ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಮೋಹನ್‌ ವಿಶ್ವ

columnist

info77@vishwavani.news

ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

Articles
Mohan Vishwa Column: ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು

ಸಂವಿಧಾನದ 363ನೇ ವಿಧಿಯು ಸಂವಿಧಾನವನ್ನು ಅಂಗೀಕರಿಸುವ ಮೊದಲು ಮಾಡಿಕೊಂಡ ಒಪ್ಪಂದ ಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದನ್ನು ಅನುಮತಿಸುವುದಿಲ್ಲ. ಉದಾ ಹರಣೆಗೆ ಶ್ರೀ ಅನಂತಪದ್ಮನಾಭ ಸ್ವಾಮಿಯ ಹೆಸರಿನಲ್ಲಿ ಆಳ್ವಿಕೆ ನಡೆಸಿದ ತಿರುವಾಂಕೂರಿನ ದೊರೆಗಳೊಂದಿಗೆ ಒಪ್ಪಿದ ದೇವಾಲಯದ ಹಕ್ಕುಗಳನ್ನು ಇದು ಒಳಗೊಂಡಿದೆ. ಭಾರತದ ಸಂವಿಧಾನ ಒಂದು ಆಕರ್ಷಕ ಕಲಾಕೃತಿಯಾಗಿದೆ.

M‌ohan Vishwa Column: ನಟೋರಿಯಸ್‌ ನಕ್ಸಲ್‌ ಮಾದ್ವಿ ಹಿದ್ಮಾ ಫಿನಿಷ್

M‌ohan Vishwa Column: ನಟೋರಿಯಸ್‌ ನಕ್ಸಲ್‌ ಮಾದ್ವಿ ಹಿದ್ಮಾ ಫಿನಿಷ್

ನವೆಂಬರ್ 18ರಂದು ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸತ್ತ ನಟೋರಿಯಸ್ ನಕ್ಸಲ್ ಮಾದ್ವಿ ಹಿದ್ಮಾನ ಪರವಾಗಿ ಮಾತನಾಡಲು ಟೂಲ್ ಕಿಟ್ ಒಂದನ್ನು ವಾಯುಮಾಲಿನ್ಯದ ಪ್ರತಿಭಟನೆ ಹೆಸರಿನಲ್ಲಿ ದೆಹಲಿಯಲ್ಲಿ ನಿರ್ಮಿಸಿಕೊಳ್ಳಲಾಗಿತ್ತು. ಆತನ ಪರವಾಗಿ ಘೋಷಣೆ ಕೂಗಿದವರು ಹದಿಹ ರೆಯದ ಯುವಕ-ಯುವತಿಯರು. ಅವರ ತಲೆಯಲ್ಲಿ ಆಳವಾಗಿ, ಅವನ ಪರವಾದ ವಿಷಯಗಳನ್ನು ಟೂಲ್ ಕಿಟ್ ಗ್ಯಾಂಗ್ ಪೋಷಿಸಿರುವುದು ಸ್ಪಷ್ಟವಾಗಿತ್ತು.

Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

Mohan Vishwa Column: ʼರೋಮ್‌ʼನ ಭೂಮಿಯೊಳಗಿನ ಪ್ರಪಂಚ

ಒಂದು ಅಂದಾಜಿನ ಪ್ರಕಾರ, ಕ್ರಿಸ್ತ ಶಕ ೮೦ರ ದಶಕದಲ್ಲಿ ರೋಮ ನಗರದ ಜನಸಂಖ್ಯೆಯು ಹತ್ತು ಲಕ್ಷವಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಹತ್ತು ಲಕ್ಷ ಜನಸಂಖ್ಯೆಯ ಬೃಹತ್ ನಗರ ವೊಂದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸುಲಭದ ಕೆಲಸ ವಾಗಿರಲಿಲ್ಲ.

Mohan Vishwa Column: ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?

ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?

