ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ಮೋಹನ್‌ ವಿಶ್ವ

columnist

info77@vishwavani.news

ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

Articles
Mohan Vishwa Column: ದಕ್ಷಿಣ ಭಾರತದ ಸಿನೆಮಾಗಳ ನಾಗಾಲೋಟ

ದಕ್ಷಿಣ ಭಾರತದ ಸಿನೆಮಾಗಳ ನಾಗಾಲೋಟ

1980ರಿಂದ 2010ರ ನಡುವಿನ ಅವಧಿಯನ್ನು ಗಮನಿಸಿದರೆ, ಬಾಲಿವುಡ್ ಅಂಗಳದಲ್ಲಿ ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಚಿತ್ರಗಳು ಹೆಚ್ಚಾಗಿ ನಿರ್ಮಾಣ ವಾಗಲಿಲ್ಲ. ಹೆಚ್ಚಾಗಿ ಪ್ರೇಮಕಥೆಗಳು, ಭೂಗತ ಲೋಕದ ಕಥೆಗಳು, ಮುಸಲ್ಮಾನರನ್ನು ಓಲೈಸುವ ಪಾತ್ರಗಳು, ಗ್ರಾಫಿಕ್ ಹೆಚ್ಚಾಗಿರುವ ಕಥಾಹಂದರದ ಚಿತ್ರಗಳು ನಿರ್ಮಾಣವಾಗಿದ್ದವು.

Mohan Vishwa Column: ಜರ್ಮನಿಯ ಹಿಟ್ಲರ್‌ʼಗೆ ಸ್ವಸ್ತಿಕ್‌ ಸಿಕ್ಕ ಕಥೆ

Mohan Vishwa Column: ಜರ್ಮನಿಯ ಹಿಟ್ಲರ್‌ʼಗೆ ಸ್ವಸ್ತಿಕ್‌ ಸಿಕ್ಕ ಕಥೆ

ವಿಪರ್ಯಾಸವೆಂದರೆ ಜರ್ಮನಿಯ ಕಳ್ಳಸಾಗಾಣೆದಾರನಿಗೆ ದೊರಕಿದ್ದ ಹೂಕುಂಡದ ಮೇಲಿದ್ದ ಈ ಸ್ವಸ್ತಿಕ್ ಚಿಹ್ನೆಯನ್ನು ಹಿಟ್ಲರ್ ತನ್ನ ಸರ್ವಾಧಿಕಾರದ ಬಾವುಟದಲ್ಲಿ ಬಳಸಿಕೊಂಡು ತಾನು ವಶಪಡಿಸಿ ಕೊಂಡ ದೇಶಗಳಲ್ಲಿ ಹಾರಿಸತೊಡಗಿದ. ಜಗತ್ತಿನ ಮಾನವ ಜನಾಂಗದ ಮೇಲೆ ಜರ್ಮನಿಯ ಹಿಡಿತ ಸಾಧಿಸಲು ಹೊರಟ ಹಿಟ್ಲರ್, ತನ್ನ ತಂಡವನ್ನು ಅನೇಕ ದೇಶಗಳಿಗೆ ಅಧ್ಯಯನಕ್ಕಾಗಿ ಕಳುಹಿಸಿದ.

