ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಕೆ. ರಾಘವ ಶರ್ಮ ನಿಡ್ಲೆ

ಅಂಕಣಕಾರ, ವಿಶೇ಼ಷ ಭಾತ್ಮೀದಾರ

[email protected]

ರಾಘವ ಶರ್ಮ ನಿಡ್ಲೆ ಅವರು ರಾಜಧಾನಿ ದೆಹಲಿಯಲ್ಲಿ 18 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದ ಸಂಡೇ ಇಂಡಿಯನ್ ಸುದ್ದಿ ವಾರ ಪತ್ರಿಕೆಗೆ ದೆಹಲಿಯಲ್ಲಿ 2007ರಿಂದ 3 ವರ್ಷ, ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ 2 ವರ್ಷ ಮತ್ತು ವಿಜಯವಾಣಿ ದಿನಪತ್ರಿಕೆಗೆ ದೆಹಲಿ ವಿಶೇಷ ಪ್ರತಿನಿಧಿಯಾಗಿ 2012ರಿಂದ 2025ರ ತನಕ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2023ರ ತನಕ ವಿಜಯವಾಣಿ ಸೋದರ ಸಂಸ್ಥೆ ದಿಗ್ವಿಜಯ ಸುದ್ದಿ ವಾಹಿನಿಗೂ ವಿಶೇಷ ಪ್ರತಿನಿಧಿ ಆಗಿದ್ದರು 2014, 2019, 2024ರ ಲೋಕಸಭೆ ಚುನಾವಣೆ, ಹಾಗೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರತ್ಯಕ್ಷ ವರದಿ ಮಾಡಿದ ಅನುಭವ ಹೊಂದಿರುವ ಅವರು, ಹತ್ತು ಹಲವು ಕೇಸುಗಳ ಸುಪ್ರೀಂಕೋರ್ಟ್ ಕಲಾಪಗಳ ಬಗ್ಗೆಯೂ ವರದಿ, ವಿಶ್ಲೇಷಣೆಗಳನ್ನು ಮಾಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಸಂಪಾದಕೀಯ ಸಲಹೆಗಾರ ರಾಗಿ ಕೆಲಸ ಮಾಡುತ್ತಿರುವ ಜತೆಗೆ ವಿಶ್ವವಾಣಿ ಪತ್ರಿಕೆಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿದ್ದಾರೆ.

Articles
Raghava Sharma Nidle Column: ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳದ ಆಯೋಜನೆಗೆ ತೀರ್ಮಾನ ಮಾಡಿರುವುದು ಪರ/ವಿರೋಧ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಸಂಸದ ಯದು ವೀರ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲ ಸಾಂಸ್ಕೃತಿಕ ಸಂಘಟನೆಗಳು, ರೈತ ಮುಖಂಡರು ಕಂಬಳದ ಆಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಒತ್ತಾಯದ ಮೇರೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಕಂಬಳ ನಡೆಸುವ ನಿರ್ಧಾರ ಮಾಡಿದ್ದಾರೆ.

ಸರ್ವಪಕ್ಷ ಸಭೆಗೆ ತಜ್ಞರ ಒತ್ತಾಯ

ಸರ್ವಪಕ್ಷ ಸಭೆಗೆ ತಜ್ಞರ ಒತ್ತಾಯ

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಟಿವಿಕೆ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನು ಮತದ ನಿರ್ಣಯವನ್ನು ಮೇ ತಿಂಗಳ ತೆಗೆದುಕೊಂಡಿತ್ತು. ಅದರೆ, ಈ ನಿರ್ಣಯ ಹಾಗೂ ಕೇಂದ್ರದ ಮುಂದೆ ನ್ಯಾಯಾಧೀಕರಣದ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

Raghava Sharma Nidle Column: ಮೇಕೆದಾಟು: ತ.ನಾಡು ದೂರಿಗೆ ಏನಂತೀರಿ ಮುಖ್ಯಮಂತ್ರಿಗಳೇ?