ಕಟ್ಟರ್ ಮೂಲಭೂತವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಸಂಘಟಿತ ಕಾರ್ಯವೇ ಭಯೋತ್ಪಾದನೆ. ಐಸಿಸ್‌ನಂಥ ಘೋರ ಉಗ್ರ ಸಂಘಟನೆಯಲ್ಲಿದ್ದ ಬಹುತೇಕ ಯುವಕರು ಉನ್ನತ ವ್ಯಾಸಾಂಗ ಮಾಡಿದವರು. ಅಮೆರಿಕ, ಲಂಡನ್, ಜರ್ಮನಿ, ಇಟಲಿ, ಆಫ್ರಿಕಾ ದೇಶಗಳ ಯುವಕರು ಐಸಿಸ್‌ನಲ್ಲಿದ್ದರು.

Mohan Vishwa Column: ಡಾ.ಸ್ವಾಮಿನಾಥನ್‌ ಮತ್ತು ನರೇಂದ್ರ ಮೋದಿ

Mohan Vishwa Column: ಡಾ.ಸ್ವಾಮಿನಾಥನ್‌ ಮತ್ತು ನರೇಂದ್ರ ಮೋದಿ

2004ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಕೃಷಿ ಸಚಿವರಾಗಿದ್ದಂಥ ರಾಜನಾಥ್ ಸಿಂಗ್ ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರೀಯ ಆಯೋಗ ವೊಂದನ್ನು ಸ್ಥಾಪಿಸಲಾಯಿತು. ಈ ಆಯೋಗವು ರೈತರ ಸಮಸ್ಯೆಗಳನ್ನು ಆಳವಾಗಿ ಪರಿಶೀಲಿಸಿ, ಸಂಭವನೀಯ ಪರಿಹಾರವನ್ನು 2006ರ ತನ್ನ ವರದಿಯಲ್ಲಿ ತಿಳಿಸಿತ್ತು.

Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

ರಷ್ಯಾ ಪರವಾಗಿದ್ದ ರಾಜನೊಬ್ಬ ಅಂದಿನ ಬ್ರಿಟಿಷ್ ಆಕ್ರಮಿತ ಭಾರತದ ಮೇಲೆ, ಹೈದರ್ ಪಾಸ್ ಮೂಲಕ ದಾಳಿ ಮಾಡಿದ್ದ. ಇದ್ದಕ್ಕಿದ್ದಂತೆ ತಮ್ಮ ಮೇಲೆ ಎರಗಿದ ಆಫ್ಘನ್ನರನ್ನು ಕಂಡ ಬ್ರಿಟಿಷರು ತಬ್ಬಿ ಬ್ಬಾಗಿದ್ದರು. ಈ ದಾಳಿಯಲ್ಲಿ ಸಾವಿರಾರು ಬ್ರಿಟಿಷ್ ಸೈನಿಕರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಅಫ್ಘಾನಿ ಸ್ತಾನದ ಸಾವಿರಾರು ಸೈನಿಕರು ಸಾವನ್ನಪ್ಪಿದ್ದರು.

‌Mohan Vishwa Column: ಆರೆಸ್ಸೆಸ್‌ನ ಕಾರ್ಮಿಕ ಮತ್ತು ಮಹಿಳಾ ಸಂಘಟನೆ

ಆರೆಸ್ಸೆಸ್‌ನ ಕಾರ್ಮಿಕ ಮತ್ತು ಮಹಿಳಾ ಸಂಘಟನೆ

ಹಲವು ದಶಕಗಳಿಂದ ಆರೆಸ್ಸೆಸ್ ಸಮಾಜಮುಖಿ ಕಾರ್ಯಗಳಿಂದ, ತನ್ನ ವಿರುದ್ಧದ ಟೀಕೆಗಳಿಗೆ ಉತ್ತರ ಕೊಡುತ್ತಾ ಬಂದಿದೆ. 100 ವರ್ಷಗಳನ್ನು ಪೂರೈಸಿದ ಸಂಘದ ಏಳಿಗೆಯನ್ನು ಸಹಿಸಲು ಎಡಚರರಿಗೆ ಸಾಧ್ಯವಾಗುತ್ತಿಲ್ಲ. ನೆಹರು ಕಾಲದಿಂದಲೂ ಎಡಚರರ ಕೈಗೊಂಬೆಯಾಗಿರುವ ಕಾಂಗ್ರೆಸ್ ಪಕ್ಷ ಅವರ ತಲೆಬುಡವಿಲ್ಲದ ನಿರೂಪಣೆಗಳ ಸಂವಹನಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಿದೆ.