Mohan Vishwa Column: ಸಿಗಲಿಲ್ಲ ಟುಕಡೆ ಗ್ಯಾಂಗ್‌ʼಗೆ ಜಾಮೀನು

Mohan Vishwa Column: ಸಿಗಲಿಲ್ಲ ಟುಕಡೆ ಗ್ಯಾಂಗ್‌ʼಗೆ ಜಾಮೀನು

ಜೆಎನ್‌ಯುನಲ್ಲಿ 2020ರಲ್ಲಿ ನಡೆದ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಕಾಶ್ಮೀರ ಪ್ರತ್ಯೇಕತೆಯ ಬಗ್ಗೆ ಮಾತನಾಡಿ ದೇಶವನ್ನು ‘ಟುಕಡೆ ಟುಕಡೆ’ ಮಾಡಬೇಕೆಂಬ ಘೋಷಣೆ ಕೂಗಿದ್ದ. ಅಂದು ಆತನ ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್ಸಿನ ಕನ್ನಯ್ಯ ಕುಮಾರ್. ಮತ್ತೊಂದೆಡೆ ಈಶಾನ್ಯ ಭಾರತವನ್ನು ಸಂಪರ್ಕಿಸುವ ಪ್ರಮುಖ ಭೂಭಾಗ ‘ಚಿಕನ್ ನೆಕ್’ ಅನ್ನು ಕಟ್ ಮಾಡಬೇಕೆಂದು ಶಾರ್ಜೀ ಇಮಾಮ್ ಹೇಳುತ್ತಾರೆ. ಅವರು ಹಾಗೆ ಹೇಳುವಾಗ ಅವರ ಅಕ್ಕ ಪಕ್ಕದಲ್ಲಿ ನಿಂತಿದ್ದವರು ಎಡಚರ ಬೆಂಬಲಿಗರು. ‌ಇವರಿಬ್ಬರಿಗೆ ಕಳೆದ ಆರು ವರ್ಷಗಳಿಂದ ನ್ಯಾಯಾಲಯವು ಜಾಮೀನನ್ನು ನಿರಾಕರಿಸುತ್ತಾ ಬಂದಿದೆ.

Mohan Vishwa Column: ಗಾಂಧಿ ಆದರ್ಶ ವಿರೋಧಿಗಳ ಬಾಯಲ್ಲಿ ನರೇಗಾ ಮಾತು

ಗಾಂಧಿ ಆದರ್ಶ ವಿರೋಧಿಗಳ ಬಾಯಲ್ಲಿ ನರೇಗಾ ಮಾತು

ನರೇಗಾ ಕೇಂದ್ರದ ಯೋಜನೆಯಾದರೂ ಅದರ ಅನುಷ್ಠಾನದ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ಯದ್ದಾಗಿದೆ. ಹಾಗಾಗಿ ಅನುಷ್ಠಾನದಲ್ಲಿ ರಾಜ್ಯ ಸರಕಾರ ಮತ್ತು ಪಂಚಾಯಿತಿಗಳ ಪಾತ್ರ ದೊಡ್ಡದಿದೆ. ಗ್ರಾಮೀಣ ಭಾಗದ ಪ್ರಮುಖ ಯೋಜನೆಯಾಗಿದ್ದ ನರೇಗಾದಲ್ಲಿ ಅನೇಕ ಕಡೆ ಭ್ರಷ್ಟಾಚಾರದ ಕೂಗು ಕೇಳಿ ಬಂದಿತ್ತು.

M‌ohan Vishwa Column: ಇಸ್ರೇಲ್‌ ನಡೆಸಿದ್ದ ಆಪರೇಷನ್‌ ಸೂಪರ್‌ ಗನ್

ಇಸ್ರೇಲ್‌ ನಡೆಸಿದ್ದ ಆಪರೇಷನ್‌ ಸೂಪರ್‌ ಗನ್

ಸುಮಾರು 128 ಕಿಲೋಮೀಟರು ದೂರ ಕ್ರಮಿಸಬಲ್ಲ ಸಾಮರ್ಥ್ಯದ ಫಿರಂಗಿಯಲ್ಲಿ ಬಳಸು ತ್ತಿದ್ದ ಬಾಂಬ್ ಶೆಲ್‌ʼಗಳು ಮೂರು ಅಡಿಯಷ್ಟು ಉದ್ದವಿದ್ದವು, 12 ಅಡಿ ಆಳದಷ್ಟು ‘ಗನ್ ಪೌಡರ್’ ತುಂಬಿಸಿಕೊಳ್ಳಬಲ್ಲ ಸಾಮರ್ಥ್ಯ ಅವುಗಳಲ್ಲಿತ್ತು. ಆಗಸಕ್ಕೆ ಬಾಂಬುಗಳನ್ನು ಸುಮಾರು 42 ಕಿಲೋಮೀಟರುಗಳಷ್ಟು ಎತ್ತರಕ್ಕೆ ಚಿಮ್ಮಿಸುವ ಸಾಮರ್ಥ್ಯವಿತ್ತು.