ಮೇಕೆದಾಟು: ತ.ನಾಡು ದೂರಿಗೆ ಏನಂತೀರಿ ಮುಖ್ಯಮಂತ್ರಿಗಳೇ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತು ಅಧಿಕಾರ ಕಳೆದುಕೊಂಡಿದೆ. ಆದರೆ, ಮೇಕೆದಾಟು ವಿರೋಧದ ವಿಷಯದಲ್ಲಿ ಹೊಸ ಸರಕಾರವೂ ಸಕ್ರಿಯತೆ ಪ್ರದರ್ಶಿಸಿ, ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ. ಡಿಎಂಕೆ ಸರಕಾರ 2025ರ ಡಿಸೆಂಬರ್ ಮತ್ತು 2026ರ ಮಾರ್ಚ್ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ 2ನೇ ಕಾವೇರಿ ನ್ಯಾಯಾಧೀಕರಣ ಬೇಡಿಕೆಯ ಅರ್ಜಿ ಬಗ್ಗೆ ಶೀಘ್ರದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತ.ನಾಡು ಹೊಸ ಸರಕಾರವು ಕೇಂದ್ರ ಸರ್ಕಾರದ ಮೇಲೆ ಮತ್ತೆ ಒತ್ತಡ ಮುಂದುವರಿಸಿದೆ.

Advocate K N Bhat Interview: ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು

ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು

ರಾಮಮಂದಿರ ಹುಂಡಿಹಣ ಕಳವು ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಮಮಂದಿರ ಟ್ರಸ್ಟ್‌ನ ವಿಶ್ವಾಸಾರ್ಹತೆಗೇ ಭಾರೀ ಹಾನಿಯಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಹಲವರ ಬಂಧನವೂ ಆಗಿದೆ. ದೀರ್ಘಕಾಲ ರಾಮಮಂದಿರ ನಿರ್ಮಾಣಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಾದ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಕೆ.ಎನ್.ಭಟ್, ವಿಶ್ವವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ

Raghav Sharma Nidle Column: ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ಪ್ರಕರಣಕ್ಕೆ ಸಂಬಂಧಿಸಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಜೂನ್ 18-19ರಂದು ಉತ್ತರಾಖಂಡದ ಹರಿದ್ವಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ನ ಉನ್ನತ ಮುಖಂಡರು ಮಹತ್ವದ ಸಭೆ ನಡೆಸಿ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ತೀರ್ಮಾನ ಮಾಡಿದ್ದರು

Raghava Sharma Nidle Column: ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ದೇಶದಲ್ಲಿ ಪೊಲಿಟಿಕಲ್ ಡೈನಾಮಿಕ್ಸ್‌ಗಳು ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಳೆತಲೆ ಗಳಿಗೆ ದೊಡ್ಡ ಹುದ್ದೆಯನ್ನು ನೀಡುವ ಮನಸ್ಸಿನಲ್ಲಂತೂ ಹೈಕಮಾಂಡ್ ಇದ್ದಂತಿಲ್ಲ. ಆದರೆ, ವಿಧಾನ ಪರಿಷತ್ ಚುನಾವಣೆಯನ್ನು ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನಿರ್ವಹಿಸಿದ ರೀತಿ ಮತ್ತು ಬಿಜೆಪಿ ಶಾಸಕರ ಅಡ್ಡಮತದಾನ ತಡೆಯುವಲ್ಲಿ ನಾಯಕತ್ವ ವಿಫಲವಾಗಿರುವುದು ದಿಕ್ಕೆಟ್ಟು ಕೂತಿರುವ ಪಕ್ಷನಿಷ್ಠ ಮತ್ತು ತಟಸ್ಥ ಕಾರ್ಯಕರ್ತ ವರ್ಗದ ನೋವನ್ನು ಮತ್ತಷ್ಟು ಗಾಢವಾಗಿಸಿದೆ