Mohan Vishwa Column: ಬ್ರಿಟಿಷರನ್ನು ಸೋಲಿಸಿದ್ದ ಅಫ್ಘಾನಿಸ್ತಾನದ ಸುತ್ತಮುತ್ತ

ಬ್ರಿಟಿಷರನ್ನು ಸೋಲಿಸಿದ್ದ ಅಫ್ಘಾನಿಸ್ತಾನದ ಸುತ್ತಮುತ್ತ

ಇಂಥ ದೇಶದ ಮೇಲೆ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ಕಣ್ಣು ಬಿತ್ತು. ಹತ್ತೊಂಬತ್ತನೆಯ ಶತಮಾನ ದಲ್ಲಿ ಜಗತ್ತಿನಾದ್ಯಂತ ತನ್ನ ಸಾಮ್ರಾಜ್ಯಶಾಹಿ ವಿಸ್ತರಣಾ ಮನೋಭಾವದೊಂದಿಗೆ ಸಿಕ್ಕ ಸಿಕ್ಕ ದೇಶ ಗಳನ್ನು ಆಕ್ರಮಿಸಿಕೊಂಡು ಬಂದಿದ್ದ ಬ್ರಿಟಿಷರಿಗೆ, ಭಾರತದ ಪಕ್ಕದಲ್ಲಿದ್ದ ಈ ದೇಶದ ಮೇಲೆ ಕಣ್ಣು ಬಿದ್ದಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಭಾರತವು, ಇಂದಿನ ಪಾಕಿಸ್ತಾನದ ವರೆಗೂ ಹಬ್ಬಿತ್ತು. ಹಾಗಾಗಿ ಆಫ್ಘನ್ನರ ಮೇಲೆ ಬ್ರಿಟಿಷರ ಕಣ್ಣು ಬಿತ್ತು.

Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ

Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ

ಅಕ್ಟೋಬರ್ ೨೦೦೫ರಲ್ಲಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ದೆಹಲಿಯ ಜನನಿಬಿಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ 70 ಜನ ಮೃತಪಟ್ಟಿ ದ್ದರು, 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೆಹಲಿಯಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಕೈವಾಡವಿದ್ದದ್ದು ಜಗಜ್ಜಾಹೀರಾಗಿತ್ತು.

Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?

Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?

‘ಅಲ್ ಜಜೀರಾ’ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ‘ಕರ್ನಾಟಕದ, ಮಂಗಳೂರಿನ ಬಳಿಯ ಹಿಂದೂ ದೇವಸ್ಥಾನದ ಬಳಿ ಸಾವಿರಾರು ಶವಗಳನ್ನು ಹೂತಿಡಲಾಗಿದೆ’ ಎಂಬ ಸುದ್ದಿ ಪ್ರಕಟವಾಗಿತ್ತು. ಪ್ರತಿಷ್ಠಿತ ರಿಪಬ್ಲಿಕ್ ಇಂಗ್ಲಿಷ್ ಮಾಧ್ಯಮದಲ್ಲಿ ಪಾಕಿಸ್ತಾನಿ ಪ್ಯಾನಲಿಸ್ಟ್ ಒಬ್ಬ ಧರ್ಮಸ್ಥಳದ ವಿಚಾರವನ್ನು ಮಾತನಾಡಿದ್ದ. ಧರ್ಮಸ್ಥಳದ ವಿರುದ್ಧ ನಡೆಸಿದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು.

