದ ಲಾಲೂ ಅವರನ್ನು ಬಿಹಾರ ಭವನದಲ್ಲಿ ಭೇಟಿಯಾಗಲು ಪಕ್ಷದ ಮುಖಂಡರಾದ ನಿತೀಶ್ ಕುಮಾರ್, ಶಿವಾನಂದ ತಿವಾರಿ, ಬ್ರಿಶನ್ ಪಟೇಲ್ ಮತ್ತು ಲಲ್ಲನ್ ಸಿಂಗ್ ಬಂದಿದ್ದರು.

Raghav Sharma Nidle Column: ವಿರೋಧಿ ಕೂಗಿಗೆ ಸಾಂತ್ವನವನ್ನಷ್ಟೇ ಹೇಳಬಹುದು

ವಿರೋಧಿ ಕೂಗಿಗೆ ಸಾಂತ್ವನವನ್ನಷ್ಟೇ ಹೇಳಬಹುದು

ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಸೇರಿ ಅನೇಕರು ಇದೇ ಮಾನದಂಡದಿಂದಲೇ ಅಧಿಕಾರ ಕ್ಕೇರಿರುವುದರಿಂದ ಯಾರು ಯಾರನ್ನು ವಿರೋಧಿಸುವುದು ಎನ್ನುವುದು ಪ್ರಶ್ನೆ. ಸಾಮಾನ್ಯ ವಾಗಿ, ಜನಪ್ರತಿನಿಧಿಗಳು ನಿಧನರಾದಾಗ ಅನುಕಂಪದ ಲಾಭ ಪಡೆದುಕೊಳ್ಳುವ ಸಲುವಾಗಿ ಅವರದ್ದೇ ಕುಟುಂಬದ ವ್ಯಕ್ತಿಗಳಿಗೆ ಟಿಕೆಟ್ ನೀಡುವ ಸಂಪ್ರದಾಯವನ್ನು ಎಲ್ಲ ಪಕ್ಷಗಳೂ ಪಾಲಿಸಿಕೊಂಡು ಬರುತ್ತಿವೆ.

Raghava Sharma Nidle Column: ದೀದಿ...ಅವರು ಒಂದೇ ಸೆಕೆಂಡಿನಲ್ಲಿ ಮುಗಿಸುವುದು ಯಾರನ್ನು ?

ದೀದಿ...ಅವರು ಒಂದೇ ಸೆಕೆಂಡಿನಲ್ಲಿ ಮುಗಿಸುವುದು ಯಾರನ್ನು ?

“ತೃಣಮೂಲ ಕಾಂಗ್ರೆಸ್ ಸರಕಾರ ಇರುವುದರಿಂದಲೇ ನೀವು ಸುರಕ್ಷಿತವಾಗಿದ್ದು, ಒಂದೇ ವೇಳೆ ನಮ್ಮ ಸರಕಾರ ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ನಿಮ್ಮನ್ನು ಮುಗಿಸಿ ಬಿಡು ತ್ತಿದ್ದರು" ಎಂಬ ಪ್ರಚೋದನಕಾರಿ ಹಾಗೂ ಬೆದರಿಕೆ ಹಾಕುವ ರೀತಿಯ ಅವರ ಭಾಷಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.

Raghava Sharma Nidle Column: ನಿತೀಶ್‌ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಬಿಗಿಯಾಗಿರುವುದೇ ?

ನಿತೀಶ್‌ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಬಿಗಿಯಾಗಿರುವುದೇ ?

ಪ್ರಾದೇಶಿಕ ಪಕ್ಷಗಳನ್ನು ವ್ಯವಸ್ಥಿತವಾಗಿ ಕುಗ್ಗಿಸುವ ಬಿಜೆಪಿಯ ತಂತ್ರಗಾರಿಕೆಗಳನ್ನು ಬೇರೆ ರಾಜ್ಯಗಳಲ್ಲಿ ನೋಡಿರುವುದರಿಂದ ಜೆಡಿಯು ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ. “ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಸದಸ್ಯನಾಗಿದ್ದ ನಾನು ರಾಜ್ಯಸಭೆ ಸದಸ್ಯ ನಾಗಿಯೂ ಅನುಭವ ಪಡೆಯಬೇಕು ಎಂದು ಮತ್ತೆ ಸಂಸತ್ತಿಗೆ ತೆರಳುತ್ತಿದ್ದೇನೆ" ಎಂದು ನಿತೀಶ್ ಕುಮಾರ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ದಿನದಂದು ಟ್ವೀಟ್ ಮಾಡಿದ್ದರು.