Raghava Sharma Nidle Column: ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಸೋದರಳಿಯನ ಅಕ್ರಮ ಕೃತ್ಯ, ಅವ್ಯವಹಾರಗಳನ್ನು ನೋಡಿಯೂ ಜಾಣಕುರುಡು ಪ್ರದರ್ಶಿಸು ತ್ತಿದ್ದ ಮಮತಾ ತಾನೊಬ್ಬ ಮಹಾನ್ ಜನನಾಯಕಿ ಎಂಬಂತೆ ಪೋಸು ಕೊಡುತ್ತಿದ್ದರು. ಆದರೆ, ಮೇ 4ರಂದು ಮಮತಾ ದೀದಿಯ ದರ್ಪ, ಅಹಂಕಾರವನ್ನು ಜನರೇ ಕೊನೆಗೊಳಿಸಿದರು. ದೆಹಲಿ ಯಲ್ಲಿರುವ ಇಂಡಿ ಮೈತ್ರಿಕೂಟದವರ ಮನೆಗಳಿಗೆ ಎಡತಾಕುತ್ತಾ ನಮ್ಮ ಟಿಎಂಸಿಯನ್ನು ರಕ್ಷಿಸಿ ಎಂದು ಮನವಿ ಮಾಡುವ ಸ್ಥಿತಿ ಈ ಮಮತಾರದ್ದು.

Raghava Sharma Nidle Column: ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

ಯಾವಾಗ ಮಮತಾ ಬ್ಯಾನರ್ಜಿ ಅವರು ಪಕ್ಷದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಗೆ ಹೆಚ್ಚಿನ ಅಧಿಕಾರ ನೀಡಲು ಶುರುಮಾಡಿದ್ದರೋ ಆಗಲೇ ಟಿಎಂಸಿ ಒಂದ ಒಂದು ದಿನ ಒಡೆದುಹೋಗುವುದು ನಿಶ್ಚಿತ ಎಂಬ ಚರ್ಚೆ ಬಂಗಾಳದ ರಾಜಕೀಯ ಕಾರಿಡಾರ್‌ನಲ್ಲಿ ಆರಂಭ ವಾಗಿದ್ದವು. ಟಿಎಂಸಿಯ ಒಂದು ಗುಂಪು ಮಮತಾ ಬ್ಯಾನರ್ಜಿಗೆ ವಿಧೇಯವಾಗಿತ್ತೇ ವಿನಃ ಯುವಕ ಅಭಿಷೇಕ್‌ರನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ

Raghava Sharma Nidle Column: ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?

ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?

ರಾಜಕಾರಣ, ಚುನಾವಣೆಗಳು ಸಾಂಪ್ರದಾಯಿಕ ಶೈಲಿಯನ್ನು ಕಳಚಿ ಹೊಸ ರೂಪಾಂತರಕ್ಕೆ ತೆರದುಕೊಳ್ಳಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ, ತಮಿಳು ನಾಡಿನಾಚೆಗಿನ ಶಿಕ್ಷಿತ ಮತದಾರ ವರ್ಗಕ್ಕೂ ಅಣ್ಣಾಮಲೈ ಬಗ್ಗೆ ವಿಶೇಷ ಅಭಿಮಾನ ಹುಟ್ಟಿದ್ದು ಸುಳ್ಳೇನಲ್ಲ. ಆದರೆ, ಬಿಜೆಪಿ ಜತೆಗಿನ ಪಯಣವನ್ನು ಅವರೀಗ ಅಂತ್ಯ ಗೊಳಿಸುವ ಸನಿಹದಲ್ಲಿದ್ದಾರೆ.

Raghava Sharma Nidle Column: ಕುರ್ಚಿ ಕಾಳಗ: ದಿಲ್ಲಿ ಅಂಗಳದಲ್ಲಿ ಗೆದ್ದವರು ಯಾರು ?

ಕುರ್ಚಿ ಕಾಳಗ: ದಿಲ್ಲಿ ಅಂಗಳದಲ್ಲಿ ಗೆದ್ದವರು ಯಾರು ?