Mohan Vishwa Column: ಆಪರೇಷನ್‌ ʼಡೈಮಂಡ್‌ʼ: ಮಿಗ್‌ -21

Mohan Vishwa Column: ಆಪರೇಷನ್‌ ʼಡೈಮಂಡ್‌ʼ: ಮಿಗ್‌ -21

‘ಮೀರ್ ಅಮಿತ್’ ಮೊಸಾದಿನ ವಿಚಿತ್ರ ಅಧಿಕಾರಿ, ಯಾರ ಮುಲಾಜಿಗೂ ಒಳಗಾಗದೆ ಮೊಸಾದ್‌ಗಾಗಿ ಕೆಲಸ ಮಾಡುತ್ತಿದ್ದರು. ಸದಾ ಕ್ರಿಯಾಶೀಲರಾಗಿರುವ ವ್ಯಕ್ತಿತ್ವ, ಇಲ್ಲ ಎಂಬ ಪದದ ಅರ್ಥ ಗೊತ್ತಿಲ್ಲದ ಅಧಿಕಾರಿ. ಸಣ್ಣ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಿ, ನಂತರ ಮೊಸಾದ್ ಸೇರಿ ಅನೇಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Mohan Vishwa Column: ಬಾಲಕಬುದ್ಧಿಯ ವೋಟ್‌ ಚೋರಿ ಟೂಲ್‌ ಕಿಟ್

ಬಾಲಕಬುದ್ಧಿಯ ವೋಟ್‌ ಚೋರಿ ಟೂಲ್‌ ಕಿಟ್

ಚುನಾವಣಾ ಆಯೋಗ ಒಡ್ಡಿದ ಸವಾಲನ್ನು ಸ್ವೀಕರಿಸಿ ರಾಹುಲ್ ಗಾಂಧಿಯವರು ಅಫಿಡವಿಟ್ ಸಲ್ಲಿಸಿ ದರೆ, ಸುಳ್ಳುಗಳು ಬೆತ್ತಲಾಗುತ್ತವೆ ಎಂಬುದು ಷಡ್ಯಂತ್ರವನ್ನು ನಡೆಸುತ್ತಿರುವ ತಂಡಕ್ಕೆ ತಿಳಿದಿದೆ. ಕಾಂಗ್ರೆಸ್ ಪಕ್ಷದ ಶಾಸಕ ಗೆದ್ದಿರುವ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬುದು ರಾಹುಲರ ಹೊಸ ಆರೋಪ. ಸದರಿ ‘ವೋಟ್ ಚೋರಿ’ ಟೂಲ್‌ಕಿಟ್ ಅನ್ನು ಗಮನಿಸಿದರೆ, ರಾಹುಲರು ಕರ್ನಾಟಕದ ಕ್ಷೇತ್ರಗಳನ್ನಷ್ಟೇ ಆಯ್ಕೆಮಾಡಿಕೊಂಡಿರುವುದು ಅರಿವಾಗುತ್ತದೆ.

Mohan Vishwa Column: ಡಾ.ಹೆಗ್ಡೆವಾರ್‌ ಅವರ ಸ್ವಾತಂತ್ರ್ಯ ಹೋರಾಟ

Mohan Vishwa Column: ಡಾ.ಹೆಗ್ಡೆವಾರ್‌ ಅವರ ಸ್ವಾತಂತ್ರ್ಯ ಹೋರಾಟ

ಹೋರಾಟದ ನಡುವೆಯೂ ಹೆಡ್ಗೆವಾರ್ ತಮ್ಮ ಮೆಡಿಕಲ್ ವಿದ್ಯಾಭ್ಯಾಸವನ್ನು ಮುಂದು ವರಿಸಿದ್ದರು. ತಮ್ಮ ವೈದ್ಯಕೀಯ ಅಧ್ಯಯನ ಮುಗಿಸಿದ ಕೆಲ ವರ್ಷಗಳ ನಂತರ ಬ್ರಿಟಿಷರು, ಕೋಲ್ಕತ್ತಾದ ಮೆಡಿಕಲ್ ಕಾಲೇಜಿನಿಂದ ಹೊರಬಂದಂಥ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿ ಯನ್ನು ನಡೆಸಬಹುದು, ಆದರೆ ‘ಅನಾರೋಗ್ಯ ಪ್ರಮಾಣಪತ್ರ’ ನೀಡುವ ಹಕ್ಕನ್ನು ಹೊಂದಿಲ್ಲವೆಂಬ ನಿಯಮವನ್ನು ತಂದುಬಿಟ್ಟರು.

Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

ಭಾರತ ಇನ್ನೆರಡು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವುದು ಖಚಿತ ವೆಂದು ಅನೇಕ ತಜ್ಞರು ಹೇಳುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಜಗತ್ತಿನ ಹಿಂದುಳಿದ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಇಂದು ಮುಂದುವರಿಯುತ್ತಿರುವ ದೇಶಗಳ ಪಟ್ಟಿಯಲ್ಲಿ ಮೇಲಕ್ಕೇರುತ್ತಿರುವುದು ಹಲವರ ನಿದ್ದೆಗೆಡಿಸಿದೆ.

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪ ಪ್ರಚಾರದಲ್ಲಿ ಭಾಗಿಯಾಗಿರುವ ಮತ್ತೊಬ್ಬ ವ್ಯಕ್ತಿ ಬಾಲನ್. ಈ ವ್ಯಕ್ತಿಯ ಮಾತುಗಳನ್ನು ಕೇಳಿದರೆ ನಗಲೂ ಆಗದು, ಅಳಲೂ ಆಗದು. ಒಮ್ಮೆ ಮಾಧ್ಯಮ ದಲ್ಲಿ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ ‘ಭಾರತ್ ಮಾತಾ ಕಿ ಜೈ’ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಹೇಳಿದ್ದ ನಟೋರಿಯಸ್ ಎಡಚರ ವ್ಯಕ್ತಿ ಈ ಬಾಲನ್.

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಇವು ಮಾಡಿದ ಅಪಮಾನಗಳು ಒಂದೆರಡಲ್ಲ. ಜನಿವಾರ ಧರಿಸಿದವರನ್ನು ನೋಡಿ ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆ ಗಳ ವಿರುದ್ಧ ಶುರುವಾದಂಥ ದ್ರಾವಿಡ ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ. ತಮಿಳುನಾಡಿನ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿಸಲ್ಪಡುತ್ತವೆ.

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಧರ್ಮಸ್ಥಳದ ಮಂಜುನಾಥನೆಂದರೆ ಅಸಾಮಾನ್ಯ ಶಕ್ತಿ. ವರ್ಷಕ್ಕೆ ಒಮ್ಮೆಯಾದರೂ ಸ್ವಾಮಿಯ ದರ್ಶನ ಮಾಡಿದರೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಬೃಹತ್ ಧಾರ್ಮಿಕ ಶಕ್ತಿಕೇಂದ್ರ ಧರ್ಮಸ್ಥಳ. ಹಲವು ದಶಕಗಳಿಂದ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

Mohan Vishwa Column: ಸಾವರ್ಕರ್‌ ಮತ್ತು ಬೋಸರ ಭಾರತೀಯ ಸೇನೆ

ಸಾವರ್ಕರ್‌ ಮತ್ತು ಬೋಸರ ಭಾರತೀಯ ಸೇನೆ

ಶತ್ರುವನ್ನು ತಡೆಗಟ್ಟುವುದು ಹಾಗೂ ಕಟ್ಟಿ ಹಾಕುವುದೇ ಹೊರತು ನಾವು ಸಿಕ್ಕಿಹಾಕಿಕೊಳ್ಳುವುದಲ್ಲ ಎಂಬುದನ್ನು ಸಾವರ್ಕರರು ಸುಭಾಷರಿಗೆ ಅಂದು ಮನವರಿಕೆ ಮಾಡಿಕೊಟ್ಟರು. ಸುಭಾಷರ ಬಳಿ ಸಾವರ್ಕರರು ಸೈನಿಕ ಕ್ರಾಂತಿಯ ಬಗ್ಗೆ ಮಾತನಾಡುವಾಗ, ಮೊದಲನೇ ಮಹಾಯುದ್ಧದಲ್ಲಿ ಭಾರತೀಯ ಕ್ರಾಂತಿಕಾರಿಗಳು ಜರ್ಮನಿಯಲ್ಲಿದ್ದ ಯುದ್ಧಕೈದಿಗಳ ಜತೆಗೂಡಿ ‘ಕ್ರಾಂತಿಸೈನ್ಯ’ ಕಟ್ಟಿದ್ದ ವಿಷಯವನ್ನು ಚರ್ಚಿಸಿದರು.