Raghava Sharma Nidle Column: ಹಾಗಾದರೆ ದಿಲ್ಲಿ ಅಬಕಾರಿ ನೀತಿ ಹಗರಣ ನಡೆದೇ ಇಲ್ಲವೇ ?

ಹಾಗಾದರೆ ದಿಲ್ಲಿ ಅಬಕಾರಿ ನೀತಿ ಹಗರಣ ನಡೆದೇ ಇಲ್ಲವೇ ?

ರದ್ದಾದ ಅಬಕಾರಿ ನೀತಿಯ ಬಗ್ಗೆ ಮನೀಷ್ ಸಿಸೋಡಿಯಾ ಬಳಿ ಕೇಳಿದ್ದಾಗ, “ಅದೊಂದು ಅದ್ಭುತವಾದ ಮಾದರಿ ಅಬಕಾರಿ ನೀತಿ" ಎಂದೇನೂ ಅವರು ಬೆನ್ನು ತಟ್ಟಿಕೊಳ್ಳಲಿಲ್ಲ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಧೀಶರು ಕೂಡ “ಅಬಕಾರಿ ಹಗರಣ ನಡೆದಿಲ್ಲ. ಎಲ್ಲವೂ ಶುಭ್ರವಾಗಿದೆ" ಎಂದೂ ಹೇಳಿಲ್ಲ. ಬದಲಿಗೆ, “ಸಿಬಿಐ ಮಾಡಿದ ಆರೋಪಗಳಿಗೆ ಶಕ್ತಿ ತುಂಬುವ ಸಾಕ್ಷ್ಯಗಳಿಲ್ಲ ಮತ್ತು ಕೋರ್ಟ್ ಮುಂದೆ ಪ್ರಸ್ತುತಪಡಿಸಲಾದ ಸಾಕ್ಷ್ಯಗಳನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನೂ ಒದಗಿಸಿಲ್ಲ.

Raghav Sharma Nidle Column: ನಿಮ್ಮ ಮಂಗಾಟಕ್ಕೆ ಜಾಗತಿಕ ವೇದಿಕೆಯೇ ಬೇಕಿತ್ತಾ ?

ನಿಮ್ಮ ಮಂಗಾಟಕ್ಕೆ ಜಾಗತಿಕ ವೇದಿಕೆಯೇ ಬೇಕಿತ್ತಾ ?

ಅರೆಬೆತ್ತಲೆ ವೀರರು ಪ್ರತಿಭಟನೆ ಮಾಡಿದ್ದು ಸೂಚನೆ ಮೇರೆಗೆ. ಅದೇ ಕಾರಣಕ್ಕೆ ಯುವಕರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರು ಎಂದು ರಾಹುಲ್ ಸಮರ್ಥಿಸಿದರು. ಅಷ್ಟಕ್ಕೂ ಎಐ ಜಾಗತಿಕ ಸಮಾವೇಶಕ್ಕೂ ಇಂಡೋ-ಅಮೆರಿಕ ವ್ಯಾಪಾರ ಒಪ್ಪಂದಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ತಮ್ಮ ಬೌದ್ಧಿಕ ದಿವಾಳಿತನ ಪ್ರದರ್ಶಿಸಿ, ದೇಶದ ಮಾನ ಹರಾಜು ಹಾಕಲು ಈ ವೇದಿಕೆಯನ್ನು ಬಳಸಿ ಕೊಂಡರು.

Raghava Sharma Nidle Column: ತಿವಾರಿ ಜಾತಿ ಕೇಳಿ ಹಲ್ಲೆಗೈದದ್ದು ಸಾಮಾನ್ಯ ಘಟನೆಯೇ ?

ತಿವಾರಿ ಜಾತಿ ಕೇಳಿ ಹಲ್ಲೆಗೈದದ್ದು ಸಾಮಾನ್ಯ ಘಟನೆಯೇ ?