ಕರ್ನಾಟಕದಲ್ಲಿ ಸಿದ್ದರಾಮಯ್ಯರ ಬದಲಿಗೆ ಹೊಸ ನಾಯಕತ್ವವನ್ನು ತರುವ ಉದ್ದೇಶ ರಾಹುಲ್ ಗಾಂಧಿಯಲ್ಲಿ ಖಂಡಿತಾ ಇಲ್ಲ ಎನ್ನುವುದು ಪ್ರಾರಂಭದಲ್ಲಿ ಕೇಳುತ್ತಿದ್ದ ಮಾತುಗಳು. ಇತರೆ ಹಿಂದುಳಿತ ವರ್ಗದ (ಒಬಿಸಿ) ಪ್ರಬಲ ನಾಯಕನೊಬ್ಬನನ್ನು ಅಧಿಕಾರದಿಂದ ಕೆಳಗಿಳಿಸಿ, ಪ್ರಭಾವಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.

Raghava Sharma Nidle Column: ರಾಹುಲ್‌ ಆಪ್ತನ ಸೋಲು ಕಾಂಗ್ರೆಸ್‌ʼನ ಗೆಲುವು !

ರಾಹುಲ್‌ ಆಪ್ತನ ಸೋಲು ಕಾಂಗ್ರೆಸ್‌ʼನ ಗೆಲುವು !

ಹಾಗೆ ನೋಡಿದರೆ ರಾಹುಲ್ ಗಾಂಧಿ ಕೂಡ ಕೆ.ಸಿ.ವೇಣುಗೋಪಾಲ್‌ರನ್ನು ಕೇರಳಕ್ಕೆ ಮುಖ್ಯಮಂತ್ರಿ ಯನ್ನಾಗಿ ಕಳುಹಿಸಿ ಕೊಡುವ ಲೆಕ್ಕಾಚಾರದಲ್ಲಿದ್ದರು. ಆದರೆ, ಐಯುಎಂಎಲ್ ಮಾತ್ರ ಸತೀಶನ್ ಬಿಟ್ಟು ಬೇರೆ ಯಾವ ಹೆಸರನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ವೇಣುಗೋಪಾಲ್ ನಿಮ್ಮ ಆಯ್ಕೆಯಾದರೆ ನಾವು ಸರಕಾರಕ್ಕೆ ಬಾಹ್ಯ ಬೆಂಬಲವನ್ನಷ್ಟೇ ನೀಡುತ್ತೇವೆ ಎಂಬ ಸಂದೇಶ ರವಾನಿಸಿದ್ದರಿಂದ ಹೈಕಮಾಂಡ್ ಒತ್ತಡಕ್ಕೆ ಸಿಲುಕಿತು ಮತ್ತು ಸತೀಶನ್‌ರನ್ನು ಆಯ್ಕೆ ಮಾಡುವುದು ಅನಿವಾರ್ಯವಾಯ್ತು.

Raghava Sharma Nidle Column: ಬಿಜೆಪಿ ಗೆಲುವು ಕಾಂಗ್ರೆಸ್‌ʼಗೆ ಪಾಠವಾಗುವುದೇ ?

ಬಿಜೆಪಿ ಗೆಲುವು ಕಾಂಗ್ರೆಸ್‌ʼಗೆ ಪಾಠವಾಗುವುದೇ ?

ಟಿಎಂಸಿಯ ಪೊಲಿಟಿಕಲ್ ಟೆರರ್‌ನಿಂದ ಹತಾಶೆ/ಆಕ್ರೋಶಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತ ವರ್ಗಕ್ಕೆ ಮಾನಸಿಕ ಧೈರ್ಯ ನೀಡಲು, ಅವರಿಗೆ ಆಸರೆಯಾಗಿ ನಿಲ್ಲುವ ಸಣ್ಣ ಸಾಹಸ ಮಾಡಬೇಕೆಂದು ರಾಹುಲ್ ಗಾಂಧಿಗೆ ಅನ್ನಿಸಲೇ ಇಲ್ಲ. ಹೀಗಿದ್ದಾಗ, ಮತದಾನಕ್ಕೆ 1 ದಿನಕ್ಕೆ ಮುನ್ನ ರಾಹುಲ್ ಗಾಂಧಿಗೆ ಜ್ಞಾನೋದಯವಾದದ್ದನ್ನು ಕಂಡು ಕೈ ಕಾರ್ಯಕರ್ತರು, ಮುಖಂಡರಿಗೆ ನಗಬೇಕೋ ಅಳಬೇಕೋ ಗೊತ್ತಾಗಿರಲಿಲ್ಲ.