Mohan Vishwa Column: ಕೇಸರಿ ಭಯೋತ್ಪಾದನೆಯ ಪಿತೂರಿ ಬಯಲಾಯಿತು

ಕೇಸರಿ ಭಯೋತ್ಪಾದನೆಯ ಪಿತೂರಿ ಬಯಲಾಯಿತು

2008ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಬ್ಲಾ ಪ್ರಕರಣವನ್ನು ಹಿಂದೂಗಳ ತಲೆಗೆ ಕಟ್ಟಿದ್ದ ಕಾಂಗ್ರೆಸ್ ಪಕ್ಷ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಶ್ರೀಕಾಂತ್ ಪುರೋಹಿತ್, ಮೇಜರ್ ರಮೇಶ್ ಮತ್ತಿತರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಕೇಸರಿ ಭಯೋತ್ಪಾದನೆ ಎಂಬ ನಿರೂಪಣೆಯನ್ನು ದೇಶದಲ್ಲಿ ಹರಿಬಿಡಲಾಗಿತ್ತು

Mohan Vishwa Column: ಜಿಎಸ್‌ಟಿ ನೋಟಿಸ್‌ ತಕರಾರಿನ ಸುತ್ತಮುತ್ತ !

ಜಿಎಸ್‌ಟಿ ನೋಟಿಸ್‌ ತಕರಾರಿನ ಸುತ್ತಮುತ್ತ !

ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ರಾಜ್ಯಗಳದ್ದು ಪ್ರಮುಖ ಪಾತ್ರವಾಗಿದೆ. ಜಿಎಸ್‌ಟಿ ಕಾಯ್ದೆಗೆ ಸಂಬಂಧಪಟ್ಟಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜ್ಯಗಳ ಪ್ರಾತಿನಿಧ್ಯ 2/3 ರಷ್ಟಿದ್ದರೆ ಕೇಂದ್ರದ ಪ್ರಾತಿನಿಧ್ಯ 1/3ಗೆ ಮಾತ್ರ ಸೀಮಿತ. ಜಿಎಸ್‌ಟಿಗೆ ಸಂಬಂಧಪಟ್ಟಿರುವ ನಿರ್ಧಾರ ಗಳನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಳ್ಳುತ್ತದೆ.

Mohan Vishwa Column: ಮತಬ್ಯಾಂಕ್‌ ರಾಜಕಾರಣಕ್ಕೆ ಆರೆಸ್ಸೆಸ್‌ ಟೀಕೆ

Mohan Vishwa Column: ಮತಬ್ಯಾಂಕ್‌ ರಾಜಕಾರಣಕ್ಕೆ ಆರೆಸ್ಸೆಸ್‌ ಟೀಕೆ

ಸಂಘವನ್ನು ಬೈದರೆ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮೆಚ್ಚುಗೆಗೆ ತಾವು ಪಾತ್ರರಾಗಬಹುದು ಎಂಬ ತಿಕ್ಕಲು ಯೋಚನೆ ಪ್ರಿಯಾಂಕ್ ಖರ್ಗೆಯವರದ್ದು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧವಿರುವ ಕಾಂಗ್ರೆಸ್, ದೇಶವಿರೋಧಿಗಳ ಜತೆ ಕೈಜೋಡಿಸಲು ಸದಾ ಸಿದ್ಧವಾಗಿರುತ್ತದೆ.