Mohan Vishwa Column: ನಟೋರಿಯಸ್‌ ಡ್ರಗ್ಸ್‌ ಪ್ರದೇಶ: ಗೋಲ್ಡನ್‌ ಕ್ರೆಸೆಂಟ್

ನಟೋರಿಯಸ್‌ ಡ್ರಗ್ಸ್‌ ಪ್ರದೇಶ: ಗೋಲ್ಡನ್‌ ಕ್ರೆಸೆಂಟ್

ಏಷ್ಯಾದ ಅತ್ಯಂತ ಹಳೆಯ ಮಾದಕವಸ್ತು ಪ್ರದೇಶವಾಗಿರುವ ಗೋಲ್ಡನ್ ಕ್ರೆಸೆಂಟ್ ಅನ್ನು ‘ಮಾದಕ‌ ವಸ್ತುಗಳ ರೇಷ್ಮೆ ಮಾರ್ಗ’ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಪರ್ವತ ಶ್ರೇಣಿಗಳನ್ನು ಕಾಣಬಹುದಾಗಿದ್ದು, ಮಾದಕ ವಸ್ತುಗಳ ಕಳ್ಳಸಾಗಣೆಯು ಈ ಪ್ರದೇಶದಲ್ಲಿ 1980ರ ದಶಕದಲ್ಲಿ ಹೆಚ್ಚಿನ ವೇಗ ಪಡೆದುಕೊಂಡಿತ್ತು ಮತ್ತು ದೊಡ್ಡ ಪ್ರಮಾಣದ ಅಫೀಮಿನ ಅಕ್ರಮ ಉತ್ಪಾದನೆಗೆ ಕಾರಣವಾಗಿತ್ತು.

Mohan Vishwa Column: ಮೊಹಮ್ಮದ್‌ ಅಲಿ ಜಿನ್ನಾರ ಮುನ್ನಾ

Mohan Vishwa Column: ಮೊಹಮ್ಮದ್‌ ಅಲಿ ಜಿನ್ನಾರ ಮುನ್ನಾ

ಸಂಪೂರ್ಣ ಗೀತೆಗೆ ಕತ್ತರಿ ಹಾಕಿ, ಮೊಹಮ್ಮದ್ ಅಲಿ ಜಿನ್ನಾ ಮಾತಿಗೆ ಕಟ್ಟುಬಿದ್ದು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು ಕಾಂಗ್ರೆಸ್ಸಿನ ಜವಾಹರಲಾಲ್ ನೆಹರು. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ ನಿಷಿದ್ಧವಾದ್ದರಿಂದ, ವಂದೇ ಮಾತರಂ ಗೀತೆಯಲ್ಲಿ ಭಾರತ ಮಾತೆಯನ್ನು ತಾಯಿಗೆ ಹೋಲಿಸಿ ಆರಾಧಿಸುವುದು ತಪ್ಪು ಎಂಬುದು ಮೊಹಮ್ಮದ್ ಅಲಿ ಜಿನ್ನಾರ ವಾದವಾಗಿತ್ತು.

Mohan Vishwa Column: ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು

ಸಂವಿಧಾನದ 363ನೇ ವಿಧಿಯು ಸಂವಿಧಾನವನ್ನು ಅಂಗೀಕರಿಸುವ ಮೊದಲು ಮಾಡಿಕೊಂಡ ಒಪ್ಪಂದ ಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದನ್ನು ಅನುಮತಿಸುವುದಿಲ್ಲ. ಉದಾ ಹರಣೆಗೆ ಶ್ರೀ ಅನಂತಪದ್ಮನಾಭ ಸ್ವಾಮಿಯ ಹೆಸರಿನಲ್ಲಿ ಆಳ್ವಿಕೆ ನಡೆಸಿದ ತಿರುವಾಂಕೂರಿನ ದೊರೆಗಳೊಂದಿಗೆ ಒಪ್ಪಿದ ದೇವಾಲಯದ ಹಕ್ಕುಗಳನ್ನು ಇದು ಒಳಗೊಂಡಿದೆ. ಭಾರತದ ಸಂವಿಧಾನ ಒಂದು ಆಕರ್ಷಕ ಕಲಾಕೃತಿಯಾಗಿದೆ.