Raghava Sharma Nidle Column: ಟಿಎಂಸಿ ಮತ್ತು ದೀದಿಯ ಸೊಕ್ಕಡಗಿಸಿದ ಮತದಾರ

ಟಿಎಂಸಿ ಮತ್ತು ದೀದಿಯ ಸೊಕ್ಕಡಗಿಸಿದ ಮತದಾರ

ಉತ್ತರ 24 ಪರಗಣ ಜಿಲ್ಲೆಯ ಸುಂದರಬನ್ ಮ್ಯಾಂಗ್ರೂವ್ ಕಾಡುಗಳ ಮಧ್ಯೆ ಇರುವ ಹಲವು ದ್ವೀಪ ಗಳಲ್ಲಿ ಸಂದೇಶ್‌ ಖಲಿ ಕೂಡ ಒಂದು. ಬಂಗಾಳ ಚುನಾವಣೆ ಪ್ರವಾಸದ ನಾನು ವೇಳೆ ಸಂದೇಶ್‌ ಖಲಿ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ 2024ರ ಬಡ ಮಹಿಳೆಯರ ಮೇಲೆ ಎಸಗಲಾದ ಲೈಂಗಿಕ ದೌರ್ಜನ್ಯ, ಜಮೀನು ಅತಿಕ್ರಮದ ಘಟನಾವಳಿಗಳೇ ಕಣ್ಣ ಮುಂದೆ ಬಂದಿದ್ದವು. ನಾನು ಅಲ್ಲಿದ್ದಾಗ ದ್ವೀಪದ ಸುತ್ತ ಸೇನಾನಿಗಳ ಸರ್ಪಗಾವಲಿತ್ತು

Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಪತ್ಯ ಕೊನೆಗೊಳಿಸಿ, ಕೇಸರಿಪಡೆ ದಿಗ್ವಿಜಯ ಸಾಧಿಸುವ ಮೂಲಕ ಗಡಿ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಗ್ಗರಿಸಿದ್ದು, ಟಿಎಂಸಿಯ ಹಿಂಸಾಚಾರದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ

West Bengal Election ground report by Raghav Sharma Nidle: ಬಂಗಾಳದ ರಣಕಣದಲ್ಲಿ ನಾನು ಕಂಡದ್ದು, ಕೇಳಿದ್ದು...

ಬಂಗಾಳದ ರಣಕಣದಲ್ಲಿ ನಾನು ಕಂಡದ್ದು, ಕೇಳಿದ್ದು...

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾರು ಏನೇ ಹೇಳಲಿ, ಅವರು ದೇಶದ ಶ್ರೀಸಾಮಾನ್ಯ‌ ರೊಂದಿಗೆ ನೇರ ಕನೆಕ್ಟ್ ಆಗುವುದರಿಂದಲೇ ದೇಶಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿ ದ್ದಾರೆ, ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಪಶ್ಚಿಮ ಬಂಗಾಳ ಕೂಡ ಸಾಕ್ಷಿಯಾಯಿತು.

Raghava Sharma Nidle Column: ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?

ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?

ಚುನಾವಣೆ ಆರಂಭಕ್ಕೆ ಮುನ್ನವೇ ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಯಿತು. ಈ ಅಧಿಕಾರಿಗಳು ಸಿಎಂ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರಕಾರದ ಪ್ರಭಾವದಲ್ಲಿದ್ದುದರಿಂದಲೇ ಆಯೋಗ ಈ ಕ್ರಮ ಕೈಗೊಂಡು, ಇಲ್ಲಿ ಮೇಜರ್ ಸರ್ಜರಿಯ ಸುಳಿವು ನೀಡಿತ್ತು.