Mohan Vishwa Column: ಜಪಾನಿನಲ್ಲಿ ಮೇಡ್‌ ಇನ್‌ ಇಂಡಿಯಾ ಕಾರು

ಜಪಾನಿನಲ್ಲಿ ಮೇಡ್‌ ಇನ್‌ ಇಂಡಿಯಾ ಕಾರು

ದೇಶಕ್ಕಾಗಿ ದಿನಪೂರ್ತಿ ದುಡಿಯುವ ಜಪಾನಿಯರು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದರೆ ಕೈಗೆ ಕಪ್ಪುಬಟ್ಟೆ ಕಟ್ಟಿ ಎರಡು ತಾಸು ಹೆಚ್ಚಾಗಿ ದುಡಿಯುತ್ತಾರೆ. ರಸ್ತೆ ತಡೆ, ಬಂದ್, ಕಲ್ಲು ತೂರಾಟ ದಂಥ ಪ್ರತಿಭಟನೆ ನಡೆದ ಉದಾಹರಣೆಗಳು ಜಪಾನಿನಲ್ಲಿ ಕಾಣುವುದಿಲ್ಲ. 1.40 ಕೋಟಿ ಜನಸಂಖ್ಯೆ ಇರುವ ಟೋಕಿಯೋ ನಗರದಲ್ಲಿ ನಿರ್ಮಿಸಿರುವ ಮೂಲಭೂತ ಸೌಕರ್ಯಗಳು ಜಗತ್ತಿಗೆ ಮಾದರಿಯಾಗಿವೆ.

Mohan Vishwa Column: ಯುದ್ಧಭೂಮಿಯಲ್ಲಿ ಮೋದಿಯವರ ತಾಕತ್‌ !

ಯುದ್ಧಭೂಮಿಯಲ್ಲಿ ಮೋದಿಯವರ ತಾಕತ್‌ !

ರಷ್ಯಾ ನಿರ್ಮಿತ ‘ಎಸ್-400’ ಸಾಧನವು ಸುದರ್ಶನ ಚಕ್ರದಂತೆ ನಿಂತು ಪಾಕಿಸ್ತಾನದ ಡ್ರೋನ್‌ ಗಳನ್ನು ಹೊಡೆದುರುಳಿಸಿತು. ರಷ್ಯಾ ನೇರವಾಗಿ ಭಾರತದ ಪರವಾಗಿ ನಿಂತಿತ್ತು. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ‘ಭಾರತವು ಸೇಡು ತೀರಿಸಿಕೊಳ್ಳುವ ಹಕ್ಕನ್ನು ಹೊಂದಿದೆ’ ಎಂದು ಹೇಳಿದ್ದರು. ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು, ಪಾಕಿಸ್ತಾನದ ದಾಳಿಯನ್ನು ಖಂಡಿಸಿ ಭಾರತದ ಪರ ನಿಂತರು.

Mohan Vishwa Column: ಪ್ಯಾಲಿಸ್ತೀನಿಯರ ನರಮೇಧ ನಡೆಸಿದ್ದ ಪಾಕಿಸ್ತಾನ

ಪ್ಯಾಲಿಸ್ತೀನಿಯರ ನರಮೇಧ ನಡೆಸಿದ್ದ ಪಾಕಿಸ್ತಾನ

ಆರು ದಿನಗಳ ಯುದ್ಧದ ಸೋಲಿನಿಂದ ಕೆಂಗೆಟ್ಟಿದಂತಹ ಅರಬ್ಬರ ನಾಡಿನಿಂದ ಸಾವಿರಾರು ಯುವಕರು ಈ ಸಂಘಟನೆಗೆ ಸೇರಿಕೊಂಡರು. ಜಗತ್ತಿನಾದ್ಯಂತ ಹಲವು ಮುಸಲ್ಮಾನರು ಈ ಸಂಘಟನೆಗೆ ಸೇರಿ ಕೊಂಡರು, 1969ರಲ್ಲಿ ಜೋರ್ಡಾನಿನಲ್ಲಿದ್ದಂತಹ ಪ್ಯಾಲೆಸ್ತೀನಿಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದವು.

Loading...