M‌ohan Vishwa Column: ನಟೋರಿಯಸ್‌ ನಕ್ಸಲ್‌ ಮಾದ್ವಿ ಹಿದ್ಮಾ ಫಿನಿಷ್

M‌ohan Vishwa Column: ನಟೋರಿಯಸ್‌ ನಕ್ಸಲ್‌ ಮಾದ್ವಿ ಹಿದ್ಮಾ ಫಿನಿಷ್

ನವೆಂಬರ್ 18ರಂದು ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸತ್ತ ನಟೋರಿಯಸ್ ನಕ್ಸಲ್ ಮಾದ್ವಿ ಹಿದ್ಮಾನ ಪರವಾಗಿ ಮಾತನಾಡಲು ಟೂಲ್ ಕಿಟ್ ಒಂದನ್ನು ವಾಯುಮಾಲಿನ್ಯದ ಪ್ರತಿಭಟನೆ ಹೆಸರಿನಲ್ಲಿ ದೆಹಲಿಯಲ್ಲಿ ನಿರ್ಮಿಸಿಕೊಳ್ಳಲಾಗಿತ್ತು. ಆತನ ಪರವಾಗಿ ಘೋಷಣೆ ಕೂಗಿದವರು ಹದಿಹ ರೆಯದ ಯುವಕ-ಯುವತಿಯರು. ಅವರ ತಲೆಯಲ್ಲಿ ಆಳವಾಗಿ, ಅವನ ಪರವಾದ ವಿಷಯಗಳನ್ನು ಟೂಲ್ ಕಿಟ್ ಗ್ಯಾಂಗ್ ಪೋಷಿಸಿರುವುದು ಸ್ಪಷ್ಟವಾಗಿತ್ತು.

Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

ಒಂದು ಅಂದಾಜಿನ ಪ್ರಕಾರ, ಕ್ರಿಸ್ತ ಶಕ ೮೦ರ ದಶಕದಲ್ಲಿ ರೋಮ ನಗರದ ಜನಸಂಖ್ಯೆಯು ಹತ್ತು ಲಕ್ಷವಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಹತ್ತು ಲಕ್ಷ ಜನಸಂಖ್ಯೆಯ ಬೃಹತ್ ನಗರ ವೊಂದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸುಲಭದ ಕೆಲಸ ವಾಗಿರಲಿಲ್ಲ.

Mohan Vishwa Column: ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?

ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?

ಕಟ್ಟರ್ ಮೂಲಭೂತವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಸಂಘಟಿತ ಕಾರ್ಯವೇ ಭಯೋತ್ಪಾದನೆ. ಐಸಿಸ್‌ನಂಥ ಘೋರ ಉಗ್ರ ಸಂಘಟನೆಯಲ್ಲಿದ್ದ ಬಹುತೇಕ ಯುವಕರು ಉನ್ನತ ವ್ಯಾಸಾಂಗ ಮಾಡಿದವರು. ಅಮೆರಿಕ, ಲಂಡನ್, ಜರ್ಮನಿ, ಇಟಲಿ, ಆಫ್ರಿಕಾ ದೇಶಗಳ ಯುವಕರು ಐಸಿಸ್‌ನಲ್ಲಿದ್ದರು.

Mohan Vishwa Column: ಡಾ.ಸ್ವಾಮಿನಾಥನ್‌ ಮತ್ತು ನರೇಂದ್ರ ಮೋದಿ

Mohan Vishwa Column: ಡಾ.ಸ್ವಾಮಿನಾಥನ್‌ ಮತ್ತು ನರೇಂದ್ರ ಮೋದಿ

2004ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಕೃಷಿ ಸಚಿವರಾಗಿದ್ದಂಥ ರಾಜನಾಥ್ ಸಿಂಗ್ ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರೀಯ ಆಯೋಗ ವೊಂದನ್ನು ಸ್ಥಾಪಿಸಲಾಯಿತು. ಈ ಆಯೋಗವು ರೈತರ ಸಮಸ್ಯೆಗಳನ್ನು ಆಳವಾಗಿ ಪರಿಶೀಲಿಸಿ, ಸಂಭವನೀಯ ಪರಿಹಾರವನ್ನು 2006ರ ತನ್ನ ವರದಿಯಲ್ಲಿ ತಿಳಿಸಿತ್ತು.

Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

ರಷ್ಯಾ ಪರವಾಗಿದ್ದ ರಾಜನೊಬ್ಬ ಅಂದಿನ ಬ್ರಿಟಿಷ್ ಆಕ್ರಮಿತ ಭಾರತದ ಮೇಲೆ, ಹೈದರ್ ಪಾಸ್ ಮೂಲಕ ದಾಳಿ ಮಾಡಿದ್ದ. ಇದ್ದಕ್ಕಿದ್ದಂತೆ ತಮ್ಮ ಮೇಲೆ ಎರಗಿದ ಆಫ್ಘನ್ನರನ್ನು ಕಂಡ ಬ್ರಿಟಿಷರು ತಬ್ಬಿ ಬ್ಬಾಗಿದ್ದರು. ಈ ದಾಳಿಯಲ್ಲಿ ಸಾವಿರಾರು ಬ್ರಿಟಿಷ್ ಸೈನಿಕರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಅಫ್ಘಾನಿ ಸ್ತಾನದ ಸಾವಿರಾರು ಸೈನಿಕರು ಸಾವನ್ನಪ್ಪಿದ್ದರು.

‌Mohan Vishwa Column: ಆರೆಸ್ಸೆಸ್‌ನ ಕಾರ್ಮಿಕ ಮತ್ತು ಮಹಿಳಾ ಸಂಘಟನೆ

ಆರೆಸ್ಸೆಸ್‌ನ ಕಾರ್ಮಿಕ ಮತ್ತು ಮಹಿಳಾ ಸಂಘಟನೆ

ಹಲವು ದಶಕಗಳಿಂದ ಆರೆಸ್ಸೆಸ್ ಸಮಾಜಮುಖಿ ಕಾರ್ಯಗಳಿಂದ, ತನ್ನ ವಿರುದ್ಧದ ಟೀಕೆಗಳಿಗೆ ಉತ್ತರ ಕೊಡುತ್ತಾ ಬಂದಿದೆ. 100 ವರ್ಷಗಳನ್ನು ಪೂರೈಸಿದ ಸಂಘದ ಏಳಿಗೆಯನ್ನು ಸಹಿಸಲು ಎಡಚರರಿಗೆ ಸಾಧ್ಯವಾಗುತ್ತಿಲ್ಲ. ನೆಹರು ಕಾಲದಿಂದಲೂ ಎಡಚರರ ಕೈಗೊಂಬೆಯಾಗಿರುವ ಕಾಂಗ್ರೆಸ್ ಪಕ್ಷ ಅವರ ತಲೆಬುಡವಿಲ್ಲದ ನಿರೂಪಣೆಗಳ ಸಂವಹನಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಿದೆ.

Mohan Vishwa Column: ಬ್ರಿಟಿಷರನ್ನು ಸೋಲಿಸಿದ್ದ ಅಫ್ಘಾನಿಸ್ತಾನದ ಸುತ್ತಮುತ್ತ

ಬ್ರಿಟಿಷರನ್ನು ಸೋಲಿಸಿದ್ದ ಅಫ್ಘಾನಿಸ್ತಾನದ ಸುತ್ತಮುತ್ತ

ಇಂಥ ದೇಶದ ಮೇಲೆ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ಕಣ್ಣು ಬಿತ್ತು. ಹತ್ತೊಂಬತ್ತನೆಯ ಶತಮಾನ ದಲ್ಲಿ ಜಗತ್ತಿನಾದ್ಯಂತ ತನ್ನ ಸಾಮ್ರಾಜ್ಯಶಾಹಿ ವಿಸ್ತರಣಾ ಮನೋಭಾವದೊಂದಿಗೆ ಸಿಕ್ಕ ಸಿಕ್ಕ ದೇಶ ಗಳನ್ನು ಆಕ್ರಮಿಸಿಕೊಂಡು ಬಂದಿದ್ದ ಬ್ರಿಟಿಷರಿಗೆ, ಭಾರತದ ಪಕ್ಕದಲ್ಲಿದ್ದ ಈ ದೇಶದ ಮೇಲೆ ಕಣ್ಣು ಬಿದ್ದಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಭಾರತವು, ಇಂದಿನ ಪಾಕಿಸ್ತಾನದ ವರೆಗೂ ಹಬ್ಬಿತ್ತು. ಹಾಗಾಗಿ ಆಫ್ಘನ್ನರ ಮೇಲೆ ಬ್ರಿಟಿಷರ ಕಣ್ಣು ಬಿತ್ತು.

Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ

Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ

ಅಕ್ಟೋಬರ್ ೨೦೦೫ರಲ್ಲಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ದೆಹಲಿಯ ಜನನಿಬಿಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ 70 ಜನ ಮೃತಪಟ್ಟಿ ದ್ದರು, 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೆಹಲಿಯಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಕೈವಾಡವಿದ್ದದ್ದು ಜಗಜ್ಜಾಹೀರಾಗಿತ್ತು.

Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?

Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?

‘ಅಲ್ ಜಜೀರಾ’ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ‘ಕರ್ನಾಟಕದ, ಮಂಗಳೂರಿನ ಬಳಿಯ ಹಿಂದೂ ದೇವಸ್ಥಾನದ ಬಳಿ ಸಾವಿರಾರು ಶವಗಳನ್ನು ಹೂತಿಡಲಾಗಿದೆ’ ಎಂಬ ಸುದ್ದಿ ಪ್ರಕಟವಾಗಿತ್ತು. ಪ್ರತಿಷ್ಠಿತ ರಿಪಬ್ಲಿಕ್ ಇಂಗ್ಲಿಷ್ ಮಾಧ್ಯಮದಲ್ಲಿ ಪಾಕಿಸ್ತಾನಿ ಪ್ಯಾನಲಿಸ್ಟ್ ಒಬ್ಬ ಧರ್ಮಸ್ಥಳದ ವಿಚಾರವನ್ನು ಮಾತನಾಡಿದ್ದ. ಧರ್ಮಸ್ಥಳದ ವಿರುದ್ಧ ನಡೆಸಿದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು.

Mohan Vishwa Column: ಆಪರೇಷನ್‌ ʼಡೈಮಂಡ್‌ʼ: ಮಿಗ್‌ -21

Mohan Vishwa Column: ಆಪರೇಷನ್‌ ʼಡೈಮಂಡ್‌ʼ: ಮಿಗ್‌ -21

‘ಮೀರ್ ಅಮಿತ್’ ಮೊಸಾದಿನ ವಿಚಿತ್ರ ಅಧಿಕಾರಿ, ಯಾರ ಮುಲಾಜಿಗೂ ಒಳಗಾಗದೆ ಮೊಸಾದ್‌ಗಾಗಿ ಕೆಲಸ ಮಾಡುತ್ತಿದ್ದರು. ಸದಾ ಕ್ರಿಯಾಶೀಲರಾಗಿರುವ ವ್ಯಕ್ತಿತ್ವ, ಇಲ್ಲ ಎಂಬ ಪದದ ಅರ್ಥ ಗೊತ್ತಿಲ್ಲದ ಅಧಿಕಾರಿ. ಸಣ್ಣ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಿ, ನಂತರ ಮೊಸಾದ್ ಸೇರಿ ಅನೇಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Mohan Vishwa Column: ಬಾಲಕಬುದ್ಧಿಯ ವೋಟ್‌ ಚೋರಿ ಟೂಲ್‌ ಕಿಟ್

ಬಾಲಕಬುದ್ಧಿಯ ವೋಟ್‌ ಚೋರಿ ಟೂಲ್‌ ಕಿಟ್

ಚುನಾವಣಾ ಆಯೋಗ ಒಡ್ಡಿದ ಸವಾಲನ್ನು ಸ್ವೀಕರಿಸಿ ರಾಹುಲ್ ಗಾಂಧಿಯವರು ಅಫಿಡವಿಟ್ ಸಲ್ಲಿಸಿ ದರೆ, ಸುಳ್ಳುಗಳು ಬೆತ್ತಲಾಗುತ್ತವೆ ಎಂಬುದು ಷಡ್ಯಂತ್ರವನ್ನು ನಡೆಸುತ್ತಿರುವ ತಂಡಕ್ಕೆ ತಿಳಿದಿದೆ. ಕಾಂಗ್ರೆಸ್ ಪಕ್ಷದ ಶಾಸಕ ಗೆದ್ದಿರುವ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬುದು ರಾಹುಲರ ಹೊಸ ಆರೋಪ. ಸದರಿ ‘ವೋಟ್ ಚೋರಿ’ ಟೂಲ್‌ಕಿಟ್ ಅನ್ನು ಗಮನಿಸಿದರೆ, ರಾಹುಲರು ಕರ್ನಾಟಕದ ಕ್ಷೇತ್ರಗಳನ್ನಷ್ಟೇ ಆಯ್ಕೆಮಾಡಿಕೊಂಡಿರುವುದು ಅರಿವಾಗುತ್ತದೆ.