West Bengal Election ground report by Raghav Sharma Nidle: ಅಭಿಷೇಕ್‌ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ ಸಾಧ್ಯವೇ ?

ಅಭಿಷೇಕ್‌ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ ಸಾಧ್ಯವೇ ?

ಇದು ಅಭಿಷೇಕ್ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ಪ್ರಸಿದ್ಧಿಯಾಗಿರುವ ಡೈಮಂಡ್ ಹಾರ್ಬರ್ ಕ್ಷೇತ್ರದ ರಾಜಕೀಯ ಹಿಂಸಾಚಾರಗಳ ಒಂದು ಝಲಕ್ ಅಷ್ಟೇ. ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿರುವುದರಿಂದ ರಾಜಕೀಯ ಹಿಂಸಾಚಾರಕ್ಕೆ ಇಲ್ಲಿ ಕೊಂಚ ಕಡಿವಾಣ ಬಿದ್ದಿದೆ.

West Bengal Election ground report by Raghava sharma Nidle: ಭವಾನಿಪುರದ ಬುಡ ಅಲುಗಾಡುತ್ತಿದೆಯೇ?

ಭವಾನಿಪುರದ ಬುಡ ಅಲುಗಾಡುತ್ತಿದೆಯೇ?

ಟಿಎಂಸಿ ಅಟ್ಟಹಾಸ ಜೋರಾಗಿದೆ. ಹಿಂದೂಗಳ ಮೇಲಿನ ದಾಳಿ ಬಗ್ಗೆ ಟಿಎಂಸಿ, ದೀದಿ ಕಿಂಚಿತ್ತೂ ಮಾತನಾಡುವುದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ" ಎಂದು ತನ್ನ ಮನಸ್ಸಿನ ಮಾತು ಗಳನ್ನು ಹೊರ ಹಾಕಿದ. ಆ ಹೊತ್ತಿಗೆ, ಅದೇ ಬೀದಿಯಲ್ಲಿ ಟಿಎಂಸಿ ಯುವಕರ ತಂಡವೊಂದು ಬೈಕ್ ರ‍್ಯಾಲಿ ಕೈಗೊಳ್ಳುತ್ತಿದ್ದುದನ್ನು ತೋರಿಸಿದ ಆತ, “ನೋಡಿ ಅಲ್ಲಿ ಮುಸ್ಲಿಂ ಹುಡುಗರೇ ಹೆಚ್ಚಿರುತ್ತಾರೆ.

West Bengal Election ground report by Raghav Sharma Nidle: ಮಮತಾ ದೀದಿಯ ನಿದ್ದೆಗೆಡಿಸಿದ್ದ ಅಭಯಾಳ ಸುತ್ತ...

ಮಮತಾ ದೀದಿಯ ನಿದ್ದೆಗೆಡಿಸಿದ್ದ ಅಭಯಾಳ ಸುತ್ತ...

ಸಿಎಂ ಮಮತಾ ಬ್ಯಾನರ್ಜಿ ತಮ್ಮ 15 ವರ್ಷಗಳ ಅಧಿಕಾರಾವಧಿಯಲ್ಲಿ ಎದುರಿಸಿದ್ದ ಅತ್ಯಂತ ಸವಾಲಿನ ಘಟನೆ ಇದಾಗಿತ್ತು. ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎಂಬ ಬಿಜೆಪಿ, ಎಡಪಕ್ಷಗಳ ಆರೋಪ ಕ್ಕೂ ವೇಗ ಸಿಕ್ಕಿತ್ತು. ಪ್ರಕರಣದಲ್ಲಿ ರಾಜ್ಯ ಪೊಲೀಸರ ವೈಫಲ್ಯದಿಂದಾಗಿ ಕಲ್ಕತ್ತಾ ಹೈಕೋರ್ಟ್ ಮಧ್ಯ ಪ್ರವೇಶಿಸಿ ಕೇಸ್ ಅನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು.