ಘಟನೆ ನಡೆದು ಇಷ್ಟು ದಿನಗಳಾದರೂ ಬೆತ್ತಲೆ ಮೆರವಣಿಗೆ ಮಾಡುತ್ತೇವೆ ಎಂದೆ ನಾಲಗೆ ಹರಿಬಿಟ್ಟವರ ದುರ್ವರ್ತನೆಗಳ ಬಗ್ಗೆ ಸ್ವಯಂಘೋಷಿತ ಸ್ತ್ರೀವಾದಿ ಸಂಘಟನೆಗಳು, ಪ್ರಗತಿ ಪರರು, ಸ್ತ್ರೀ ಸಂವೇದಿಗಳ ಬಾಯಿಂದ ಒಂದು ಮಾತೂ ಹೊರಡಲಿಲ್ಲ. ಬದಲಿಗೆ, ರುಚಿ ತಿವಾರಿಯೇ ಹಲ್ಲೆ ಮಾಡಲು ಮುಂದಾದಳು ಎಂದೂ ವಿರೋಧಿ ಗುಂಪು ಆರೋಪ ಮಾಡಿತು.

Raghava Sharma Nidle Column: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧದ ಹಿಂದಿನ ಗುಟ್ಟೇನು ?

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧದ ಹಿಂದಿನ ಗುಟ್ಟೇನು ?

ಅಕ್ರಮ ವಲಸಿಗರು ಭಾರತೀಯ ಮತದಾರರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಅಪಾಯ ಕಾರಿ. ಈ ಹಿನ್ನೆಲೆಯಲ್ಲಿ ಬಂಗಾಳದಂಥ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಂದೋ ನಡೆಯಬೇಕಿತ್ತು. ಆದರೆ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಂದಾಯಿತು. ಮತಪಟ್ಟಿ ಪರಿಷ್ಕರಣೆ ಎನ್ನುವುದು ಬಹಳ ಅಗಾಧವಾದ, ವಿಸ್ತೃತ ವಾದ ಪ್ರಕ್ರಿಯೆ.

Raghava Sharma Nidle Column: ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಹಲವು ದಶಕಗಳ ಹೋರಾಟದ ನಂತರ ಸುಪ್ರೀಂ ಕೋರ್ಟ್‌ನಿಂದ ಸಮಾಧಾನಕರ ತೀರ್ಪು ಪಡೆದುಕೊಂಡ ಕರ್ನಾಟಕಕ್ಕೆ ಉದ್ದೇಶಿತ ಮೇಕೆದಾಟು ಜಲಾಶಯ ನಿರ್ಮಾಣ, ಕೃಷ್ಣಾ ಕಣಿವೆಯಲ್ಲಿ ಆಲಮಟ್ಟಿ ಜಲಾಶಯ ಎತ್ತರ ಏರಿಸುವಿಕೆ, ಮಹದಾಯಿ ನದಿಯಿಂದ ಕಳಸಾ ಮತ್ತು ಬಂಡೂರಿ ನಾಲೆ ಮೂಲಕ ಮಲ ಪ್ರಭಾ ನದಿಯ ನೀರು ಹೆಚ್ಚಿಸುವ ಯೋಜನೆಗಳನ್ನು ಮಾತ್ರ ಇನ್ನೂ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ.

Raghava Sharma Nidle Column: ರಾಜ್ಯಪಾಲ ಹುದ್ದೆಯನ್ನು ಶಾಶ್ವತವಾಗಿ ರದ್ದುಗೊಳಿಸಬಾರದೇಕೆ ?

ರಾಜ್ಯಪಾಲ ಹುದ್ದೆಯನ್ನು ಶಾಶ್ವತವಾಗಿ ರದ್ದುಗೊಳಿಸಬಾರದೇಕೆ ?

ರಾಜ್ಯಪಾಲರು ಸಾಮಾನ್ಯವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಮತ್ತು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೂ ಆಗಿರುತ್ತಾರೆ. ಕೇಂದ್ರ ಸರಕಾರದ ಶಿಫಾರಸುಗಳ ಆಧಾರದಲ್ಲಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರು, ಅನೇಕ ಸಂದರ್ಭಗಳಲ್ಲಿ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವುದಕ್ಕೆ ದೇಶ ಅನೇಕ ಬಾರಿ ಸಾಕ್ಷಿಯಾಗಿದೆ.

Raghava Sharma Nidle Column: ನಿತಿನ್‌ ನಬಿನ್‌ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?