Mohan Vishwa Column: ಡಾ.ಹೆಗ್ಡೆವಾರ್‌ ಅವರ ಸ್ವಾತಂತ್ರ್ಯ ಹೋರಾಟ

Mohan Vishwa Column: ಡಾ.ಹೆಗ್ಡೆವಾರ್‌ ಅವರ ಸ್ವಾತಂತ್ರ್ಯ ಹೋರಾಟ

ಹೋರಾಟದ ನಡುವೆಯೂ ಹೆಡ್ಗೆವಾರ್ ತಮ್ಮ ಮೆಡಿಕಲ್ ವಿದ್ಯಾಭ್ಯಾಸವನ್ನು ಮುಂದು ವರಿಸಿದ್ದರು. ತಮ್ಮ ವೈದ್ಯಕೀಯ ಅಧ್ಯಯನ ಮುಗಿಸಿದ ಕೆಲ ವರ್ಷಗಳ ನಂತರ ಬ್ರಿಟಿಷರು, ಕೋಲ್ಕತ್ತಾದ ಮೆಡಿಕಲ್ ಕಾಲೇಜಿನಿಂದ ಹೊರಬಂದಂಥ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿ ಯನ್ನು ನಡೆಸಬಹುದು, ಆದರೆ ‘ಅನಾರೋಗ್ಯ ಪ್ರಮಾಣಪತ್ರ’ ನೀಡುವ ಹಕ್ಕನ್ನು ಹೊಂದಿಲ್ಲವೆಂಬ ನಿಯಮವನ್ನು ತಂದುಬಿಟ್ಟರು.

Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

ಭಾರತ ಇನ್ನೆರಡು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವುದು ಖಚಿತ ವೆಂದು ಅನೇಕ ತಜ್ಞರು ಹೇಳುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಜಗತ್ತಿನ ಹಿಂದುಳಿದ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಇಂದು ಮುಂದುವರಿಯುತ್ತಿರುವ ದೇಶಗಳ ಪಟ್ಟಿಯಲ್ಲಿ ಮೇಲಕ್ಕೇರುತ್ತಿರುವುದು ಹಲವರ ನಿದ್ದೆಗೆಡಿಸಿದೆ.

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪ ಪ್ರಚಾರದಲ್ಲಿ ಭಾಗಿಯಾಗಿರುವ ಮತ್ತೊಬ್ಬ ವ್ಯಕ್ತಿ ಬಾಲನ್. ಈ ವ್ಯಕ್ತಿಯ ಮಾತುಗಳನ್ನು ಕೇಳಿದರೆ ನಗಲೂ ಆಗದು, ಅಳಲೂ ಆಗದು. ಒಮ್ಮೆ ಮಾಧ್ಯಮ ದಲ್ಲಿ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ ‘ಭಾರತ್ ಮಾತಾ ಕಿ ಜೈ’ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಹೇಳಿದ್ದ ನಟೋರಿಯಸ್ ಎಡಚರ ವ್ಯಕ್ತಿ ಈ ಬಾಲನ್.

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಇವು ಮಾಡಿದ ಅಪಮಾನಗಳು ಒಂದೆರಡಲ್ಲ. ಜನಿವಾರ ಧರಿಸಿದವರನ್ನು ನೋಡಿ ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆ ಗಳ ವಿರುದ್ಧ ಶುರುವಾದಂಥ ದ್ರಾವಿಡ ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ. ತಮಿಳುನಾಡಿನ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿಸಲ್ಪಡುತ್ತವೆ.

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಧರ್ಮಸ್ಥಳದ ಮಂಜುನಾಥನೆಂದರೆ ಅಸಾಮಾನ್ಯ ಶಕ್ತಿ. ವರ್ಷಕ್ಕೆ ಒಮ್ಮೆಯಾದರೂ ಸ್ವಾಮಿಯ ದರ್ಶನ ಮಾಡಿದರೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಬೃಹತ್ ಧಾರ್ಮಿಕ ಶಕ್ತಿಕೇಂದ್ರ ಧರ್ಮಸ್ಥಳ. ಹಲವು ದಶಕಗಳಿಂದ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

Loading...