West Bengal Election ground report by Raghav Sharma Nidle: ಬಾಂಕ್ರಾದಲ್ಲಿದ್ದ ಬಾಂಗ್ಲಾದೇಶಿಯರು ಓಡಿಹೋಗಿದ್ದೇಕೆ?

ಬಾಂಕ್ರಾದಲ್ಲಿದ್ದ ಬಾಂಗ್ಲಾದೇಶಿಯರು ಓಡಿಹೋಗಿದ್ದೇಕೆ?

ಪಶ್ಚಿಮ ಬಂಗಾಳದಲ್ಲಿ ಉತ್ತರ 24 ಪರಗಣದ ‘ದಂ-ದಂ ಉತ್ತರ’ ವಿಧಾನಸಭೆ ಕ್ಷೇತ್ರದಲ್ಲಿ ಬಾಂಕ್ರಾ ಎಂಬ ಪ್ರದೇಶವಿದೆ. ಕೋಲ್ಕತ್ತಾದ ದಂ-ದಂ ವಿಮಾನ ನಿಲ್ದಾಣಕ್ಕೆ ಸನಿಹದ ಈ ಪ್ರದೇಶವಿದ್ದು, ಮುಸ್ಲಿಂ ಜನಸಂಖ್ಯೆ ಈ ಭಾಗದಲ್ಲಿ ಹೆಚ್ಚಿದೆ. ಕೇಂದ್ರ ಚುನಾವಣಾ ಆಯೋಗವು ಬಂಗಾಳದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿ, ರಾಜ್ಯಾದ್ಯಂತ ದಾಖಲೆಗಳ ಪರಿಶೀಲನೆ ಶುರುವಾಗುತ್ತಿದ್ದಂತೆಯೇ ಬಾಂಕ್ರಾದ ಕಾಲೊನಿಗಳಲ್ಲಿದ್ದ ಬಾಂಗ್ಲಾದೇಶಿ ನಿವಾಸಿಗಳು ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದರು.

West Bengal Election ground report by Raghava Sharma Nidle: ಹಿಂಸೆಯಲ್ಲ, ಉದ್ಯೋಗ ಬಯಸುತ್ತಿದೆ ಸಂದೇಶ್‌ ಖಲಿ...!

ಹಿಂಸೆಯಲ್ಲ, ಉದ್ಯೋಗ ಬಯಸುತ್ತಿದೆ ಸಂದೇಶ್‌ ಖಲಿ...!

ಅಭಿವೃದ್ಧಿಯಲ್ಲಿ ಹಿಂದೆ ಬಿದ್ದು, ಸೀಮಿತ ಸಾರ್ವಜನಿಕ ಸೇವೆಗಳಿರುವ ಈ ವಿಧಾನಸಭಾ ಕ್ಷೇತ್ರ ಈ ಬಾರಿ ಮತ್ತೆ ಗಮನಸೆಳೆದಿದೆ. ಎಡಪಕ್ಷ, ಕಾಂಗ್ರೆಸ್ ಮತ್ತು ಟಿಎಂಸಿ ಅಭ್ಯರ್ಥಿಗಳೇ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಸದ್ದು ಮಾಡಿದೆ. 2024ರ ಹಿಂಸಾಚಾರ ಇಡೀ ರಾಜಕೀಯ ಚಿತ್ರಣ ಬದಲಿಸಿದೆ. ಹಿಂಸಾಚಾರ ಘಟನೆಗಳ ಹೊರತಾಗಿಯೂ, 2024ರ ಲೋಕಸಭೆ ಚುನಾವಣೆಯಲ್ಲಿ ಸಂದೇಶ್‌ಖಲಿ ಒಳಗೊಂಡ ಬಸೀರ್‌ಹಾಟ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿಯ ಹಾಜಿ ನೂರುಲ್ ಇಸ್ಲಾಂ ಗೆಲುವು ಸಾಧಿಸಿದ್ದರು.

Raghava Sharma Nidle Column: ಬಂಗಾಳದ ಸಾಮಾನ್ಯರಲ್ಲೇಕೆ ಈ ಅವ್ಯಕ್ತ ಭಯ ?