ನಿತಿನ್‌ ನಬಿನ್‌ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?

ನಿತಿನ್ ನಬಿನ್ ಪಟ್ಟಾಭಿಷೇಕದ ಹಿಂದೆ ಬಿಜೆಪಿಯ ಇತರೆ ಹಿರಿತಲೆಗಳಿಗೂ ಸಂದೇಶವಿದೆ ಎನ್ನುವುದನ್ನು ಎಷ್ಟು ಜನ ಅರ್ಥಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪಕ್ಷ ಹಾಗೂ ಸಂಘಟನೆಯ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು, ನೀವು ಕೂಡ ಅಧಿಕಾರಕ್ಕಂಟಿಕೊಂಡು ಕೂರಬೇಡಿ, ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡಿ ಎಂಬುದನ್ನು ಮೋದಿ-ಶಾ ಇಬ್ಬರೂ ಸೂಚ್ಯವಾಗಿ ತಿಳಿಸಿದ್ದಾರೆ.

Raghava Sharma Nidle Column: ಕಟ್ರ ಈದ್ಗಾ ಎನ್ನುವುದನ್ನು ಬ್ರಿಟಿಷ್‌ ಆಡಳಿತವೇ ಒಪ್ಪಿರಲಿಲ್ಲ !

ಕಟ್ರ ಈದ್ಗಾ ಎನ್ನುವುದನ್ನು ಬ್ರಿಟಿಷ್‌ ಆಡಳಿತವೇ ಒಪ್ಪಿರಲಿಲ್ಲ !

ಒಪ್ಪಂದದ ಪ್ರಕಾರ ದೇವಾಲಯದ ಭೂಮಿಯನ್ನು ಟ್ರಸ್ಟ್‌ಗೆ ಮತ್ತು ಪಕ್ಕದ ಶಾಹಿ ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ಹಂಚಿಕೆ ಮಾಡಲಾಗುತ್ತದೆ. ಆ ಸಮಯ ದಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾಸಂಘದ ಅಧ್ಯಕ್ಷರಾಗಿದ್ದ ಗಣೇಶ ವಾಸುದೇವ್ ಮಾವಲಂಕರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು.

Raghava Sharma Nidle Column: ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ

ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ

2019ರ ಲೋಕಸಭೆ ಫಲಿತಾಂಶಗಳು 2021ರ ವಿಧಾನಸಭೆ ಚುನಾವಣೆ ಹೋರಾಟಕ್ಕೆ ಬಿಜೆಪಿಯ ನೈತಿಕ ಸ್ಥೈರ್ಯವನ್ನು ದ್ವಿಗುಣಗೊಳಿಸಿತ್ತು. ಈ ಬಾರಿ ಬಂಗಾಳ ಹೋರಾಟವನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿರುವ ಬಿಜೆಪಿ, ಈ ಸಲ ಗೆಲ್ಲದಿದ್ದರೆ ಮುಂದೆಂದೂ ಗೆಲ್ಲಲಾರೆವು ಎನ್ನುತ್ತಾ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿ, ಆ ಮೂಲಕ ಮತದಾರ ಮಹಾಪ್ರಭುವಿನ ಹೃದಯ ಪ್ರವೇಶಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

Raghava Sharma Nidle Column: ಅರಾವಳಿ: ನ್ಯಾಯಾಲಯದ ಮಿತ್ರನ ಆತಂಕ ಬದಿಗೆ ಸರಿಸಿದ್ದೇಕೆ ?

ಅರಾವಳಿ: ನ್ಯಾಯಾಲಯದ ಮಿತ್ರನ ಆತಂಕ ಬದಿಗೆ ಸರಿಸಿದ್ದೇಕೆ ?

ಅರಾವಳಿ ಬೆಟ್ಟಸಾಲುಗಳ ಕುರಿತ ಮರುವ್ಯಾಖ್ಯಾನ ಹಾಗೂ ಈ ಪರಿಸರ ಸೂಕ್ಷ್ಮ ಬೆಟ್ಟಸಾಲುಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ರಚನೆ ಮಾಡುವ ಪ್ರಸ್ತಾವವನ್ನು ಸಿಜೆಐ ಸೂರ್ಯಕಾಂತ್ ಅವರೀಗ ಮುಂದಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

Raghava Sharma Nidle Column: ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್‌ ಎಂದೇ ಅರ್ಥ !

ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್‌ ಎಂದೇ ಅರ್ಥ !

ಧೂಮಪಾನದ ಚಟವಿಲ್ಲದಿದ್ದರೂ, ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್ ಎಂದೇ ಅರ್ಥ!! ಮಾಲಿನ್ಯ ತಗ್ಗಿಸುತ್ತೇವೆ ಎಂದು ದಿಲ್ಲಿ ವಾಸಿಗಳಲ್ಲಿ ಹತ್ತು ಹಲವು ಕನಸುಗಳನ್ನು ಬಿತ್ತಿದ್ದ ಅರವಿಂದ ಕೇಜ್ರಿವಾಲ್ ಈಗ ಮಾಲಿನ್ಯದಲ್ಲಿ ಮರೆಯಾಗಿ ಹೋಗಿದ್ದಾರೆ. ವಾಯುಮಾಲಿನ್ಯ ತಗ್ಗಿಸುವುದರ ಜತೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಪ್ರಮಾಣ ಮಾಡಿದ್ದ ಮಾಜಿ ಸಿಎಂ ಕೇಜ್ರಿವಾಲ, ಭರವಸೆಗಳನ್ನು ಈಡೇರಿಸುವಲ್ಲಿ ಸೋತರು.

Raghav Sharma Nidle Column: ಇಂಡಿ ಮೈತ್ರಿಕೂಟದ ಮೆದುಳು ನಿಷ್ಕ್ರಿಯಗೊಂಡಿದೆಯೇ ?

ಇಂಡಿ ಮೈತ್ರಿಕೂಟದ ಮೆದುಳು ನಿಷ್ಕ್ರಿಯಗೊಂಡಿದೆಯೇ ?

ತಮ್ಮ ನಿಲುವು-ಆಲೋಚನೆಗಳನ್ನು ಅನುಮೋದಿಸುವ ತೀರ್ಪುಗಳು ಕೋರ್ಟಿನಿಂದ ಹೊರ ಬೀಳದಿ ದ್ದಾಗ ನ್ಯಾಯಾಧೀಶರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎನ್ನುವುದೇ ಇಂಡಿಯಾ ಒಕ್ಕೂಟ ಪಕ್ಷಗಳ ಪ್ರತಿಪಾದನೆಯಾದರೆ ; ರಾಹುಲ್ ಗಾಂಧಿ ಅಪರಾಧಿ ಎಂಬ ಸೂರತ್ ನ್ಯಾಯಾಲ ಯದ ತೀರ್ಪಿಗೆ ತಡೆ ನೀಡಿದ್ದ (2023) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೂ ವಾಗ್ದಂಡನೆಗೆ ಒಳಪಡಿಸಬೇಕು ಎಂದೇ ವಾದಿಸಬೇಕಾಗುತ್ತದೆ ಅಲ್ಲವೇ? ಆದರೆ, ವಾಸ್ತವ ಏನೆಂದರೆ ಶೂನ್ಯ ವಿವೇಚನೆ ಇರುವವರಷ್ಟೇ ಆ ರೀತಿ ಯೋಚಿಸುತ್ತಾರಷ್ಟೇ.

Raghav Sharma Nidle Column: ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?

ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?

ನರಮೇಧದಿಂದ ತಪ್ಪಿಸಿಕೊಂಡು ಬರುವ ನಿರಾಶ್ರಿತರು ಕೆಂಪುಹಾಸನ್ನು (ರೆಡ್ ಕಾರ್ಪೆಟ) ಕೇಳುವುದಿಲ್ಲ. ಅವರು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ನೀಡುವ ರಕ್ಷಣೆಯನ್ನಷ್ಟೇ ಕೇಳುತ್ತಾರೆ. ಸಾಮೂಹಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಬಯಸುವ ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮ ನುಸುಳುಕೋರರೆಂದು ಸಾಂವಿಧಾನಿಕ ನ್ಯಾಯಾಲಯ ಪರಿಗಣಿಸಿದರೆ, ಬಲವಂತದ ಸ್ಥಳಾಂತರ ಮತ್ತು ಕಾನೂನುಬಾಹಿರ ವಲಸೆಯ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎನ್ನುವುದು ಪತ್ರದಲ್ಲಿರುವ ತಕರಾರು.

Loading...