ಬಂಗಾಳದ ಸಾಮಾನ್ಯರಲ್ಲೇಕೆ ಈ ಅವ್ಯಕ್ತ ಭಯ ?

2019ರ ಲೋಕಸಭೆ ಚುನಾವಣೆ ಮತ್ತು 2021ರ ವಿಧಾನಸಭೆ ವೇಳೆ ಪಶ್ಚಿಮ ಬಂಗಾಳ ಪ್ರವಾಸ ಮಾಡಿದ್ದ ನನಗೂ, 2026ರ ಹಾಲಿ ವಿಧಾನಸಭೆ ಚುನಾವಣೆ ಪ್ರವಾಸದಲ್ಲಿ ಕಾಣುತ್ತಿರುವ ಮತದಾರರ ಮೌನ ವಿಭಿನ್ನ ಅನುಭವ ನೀಡುತ್ತಿದೆ. ನಿಜವಾಗಿಯೂ ಇವರ ಮನಸ್ಸಿನೊಳಗೇನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ರಾಜಕೀಯ ನಿಲುವು-ಒಲವುಗಳನ್ನು ಪ್ರಕಟ ಪಡಿಸಲು ಹಿಂಜರಿಯುತ್ತಿರುವ ದೃಶ್ಯ ಕಾಣುತ್ತಿದೆ.

West Bengal Election ground report by Raghava Sharma Nidle: ನೈಜ ಪರಿವರ್ತನೆ ಬೇಡುತ್ತಿದೆ ನಂದಿಗ್ರಾಮ..!

ನೈಜ ಪರಿವರ್ತನೆ ಬೇಡುತ್ತಿದೆ ನಂದಿಗ್ರಾಮ..!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅನಿಲ ದುರಂತದ ಕಪ್ಪುಚುಕ್ಕೆ ಹೊಂದಿದ್ದ ಕಂಪನಿಗೆ ನಂದಿಗ್ರಾಮ ದಲ್ಲಿ ಜಮೀನು ನೀಡಲು ರೈತರು ಸಿದ್ಧರಿರಲಿಲ್ಲ ಕೂಡ. ಇಡೀ ಬಂಗಾಳದಾದ್ಯಂತ ರೈತರ ಪರ ಧ್ವನಿ ಮೊಳಗಿ, ಮಮತಾ ಬ್ಯಾನರ್ಜಿ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು. 2011ರ ವಿಧಾನ ಸಭೆ ಚುನಾವಣೆಯಲ್ಲಿ ಎಡಪಕ್ಷಗಳ ವಿರುದ್ಧ ಅಭೂತ ಪೂರ್ವ ಗೆಲುವು ಸಾಧಿಸಿದ್ದ ಟಿಎಂಸಿ-ಕಾಂಗ್ರೆಸ್ ಮೈತ್ರಿಕೂಟ, 34 ವರ್ಷ ಗಳ ಎಡಪಕ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು.

West Bengal Election ground report by Raghava Sharma Nidle: ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸುತ್ತಿರುವ 291 ಕ್ಷೇತ್ರಗಳಲ್ಲಿ 52 ಅಭ್ಯರ್ಥಿಗಳು ಮಹಿಳೆಯರು. ಅಂದರೆ ಶೇ.27ರಷ್ಟು ಅವರೇ ಇದ್ದಾರೆ. 253 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿರುವ ಎಡಪಕ್ಷಗಳು 34 (ಶೇ.13.4) ಮಹಿಳೆಯರಿಗೆ ಟಿಕೆಟ್ ನೀಡಿವೆ. ಎಲ್ಲಾ 294 ಸೀಟುಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ 35 (ಶೇ. 11.9) ಮತ್ತು ಬಿಜೆಪಿ 33 (ಶೇ.11.2) ಮಹಿಳೆಯರನ್ನು ಚುನಾವಣಾ ಅಖಾಡಕ್ಕಿಳಿಸಿವೆ.

Loading...